ಸಾಮಾನ್ಯವಾಗಿ ಸಸ್ಯಗಳು ಎಲೆಗಳ ತಳಭಾಗದಲ್ಲಿರುವ ಪತ್ರರಂಧ್ರಗಳ (ಸ್ಟೊಮ್ಯಾಟಾ) ಮೂಲಕ ಉಸಿರಾಡುತ್ತವೆ.
ಸಸ್ಯಗಳು ಸೂರ್ಯನ ಬೆಳಕಿನ ಶಕ್ತಿ, ವಾಯುವಿನಲ್ಲಿನ ಕಾರ್ಬನ್ ಡೈಆಕ್ಸೈಡ್, ಮಣ್ಣಿನಲ್ಲಿರುವ ನೀರು, ಖನಿಜ-ವಣಾಂಶಗಳನ್ನು ಬೇರುಗಳ ಮೂಲಕ ಹೀರಿ ಎಲೆಯಲ್ಲಿನ ಪತ್ರಹರಿತ್ತಿನ ಸಹಾಯದಿಂದ ಆಹಾರ ತಯಾರಿಸುತ್ತವೆ. ಇದನ್ನು ದ್ಯುತಿ ಸಂಶ್ಲೇಷಣೆ ಎನ್ನುವರು
ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ಸೋಲಿಗರು, ದಕ್ಷಿಣ ಕನ್ನಡ ಜಿಲ್ಲೆಯ ಕೊರಗರು, ಕೊಡಗು ಜಿಲ್ಲೆಯ ಜೇನು ಕುರುಬರು ಮತ್ತು ಯೆರವರು ಮುಂತಾದ ಬುಡಕಟ್ಟು ಸಮುದಾಯಗಳಿವೆ.
ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದವರು ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನೋರ್ಗೆ. * ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್.
ಶಿಲೆಗಳಿಂದಾದ ಭೂಮಿಯ ಮೇಲ್ಪದರ ಅಥವಾ ಚಿಪ್ಪಿನ ಪದರಗಳನ್ನು ಶಿಲಾಗೋಳ ಎನ್ನಲಾಗುತ್ತದೆ. ಖನಿಜಗಳು ಮತ್ತು ಸಾವಯವ ವಸ್ತುಗಳನ್ನು ಒಳಗೊಂಡಿರುವ ಶಿಲಾಗೋಳದ ತೆಳುವಾದ ಪದರವೇ ಮಣ್ಣು. ಇಂತಹ ಮಣ್ಣು ಸುಮಾರು 3ಛಿm ನಷ್ಟು ರೂಪುಗೊಳ್ಳಲು ಸುಮಾರು 500 ರಿಂದ 1500 ವರ್ಷಗಳು ಬೇಕಾಗುತ್ತದೆ. ಹರಿಯುವ ನೀರು, ಬೀಸುವ ಗಾಳಿ ಮತ್ತು ಜೀವಿಗಳಿಂದ ಶಿಲೆಗಳು ಶಿಥಿಲಗೊಂಡು ಮಣ್ಣು ರೂಪುಗೊಳ್ಳುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಗಬನ, ಕೊಡಗು ಜಿಲ್ಲೆಯಲ್ಲಿ ಕಂಡುಬರುವ ದೇವರ ಕಾಡು. ಇಲ್ಲಿ ಮರಗಳನ್ನು ಕಡಿಯುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕದ ಜೀವ ವೈವಿಧ್ಯದಿಂದ ಕೂಡಿದ ಪಶ್ಚಿಮ ಘಟ್ಟದ ಅರಣ್ಯಗಳ ನಾಶವನ್ನು ತಡೆಗಟ್ಟಲು ಪಾಂಡುರಂಗ ಹೆಗಡೆಯವರು ಅಪ್ಪಿಕೊ ಚಳುವಳಿ ಪ್ರಾರಂಭಿಸಿದರು.
ಕೇರಳದಲ್ಲಿರುವ ಜೀವ ವೈವಿಧ್ಯ ತಾಣವಾದ ಮೌನ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ ಪ್ರಾರಂಭಿಸಲು ಸರ್ಕಾರ ಯತ್ನಿಸಿದಾಗ ಪರಿಸರವಾದಿಗಳು ಮೌನ ಕಣಿವೆ ಹೋರಾಟದ ಮೂಲಕ ಯೋಜನೆಯನ್ನು ತಡೆಹಿಡಿದರು. ಬಿಹಾರದ ಅರಣ್ಯಗಳ ಸಂರಕ್ಷಣೆಗಾಗಿ ಪ್ರಾರಂಭವಾದ ಕಾಡನ್ನು ಉಳಿಸಿ (ಜಂಗಲ್ ಬಚಾವೊ) ಆಂದೋಲನ ಜಾರ್ಖಂಡ್ ಮತ್ತು ಒಡಿಶಾಗೂ ಹರಡಿ ಅರಣ್ಯಗಳ ಸಂರಕ್ಷಣೆಗೆ ಕಾರಣವಾಯಿತು. ಹಿಮಾಲಯದಲ್ಲಿನ ಅರಣ್ಯಗಳ ಸಂರಕ್ಷಣೆಗಾಗಿ ಸುಂದರ್ಲಾಲ್ ಬಹುಗುಣರವರು ಚಿಪೆÇ್ಕ ಚಳುವಳಿ ಪ್ರಾರಂಭಿಸಿ ಮರಗಳ ನಾಶವನ್ನು ತಡೆಹಿಡಿದರು.
ವೃಕ್ಷಮಾತೆ ಎಂದೇ ದೇಶದಾದ್ಯಂತ ಪ್ರಖ್ಯಾತಿಪಡೆದಿರುವ ಸಾಲು ಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆಯ ಸುಪುತ್ರಿ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ವಿಜಯಮ್ಮ ಮತ್ತು ಚಿಕ್ಕರಂಗಯ್ಯ ದಂಪತಿಗಳ ಮಗಳಾದ ತಿಮ್ಮಕ್ಕ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಬಿಕ್ಕಲ ಚಿಕ್ಕಯ್ಯನವರನ್ನು ವಿವಾಹವಾಗಿ, ಹುಲಿಕಲ್ಲಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಆನಂತರದ ದಿನಗಳಲ್ಲಿ ತನ್ನ ಪತಿಯ ಸಹಕಾರದೊಂದಿಗೆ ತಮ್ಮ ಊರಾದ ಹುಲಿಕಲ್ನಿಂದ ಕುದೂರಿನವರೆಗೆ ರಸ್ತೆಯ ಇಕ್ಕೆಡೆಗಳಲ್ಲಿ ಆಲದ ಮರಗಳನ್ನು ನೆಟ್ಟು, ಪೆÇೀಷಿಸಿ ಬೆಳೆಸುತ್ತಾರೆ. ಹೀಗೆ ಮರಗಳನ್ನು ಮಕ್ಕಳೆಂದು ಭಾವಿಸಿ ಅವುಗಳ ಪಾಲನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಶತಾಯುಷಿ ತಿಮ್ಮಕ್ಕನವರನ್ನು ಸಾಲು ಮರದ ತಿಮ್ಮಕ್ಕ ಎಂದು ಕರೆಯಲಾಗುತ್ತಿದೆ. ಇವರ ಗೌರವಾರ್ಥವಾಗಿ ಕರ್ನಾಟಕ ಸರ್ಕಾರವು 2014-15 ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಸಾಲು ಮರದ ತಿಮ್ಮಕ್ಕ ನ ನೆರಳು ಯೋಜನೆಯನ್ನು ಘೋಷಿಸಿ ಜಾರಿಗೆ ತಂದಿರುತ್ತದೆ. ಪರಿಸರ ಕಾಳಜಿಗೆ ಪ್ರಶಂಸಿಸಿ ನೂರಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ - ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕನವರ ಪರಿಸರದ ಮೇಲಿನ ಕಾಳಜಿ ಅನನ್ಯ ಹಾಗೂ ಅನುಕರಣೀಯ.
ವಾಯುವು ನೈಟ್ರೊಜನ್(78%), ಆಕ್ಸಿಜನ್ (21%), ಕಾರ್ಬನ್ ಡೈ ಆಕ್ಸೈಡ್ (0.04%), ನೀರಾವಿ, ಜಡ ಅನಿಲಗಳು ಮತ್ತು ಧೂಳಿನ (0.96%) ಮಿಶ್ರಣದಿಂದಾಗಿದೆ.
ಒಕ್ಕಲಿಗ ಒಕ್ಕಿದರೆ ನಕ್ಕು ನಲಿವುದು ಜಗವೆಲ್ಲ. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಕವಿವಾಣಿ ಕೃಷಿಕರ ಮಹತ್ವವನ್ನು ತಿಳಿಸುತ್ತದೆ.
ನೀರು-ಊ2ಔ ಹೈಡ್ರೊಜನ್ ಮತ್ತು ಆಕ್ಸಿಜನ್ 2:1 ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗಗೊಂಡು ಉಂಟಾದ ಸಂಯುಕ್ತವೇ ನೀರು.
ವೇಗವಾಗಿ ಚಲಿಸುವ ಗಾಳಿಯ ಸಹಾಯದಿಂದ ಗಾಳಿ ಗಿರಣಿ ತಿರುಗುತ್ತದೆ. ಇಲ್ಲಿ ಉಂಟಾಗುವ ಪವನಶಕ್ತಿಯಿಂದ ತಿರುಗುವ ಯಂತ್ರಗಳು (ಟರ್ಬೈನ್) ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ನೆರವಾಗುತ್ತª.
ಕೃಷಿ ತ್ಯಾಜ್ಯಗಳು, ಸಸ್ಯದ ಅವಶೇಷಗಳು ಮತ್ತು ಪ್ರಾಣಿಗಳ ಸಗಣಿ ಇವೇ ಮೊದಲಾದವುಗಳನ್ನು ವಾಯುವಿನ ಸಂಪರ್ಕವಿಲ್ಲದಂತೆ ಕೊಳೆÉಯಿಸಿದಾಗ ಉಂಟಾಗುವ ಅನಿಲವನ್ನು ಜೈವಿಕ ಅನಿಲ ಎನ್ನುತ್ತಾರೆ.
ಸೂರ್ಯನ ಪರಿವಾರವನ್ನು ಸೌರವ್ಯೂಹ ಎನ್ನುವರು. ಈ ಪರಿವಾರದಲ್ಲಿ 8 ಗ್ರಹಗಳು, 173 ಉಪಗ್ರಹಗಳು, ಸಾವಿರಾರು ಕ್ಷುದ್ರಗ್ರಹಗಳು, ಉಲ್ಕೆಗಳು ಮತ್ತು ಧೂಮಕೇತುಗಳಿವೆ. ಸೂರ್ಯ : ಸೂರ್ಯ ಒಂದು ನಕ್ಷತ್ರ. ಇದು ಇತರೆ ನಕ್ಷತ್ರಗಳಿಗಿಂತ ಭೂಮಿಗೆ ಹತ್ತಿರದಲ್ಲಿ ಇರುವುದರಿಂದ ಬೇರೆ ಎಲ್ಲಾ ನಕ್ಷತ್ರಗಳಿಗಿಂತಲೂ ಪ್ರಕಾಶಮಾನವಾಗಿ ಹಾಗೂ ದೊಡ್ಡದಾಗಿ ಕಾಣುತ್ತದೆ. ಅದು ಸೌರವ್ಯೂಹದ ಕೇಂದ್ರ ಬಿಂದು. ಇದರ ಗುರುತ್ವಾಕರ್ಷಣೆಗಳಪಟ್ಟು ಅದರ ಪರಿವಾರದ ಆಕಾಶ ಕಾಯಗಳೆಲ್ಲಾ ಅದರ ಸುತ್ತ ಸುತ್ತುತ್ತವೆ. ನಮಗೆ ಬೆಳಕು ಮತ್ತು ಶಾಖವನ್ನು ನೀಡುವ ಸೂರ್ಯನು ಬೆಳಿಗ್ಗೆ ಪೂರ್ವದಲ್ಲಿ ಉದಯಿಸಿ ಸಂಜೆ ಪಶ್ಚಿಮದಲ್ಲಿ ಮುಳುಗಿದಂತೆ ಕಾಣುತ್ತದೆ.
ಭೂಮಿಯು ಇತರ ಗ್ರಹಗಳೊಂದಿಗೆ ಸೂರ್ಯನ ಸುತ್ತ ಸುತ್ತುತ್ತಿದೆ ಎಂದು ಮೊದಲು ಪ್ರತಿಪಾದಿಸಿದವನು ಭಾರತೀಯ ಖಗೋಳ ವಿಜ್ಞಾನಿ ಹಾಗೂ ಗಣಿತಜ್ಞನಾಗಿದ್ದ ಆರ್ಯಭಟ. ಇದನ್ನು ಸೌರವ್ಯೂಹದ ಸೂರ್ಯ ಕೇಂದ್ರಿತ ಮಾದರಿ ಎಂದು ಕರೆಯುತ್ತಾರೆ. ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತಿವೆ ಎಂದು ನಿಕೋಲಾಸ್ ಕೋಪರ್ನಿಕಸ್ ಮತ್ತು ಜೊಹಾನ್ನೆಸ್ ಕೆಪ್ಲರ್ ಸಹ ಪ್ರತಿಪಾದಿಸಿದರು.
ಭೂಮಿಯ ಆಕಾರ : ವಿಜ್ಞಾನಿಗಳ ಪ್ರಕಾರ ಭೂಮಿಯು ಧ್ರುವಗಳಲ್ಲಿ ಸ್ವಲ್ಪ ಚಪ್ಪಟೆಯಾಗಿಯೂ ಮತ್ತು ಸಮಭಾಜಕ ವೃತ್ತದ ಬಳಿ ಸ್ವಲ್ಪ ಉಬ್ಬಿದೆ ಎಂದು ಖಚಿತವಾಗಿದೆ. ಹೀಗಾಗಿ ಇಂತಹ ಆಕಾರವನ್ನು ಜಿಯಾಯ್ಡ್ ಅಥವಾ ಭೂಮ್ಯಾಕಾರ ಎಂದು ಕರೆಯಲಾಗಿದೆ. ಅಂದರೆ ಭೂಮಿಯು ಪÀÇರ್ಣ ವೃತ್ತಾಕಾರ ಅಥವಾ ಗುಂಡಾಗಿಲ್ಲ.
ಭೂಮಿಯ ಗಾತ್ರ : ಸೌರವ್ಯೂಹದಲ್ಲಿ ಭೂಮಿಯು ಐದನೆಯ ದೊಡ್ಡ ಗ್ರಹ. ಇದರ ಸಮಭಾಜಕ ವೃತ್ತದ ವ್ಯಾಸ 12,757 ಞm ಮತ್ತು ಧ್ರುವೀಯ ವ್ಯಾಸ 12,714 ಞm ಸಮಭಾಜಕ ವೃತ್ತದ ವ್ಯಾಸಕ್ಕಿಂತ ಧ್ರುವೀಯ ವ್ಯಾಸವು 43 ಞm ಕಡಿಮೆ ಇದೆ. ಇದರಿಂದ ಭೂಮಿಯು ಗೋಳಾಕಾರವಾಗಿರುವುದು ತಿಳಿಯುತ್ತದೆ. ಭೂ ಮೇಲ್ಮೈನ ಒಟ್ಟು ವಿಸ್ತೀರ್ಣವು 510 ಮಿಲಿಯನ್ ಚದರ ಕಿ.ಮೀ.ಗಳು.
ಭೂಮಿಗೆ ದೈನಂದಿನ ಚಲನೆ ಮತ್ತು ವಾರ್ಷಿಕ ಚಲನೆ ಎಂಬ ಎರಡು ಚಲನೆಗಳಿವೆ. ತನ್ನ ಅಕ್ಷದಲ್ಲಿ ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದೇ ದೈನಂದಿನ ಚಲನೆ. ಭೂಮಿ ತನ್ನ ಕಕ್ಷಾಮಾರ್ಗದಲ್ಲಿ ಸೂರ್ಯನನ್ನು ಸುತ್ತುವುದೇ ವಾರ್ಷಿಕ ಚಲನೆ. ಭೂಮಿಯು ಸೂರ್ಯನನ್ನು ಪ್ರದಕ್ಷಿಣೆ ಹಾಕುವಾಗ ತನ್ನ ಅಕ್ಷದಲ್ಲಿ ಸದಾ ಸುತ್ತುತ್ತದೆ.
ಹಗಲು ರಾತ್ರಿಗಳು : ಭೂಮಿಯ ದೈನಂದಿನ ಚಲನೆಯ ಸೂರ್ಯನ ಕಿರಣಗಳು ಹಗಲು ಅವಧಿಯಲ್ಲಿ ಸೂರ್ಯನಿಗೆ ಎದುರಾಗಿರುವ ಭೂಭಾಗಕ್ಕೆ ಹಗಲು ರಾತ್ರಿ (ಬೆಳಕು) ಆಗಿದ್ದರೆ, ವಿರುದ್ಧ ಭಾಗಕ್ಕೆ ರಾತ್ರಿ (ಕತ್ತಲು) ಆಗಿರುತ್ತದೆ. ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವುದರಿಂದ ನಮಗೆ ಸೂರ್ಯ ಪೂರ್ವದಲ್ಲಿ ಉದಯವಾದಂತೆ ಹಾಗೂ ಪಶ್ಚಿಮದಲ್ಲಿ ಮುಳುಗಿದಂತೆ ಭಾಸವಾಗುತ್ತದೆ.
ಸೌರವ್ಯೂಹದಲ್ಲಿ 8 ಗ್ರಹಗಳಿವೆ ಎಂದು ನೀನು ಈಗಾಗಲೇ ತಿಳಿದಿರುವೆ. ಸೂರ್ಯನಿಂದ ಇರುವ ದೂರಕ್ಕೆ ಅನುಗುಣವಾದ ಕ್ರಮದಲ್ಲಿ ಅವುಗಳೆಂದರೆ - ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚ್ಯೂನ್. ಈ ಹಿಂದೆ ಸೌರವ್ಯೂಹದ 9ನೆಯ ಗ್ರಹವಾಗಿದ್ದ ಪ್ಲೂಟೋವನ್ನು ಕುಬ್ಜಗ್ರಹ ಎಂದು ಪರಿಗಣಿಸಿ, ಅದನ್ನು ಸೌರವ್ಯೂಹದ ಗ್ರಹಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಕ್ಷುದ್ರ ಗ್ರಹಗಳು : ಅನಿಯತ ಆಕಾರದ ಶಿಲೆಗಳಂಥ ಆಕಾಶ ಕಾಯಗಳನ್ನು ಕ್ಷುದ್ರಗ್ರಹಗಳೆಂದು ಕರೆಯುತ್ತೇವೆ. ಇವು ಸೂರ್ಯನನ್ನು ಸುತ್ತುತ್ತಿದ್ದು ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಗಳ ನಡುವೆ ಕಂಡುಬರುತ್ತವೆ. 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಹ್ಯಾಲಿ ಧೂಮಕೇತುವಿನಂತಹ ಕೆಲವು ಧೂಮಕೇತುಗಳು ನಿಗದಿತವಾಗಿ ಕಾಣಿಸಿಕೊಳ್ಳುತ್ತವೆ. ಈ ಹಿಂದೆ 1986ರಲ್ಲಿ ಹ್ಯಾಲಿ ಧೂಮಕೇತು ಕಾಣಿಸಿಕೊಂಡಿತ್ತು.
ಸೂರ್ಯ ಮತ್ತು ಅದರ ಸುತ್ತಲೂ ಸುತ್ತುವ ಆಕಾಶಕಾಯಗಳ ಸಮೂಹಕ್ಕೆ ಸೌರವ್ಯೂಹ ಎಂದು ಕರೆಯಲಾಗುವುದು. ಮಂಗಳ ಗ್ರಹದ ಎರಡು ನೈಸರ್ಗಿಕ ಉಪಗ್ರಹಗಳೆಂದರೆ, ಪೆÉÇೀಬೋಸ್ ಮತ್ತು ಡೈಮೋಸ್. ಗುರುಗ್ರಹಕ್ಕೆ 67ಕ್ಕೂ ಹೆಚ್ಚು ನೈಸರ್ಗಿಕ ಉಪಗ್ರಹಗಳು ಮತ್ತು ಶನಿಗ್ರಹಕ್ಕೆ 62ಕ್ಕಿಂತಲೂ ಹೆಚ್ಚು ನೈಸರ್ಗಿಕ ಉಪಗ್ರಹಗಳಿವೆ. ಯುರೇನಸ್ ಗ್ರಹಕ್ಕೆ ಕನಿಷ್ಠ 27 ನೈಸರ್ಗಿಕ ಉಪಗ್ರಹಗಳಿದ್ದರೆ, ನೆಪ್ಚ್ಯೂನ್ಗೆ 14 ನೈಸರ್ಗಿಕ ಉಪಗ್ರಹಗಳಿವೆ. ಬುಧ ಮತ್ತು ಶುಕ್ರ ಗ್ರಹಗಳಿಗೆ ಯಾವುದೇ ನೈಸರ್ಗಿಕ ಉಪಗ್ರಹವಿಲ್ಲ. ಇದುವರೆಗೆ ತಿಳಿದಂತೆÀ ಜೀವಿಗಳು ಕಂಡುಬರುವ ಏಕೈಕ ಗ್ರಹ ಭೂಮಿ. ವಿವಿಧ ಉದ್ದೇಶಗಳಿಗಾಗಿ ಮಾನವರು ನಿರ್ಮಿಸಿದ ಅನೇಕ ಕೃತಕ ಉಪಗ್ರಹಗಳು ಭೂಮಿಯನ್ನು ಸುತ್ತುತ್ತಿವೆ. ಭಾರತ ನಿರ್ಮಿತ ಮೊದಲ ಕೃತಕ ಉಪಗ್ರಹ ಆರ್ಯಭಟ. ಚಂದ್ರನ ಮೇಲೆ ಮೊದಲು ಕಾಲಿಟ್ಟವರು ನೀಲ್ ಆರ್ಮ್ಸ್ಟಾಂಗ್. ಗುರು, ಶನಿ, ಯುರೇನಸ್ ಮತ್ತು ನೆಪ್ಚ್ಯೂನ್ಗಳನ್ನು ಅನಿಲ ದೈತ್ಯಗ್ರಹಗಳು ಎನ್ನುತ್ತಾರೆ.
ಮೌಂಟ್ ಎವರೆಸ್ಟ್ ಶಿಖರವು (8,848ಮೀ.) ಪ್ರಪಂಚದಲ್ಲೇ ಎತ್ತರವಾದುದು.
• ಮೌಂಟ್ ಗಾಡ್ವಿನ್ ಆಸ್ಟಿನ್ ಅಥವಾ ಞ2 (8,611 ಮೀ.) ಭಾರತದ ಅತ್ಯಂತ ಎತ್ತರವಾದಶಿಖರ. • ಮುಳ್ಳಯ್ಯನಗಿರಿ (1913ಮೀ.) ಕರ್ನಾಟಕದ ಅತಿ ಎತ್ತರವಾದ ಶಿಖರ.
• ಅನೈಮುಡಿ (2665 ಮೀ.) ದಕ್ಷಿಣ ಭಾರತದ ಎತ್ತರವಾದ ಶಿಖರ. ಗುರುಶಿಖರ (1722 ಮೀ.) ಎಂಬುದು ಅರಾವಳಿ ಸರಣಿಯ ಅತಿ ಎತ್ತರದ ಶಿಖರ.
ಥಾರ್ ಮರುಭೂಮಿಯಲ್ಲಿ ಕೆಲವು ಉಪ್ಪಿನ ಸರೋವರಗಳು ಕಂಡುಬರುತ್ತವೆ. ಅವುಗಳಿಗೆ ಪ್ಲಾಯಾ ಎನ್ನುವರು. ಉದಾಹರಣೆಗೆ, ಸಾಂಬಾರ್, ದಿಡ್ವಾನ್, ಸಾರಗೋಲ್ ಸರೋವರಗಳು. ಸಾಂಬಾರ್ ಸರೋವರ ಭಾರತದ ಅತಿ ವಿಸ್ತಾರವಾದ ಉಪ್ಪಿನ ಸರೋವರವಾಗಿದೆ.
ದಕ್ಷಿಣ ಭಾರತದ ನದಿಗಳು : ದಕ್ಷಿಣ ಭಾರತದ ನದಿಗಳನ್ನು ಪೂರ್ವಕ್ಕೆ ಹರಿಯುವ ಮತ್ತು ಪಶ್ಚಿಮಕ್ಕೆ ಹರಿಯುವ ನದಿಗಳೆಂದು ವಿಂಗಡಿಸಬಹುದು. ಪೂರ್ವಕ್ಕೆ ಹರಿಯುವ ಪ್ರಮುಖ ನದಿಗಳೆಂದರೆ-ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ ಪಾಲಾರ್ ಮತ್ತು ಪೆನ್ನಾರ್ ನದಿಗಳು. ಇವು ಆಗ್ನೇಯ ಮತ್ತು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತವೆ. ಪಶ್ಚಿಮಕ್ಕೆ ಹರಿಯುವ ಪ್ರಮುಖ ನದಿಗಳೆಂದರೆ-ನರ್ಮದ, ತಾಪಿ, ಶರಾವತಿ, ಕಾಳಿ, ನೇತ್ರಾವತಿ, ಜುವಾರಿ ಮತ್ತು ಪೆರಿಯಾರ್ ನದಿಗಳು.
ಮೇಘಾಲಯದ ಮಾಸಿನ್ರಾಮ್ ಎಂಬುದು ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.
ಭಾರತವು ಪ್ರಪಂಚದಲ್ಲಿಯೇ ಅತಿ ದೊಡ್ಡ ಖಂಡವಾಗಿರುವ ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ. ಅಕ್ಷಾಂಶ ಮತ್ತು ರೇಖಾಂಶಗಳ ವಿಸ್ತರಣೆಯ ಪ್ರಕಾರ ಭಾರತವು 8o ಉತ್ತರದಿಂದ 37o ಉತ್ತರ ಅಕ್ಷಾಂಶ ಹಾಗೂ 68o ಪÀÇರ್ವದಿಂದ 97o ಪೂರ್ವ ರೇಖಾಂಶಗಳವರೆಗೆ ವಿಸ್ತರಿಸಿದೆ. (ಪುಟ ಸಂಖ್ಯೆ 231 ರಲ್ಲಿರುವ ಭೂಪಟವನ್ನು ಗಮನಿಸು) ಇದರಿಂದ ಭಾರತವು ಪೂರ್ಣವಾಗಿ ಉತ್ತರ ಗೋಳಾರ್ಧ ಹಾಗೂ ಪೂರ್ವ ಗೋಳಾರ್ಧದ ಮಧ್ಯಭಾಗದಲ್ಲಿ ನೆಲೆಸಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು (232 1o ಉತ್ತರದ ವಿಶೇಷ ಅಕ್ಷಾಂಶ) ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗಿದೆ.
ಭೂಗೋಳದ ಮೇಲೆ ಪೂರ್ವ-ಪಶ್ಚಿಮವಾಗಿ ಎಳೆಯಬಹುದಾದ ಕಾಲ್ಪನಿಕ ರೇಖೆಗಳನ್ನು ಅಕ್ಷಾಂಶಗಳೆಂದು ಕರೆಯಲಾಗಿದೆ. ಇವುಗಳನ್ನು ಡಿಗ್ರಿಗಳಲ್ಲಿ ಎಣಿಕೆ ಮಾಡಲಾಗುವುದು. ಭೂಮಧ್ಯ ರೇಖೆಯಿಂದ ಉತ್ತರಕ್ಕೆ 90o ಮತ್ತು ದಕ್ಷಿಣಕ್ಕೆ 90o ಅಕ್ಷಾಂಶಗಳಿವೆ.
• ಭೂಮಿಯನ್ನು ಎರಡು ಸಮಭಾಗಗಳಾಗಿ ವಿಂಗಡಿಸುವ ಕಾಲ್ಪನಿಕ ರೇಖೆಗೆ ಭೂಮಧ್ಯರೇಖೆ ಅಥವಾ ಸಮಭಾಜಕರೇಖೆ (0o) ಎನ್ನುವರು. ಇದರಿಂದ ಉತ್ತರಕ್ಕಿರುವ ಭೂಭಾಗವನ್ನು ಉತ್ತರ ಗೋಳಾರ್ಧ ಮತ್ತು ದಕ್ಷಿಣದ ಭಾಗವನ್ನು ದಕ್ಷಿಣಗೋಳಾರ್ಧ ಎನ್ನುವರು.
• ಭೂಮಧ್ಯ ರೇಖೆ (0o), ಕರ್ಕಾಟಕ ಸಂಕ್ರಾಂತಿ ವೃತ್ತ (232 1o ಉ.), ಮಕರ ಸಂಕ್ರಾತಿ ವೃತ್ತ (232 1o ದ.), ಆಕ್ರ್ಟಿಕ್ ವೃತ್ತ (662 1o ಉ.) ಮತ್ತು ಅಂಟಾಕ್ರ್ಟಿಕ್ ವೃತ್ತ (662 1o ದ.) ಗಳನ್ನು ವಿಶೇಷ ಅಕ್ಷಾಂಶಗಳೆಂದು ಪರಿಗಣಿಸಲಾಗಿದೆ.
• ಭೂಗೋಳದ ಮೇಲೆ ಉತ್ತರ-ದಕ್ಷಿಣವಾಗಿ ಎಳೆಯಬಹುದಾದ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳೆಂದು ಕರೆಯಲಾಗಿದೆ. ಗ್ರೀನಿಚ್(ಲಂಡನ್) ಮೂಲಕ ಹಾಯ್ದು ಹೋಗಿರುವ ರೇಖಾಂಶವನ್ನು (0o) ಪ್ರಧಾನ ರೇಖಾಂಶವೆಂದು ಕರೆಯಲಾಗಿದೆ. ಇದರಿಂದ ಪೂರ್ವಕ್ಕಿರುವ ಭೂಭಾಗವನ್ನು ಪೂರ್ವಗೋಳಾರ್ಧ ಮತ್ತು ಪಶ್ಚಿಮದ ಭಾಗವನ್ನು ಪಶ್ಚಿಮ ಗೋಳಾರ್ಧ ಎನ್ನುವರು.
• ಪ್ರಧಾನ ರೇಖಾಂಶದಿಂದ ಪೂರ್ವಕ್ಕೆ 180o ಮತ್ತು ಪಶ್ಚಿಮಕ್ಕೆ 180o ರೇಖಾಂಶಗಳಿವೆ.
• ರೇಖಾಂಶ ಮತ್ತು ಕಾಲಮಾನಗಳಿಗೆ ಸಂಬಂಧವಿದೆ.
• ಅಕ್ಷಾಂಶ ಮತ್ತು ರೇಖಾಂಶಗಳು ಒಂದು ಪ್ರದೇಶದ ಸ್ಥಾನ, ದೂರ ಮತ್ತು ದಿಕ್ಕುಗಳ ಬಗ್ಗೆ ತಿಳಿಯಲು ಅಗತ್ಯವಾಗಿವೆ.
• ಭಾರತದ ವಿಸ್ತೀರ್ಣ _ 32,87,263 ಚದರ ಕಿ.ಮೀ.
• ಭಾರತದ ಜನಸಂಖ್ಯೆ _ 121 ಕೋಟಿ (2011ರ ಜನಗಣತಿ ಪ್ರಕಾರ).
• ಭಾರತದ ದಕ್ಷಿಣ ತುದಿ _ ಇಂದಿರಾಪಾಯಿಂಟ್.
• ಭಾರತದ ಉತ್ತರದ ತುದಿ _ ಇಂದಿರಾಕೋಲ್.
• ಭಾರತದ ಪಶ್ಚಿಮದ ತುದಿ _ ಗುವಾರ್ಮೋಟ.
• ಭಾರತದ ಪೂರ್ವ ತುದಿ _ ಕಿಬಿತು.
ಭಾರತದಲ್ಲಿ ಅಸಂಖ್ಯಾತ ಭಾಷೆಗಳಿದ್ದು, ಅವು ಭಾಷಾ ವೈವಿಧ್ಯತೆಯನ್ನು ಸೂಚಿಸುತ್ತವೆ. ಅವುಗಳಲ್ಲಿ 15ನ್ನು ಅಧಿಕೃತ ಭಾಷೆಗಳೆಂದು ಪರಿಗಣಿಸಲಾಗಿದೆ. ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿರುವ ಅಧಿಕೃತ ನೋಟುಗಳಲ್ಲಿ ಮುದ್ರಿಸಲಾಗಿದೆ.
ಭಾರತ ಸರ್ಕಾರವು ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಲಿಯನ್ನು 1956ರಲ್ಲಿ ಸ್ಥಾಪಿಸಿತು.
ಆಗ್ರಾದಲ್ಲಿ ನೆಲೆಸಿದ್ದ ಹೆನ್ರಿಚ್ ರೋಥ್ (ಊeiಟಿಡಿiಛಿh ಖoಣh) ಎಂಬಾತನು ಇಂದಿಗೆ 350 ವರ್ಷಗಳ ಹಿಂದೆ ಸಂಸ್ಕøತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದನು
ಭಾರತೀಯಶಾಸ್ತ್ರದ (ಇಂಡಾಲಜಿ) ಅಧ್ಯಯನಕ್ಕೆ ಮಹತ್ವದ ಹೆಜ್ಜೆಯಿಟ್ಟ ಇಂಗ್ಲಿಷ್ ಅಧಿಕಾರಿ ಎಂದರೆ ಸರ್. ವಿಲಿಯಂ ಜೋನ್ಸ್. ಬಂಗಾಳದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಬಂದ ಇವರು ಸಾ.ಶ 1784ರಲ್ಲಿ ‘ದಿ ಏಷ್ಯಾಟಿಕ್ ಸೊಸೈಟಿ’ ಎಂಬ ಸಂಸ್ಥೆಯನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಬಹುಭಾಷಾ ಪಂಡಿತರಾಗಿದ್ದ ವಿಲಿಯಂ ಜೋನ್ಸ್ ‘ಗೀತಗೋವಿಂದ’, ‘ಮಾನವಧರ್ಮಶಾಸ್ತ್ರ’ ಗ್ರಂಥಗಳಲ್ಲದೆ ಕಾಳಿದಾಸನ ‘ಶಾಕುಂತಲ’ ಕೃತಿಯನ್ನೂ ಸಂಸ್ಕøತದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದರು.
ಅಬೆ ಡುಬಾಯ್ಸ್ (ಂbbe ಆubois) ಎಂಬ ಫ್ರೆಂಚ್ ಮಿಷನರಿ ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ ಬಂದು ನೆಲೆಸಿದರು. ಸ್ಥಳೀಯ ಸಂಸ್ಕøತಿಯನ್ನು ಅಳವಡಿಸಿಕೊಂಡು ಸನ್ಯಾಸಿಯಂತೆ ಬದುಕಿದ ಇವರನ್ನು ಜನರು ‘ದೊಡ್ಡ ಸ್ವಾಮಿಯವರು’ ಎಂದು ಕರೆಯುತ್ತಿದ್ದರು. ಇವರು ‘ಹಿಂದೂ ಮ್ಯಾನೆರ್ಸ್, ಕಸ್ಟಮ್ಸ್ ಅಂಡ್ ಸೆರೆಮನಿಸ್’ ಎಂಬ ಕೃತಿಯನ್ನು ಬರೆದರು.
ಜೆಸೂಟ್ (ಎesuಣ): ಇಗ್ನೇಶಿಯಸ್ ಲಯೊಲ ಎಂಬಾತನು ಸಾ.ಶ 1534ರಲ್ಲಿ ಪ್ಯಾರಿಸ್ನಲ್ಲಿ ‘ಜೀಸಸ್ ಸಂಘ’ವನ್ನು ಕಟ್ಟಿದನು. ಇದು ಪುರುಷ ಕ್ಯಾಥೋಲಿಕ್ ಪಂಥಿಯ ಧರ್ಮಾಸಕ್ತರ ಸಭೆ (ಅoಟಿgಡಿegಚಿಣioಟಿ oಜಿ ಡಿeಟigious) ಯಾಗಿತ್ತು.
ನಮ್ಮ ರಾಜ್ಯದಲ್ಲಿ ಆಡಳಿತದ ಅನುಕೂಲಕ್ಕೆ ನಾಲ್ಕು ಕಂದಾಯ ವಿಭಾಗಗಳನ್ನು ರೂಪಿಸಲಾಗಿದೆ. ಅವುಗಳು ಹೀಗಿವೆ: ಬೆಂಗಳೂರು ವಿಭಾಗ (ಒಂಬತ್ತು ಜಿಲ್ಲೆಗಳು) ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ, ಮೈಸೂರು ವಿಭಾಗ (ಎಂಟು ಜಿಲ್ಲೆಗಳು) ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಚಾಮರಾಜನಗರ ಮತ್ತು ಕೊಡಗು, ಬೆಳಗಾವಿ ವಿಭಾಗ (ಏಳು ಜಿಲ್ಲೆಗಳು) ಮತ್ತು ಕಲಬುರಗಿ ವಿಭಾಗ (ಆರು ಜಿಲ್ಲೆಗಳು). ಒಟ್ಟು ಮೂವತ್ತು ಜಿಲ್ಲೆಗಳು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬ್ಬಿಣ ಕಾರ್ಖಾನೆಯಿದೆ. ಇದನ್ನು 1923ರಲ್ಲಿ ಸ್ಥಾಪಿಸಲಾಗಿದೆ. ಅದನ್ನು ಇಂದು ವಿಶ್ವೇಶ್ವ್ವರಯ್ಯ ಕಬ್ಬಿಣ ಮತ್ತು ಉಕ್ಕು ನಿಯಮಿತ ಕಾರ್ಖಾನೆ ಎಂದು ಕರೆಯಲಾಗುತ್ತಿದೆ.
ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಸುಬ್ಬಯ್ಯ ನಾಯ್ಡು ಅವರು ಕನ್ನಡದ ಮೊದಲನೇ ವಾಕ್ಚಿತ್ರ ‘ಸತಿ ಸುಲೋಚನ’ದ ನಾಯಕ ನಟರು. ಪ್ರಸಿದ್ಧ ಜನಪದ ತಜ್ಞರಾದ ಸಾಹಿತಿ ಎಚ್.ಎಲ್. ನಾಗೇಗೌಡ ಅವರು ಸ್ಥಾಪಿಸಿರುವ ‘ಜಾನಪದ ಲೋಕ’ ರಾಮನಗರ ಜಿಲ್ಲೆಯಲ್ಲಿದೆ. ದಾವಣಗೆರೆ ನಗರವು ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಸರನ್ನು ಪಡೆದಿತ್ತು. ಇಡೀ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಕೆರೆ ‘ಶಾಂತಿ ಸಾಗರ’ ಚನ್ನಗಿರಿಯಲ್ಲಿದೆ. ಶಿವಮೊಗ್ಗ ಕರ್ನಾಟಕದ ಭತ್ತದ ಕಣಜ ಎಂದು ಹೇಳಲಾಗುತ್ತದೆ.
ಕೊಡಗು ಪ್ರದೇಶವನ್ನು ಅನೇಕ ರಾಜ ಮನೆತನಗಳು ಆಡಳಿತ ನಡೆಸಿದವು. ಹಾಲೇರಿ ಮನೆತನವು 17ನೆಯ ಶತಮಾನದಲ್ಲಿ ತನ್ನ ಆಳ್ವಿಕೆಯನ್ನು ಸ್ಥಾಪಿಸಿತು. ಬಿದನೂರು ಇವರ ರಾಜಧಾನಿಯಾಗಿತ್ತು. ಹಾಲೇರಿ ಅರಸರಲ್ಲಿ ದೊಡ್ಡವೀರಪ್ಪ ಪ್ರಸಿದ್ಧ ದೊರೆ. ಚಿಕ್ಕವೀರರಾಜ ಕೊನೆಯ ಅರಸ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ವನ್ಯಮೃಗ ಧಾಮವಿದೆ. ಇದನ್ನು ಮುತ್ತೋಡಿ ಪ್ರಾಣಿಧಾಮ ಎಂದೂ ಕರೆಯಲಾಗುತ್ತದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಬಾಬಾಬುಡನ್ಗಿರಿಯನ್ನು ಚಂದ್ರದ್ರೋಣ ಪರ್ವತ ಎಂದೂ ಕರೆಯಲಾಗುತ್ತದೆ. ಸೂಫಿಸಂತ ಬಾಬಾಬುಡನ್ ದರ್ಗಾ ಇಲ್ಲ್ಲಿದೆ. ಅವನು ಭಾರತಕ್ಕೆ ಕಾಫಿ ಪರಿಚಯಿಸಿದ ಎಂದು ಹೇಳಲಾಗುತ್ತದೆ. ಬಾಬಾಬುಡನ್ಗಿರಿ ದರ್ಗಾ ಮುಸ್ಲಿಮರು ಮತ್ತು ಹಿಂದೂಗಳ ಯಾತ್ರಾಸ್ಥಳವಾಗಿದೆ.
ಮೈಸೂರು ಜಿಲ್ಲೆಯನ್ನು ವಿಭಜಿಸಿ 1938ರಲ್ಲಿ ಮಂಡ್ಯ ಜಿಲ್ಲೆಯನ್ನು ರಚಿಸಲಾಯಿತು.
ಟಿಪ್ಪುಸುಲ್ತಾನ್ ಕಟ್ಟಿಸಿರುವ ಬೇಸಿಗೆ ಅರಮನೆ ದರಿಯಾ ದೌಲತ್ ಆಕರ್ಷಣೀಯವಾಗಿದೆ.
ಕಾವೇರಿ ನದಿಯು ಉಂಟು ಮಾಡಿರುವ ಮೂರು ದ್ವೀಪಗಳಲ್ಲಿ ಮೂರು ಶ್ರೀರಂಗನಾಥಸ್ವಾಮಿ ದೇವಾಲಯಗಳಿವೆ. ಮೊದಲನೆಯದು ಶ್ರೀರಂಗಪಟ್ಟಣ, ಎರಡನೆಯದು ಶಿವನಸಮುದ್ರದಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ. ಮೂರನೆಯದು ತಮಿಳುನಾಡಿನಲ್ಲಿರುವ ಶ್ರೀರಂಗಂದಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ. ಪಶ್ಚಿಮವಾಹಿನಿಯು ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಿದೆ.
ಮೇಲುಕೋಟೆಯಲ್ಲಿ 1854ರಲ್ಲಿ ಸ್ಥಾಪಿಸಿರುವ ಸಂಸ್ಕøತ ಪಾಠಶಾಲೆಯಿದೆ. ಇಲ್ಲಿ ಪರಕಾಲ ಮಠ, ಅಹೋಬಲ ಮಠ ಮತ್ತು ಯತಿರಾಜಮಠಗಳಿವೆ.
ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಜೀವದ್ರವ್ಯ ಕೃಷ್ಣರಾಜಸಾಗರ ಅಣೆಕಟ್ಟು. ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಈ ಅಣೆಕಟ್ಟೆಯು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಕೃಷಿಗೆ ನೀರನ್ನುಒದಗಿಸುತ್ತದೆ. ಇದನ್ನು ಸರ್.ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಇದನ್ನು 1932ರಲ್ಲಿ ನಿರ್ಮಿಸಲಾಯಿತು. ಕಾವೇರಿ ನದಿಗೆ ತಮಿಳುನಾಡಿನಲ್ಲಿ ಸೇಲಮ್ ಬಳಿ ಮೆಟ್ಟೂರು ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
ಕೊಡಗು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿನ ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ, ಅಬ್ಬೆ ಜಲಪಾತ, ಇರ್ಪು ಜಲಪಾತ, ದುಬಾರೆ ಆನೆ ಪಳಗಿಸುವ ಕೇಂದ್ರ, ನಾಗರಹೊಳೆ ಮುಂತಾದವು ಪ್ರಮುಖ ಪ್ರವಾಸಿ ಕೇಂದ್ರಗಳು.
ದೇಶದಲ್ಲಿ ಚಿಕ್ಕಮಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಕೊಡಗು. ಕರ್ನಾಟಕ ರಾಜ್ಯದಲ್ಲಿನ ಅತಿ ಚಿಕ್ಕ ಜಿಲ್ಲೆ ಕೊಡಗು.
ಬ್ರಿಟಿಷರು 1860ರಲ್ಲಿ ಕೆನರ ಪ್ರದೇಶವನ್ನು ವಿಭಜಿಸಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬ ಜಿಲ್ಲೆಗಳನ್ನು ರಚಿಸಿದರುಪಣಂಬೂರು ಬಂದರು ಪ್ರಸಿದ್ಧ ರಫ್ತು ಕೇಂದ್ರವಾಗಿದೆ. ಇಲ್ಲಿ ನವ ಮಂಗಳೂರು ಬಂದರನ್ನು ರಚಿಸಲಾಗಿದೆ. ಮಂಗಳೂರಿನ ಬಜ್ಪೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ
ಪಿಲಿಕುಳ ನಿಸರ್ಗಧಾಮವು ಇದು ಸುಮಾರು 350ಕ್ಕಿಂತಲೂ ಅಧಿಕ ಪ್ರದೇಶದಲ್ಲಿ ನೆಲೆಗೊಂಡಿದೆ. ಇಲ್ಲಿ ಡಾ. ಶಿವರಾಮಕಾರಂತ ಜೈವಿಕ ಉದ್ಯಾನವಿದೆ.
ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯ ಅವರಿಂದ ಇಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಸಂತ ಕನಕದಾಸನಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ಶ್ರೀಕೃಷ್ಣ ದರ್ಶನ ನೀಡಿದ್ದ ಎಂದು ಹೇಳಲಾಗುತ್ತದೆ. ಹೀಗೆ ದರ್ಶನ ನೀಡಿದ ಸ್ಥಳವನ್ನು ಕನಕನ ಕಿಂಡಿ ಎಂದು ಕರೆಯಲಾಗುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಮೂಕಾಂಬಿಕ ದೇವಾಲಯವಿದೆ. ಕಾರ್ಕಳದಲ್ಲಿನ 42 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವು ಲೋಕ ಪ್ರಸಿದ್ಧ ಪಡೆದಿದೆ
ಮಲ್ಪೆಯು ಸರ್ವಋತು ಮೀನುಗಾರಿಕೆ ಬಂದರಾಗಿದೆ. ಇಲ್ಲಿರುವ ಪ್ರಸಿದ್ಧ ದ್ವೀಪವನ್ನು ಸೇಂಟ್ ಮೇರಿ ದ್ವೀಪ ಎಂದು ಕರೆಯಲಾಗುತ್ತದೆ.
ಭೂಮಿಯು 4600 ದಶಲಕ್ಷ ವರ್ಷಗಳ ಹಿಂದೆ ಹುಟ್ಟಿತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿಗಳೆಂದರೆ ಏಕಕೋಶ ಬ್ಯಾಕ್ಟೀರಿಯಾಗಳಾದ ಪ್ರೊಕ್ಯಾರಿಯೋಟ್ (Pಡಿoಞಚಿಡಿಥಿoಣe) ಗಳು.
ಭಾರತ ಉಪಖಂಡದಲ್ಲಿ ಕೃಷಿಯ ಆರಂಭಿಕ ಕುರುಹುಗಳು ಪಾಕಿಸ್ತಾನದ ಮೆಹರ್ಗರ್ ನೆಲೆಯಲ್ಲಿ ಕಂಡುಬಂದಿದೆ. ನವಶಿಲಾಯುಗದ ಕೊನೆಯ ಕಾಲಕ್ಕೆ ಲೋಹಗಳ ಬಳಕೆ ಆರಂಭವಾಗಿತ್ತು. ಮೊದಲು ಮಾನವರು ಬಳಸಿದ ಲೋಹ ತಾಮ್ರ.
ಸರಿಸೃಪ : ನೆಲದ ಮೇಲೆ ಹರಿದಾಡುವ ಜೀವಿಗಳು. ಉದಾ: ಹಾವುಗಳು, ಸಹಸ್ರಪದಿ.
ಉಭಯವಾಸಿ : ನೀರು ಮತ್ತು ನೆಲ ಎರಡರ ಮೇಲೆ ವಾಸಿಸುವ ಜೀವಿ. ಉದಾ: ಆಮೆ, ಕಪ್ಪೆ.
ಸಸ್ತನಿ : ತನ್ನ ಮರಿಗಳಿಗೆ ಹಾಲುಣಿಸುವ ಜೀವಿಗಳು. ಉದಾ. ಹಸು, ಮೇಕೆ.
ದ್ವಿಪಾದಿ : ಎರಡು ಕಾಲುಗಳಲ್ಲಿ ನೆಲದ ಮೇಲೆ ನಡೆಯುವ ಮತ್ತು ಓಡುವ ಜೀವಿಗಳು. ಉದಾ. ಗೊರಿಲ್ಲ, ಮನುಷ್ಯ.
ನೈಲ್ ನದಿ ತೀರದಲ್ಲಿ ಈಜಿಪ್ಟ್ ನಾಗರಿಕತೆ, ಯುಫ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ತೀರದಲ್ಲಿ ಮೆಸೊಪೊಟೇಮಿಯ ನಾಗರಿಕತೆ, ಹ್ವಾಂಗ್ಹೋ ಮತ್ತು ಸಿಕಿಯಾಂಗ್ ನದಿಗಳ ದಂಡೆಯಲ್ಲಿ ಚೀನಾ ನಾಗರಿಕತೆ, ಸಿಂಧೂ ಮತ್ತು ಅದರ ಉಪನದಿಗಳ ಕೊಳ್ಳದಲ್ಲಿ ಹರಪ್ಪ ನಾಗರಿಕತೆಗಳು ಏಳಿಗೆಗೆ ಬಂದವು.
‘ಈಜಿಪ್ಟನ್ನು ನೈಲ್ ನದಿಯ ವರಪ್ರಸಾದ’ (ಇgಥಿಠಿಣ ಣhe giಜಿಣ oಜಿ ಣhe ಓiಟe) ಎಂದು ಕರೆಯುತ್ತಾರೆ. ಈಜಿಪ್ಟಿನ ರಾಜರನ್ನು ಫೆರೋ ಎಂದು ಕರೆಯುತ್ತಿದ್ದರು. ಮೆನೆಸ್
(ಒeಟಿes) ಎಂಬಾತ ಮೊದಲ ಫೆರೋ. ಮೆಂಫಿಸ್ (ಒemಠಿhis) ನಗರ ಇವನ ರಾಜಧಾನಿಯಾಗಿತ್ತು. ಖುಫು ಗಿಜ್ಹೆ ಎಂಬಲ್ಲಿ ಜಗತ್ತಿನ ಅತ್ಯಂತ ದೊಡ್ಡ ಪಿರಮಿಡ್ ಕಟ್ಟಿಸಿದನು. ಹ್ಯಾಷೆಪ್ಸುಟ್ (ಊಚಿಣsheಠಿsuಣ) ಅಧಿಕಾರಕ್ಕೆ ಬಂದಳು. ಆ ಮೂಲಕ ಜಗತ್ತಿನ ಮೊಟ್ಟಮೊದಲ ಸಾಮ್ರಾಜ್ಞೆ ಎನಿಸಿದಳು. ಈಜಿಪ್ಟ್ ನಾಗರಿಕತೆಯ ಜನರಿಗೆ ಮರುಜನ್ಮದಲ್ಲಿ ನಂಬಿಕೆ ಇತ್ತು. ಆದ್ದರಿಂದ ಶವಗಳನ್ನು ಸಂರಕ್ಷಿಸಿಡುತ್ತಿದ್ದರು. ಸಂರಕ್ಷಿಸಿಟ್ಟ ಶವಗಳನ್ನು ‘ಮಮ್ಮಿ’ ಎನ್ನುತ್ತಾರೆ. ಪ್ರಾಚೀನ ಈಜಿಪ್ಟಿಯನ್ನರು ಹೈರೋಗ್ಲಿಫಿಕ್ಸ್ (ಊieಡಿogಟಥಿಠಿhiಛಿ) ಎಂಬ ಚಿತ್ರಲಿಪಿಗಳನ್ನು ಬಳಸುತ್ತಿದ್ದರು. ಹೈರೋಗ್ಲಿಫ್ ಎಂದರೆ ‘ಪವಿತ್ರಲಿಪಿ’ ಅಕ್ಷರ ಎಂದರ್ಥಈಜಿಪ್ಟಿನ ಶಿಲ್ಪಗಳಲ್ಲಿ ಸ್ಫಿಂಕ್ಸ್ ಎಂಬ ಬೃಹತ್ ಪ್ರತಿಮೆಯು ಆಕರ್ಷಕವಾಗಿದೆ. ಇದು ಸಿಂಹದೇಹ ಮತ್ತು ಮನುಷ್ಯ ಮುಖವನ್ನೂ ಹೊಂದಿದೆ.
ಇಂದಿನ ಇರಾಕ್ ದೇಶದ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ನಡುವಿನ ಬಯಲಿನಲ್ಲಿ ಮೆಸÉೂಪೊಟೇಮಿಯ ನಾಗರಿಕತೆ ಏಳಿಗೆಗೆ ಬಂದಿತು. ಗ್ರೀಕ್ ಭಾಷೆಯಲ್ಲಿ ಮೆಸೊಪೊಟೇಮಿಯ ಎಂದರೆ ಎರಡು ನದಿಗಳ ನಡುವಿನ ಪ್ರದೇಶ. ಸುಮೇರಿಯನ್ನರಿಂದ ಮೊಟ್ಟಮೊದಲು ಇಲ್ಲಿ ನಾಗರಿಕತೆಯೊಂದು ಏಳಿಗೆಗೆ ಬಂದಿತು. ಉರ್ (ಗಡಿ), ಕಿಶ್ (ಏish), ಲಗಾಶ್ (ಐಚಿgಚಿsh) ಮೊದಲಾದ ನಗರ ರಾಜ್ಯಗಳು ಆರಂಭವಾದವು. ಸುಮೇರಿಯನ್ನರು ಕ್ಯೂನಿಫಾರಂ (ಅuಟಿeiಜಿoಡಿm) ಲಿಪಿಗಳಲ್ಲಿ ಹಸಿ ಜೇಡಿಮಣ್ಣಿನ ಫಲಕಗಳ ಮೇಲೆ ಬರೆಯುತ್ತಿದ್ದರು. ಬ್ಯಾಬಿಲೋನಿಯನ್ನರಲ್ಲಿ ಪ್ರಸಿದ್ಧನಾದ ರಾಜ ಹಮ್ಮುರಬಿ. ಈತನು ತನ್ನ ಕಾನೂನು ಸಂಹಿತೆಗಳ ಮೂಲಕ ಜಗತ್ಪ್ರಸಿದ್ಧನಾಗಿದ್ದಾನೆ. ‘ಮುಯ್ಯಿಗೆ ಮುಯ್ಯಿ’ ಎಂಬ ತತ್ವದ ಮೇಲೆ ಈ ಕಾನೂನುಗಳಿವೆ.
ನೆಬುಖಡ್ನೆಜರ್: ನಂತರ ಬಂದ ಚಾಲ್ಡಿಯನ್ನರಲ್ಲಿ ನೆಬುಖಡ್ನೆಜರ್ (ಓebuಛಿhಚಿಜಟಿezzಚಿಡಿ) ಪ್ರಸಿದ್ಧನಾಗಿದ್ದಾನೆ. ಇವನು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ‘ತೂಗು ಉದ್ಯಾನ’ (ಊಚಿಟಿgiಟಿg ಉಚಿಡಿಜeಟಿ) ವನ್ನು ಬ್ಯಾಬಿಲೋನ್ ನಗರದಲ್ಲಿ ನಿರ್ಮಿಸಿದನು.
ಜಗತ್ತಿನಲ್ಲಿಯೆ ಮೊಟ್ಟಮೊದಲು ಕಾನೂನು ಸಂಹಿತೆಗಳನ್ನು ಅಳವಡಿಸಿಕೊಂಡವರು ಮೆಸಪೊಟೇಮಿಯನ್ನರು. ಹಮ್ಮುರಬಿಯು ಜಗತ್ತಿನಲ್ಲಿ ಮೊದಲ ಬಾರಿಗೆ ಕಾನೂನು ಸಂಹಿತೆಗಳನ್ನು ಜಾರಿಗೆ ತಂದನು. ‘ಗಿಲ್ಗಮೇಶ್’ ಎಂಬುದು ಮೆಸೊಪೊಟೇಮಿಯನ್ನರ ಒಂದು ಮಹಾಕಾವ್ಯವಾಗಿದೆ.
ಚೀನಾ ನಾಗರಿಕತೆ: ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ. ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು. ಯಾಂಗ್ತ್ಸೆ (ಙಚಿಟಿgಣze) ಮತ್ತು ಹ್ವಾಂಗ್ಹೊ(ಹಳದಿ ನದಿ) (ಊತಿಚಿಟಿgo) ಇಲ್ಲಿನ ಪ್ರಮುಖ ನದಿಗಳಾಗಿವೆ. ಮೊದಲು ‘ಹಳದಿ ನದಿ’ ತೀರದಲ್ಲಿಚೀನಾ ನಾಗರಿಕತೆಯು ಹುಟ್ಟಿತು. ಆದ್ದರಿಂದ ಅದನ್ನು ‘ಚೀನಾ ನಾಗರಿಕತೆಯ ತೊಟ್ಟಿಲು’ ಎಂದು ಕರೆಯುತ್ತಾರೆ. ಚೀನಾದ ಮೊದಲ ಮನೆತನ ಷಾಂಗ್. ಷಾಂಗ್ ಮನೆತನದ ನಂತರ ಚೌ ಮನೆತನ ಹೆಚ್ಚುಕಾಲ ಆಳಿತು. ಚೌ ಮನೆತನದ ಪ್ರಸಿದ್ಧ ರಾಜ ಹೂವಾಂಗ್ (Wu ತಿಚಿಟಿg). ಪ್ರಸಿದ್ಧ ಚೀನಿ ತತ್ವಜ್ಞಾನಿಗಳಾದ ಕನ್ಫ್ಯೂಶಿಯಸ್, ಲಾವೋತ್ಸೆ (ಐಚಿo ಖಿze) ಅವರು ಚೌ ಮನೆತನದ ಕಾಲದಲ್ಲಿಯೇ ಇದ್ದರು. ಚೌ ಮನೆತನದ ಆಳ್ವಿಕೆಯನ್ನು ಕೊನೆಗೊಳಿಸಿ ಚಿನ್ (ಕಿiಟಿ) ಮನೆತನ ಅಧಿಕಾರಕ್ಕೆ ಬಂದಿತು. ಚಿನ್ ಮನೆತನದಿಂದಲೇ ಆ ದೇಶಕ್ಕೆ ‘ಚೀನಾ’ ಎಂಬ ಹೆಸರು ಬಂದಿತು.
ಷಿ-ಹ್ವಾಂಗ್-ತಿ (Shi-ಊuಚಿಟಿg-ಖಿi): ಚಿನ್ ಮನೆತನದ ಸುಪ್ರಸಿದ್ಧ ರಾಜ ಷಿ-ಹ್ವಾಂಗ್-ತಿ. ಇವನು ಚೀನಾವನ್ನು ಒಗ್ಗೂಡಿಸಿ, ಒಂದೇ ರೀತಿಯ ಕಾನೂನು ಜಾರಿಗೆ ತಂದನು. ಆದ್ದರಿಂದ ಇವನನ್ನು ಚೀನಾದ ಮೊದಲ ರಾಜನೆಂದು ಕರೆಯುತ್ತಾರೆ. ಶತ್ರುಗಳ ದಾಳಿಯನ್ನು ತಡೆಯಲು 1500 ಮೈಲಿ ಉದ್ದದ ಚೀನಾ ಮಹಾಗೋಡೆಯನ್ನು ನಿರ್ಮಾಣ ಮಾಡಿಸಿದನು. ಷಿ-ಹ್ವಾಂಗ್-ತಿ ನಿಧನ ಹೊಂದಿದ ನಂತರ ಚೀನವು ಹಾನ್ ವಂಶದ ಆಳ್ವಿಕೆಗೆ ಒಳಪಟ್ಟಿತ್ತು. ಈ ಕಾಲವನ್ನು ಚೀನಾದ ಸುವರ್ಣಯುಗವೆಂದು ಕರೆಯಲಾಗುತ್ತದೆ.
ವು-ತಿ (Wu-ಖಿi): ಹಾನ್ ವಂಶದ ಪ್ರಸಿದ್ಧ ದೊgಚೀನಾ ಮತ್ತು ರೋಮ್ ನಡುವಿನ ವ್ಯಾಪಾರ ಮಾರ್ಗವು ‘ರೇಷ್ಮೇ ಮಾರ್ಗ’ವೆಂದೇ ಪ್ರಸಿದ್ಧಿ ಹೊಂದಿತುಬೌದ್ಧ ಧರ್ಮವು ಇದೇ ಕಾಲದಲ್ಲಿ ಚೀನಾವನ್ನು ಪ್ರವೇಶಿಸಿತು. ಹಾನ್ ವಂಶದ ಕಾಲದಲ್ಲಿ ಕಲೆ ಮತ್ತು ಸಾಹಿತ್ಯಕ್ಕೂ ಹೆಚ್ಚಿನ ಪ್ರೋತ್ಸಾಹ ದೊರಕಿತು. ಆದ್ದರಿಂದ ಈ ವಂಶದ ಕಾಲವು ಚೀನಾದ ಚರಿತ್ರೆಯಲ್ಲಿ ಸುವರ್ಣಯುಗ ಎಂದೇ ಪ್ರಸಿದ್ಧಿ ಪಡೆದಿzಪ್ರಾಚೀನ ಜಗತ್ತಿಗೆ ಚೀನಿಯರು ನೀಡಿದ ಕೊಡುಗೆ ಅಪಾರವಾದುದು. ಚಹಾ (ಟೀ) ಮತ್ತು ರೇಷ್ಮೆ ವಸ್ತ್ರವನ್ನು ಪರಿಚಯಿಸಿದರು. ಇವಲ್ಲದೆ ಬಿದಿರಿನಿಂದ ಮಾಡಿದ ಕಾಗದ, ಸಿಡಿಮದ್ದು, ಚಿತ್ರ ಕುಂಚ (ಪೇಯಿಂಟಿಂಗ್ ಬ್ರೆಷ್), ಪಿಂಗಾಣಿ, ದಿಕ್ಸೂಚಿ ಮೊದಲಾದವುಗಳನ್ನು ಕಂಡುಹಿಡಿದ ಕೀರ್ತಿ ಚೀನಿಯರಿಗೆ ಸಲ್ಲುತ್ತವೆ.
ಗ್ರೀಕ್ ನಾಗರಿಕತೆ: ಅಥೆನ್ಸ್ನಲ್ಲಿ ಪೆರಿಕ್ಲಿಸ್ನ ಕಾಲ ಆರಂಭವಾಯಿತು. ಇವನ ಕಾಲವನ್ನು ಗ್ರೀಸಿನ ಸುವರ್ಣಯುಗವೆಂದೇ ಕರೆಯಲಾಗುತ್ತದೆ. ಏಕೆಂದರೆ ಪೆರಿಕ್ಲಿಸನ ಕಾಲದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ತತ್ವಜ್ಞಾನ ಮುಂತಾದ ಕ್ಷೇತ್ರಗಳು ಅಸಾಧಾರಣ ಪ್ರಗತಿಯನ್ನು ಕಂಡವು. ಆದ್ದರಿಂದ ಅಥೆನ್ಸನ್ನು ‘ಹೆಲ್ಲಾಸ್ನ ಶಾಲೆ’ (Sಛಿhooಟ oಜಿ ಊeಟಟಚಿs) ಎಂದು ಪೆರಿಕ್ಲಿಸ್ ಕರೆದಿದ್ದಾನೆ. ಗ್ರೀಕಿನ ಶ್ರೇಷ್ಠ ತತ್ವಜ್ಞಾನಿ ಸಾಕ್ರಟಿಸ್. ಅವನ ಶಿಷ್ಯ ಪ್ಲೇಟೋ. ಪ್ಲೇಟೋನ ಶಿಷ್ಯ ಅರಿಸ್ಟಾಟಲ್. ಮತ್ತವನ ಶಿಷ್ಯ ಮ್ಯಾಸಿಡೋನಿಯಾದ ರಾಜನಾದ ಅಲೆಕ್ಸಾಂಡರ್ ಮಹಾಶಯ. ಇವರದು ಜಗತ್ತಿನ ಶ್ರೇಷ್ಠ ಗುರು ಪರಂಪರೆಯಾಗಿದೆ. ಪ್ಲೇಟೊ ‘ಅಕಾಡೆಮಿ’ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದನು. ಡೆಮೊಸ್ತೆನಿಸ್ ಗ್ರೀಕಿನ ಅತ್ಯುತ್ತಮ ಭಾಷಣಕಾರನಾಗಿದ್ದನು. ಹೋಮರ್ ಎಂಬ ಕಣ್ಣಿಲ್ಲದ ಕವಿಯು ‘ಇಲಿಯಾಡ್’ ಮತ್ತು ‘ಒಡಿಸ್ಸಿ’ ಎಂಬ ಮಹಾಕಾವ್ಯಗಳನ್ನು ರಚಿಸಿದನು. ಇತಿಹಾಸದ ಪಿತಾಮಹ ಹೆರೋಡೊಟಸ್ ಮತ್ತು ಥುಸಿಡೀಡಿಸ್ ಪ್ರಮುಖ ಇತಿಹಾಸಕಾರರು. ‘ವೈದ್ಯಶಾಸ್ತ್ರದ ಪಿತಾಮಹ’ ಹಿಪ್ಪಾಕ್ರಿಟಸ್ ಕೂಡ ಗ್ರೀಕ್ ದೇಶದವನು. ಗ್ರೀಕರಿಗೂ ಪರ್ಷಿಯನ್ನರಿಗೂ 2500 ವರ್ಷಗಳ ಹಿಂದೆ ನಡೆದ ಮ್ಯಾರಥಾನ್ ಕದನದಲ್ಲಿ ಗ್ರೀಕರು ಜಯಗಳಿಸಿದರು. ಯುದ್ಧಭೂಮಿಯಿಂದ 24 ಮೈಲು ದೂರದಲ್ಲಿದ್ದ ಅಥೆನ್ಸ್ಗೆ ಈ ಸಂತೋಷದ ಸುದ್ದಿಯನ್ನು ಮುಟ್ಟಿಸಲು ‘ಫಿಲಿಪ್ಪಿಡೆಸ್’ (Phiಟiಠಿಠಿiಜes) ಎಂಬ ಸೈನಿಕ ಓಡಿದ. ಅಂತಿಮವಾಗಿ ವಿಜಯದ ಸುದ್ದಿಯನ್ನು ಅಥೆನ್ಸ್ಗೆ ಮುಟ್ಟಿಸಿ ಕುಸಿದು ಬಿದ್ದು ಸತ್ತನು. ಅವನ ಸ್ಮರಣಾರ್ಥ ಒಲಂಪಿಕ್ ಕ್ರೀಡೆಗಳಲ್ಲಿ ಮ್ಯಾರಾಥಾನ್ ಓಟ ಸೇರಿಸಿದರು.
ಹರಪ್ಪ ನಾಗರಿಕತೆ: ಇದರ ವ್ಯಾಪ್ತಿಯ ಉತ್ತರದ ಕೊನೆಯ ನೆಲೆ ಕಾಶ್ಮೀರದ ಮಾಂಡ, ಪಶ್ಚಿಮದ ಕೊನೆಯ ನೆಲೆ ಬಲುಚಿಸ್ತಾನದ ಸುಕ್ತಜೆಂದಾರ್, ಪೂರ್ವದ ಕೊನೆಯ ನೆಲೆ ಉತ್ತರ ಪ್ರದೇಶದ ಆಲಂಗೀರ್ಪುರ್ ಮತ್ತು ದಕ್ಷಿಣದ ನೆಲೆ ಮಹಾರಾಷ್ಟ್ರದ ದೈಮಾಬಾದ್ಗಳಾಗಿವೆ. ಜಗತ್ತಿನಲ್ಲಿ ಸಾಮಾಜಿಕ ಜೀವನ: ಹರಪ್ಪ ನಾಗರಿಕತೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಅಲಂಕಾರ ಪ್ರಿಯರಾಗಿದ್ದರು.
ಸ್ತ್ರೀಯರು ಅನೇಕ ವಿಧದ ಕಂಠಿಹಾರ, ಬಳೆ, ಉಂಗುರ ಕಿವಿಯ ಓಲೆ, ಸೊಂಟಪಟ್ಟಿ, ಕಾಲಿನ ಕಡಗಗಳು (ನೂಪುರ) ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರು. ಕಾಂತಿವರ್ಧಕಗಳನ್ನೂ ಬಳಸುತ್ತಿದ್ದರು. ಸುಗಂಧದ್ರವ್ಯಗಳ ಬಳಕೆಯೂ ಅವರಿಗೆ ತಿಳಿದಿತ್ತು. ಸ್ತ್ರೀಯರಷ್ಟೇ ಪುರುಷರು ಕೂಡ ಅಲಂಕಾರ ಪ್ರಿಯರಾಗಿದ್ದರು. ಗೋಲಿ, ಚೆಂಡು ಮತ್ತು ಪಗಡೆ ಅವರ ಆಟಗಳಾಗಿದ್ದವು. ಗೂಳಿ ಕಾಳಗ ಜನರ ಮನರಂಜನೆಯ ಕ್ರೀಡೆಯಾಗಿತ್ತು. ಮಕ್ಕಳಿಗಾಗಿ ಆಟಿಕೆಯ ಎತ್ತಿನ ಬಂಡಿಗಳು ಹಾಗೂ ಗೊಂಬೆಗಳಿದ್ದವು ಮೊದಲ ಬಾರಿಗೆ ಹತ್ತಿಯನ್ನು ಬೆಳೆದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ.
ಧರ್ಮ: ಹರಪ್ಪನ್ನರು ಪಶುಪತಿ (ಶಿವ) ಮತ್ತು ಮಾತೃದೇವತೆಯನ್ನು ಪೂಜಿಸಿತ್ತಿದ್ದರು. ಅಶ್ವತ್ಥಮರ, ಸೂರ್ಯ, ಅಗ್ನಿ, ಭೂಮಿ, ಜಲ ಮತ್ತು ನಾಗರ ಹಾವುಗಳನ್ನು ಕೂಡ ಆರಾಧಿಸುತ್ತಿದ್ದರು. ಕಾಲಿಬಂಗನ್ ಮತ್ತು ಲೋಥಾಲ್ ಮುಂತಾದ ನಗರಗಳಲ್ಲಿ ಬೆಂಕಿಯ ಕುಂಡಗಳು ಕಂಡುಬಂದಿವೆ.
1. ಈಸ್ಟ್ ಇಂಡಿಯಾ ಕಂಪನಿಯ ಸೇನೆಯಲ್ಲಿದ್ದ ಚಾಲ್ರ್ಸ್ ಮ್ಯಾಸನ್ (ಅhಚಿಡಿಟes mಚಿssoಟಿ) ಮೊದಲ ಬಾರಿಗೆ 1826 ರಲ್ಲಿ ಹರಪ್ಪ ನೆಲೆಗೆ ಭೇಟಿ ನೀಡಿದನು. ಆತ ಅದನ್ನು ಮ್ಯಾಸಿಡೋನಿಯಾದ ರಾಜ ಅಲೆಕ್ಸಾಂಡರನು ಪುರೂರವನನ್ನು 2300 ವರ್ಷಗಳ ಹಿಂದೆ ಸೋಲಿಸಿದ ಸ್ಥಳ ಎಂದು ಭಾವಿಸಿದ್ದನು. ಮ್ಯಾಸನ್ ಹರಪ್ಪ ನೆಲೆಯನ್ನು ಗುರುತಿಸಿದ ಮೊದಲಿಗನಾದರೂ ತಪ್ಪಾದ ನಿರ್ಣಯ ಮಾಡಿದ್ದನು
2. ಹರಪ್ಪ ನಾಗರಿಕತೆಯ ಜನರು ಬಳಸುತ್ತಿದ್ದ ಚಿನ್ನವು ಕೋಲಾರದ ಚಿನ್ನದ ಗಣಿಯಿಂದ ಪೂರೈಕೆಯಾಗುತ್ತಿತ್ತು.
ವೇದಕಾಲದ ಸಂಸ್ಕøತಿ: ವೇದ’ ಎಂದರೆ ಜ್ಞಾನ. ವೇದಗಳು ನಾಲ್ಕು - ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಇವುಗಳಲ್ಲಿ ಋಗ್ವೇದವು ಪ್ರಾಚೀನವಾದದ್ದು. ಋಗ್ವೇದದಲ್ಲಿ ಹೆಚ್ಚು ಬಾರಿ ಉಲ್ಲೇಖಗೊಂಡಿರುವ ನದಿ-ಸರಸ್ವತಿ. ಪ್ರಸ್ತುತ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಕಣ್ಮರೆಯಾಗಿರುವ ‘ಘಗ್ಗರ್ - ಆಕ್ರಾ’ ನದಿಯೇ ಪ್ರಾಚೀನ ಸರಸ್ವತಿ ನದಿ ಎಂದು ನಂಬಲಾಗಿz. ಆದರೂ, ಆಪ್ಘಾನಿಸ್ತಾನದಲ್ಲಿ ಹರಿಯುವ ಹೇಲ್ಮಂಡ್ (ಊeಟmಚಿಟಿಜ) ನದಿಯೇ ಪ್ರಾಚೀನ ಸರಸ್ವತಿ ನದಿ ಎಂಬ ಅಭಿಪ್ರಾಯವೂ ಇz. ಋಗ್ವೇದದ ಕಾಲವನ್ನು ‘ಪೂರ್ವ ವೇದಕಾಲ‘ವೆಂದೂ, ಅನಂತರದ ವೇದಗಳ ಕಾಲವನ್ನು ‘ಉತ್ತರ ವೇದಕಾಲ’ವೆಂದೂ ಕರೆಯಲಾಗುವುದು. ಆರ್ಯರಿಗೆ ಸೋಮ ಮತ್ತು ಸುರ ಎಂಬ ಪಾನೀಯಗಳ ಪರಿಚಯವಿತ್ತು. ಸ್ತ್ರೀಯರ ಸ್ಥಾನಮಾನ: ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳಿದ್ದವು. ಇವರು ರಾಜಕೀಯ ಸಂಸ್ಥೆಗಳಲ್ಲಿಯೂ ಭಾಗವಹಿಸುತ್ತಿದ್ದರು. ವಿಧವಾ ವಿವಾಹ ಆಚರಣೆಯಲ್ಲಿತ್ತು. ಹೆಣ್ಣು ಮಕ್ಕಳು ಸಹ ವೇದಾಧ್ಯಯನ ಮಾಡುತ್ತಿದ್ದರು. ಘೋಷಾ, ಅಪಾಲಾ, ಲೋಪಮುದ್ರ, ಇಂದ್ರಾಣಿ, ವಿಶ್ವವರಾ ಮುಂತಾದವರು ವೇದಕಾಲದ ಮಹಿಳಾ ವಿದ್ವನ್ಮಣಿಗಳಾಗಿದ್ದರು. ರಾಜಕೀಯ ಸಂಸ್ಥೆಗಳಾದ ಸಭಾ ಮತ್ತು ಸಮಿತಿಗಳಲ್ಲಿ ಮಹಿಳೆಯರೂ ಭಾಗವಹಿಸುತ್ತಿದ್ದರು. ಬಾಲ್ಯವಿವಾಹವಾಗಲಿ, ಸಹಗಮನ ಪದ್ಧತಿಯಾಗಲಿ ಈ ಕಾಲದಲ್ಲಿರಲಿಲ್ಲ. ಕಬ್ಬಿಣ ಮುಂತಾದ ಲೋಹಗಳ ಉಪಯೋಗವನ್ನು ಅರಿತಿದ್ದರು. ಆರ್ಯರ ಬಣದ ಮುಖ್ಯಸ್ಥನನ್ನು ‘ರಾಜನ್’ ಎಂದು ಕರೆಯುತ್ತಿದ್ದರು. ರಾಜನ್ ಸರ್ವಾಧಿಕಾರಿಯಾಗಿರಲಿಲ್ಲ ಮತ್ತು ರಾಜತ್ವವು ವಂಶಪಾರಂಪರ್ಯವೂ ಆಗಿರಲಿಲ್ಲ. ‘ಸಭಾ’, ‘ಸಮಿತಿ’ ಮತ್ತು ‘ವಿಧಾತ’ಗಳೆಂಬ ರಾಜಕೀಯ ಸಂಸ್ಥೆಗಳು ಆಡಳಿತದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದುವು. ರಾಜನು ಹಿರಿಯರ ಸಲಹೆಗಳನ್ನು ಪಡೆದು ತೀರ್ಮಾನಕೊಡುವ ನ್ಯಾಯಾಧೀಶನೂ ಆಗಿದ್ದ ಉತ್ತರ ವೇದಗಳ ಕಾಲದಲ್ಲಿ ಗೋತ್ರ ಪದ್ಧತಿ ಆರಂಭವಾಯಿತು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳ (ಚಾತುರಾಶ್ರಮ) ವ್ಯವಸ್ಥೆ ಆರಂಭವಾಯಿತು. ಭಾರತೀಯರಲ್ಲಿ ಅತ್ಯಂತ ಜನಪ್ರಿಯವಾದ ಎರಡು ಮಹಾಕಾವ್ಯಗಳೆಂದರೆ- ವಾಲ್ಮೀಕಿಯ ರಾಮಾಯಣ ಮತ್ತು ವ್ಯಾಸನ ಮಹಾಭಾರತ.
ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರೈಸ್ತಧರ್ಮವು ಎರಡು ಸಾವಿರ ಬೋಧನೆಗಳು: • ನಾವೆಲ್ಲ ದೇವರ ಮಕ್ಕಳು; ನಾವೆಲ್ಲ ಸಹೋದರರು ಎಂದು ಯೇಸು ಸಾರಿ ಹೇಳಿದನು. • ಪಾಪಗಳನ್ನು ಮಾಡದೆ ಶುದ್ಧ ಜೀವನ ನಡೆಸಬೇಕೆಂದು ಬೋಧಿಸಿದನು. “ನಿಮ್ಮ ನೆರೆಯವನನ್ನು ನಿಮ್ಮಂತೆ ಪ್ರೀತಿಸಿ”, “ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ”. • ಮಾನವ ಸೇವೆಯೇ ದೇವರ ಸೇವೆ ಎಂದನು. ವರ್ಷಗಳಷ್ಟು ಹಿಂದಿನದು. ಅದರ ಸ್ಥಾಪಕ ಯೇಸುಕ್ರಿಸ್ತ(ಜೀಸಸ್ ಕ್ರೈಸ್ಟ್). `ಬೈಬಲ್’ ಕ್ರೈಸ್ತ ಧರ್ಮೀಯರ ಪವಿತ್ರ ಗ್ರಂಥ. ಬೈಬಲ್ನಲ್ಲಿ ಯೇಸುಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿª
ಇಸ್ಲಾಂಧರ್ಮ ಮಹಮ್ಮದ್ ಪೈಗಂಬರರು ಇಸ್ಲಾಂಧರ್ಮದ ಸ್ಥಾಪಕರು. ಅವರು ಅರಬ್ ದೇಶದ ಮೆಕ್ಕ ನಗರದಲ್ಲಿ ಜನಿಸಿದರು ಪ್ರವಾದಿ ಮಹಮ್ಮದರ ಜೀವನ: ಮಹಮ್ಮದರ ತಂದೆ ಅಬ್ದುಲ್ಲಾ, ತಾಯಿ ಅಮೀನಾ. ಅವರು ಹುಟ್ಟುವುದಕ್ಕೆ ಮುನ್ನವೇ ತಂದೆಯನ್ನು ಕಳೆದುಕೊಂಡಿದ್ದರು. ಪ್ರಾರಂಭದಲ್ಲಿ ಅವರು ಚಿಕ್ಕಪ್ಪನಿಗೆ ವ್ಯಾಪಾರದಲ್ಲಿ ನೆರವಾಗತೊಡಗಿದರು. ಮುಂದೆ, ಖದೀಜಾ ಎಂಬ ಧನಿಕ ವಿಧವೆಯೊಬ್ಬಳು ಇವರನ್ನು ತನ್ನ ವ್ಯಾಪಾರದ ಪ್ರತಿನಿಧಿಯಾಗಿ ನೇಮಿಸಿಕೊಂಡಳು. ಮುಂದೆ ಮಹಮ್ಮದರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡು ಅವರನ್ನು ಮದುವೆಯಾದಳು. ಇಸ್ಲಾಮಿನ ಮೂಲಗ್ರಂಥ - ಕುರಾನ್. ಇದು ಅರೇಬಿಕ್ ಭಾಷೆಯಲ್ಲಿz ಪ್ರವಾದಿಯವರು ಮೆಕ್ಕದಿಂದ ಮದೀನಕ್ಕೆ ಹೋದ ವರ್ಷದಿಂದಲೇ ಮುಸಲ್ಮಾನರ `ಹಿಜರಿ’ (ಹೆಜಿರ) ಶಕೆ ಆರಂಭವಾದದ್ದು.
ಹೊಸ ಧರ್ಮಗಳ ಉದಯ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ, ಹಾಲು, ತುಪ್ಪಗಳನ್ನು ‘ಹವಿಸ್ಸು’ ಎಂದು ದಹಿಸಲಾಗುತ್ತಿತ್ತು.
ಬೌದ್ಧ ಧರ್ಮ ಬುದ್ಧನ ಜೀವನ: ಗೌತಮ ಬುದ್ಧನು ನೇಪಾಳದ ಕಪಿಲವಸ್ತು ಸಮೀಪದ ‘ಲುಂಬಿನಿ’ ಯಲ್ಲಿ ಜನಿಸಿದನು. ಅವನ ಬಾಲ್ಯದ ಹೆಸರು ಸಿದ್ಧಾರ್ಥ. ಅವನ ತಂದೆ ಶುದ್ಧೋದನನು ಶಾಕ್ಯ ಗಣರಾಜ್ಯದ ಮುಖ್ಯಸ್ಥನಾಗಿದ್ದನು. ತಾಯಿ ಮಾಯಾದೇವಿ. ಸಿದ್ಧಾರ್ಥನ ಪತ್ನಿ ಯಶೋಧರಾ; ರಾಹುಲ ಅವರ ಪುತ್ರಸಿದ್ಧಾರ್ಥನನ್ನು ಮಗುವಿನಲ್ಲಿಯೇ ನೋಡಿದ ‘ಅಸಿತ’ ಎಂಬ ಮಹರ್ಷಿಯು ಈ ಮಗು ಲೋಕವನ್ನು ಆಳುವ ರಾಜನಾಗುತ್ತಾನೆ ಇಲ್ಲವೇ ಲೋಕದ ಅಳಲನ್ನು ನಿವಾರಿಸುವ ಸನ್ಯಾಸಿಯಾಗುತ್ತಾನೆ ಎಂದು ಭವಿಷ್ಯ ನುಡಿದನು. ಒಮ್ಮೆ ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಅವನ ಕಣ್ಣಿಗೆ ಆಕಸ್ಮಿಕವಾಗಿ ಓರ್ವ ವೃದ್ಧ, ರೋಗಿ, ಸನ್ಯಾಸಿ ಹಾಗೂ ಶವಯಾತ್ರೆಯ ದೃಶ್ಯಗಳು ಬಿದ್ದವು. ಈ ನಾಲ್ಕು ಸನ್ನಿವೇಶಗಳು ಅವನಲ್ಲಿ ವೈರಾಗ್ಯ ಮೂಡಿಸಿ ದುಃಖದ ಮೂಲವನ್ನು ಕಂಡುಹಿಡಿಯಲು ಪ್ರೇರೇಪಿಸಿದವು - ಇವು ಬುದ್ಧಗುರುವಿನ ಕಥಾನಕದಲ್ಲಿ ಬರುವ ಅಂಶಗಳುಬುದ್ಧನು ಉತ್ತರ ಪ್ರದೇಶದ ವಾರಣಾಸಿಯ ಬಳಿ ಸಾರನಾಥ ಎಂಬಲ್ಲಿ ತನ್ನ ಮೊದಲ ಉಪದೇಶವನ್ನು ಐವರು ಶಿಷ್ಯರಿಗೆ ನೀಡಿದನು. ಈ ಘಟನೆಯನ್ನು ‘ಧರ್ಮಚಕ್ರ ಪ್ರವರ್ತನ’ ಎಂದು ಕರೆಯುತ್ತಾರೆಬುದ್ಧನು ಬಿಹಾರದ ಕುಶೀನಗರ ಎಂಬಲ್ಲಿ ದೇಹತ್ಯಾಗ ಮಾಡಿದನುಸಿದ್ಧಾರ್ಥನನ್ನು ಗೌತಮ ಬುದ್ಧ, ತಥಾಗತ, ಶಾಕ್ಯಮುನಿ ಎಂದೂ ಕರೆಯಲಾಗಿz. ತನ್ನ ಉಪದೇಶವನ್ನು ಜನರ ಭಾಷೆಯಾದ ಪಾಲಿ ಭಾಷೆಯಲ್ಲಿ ಬೋಧಿಸಿದನು. ಅವನ ಉಪದೇಶಗಳನ್ನು ಆತನ ಶಿಷ್ಯರು ಮೂರು ಪಿಟಕಗಳಲ್ಲಿ ಸಂಗ್ರಹಿಸಿದರು. ಅವುಗಳೆಂದರೆ ವಿನಯ ಪಿಟಕ, ಸುತ್ತ ಪಿಟಕ ಮತ್ತು ಅಭಿದಮ್ಮ ಪಿಟಕ. ಬೌದ್ಧರ ಪವಿತ್ರ ಗ್ರಂಥಗಳಾದ ಇವುಗಳನ್ನು ತ್ರಿಪಿಟಕಗಳೆಂದು ಕರೆಯುವರು.
ಸಿದ್ದಾರ್ಥನು ಅರಮನೆಯನ್ನು ತೊರೆಯಲು ನದಿ ವಿವಾದ ಕಾರಣವೆಂಬ ಇನ್ನೊಂದು ಮಾಹಿತಿಯಿದೆ. ಎರಡು ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆ ಬಗ್ಗೆ ವಿವಾದವುಂಟಾಗಿ ಸಿದ್ದಾರ್ಥನ ಕಡೆಯವರು ಯುದ್ಧಕ್ಕೆ ಸಿದ್ಧವಾಗುವುದು ಆತನಿಗೆ ಇಷ್ಟವಾಗದೆ ವಿರೋಧಿಸಿ ಆನಂತರ ಅರಮನೆಯನ್ನು ತ್ಯಜಿಸಿದನೆಂದು ಹೇಳಲಾಗುತ್ತಿದೆ. ಇದು ಡಾ. ಅಂಬೇಡ್ಕರ್ ಪುಸ್ತಕದ ಮಾಹಿತಿ.
ಕಿಸಾಗೋತಮಿ : ಬುದ್ಧಗುರುವಿಗೆ ಸಂಬಂಧಿಸಿದಂತೆ ಈ ಕತೆಯು ಪ್ರಚಲಿತವಾಗಿದೆ. ಕಿಸಾಗೋತಮಿ ತನ್ನ ಪ್ರೀತಿಯ ಪುಟ್ಟ ಮಗುವನ್ನು ಕಳೆದುಕೊಂಡಿದ್ದಳು. ಅವಳೆಷ್ಟು ದುಃಖಿತಳಾಗಿದ್ದಳೆಂದರೆ ಮಗುವಿನ ಮೃತದೇಹವನ್ನು ಹೊತ್ತುಕೊಂಡು ಬೀದಿ ಬೀದಿಗಳಲ್ಲಿ ಅಲೆದಾಡಿ ತನ್ನ ಮಗುವಿಗೆ ಮರುಜೀವ ನೀಡಿರೆಂದು ರೋಧಿಸುತ್ತಿದ್ದಳು. ಇದನ್ನು ಕಂಡು ಮನಸ್ಸು ಕರಗಿದ ಓರ್ವನು ಅವಳನ್ನು ಬುದ್ಧನೆಡೆಗೆ ಒಯ್ಯುತ್ತಾನೆ. ಬುದ್ಧ ಕಿಸಾಗೋತಮಿಗೆ ಹೀಗೆಂದು ಹೇಳಿದ: “ನಿನ್ನ ಕಂದನಿಗೆ ಮರುಜೀವ ನೀಡುವೆ. ಆದರೆ ಸಾವು ಕಾಣದ ಮನೆಯ ಸಾಸಿವೆಯು ಬೇಕೆನಗೆ” ಬುದ್ಧನ ಉಪದೇಶಗಳು ಇರುವ ಪ್ರಾಚೀನ ಗ್ರಂಥವೆಂದರೆ `ಸುತ್ತ ಪಿಟಕ'. ಇದು ಪಾಲಿ ಭಾಷೆಯಲ್ಲಿದೆ.
ಜೈನಧರ್ಮ 24ನೇ ತೀರ್ಥಂಕರನಾದ ಮಹಾವೀರನು ಜೈನ ಧರ್ಮವನ್ನು ಪ್ರಚುರಪಡಿಸಿದನು. ಈತನು ಸುಮಾರು 2500 ವರ್ಷಗಳ ಹಿಂದೆ ವೈಶಾಲಿ ಸಮೀಪದ ಕುಂದ ಗ್ರಾಮದಲ್ಲಿ ಜನಿಸಿದನು. ಆತನ ಹಿಂದಿನ ಹೆಸರು ವರ್ಧಮಾನ. ಆತನ ತಂದೆ ಸಿದ್ಧಾರ್ಥನು ಕುಲವೊಂದರ ಮುಖ್ಯಸ್ಥ. ತಾಯಿ ತ್ರಿಶಲಾದೇವಿ. ವರ್ಧಮಾನನು ದಿವ್ಯಜ್ಞಾನವನ್ನು ಪಡೆಯುವುದಕ್ಕಾಗಿ ಮನೆಯನ್ನು ತೊರೆದನು. ಎಲ್ಲವನ್ನೂ ತ್ಯಜಿಸಿ ಕೆಲಕಾಲ ದಿಗಂಬರ ಮುನಿಯಾಗಿ ಸಂಚರಿಸಿದನು. ಅನಂತರ ಹನ್ನೆರಡು ವರ್ಷಕಾಲ ತಪಸ್ಸನ್ನು ಮಾಡಿ ಕೊನೆಗೆ ದಿವ್ಯಜ್ಞಾನವನ್ನು ಪಡೆದು ‘ಜಿನ’ ಎನಿಸಿದನು. ಜಿನ ಎಂದರೆ ‘ಮೋಹವನ್ನು ಗೆದ್ದವನ್ನು’ ಎಂದರ್ಥ. ಬಿಹಾರದ ‘ಪಾವಾಪುರಿ’ ಎಂಬಲ್ಲಿ ಅವನು ದೇಹತ್ಯಾಗ ಮಾಡಿದನು. ಜೈನಧರ್ಮದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಎಂಬ ಎರಡು ಪಂಥಗಳು ಹುಟ್ಟಿಕೊಂಡವು. ಬಿಳಿಯ ವಸ್ತ್ರತೊಡುವ ಪಾಶ್ರ್ವನಾಥನ ಅನುಯಾಯಿಗಳು ಶ್ವೇತಾಂಬರರಾದರೆ, ಬಟ್ಟೆಯನ್ನೇ ಧರಿಸದ ಮಹಾವೀರನ ಅನುಯಾಯಿಗಳು ದಿಗಂಬರರೆನಿಸಿದರು.
ಮಹಾಜನಪದಗಳು: ನಾವೀಗ 2500 ವರ್ಷಗಳಷ್ಟು ಹಿಂದಕ್ಕೆ ಹೋಗೋಣ. ಅದು ಬುದ್ಧನಕಾಲ. ಆ ಕಾಲದಲ್ಲಿ ಸಿಂಧೂ-ಗಂಗಾ ನದಿಬಯಲಿನಲ್ಲಿ ಹದಿನಾರು ಚಿಕ್ಕಪುಟ್ಟ ರಾಜ್ಯಗಳಿದ್ದವು.
ಬೌದ್ಧರ ಸಾಹಿತ್ಯದಲ್ಲಿ ಇವುಗಳನ್ನು ಮಹಾಜನಪದಗಳು ಎಂದು ಕರೆಯಲಾಗಿದೆ. ಅವುಗಳಲ್ಲಿ ಮಗಧ, ಕೋಸಲ ಮತ್ತು ವತ್ಸ ಎಂಬ ಮಹಾಜನಪದ ಪ್ರಮುಖವಾಗಿದ್ದವು. ಅಲ್ಲಿ ರಾಜರ ಆಳ್ವಿಕೆಯಿತ್ತು. ಗಣರಾಜ್ಯಗಳಲ್ಲಿ ಪ್ರಮುಖವಾದುದು ವಜ್ಜಿ (ವೃಜಿ) ಗಣರಾಜ್ಯ. ಅದು ಹಲವಾರು ಗಣರಾಜ್ಯಗಳನ್ನು ಒಳಗೊಂಡಿದ್ದ ಒಕ್ಕೂಟವಾಗಿತ್ತು. ಬಿಹಾರದ ವೈಶಾಲಿ ಪಟ್ಟಣವು ಅದರ ರಾಜಧಾನಿ.
ಉತ್ತರ ಭಾರತದ ಪ್ರಮುಖ ರಾಜ ಮನೆತನಗಳು ಮೌರ್ಯರು ಭಾರತದ ಮೊಟ್ಟಮೊದಲ ಸಾಮ್ರಾಜ್ಯ ಮೌರ್ಯ ಸಾಮ್ರಾಜ್ಯ. ಈ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯ ಚಂದ್ರಗುಪ್ರ ಮೌರ್ಯನು 2300 ವರ್ಷಗಳ ಹಿಂದೆ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿ ಪಾಟಲಿಪುತ್ರ(ಈಗಿನ ಬಿಹಾರದ ರಾಜಧಾನಿ ಪಾಟ್ನ)ವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಮ್ಯಾಸಿಡೋನಿಯಾದ ದೊರೆ ಅಲೆಗ್ಸಾಂಡರನು ಈ ಮೊದಲು ಆಕ್ರಮಿಸಿಕೊಂಡಿದ್ದ ಈ ಪ್ರದೇಶಗಳನ್ನು ಅವನ ಪ್ರತಿನಿಧಿ ಸೆಲ್ಯೂಕಸ್ ನೋಡಿಕೊಳ್ಳುತ್ತಿದ್ದನು. ಚಂದ್ರಗುಪ್ತ ಮೌರ್ಯನ ಸೈನ್ಯದ ಎದುರು ಸೋತ ಸೆಲ್ಯೂಕಸ್ ಅವನೊಡನೆ ಒಪ್ಪಂದಕ್ಕೆ ಮುಂದಾದನು. ಆಫ್ಘಾನಿಸ್ತಾನ, ಬಲೂಚಿಸ್ತಾನ ಮತ್ತು ಸಿಂಧ್ನ ಪಶ್ಚಿಮ ಪ್ರದೇಶಗಳನ್ನು ಚಂದ್ರಗುಪ್ತ ಮೌರ್ಯನಿಗೆ ನೀಡಿದನಲ್ಲದೆ ತನ್ನ ಮಗಳನ್ನೂ ಕೊಟ್ಟು ಮದುವೆ ಮಾಡಿದನು. ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತ ಮೌರ್ಯನು 500 ಆನೆಗಳನ್ನು ಸೆಲ್ಯೂಕಸ್ನಿಗೆ ಬಳುವಳಿಯಾಗಿ ನೀಡಿದನು. ಸೆಲ್ಯೂಕಸನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಮೆಗಸ್ತನೀಸ್ ಎಂಬ ರಾಯಭಾರಿಯನ್ನು ಕಳುಹಿಸಿ ಕೊಟ್ಟನು. ಮೆಗಸ್ತನೀಸ್ ‘ಇಂಡಿಕಾ’ ಎಂಬ ಕೃತಿಯಲ್ಲಿ ಇಲ್ಲಿನ ತನ್ನ ಅನುಭವಗಳನ್ನು ದಾಖಲಿಸಿದ್ದಾನೆ ವಿಷ್ಣುಗುಪ್ತ ಅಥವಾ ಕೌಟಿಲ್ಯನು ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿಯಾಗಿದ್ದನು. ಈತನು ಬರೆದ ‘ಅರ್ಥಶಾಸ್ತ್ರ’ ಕೃತಿಯು ರಾಜತಂತ್ರಗಳಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ತಿಳಿಸುತ್ತದೆ. ಲೋಕ ಪ್ರಸಿದ್ಧವಾದ ಈ ಕೃತಿಯು ಮೈಸೂರಿನ ಒರಿಯಂಟಲ್ ಗ್ರಂಥಾಲಯದ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಮೊಟ್ಟಮೊದಲು ದೊರಕಿತು. ಇದನ್ನು ಆರ್. ಶಾಮಶಾಸ್ತ್ರಿ ಎಂಬ ವಿದ್ವಾಂಸರು ಶೋಧಿಸಿದರು
ಸಾಮ್ರಾಟ ಅಶೋಕ: ಬಿಂದುಸಾರನ ನಂತರ ಅವನ ಮಗ ಅಶೋಕನು ಅಧಿಕಾರಕ್ಕೆ ಬಂದನು. ಜಗತ್ತಿನ ಇತಿಹಾಸದಲ್ಲಿ ಅವನಿಗೆ ವಿಶಿಷ್ಟ ಸ್ಥಾನವಿದೆ. “ಪ್ರಜೆಗಳೆಲ್ಲರು ನನ್ನ ಮಕ್ಕಳಿದ್ದಂತೆ” ಎನ್ನವ ಮೂಲಕ ಪ್ರಜಾಪಾಲನೆಗೆ ಆಧ್ಯತೆ ನೀಡಿದ ಮೊದಲ ದೊರೆ. ಕರ್ನಾಟಕದ ಒಂಭತ್ತು ಸ್ಥಳಗಳಲ್ಲಿ ಅಶೋಕನ 17 ಶಾಸನಗಳು ದೊರೆತಿವೆ. ಇವುಗಳಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ಶಾಸನ ಪ್ರಮುಖವಾದುದು. ಏಕೆಂದರೆ ಈ ಶಾಸನದಲ್ಲಿ ಮೊಟ್ಟಮೊದಲ ಬಾರಿಗೆ ಅಶೋಕನ ಹೆಸರು ಕಂಡುಬಂದಿತು. ಆ ವರೆಗಿನ ಶಾಸನಗಳಲ್ಲಿ ‘ದೇವನಾಂಪ್ರಿಯ, ಪ್ರಿಯದರ್ಶಿ’ ಎಂದಷ್ಟೇ ಇದ್ದಿತು. ಮಸ್ಕಿಯ ಶಾಸನದಲ್ಲಿ ‘ದೇವನಾಂಪ್ರಿಯ, ಪ್ರಿಯದರ್ಶಿ ಅಶೋಕ’ ಎಂದು ಬರೆಯಲಾಗಿತ್ತು. ಇಂದಿಗೆ 180 ವರ್ಷಗಳ ಹಿಂದೆ ಜೇಮ್ಸ್ ಪ್ರಿನ್ಸೆಪ್ ಎಂಬ ಬ್ರಿಟಿಷ್ ಅಧಿಕಾರಿಯು ಮೊಟ್ಟಮೊದಲ ಬಾರಿಗೆ ಅಶೋಕನ ಶಾಸನಗಳನ್ನು ಓದಿದರು. ಆ ಮೊದಲು ಯಾರೂ ಓದಲಾಗಿರಲಿಲ್ಲ. ಆರು ಶತಮಾನಗಳಿಗೂ ಹಿಂದೆ ದೆಹಲಿಯ ಸುಲ್ತಾನನಾದ ಫಿರೋಜ್ ಷಾ ತುಘಲಕ್ನು ಅಶೋಕನ ಶಾಸನಗಳನ್ನು ಓದಿಸುವ ಪ್ರಯತ್ನ ನಡೆಸಿ ವಿಫಲನಾದನುಅಶೋಕನು ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ನಡೆಸಿದನು. ಬೌದ್ಧ ಸ್ತೂಪಗಳನ್ನು ನಿರ್ಮಿಸಿದನು. ಬುದ್ಧನ ಸಂದೇಶಗಳನ್ನು ಹರಡಲು ರಾಯಭಾರಿಗಳನ್ನು ದೇಶವಿದೇಶಗಳಿಗೆ ಕಳುಹಿಸಿದನು. ರಾಜನಿಗೆ ಸಲಹೆ ನೀಡಲು ಮಂತ್ರಿ ಮಂಡಲವೊಂದಿತ್ತು. ಆಡಳಿತದ ವಿಭಾಗಗಳನ್ನು ನೋಡಿಕೊಳ್ಳಲು ಉನ್ನತ ಅಧಿಕಾರಿಗಳಿದ್ದರು. ಅವರಲ್ಲಿ ‘ಧರ್ಮಮಹಾಮಾತ್ರರು’ ಎಂಬ ವಿಶೇಷ ಅಧಿಕಾರಿಗಳು ಜನರಲ್ಲಿ ಉತ್ತಮ ನೀತಿ ನಡತೆಯನ್ನು ಪ್ರಚಾರ ಮಾಡುತ್ತಿದ್ದರು
ಕುಶಾನರು ಕುಶಾನರಲ್ಲಿ ಕನಿಷ್ಕ ಪ್ರಸಿದ್ಧನಾದ ಅರಸಕಾಶ್ಮೀರದಲ್ಲಿ ನಾಲ್ಕನೆಯ ಬೌದ್ಧ ಮಹಾಸಭೆಯನ್ನು ನಡೆಸಿದನು. ಕನಿಷ್ಕನು ತಾನು ಅಧಿಕಾರಕ್ಕೆ ಬಂದ ನೆನಪಿಗಾಗಿ ಶಕ (ಶಾಲಿವಾಹನ ಶಕ) ವರ್ಷವನ್ನು ಪ್ರಾರಂಭ ಮಾಡಿದನು. ಇದೇ ಇಂದು ಭಾರತ ಸರ್ಕಾರದ ಅಧಿಕೃತ ಕ್ಯಾಲೆಂಡರ್ ವರ್ಷವಾಗಿದೆ.. ಕನಿಷ್ಕನು ಕಲಾಪೋಷಕನಾಗಿದ್ದನು. ಅವನು ಬೇರೆ ಬೇರೆ ದೇಶಗಳ ಕಲಾಕಾರರನ್ನು ತನ್ನಲ್ಲಿಗೆ ಕರೆಸಿಕೊಂಡನು. ಇದರ ಪರಿಣಾಮವಾಗಿ ವಿವಿಧ ಕಲಾ ಶೈಲಿಗಳು ಬೆರೆತು ಗಂಧಾರ ಮತ್ತು ಮಥುರಾ ಎಂಬ ಹೊಸ ಶೈಲಿಗಳು ಹುಟ್ಟಿಕೊಂಡವು. ಕುಶಾನರ ಅನೇಕ ನಾಣ್ಯಗಳು ದೊರೆತಿವೆ. ಇವರೇ ಭಾರತದಲ್ಲಿ ಮೊಟ್ಟಮೊದಲು ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದರುಕನಿಷ್ಕನು ವಿದ್ವಾಂಸರು ಮತ್ತು ಸಾಹಿತಿಗಳಿಗೆ ಆಶ್ರಯ ನೀಡಿದ್ದನು. ಅವರಲ್ಲಿ ಅಶ್ವಘೋಷ ಪ್ರಮುಖನು. ಇವನು ‘ಬುದ್ಧ ಚರಿತ’ ಎಂಬ ಕೃತಿಯನ್ನು ಸಂಸ್ಕøತದಲ್ಲಿ ರಚಿಸಿದ್ದಾ£ಅಶೋಕನು ಬೌದ್ಧ ರಾಯಭಾರಿಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಮಾತ್ರವಲ್ಲದೆ ಬರ್ಮಾ (ಮಯನ್ಮಾರ್), ಶ್ರೀಲಂಕಾ, ಈಜಿಪ್ಟ್, ಪಶ್ಚಿಮ ಏಷ್ಯ ಹಾಗೂ ಪೂರ್ವ ಯೂರೋಪ್ ದೇಶಗಳಿಗೂ ಕಳುಹಿಸಿದನು. ಅಶೋಕನ ಹಿರಿಯ ಮಗ ಮಹೇಂದ್ರ ಮತ್ತು ಹಿರಿ ಪುತ್ರಿ ಸಂಘಮಿತ್ರಾ ಶ್ರೀಲಂಕೆಗೆ ತೆರಳಿದರು. ಕರ್ನಾಟಕದ ಮೈಸೂರಿಗೆ (ಆಗಿನ ಮಹಿಷಮಂಡಲ)
ಮಹಾದೇವ ಮತ್ತು ಉತ್ತರ ಕನ್ನಡ ಜಿಲ್ಲೆಯ ಬನವಾಸಿಗೆ ರಕ್ಷಿತ ಎಂಬ ಧರ್ಮಪ್ರ್ರಚಾರಕರು ಬಂದಿದ್ದರು ಅಶೋಕನ ಕಾಲದಲ್ಲಿ ವಾಸ್ತುಶಿಲ್ಪ ನಿರ್ಮಾಣಕ್ಕಾಗಿ ಕಟ್ಟಿಗೆ ಮತ್ತು ಇಟ್ಟಿಗೆಗಳ ಬದಲು ಕಲ್ಲುಗಳ ಬಳಕೆ ಆರಂಭವಾಯಿತು. ಇದರಿಂದಾಗಿಯೇ ಮೌರ್ಯರ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳು ಇಂದಿಗೂ ಉಳಿದು ಬಂದಿª ಗುಪ್ತರು ಮೌರ್ಯರ ನಂತರ ಸಾಮ್ರಾಜ್ಯ ಕಟ್ಟಿದವರು ಗುಪ್ತರು. ಗುಪ್ತರು ಭಾರತದ ಮಹತ್ವದ ರಾಜಮನೆತನವಾಗಿದೆ. ಗುಪ್ತರ ರಾಜಧಾನಿ ಪಾಟಲಿಪುತ್ರವಾಗಿದೆ. ಈ ವಂಶದಲ್ಲಿ ಸಮುದ್ರಗುಪ್ತ ಮತ್ತು ಎರಡನೇ ಚಂದ್ರಗುಪ್ತ ಪ್ರಸಿದ್ಧರಾದ ದೊರೆಗಳು.
ಸಮುದ್ರಗುಪ್ತ
ಸಮುದ್ರಗುಪ್ತನು ಮಹಾಪರಾಕ್ರಮಿ ಅವನ ದಿಗ್ವಿಜಯವನ್ನು ಕುರಿತು ಅಲಹಾಬಾದಿನ ಸ್ತಂಭದ ಮೇಲಿನ ಶಾಸನವೊಂದು ವಿವರ ನೀಡುತ್ತದೆ. ಈ ಶಾಸನವನ್ನು ಸಮುದ್ರಗುಪ್ತನ ಆಸ್ಥಾನ ಕವಿ ಹರಿಸೇಣ ರಚಿಸಿದನು. ಸಮುದ್ರಗುಪ್ತನು ವಿದ್ಯಾಪೋಷಕನಾಗಿದ್ದನು. ಸ್ವತಃ ಕವಿ ಹಾಗೂ ಸಂಗೀತನಾಗಿದ್ದ ಆತನು ‘ಕವಿರಾಜ’ ಎಂಬ ಬಿರುದನ್ನು ಧರಿಸಿದ್ದನು. ಅವನು ವೀಣೆ ನುಡಿಸುವ ಚಿತ್ರವಿರುವ ನಾಣ್ಯಗಳು ದೊರೆತಿವೆ. ವಸುಬಂಧು ಎಂಬ ಹಿರಿಯ ಬೌದ್ಧ ವಿದ್ವಾಂಸ ಅವನ ಮಂತ್ರಿಯಾಗಿದ್ದನು.
ಎರಡನೆಯ ಚಂದ್ರಗುಪ್ತ: ಸಮುದ್ರಗುಪ್ತನ ಪುತ್ರ ಹಾಗೂ ಉತ್ತರಾಧಿಕಾರಿಯಾದ ಎರಡನೆಯ ಚಂದ್ರಗುಪ್ತನು ಯುದ್ಧ ಕಲೆಯಲ್ಲಿ ನಿಪುಣನಾಗಿದ್ದನು. ಅವನಿಗೆ ‘ವಿಕ್ರಮಾದಿತ್ಯ’ ಎಂಬ ಬಿರುದಿತ್ತು. ಫಾಹಿಯಾನ : ಫಾಹಿಯಾನ್ ಚೀನಾ ದೇಶದ ಬೌದ್ಧ ಭಿಕ್ಷು. ಬೌದ್ಧಧರ್ಮದ ತವರನ್ನು ನೋಡಬೇಕೆಂಬ ಹಂಬಲದಿಂದ ಪ್ರಯಾಸಪಟ್ಟು ಭಾರತಕ್ಕೆ ಬಂದನು. ಅದು ಎರಡನೇ ಚಂದ್ರಗುಪ್ತನ ಆಳ್ವಿಕೆ ಕಾಲವಾಗಿತ್ತು. ಭಾರತದ ಅನುಭವಗಳನ್ನು ಫಾಹಿಯಾನ್ ತನ್ನ ಕೃತಿ ‘ಘೋ-ಕೋ-ಕಿ’ ಯಲ್ಲಿ ದಾಖಲಿಸಿದ್ದಾನೆ. ಎರಡನೇ ಚಂದ್ರಗುಪ್ತನ ಆಸ್ಥಾನವನ್ನು ಅಲಂಕರಿಸಿದ್ದ ಒಂಬತ್ತು ಮಂದಿ ‘ನವರತ್ನ’ರಲ್ಲಿ ಈತನು ಒಬ್ಬನಾಗಿದ್ದನು. ಕಾಳಿದಾಸನು ನಾಲ್ಕು ಕಾವ್ಯಗಳು ಮತ್ತು ಮೂರು ನಾಟಕಗಳನ್ನು ರಚಿಸಿದ್ದಾನೆ. ‘ಅಭಿಜ್ಞಾನ ಶಾಕುಂತಲಂ’ ಆತನ ಶ್ರೇಷ್ಠ ನಾಟಕ. ಅವನನ್ನು ‘ಕವಿಕುಲ ಗುರು’ ಎಂಬುವುದಾಗಿ ಪ್ರಶಂಸೆ ಮಾಡಲಾಗಿದೆ. ಮೃಚ್ಛಕಟಿಕ’ ಬರೆದ ಶೂದ್ರಕ ಮತ್ತು ‘ಮುದ್ರಾರಾಕ್ಷಸ’ ಬರೆದ ವಿಶಾಖದತ್ತ ಆ ಕಾಲದ ಇತರ ಪ್ರಸಿದ್ಧ ನಾಟಕಕಾರರು. ವಿಷ್ಣುಶರ್ಮನ ‘ಪಂಚತಂತ್ರ’ ಎಂಬ ಕಥಾಸಂಗ್ರಹವು ಇದೇ ಕಾಲಕ್ಕೆ ಸೇರಿದೆ. ಅಮರಸಿಂಹನ ‘ಅಮರಕೋಶ’ ಎಂಬ ಶಬ್ದಕೋಶವು ಒಂದು ಅಪರೂಪದ ಕೃತಿ. ನಮ್ಮ ದೇಶದಲ್ಲಿ ದೇವಾಲಯ ನಿರ್ಮಾಣ ವಾಸ್ತು ಆರಂಭಗೊಂಡದ್ದು ಗುಪ್ತರ ಕಾಲದಲ್ಲಿ. ಮಧ್ಯಪ್ರದೇಶದ ಸಾಂಚಿಯ ದೇವಾಲಯವು ಭಾರತದ ಪ್ರಾಚೀನ ದೇವಾಲಯವಾಗಿದೆ. ಪಾಟಲೀಪುತ್ರದ ಆರ್ಯಭಟನು ಗುಪ್ತ ಯುಗದ ಶ್ರೇಷ್ಠ ಗಣಿತ ಮತ್ತು ಖಗೋಳ ಶಾಸ್ತ್ರಜ್ಞ. ಈತನ ಗ್ರಂಥ ‘ಆರ್ಯಭಟೀಯ’. ಗುಪ್ತರ ಕಾಲದಲ್ಲಿ ಲೋಹ ವಿಜ್ಞಾನವು ಗಣನೀಯ ಮುನ್ನಡೆ ಸಾಧಿಸಿತ್ತು. ದೆಹಲಿಯ ಕುತುಬ್ ಮಿನಾರಿನ ಸಮೀಪವಿರುವ ಮೆಹರೌಲಿ ಕಬ್ಬಿಣದ ಕಂಬವು ಇದಕ್ಕೊಂದು ಉದಾಹರಣೆ.
ಈ ಕಂಬವು 1500 ವರ್ಷಗಳಷ್ಟು ಹಳೆಯದಾದರೂ ಅದಕ್ಕೆ ತುಕ್ಕು ಹಿಡಿದಿಲ್ಲ ಮತ್ತು ಸ್ವಲ್ಪವೂ ಸವೆದಿಲ್ಲ. ಆಯುರ್ವೇದ : ಗುಪ್ತರ ಕಾಲದ ವಾಗ್ಭಟನು ‘ಚರಕ ಸಂಹಿತೆ’ಯ ಸಾರವನ್ನು ಸಿದ್ಧಪಡಿಸಿದನುಪಾದರಸವನ್ನು ಔಷಧಿಯಾಗಿ ಮೊದಲ ಬಾರಿಗೆ ಬಳಕೆಗೆ ತಂದ ಕೀರ್ತಿ ಭಾರತೀಯ ವೈದ್ಯರಿಗೆ ಸಲ್ಲುತ್ತದೆ ಕಾಳಿದಾಸನ ನಾಟಕಗಳು - ಅಭಿಜ್ಞಾನ ಶಾಕುಂತಲಾ, ಮಾಲವಿಕಾಗ್ನಿಮಿತ್ರ ಮತ್ತು ವಿಕ್ರಮೋರ್ವಶೀಯ; ಕಾವ್ಯಗಳು - ರಘುವಂಶ, ಕುಮಾರಸಂಭವ, ಋತುಸಂಹಾರ ಮತ್ತು ಮೇಘದೂತ.
72.ವರ್ಧನರು: ಥಾಣೇಶ್ವರದ ಪುಷ್ಯಭೂತಿ ಮನೆತನವೂ ಒಂದು. ಇದು ವರ್ಧನ ಮನೆತನ ಎಂದೇ ಪ್ರಸಿದ್ಧವಾಗಿದೆ. ಹರ್ಷವರ್ಧನನು ಈ ಮನೆತನದ ಜನಪ್ರಿಯ ದೊರೆಯಾಗಿದ್ದನು. ಹರ್ಷವರ್ಧನ :ಹರ್ಷವರ್ಧನನ ತಂದೆ ಪ್ರಭಾಕರವರ್ಧನನುಮಡಿದ ನಂತರ ಅಣ್ಣ ರಾಜ್ಯವರ್ಧನನು ಅಧಿಕಾರಕ್ಕೆ ಬಂದನು. ತಂಗಿ ರಾಜ್ಯಶ್ರೀಯನ್ನು ಮೌಖರಿ ಮನೆತನದ ಗ್ರಹವರ್ಮನಿಗೆ ವಿವಾಹ ಮಾಡಿಕೊಡಲಾಗಿತ್ತು. ಮಾಳ್ವದ ದುಷ್ಟರಾಜನೊಬ್ಬ ಗ್ರಹವರ್ಮನನ್ನು ಕೊಂದು ರಾಜ್ಯಶ್ರೀಯನ್ನು ಕನೌಜಿನಲ್ಲಿ ಬಂಧಿಸಿಟ್ಟನು. ಆಗ ರಾಜ್ಯವರ್ಧನನು ದಂಡೆತ್ತಿ ಹೋಗಿ ಮಾಳ್ವದ ಸೇನೆಯನ್ನು ಸೋಲಿಸಿದನಾದರೂ, ಗೌಡದೇಶದ ಶಶಾಂಕನಿಂದ ಕೊಲ್ಲಲ್ಪಟ್ಟನು. ಚೀನಾದ ಪ್ರವಾಸಿ ಹ್ಯೂಯನ್ತ್ಸಾಂಗನು ಹರ್ಷವರ್ಧನನ ಆಪ್ತನಾಗಿದ್ದನು. ಸ್ವತಃ ಹರ್ಷವರ್ಧನನು ಸಂಸ್ಕøತದಲ್ಲಿ ಪ್ರಿಯದರ್ಶಿಕಾ, ರತ್ನಾವಳಿ ಮತ್ತು ನಾಗಾನಂದ ಎಂಬ ಮೂರು ನಾಟಕಗಳನ್ನು ರಚಿಸಿದ್ದಾನೆ. ಬಾಣಭಟ್ಟ ಮೊದಲಾದ ಕವಿಗಳಿಗೂ ಆಶ್ರಯ ನೀಡಿದ್ದನು. ಬಾಣಭಟ್ಟನು ಹರ್ಷವರ್ಧನನನ್ನು ಕುರಿತು ‘ಹರ್ಷಚರಿತ’ ಎಂಬ ಕೃತಿಯನ್ನು ಬರೆದನು. ಶಿಕ್ಷಣ ಪ್ರೇಮಿಯೂ ಆಗಿದ್ದ ಹರ್ಷವರ್ಧನನು ಪ್ರಾಚೀನ ನಲಂದ ವಿಶ್ವವಿದ್ಯಾನಿಲಯಕ್ಕೆ ಉದಾರವಾಗಿ ದತ್ತಿಗಳನ್ನು ನೀಡಿದ್ದನು. ಕನೌಜ್ ಮತ್ತು ಪ್ರಯಾಗಗಳಲ್ಲಿ ಧರ್ಮಸಮ್ಮೇಳನಗಳನ್ನು ಆಯೋಜಿಸಿದರು. ಹ್ಯೂಯನ್ ತ್ಸಾಂಗ್ (ಊiueಟಿ ಖಿsಚಿಟಿg) ಚೀನಾದ ಪ್ರಸಿದ್ಧ ಪ್ರವಾಸಿ. ಈತನು ಸುಮಾರು 1400 ವರ್ಷಗಳ ಹಿಂದೆ ಭಾರತಕ್ಕೆ ಬಂದನು. ಹದಿನೈದು ವರ್ಷಗಳ ಕಾಲ ಭಾರತದಲ್ಲಿ ಸಂಚರಿಸಿ ಬೌದ್ಧ ಸಾಹಿತ್ಯ ಅಧ್ಯಯನ ನಡೆಸಿದನು. ನಳಂದ ವಿಶ್ವವಿದ್ಯಾಲಯದಲ್ಲಿಯೂ ಕಲಿತನು. ಹರ್ಷವರ್ಧನನ ಆಸ್ಥಾನದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದನು. ಭಾರತದ ಅನುಭವಗಳನ್ನು ‘ಸಿ-ಯು-ಕಿ’ (ಪಶ್ಚಿಮ ರಾಜ್ಯದ ದಾಖಲೆ ಖeಛಿoಡಿಜ oಜಿ ತಿesಣeಡಿಟಿ ಞiಟಿgಜom) ಎಂಬ ಪ್ರವಾಸಿ ಕಥನದಲ್ಲಿ ದಾಖಲಿಸಿದ್ದಾನೆನಳಂದ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕಾಗಲಿ, ಊಟ ವಸತಿಗಳಿಗಾಗಲೀ ಶುಲ್ಕವಿರಲಿಲ್ಲ. ಈ ಎಲ್ಲ ಖರ್ಚನ್ನು ನಿರ್ವಹಿಸಲು ನೂರು ಗ್ರಾಮಗಳ ಆದಾಯವು ಮೀಸಲಾಗಿದ್ದಿತು. ಸಾಮ್ರಾಟ ಹರ್ಷವರ್ಧನ ಈ ಮಹಾವಿದ್ಯಾಲಯದ ಪೋಷಕರಲ್ಲೊಬ್ಬ. ವಿದ್ಯಾರ್ಥಿ ಜೀವನ ಕಟ್ಟುನಿಟ್ಟಾಗಿತ್ತು.
ಶ್ರೇಷ್ಠಪಂಡಿತರು ಅಧ್ಯಾಪಕ ವರ್ಗದಲ್ಲಿದ್ದರು
ಪೌರತ್ವ ಒಂದು ದೇಶದಪೌರತ್ವ ಪÀಡೆಯಲು ಜನನವು ಮುಖ್ಯ ಆಧಾರವಾಗಿದೆ. ಉದಾಹರಣೆಗೆ- ಜನವರಿ 26, 1950 ರಂದು ಅಥವಾ ನಂತರ ಭಾರತದಲ್ಲಿ ಜನಿಸಿದವರು ಭಾರತದ ಪೌರರಾಗಿರುತ್ತಾರೆ. ಏಕೆಂದರೆ ಈ ದಿನದಂದು ಸ್ವತಂತ್ರ ಭಾರತವು ತನ್ನದೇ ಆದ ಸಂವಿಧಾನವನ್ನು ಜಾರಿಗೊಳಿಸಿತು. ಭಾರತದಲ್ಲಿ ಕನಿಷ್ಠ 5 ವರ್ಷಗಳ ಕಾಲ ವಾಸವಾಗಿದ್ದರೆ ಅಂತಹವರು ನೊಂದಾಯಿಸಿಕೊಳ್ಳುವ ಮೂಲಕ ಪೌರತ್ವ ಪಡೆಯಬಹುದು.
ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ ‘ಜನಗಣಮನ’ ಭಾರತದ ರಾಷ್ಟ್ರಗೀತೆ. ಇದನ್ನು ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದರು. ಈ ದೀರ್ಘಗೀತೆಯ ಐದು ವೃತ್ತಗಳಲ್ಲಿ ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿಧಾನ ಸಭೆಯು 24 ಜನವರಿ 1950ರಂದು ಅಂಗೀಕರಿಸಿತು. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡುಗಳು. ಧ್ವಜವು ಆಯತಾಕಾರವಾಗಿದೆ. ಅದರ ಉದ್ದಗಲಗಳ ಅನುಪಾತ 3:2 ಇರುತ್ತದೆ.
ನಮ್ಮ ರಾಷ್ಟ್ರಲಾಂಛನವನ್ನೊಮ್ಮೆ ಗಮನಿಸಿ. ಇದು ಸಾರನಾಥದÀ ಅಶೋಕನ ಶಿಲಾಸ್ತಂಭದ ಬೋದಿಗೆಯ (ಮೇಲುಭಾಗದ) ರೂಪಾಂತರವಾಗಿದೆ. ಬೋದಿಗೆಯಲ್ಲಿ ಸಿಂಹಗಳಿರುವುದರಿಂದ ಇದನ್ನು `ಸಿಂಹ ಬೋದಿಗೆ’ ಎನ್ನುವರು. ಸಾರನಾಥದ ಸಿಂಹ ಬೋದಿಗೆಯು ನಮ್ಮ ರಾಷ್ಟ್ರಲಾಂಛನ ಅಥವಾ ಮುದ್ರೆ ಮೂಲ ಶಿಲ್ಪಕೃತಿಯಲ್ಲಿ ನಾಲ್ಕು ಸಿಂಹಗಳು ನಾಲ್ಕು ದಿಕ್ಕುಗಳಿಗೆ ಮುಖಮಾಡಿ, ಒಂದಕ್ಕೊಂದು ಬೆನ್ನು ಮಾಡಿ, ಪೀಠವೊಂದರ ಮೇಲೆ ನಿಂತಿವೆ. ಪೀಠವು ಗುಂಡಾಗಿದೆ. ಅದರ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಚಕ್ರವಿದೆ. ಆ ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹಗಳ ಚಿತ್ರಣವಿದೆ. ಪೀಠದಲ್ಲಿರುವ ಚಕ್ರವನ್ನು `ಧರ್ಮಚಕ್ರ’ವೆಂದೂ ಕರೆಯುತ್ತಾರೆ. ಭಾರತ ಸರ್ಕಾರವು ನಮ್ಮ ರಾಷ್ಟ್ರಲಾಂಛನವನ್ನು 26 ಜನವರಿ 1950ರಂದು ಅಂಗೀಕರಿಸಿತು. ಚಿತ್ರದಲ್ಲಿ ಮೂರೇ ಸಿಂಹಗಳು ಮಾತ್ರ ಕಾಣಿಸುತ್ತವೆ. ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ ``ಸತ್ಯಮೇವ ಜಯತೇ’’ (ಸತ್ಯವೊಂದೇ ಗೆಲ್ಲುತ್ತದೆ) ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.
ಏಷ್ಯವನ್ನು “ವೈಪರೀತ್ಯಗಳ ಖಂಡ” ಎಂದು ಕರೆಯುತ್ತಾರೆ. ಏಷ್ಯ ಖಂಡವು 10-160 ತ್ತರದಿಂದ 770-410 ಉತ್ತರ ಅಕ್ಷಾಂಶ ಹಾಗೂ 260-040 ಪೂರ್ವದಿಂದ 1690-400 ಪಶ್ಚಿಮ ರೇಖಾಂಶಗಳ ನಡುವೆ ವಿಸ್ತರಿಸಿದೆ. ಮಲೇಷ್ಯದಿಂದ ಸ್ವಲ್ಪ ದಕ್ಷಿಣದಲ್ಲಿ ಭೂಮಧ್ಯರೇಖೆ ಹಾಗೂ ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತ ಮತ್ತು ಅರೇಬಿಯಗಳ ಮೂಲಕ ಹಾಯ್ದು ಹೋಗಿª ಏಷ್ಯಖಂಡದ ಒಟ್ಟು ಭೌಗೋಳಿಕ ವಿಸ್ತೀರ್ಣ ಸುಮಾರು 44 ಮಿಲಿಯನ್ ಚ.ಕಿ.ಮೀ.ಗಳು. ಇದು ಪ್ರಪಂಚದ ಮೇಲ್ಮೈ ವಿಸ್ತೀರ್ಣದಲ್ಲಿ ಶೇ.33 ಭಾಗದಷ್ಟಾಗಿದೆ. ಜನವರಿಯಲ್ಲಿ ಸೈಬೀರಿಯಾದ ವರ್ಕೊಯಾನಸ್ಕ್ - 510 ಸೆ ಮತ್ತು ಓಮಿಯಾಕ್ನಿ - 710 ಸೆ. ಕನಿಷ್ಠ ಉಷ್ಣಾಂಶವನ್ನು ದಾಖಲಿಸುತ್ತವೆ. ಸೌದಿ ಅರೇಬಿಯ ಪ್ರಪಂಚದಲ್ಲೇ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ದೇಶ. ಏಷ್ಯ ಖಂಡದ ಅತ್ಯಂತ ಎತ್ತರವಾದ ಬಿಂದು ಮೌಂಟ್ ಎವರೆಸ್ಟ್ (8848 ಮೀ.)ಏಷ್ಯದ ಅತ್ಯಂತ ಕೆಳಮಟ್ಟದ ಬಿಂದು ಮೃತ ಸಮುದ್ರ. (ಸ ಮುದ್ರಮಟ್ಟಕ್ಕಿಂತ 305 ಮೀ. ಕೆಳಗೆ) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಕಾರಾಕೊರಂ ಪರ್ವತ ಸರಣಿಗಳಲ್ಲಿವೆ. ಟಿಬೆಟ್ ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ. ಇದನ್ನು ಪ್ರಪಂಚದಮೇಲ್ಛಾವಣೆ ಎಂದು ಕರೆಯಲಾಗಿದೆ. ಕ್ಯಾಸ್ಪಿಯನ್ ಸಮುದ್ರವು ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿಯಾಗಿದೆ. ದಕ್ಷಿಣ ಸೈಬೀರಿಯಾದಲ್ಲಿರುವ ಬೈಕಲ್ ಸರೋವರವು ಪ್ರಪಂಚದಲ್ಲೇ ಆಳವುಳ್ಳದ್ದು. ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯದ ಚಿಕ್ಕದೇಶ ಮಾಲ್ಡೀವ್ಸ್.
ಕರ್ನಾಟಕ ಸರ್ಕಾರವು 2000ದಲ್ಲಿ ರಾಜ್ಯದಲ್ಲಿ ಹಿಂದುಳಿದಿರುವಿಕೆಯನ್ನು ಕಂಡು ಹಿಡಿಯಲು ಡಾ. ಡಿ. ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮಾನತೆ ಅಧ್ಯಯನ ಉನ್ನತಾಧಿಕಾರ ಸಮಿತಿಯನ್ನು ನೇಮಿಸಿತು. ಅದರ ಪ್ರಕಾರ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವಿಭಾಗವೆಂದರೆ ಕಲಬುರಗಿ ವಿಭಾಗ. ಈ ವಿಭಾಗದ ಜಿಲ್ಲೆಗಳಿಗೆ ವಿಶೇಷ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ. ರಜಾಕಾರರೆಂಬ ನಿಜಾಮ್ ಖಾಸಗಿ ಸೈನ್ಯದ ವಿರುದ್ಧ ಜನರು ತೀವ್ರ ಹೋರಾಟ ನಡೆಸಿದರು. ಕೇಂದ್ರ ಸರ್ಕಾರವು ನೇರ ಕ್ರಮವನ್ನು ತೆಗೆದುಕೊಂಡು ನಿಜಾಮ ಸಂಸ್ಥಾನವನ್ನು ಭಾರತ ಗಣರಾಜ್ಯದಲ್ಲಿ ಸೆಪ್ಟೆಂಬರ್ 17, 1948ರಲ್ಲಿ ವಿಲೀನಗೊಳಿಸಿತು. ಆಗ ಸರ್ದಾರ್ ವಲ್ಲಭಬಾಯ್ ಪಟೇಲ್ ಗೃಹ ಸಚಿವರಾಗಿದ್ದರು. ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದರು. ಕಾರಂಜ ಅಣೆಕಟ್ಟೆಯು ಬೀದರ್ ಜಿಲ್ಲೆಯ ವರದಾನವಾಗಿದೆ. ಶ್ರೀವ್ಯಾಸರಾಯರ ನೇತೃತ್ವದಲ್ಲಿ ದಾಸಕೂಟವನ್ನು ರೂಪಿಸಲಾಯಿತು. ಕಲಬುರಗಿ ನಗರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವಿದೆ ಹಾಗೂ ಇಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವಿದೆ. ರಾಯಚೂರು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಬಳ್ಳಾರಿಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವಿzಈ ಜಿಲ್ಲೆಯ ಹಂಪಿ ಪ್ರದೇಶದಲ್ಲಿ ಕನ್ನಡ ವಿಶ್ವವಿದ್ಯಾಲಯ ಇದೆ. ಬೀದರಿನಲ್ಲಿ ಪಶು ಸಂಗೋಪನಾ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯವಿದೆ. ಕಲಬುರಗಿಯಲ್ಲಿ ಪ್ರಸಿದ್ಧ ಬುದ್ಧ ವಿಹಾರವಿದೆ. ಕಲ್ಯಾಣ ಚಾಲುಕ್ಯ ಅರಸರು ನಿರ್ಮಿಸಿರುವ ಬೃಹತ್ ಮಹಾದೇವ ದೇವಾಲಯ ಇಟಗಿಯಲ್ಲಿದೆ. ಇದನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗುತ್ತದೆ.
ಮಲಪ್ರಭಾ ನೀರಾವರಿ ಯೋಜನೆ (ನವಿಲತೀರ್ಥ) ಕೃಷ್ಣಾ ಮೇಲ್ದಂಡೆ ಯೋಜನೆ (ಆಲಮಟ್ಟಿ) ಹುಬ್ಬಳ್ಳಿಯನ್ನು ಕರ್ನಾಟಕದ ವಾಣಿಜ್ಯ ಕೇಂದ್ರ ಎಂದು ಕರೆಯಲಾಗಿದೆಕರ್ನಾಟಕದ ಸಾಂಸ್ಕøತಿಕ ಕೇಂದ್ರ ಎಂಬ ಹೆಸರು ಧಾರವಾಡಕ್ಕಿದೆ. ಆದಿಲ್ ಷಾಹಿ ಅರಸರು 1656ರಲ್ಲಿ ಗೋಳಗುಮ್ಮಟವನ್ನು ಕಟ್ಟಿಸಿದರು`ಕಿತಾಬ್ - ಇ - ನವರಸ್'ನಲ್ಲಿ ಸರಸ್ವತಿ, ಗಣಪತಿ ಸ್ತೋತ್ರ ಮಾಡಿದ್ದಾ£ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ. ಇಲ್ಲಿ ಮಲಪ್ರಭ ಮತ್ತು ಕೃಷ್ಣ ನದಿ ಕೂಡುತ್ತವೆ. ಅದಕ್ಕಾಗಿ ಇದು ಕೂಡಲಸಂಗಮ. ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ ಬಾದಾಮಿ ಇಲ್ಲಿದೆ. ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳನ್ನು ವಾಸ್ತುಶಿಲ್ಪದ ಪ್ರಯೋಗಶಾಲೆ ಎಂದು ಕರೆಯಲಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್ ಕಟ್ಟುವಂತೆ ಜನರು ಸರ್ಕಾರದ ಮೇಲೆ ಒತ್ತಡ ಹಾಕುತ್ತಾ ಬಂದರು. ಚಿಕ್ಕಪಡಸಲಗಿ ಎಂಬಲ್ಲಿ ಬ್ಯಾರೇಜ್ ನಿರ್ಮಿಸಿದರು. ಇದು ದೇಶದಲ್ಲಿ ಪ್ರಥಮ ಖಾಸಗಿ ಬ್ಯಾರೇಜಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಸರಿನಲ್ಲಿರುವ ಆಲಮಟ್ಟಿ ಅಣೆಕಟ್ಟು ಪ್ರಸಿದ್ಧವಾಗಿದೆ.
ಭಾರತ ಸರ್ಕಾರವು ಇಲ್ಲಿ ಬೃಹತ್ ನೌಕಾನೆಲೆ ‘’ಸೀಬರ್ಡ್’’ ಸ್ಥಾಪಿಸಿದೆ.
ಶಾತವಾಹನರು ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ರಾಜಮನೆತನ ಎಂದರೆ ಶಾತವಾಹನರು. ಶಾತವಾಹನರ ರಾಜಧಾನಿ ಮಹಾರಾಷ್ಟ್ರದ ಪೈಠಾಣ ಅಥವಾ ಪ್ರತಿಷ್ಠಾನ.
ಗೌತಮಿಪುತ್ರ ಶಾತಕರ್ಣಿ ಗೌತಮಿಪುತ್ರ ಶಾತಕರ್ಣಿಯು‘ತ್ರಿ ಸಮುದ್ರತೋಯ ಪೀತಾವಾಹನ’ (ಮೂರು ಸಮುದ್ರಗಳ ನೀರು ಕುಡಿದ ಕುದುರೆಗಳನ್ನು ವಾಹನವಾಗಿ ಉಳ್ಳವನು) ಎಂಬ ಬಿರುದನ್ನು ಹೊಂದಿದ್ದನು. ‘ಪ್ರಾಕೃತÀ’ ಭಾಷೆಯು ಶಾತವಾಹನರ ಆಡಳಿತದ ಭಾಷೆಯಾಗಿತ್ತು. ಅವರ ಶಾಸನಗಳು ಕೂಡ ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿವೆ. ಹಾಲ ಎಂಬ ರಾಜನು ‘ಗಾಥಾಸಪ್ತಸತಿ’ ಎಂಬ ಕೃತಿಯನ್ನು ಪ್ರಾಕೃತ ಭಾಷೆಯಲ್ಲಿಯೇ ರಚಿಸಿದ್ದಾನೆ. ಗುಣಾಢ್ಯನು ‘ವಡ್ಡಕಥಾ’ ಮತ್ತು ಸರ್ವವರ್ಮನು ‘ಕಾತಂತ್ರ ವ್ಯಾಕರಣ’ ಎಂಬ ಕೃತಿಗಳನ್ನು ಬರೆದರು.
ಕದಂಬರು ಕದಂಬ ಮನೆತನವು ಕನ್ನಡದ ಮೊದಲ ರಾಜಮನೆತನ. ಇವರು ಶಾತವಾಹನರ ನಂತರ ವಾಯವ್ಯ ಕರ್ನಾಟಕದಲ್ಲಿ ಏಳಿಗೆಗೆ ಬಂದರು. ಕದಂಬ ಮನೆತನದ ಸ್ಥಾಪಕ ಮಯೂರ ವರ್ಮ.ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಈ ಮನೆತನದ ಲಾಂಛನ ಸಿಂಹ.
ಮಯೂರ ವರ್ಮ ಮಯೂರವರ್ಮನು ಚಿತ್ರದುರ್ಗ ಸಮೀಪದ ಚಂದ್ರವಳ್ಳಿಯ ಸಮೀಪ ಕೆರೆಯೊಂದನ್ನು ದುರಸ್ತಿ ಮಾಡಿಸಿದನು. ಮಯೂರವರ್ಮನ ನಂತರ ಬಂದ ಕದಂಬ ಅರಸರಲ್ಲಿ ಕಾಕುಸ್ಥವರ್ಮ ಪ್ರಸಿದ್ಧನು. ಹಲ್ಮಿಡಿ ಶಾಸನವು ಇವನ ಕಾಲದ್ದಾಗಿದೆ. ಹಲ್ಮಿಡಿ ಶಾಸನವನ್ನು ಕನ್ನಡದ ಮೊದಲ ಶಾಸನವೆಂದು ಗುರುತಿಸಲಾಗಿದೆ. ಕಾಕುಸ್ಥವರ್ಮನು ಉತ್ತರ ಭಾರತದ ಪ್ರಸಿದ್ಧ ಗುಪ್ತ ಮನೆತನದ ಜೊತೆಗೆ ವಿವಾಹ ಸಂಬಂಧ ಹೊಂದಿದ್ದನೆಂದು ಹೇಳಲಾಗುತ್ತದೆ. ಕದಂಬರ ಕಾಲದಲ್ಲಿ ಅಗ್ರಹಾರ ಮತ್ತು ಘಟಿಕಾಸ್ಥಾನಗಳು ಶಿಕ್ಷಣ ಕೇಂದ್ರಗಳಾಗಿದ್ದವು. ತಾಳಗುಂದ ಇವರ ಕಾಲದ ಅಗ್ರಹಾರವಾಗಿದ್ದರೆ, ಕಾಂಚಿಯು ಪ್ರಸಿದ್ಧ ಘಟಿಕ ಸ್ಥಾನವಾಗಿತ್ತು.
ಗಂಗರು ಗಂಗರು ಕರ್ನಾಟಕದಲ್ಲಿ ದೀರ್ಘ ಕಾಲ ಆಳಿದ ರಾಜಮನೆತನವಾಗಿದೆ. ಸುಮಾರು 650 ವರ್ಷಗಳ ಕಾಲ ಆಳಿದರು. ಕೋಲಾರ (ಕುವಲಾಳಪುರ) ಮತ್ತು ತಲಕಾಡು (ತಲವನಪುರ) ಗಳು ಇವರ ರಾಜಧಾನಿಗಳಾಗಿದ್ದವು. ಕೊಂಗಣಿವರ್ಮ ಈ ಮನೆತನದ ಸ್ಥಾಪಕ. ಮಧಗಜ ಇವರ ಲಾಂಛನ. ಗಂಗರಲ್ಲಿ ದುರ್ವಿನೀತ ಪ್ರಸಿದ್ಧನಾದ ಅರಸ
ದುರ್ವಿನೀತ ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾಂಸನಾಗಿದ್ದ ದುರ್ವಿನೀತನು ಸಂಸ್ಕøತ ಕವಿ ಭಾರವಿಯ ‘ಕಿರಾತಾರ್ಜುನೀಯ’ ಕೃತಿಯ 15ನೇ ಸರ್ಗಕ್ಕೆ ಭಾಷ್ಯ(ವಿಮರ್ಶೆ) ಬರೆದನು. ಗುಣಾಢ್ಯನ ‘ವಡ್ಡಕಥಾ’ವನ್ನು ಸಂಸ್ಕøತಕ್ಕೆ ಭಾಷಾಂತರಿಸಿದನು. ಅಲ್ಲದೆ ಕನ್ನಡದ ಪ್ರಮುಖ ಗದ್ಯ ಬರಹಗಾರರಲ್ಲಿ ದುರ್ವಿನೀತನೂ ಒಬ್ಬನೆಂದು ‘ಕವಿರಾಜ ಮಾರ್ಗ’ದಲ್ಲಿ ಶ್ರೀವಿಜಯ ಹೇಳುತ್ತಾನೆ. ‘ಕವಿರಾಜ ಮಾರ್ಗ’ ಕನ್ನಡದ ಮೊತ್ತಮೊದಲ ಉಪಲಬ್ಧ ಗ್ರಂಥ. ಗಂಗ ಅರಸರು ಜೈನ ಮತ್ತು ವೈದಿಕ ಧರ್ಮಗಳೆರಡಕ್ಕೂ ಪ್ರೋತ್ಸಾಹ ನೀಡಿದರು. ಕೆಲವು ಅರಸರು ವೈಷ್ಣವ ಮತವನ್ನೂ ಅವಲಂಭಿಸಿದರು. ಗಂಗರ ರಾಜ್ಯದಲ್ಲಿ ಬೌದ್ಧ, ಕಾಳಾಮುಖ ಮತ್ತು ಲೋಕಾಯತ ಪಂಥಗಳೂ ಇದ್ದವು. ಶ್ರೀಪುರುಷನು ‘ಗಜಶಾಸ್ತ್ರ’ ಎಂಬ ಕೃತಿಯನ್ನು ಬರೆದಿದ್ದಾನೆ. ಗಂಗರ ಪ್ರಧಾನಿಯಾಗಿದ್ದ ಚಾವುಂಡರಾಯನು ‘ಚಾವುಂಡರಾಯ ಪುರಾಣ’ ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದಾನೆ. ಶ್ರವಣಬೆಳಗೊಳದಲ್ಲಿರುವ 58 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ ಇವರು ಮೂರ್ತಿಶಿಲ್ಪಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿz
1. ಕಾಳಾಮುಖ : ಇದೊಂದು ಉಗ್ರ ಶೈವ ಪಂಥ. ಈ ಪಂಥದವರು ಮುಖಕ್ಕೆ ಕಪ್ಪು ಮಸಿ ಬಳಿದುಕೊಳ್ಳುತ್ತಿದ್ದರಾದ್ದರಿಂದ ಈ ಹೆಸರು ಬಂದಿರಬಹುದು. 2. ಲೋಕಾಯತ : ಇವರನ್ನು ಚಾರ್ವಾಕರು ಎಂದೂ ಕರೆಯಲಾಗುತ್ತದೆ. ಭೌತವಾದಿಗಳಾದ ಈ ಪಂಥದವರು ವಾಸ್ತವದ ಬದುಕಿನ ಬಗೆಗೆ ನಂಬಿಕೆ ಉಳ್ಳವರಾಗಿದ್ದರು.
ಬಾದಾಮಿ ಚಾಲುಕ್ಯರು: ಬಾಗಲಕೋಟೆ ಜಿಲ್ಲೆಯ ಬಾದಾಮಿ (ವಾತಾಪಿ) ಚಾಲುಕ್ಯರ ರಾಜಧಾನಿ. ವರಾಹ ಚಾಲುಕ್ಯರ ರಾಜ ಲಾಂಛನ. ಇವರಲ್ಲಿ ಇಮ್ಮಡಿ ಪುಲಿಕೇಶಿಯು ಪ್ರಸಿದ್ಧ ದೊರೆಯಾಗಿದ್ದಾನೆ. ನರ್ಮದಾ ನದಿ ತೀರದಲ್ಲಿ ನಡೆದ ಘೋರ ಯುದ್ಧದಲ್ಲಿ ಪುಲಿಕೇಶಿಯು ಹರ್ಷವರ್ಧನನನ್ನು ಸೋಲಿಸಿದನು. ಈ ಗೆಲುವಿನ ಫಲವಾಗಿ ಪುಲಿಕೇಶಿಯು ‘ಪರಮೇಶ್ವರ’,
‘ದಕ್ಷಿಣಪಥೇಶ್ವರ’ ಎಂಬ ಬಿರುದುಗಳನ್ನು ತಳೆದನು. ಪುಲಿಕೇಶಿಯ ಕೀರ್ತಿಯು ಭಾರತದ ಹೊರಗೂ ಹಬ್ಬಿತ್ತು. ಅವನು ಪರ್ಷಿಯ ದೇಶದ ರಾಜನಾದ ಖುಸ್ರುನ ಬಳಿಗೆ ನಿಯೋಗವೊಂದನ್ನು ಕಳುಹಿಸಿದ್ದನು. ಪ್ರತಿಯಾಗಿ ಖುಸ್ರುವು ತನ್ನ ರಾಯಭಾರಿಯನ್ನು ಪುಲಿಕೇಶಿಯ ಆಸ್ಥಾನಕ್ಕೆ ಕಳುಹಿಸಿದನು. ಅಜಂತಾದ ಒಂದನೇ ಗುಹೆಯಲ್ಲಿರುವ ವರ್ಣಚಿತ್ರವೊಂದನ್ನು ಪುಲಿಕೇಶಿಯು ಖುಸ್ರುವಿನ ರಾಯಭಾರಿಯನ್ನು ಸ್ವಾಗತಿಸುತ್ತಿರುವ ಚಿತ್ರವೆಂದು ಹೇಳಲಾಗುತ್ತದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟಗಳು ಬಾದಾಮಿ ಚಾಲುಕ್ಯರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳಾಗಿವೆ. ಐಹೊಳೆಯ ದೇವಾಲಯಗಳಲ್ಲಿ ಲಾಡ್ಖಾನ್ ದೇವಾಲಯ, ದುರ್ಗ(ಸೂರ್ಯ) ದೇವಾಲಯ, ಮೇಗುತಿ ಗುಡಿ, ಹುಚ್ಚಿಮಲ್ಲಿ ಗುಡಿ ಮುಖ್ಯವಾದವುಗಳು. ಐಹೊಳೆಯನ್ನು ‘ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು’ ಎಂಬುದಾಗಿ ಕರೆಯುತ್ತಾರೆ. ಐಹೊಳೆಯ ದೇವಾಲಯಗಳಲ್ಲಿ ಲಾಡ್ಖಾನ್ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದೆ. ಇದೊಂದು ಶಿವದೇವಾಲಯ. ಕೆಲವು ವರ್ಷಗಳ ಹಿಂದೆ ಲಾಡ್ಖಾನ್ ಎಂಬ ಸಂತನು ಇಲ್ಲಿ ನೆಲೆಸಿದ್ದರಿಂದ ಈ ಹೆಸರು ಬಂದಿತು. ಇಲ್ಲಿನ ಸೂರ್ಯ ದೇವಾಲಯವನ್ನು ದುರ್ಗ ದೇವಾಲಯವೆಂದು ಕರೆಯುತ್ತಾರೆ. ಈ ದೇವಾಲಯವು ಕೋಟೆಯ ಆವರಣದಲ್ಲಿ ಇರುವುದರಿಂದ ಇದನ್ನು ದುರ್ಗ ದೇವಾಲಯವೆಂದು ಕರೆಯುತ್ತಾರೆ. ಕೋಟೆಯನ್ನು ದುರ್ಗ ಎಂದೂ ಕರೆಯುವುದುಂಟು.
ಪಲ್ಲವರು ತಮಿಳುನಾಡಿನ ಕಾಂಚಿಯು ಪಲ್ಲವರ ರಾಜಧಾನಿ. ಅವರು ಸುಮಾರು 300 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಪಲ್ಲವರಲ್ಲಿ ನರಸಿಂಹವರ್ಮ ಶ್ರೇಷ್ಠನಾದ ಅರಸ.
ನರಸಿಂಹವರ್ಮ ನರಸಿಂಹವರ್ಮನಿಗೆ ‘ಮಹಾಮಲ್ಲ’ ಎಂಬ ಬಿರುದಿತ್ತು. ಪರಾಕ್ರಮಿಯಾದ ಈತನು ಚಾಲುಕ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದುಕೊಂಡನು. ಈ ವಿಜಯದ ಸಂಕೇತವಾಗಿ ‘ವಾತಾಪಿಕೊಂಡ’ ಎಂಬ ಬಿರುದನ್ನು ಧರಿಸಿದನು. ನರಸಿಂಹವರ್ಮನು ಮಾಮಲ್ಲಪುರ (ಈಗಿನ ಮಹಾಬಲಿಪುರ) ರೇವು ಪಟ್ಟಣವನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಿದನುಶಿಲ್ಪಕಲೆಗೆ ಪಲ್ಲವರು ನೀಡಿದ ಕೊಡುಗೆ ಅಮೂಲ್ಯವಾಗಿದೆ. ಮಹಾಬಲಿಪುರಂ ಎಂಬಲ್ಲಿ ನರಸಿಂಹವರ್ಮನ ಕಾಲದ ಏಳು ಕಲ್ಲಿನ ರಥಗಳಿವೆ. ಜಗತ್ಪ್ರಸಿದ್ಧವಾದ ಇವನ್ನು ಒಂದೊಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಮಹಾಬಲಿಪುರದಲ್ಲಿ ‘ಗಂಗಾವತರಣ’ ಎಂಬ ಉಬ್ಬುಶಿಲ್ಪ ಇದೆ. ಈ ಕೆತ್ತನೆಯಲ್ಲಿ ಭಗೀರಥನು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತರಲು ಪ್ರಯತ್ನಿಸುವ ಚಿತ್ರಣವಿದೆ. ಇದೊಂದು ಪ್ರಸಿದ್ಧ ಉಬ್ಬು ಶಿಲ್ಪವಾಗಿದೆ.
ಚೋಳರು ತಂಜಾವೂರು (ತಮಿಳುನಾಡು) ಚೋಳರ ರಾಜಧಾನಿ. ಚೋಳ ಸಾಮ್ರಾಟರಲ್ಲಿ ರಾಜರಾಜ ಚೋಳ ಮತ್ತು ರಾಜೇಂದ್ರ ಚೋಳ ಪ್ರಮುಖರು.
ರಾಜರಾಜ ಚೋಳ: ರಾಜರಾಜನು ಪರಾಕ್ರಮಿ ಹಾಗೂ ದಕ್ಷ ಆಡಳಿತಗಾರನಾಗಿದ್ದನು.
ವಿಶಾಲವಾಗಿದ್ದ ಇವನ ಸಾಮ್ರಾಜ್ಯವು ತುಂಗಭದ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲಾ ಪ್ರದೇಶಗಳು, ಶ್ರೀಲಂಕಾ ಮತ್ತು ಮಾಲ್ಡೀವ್ ದ್ವೀಪಗಳನ್ನು ಒಳಗೊಂಡಿತ್ತು. ಸಾಮ್ರಾಜ್ಯದ ರಕ್ಷಣೆಗಾಗಿ ಪ್ರಬಲವಾದ ಭೂಸೇನೆ ಮತ್ತು ನೌಕಾಸೇನೆಯನ್ನು ಕಟ್ಟಿದನು. ಬೃಹದೀಶ್ವರ ದೇವಾಲಯವು ರಾಜರಾಜನ ಕೊಡುಗೆಯಾಗಿದೆ.
ರಾಜೇಂದ್ರ ಚೋಳ: ರಾಜರಾಜನ ನಂತರ ಅವನ ಮಗ ರಾಜೇಂದ್ರ ಚೋಳನು ಚೋಳ ಸಾಮ್ರಾಜ್ಯದ ಉತ್ತರಾಧಿಕಾರಿಯಾದನು. ಉತ್ತರ ಭಾರತದ ಯಶಸ್ವಿ ದಂಡಯಾತ್ರೆಯು ಅವನ ಒಂದು ಮುಖ್ಯ ಸಾಧನೆಯಾಗಿದೆ. ಆ ವಿಜಯದ ನೆನಪಿಗಾಗಿ ರಾಜೇಂದ್ರನು `ಗಂಗೈಕೊಂಡ’ ಎಂಬ ಬಿರುದನ್ನು ಧರಿಸಿದನು. ಅಲ್ಲದೆ ‘ಗಂಗೈಕೊಂಡ ಚೋಳಪುರಂ’ ಎಂಬ ಹೊಸ ರಾಜಧಾನಿಯನ್ನೂ ಅಲ್ಲೊಂದು ಬೃಹತ್ ಶಿವದೇವಾಲಯವನ್ನೂ ನಿರ್ಮಿಸಿದನು. ರಾಜಧಾನಿಯ ಸಮೀಪ ನೀರಾವರಿಗೆ ಯೋಗ್ಯವಾದ `ಚೋಳಗಂಗಂ’ ಎಂಬ ಭಾರಿ ಕೆರೆಯನ್ನು ತೋಡಿಸಿದನು. ಆಗ್ನೇಯ ಏಷ್ಯದ ಸುಮಾತ್ರಾದಲ್ಲಿನ ಶ್ರೀವಿಜಯ ರಾಜ್ಯವನ್ನು ಗೆದ್ದುಕೊಂಡಿದ್ದು ರಾಜೇಂದ್ರನ ಇನ್ನೊಂದು ಗಣನೀಯ ಸಾಧನೆಯಾಗಿz ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷ್ ಅಧಿಕಾರಿಗಳು ಚೋಳರ ದಕ್ಷ ಆಡಳಿತವನ್ನು ಮೆಚ್ಚಿಕೊಂಡು, ಚೋಳರ ಕಾಲದ ಗ್ರಾಮಗಳು ‘ಪುಟ್ಟ ಗಣರಾಜ್ಯಗಳು’ ಎಂಬಂತೆ ಇದ್ದವೆಂದು ಬಣ್ಣಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ “ಸಹಸ್ರವರ್ಷ ತುಂಬಿರುವ ಬೃಹದೀಶ್ವರ ದೇವಾಲಯ” ಎಂಬ ರೂ. 1000 ಮುಖಬೆಲೆಯ ನಾಣ್ಯವನ್ನು ಹೊರತಂದಿದೆ.
ರಾಷ್ಟ್ರಕೂಟರು ಎಲ್ಲೋರ ಮತ್ತು ಎಲಿಫೆಂಟ: ಎಲ್ಲೋರದ ಕೈಲಾಸ ದೇವಾಲಯವು ನೂರು ಅಡಿ ಎತ್ತರದ ಬಂಡೆಯನ್ನು ಕೊರೆದು ಮಾಡಿರುವ ಏಕಶಿಲಾ ಮಂದಿರವಾಗಿದೆ. ಇದನ್ನು ನಿರ್ಮಿಸಿದ ಕೀರ್ತಿ ರಾಷ್ಟ್ರಕೂಟ ಅರಸ ಒಂದನೇ ಕೃಷ್ಣನಿಗೆ ಸಲ್ಲುತ್ತದೆ. ರಾಷ್ಟ್ರಕೂಟರಲ್ಲಿ ಮೊದಲ ಪ್ರಸಿದ್ಧ ದೊರೆ ಧ್ರುವ. ಉತ್ತರ ಭಾರತದ ಮೇಲೆ ಮೊದಲ ಬಾರಿಗೆ ಯಶಸ್ವಿ ದಂಡಯಾತ್ರೆ ಕೈಗೊಂಡನು.
ಮೂರನೆಯ ಗೋವಿಂದ ಮೂರನೆಯ ಗೋವಿಂದನು ರಾಷ್ಟ್ರಕೂಟ ಸಾಮ್ರಾಟರಲ್ಲಿ ಅತಿ ಗಣ್ಯನು. ಇವನು ದಕ್ಷಿಣ ಭಾರತದ ಎಲ್ಲೆಡೆ ಪ್ರಭುತ್ವ ಸಾಧಿಸಿದನು. ಮುಂದೆ ಹಿಮಾಲಯದ ತಪ್ಪಲಿನವರೆಗೂ ಯಶಸ್ವಿ ಸೈನಿಕ ಕಾರ್ಯಾಚರಣೆ ನಡೆಸಿದನು.
ಅಮೋಘವರ್ಷ ನೃಪತುಂಗ : ನೃಪತುಂಗನಿಗೆ ಅತ್ಯಂತ ಇಷ್ಟವಾದ ಸಂಗತಿಯೆಂದರೆ ತನ್ನ ಪ್ರಜೆಗಳ ಕ್ಷೇಮ. ಅವನು ಮಾನ್ಯಖೇಟ ಪಟ್ಟಣವನ್ನು (ಈಗಿನ ಮಳಖೇಡ, ಗುಲ್ಬರ್ಗ ಜಿಲ್ಲೆ) ನಿರ್ಮಾಣ ಮಾಡಿಸಿದನು. ಅದು ರಾಷ್ಟ್ರಕೂಟರ ರಾಜಧಾನಿಯಾಯಿತು.
ಕಲ್ಯಾಣ ಚಾಲುಕ್ಯರು: ಬೀದರ್ ಜಿಲ್ಲೆಯ ಬಸವ ಕಲ್ಯಾಣವನ್ನು ರಾಜಧಾನಿ ಮಾಡಿಕೊಂಡು ಅಧಿಕಾರಕ್ಕೆ ಬಂದರು. ಆದ್ದರಿಂದ ಇವರನ್ನು ಕಲ್ಯಾಣ ಚಾಲುಕ್ಯರು ಎನ್ನುವರು. ಇಮ್ಮಡಿ ತೈಲ ಈ ವಂಶದ ಮೊದಲ ದೊರೆ. ಆರನೆಯ ವಿಕ್ರಮಾದಿತ್ಯ ಕಲ್ಯಾಣ ಚಾಲುಕ್ಯರಲ್ಲಿ ಪ್ರಸಿದ್ಧನಾದ ದೊರೆ. ಆರನೆಯ ವಿಕ್ರಮಾದಿತ್ಯ :ಅವನು ಅಧಿಕಾರಕ್ಕೆ ಬಂದ ನೆನಪಿಗಾಗಿ ‘ಚಾಳುಕ್ಯ ವಿಕ್ರಮ ಶಕೆ’ಯನ್ನು ಆರಂಭಿಸಿದನು. ಈತನ ಆಶ್ರಯ ಪಡೆದಿದ್ದ ಪಂಡಿತ ಬಿಲ್ಹಣನು ‘ವಿಕ್ರಮಾಂಕ ದೇವಚರಿತ’ ಎಂಬ ಮಹಾಕಾವ್ಯವನ್ನು ರಚಿಸಿದನು. ಇದರಲ್ಲಿ ವಿಕ್ರಮಾದಿತ್ಯನ ಜೀವನ ವೃತ್ತಾಂತವಿದೆ. ವಿಜ್ಞಾನೇಶ್ವರ ಅವನ ಆಸ್ಥಾನದ ಇನ್ನೊಬ್ಬ ಶ್ರೇಷ್ಠ ವಿದ್ವಾಂಸ. ‘ಮಿತಾಕ್ಷರ ಸಂಹಿತೆ’ ಆತನ ಗ್ರಂಥ. ಇದು ಹಿಂದೂ ಕಾನೂನು ಪದ್ಧತಿಯ ಪ್ರಮಾಣ ಗ್ರಂಥವೆಂದು ಮನ್ನಣೆ ಪಡೆದಿದೆ.
ಮೂರನೆಯ ಸೋಮೇಶ್ವರ: ಅವನು ‘ಮಾನಸೋಲ್ಲಾಸ’ ಎಂಬ ಪ್ರಸಿದ್ಧ ಸಂಸ್ಕøತ ವಿಶ್ವಕೋಶವನ್ನು ರಚಿಸಿದನು. ಇದರಲ್ಲಿ ಸರ್ವಶಾಸ್ತ್ರಗಳೂ ಅಡಗಿದೆ. ಸೋಮೇಶ್ವರನು ಮಹಾನ್ ವಿದ್ವಾಂಸನಾಗಿದ್ದು, ‘ಸರ್ವಜ್ಞ ಚಕ್ರವರ್ತಿ’ ಎಂದೇ ಪ್ರಖ್ಯಾತನಾಗಿದ್ದನು.
ಹೊಯ್ಸಳರು: ಪ್ರಾರಂಭದಲ್ಲಿ ಬೇಲೂರು, ಅನಂತರ ದ್ವಾರಸಮುದ್ರ ಅವರ ರಾಜಧಾನಿಯಾಗಿತ್ತು. ದ್ವಾರಸಮುದ್ರದ ಇಂದಿನ ಹೆಸರೇ ಹಳೆಬೀಡು. ಸಳ ಎಂಬಾತನು ಹೊಯ್ಸಳ ಮನೆತನದ ಸ್ಥಾಪಕ. ಹುಲಿಯನ್ನು ಕೊಲ್ಲುವ ಸಳನ ಚಿತ್ರವೇ ಹೊಯ್ಸಳರ ಲಾಂಛನ. ಜೈನ ಮತೀಯನಾಗಿದ್ದು, ಅನಂತರ ಶ್ರೀವೈಷ್ಣವ ಪಂಥವನ್ನು ಸ್ವೀಕರಿಸಿದನು. ಆತನ ರಾಣಿ ಶಾಂತಲೆಯು ಜೈನಮತದಲ್ಲಿಯೇ ಮುಂದುವರಿದಳು. ಅವಳು ‘ನಾಟ್ಯಸರಸ್ವತಿ’ ಎಂದೇ ಪ್ರಸಿದ್ದಳು. ಧರ್ಮಸಹಿಷ್ಣುವಾಗಿದ್ದ ಆತ ಶೈವ ಮತ್ತು ಜೈನ ಮತಗಳಿಗೆ ಉದಾರ ಪೆÇ್ರೀತ್ಸಾಹ ನೀಡಿದನು ಮೂರನೆಯ ಬಲ್ಲಾಳ: ಮೂರನೆಯ ಬಲ್ಲಾಳನು ಹೊಯ್ಸಳ ವಂಶದ ಕೊನೆಯ ಪ್ರಮುಖ ಅರ¸ವಿಷ್ಣುವರ್ಧನನು ಚೋಳರ ಮೇಲಿನ ವಿಜಯದ ನೆನಪಿಗಾಗಿ ಬೇಲೂರಿನ ಚಿತ್ತಾಕರ್ಷಕವಾದ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿಸಿದನು. ಅದನ್ನು ನಿರ್ಮಿಸಿದ ಶಿಲ್ಪಿಗಳಲ್ಲಿ ಬಳ್ಳಿಗಾವೆಯ ದಾಸೋಜ, ಗದುಗಿನ ನಾಗೋಜ ಪ್ರಮುಖರು
ಹಾಲೇರಿ ಅರಸುಮನೆತನ: ಕೊಡಗನ್ನು ಆಳಿದ ಪ್ರಮುಖ ರಾಜವಂಶವೆಂದರೆ ಹಾಲೇರಿ ಅರಸು ಮನೆತನ. 17ನೇ ಶತಮಾನದ ಆರಂಭದಲ್ಲಿ ಇದನ್ನು ವೀರರಾಜನು ಸ್ಥಾಪಿಸಿದನು. ಮುಂದೆ, ಮುದ್ದುರಾಜನು ಮುದ್ದುರಾಜಕೇರಿಯನ್ನು ಕಟ್ಟಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮುದ್ದುರಾಜಕೇರಿಯೇ ಮಡಿಕೇರಿಯಾಗಿದೆ.
ಕೊಡಗು ಮತ್ತು ಬ್ರಿಟಿಷರು: ಕೆಲಕಾಲದ ಬಳಿಕ ಬ್ರಿಟಿಷರು ಕೊಡಗನ್ನು ವಶಪಡಿಸಿಕೊಂಡರು
(1834). ಕೊಡಗಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರನನ್ನು ಅವರು ಗಡಿಪಾರು ಮಾಡಿ ಕೊಡಗನ್ನು ತಾವೇ ನೇರವಾಗಿ ಆಳತೊಡಗಿದರು. ಸ್ವಾತಂತ್ರ್ಯಾನಂತರ ಕೊಡಗು ಕೆಲಕಾಲ ಪ್ರತ್ಯೇಕ ರಾಜ್ಯವಾಗಿ ಉಳಿಯಿತು. 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾಯಿತು. ಕಾಲಗಣನೆ (ಸಾ.ಶ.) ಕಿತ್ತೂರ ಚೆನ್ನಮ್ಮ – 1824 ಸಂಗೊಳ್ಳಿ ರಾಯಣ್ಣ – 1829. ಚೌಟ ಅರಸುಮನೆತನದ ಅಬ್ಬಕ್ಕ ರಾಣಿ (16ನೇ ಶತಮಾನ) ಪೆÇೀರ್ಚುಗೀಸರ ವಿರುದ್ಧ ಹೋರಾಟ ನಡೆಸಿ ಅವರನ್ನು ಸೋಲಿಸಿದ್ದಳು. ನಾಗಾರಾಧನೆ ಮತ್ತು ಭೂತಾರಾಧನೆ ತುಳುನಾಡಿನ ಎರಡು ಆರಾಧನಾ ಪಂಥಗಳು. ತುಳುನಾಡಿನಲ್ಲಿ ಕ್ರೈಸ್ತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಿದರು. ಮಂಗಳೂರಿನಲ್ಲಿ ಮುದ್ರಣಾಲಯವನ್ನು ಸ್ಥಾಪಿಸಿದವರು ಇವರೇ. ಫರ್ಡಿನಾಂಡ್ ಕಿಟೆಲ್ ಅವರು ರಚಿಸಿದ ಕನ್ನಡ ನಿಘಂಟು ಬಾಸೆಲ್ ಮಿಷನ್ ಮುದ್ರಣಾಲಯದಲ್ಲಿ ಅಚ್ಚಾಯಿತುಮೂಡಬಿದಿರೆಯ ಸಾವಿರಕಂಬದ ಬಸದಿ ಮತ್ತು ಕಾರ್ಕಳ, ವೇಣೂರು ಹಾಗೂ ಧರ್ಮಸ್ಥಳಗಳಲ್ಲಿರುವ ಗೊಮ್ಮಟಮೂರ್ತಿ ಜೈನ ಸಂಸ್ಕøತಿಯ ಸಂಕೇತಗಳು
ರಾಮಿ: ಹಲಗಲಿ ದಂಗೆಯಲ್ಲಿ ಮೂರು ಜನ ಬ್ರಿಟಿಷ್ ಸೈನಿಕರನ್ನು ಗುಂಡಿಕ್ಕಿ ಕೊಂದ ರಾಮಿ ಬೇಡರ ವೀರಮಹಿ¼ನಮ್ಮ ದೇಶದಲ್ಲಿ ಮೊದಲು 562 ಚಿಕ್ಕಪುಟ್ಟ ರಾಜ್ಯಗಳು (ಸಂಸ್ಥಾನಗಳು) ಬ್ರಿಟಿಷರ ಅಧೀನದಲ್ಲಿದ್ದುವು. ಈ ರಾಜ್ಯಗಳಲ್ಲಿ ಹೈದರಾಬಾದ್ ಪ್ರಮುಖವಾಗಿತ್ತುನಿಜಾಮನು ‘ಕಾಲಾಗಪ್ತಿ’ ಎಂಬ 53 ಕರಾಳ ನಿಯಮಗಳನ್ನು ಜಾರಿಗೆ ತಂದು ಜನರ ಮೂಲಭೂತ ಸ್ವಾತಂತ್ರ್ಯವನ್ನು ಹತ್ತಿಕ್ಕಿದನುಹೋರಾಟದ ಜನಪ್ರಿಯ ನಾಯಕರೆಂದರೆ ಸ್ವಾಮಿ ರಮಾನಂದ ತೀರ್ಥರು. ಅವರು ಹೈದರಾಬಾದ್ ಸಂಸ್ಥಾನದ ಎಲ್ಲೆಡೆ ಸಂಚಾರ ಮಾಡಿ ಅಹಿಂಸಾತ್ಮಕ ಸತ್ಯಾಗ್ರಹ ಚಳುವಳಿಯನ್ನು ಸಂಘಟಿಸಿದರು. ಹೋರಾಟದ ಇನ್ನೊಬ್ಬ ಪ್ರಸಿದ್ಧ ನಾಯಕರು ಹರ್ಡೇಕರ್ ಮಂಜಪ್ಪ. ಇವರು ‘ಕರ್ನಾಟಕದ ಗಾಂಧಿ’ ಎಂದೇ ಪ್ರಸಿದ್ಧರು. ಶರಣಗೌಡ ಇನಾಂದಾರರನ್ನು ‘ಸರದಾರ’ರೆಂದು ಕರೆದರು. 1951ರಲ್ಲಿ ಹೈದರಾಬಾದ್ ಪ್ರಾಂತದಲ್ಲಿ ಚುನಾವಣೆಗಳು ನಡೆದು ಜನತೆ ತಮ್ಮ ಪ್ರತಿನಿಧಿಗಳನ್ನು ಮೊದಲ ಬಾರಿಗೆ ಆರಿಸಿ ಕಳುಹಿಸಿದರು. ಅಗ್ರಗಣ್ಯ ಜನನಾಯಕರಾಗಿದ್ದ ಸ್ವಾಮಿ ರಮಾನಂದ ತೀರ್ಥರು ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು.
ಶಂಕರಾಚಾರ್ಯರು ಶಂಕರರು ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರುಶಂಕರರು ಪ್ರತಿಪಾದಿಸಿದ ತತ್ವವನ್ನು ‘ಅದ್ವೈತ’ ಎನ್ನುವರು. ಶಂಕರರು ಬದರಿ (ಉತ್ತರಾಖಂಡ), ದ್ವಾರಕೆ (ಗುಜರಾತ್), ಪುರಿ (ಒಡಿಶಾ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರುಶಂಕರರು ಆನಂದ ಲಹರಿ, ಸೌಂದರ್ಯ ಲಹರಿ ಮುಂತಾದ ಗ್ರಂಥಗಳನ್ನು ಬರೆದರು. ಅವರ ಸ್ತೋತ್ರಗಳಲ್ಲಿ `ಭಜಗೋವಿಂದಂ’ ಇಂದಿಗೂ ಜನಪ್ರಿಯವಾಗಿದೆ. ಶಂಕರರು ತಮ್ಮ 32 ವರ್ಷಗಳ ಜೀವಿತ ಕಾಲದೊಳಗೆ ಇಷ್ಟೆಲ್ಲಾ ಸಾಧಿಸಿದ್ದರು.
ರಾಮಾನುಜಾಚಾರ್ಯರು ರಾಮಾನುಜರು ಚೆನ್ನೈ ಸಮೀಪದ ಶ್ರೀಪೆರಂಬುದೂರಿನಲ್ಲಿ ಜನಿಸಿದರು. ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ‘ವಿಶಿಷ್ಟಾದ್ವೈತ’ವೆಂದು ಕರೆಯುತ್ತೇª. ಚೋಳ ದೊರೆಯ ಕಿರುಕುಳ ತಾಳಲಾರದೆ ಕರ್ನಾಟಕಕ್ಕೆ ಬಂದ ಅವರಿಗೆ ಹೊಯ್ಸಳ ದೊರೆ ವಿಷ್ಣುವರ್ಧನನು ಮೇಲುಕೋಟೆಯಲ್ಲಿ ಆಶ್ರಯ ಕಲ್ಪಿಸಿದನು
ಬಸವೇಶ್ವರರು ಬಸವೇಶ್ವರರ ತಂದೆ ತಾಯಿ ಮಾದರಸ ಮತ್ತು ಮಾದಲಾಂಬಿಕೆ. ಬಸವತತ್ವವನ್ನು ‘ಶಕ್ತಿವಿಶಿಷ್ಟಾದ್ವೈತ’ ಎಂದು ಕರೆಯುತ್ತಾರೆ. ಕಲ್ಯಾಣದಿಂದ ಆಳ್ವಿಕೆ ನಡೆಸುತ್ತಿದ್ದ ಕಲಚೂರಿ ವಂಶದ ಬಿಜ್ಜಳನು ಬಸವೇಶ್ವರರನ್ನು ಭಂಡಾರದ ಅಧಿಕಾರಿಯಾಗಿ ನೇಮಿಸಿಕೊಂಡನು
ಮಧ್ವಾಚಾರ್ಯರು ಮಧ್ಯಗೇಹ ಭಟ್ಟ ಮತ್ತು ವೇದಾವತಿ ಅವರ ತಂದೆ ತಾಯಿ. ಅವರು ‘ದ್ವೈತ ಸಿದ್ಧಾಂತ’ವನ್ನು ಪ್ರತಿಪಾದಿಸಿದರುಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು.
ಭಾರತದ ಇತಿಹಾಸದಲ್ಲಿ ರಜಪೂತರು; ಕ್ಷತ್ರಿಯರಾದ ರಜಪೂತರು ತಮ್ಮನ್ನು ಸೂರ್ಯವಂಶ ಮತ್ತು ಚಂದ್ರವಂಶದವರು ಎಂದು ಗುರುತಿಸಿಕೊಳ್ಳುತ್ತಾರೆ
ಪ್ರತಿಹಾರರು: ಪ್ರತಿಹಾರ ದೊರೆಗಳು ಮಧ್ಯ ಪ್ರದೇಶದ ಆವಂತಿಯಿಂದ (ಉಜ್ಜಯಿನಿ) ಆಳ್ವಿಕೆ ನಡೆಸುತ್ತಿದ್ದರು. ನಾಗಭಟನು ಈ ವಂಶದ ಪ್ರಸಿದ್ಧ ರಾಜ. ಅರಬ್ಬರ ದಂಡಯಾತ್ರೆಯಿಂದ ಭಾರತವನ್ನು ರಕ್ಷಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ.
ಪಾಲರು: ಪಾಲರು ಸುಮಾರು ನಾಲ್ಕು ಶತಮಾನಗಳ ಕಾಲ ಆಳಿದರು. ಧರ್ಮಪಾಲನು ಪಾಲ ವಂಶದ ಶ್ರೇಷ್ಠ ದೊರೆ.
ಚೌಹಾಣರು: ಚೌಹಾಣರಲ್ಲಿ ಮೂರನೇ ಪೃಥ್ವೀರಾಜನು ಪ್ರಸಿದ್ಧ ಅರಸು. ದಿಲ್ಲಿ ಅವನÀ ರಾಜಧಾನಿ.ಪೃಥ್ವೀರಾಜ ಚೌಹಾಣನು ಕನೌಜದ ರಾಜ ಜಯಚಂದ್ರನ ಮಗಳು ಸಂಯುಕ್ತೆಯನ್ನು ವರಿಸಿದ ಸ್ವಾರಸ್ಯಕರ ಘಟನೆ ಅನೇಕ ಗ್ರಂಥಗಳಲ್ಲಿ ವಿವರಿಸಲಾಗಿದೆ. ಸಂಯುಕ್ತೆ ಬಲು ಚೆಲುವೆ. ಜಯಚಂದ್ರ ಮತ್ತು ಅವನ ಬಂಧು ಪೃಥ್ವೀರಾಜನ ನಡುವೆ ವೈರಭಾವವಿತ್ತು. ಮಗಳ ಸ್ವಯಂವರಕ್ಕೆ ಜಯಚಂದ್ರ ಪೃಥ್ವೀರಾಜನನ್ನು ಆಹ್ವಾನಿಸಿರಲಿಲ್ಲ. ಆತನನ್ನು ಅವಮಾನಗೊಳಿಸಬೇಕೆಂದು ಆತನ ಪ್ರತಿಮೆಯನ್ನು ಮಾಡಿಸಿ ಕಾವಲುಗಾರನಂತೆ ಬಾಗಿಲಿನಲ್ಲಿ ಇರಿಸಿದ. ಪೃಥ್ವೀರಾಜನಲ್ಲಿ ಅನುರಕ್ತಳಾಗಿದ್ದ ಸಂಯುಕ್ತೆ ಅಲ್ಲಿ ಸೇರಿದ್ದ ರಾಜಪುತ್ರರನ್ನು ಬಿಟ್ಟು, ಪೃಥ್ವೀರಾಜನ ಪ್ರತಿಮೆಗೆ ಹಾರ ಹಾಕಿದಳು. ಅಲ್ಲೇ ಹತ್ತಿರದಲ್ಲಿ ಅಡಗಿಕೊಂಡಿದ್ದ ಪೃಥ್ವೀರಾಜ ಸಂಯುಕ್ತೆಯನ್ನು ಒಡನೆಯೇ ಅಶ್ವದ ಮೇಲೆ ಎತ್ತಿಕೊಂಡು ಹೋಗಿ, ತನ್ನ ಅರಮನೆಯಲ್ಲಿ ಮದುವೆ ಮಾಡಿಕೊಂಡ. ಈ ಘಟನೆಯಿಂದ ಎರಡು ಮನೆತನಗಳೊಳಗೆ ಇದ್ದ ವೈರತ್ವ ಮೊದಲಿಗಿಂತ ಇನ್ನಷ್ಟು ಹೆಚ್ಚಿತು. ಪೃಥ್ವೀರಾಜನು ಒಂದನೇ ತರೈನ್ ಯುದ್ಧದಲ್ಲಿ ಮಹಮದ ಘೋರಿಯನ್ನು ಸೋಲಿಸಿ, ಆತನಿಗೆ ಕ್ಷಮಾದಾನ ನೀಡಿದನು. ಮರು ವರ್ಷ ಸಕಲ ಸೈನ್ಯದೊಡನೆ ಬಂದ ಮಹಮದ್ ಘೋರಿಯು ಎರಡನೇ ತರೈನ್ ಯುದ್ಧದಲ್ಲಿ ಪೃಥ್ವೀರಾಜನನ್ನು ಸೋಲಿಸಿ, ಕೊಂದನು. ದಿಲ್ಲಿಯು ಮಹಮದ್ಘೋರಿಯ ವಶವಾಯಿತು. ಇದು ದಿಲ್ಲಿ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು. ಪೃಥ್ವೀರಾಜ ಶೌರ್ಯ ಮತ್ತು ಧೀರತನಕ್ಕೆ ಹೆಸರಾಗಿದ್ದನು. “ಪೃಥ್ವೀರಾಜರಾಸೋ” ಎಂಬ ಹಿಂದಿ ಮಹಾಕಾವ್ಯದಲ್ಲಿ ‘ಚಾಂದ್ ಬರ್ದಾಯಿ’ ಎಂಬ ಕವಿ ಈತನ ಪರಾಕ್ರಮವನ್ನು ವರ್ಣಿಸಿದ್ದಾನೆ
ಗುಹಿಲರು: ರಜಪೂತರಲ್ಲಿ ಗುಹಿಲರು(ಗುಹಿಲೋಟರು) ವೀರಪರಂಪರೆಯ ವಂಶದವರು. ಈ ವಂಶದ ದೊರೆ ಖೊಮ್ಮಾಣನು ಅರಬ್ಬರ ದಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ ‘ಬಪ್ಪಾರಾವಲ್’ ಎಂಬ ಬಿರುದನ್ನು ಧರಿಸಿದನು. ರಾಣಾ ಕುಂಭನು ಸುಲ್ತಾನರ ವಿರುದ್ಧ ಹೋರಾಡಿ ರಾಜ್ಯವನ್ನು ರಕ್ಷಿಸಿದ ಪರಾಕ್ರಮಿ. ರಾಜ್ಯದ ಭದ್ರತೆಗಾಗಿ 32 ಕೋಟೆಗಳನ್ನು ಕಟ್ಟಿಸಿದನು. ಚಿತ್ತೋಡಗಡದ ಪ್ರಖ್ಯಾತ ವಿಜಯಸ್ತಂಭವನ್ನು ಈತನು ಮಾಡಿಸಿದನು. ರಾಣಾ ಸಂಗ ಅಥವಾ ರಾಣಾ ಸಂಗ್ರಾಮ ಸಿಂಹನು ಗುಹಿಲ ವಂಶದ ಇನ್ನೊಬ್ಬ ಖ್ಯಾತ ದೊರೆ. ನೂರು ಕದನಗಳ ವೀರ. ಅರಮನೆಗಳಲ್ಲಿ ‘ಗುಲಾಬಿ ನಗರ’ ಜೈಪುರದ ಹವಾಮಹಲ್, ಉದಯಪುರದ ಬೃಹತ್ ಅರಮನೆಗಳು ಪ್ರಸಿದ್ಧವಾಗಿವೆ. ಕೋಟೆಗಳಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ಕೋಟೆಯು ಭಾರತದ ಕೋಟೆಗಳಲ್ಲಿಯೇ ವಿಶೇಷವಾದುದಾಗಿದೆ. ಇದನ್ನು ‘ಭಾರತದ ಕೋಟೆಗಳ ಕೊರಳ ಹಾರದ ಮುತ್ತು’ ಎಂದೇ ಬಣ್ಣಿಸಲಾಗಿದೆ.
ಅಬ್ರಾಹಂ ಲಿಂಕನ್ ಅವರು ‘ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವಸರ್ಕಾರ’ ಎಂದು ಹೇಳಿದ್ದಾರೆ.
ಸರ್ಕಾರದಲ್ಲಿ ಮೂರು ಅಂಗಗಳಿರುತ್ತವೆ 1. ಶಾಸಕಾಂಗ 2. ಕಾರ್ಯಾಂಗ 3. ನ್ಯಾಯಾಂಗ ಶಾಸಕಾಂಗವು ಶಾಸನಗಳನ್ನು ರಚಿಸುವ ಕಾರ್ಯನಿರ್ವಹಿಸಿದರೆ, ಕಾರ್ಯಾಂಗವು ಶಾಸನಗಳನ್ನು ಅನುಷ್ಠಾನಗೊಳಿಸುವ ಕಾರ್ಯನಿರ್ವಹಿಸುತ್ತದೆ. ಹಾಗೂ ನ್ಯಾಯಾಂಗವು ನ್ಯಾಯಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತದೆ.
ಭಾರತದ ಒಕ್ಕೂಟ: ಭಾರತವು 29 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಒಕ್ಕೂಟವಾಗಿದೆ. ಒಕ್ಕೂಟದ ಸರ್ಕಾರವನ್ನು ಕೇಂದ್ರ ಸರಕಾರ ಎನ್ನುವರು. ಸರ್ಕಾರಕ್ಕೆ ಮೂರು ಅಂಗಗಳಿವೆ:
ಕೇಂದ್ರ ಶಾಸಕಾಂಗ ಕೇಂದ್ರ ಶಾಸಕಾಂಗವನ್ನು `ಸಂಸತ್ತು’ ಅಥವಾ `ಪಾರ್ಲಿಮೆಂಟ್’ ಎನ್ನುತ್ತೇವೆ. ಭಾರತದ ಸಂಸತ್ತು ರಾಷ್ಟ್ರಪತಿ ಮತ್ತು ಎರಡು ಸದನಗಳನ್ನು ಒಳಗೊಂಡಿದೆ. ಎರಡು ಸದನಗಳೆಂದರೆ `ಲೋಕಸಭೆ’ ಮತ್ತು `ರಾಜ್ಯಸಭೆ’. ಲೋಕಸಭೆ: ಲೋಕಸಭೆಯನ್ನು ಸಂಸತ್ತಿನ `ಕೆಳಮನೆ’ ಎನ್ನುವರು. ಲೋಕಸಭೆಯ ಸದಸ್ಯರನ್ನು 18 ವರ್ಷಕ್ಕೆ ಮೇಲ್ಪಟ್ಟ ಪ್ರಜೆಗಳು ನೇರವಾಗಿ ಚುನಾಯಿಸುತ್ತಾರೆ. ಸದಸ್ಯರ ಗರಿಷ್ಠ ಸಂಖ್ಯೆ 552. ರಾಜ್ಯಸಭೆ: ರಾಜ್ಯಸಭೆಯು ಸಂಸತ್ತಿನ `ಮೇಲ್ಮನೆ'ಯಾಗಿದೆ. ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ 250. ಇವರು ಪ್ರಜೆಗಳಿಂದ ನೇರವಾಗಿ ಆಯ್ಕೆಗೊಳ್ಳುವುದಿಲ್ಲ. ಅವರಲ್ಲಿ 238 ಸದಸ್ಯರನ್ನು ಎಲ್ಲಾ ರಾಜ್ಯಗಳ ವಿಧಾನಸಭಾ ಸದಸ್ಯರು ಆಯ್ಕೆ ಮಾಡುವರು. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುವರು.
ರಾಜ್ಯಸಭಾ ಸದಸ್ಯರು: ರಾಜ್ಯಸಭೆಯ ಸದಸ್ಯರಾಗುವವರಿಗೆ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು.
ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಆರು ವರ್ಷ. ಭಾರತದ ಉಪರಾಷ್ಟ್ರಪತಿಯವರೇ ರಾಜ್ಯಸಭೆಯ ಸಭಾಧ್ಯಕ್ಷರು.
ರಾಷ್ಟ್ರಪತಿ ಭಾರತ ಗಣರಾಜ್ಯದ ಅತ್ಯುನ್ನತ ಮುಖ್ಯಸ್ಥರನ್ನು `ರಾಷ್ಟ್ರಪತಿ’ ಎನ್ನುವರು. ಇವರನ್ನು ರಾಷ್ಟ್ರದ ಪ್ರಪ್ರಥಮ ಪ್ರಜೆ ಎನ್ನುತ್ತಾರೆ. ಇವರ ಅಧಿಕೃತ ನಿವಾಸವೇ `ರಾಷ್ಟ್ರಪತಿ ಭವನ’. ಸಂಸತ್ತಿನ ಎರಡು ಸದನಗಳ ಚುನಾಯಿತ ಸದಸ್ಯರು ಮತ್ತು ಎಲ್ಲ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯವರನ್ನು ಚುನಾಯಿಸುತ್ತಾರೆ.
ಅಧಿಕಾರಗಳು: (1) ರಾಷ್ಟ್ರಪತಿಯವರು ಲೋಕಸಭೆಯಲ್ಲಿ ಬಹುಮತದ ಬೆಂಬಲ ಪಡೆದ ಪಕ್ಷದ ನಾಯಕರನ್ನು ಪ್ರಧಾನ ಮಂತ್ರಿಯವರನ್ನಾಗಿ ನೇಮಿಸುವರು. ಪ್ರಧಾನಮಂತ್ರಿಯವರ ಸಲಹೆ ಮೇರೆಗೆ ಇತರ ಮಂತ್ರಿಗಳನ್ನು ನೇಮಿಸುವರು.
(2) ಯಾವುದೇ ಕರಡು ಶಾಸನವು ಕಾನೂನಾಗಲುರಾಷ್ಟ್ರಪತಿಯವರ ಅಂಕಿತ ಅಗತ್ಯವಾಗಿರುತ್ತದೆ.
(3) ರಕ್ಷಣಾಪಡೆಗಳ ಮೇಲಿನ ಸರ್ವೋಚ್ಚ ಅಧಿಕಾರ ಇವರಿಗಿದೆ. ಯುದ್ಧಸಾರುವ ಅಧಿಕಾರವೂ ಇವರಿಗಿದೆ.
(4) ಇವರಿಗೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗ¼ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರವಿದೆ.
(5) ಅಪರಾಧಿಗಳಿಗೆ ಕ್ಷಮದಾನ ನೀಡುವ ಮತ್ತು ಶಿಕ್ಷೆಯನ್ನು ಕಾಯಂಗೊಳಿಸುವ ಅಧಿಕಾರವಿದೆ. ಉಪರಾಷ್ಟ್ರಪತಿ: ಕೇಂದ್ರ ಸಂಸತ್ತಿನ ಎರಡೂ ಸದನದ ಸದಸ್ಯರು ಉಪರಾಷ್ಟ್ರಪತಿಯವರನ್ನು ಚುನಾಯಿಸುವರು. ಹೊಸದಿಲ್ಲಿಯ ಪಾರ್ಲಿಮೆಂಟ್ ಭವನ, ರಾಷ್ಟ್ರಪತಿ ಭವನ ಮುಂತಾದ ಭವ್ಯ ಕಟ್ಟಡಗಳನ್ನು ಬ್ರಿಟಿಷರ ಆಡಳಿತ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆ. ಇದು 1929ರಲ್ಲಿ ಪೂರ್ಣಗೊಂಡಿತು.
ರಾಜ್ಯಗಳು
1 ಆಂಧ್ರ ಪ್ರದೇಶ (ಅಮರಾವತಿ)
2 ಅರುಣಚಲ ಪ್ರದೇಶ (ಇಟಾನಗರ)
3 ಅಸ್ಸಾಂ (ದಿಶ್ಪೂರ)
4 ಬಿಹಾರ (ಪಟ್ನಾ)
5 ಗೋವಾ (ಪಣಜಿ)
6 ಗುಜರಾತ್ (ಗಾಂಧೀನಗರ)
7 ಹರಿಯಾಣ (ಚಂಡೀಗಡ)
8 ಹಿಮಾಚಲ ಪ್ರದೇಶ (ಶಿಮ್ಲಾ)
9 ಜಮ್ಮು ಮತ್ತು ಕಾಶ್ಮೀರ (ಶ್ರೀನಗರ-ಬೇಸಿಗೆ ಕಾಲ, ಜಮ್ಮು - ಚಳಿಗಾಲ)
10 ಕರ್ನಾಟಕ (ಬೆಂಗಳೂರು)
11 ಕೇರಳ (ತಿರುವನಂತಪುರ)
12 ಮಧ್ಯ ಪ್ರದೇಶ (ಭೋಪಾಲ)
13 ಮಹಾರಾಷ್ಟ್ರ (ಮುಂಬೈ)
14 ಮಣಿಪುರ (ಇಂಫಾಲ)
15 ಮೇಘಾಲಯ (ಶಿಲ್ಲಾಂಗ್)
16 ಮಿಜೋರಾಂ (ಐಜವಲ್)
17 ನಾಗಾಲ್ಯಾಂಡ್ (ಕೋಹಿಮ)
18 ಒಡಿಶ (ಭುಬನೇಶ್ವರ)
19 ಪಂಜಾಬ್ (ಚಂಡೀಗಡ)
20 ರಾಜಸ್ಥಾನ (ಜೈಪುರ)
21 ಸಿಕ್ಕಿಂ (ಗ್ಯಾಂಗ್ಟ್ಕ್)
22 ತಮಿಳುನಾಡು (ಚೆನ್ನೈ)
23 ತ್ರಿಪುರ (ಅಗರ್ತಲ)
24 ಉತ್ತರ ಪ್ರದೇಶ (ಲಖನೌ)
25 ಪಶ್ಚಿಮ ಬಂಗಾಲ (ಕೋಲ್ಕೊತ)
26 ಛತ್ತೀಸ್ಗಡ (ರಾಯಪುರ)
27 ಝಾರ್ಖಂಡ್ (ರಾಂಚಿ)
28 ಉತ್ತರಾಂಚಲ (ಡೆಹರಾಡೂನ್)
29 ತೆಲಂಗಾಣ (ಹೈದರಾಬಾದ್)
ಕೇಂದ್ರಾಡಳಿತ ಪ್ರದೇಶಗಳು
1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಪೆÇೀರ್ಟ್ ಬ್ಲೇರ್)
2 ಚಂಡೀಗಡ (ಚಂಡೀಗಡ)
3 ದಾದ್ರ ಮತ್ತು ನಗರ ಹವೇಲಿ (ಸಿಲ್ವಾಸಾ)
4 ದಮನ್ ಮತ್ತು ದೀಯೂ (ದಮನ್)
5 ಲಕ್ಷದ್ವೀಪ (ಕವರತ್ತಿ)
6 ಪುದುಚೇರಿ (ಪುದುಚೇರಿ)
7 ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ
ವಿಧಾನಸಭೆ (ಕೆಳಮನೆ) ರಚನೆ: ಇದು ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬಂದ ಅಭ್ಯರ್ಥಿಗಳ ಸದನವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು 224 ಸ್ಥಾನಗಳಿವೆ.
ವಿಧಾನಸಭೆಯ ಸದಸ್ಯರು (ಎಂಎಲ್ಎ) ತಮ್ಮೊಳಗೆ ಒಬ್ಬರನ್ನು ಸಭಾಧ್ಯಕ್ಷರನ್ನಾಗಿ (ಸ್ಪೀಕರ್) ಚುನಾಯಿಸುತ್ತಾರೆ. ವಿಧಾನಸಭೆಯ ಅಧಿಕಾರಾವಧಿ ಐದು ವರ್ಷಗಳು. ಇದು ಖಾಯಂ ಸಭೆಯಲ್ಲ. ವಿಧಾನಸಭಾ ಸದಸ್ಯರ ಅರ್ಹತೆಗಳು: ಭಾರತದ ಪ್ರಜೆಯಾಗಿರಬೇಕು. ಕನಿಷ್ಠ 25 ವರ್ಷ ಆಗಿರಬೇಕು. ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು. ದಿವಾಳಿಯಾಗಿರಬಾರದು
ವಿಧಾನಪರಿಷತ್ತು (ಮೇಲ್ಮನೆ) ರಚನೆ: ವಿಧಾನಪರಿಷತ್ತಿನ ಸದಸ್ಯರ (ಎಂ.ಎಲ್.ಸಿ.) ಸಂಖ್ಯೆಯು ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯ 1/3ಕ್ಕಿಂತ ಹೆಚ್ಚಿರಬಾರದು. ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರ ಬಲ 75. ವಿಧಾನÀಪರಿಷತ್ತಿನ ಸದಸ್ಯರ ಅಧಿಕಾರಾವಧಿ ಆರು ವರ್ಷಗಳು. ಸದಸ್ಯರಿಗೆ ಕನಿಷ್ಠ 30 ವರ್ಷ ಆಗಿರಬೇಕು.
ರಾಜ್ಯಪಾಲ ರಾಜ್ಯಪಾಲರು ಸಾಂವಿಧಾನಿಕವಾಗಿ ಮಾತ್ರವೇ ಕಾರ್ಯಾಂಗದ ಮುಖ್ಯಸ್ಥರು. ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಯವರು. ರಾಜ್ಯಪಾಲರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ. ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷ.
ರಾಜ್ಯಪಾಲರ ಅರ್ಹತೆ: •ಭಾರತದ ಪ್ರಜೆಯಾಗಿರಬೇಕು. • ಕನಿಷ್ಠ 35 ವರ್ಷಗಳು ತುಂಬಿರಬೇಕು. • ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯರಾಗಿರಬಾರದು
ಸರ್ವೋಚ್ಚ ನ್ಯಾಯಾಲಯ: • ಭಾರತದ ಪ್ರಜೆಯಾಗಿರಬೇಕು. • ಕನಿಷ್ಠ ಹತ್ತು ವರ್ಷಗಳ ಕಾಲ ಭಾರತದ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿರಬೇಕು; ಅಥವಾ • ಹತ್ತು ವರ್ಷಗಳ ಕಾಲ ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
ಮಾನವ ಹಕ್ಕುಗಳನ್ನು ಡಿಸೆಂಬರ್ 10, 1948 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿತು. ಯೂರೋಪ್ ಖಂಡದ ಅತಿ ಎತ್ತರವಾದ ಎಲ್ಬ್ರುಸ್ ಶಿಖರ ಬಿಂದು ಕಕಾಸಸ್ ಪರ್ವತ ಸರಣಿಯ ಮೌಂಟ್ ಎಲ್ಬ್ರುಸ್ ಶಿಖರ (5633 ಮೀ). ಅತ್ಯಂತ ತಗ್ಗಾದ ಸ್ಥಳ ಕ್ಯಾಸ್ಪಿಯನ್ ಸಮುದ್ರ. ಇದು ಸಮುದ್ರ ಮಟ್ಟಕ್ಕೆ 28 ಮೀ. ತಗ್ಗಿನಲ್ಲಿದೆ. ಸಕ್ಕರೆಗೆಡ್ಡೆ ಮತ್ತು ಬಟಾಟೆ (ಆಲೂಗೆಡ್ಡೆ)ಗಳು ಯೂರೋಪಿನ ಎರಡು ಪ್ರಮುಖ ಗೆಡ್ಡೆ ಬೆಳೆಗಳು. ಯೂರೋಪ್ ಪ್ರಪಂಚದಲ್ಲೇ ಹೆಚ್ಚು ಬಟಾಟೆಯನ್ನು ಉತ್ಪಾದಿಸುವುದು ಆಫ್ರಿಕದ ಅತ್ಯಂತ ಎತ್ತರವಾದ ಶಿಖರ ಕಿಲಿಮಾಂಜರೊ ಮತ್ತು ಅತ್ಯಂತ ತಗ್ಗು ಪ್ರದೇಶ ಅಸಲ್ (ಜಿಬೋಟಿ) ಸರೋವರವಾಗಿದೆ. ನೈಲ್ ನದಿ: ನೈಲ್ ನದಿಯು ಜಗತ್ತಿನ ಅತ್ಯಂತ ಉದ್ದವಾದ ನದಿ. ಇದು 6,650 ಕಿ.ಮೀ ಉದ್ದ ಹರಿಯುತ್ತದೆ. ಕಾಂಗೋ ನದಿ: ಕಾಂಗೋ ಅಥವಾ ಜೈರೆ ನದಿಯು ಆಫ್ರಿಕದ ಎರಡನೆಯ ಉದ್ದವಾದ ನದಿ. ಪ್ರಸಿದ್ಧ ಲಿವಿಂಗ್ಸ್ಟನ್ ಜಲಪಾತವನ್ನು ನಿರ್ಮಿಸುತ್ತದೆ. ಜಾಂಬೆಜಿ ನದಿ: ವಿಕ್ಟೋರಿಯ ಜಲಪಾತಲಿಬಿಯಾದ ಇಲ್ ಅಜಿಜಿಯಾದಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಉಷ್ಣಾಂಶ 500 ಸೆಲ್ಸಿಯಸ್ ದಾಖಲಾಗುತ್ತz. ಆಫ್ರಿಕದಲ್ಲಿ ಬೆಅಬ್ಯಾಬ್ ಎಂಬ ಮರ ಇದೆ. ಇದು ಬಾಟಲಿ ಆಕಾರದಲ್ಲಿ ಇದ್ದು ಇದರ ಕಾಂಡವು ನೀರನ್ನು ಹಿಡಿದಿಡಲು ಉಬ್ಬಿಕೊಂಡಿರುತ್ತದೆ. ಇದು 1000ದಿಂದ 12000 ಲೀಟರ್ ನೀರನ್ನು ಹಿಡಿದಿಡಬಲ್ಲದು. ನೀರು ಬೇಕಾದ ಪ್ರಯಾಣಿಕರು ಕೆಲವು ಸಲ ಈ ಮರದ ನೀರನ್ನು ಬಳಸುತ್ತಾರೆ ಪಿಗ್ಮಿಗಳು ಪ್ರಪಂಚದಲ್ಲಿಯೇ ಅತಿ ಗಿಡ್ಡ ಜನರಾಗಿದ್ದಾರೆ. ಅವರು ಕಾಂಗೋ ಕಣಿವೆಯಲ್ಲಿ ವಾಸಿಸುತ್ತಾರೆ.
ಕಾರ್ಬೋಹೈಡ್ರೇಟ್ಗಳು :ಕಾರ್ಬೋಹೈಡ್ರೇಟ್ಗಳನ್ನು ಸಾಮಾನ್ಯವಾಗಿ ಸಕ್ಕರೆಗಳು (sugಚಿಡಿs) ಅಥವಾ ಸಾಕರೈಡ್ಗಳು (sಚಿಛಿಛಿhಚಿಡಿiಜes) ಎನ್ನುವರು. ಇವು ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ಗಳಿಂದ ಕೂಡಿª ಕಾರ್ಬೋಹೈಡ್ರೇಟ್ಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಮೋನೋಸಾಕರೈಡ್ಗಳು, ಆಲಿಗೋಸಾಕರೈಡ್ಗಳು ಮತ್ತು ಪಾಲಿಸಾಕರೈಡ್ಗಳು ಗ್ಲೂಕೋಸ್ ಮತ್ತು ಫ್ರಕ್ಟೋಸ್ಗಳನ್ನು ಮೋನೋ ಸಾಕರೈಡ್ಗಳು(moಟಿosಚಿಛಿಛಿhಚಿಡಿiಜes) ಎನ್ನುವರು. ಗ್ಯಾಲಕ್ಟೋಸ್(gಚಿಟಚಿಛಿಣose) ಎಂಬ ಇನ್ನೊಂದು ವಿಧವಾದ ಸಕ್ಕರೆಯು ಇದೇ ಗುಂಪಿಗೆ ಸೇರುತ್ತದೆ. ಇವುಗಳು ಆರು ಕಾರ್ಬನ್ ಪರಮಾಣು(ಚಿಣom)ಗಳನ್ನು ಹೊಂದಿರುತ್ತವೆ. ಆದ್ದರಿಂದ ಇವುಗಳನ್ನು ಹೆಕ್ಸೋಸ್ ಸಕ್ಕರೆಗಳು(hexose sugಚಿಡಿs) ಎನ್ನುವರು. ಐದು ಕಾರ್ಬನ್ ಅಣುಗಳಿರುವ ಸಕ್ಕರೆಗಳಿಗೆ ಪೆಂಟೋಸ್ಗಳು(ಠಿeಟಿಣose) ಎನ್ನುವರು. ಲ್ಯಾಕ್ಟೋಸ್ ಮತ್ತು ಸುಕ್ರೋಸ್ ಇವೆರಡೂ ಡೈಸಾಕರೈಡ್(ಜisಚಿಛಿಛಿhಚಿಡಿiಜe) ಗಳಿಗೆ ಉದಾಹರಣೆಗಳಾಗಿವೆ. ಧಾನ್ಯಗಳಲ್ಲಿರುವ ಮಾಲ್ಟೋಸ್(mಚಿಟಣose) ಕೂಡಾ ಒಂದು ಡೈಸಾಕರೈಡ್ ಆಗಿದೆ. ಲ್ಯಾಕ್ಟೋಸ್(ಹಾಲಿನ ಸ ಕ್ಕರೆ) = ಗ್ಲೂಕೋಸ್ + ಗ್ಯಾಲಕ್ಟೋಸ್ ಸುಕ್ರೋಸ್(ಕಬ್ಬಿನ ಸಕ್ಕರೆ ಅಥವಾ = ಗ್ಲೂಕೋಸ್ + ಫ್ರಕ್ಟೋಸ್ ಅಡುಗೆ ಸಕ್ಕರೆ)ಮಾಲ್ಟೋಸ್(ಮಾಲ್ಟ್ ಸಕ್ಕರೆ) = ಗ್ಲೂಕೋಸ್ + ಗ್ಲೂಕೋಸ್ರಾಬರ್ಟ್ ಹುಕ್ ಎಂಬ ಆಂಗ್ಲ ವಿಜ್ಞಾನಿಯು ಜೀವಕೋಶಗಳನ್ನು ಕಂಡುಹಿಡಿದರು. ಆಸ್ಟ್ರಿಚ್ನ ಮೊಟ್ಟೆಯು ಸುಮಾರು 15 ಛಿm ಉದ್ದ, 13 ಛಿm ಅಗಲ ಮತ್ತು ಸುಮಾರು 2 ಞg ತೂಕವನ್ನು ಹೊಂದಿದ್ದು, ಅತ್ಯಂತ ದೊಡ್ಡ ಜೀವಕೋಶವಾಗಿದೆ.
ಥಿ ನರಕೋಶವು ಅತ್ಯಂತ ಉದ್ದವಾದ ಪ್ರಾಣಿ ಜೀವಕೋಶವಾಗಿದ್ದು, ಇದು ಸುಮಾರು 90 ಛಿm ಉದ್ದ ಇರುತ್ತದೆ. ಥಿ ಹೆಂಪ್(hemಠಿ) ಸಸ್ಯದ ಸ್ಕ್ಲೀರೆಂಖೈಮಾ ಎಳೆ (sಛಿಟeಡಿeಟಿಛಿhಥಿmಚಿ ಜಿbಡಿe)ಯು ಅತ್ಯಂತ ಉದ್ದವಾದ ಸಸ್ಯ ಜೀವಕೋಶವಾಗಿದ್ದು, ಇದು ಸುಮಾರು 100 ಛಿm ಉದ್ದ ಇರುತ್ತದೆ. ಥಿ ಮೈಕೋಪ್ಲಾಸ್ಮಾ (mಥಿಛಿoಠಿಟಚಿsmಚಿ) ಬ್ಯಾಕ್ಟೀರಿಯಾ ಕೋಶವು ಅತ್ಯಂತ ಸಣ್ಣ ಜೀವಕೋಶವಾಗಿದ್ದು,ಇದು 0.1 ಮೈಕ್ರೊಮೀಟರ್(µm) ನಿಂದ 0.25 ಮೈಕ್ರೊಮೀಟರ್ನಷ್ಟು ಗಾತ್ರವನ್ನು ಹೊಂದಿದೆ. ಸೂಕ್ಷ್ಮಜೀವಿಗಳನ್ನು ಮೊದಲಿಗೆ ಲೀವೆನ್ ಹಾಕ್ ಕಂಡುಹಿಡಿದರು.
ಜೀವಕೋಶವನ್ನು ರಾಬರ್ಟ್ ಹುಕ್ ಕಂಡುಹಿಡಿದರು. ಜೀವಕೋಶವು ಒಂದು ಜೀವಿಯ ಅತ್ಯಂತ ಚಿಕ್ಕ ಮೂಲ ಘಟಕ. ಪ್ರಾಚೀನ ಕೋಶಕೇಂದ್ರ ಸಹಿತ ಸರಳ ಜೀವಕೋಶಗಳನ್ನು ಹೊಂದಿರುವ ಜೀವಿಗಳಿಗೆ ಪೆÇ್ರೀಕ್ಯಾರಿಯೋಟ್ಗಳು ಎನ್ನುವರು. ನಿಜ ಕೋಶಕೇಂದ್ರ ಸಹಿತ ಸಂಕೀರ್ಣ ಜೀವಕೋಶಗಳನ್ನು ಹೊಂದಿರುವ ಜೀವಿಗಳಿಗೆ ಯೂಕ್ಯಾರಿಯೋಟ್ಗಳು ಎನ್ನುವರು
ವಿಜಯನಗರದ ಅರಸು ಮನೆತನಗಳು ವಿಜಯನಗರ ಸಾಮ್ರಾಜ್ಯವು ಸಂಗಮನ ಪುತ್ರರಾದ ಹರಿಹರ, ಬುಕ್ಕರಾಯ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪರಿಂದ ಸಾ.ಶ 1336ರಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಸ್ಥಾಪಿಸಲ್ಪಟ್ಟಿತು.
ಬಳ್ಳಾರಿ ಜಿಲ್ಲೆಯ ಹಂಪೆಯು ಇವರ ರಾಜಧಾನಿಯಾಗಿತ್ತು. ವರಾಹವು ರಾಜಲಾಂಛನವಾಗಿತ್ತು. ಸಂಗಮ ವಂಶ (ಸಾ.ಶ 1336-1485) ಹರಿಹರ ಮತ್ತು ಬುಕ್ಕ : ಹರಿಹರ (ಸಾ.ಶ 1336-57) ನು ಈ ಮನೆತನದÀ ಮೊದಲ ಅರಸ.ಈತನು ತುಂಗಭದ್ರಾ ನದಿ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದನು. ಬುಕ್ಕರಾಯ (ಸಾ.ಶ 1357-1377) ಅಧಿಕಾರಕ್ಕೆ ಬಂದನು. ಈತನ ಕಾಲದಲ್ಲಿ ಮಧುರೆಯ ಸುಲ್ತಾನನನ್ನು ಸೋಲಿಸಿದ ಬುಕ್ಕರಾಯನ ಪುತ್ರ ಕಂಪಣನು ಸಾಮ್ರಾಜ್ಯ ವಿಸ್ತರಿಸಿದನು. ಈ ದಿಗ್ವಿಜಯವನ್ನು ಕುರಿತು ಕಂಪಣನ ರಾಣಿ ಗಂಗಾದೇವಿ ಬರೆದ `ಮಧುರಾ ವಿಜಯಂ’ ಎಂಬ ಸಂಸ್ಕøತ ಕೃತಿಯಲ್ಲಿ ವಿವರಿಸಲಾಗಿದೆ. ಬುಕ್ಕನು ಕೊಂಡವೀಡಿನ ರೆಡ್ಡಿಗಳನ್ನು ಸೋಲಿಸಿ ಪೆನುಕೊಂಡ ಪ್ರದೇಶವನ್ನು ವಿಜಯನಗರದಲ್ಲಿ ಸೇರಿಸಿದನು. ಈತನು ಜೈನರು ಮತ್ತು ಶ್ರೀ ವೈಷ್ಣವರ ನಡುವಿನ ಧಾರ್ಮಿಕ ಕಲಹವನ್ನು ಶಮನಗೊಳಿಸಿ ಸರ್ವಧರ್ಮ ಸಮನ್ವಯತೆಯನ್ನು ಎತ್ತಿಹಿಡಿದ ಬಗ್ಗೆ ಸಾ.ಶÀ 1368 ರ ಶ್ರವಣಬೆಳಗೊಳ ಶಾಸನ ವಿವರಣೆ ನೀಡುತ್ತದೆ.
ಎರಡನೆಯ (ಪ್ರೌಢ) ದೇವರಾಯ (ಸಾ.ಶ 1424-1446) ಸಂಗಮ ವಂಶದ ಪ್ರಸಿದ್ದ ದೊರೆಯಾಗಿದ್ದ ಈತನ ಆಳ್ವಿಕೆಯು ವಿಜಯನಗರದಲ್ಲಿ ಮಹತ್ವದ ಕಾಲವಾಗಿದೆ. ಅಧಿಕಾರಕ್ಕೆ ಬಂದ ಮೇಲೆ ನುರಿತ ಬಿಲ್ಲುಗಾರರು ಹಾಗೂ ಕುದುರೆಗಳನ್ನು ಪಳಗಿಸುವ ಕಲೆಯಲ್ಲಿ ಪ್ರವೀಣರಾದ ಮುಸ್ಲಿಮರನ್ನು ಒಳಗೊಂಡಂತೆ ಹೊಸದಾಗಿ ಸೈನ್ಯವನ್ನು ಸಂಘಟಿಸಿದನುಈತನ ಆಸ್ಥಾನದಲ್ಲಿ ತೆಲುಗು ಕವಿ ಶ್ರೀನಾಥ, ಸಂಸ್ಕøತ ವಿದ್ವಾಂಸ ಡಿಂಡಿಮ ಮತ್ತು
ಕನ್ನಡ ಕವಿ ಹಾಗೂ ಮಂತ್ರಿಯಾಗಿದ್ದ ಲಕ್ಕಣ್ಣ ದಂಡೇಶ ಮುಂತಾದವರು ಆಶ್ರಯ ಪಡೆದಿದ್ದರುಪರ್ಷಿಯಾ ದೇಶದ ರಾಯಭಾರಿ ಅಬ್ದುಲ್ ರಜಾಕ್ನು ಪ್ರೌಢದೇವರಾಯನ ಕಾಲದಲ್ಲಿ ವಿಜಯನಗರವನ್ನು ಸಂದರ್ಶಿಸಿ “ವಿಜಯನಗರದಂತಹ ಸಂಪದ್ಭರಿತ ರಾಜಧಾನಿಯನ್ನು ನನ್ನ ಕಣ್ಣುಗಳು ಮೊದಲ ಬಾರಿ ನೋಡುತ್ತಿವೆ. ನಗರಕ್ಕೆ ಏಳು ಕೋಟೆಗಳ ಆವರಣವಿದೆ. ರಾಯನ ಸೇನೆ ಲಕ್ಷಾವಧಿ ಸಂಖ್ಯೆಯಲ್ಲಿದೆ” ಎಂದು ವರ್ಣಿಸಿದ್ದಾನೆ. ಈತನಿಗೆ ‘ಗಜಬೇಂಟೆಗಾರ’, ‘ಚತುಸಮುದ್ರಾಧೀಶ್ವರ’, ‘ಅರಿರಾಯವಿಭಾಡ’ ಎಂಬ ಬಿರುದುಗಳಿದ್ದವು. ಸಾಳುವ ವಂಶ (ಸಾ.ಶ 1485-1505) ಸಾ.ಶÀ 1485 ರಲ್ಲಿ ಅಧಿಕಾರಕ್ಕೆ ಬಂದ ಸಾಳುವ ನರಸಿಂಹನು 6 ವರ್ಷ ಆಡಳಿತ ನಡೆಸಿ ಸಾ.ಶ 1491 ರಲ್ಲಿ ಮರಣ ಹೊಂದಿದನು.
ತುಳುವ ವಂಶ (ಸಾ.ಶ 1505-1567) ಸಾ.ಶ 1505 ರಲ್ಲಿ ತುಳುವ ನರಸನಾಯಕನ ಮಗ ವೀರ ನರಸಿಂಹನು ತುಳುವ ಮನೆತನದ ಆಳ್ವಿಕೆ ಪ್ರಾರಂಭಿಸಿದನು. ಇವನು 1509ರಲ್ಲಿ ಮರಣ ಹೊಂದಿದ ನಂತರ ಅವನ ಸೋದರರಲ್ಲಿ ಕೃಷ್ಣದೇವರಾಯನು ಅಧಿಕಾರಕ್ಕೆ ಬಂದನು.
ಕೃಷ್ಣದೇವರಾಯ (ಸಾ.ಶ 1509-1529) ಸಾ.ಶ. 1510ರಲ್ಲಿ ಉಮ್ಮತ್ತೂರಿನ ಪಾಳೆಯಗಾರ ಗಂಗರಾಜನಿಂದ ಶಿವನಸಮುದ್ರ ಕೋಟೆಯನ್ನು ವಶಪಡಿಸಿಕೊಂಡನು. ನಂತರ ರಾಯಚೂರು ಕೋಟೆಯನ್ನು ಗೆದ್ದನು. ಬಿಜಾಪುರದ ಸುಲ್ತಾನನಿಂದ ಗೋವೆಯನ್ನು ವಶಪಡಿಸಿಕೊಳ್ಳುವಲ್ಲಿ ಪೋರ್ಚುಗೀಸರಿಗೆ ಸಹಾಯ ಮಾಡಿದನು. ಸಾ.ಶ. 1513 ರಲ್ಲಿ ಉದಯಗಿರಿ ಕೋಟೆಯನ್ನು, ಸಾ.ಶ. 1518 ಕಳಿಂಗದ ದೊರೆ ಗಜಪತಿ ಪ್ರತಾಪರುದ್ರನನ್ನು ಸೋಲಿಸಿ ರಾಜಧಾನಿ ಕಟಕ್ ಅನ್ನು ವಶಪಡಿಸಿಕೊಂಡನು ಹಾಗೂ ಗಜಪತಿಯ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದನು. ಬಹಮನಿ ರಾಜ್ಯದ ಪ್ರಧಾನಿ ಬಂಧಿಸಿಟ್ಟಿದ್ದ ರಾಜಪುತ್ರನನ್ನು ಬಿಡುಗಡೆಗೊಳಿಸಿ ಬೀದರಿನ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿದನು. ಅದಕ್ಕಾಗಿ ಕೃಷ್ಣದೇವರಾಯನು ‘ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದು ಧರಿಸಿದನು. ಸಾ.ಶ 1529 ರಲ್ಲಿ ಕೃಷ್ಣದೇವರಾಯನು ಮರಣ ಹೊಂದುವ ವೇಳೆಗೆ ವಿಜಯನಗರ ಸಾಮ್ರಾಜ್ಯ ನಾಲ್ಕೂ ದಿಕ್ಕುಗಳಲ್ಲಿ ವಿಸ್ತರಿಸಿತ್ತು. ಈತನ ಆಸ್ಥಾನಕ್ಕೆ ಭೇಟಿ ನೀಡಿದ ಡೊಮಿಂಗೊ ಪೆಯಸ್ “ಕೃಷ್ಣದೇವರಾಯನು ಸೌಮ್ಯ ಸ್ವಭಾವದ ವ್ಯಕ್ತಿತ್ವ ಹೊಂದಿದ್ದು, ದೃಢಕಾಯದವನಾಗಿದ್ದನು” ಎಂದಿದ್ದಾರೆ
ರಕ್ಕಸ ತಂಗಡಿ ಕದನ ಕೃಷ್ಣದೇವರಾಯನ ನಂತರ ಅಚ್ಯುತರಾಯ(ಸಾ.ಶ. 1530-1542) ಮತ್ತು ಸದಾಶಿವರಾಯರು (ಸಾ.ಶ. 1543-1565) ಆಳಿದರು. ಸದಾಶಿವರಾಯರು ಇನ್ನೂ ಅಪ್ರಾಪ್ತರಾಗಿದ್ದ ಕಾರಣ ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ಕೃಷ್ಣದೇವರಾಯನ ಅಳಿಯ ಅರವೀಡು ವಂಶದ ರಾಮರಾಯನು ವಹಿಸಿಕೊಂಡನುಸಾ.ಶ 1565 ಜನವರಿ 23 ರಂದು ದಖ್ಖನ್ ಸುಲ್ತಾನರ ಒಕ್ಕೂಟ ಸೈನ್ಯಕ್ಕೂ ಹಾಗೂ ವಿಜಯನಗರದ ಸೈನ್ಯಕ್ಕೂ ಕೃಷ್ಣಾ ನದಿಯ ದಂಡೆಯ ಮೇಲೆ ನಡೆದ ರಕ್ಕಸ ತಂಗಡಿ ಯುದ್ಧದಲ್ಲಿ ರಾಮರಾಯನು ಹತನಾದನು. ಗೆದ್ದ ಸುಲ್ತಾನರು ವಿಜಯನಗರವನ್ನು ಲೂಟಿ ಮಾಡಿದರು. ರಣರಂಗದಿಂದ ಪಲಾಯನಗೈದ ರಾಮರಾಯನ ಮಕ್ಕಳಾದ ತಿರುಮಲ ಮತ್ತು ವೆಂಕಟರು ಪೆನುಕೊಂಡಕ್ಕೆ ಓಡಿಹೋದರು. ಜಯನಗರವು ವಜ್ರದ ವ್ಯಾಪಾರಕ್ಕೆ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿತ್ತು. ಬಟ್ಟೆ ನೇಯುವುದು ಪ್ರಮುಖ ಕೈಗಾರಿಕೆಯಾಗಿತ್ತು. ಭಟ್ಕಳ, ಹೊನ್ನಾವರ, ಮಂಗಳೂರುಗಳು ಪ್ರಮುಖ ರೇವು ಪಟ್ಟಣಗಳಾಗಿದ್ದವು. ಹೊನ್ನು ಅಥವಾ ವರಹ ಚಿನ್ನದ ನಾಣ್ಯವಾಗಿತ್ತು. ಸಂಸ್ಕøತ ಭಾಷೆಯಲ್ಲಿ ವಿದ್ಯಾರಣ್ಯರು ‘ಶಂಕರ ವಿಜಯ’ ಮತ್ತು
‘ಸರ್ವದರ್ಶನ ಸಂಗ್ರಹ’ ಕೃತಿಗಳನ್ನು ಬರೆದರು. ವಿದ್ಯಾರಣ್ಯರ ಸಹೋದರ ಸಾಯಣಾಚಾರ್ಯರು
‘ವೇದಾರ್ಥಪ್ರಕಾಶ’ ಮತ್ತು ‘ಆಯುರ್ವೇದ ಸುಧಾನಿಧಿ’ ಗ್ರಂಥಗಳನ್ನು ರಚಿಸಿದರು. ಗಂಗಾದೇವಿಯು ‘ಮಧುರಾ ವಿಜಯಂ’ ಎಂಬ ಕೃತಿಯನ್ನು, ಪ್ರೌಢದೇವರಾಯ ಮಹಾನಾಟಕ ‘ಸುಧಾನಿಧಿ'ಯನ್ನು, ಕೃಷ್ಣದೇವರಾಯನು ‘ಜಾಂಬವತಿ ಕಲ್ಯಾಣ’, ‘ಮದಾಲಸ ಚರಿತಂ’, ‘ರಸಮಂಜರಿ’ ಎಂಬ ಕೃತಿಗಳನ್ನು ರಚಿಸಿದರು. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕುಮಾರವ್ಯಾಸನ ‘ಗದುಗಿನ ಭಾರತ’, ರತ್ನಾಕರವರ್ಣಿಯ ‘ಭರತೇಶ ವೈಭವ’, ಚಾಮರಸನ ‘ಪ್ರಭುಲಿಂಗಲೀಲೆ’ ಮುಂತಾದವುಗಳು ಪ್ರಮುಖವಾದವುಗಳು. ಲಕ್ಕಣ್ಣ ದಂಡೇಶನು ‘ಶಿವತತ್ವ ಚಿಂತಾಮಣಿ’, ಭೀಮ ಕವಿಯ ‘ಬಸವಪುರಾಣ’ ಮುಂತಾದಕೃಷ್ಣದೇವರಾಯನು ತೆಲುಗು ಭಾಷಾ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ್ದರಿಂದ ಅವನಿಗೆ ‘ಆಂಧ್ರ ಭೋಜ’ ಎಂಬ ಬಿರುದು ಬಂದಿತು. ಸ್ವತ: ಕವಿಯಾಗಿದ್ದ ಕೃಷ್ಣದೇವರಾಯನು ತೆಲುಗಿನಲ್ಲಿಯೂ 'ಅಮುಕ್ತ ಮಾಲ್ಯದ' ಕೃತಿಯನ್ನು ರಚಿಸಿದ್ದಾನೆ. ಅಲ್ಲದೆ ತನ್ನ ಆಸ್ಥಾನದಲ್ಲಿ ಅಷ್ಟ ದಿಗ್ಗಜರೆಂದೇ ಪ್ರಖ್ಯಾತರಾಗಿದ್ದ ಅಲ್ಲಸಾನಿ ಪೆದ್ದಣ್ಣ, ನಂದಿ ತಿಮ್ಮಣ್ಣ, ಶ್ರೀನಾಥ, ಸೂರಣ್ಣ, ತೆನಾಲಿ ರಾಮಕೃಷ್ಣ ಮುಂತಾದವರಿಗೆ ಆಶ್ರಯದಾತನಾಗಿದ್ದನುಬುಕ್ಕರಾಯನು ಜೈನ ಮತ್ತು ವೈಷ್ಣವರ ನಡುವೆ ತಲೆದೋರಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿದನೆಂದು ಆತನ ಸಾ.ಶ. 1368ರ ಶ್ರವಣಬೆಳಗೊಳ ಶಾಸನ ತಿಳಿಸುತ್ತದೆ. ಪರ್ಸಿಬ್ರೌನ್À ವಿಜಯನಗರ ವಾಸ್ತುಶಿಲ್ಪ ಶೈಲಿಯನ್ನು ‘ದ್ರಾವಿಡ ಶೈಲಿಯ ಶ್ರೇಷ್ಠ ವಿಕಸಿತ ಸ್ವರೂಪ’ ಎಂದು ಬಣ್ಣಿಸಿದ್ದಾg
ಬಹಮನಿ ಆದಿಲ್ ಷಾಹಿಗಳು ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಸಾ.ಶ. 1336ರಲ್ಲಿ ಸ್ಥಾಪನೆಯಾಯಿತು. ತದನಂತರ ಸಾ.ಶ. 1347 ಆಗಸ್ಟ್ 3 ರಂದು ಅಸ್ತಿತ್ವಕ್ಕೆ ಬಂದ ಪ್ರಥಮ ಮುಸ್ಲಿಂ ಸಂತತಿ ಬಹಮನಿ ಸಾಮ್ರಾಜ್ಯವಾಗಿದೆ. ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನ್ಷಾ ಈ ಮನೆತನದ ಸ್ಥಾಪಕ. ಸಾ.ಶ 1527ರ ಹೊತ್ತಿಗೆÀ ಐದು ಷಾಹಿ ಮನೆತನಗಳು ಅಸ್ತಿತ್ವಕ್ಕೆ ಬಂದವು. ವಿಜಯನಗರ ಸಾಮ್ರಾಜ್ಯವು ಆರಂಭವಾದ ಕಾಲದಲ್ಲಿಯೇ ಆ ರಾಜ್ಯದ ಉತ್ತರ ಭಾಗದಲ್ಲಿ ಬಹಮನಿ ಸಾಮ್ರಾಜ್ಯವು 1347ರಲ್ಲಿ ಸ್ಥಾಪನೆಯಾಯಿತು. ಇದರ ಸ್ಥಾಪಕ `ಅಲ್ಲಾವುದ್ದಿನ್ ಹಸನ್ ಗಂಗು ಬಹಮನ್ ಷಾ'. ಬಹಮನ್ ಷಾ ಈ ಮೊದಲು ದೆಹಲಿಯ ಸುಲ್ತಾನನಾದ ಮಹಮ್ಮದ್ ಬಿನ್ ತುಘಲಕನ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಪ್ರಾರಂಭದಲ್ಲಿ ಕಲಬುರಗಿ ಅನಂತರ ಬೀದರ್ ಅದರ ರಾಜಧಾನಿಯಾಗಿತ್ತು. ಕೃಷ್ಣಾ ನದಿಯ ಉತ್ತರದಲ್ಲಿ ಬಹಮನಿ ಸಾಮ್ರಾಜ್ಯವಿದ್ದರೆ, ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯವಿದ್ದಿತು. ತಾಜುದ್ದೀನ್ ಫಿರೋಜ್ ಷಾ (ಸಾ.ಶ. 1397-1422) ಫಿರೋಜ್ಷಾನಿಗೆ ಜ್ಯಾಮಿತಿ ಮತ್ತು ಧರ್ಮಶಾಸ್ತ್ರಗಳಲ್ಲಿ ಪರಿಣತಿ ಇತ್ತು. ತನ್ನ ಹೆಸರಿನಲ್ಲಿ ಭೀಮಾ ನದಿಯ ದಂಡೆಯ ಬದಿಯಲ್ಲಿ “ಫಿರೋಜಾಬಾದ್” ಎಂಬ ಹೊಸ ನಗರವನ್ನು ಕಟ್ಟಿಸಿದನು. ಇವನ ಕಾಲದಲ್ಲಿ ರಾಜ್ಯಕ್ಕೆ ಬಂದಿದ್ದ ಸೂಫಿಸಂತ ಬಂದೇನವಾಜರಿಗೆ ಹಲವು ಗ್ರಾಮಗಳನ್ನು ಉಂಬಳಿಯಾಗಿ ನೀಡಿದನು.
ಮಹಮದ್ ಗವಾನ್ ( ಸಾ.ಶ. 1463 - 1481) ಸ್ವತಃ ವಿದ್ವಾಂಸನಾಗಿದ್ದ ಮಹಮದ್ ಗವಾನ್ ಬೀದರ್ನಲ್ಲಿ ಮದರಸಾ ( ಮಹಾವಿದ್ಯಾಲಯ) ಸ್ಥಾಪಿಸಿದನು. ಬಹಮನಿ ಕಾಲದ ಕಟ್ಟಡಗಳಲ್ಲಿ ಅತ್ಯಂತ ಪ್ರಮುಖ ರಚನೆಯೆಂದರೆ ಮಹಮದ್ ಗವಾನನು ಕಟ್ಟಿಸಿದ ಮದರಸ. ಇದು 242 ಅಡಿ ಉದ್ದ 222 ಅಡಿ ಅಗಲವಿದ್ದು 56 ಅಡಿ ಎತ್ತರವಾಗಿದ್ದು 3 ಅಂತಸ್ತಿನ (ಮಾಳಿಗೆಯ) ರಚನೆಯಾಗಿದೆ. ಈ ವಂಶದ ಕೊನೆಯ ಸುಲ್ತಾನ ಕಾಲಿಮಲ್ಲಾ ಷಾ. ಇವನ ಮರಣದ ನಂತರ ಬಹಮನಿ ರಾಜ್ಯ ಐದು ಷಾಹಿ ರಾಜ್ಯಗಳಾಗಿ ಒಡೆದು ಹೋಯಿತು.
1. ವಿಜಯಪುರ(ಬಿಜಾಪುರ)ದ ಆದಿಲ್ ಷಾಹಿ.
2. ಬೀದರ್ನ ಬರೀದ್ ಷಾಹಿ
3. ಗೋಲ್ಕಂಡದ ಕುತುಬ್ ಷಾಹಿ
4. ಅಹಮದ್ ನಗರದ ನಿಜಾಂ ಷಾಹಿ
5. ಬೀರಾರನ ಇಮಾದ್ ಷಾಹಿಯೂಸೂಫ್ ಆದಿಲ್ ಖಾನ್ನು ವಿಜಯಪುರದ ಆದಿಲ್ಷಾಹಿ ಮನೆತನದ ಸ್ಥಾಪಕನಾಗಿದ್ದನು.
ಎರಡನೇ ಇಬ್ರಾಹಿಂ ಆದಿಲ್ ಷಾ (ಸಾ.ಶ. 1580-1626) ಈತನಿಗೆ ‘ಜಗದ್ಗುರು ಬಾದಾಷಾ’ ಎಂಬ ಬಿರುದು ಇತ್ತು. ಉರ್ದು ಭಾಷೆಯಲ್ಲಿ “ಕಿತಾಬ್-ಇ- ನವರಸ್’’ ಎಂಬ ಪುಸ್ತಕವನ್ನು ಬರೆದು ಸಂಗೀತವನ್ನು ಮುಸಲ್ಮಾನರಲ್ಲಿ ಜನಪ್ರಿಯಗೊಳಿಸಲು ಯತ್ನಿಸಿದನು. ಈ ಕೃತಿ ಹಿಂದೂ ದೇವತೆಗಳಾದ ಸರಸ್ವತಿ, ಗಣಪತಿ, ಭೈರವ ಮುಂತಾದವರ ಸ್ತುತಿಯಿಂದ ಆರಂಭವಾಗುತ್ತದೆ. ಬೀದರ್ ಬರೀದ್ ಷಾಹಿ (ಸಾ.ಶ.1489-1619) ಖಾಸಿಂಬರೀದ್ ಎಂಬುವನು ಈ ಮನೆತನದ ಸ್ಥಾಪಕನಾಗಿದ್ದನು ಗೋಲ್ಕಂಡದ ಕುತಬ್ ಷಾಹಿ (ಸಾ.ಶ.1512-1687) ಖುಲಿಕುತುಬ್ ಷಾ : ಈತನು ಸ್ವತಂತ್ರ ಗೋಲ್ಕಂಡ ರಾಜ್ಯದ ಸ್ಥಾಪಕನಾಗಿದ್ದಾನೆ.
ಅಹಮದ್ ನಗರದ ನಿಜಾಮ್ ಷಾಹಿ (ಸಾ.ಶ.1490-1636) ಸಾ.ಶ. 1490ರಲ್ಲಿ ಜುನ್ನಾರಿನ ಪ್ರಾಂತಾಧಿಕಾರಿಯಾಗಿದ್ದ ನಿಜಾಮ್ ಷಾಹಿ ರಾಜವಂಶದ ಮಲ್ಲಿಕ್ ಅಹಮದನು ಸ್ವತಂತ್ರವಾದ ಅಹಮದ್ ನಗರ ರಾಜ್ಯವನ್ನು ಸ್ಥಾಪಿಸಿದನು. ಗಗನ್ ಮಹಲ್ : ಸಾ.ಶ. 1620ರಲ್ಲಿ ಇಬ್ರಾಹಿಂ ಆದಿಲ್ಷಾ ಕಟ್ಟಿಸಿದನು. ಮೆಹತರ್ ಮಹಲ್ : ಇದು ಕೂಡ 3 ಅಂತಸ್ತಿನ ಅರಮನೆಯಾಗಿದೆ. ಇದನ್ನು ಸಹ ಎರಡನೇ ಇಬ್ರಾಹಿಂ ಆದಿಲ್ ಷಾ ನಿರ್ಮಿಸಿದನು. ಜಾಮೀ ಮಸೀದಿ: ಇದನ್ನು ಅಲಿ ಆದಿಲ್ಷಾನು ನಿರ್ಮಾಣ ಮಾಡಿದನು. ಇದು ಭವ್ಯವಾದ ಪ್ರಾರ್ಥನಾ ಭವನಕ್ಕೆ ಹೆಸರುವಾಸಿಯಾಗಿದೆ. ಇಬ್ರಾಹಿಂ ರೋಜಾ : ಇದನ್ನು ವಿಜಯಪುರದಲ್ಲಿ ಎರಡನೇ ಇಬ್ರಾಹಿಂ ಆದಿಲ್ಷಾಹ ತನ್ನ ಪತ್ನಿ ತಾಜ್ಬೇಗಂಳ ನೆನಪಿಗಾಗಿ ನಿರ್ಮಿಸಿದನು. ಇದನ್ನು “ದಕ್ಷಿಣ ಭಾರತದ ತಾಜ್ಮಹಲ್” ಎಂದು ವರ್ಣಿಸಲಾಗಿದೆ. ಗೋಲಗುಮ್ಮಟ : ರೋಜಾಕ್ಕೂ ಮೀರಿದ ಕಟ್ಟಡವನ್ನು ರಚಿಸಬೇಕೆಂದು ಮಹಮದ್ನು ವಿಜಯಪುರದಲ್ಲಿ ಗೋಲಗುಮ್ಮಟ ಎಂಬ ಸಮಾಧಿ ಮಂದಿರವನ್ನು ಸಾ.ಶ. 1656ರಲ್ಲಿ ನಿರ್ಮಿಸಿದನು.
ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ. ಆಂಡಾಳ್: ಇವರನ್ನು ಪೆರಿಯಾಳ್ವಾರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಆಂಡಾಳ್ರ ಮೂಲ ಹೆಸರು ಗೋದಾದೇವಿ. ಇವರು ಕೃಷ್ಣನ ಭಕ್ತರು. ಇವರು ‘ತಿರುಪ್ಪಾಮೈ' ಎಂಬ ಗ್ರಂಥ ರಚಿಸಿ ದೇವರಿಗೆ ಸಮರ್ಪಿಸಿದರು. ಅಕ್ಕಮಹಾದೇವಿ 12ನೇ ಶತಮಾನದಲ್ಲಿ ವಚನ ಚಳವಳಿಯಲ್ಲಿ ಭಾಗವಹಿಸಿದ ದಿಟ್ಟ ಮಹಿಳೆ ಅಕ್ಕಮಹಾದೇವಿ. ಕನ್ನಡ ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ. ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಅಕ್ಕಮಹಾದೇವಿ ಜನಿಸಿದರು. ಕೊನೆಯ ದಿನಗಳಲ್ಲಿ ಕಲ್ಯಾಣದಿಂದ ಶ್ರೀಶೈಲಕ್ಕೆ ತೆರಳುತ್ತಾರೆ. ಅಂತಿಮವಾಗಿ ಅಲ್ಲಿನ ಕದಳೀ ವನದಲ್ಲಿಶಿವೈಕ್ಯರಾಗುತ್ತಾರೆ.
ಪುರಂದರ ದಾಸರು (ಸಾ.ಶ. 1480-1564) ಪುರಂದರದಾಸರು ಇವರು ಕನ್ನಡ ದಾಸ ಸಾಹಿತ್ಯದ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದಾರೆ. ಪುರಂದರ ದಾಸರು ಪುರಂದರಗಡದಲ್ಲಿ ಜನಿಸಿದರು. ಇವರ ಮೂಲ ಹೆಸರು ಶ್ರೀನಿವಾಸ ನಾಯಕ. ತಂದೆ ವರದಪ್ಪ ನಾಯಕರು ಮತ್ತು ತಾಯಿ ಲೀಲಾವತಿ. ಇವರ ಪತ್ನಿ ಲಕ್ಷ್ಮೀಬಾಯಿ ಧರ್ಮನಿಷ್ಠ ಸ್ತ್ರೀಯಾಗಿದ್ದಳುಜಿಪುಣನೂ, ನಾಸ್ತಿಕನೂ ಆದ ಶ್ರೀನಿವಾಸ ನಾಯಕ ಭಗವಂತನಪರೀಕ್ಷೆಯಲ್ಲಿ ಸೋತು ತನ್ನೆಲ್ಲ ಸಂಪತ್ತನ್ನು ತ್ಯಾಗ ಮಾಡಿ ಪರಮಾತ್ಮನ ನಾಮ ಸ್ಮರಣೆಯಲ್ಲಿ ತೊಡಗಿದರು. ಇವರು ಕೀರ್ತನೆಗಳನ್ನು ಹಾಡುತ್ತ ಅನೇಕ ಊರುಗಳನ್ನು ಸುತ್ತಿ ಕೃಷ್ಣದೇವರಾಯನ ಆಸ್ಥಾನವನ್ನು ಸೇರಿದರು. ಅಲ್ಲಿ ವ್ಯಾಸರಾಯರು ಇವರಿಗೆ ದೀಕ್ಷೆಯನ್ನು ಕೊಟ್ಟು “ಪುರಂದರ” ಎಂದು ನಾಮಕರಣ ಮಾಡಿದರು. ಇವರನ್ನು “ಕರ್ನಾಟಕ ಸಂಗೀತ ಪಿತಾಮಹ” ಎಂದು ಕರೆಯುತ್ತಾರೆ. ‘ಪುರಂದರ ವಿಠ್ಠಲ' ಎಂಬ ಅಂಕಿತದಿಂದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. "ದಾಸರೆಂದರೆ ಪುರಂದರ ದಾಸರಯ್ಯಾ" ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದ ಹೊಗಳಿಸಿಕೊಂಡಿದ್ದಾರೆ.
ಕನಕದಾಸರು (ಸುಮಾರು ಸಾ.ಶ. 1508 - 1606) ಕನಕದಾಸರು ದಾಸ ಸಾಹಿತ್ಯದ ಒಬ್ಬ ಪ್ರಮುಖ ಕೀರ್ತನಕಾರರಾಗಿದ್ದ ಕನಕದಾಸರು ಸುಮಾರು ಸಾ.ಶ. 1508ರಲ್ಲಿ ಹಾವೇರಿ ಜಿಲ್ಲೆಯ ಬಂಕಾಪುರ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದರು. ಇವರ ಮೂಲ ಹೆಸರು ತಿಮ್ಮಪ್ಪ. ಬೀರಪ್ಪ ಮತ್ತು ಬಚ್ಚಮ್ಮ ಇವರ ತಂದೆ- ತಾಯಿಗಳು. `ಆದಿಕೇಶವ' ಇವರ ಅಂಕಿತನಾಮವಾಗಿದೆ. ಕಾಗಿನೆಲೆಯ ಆದಿಕೇಶವ ಇವರ ಇಷ್ಟದೈವ.
ಕನಕನ ಕಿಂಡಿ : ಉಡುಪಿಯ ದೇವಾಲಯದ ಒಳಗೆ ಕನಕದಾಸರಿಗೆ ಪ್ರವೇಶವನ್ನು ಅಲ್ಲಿನ ಪುರೋಹಿತರು ನಿರಾಕರಿಸುತ್ತಾರೆ. ಆಗ ಕನಕದಾಸರ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣನು ಪಶ್ಚಿಮಾಭಿಮುಖನಾಗಿ ತಿರುಗಿ ಕಿಂಡಿಯ ಮೂಲಕ ದರ್ಶನ ಕೊಟ್ಟನೆಂದು ಐತಿಹ್ಯವಿದೆ.
ಕನಕದಾಸರು ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯ ಚರಿತೆ ಎಂಬ ಷಟ್ಪದಿ ಕಾವ್ಯಗಳನ್ನೂ ಮೋಹನ ತರಂಗಿಣಿ ಎಂಬ ಸಾಂಗತ್ಯ ಕೃತಿಯನ್ನೂ ರಚಿಸಿದ್ದಾರೆ.
ಶಿಶುನಾಳ ಶರೀಫ ಶಿಶುನಾಳ ಶರೀಫರು ಕನ್ನಡದ ಮೊದಲ ಮುಸ್ಲಿಂ ಅನುಭಾವಿ ಕವಿ. ಇವರನ್ನು `ಕರ್ನಾಟಕದ ಕಬೀರ' ಎಂದು ಕರೆಯುತ್ತಾರೆ.
ಕಬೀರದಾಸ್ (ಸಾ.ಶ. 1398-1518) ಕಬೀರದಾಸ್ ಭಕ್ತಿಪಂಥದ ಪ್ರಸಿದ್ಧ ಸಂತರಾದ ಕಬೀರ್ ರಾಮಾನಂದರ ಶಿಷ್ಯರು. ಇವರು ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯವನ್ನು ತರಲು ಪ್ರಯತ್ನಿಸಿದರು. ಕಬೀರರು ತಮ್ಮ ತತ್ವಗಳನ್ನು ಜನರಿಗೆ, ಅರ್ಥವಾಗುವಂತೆ ‘ದೋಹ’ (ಎರಡು ಸಾಲಿನ ಪದ್ಯ) ಗಳೆಂಬ ಸಣ್ಣ ಕಾವ್ಯಗಳಲ್ಲಿ ಬೋಧಿಸಿದರು. ಇವರ ಅನುಯಾಯಿಗಳನ್ನು ಕಬೀರ್ ಪಂಥಿಗಳೆಂದು ಕರೆಯುತ್ತಾರೆ.
ಗುರುನಾನಕರು (ಸಾ.ಶ.1469 - 1539) ಗುರುನಾನಕರು ಗುರುನಾನಕರು ಸಿಖ್ ಧರ್ಮದ ಸಂಸ್ಥಾಪಕರು. ಇವರು ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ತಲವಾಂಡಿ ಗ್ರಾಮದಲ್ಲಿ 1469ರಲ್ಲಿ ಜನಿಸಿದರು. ಮೆಹ್ತಕೌಲ ಮತ್ತು ತೃಪ್ತಾ ಇವರ ತಂದೆ-ತಾಯಿಗಳು. ಅವರು ಹಿಂದೂ-ಮುಸ್ಲಿಂ ಮತಗಳ ಸಮಾನ ಅಂಶಗಳನ್ನು ಒತ್ತಿ ಹೇಳಿದರು. “ಗ್ರಂಥ ಸಾಹಿಬ್” ಎಂಬ ಸಿಖ್ಖರ ಪವಿತ್ರ ಗ್ರಂಥದಲ್ಲಿ ಅವರ ಜಪಜಿಗಳು ಎಂದು ಕರೆಯಲಾಗುವ ಹಾಡುಗಳಿವೆ. ಅವರು ಬೀದರಿನಲ್ಲಿ ತಂಗಿದ್ದ ಸ್ಥಳವನ್ನು “ನಾನಕ್ ಝರಾ” (ಸಿಹಿ ನೀರಿನ ಬುಗ್ಗೆ) ಎಂದು ಕರೆಯುತ್ತಾg ಮೀರಾಬಾಯಿ ( ಸಾ.ಶ. 1498 - 1569) ಮೀರಾಬಾಯಿ “ಕಲಿಯುಗದ ರಾಧ” ಎಂದು ಕರೆಯಲಾಗುವ ಸಂತ ಮೀರಾಬಾಯಿ ಭಾರತದ ಮಹಾನ್ ಕೀರ್ತನಕಾರ್ತಿ ಆಗಿದ್ದರು. ಚೈತನ್ಯರು (ಸಾ.ಶ. 1485-1533) ಚೈತನ್ಯರು ಚೈತನ್ಯರು ಪಶ್ಚಿಮ ಬಂಗಾಳದ ನವದ್ವೀಪ (ನಾಡಿಯಾ) ದಲ್ಲಿ ಸಾ.ಶ.1485ರಲ್ಲಿ ಜನಿಸಿದರು. ಜಗನ್ನಾಥ ಮಿಶ್ರಾ ಮತ್ತು ಶÀಚಿದೇವಿ ಇವರ ತಂದೆ-ತಾಯಿಗಳು. ವಿಶ್ವಂಭರ ಎಂಬುದು ಚೈತನ್ಯರ ಮೊದಲ ಹೆಸರು. ಈಶ್ವರಿಪುರಿ ಇವರ ಗುರುಗಳಾಗಿದ್ದರು.
ಸೂಫಿ ಪರಂಪರೆ: ಸೂಫಿ ಪಂಥವು ಅರೇಬಿಯಾದಲ್ಲಿ ಉದಯಿಸಿ ಭಾರತವನ್ನು ಪ್ರವೇಶಿಸಿತುಸೂಫಿ ಎಂಬ ಪದವು ‘ಸಾಫ್’ ಎಂಬ ಪದದಿಂದ ಬಂದಿದೆ. ಸಾಫ್ ಎಂದರೆ ಶುದ್ಧಿ ಅಥವಾ ಶುಚಿ ಎಂದು ಅರ್ಥ ಬರುತ್ತದೆ. ನಿಜಾಮುದ್ಧೀನ್ ಔಲಿಯ ಇವರು ಭಾರತದ ಪ್ರಮುಖ ಸೂಫಿ ಸಂತರು. ಇವರು ದಿಲ್ಲಿಯಲ್ಲಿ ನೆಲೆಸಿ ಬಡತನದ ಜೀವನ ನಡೆಸಿದರು ಖ್ವಾಜಾ ಬಂದೇನವಾಜ್ ಬಂದೇನವಾಜ್ರು ಪ್ರಸಿದ್ಧ ಚಿಸ್ತಿ ಸೂಫಿ ಸಂತರು. ಇವರು ದೆಹಲಿಯ ನಾಸಿರುದ್ದೀನನ ಶಿಷ್ಯರು. ಬಂದೇನವಾಜ್ ಎಂದರೆ ‘ಮೊರೆಹೊಕ್ಕವರನ್ನು ಪೊರೆಯುವವರು' ಎಂದು ಅರ್ಥ. ಇವರಿಗೆ ಗೇಸುದರಾಜ್ ಎಂದು ಇನ್ನೊಂದು ಹೆಸರು. ಗೇಸುದರಾಜ್ ಎಂದರೆ ‘ಉದ್ದ ಕೂದಲಿನವನು' ಎಂದರ್ಥ. ಇವರ ಮೂಲ ಹೆಸರು ಸೈಯದ್ ಮಹಮದ್ ಹುಸೈನಿ. ಇವರಿಗೆ ಸಂಸ್ಕøತ, ಅರಬೀ, ಪಾರಸಿ, ದಖನಿ (ಉರ್ದು) ಹೀಗೆ ಅನೇಕ ಭಾಷೆಗಳು ಬರುತ್ತಿದ್ದವು. ಇವರು ಕಲಬುರಗಿಗೆ ಬಂದು ನೆಲೆಸಿದರು. ದೊರೆ ಫಿರೋಜ್ ಷಾ ಇವರಿಗೆ ತುಂಬಾ ಗೌರವ ನೀಡುತ್ತಿದ್ದನು. ಇವರು ದಖನಿ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ.
ನಾಯಕರು, ಪಾಳೆಯಗಾರರು ಮತ್ತು ನಾಡ ಪ್ರಭುಗಳು ಕೆಳದಿಯ ನಾಯಕರು (ಸಾ.ಶ. 1499-1763) ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಅನೇಕ ಚಿಕ್ಕಪುಟ್ಟ ಅರಸರಿದ್ದರು. ಇವರೇ ನಾಯಕರು ಅಥವಾ ಪಾಳೆಯಗಾರರು. ವಿಜಯನಗರ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ರಾಜ್ಯವು ಸಾ.ಶ. 1499 ರಲ್ಲಿ ಸ್ಥಾಪನೆಗೊಂಡು ಮುಂದೆ ಅದು ಸ್ವತಂತ್ರಗೊಂಡಿತು. ಕೆಳದಿಯ ನಾಯಕರು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಆಳುತ್ತಿದ್ದರು. ವೆಂಕಟಪ್ಪ ನಾಯಕನು ಕೆಳದಿ ಅರಸರಲ್ಲೇ ಅತ್ಯಂತ ಪ್ರಖ್ಯಾತನಾಗಿದ್ದನು. ಇವನ ಕಾಲದಲ್ಲಿ ಕೆಳದಿ ರಾಜ್ಯವು ಪೂರ್ಣ ಸ್ವತಂತ್ರವಾಯಿತು. ಈತನು ಕರಾವಳಿಯಲ್ಲಿ ಚಂದ್ರಗಿರಿ ನದಿಯವರೆಗೆ ವಿಜಯಯಾತ್ರೆ ಮಾಡಿದನು. ಉಳ್ಳಾಲದ ರಾಣಿ ಅಬ್ಬಕ್ಕಳ ನೆರವಿನಿಂದ ಪೋರ್ಚುಗೀಸರನ್ನು ಮಂಗಳೂರಿನಲ್ಲಿ ಈತನು ಸೋಲಿಸಿದನು.
ಶಿವಪ್ಪ ನಾಯಕ (ಸಾ.ಶ. 1645-1660) ಶಿವಪ್ಪ ನಾಯಕ ಕೆಳದಿಯ ಪ್ರಸಿದ್ದ ಅರಸನಾಗಿದ್ದನು. ಇವನು ಕರಾವಳಿಯ ಪೊರ್ಚುಗೀಸರ ಕೋಟೆಗಳನ್ನು ವಶಪಡಿಸಿಕೊಂಡು ‘ಪಡುಗಡಲೊಡೆಯ’ ಎನಿಸಿದನು. ಶಿವಪ್ಪ ನಾಯಕನ ಸಿಸ್ತು : ಶಿವಪ್ಪ ನಾಯಕನು ಆಳವಡಿಸಿದ ಕಂದಾಯ ವ್ಯವಸ್ಥೆಯನ್ನು ‘ಸಿಸ್ತು’ ಎಂದು ಕರೆಯಲಾಗಿದೆ.
ರಾಣಿ ಚನ್ನಮ್ಮಾಜಿ (1671-1696) : ಶಿವಪ್ಪ ನಾಯಕನ ಅನಂತರ ಅವನ ಸೊಸೆ ರಾಣಿ ಚನ್ನಮ್ಮಾಜಿ ರಾಜ್ಯವಾಳಿದಳು. ಈಕೆಯು ಮೊಗಲರ ಸೈನ್ಯವನ್ನು ಹೆಮ್ಮಟ್ಟಿಸಿ ಶಿವಾಜಿಯ ಮಗ ಛತ್ರಪತಿ ರಾಜರಾಮನಿಗೆ ರಕ್ಷಣೆ ನೀಡಿದಳು.
ಚಿತ್ರದುರ್ಗದ ನಾಯಕರು ಮತ್ತಿ ತಿಮ್ಮಣ್ಣನಾಯಕ (ಸಾ.ಶ. 1568-1589) ಈ ಸಂಸ್ಥಾನದ ಮೊದಲ ಅರಸ.
ಯಲಹಂಕ ನಾಡಪ್ರಭುಗಳು: ಯಲಹಂಕ ನಾಡಪ್ರಭುಗಳ ಮನೆತನದ ಸ್ಥಾಪಕ ರಣಭೈರೇಗೌಡ. ಹಿರಿಯ ಕೆಂಪೇಗೌಡ (ಸುಮಾರು ಸಾ.ಶ. 1532-1597) : ಹಿರಿಯ ಕೆಂಪೇಗೌಡ ಬೆಂಗಳೂರು ನಗರವನ್ನು ಸಾ.ಶ 1537ರಲ್ಲಿ ಸ್ಥಾಪಿಸಿದನುಧರ್ಮಪ್ರಭುವಾಗಿ ಆಳಿದ ಇವನಿಗೆ ‘ಪ್ರಜಾವತ್ಸಲ’ ಎಂಬ ಬಿರುದಿತು
ಇಮ್ಮಡಿ ಕೆಂಪೇಗೌಡ (ಸುಮಾರು ಸಾ.ಶ. 1597-1641) : ಇಮ್ಮಡಿ ಕೆಂಪೇಗೌಡನು ಹಿರಿಯ ಕೆಂಪೇಗೌಡನ ಮಗ. ಇವನ ಕಾಲದಲ್ಲಿ ವಿಜಯಪುರದ ಆದಿಲ್ ಷಾಹಿಗಳ ದಂಡನಾಯಕನಾದ ರಣದುಲ್ಲಾಖಾನ್ ಸಾ.ಶ 1638ರಲ್ಲಿ ಬೆಂಗಳೂರನ್ನು ವಶಪಡಿಸಿಕೊಂಡನು. ಮುಮ್ಮಡಿ ಕೆಂಪೇಗೌಡನು (ಸುಮಾರು ಸಾ.ಶ. 1641-1674) ನಾಡಿಗೆ ಬರಗಾಲ ಬಂದಿತೆಂದು ಕೆಂಪಸಾಗರ ಎಂಬ ಕೆರೆಯನ್ನು ನಿರ್ಮಾಣ ಮಾಡಿಸಿದನು. ಇಮ್ಮಡಿ ಹಿರಿಯ ಕೆಂಪೇಗೌಡನು (ಸುಮಾರು ಸಾ.ಶ. 1641-1662) ವೀರನು ಮಾತ್ರವಲ್ಲ, ಬಹುಭಾಷಾ ಪಂಡಿತನಾಗಿದ್ದನು. ಇವನಿಗೆ 'ನವ ಕವಿತಾ ಗುಂಭಪುಂಭವಾಣಿ' ಎಂಬ ಬಿರುದಿತ್ತು. ಇಮ್ಮಡಿ ಕೆಂಪೇಗೌಡನು ಕಟ್ಟಿಸಿದ ಕಾವಲು ಗೋಪುರಗಳು ಇಲ್ಲಿವೆ: ಉತ್ತರದಲ್ಲಿ-ಮೇಖ್ರಿವೃತ್ತ; ದಕ್ಷಿಣದಲ್ಲಿ-ಲಾಲ್ಬಾಗ್; ಪೂರ್ವದಲ್ಲಿ-ಅಲಸೂರು; ಮತ್ತು ಪಶ್ಚಿಮದಲ್ಲಿ-ಗವಿಗಂಗಾಧರೇಶ್ವರ.
ಮೈಸೂರು ಒಡೆಯರು ಪ್ರಮುಖ ಮೈಸೂರು ಒಡೆಯರು ಯದುರಾಯ ಮೈಸೂರು ಒಡೆಯರ ಮೊದಲ ದೊರೆ (ಸಾ.ಶ. 1399-1423). ರಾಜ್ಯದ ಲಾಂಛನ ಗಂಡಭೇರುಂಡ. ಒಡೆಯರ ಆರಂಭಿಕ ರಾಜಧಾನಿ ಶ್ರೀರಂಗಪಟ್ಟಣವಾಗಿತ್ತು
ಚಿಕ್ಕದೇವರಾಜ ಒಡೆಯರು (ಸಾ.ಶ. 1673-1704) ಆರಂಭಿಕ ಅರಸರಲ್ಲಿ ಚಿಕ್ಕದೇವರಾಜ ಒಡೆಯರು ಪ್ರಮುಖರು. ಇವರು ಜನಮುಖಿ ಸಾಧನೆಗಳನ್ನು ಮಾಡಿದರು. ಚಿಕ್ಕದೇವರಾಜ ಒಡೆಯರು ಹದಿನೆಂಟು ಶಾಖೆಗಳುಳ್ಳ ‘ಅಠಾರ’ ಕಛೇರಿಯನ್ನು ತೆರೆದರು ಶ್ರೀರಂಗಪಟ್ಟಣದ ಬಳಿ ಪಶ್ಚಿಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿ ಕೃಷಿಗೆ ನೀರು ಒದಗಿಸಿದರು. ಇವರು ಆಡಳಿತದಲ್ಲಿ ಮಿತವ್ಯಯ ಜಾರಿಗೆ ತಂದು, ರಾಜ್ಯದ ಭಂಡಾರವನ್ನು ಶ್ರೀಮಂತಗೊಳಿಸಿ ‘ನವಕೋಟಿ ನಾರಾಯಣ’ ಎಂಬ ಬಿರುದಿಗೆ ಪಾತ್ರರಾದರು.
ಹೈದರಾಲಿ (ಸಾ.ಶ. 1761 -1782) ಹೈದರಾಲಿಯು ದಳವಾಯಿ ನಂಜರಾಜಯ್ಯನ ಸೇನೆಯಲ್ಲಿದ್ದmಸಮರ್ಥ ಸೇನಾನಿಯಾಗಿದ್ದನು. ಶೂರನೂ, ಸಾಹಸಿಯೂ ಆಗಿದ್ದನು. ಯುದ್ಧಗಳಲ್ಲಿ ಜಯಗಳಿಸಿ ಹಂತಹಂತವಾಗಿ ತನ್ನ ಸೇನಾಬಲ ಮತ್ತು ಧನಬಲವನ್ನು ಹೆಚ್ಚಿಸಿಕೊಂಡನು. ಹೀಗೆ ರಾಜನ ಗೌರವಕ್ಕೆ ಪಾತ್ರನಾದನು. ಮೊದಲನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೈದರಾಲಿಯ ಆಕ್ರಮಣದಿಂದ ಬ್ರಿಟಿಷರು ಅಪಾರ ಹಾನಿಗೊಳಗಾದರು. ಅನಿವಾರ್ಯವಾಗಿ ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಮುಂದಾದರು. ಮದ್ರಾಸ್ ಒಪ್ಪಂದದ ಮುಖ್ಯ ತಿರುಳೆಂದರೆ, ಹೈದರಾಲಿ ಅಥವಾ ಬ್ರಿಟಿಷರ ಮೇಲೆ ಯಾವುದೇ ಶತೃ ರಾಜ್ಯ ಆಕ್ರಮಣ ಮಾಡಿದಲ್ಲಿ ಪರಸ್ಪರ ರಾಜ್ಯಗಳು ನೆರವಿಗೆ ಧಾವಿಸಬೇಕು ಎಂಬುದಾಗಿತ್ತು. ಈ ಒಪ್ಪಂದವು ಹೈದರಾಲಿಯ ಘನತೆಯನ್ನು ಹೆಚ್ಚಿಸಿತು ಹೈದರಾಲಿಗೆ ಕರ್ನಾಟಕ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಬೆಂಗಳೂರಿನ ಸುಂದರ ಉದ್ಯಾನವನ ಲಾಲ್ಬಾಗ್ ಇವನಿಂದಲೇ ಆರಂಭವಾಯಿತು
ಟಿಪ್ಪು ಸುಲ್ತಾನ್ (ಸಾ.ಶ. 1782-1799) ಹೈದರಾಲಿಯ ಮಗನೇ ಟಿಪ್ಪು ಸುಲ್ತಾನ್. ತನ್ನ ತಂದೆಯ ಕಾಲದ ಯುದ್ಧಗಳಲ್ಲಿ ಪಾಲ್ಗೊಂಡು ವಿಜಯವನ್ನು ಗಳಿಸಿದ ಟಿಪ್ಪು ಸುಲ್ತಾನ್ ಧೀರ ತರುಣನಾಗಿದ್ದನು. ತನ್ನನ್ನು ಸುಲ್ತಾನನೆಂದು ಘೋಷಿಸಿಕೊಂಡನು. ತಂದೆಯ ಮರಣಾನಂತರ ಆಗ ನಡೆಯುತ್ತಿದ್ದ ಎರಡನೇ ಆಂಗ್ಲೋಮೈಸೂರು ಯುದ್ಧವನ್ನು ಟಿಪ್ಪು ಮುಂದುವರೆಸಿದನು. ಆತನ ಸಹಾಯಕ್ಕೆ ಯಾರೂ ಬರಲಿಲ್ಲ. ಟಿಪ್ಪು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಿದನು. ಅಂತಿಮವಾಗಿ ಬ್ರಿಟಿಷರು ‘ಮಂಗಳೂರು ಶಾಂತಿ ಒಪ್ಪಂದ’ ಮಾಡಿಕೊಂಡರು. ಮೂರನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಆಕ್ರಮಣ ಮಾಡುತ್ತಾ ರಾಜಧಾನಿಯಾದ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದರು. ಬೇರೆ ಮಾರ್ಗ ತೋಚದೆ ಟಿಪ್ಪು ಬ್ರಿಟಿಷರೊಡನೆ ಶ್ರೀರಂಗಪಟ್ಟಣ ಶಾಂತಿ ಒಪ್ಪಂದ ಮಾಡಿಕೊಂಡನು. ಶಾಂತಿ ಒಪ್ಪಂದದಂತೆ ಇವನು ತನ್ನ ಅರ್ಧರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದನು. ಯುದ್ಧ ನಷ್ಟವಾಗಿ 330 ಲಕ್ಷ ರೂಪಾಯಿ ಪರಿಹಾರ ಧನವನ್ನು ಅವರಿಗೆ ನೀಡಬೇಕಾಯಿತು. ಅದನ್ನು ಕೊಡುವವರೆಗೆ ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಾಳಾಗಿ ಕೊಡಬೇಕಾಯಿತು ಯುದ್ಧದ ಪರಿಣಾಮವಾಗಿ ಟಿಪ್ಪು ಅವಮಾನಗೊಂಡನು. ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ದೃಢಸಂಕಲ್ಪ ಮಾಡಿದನು. ಇದು ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧಕ್ಕೆ ನಾಂದಿಯಾಯಿತು. ಯುದ್ಧದಲ್ಲಿ ಶ್ರೀರಂಗಪಟ್ಟಣವು ಮುತ್ತಿಗೆಗೊಳಗಾಯಿತು. ಟಿಪ್ಪು ವೀರಾವೇಶದಿಂದ ಹೋರಾಡುತ್ತಲೇ 1799ರಲ್ಲಿ ಅಸುನೀಗಿದನು. ಟಿಪ್ಪುವು ‘ಮೈಸೂರಿನ ಹುಲಿ’ಯೆಂದು ಪ್ರಸಿದ್ಧನಾಗಿದ್ದಾ£ ಬೆಂಗಳೂರಿನ ಅರಮನೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ (ದರಿಯಾ ದೌಲತ್) ನಿರ್ಮಾಣವನ್ನು ಟಿಪ್ಪು ಮಾಡಿಸಿದನು. ರೇಷ್ಮೆ ವ್ಯವಸಾಯವನ್ನು ರಾಜ್ಯದಲ್ಲಿ ವ್ಯಾಪಕವಾಗಿ ಜನಪ್ರಿಯಗೊಳಿಸಿದ್ದು ಅವನ ಮುಖ್ಯ ಸಾಧನೆಯಾಗಿದೆ. ಫ್ರೆಂಚ್ ಅಧಿಕಾರಿಗಳ ನೆರವಿನಿಂದ ತನ್ನ ಸೈನ್ಯವನ್ನು ಆಧುನಿಕವಾಗಿ ಸಜ್ಜುಗೊಳಿಸಿದನು. ಶ್ರೀರಂಗಪಟ್ಟಣದಲ್ಲಿ ಫಿರಂಗಿಗಳನ್ನು ಎರಕ ಹೊಯ್ಯುತ್ತಿದ್ದರು. ಟಿಪ್ಪು ರಾಕೆಟ್ ಬಳಸುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡದ್ದು ಒಂದು ವಿಶೇಷ.
ಮುಮ್ಮಡಿ ಕೃಷ್ಣರಾಜ ಒಡೆಯರು (ಸಾ.ಶ. 1799-1831) ಮುಮ್ಮಡಿ ಕೃಷ್ಣರಾಜ ಒಡೆಯರು
ಟಿಪ್ಪು ಸುಲ್ತಾನನ ಮರಣದೊಂದಿಗೆ ಮೈಸೂರು ಇತಿಹಾಸದಲ್ಲಿ ಹೋರಾಟದ ಯುಗವು ಮುಕ್ತಾಯಗೊಂಡಿತು. ಬ್ರಿಟಿಷರು ಮೈಸೂರು ಸಂಸ್ಥಾನವನ್ನು ವಶಪಡಿಸಿಕೊಂಡು ನಾಲ್ಕು ಭಾಗಗಳಾಗಿ ವಿಭಾಗಿಸಿ ಬ್ರಿಟಿಷರು ಮತ್ತು ಅವರ ಮಿತ್ರರಾದ ಮರಾಠರು ಹಾಗೂ ನಿಜಾಮರು ಮೂರು ಭಾಗಗಳನ್ನು ಹಂಚಿಕೊಂಡರು. ಉಳಿದ ಒಂದು ಭಾಗವನ್ನು ಮೈಸೂರಿನ ಒಡೆಯರಿಗೆ ಬಿಟ್ಟುಕೊಟ್ಟರು. ಅಲ್ಲದೆ, ಮುಮ್ಮಡಿ ಕೃಷ್ಣರಾಜ ಒಡೆಯರÀನ್ನು ಅಧಿಕಾರಕ್ಕೆ ತಂದರು. ಕೃಷ್ಣರಾಜರು ಇನ್ನೂ ಐದು ವರ್ಷದ ಬಾಲಕನಾಗಿದ್ದರಿಂದ ಆಡಳಿತವನ್ನು ಪೂರ್ಣಯ್ಯನವರಿಗೆ ವಹಿಸಿ ದಿವಾನರನ್ನಾಗಿ ನೇಮಿಸಲಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರು ಶಿವಮೊಗ್ಗ ಜಿಲ್ಲೆಯ ನಗರ (ಬಿದನೂರು) ಪ್ರದೇಶದಲ್ಲಿ ದಂಗೆಯನ್ನು ಸರಿಯಾಗಿ ಹತ್ತಿಕ್ಕಲಿಲ್ಲವೆಂಬ ಕಾರಣದಿಂದ ಬ್ರಿಟಿಷರು 1831 ರಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಮೈಸೂರು ಸಂಸ್ಥಾನದಲ್ಲಿ ಕಮೀಷನರ್ ಆಡಳಿತವನ್ನು ಜಾರಿಗೆ ತಂದರು.
ಕಮೀಷನರುಗಳ ಆಡಳಿತ (ಸಾ.ಶ. 1831-1881) ಮಾರ್ಕ್ಕಬ್ಬನ್ (ಸಾ.ಶ. 1834-1861) ಮಾರ್ಕ್ ಮಾರ್ಕ್ಕಬ್ಬನ್ ಕಬ್ಬನ್ಮಾರ್ಕ್ಕಬ್ಬನ್ ರಾಜ್ಯದಲ್ಲಿ ಅನೇಕ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದರು. ಇವರು ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದರು. ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳನ್ನು ಉತ್ತಮವಾಗಿ ಸಂಘಟಿಸಲಾಯಿತು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಲಾಯಿತು 1859 ರಲ್ಲಿ ಬೆಂಗಳೂರು ಹಾಗೂ ಜೋಲಾರಪೇಟೆ ಮಧ್ಯೆ ರೈಲು ಮಾರ್ಗವನ್ನು ಹಾಕಲಾರಂಭಿಸಿದರು. ಇದು ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗವಾಗಿತ್ತು. ಲೂಯಿ ಬೆಂಥಾಮ್ ಬೌರಿಂಗ್ (ಸಾ.ಶ. 1862-1870)
ಹತ್ತನೆಯ ಚಾಮರಾಜ ಒಡೆಯರು (ಸಾ.ಶ. 1881-1894) ಹತ್ತನೆಯ ಚಾಮರಾಜ ಒಡೆಯರು 1881 ರಲ್ಲಿ ಹತ್ತನೆಯ ಚಾಮರಾಜ ಒಡೆಯರಿಗೆ ಬ್ರಿಟಿಷರು ರಾಜ್ಯವನ್ನು ಪುನಃ ವಹಿಸಿಕೊಟ್ಟರು. ಇದನ್ನು ಪುನರ್ದಾನ ಎನ್ನುವರು. ಹತ್ತನೆಯ ಚಾಮರಾಜ ಒಡೆಯರ ಕೈಕೆಳಗೆ ಸಿ. ರಂಗಾಚಾರ್ಲು ಹಾಗೂ ಕೆ. ಶೇಷಾದ್ರಿ ಐಯ್ಯರ್ರವರು ದಿವಾನರಾಗಿ ಆಡಳಿತ ನಿರ್ವಹಿಸಿದರು. ಹತ್ತನೆಯ ಚಾಮರಾಜರ ಕಾಲದಲ್ಲಿ 'ಪ್ರಜಾಪ್ರತಿನಿಧಿ ಸಭೆ'ಯು (1881) ಆರಂಭವಾಯಿತು
ನಾಲ್ವಡಿ ಕೃಷ್ಣರಾಜ ಒಡೆಯರು (ಸಾ.ಶ. 1902-1940) ಇವರು ಅಧಿಕಾರಕ್ಕೆ ಬಂದಾಗ (1895) ಕೇವಲ ಹನ್ನೊಂದು ವರ್ಷದ ಬಾಲಕರಾದ್ದರಿಂದ ತಾಯಿ ಕೆಂಪ ನಂಜಮ್ಮಣ್ಣಿಯವರು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. 1902ರಿಂದ ನಾಲ್ವಡಿ ಅವರ ನೇರ ಆಳ್ವಿಕೆ ಆರಂಭವಾಗುತ್ತದೆ. ಉತ್ತಮ ಶಿಕ್ಷಣ ಪಡೆದ ಇವರು ಮೈಸೂರು ಸಂಸ್ಥಾನವನ್ನು ತಮ್ಮ ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಮಾದರಿ ಸಂಸ್ಥಾನವಾಗಿ ರೂಪಿಸಿದರು. ದೂರದರ್ಶಿತ್ವವುಳ್ಳವರೂ, ದೀನದಲಿತರ ಬಗೆಗೆ ಕಳಕಳಿ ಹೊಂದಿದ್ದವರೂ ಆಗಿದ್ದರು. ಸಮಾಜದ ಎಲ್ಲಾ ವರ್ಗದವರಿಗೂ ಆಡಳಿತದಲ್ಲಿ ಅವಕಾಶ ಕಲ್ಪಿಸುವ ಸಲುವಾಗಿ ಶಿಫಾರಸ್ಸುಗಳನ್ನು ಪಡೆಯಲು ಮಿಲ್ಲರ್ ಆಯೋಗ ರಚಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರÀ ಪ್ರಮುಖ ಸಾಧನೆಗಳು ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಮುಖ ಸಾಧನೆಗಳು ಈ ಕೆಳಕಂಡಂತಿವೆ: • ಜೆ.ಎನ್. ಟಾಟಾ ಅವರು ಬೆಂಗಳೂರಿನಲ್ಲಿ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು 371 ಎಕರೆ ಭೂಮಿ ಹಾಗೂ ಐದು ಲಕ್ಷಕ್ಕೂ ಅಧಿಕ ಮೊತ್ತದ ಧನ ಸಹಾಯ ನೀಡಿದರು. • 1907ರಲ್ಲಿ `ನ್ಯಾಯ ವಿಧಾಯಕ ಸಭೆ'ಯನ್ನು ಸ್ಥಾಪಿಸಿ ಜನಪ್ರತಿನಿಧಿಗಳ ಮೂಲಕ ಜನರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ಕಲ್ಪಿಸಿದರು. • ಇಂದಿನ ಮೈಸೂರು ಅರಮನೆಯನ್ನು 1910ರಲ್ಲಿ ಪೂರ್ಣಗೊಳಿಸಿದರು. • ಕೃಷ್ಣರಾಜಸಾಗರ (ಕೆ.ಆರ್.ಎಸ್) ಅಣೆಕಟ್ಟನ್ನು ನಿರ್ಮಾಣ ಮಾಡಿಸುವ ಮೂಲಕ ಸಂಸ್ಥಾನದಲ್ಲಿ ಕೃಷಿ ಅಭಿವೃದ್ಧಿಪಡಿಸಿದರು.
• 1911ರಲ್ಲಿ ಮೈಸೂರು ಸಂಪತ್ ಅಭ್ಯುದಯ ಪರಿಷತ್ತು (ದಿ ಮೈಸೂರು ಎಕನಾಮಿಕ್ ಕಾನ್ಫರೆನ್ಸ್) ಪ್ರಾರಂಭಿಸಿದರು. ನಾಲ್ವಡಿ ಅವರ ಮೈಸೂರು ಸಂಸ್ಥಾನವನ್ನು ಮಹಾತ್ಮ ಗಾಂಧೀಜಿ ಅವರು `ರಾಮರಾಜ್ಯ'ವೆಂದು ಬಣ್ಣಿಸಿದರು. ನಾಲ್ವಡಿ ಅವರನ್ನು `ರಾಜರ್ಷಿ' ಎಂದು ಕರೆದರು. ಮೈಸೂರು ಅರಮನೆಯನ್ನು ಹೊಸದಾಗಿ 1910 ರಲ್ಲಿ ಕಟ್ಟಲಾಯಿತು. ಇದಕ್ಕೂ ಮೊದಲಿದ್ದ ಮರದ ಅರಮನೆ ಅಗ್ನಿಗೆ ಆಹುತಿಯಾಗಿ ಭಸ್ಮಗೊಂಡಿತು. ಹೊಸ ಅರಮನೆಯ ನಿರ್ಮಾಣಕಾರ್ಯಕ್ಕೆ ದೇಶವಿದೇಶಗಳಿಂದ ಕುಶಲಕರ್ಮಿಗಳು ಬಂದಿದ್ದರು. ಅರಮನೆಯ ಸಭಾಂಗಣವನ್ನು (ದರ್ಬಾರ್ ಹಾಲ್) ಪ್ರಸಿದ್ಧ ಚಿತ್ರಕಲಾಕಾರ ರಾಜಾರವಿವರ್ಮ ಶೃಂಗರಿಸಿದರು. ಕೃಷ್ಣರಾಜ ಸಾಗರ (ಕೆ.ಆರ್.ಎಸ್.) ಅಣೆಕಟ್ಟನ್ನು ನಿರ್ಮಿಸುವಾಗ ನಾಲ್ವಡಿ ಕೃಷ್ಣರಾಜರಿಗೆ ಹಣಕಾಸಿನ ಸಮಸ್ಯೆ ಉಂಟಾಯಿತು.ಆಗ ರಾಜಪರಿವಾರದವರ ಚಿನ್ನಾಭರಣಗಳನ್ನು ಬಾಂಬೆಯ ಚಿನಿವಾರ ಪೇಟೆಯಲ್ಲಿ ಮಾರಾಟಮಾಡಿ, ಬಂದ ಹಣದಲ್ಲಿ ಅಣೆಕಟ್ಟಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿದರು.
ಸರ್. ಎಂ. ವಿಶ್ವೇಶ್ವರಯ್ಯ (ಸಾ.ಶ. 1912-1918)‘ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ’ ಎಂದು ಪರಿಗಣಿಸಲ್ಪಟ್ಟವರು ಸರ್.ಎಂ. ವಿಶ್ವೇಶ್ವರಯ್ಯ. ಕೈಗಾರೀಕಿಕರಣ ಇಲ್ಲವೆ ವಿನಾಶ’ ಎಂಬುದು ಸರ್. ಎಂ. ವಿಶ್ವೇಶ್ವರಯ್ಯನವರ ಪ್ರಸಿದ್ಧ ಘೋಷಣೆಯಾಗಿತ್ತು. ಭದ್ರಾವತಿಯಲ್ಲಿನ ಕಬ್ಬಿಣದ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ, ಕೇಂದ್ರ ಕೈಗಾರಿಕಾ ಕಾರ್ಯಗಾರ, ಚರ್ಮ ಹದ ಮಾಡುವ ಕಾರ್ಖಾನೆ ಹಾಗೂ ಲೋಹದ ಕೈಗಾರಿಕೆಗಳನ್ನು ಆರಂಭಿಸಲಾಯಿತು. ವ್ಯಾಪಾರ ಹಾಗೂ ವಾಣಿಜ್ಯಕ್ಕೆ ಪ್ರೋತ್ಸಾಹ ನೀಡಲು ಬೆಂಗಳೂರಿನಲ್ಲಿ ಮೈಸೂರು ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯನ್ನು ಸ್ಥಾಪಿಸಲಾಯಿತು. ವ್ಯಾಪಾರ ಮತ್ತು ವಾಣಿಜ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಲಾಯಿತು.
ಪ್ರತಿಯೊಂದು ದೇಶದ ಪ್ರಗತಿಯು ಮುಖ್ಯವಾಗಿ ಜನರ ಶಿಕ್ಷಣದ ಮೇಲೆ ಅವಲಂಭಿತವಾಗಿರುತ್ತದೆ ಎಂದು ಸರ್.ಎಂ. ವಿಶ್ವೇಶ್ವರಯ್ಯನವರು ನಂಬಿದ್ದರು.
ಇವರು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಿದರು. ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಲಾಯಿತು. ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಶಾಲೆಯೊಂದನ್ನು ಸ್ಥಾಪಿಸಿದರು. 1916 ರಲ್ಲಿ ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯ ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಅತ್ಯಂತ ಮಹತ್ತರ ಸಾಧನೆಯಾಗಿದೆ. 1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಲಾಯಿತು.
ಕೃಷ್ಣರಾಜ ಸಾಗರ ಆಣೆಕಟ್ಟೆಯ ನಿರ್ಮಾಣ ಕಾರ್ಯ ವಿಶ್ವೇಶ್ವರಯ್ಯನವರ ಕಾಲದಲ್ಲಿ ಮುಂದುವರೆದು 1932ರ ಹೊತ್ತಿಗೆ ಪೂರ್ಣಗೊಂಡಿತು. ಮೈಸೂರು-ಅರಸೀಕೆರೆ ಮತ್ತು ಬೌರಿಂಗ್ಪೇಟೆ-ಕೋಲಾರ ರೈಲ್ವೆ ಮಾರ್ಗಗಳನ್ನು ಹಾಕಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ ಹಲವು ದೂರದರ್ಶಿತ್ವದ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದವರು ಸರ್.ಎಂ. ವಿಶ್ವೇಶ್ವರಯ್ಯನವರು. ಅಂತಿಮವಾಗಿ 1918ರಲ್ಲಿ ವಿಶ್ವೇಶ್ವರಯ್ಯನವರು ದಿವಾನ ಪದವಿಗೆ ರಾಜೀನಾಮೆ ನೀಡಿದರು. ಬ್ರಿಟಿಷ್ ಸರಕಾರವು ಇವರ ಸೇವೆಗಾಗಿ ‘ಸರ್’ ಎಂಬ ಬಿರುದನ್ನು ನೀಡಿತು. 1955 ರಲ್ಲಿ ಭಾರತ ಸರ್ಕಾರವು ಇವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವಿಶ್ವೇಶ್ವರಯ್ಯನವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎಂಬುದು ಹೆಮ್ಮೆಯ ವಿಚಾರ.
ಸರ್. ಮಿರ್ಜಾ ಇಸ್ಮಾಯಿಲ್ (ಸಾ.ಶ. 1926-1941) ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಗಾಜಿನ ಕಾರ್ಖಾನೆ, ಪಿಂಗಾಣಿ ಪಾತ್ರೆ ಕಾರ್ಖಾನೆ, ಬೆಳಗೊಳದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, ಶಿವಮೊಗ್ಗದಲ್ಲಿ ಬೆಂಕಿಕಡ್ಡಿ ಕಾರ್ಖಾನೆ ಮತ್ತು ಭದ್ರಾವತಿಯಲ್ಲಿನ ಉಕ್ಕು ಹಾಗೂ ಕಾಗದ ಕಾರ್ಖಾನೆಗಳನ್ನು ಇವರು ಸ್ಥಾಪಿಸಿದರು. ಜಕ್ಕೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಿದರು. ಆಕಾಶವಾಣಿ (ರೇಡಿಯೋ) ಕೇಂದ್ರಗಳನ್ನು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಆರಂಭಿಸಿದರು. ಇವರು ಗ್ರಾಮೀಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಇರ್ವಿನ್ ಕಾಲುವೆ ನಿರ್ಮಿಸಿ ಮಂಡ್ಯ ಜಿಲ್ಲೆಯ ಕೃಷಿ ಭೂಮಿಗೆ ನೀರನ್ನು ಒದಗಿಸಲಾಯಿತು. ಮೈಸೂರನ್ನು ಹೂ ತೋಟಗಳು ಮತ್ತು ಉದ್ಯಾನವನಗಳ ನಗರವನ್ನಾಗಿಸಿದರು. ಕೃಷ್ಣರಾಜ ಸಾಗರ ಜಲಾಶಯದ ಹಿಂಭಾಗದಲ್ಲಿ ಬೃಂದಾವನ ಉದ್ಯಾನವನವನ್ನು ನಿರ್ಮಿಸಿದರು. ಬೆಂಗಳೂರಿನಲ್ಲಿ 'ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಶಸ್ತ್ರಚಿಕಿತ್ಸೆ ಸಂಸ್ಥೆ' (ನಿಮ್ಹಾನ್ಸ್), ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಆರಂಭಿಸಲಾಯಿತು. ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾರತ ಒಕ್ಕೂಟದಲ್ಲಿ ಮೈಸೂರು ಸಂಸ್ಥಾನ ಸೇರಬೇಕೆಂದು ಕೆ.ಸಿ.ರೆಡ್ಡಿ ಅವರ ನೇತೃತ್ವದಲ್ಲಿ ಅರಮನೆ ಸತ್ಯಾಗ್ರಹ ಆರಂಭವಾಯಿತು. ಈ ಸತ್ಯಾಗ್ರಹದ ಫಲವಾಗಿ ಜಯಚಾಮರಾಜ ಒಡೆಯರು ಭಾರತದ ಒಕ್ಕೂಟವನ್ನು ಸೇರಲು ಸಮ್ಮತಿಸಿದರು. ಪರಿಣಾಮವಾಗಿ ಕೆ.ಸಿ.ರೆಡ್ಡಿಯವರ ನೇತೃತ್ವದಲ್ಲಿ 1947 ಅಕ್ಟೋಬರ್ 24ರಂದು ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಜಯಚಾಮರಾಜ ಒಡೆಯರು ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ಕೆ.ಸಿ. ರೆಡ್ಡಿಯವರು ಮೈಸೂರು ರಾಜ್ಯದ ಮೊದಲ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.
ಚಿಕ್ಕದೇವರಾಜ ಒಡೆಯರು 1673-1704
ಹೈದರ್ ಅಲಿ 1761-1782
ಟಿಪ್ಪು ಸುಲ್ತಾನ್ 1782-1799
ಒಂದನೆಯ ಆಂಗ್ಲೋ ಮೈಸೂರು ಯುದ್ಧ 1767- 1769
ಎರಡನೆಯ ಆಂಗ್ಲೋ ಮೈಸೂರು ಯುದ್ಧ 1780- 1784
ಮೂರನೆಯ ಆಂಗ್ಲೋ ಮೈಸೂರು ಯುದ್ಧ 1790- 1792
ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧ 1799
ದಿಲ್ಲಿಯ ಸುಲ್ತಾನರು
ಭಾರತದ ಮೇಲೆ ಆರಂಭಿಕ ಮಧ್ಯಕಾಲದಲ್ಲಿ ದಾಳಿ ಮಾಡಿದ ಮೊದಲಿಗರೆಂದರೆ ಅರಬ್ಬರು. ಅರಬ್ಬರ ದಂಡು ಇಂದಿಗೆ 1300 ವರ್ಷಗಳ ಹಿಂದೆ ಸಿಂಧ್ ಮತ್ತು ಮುಲ್ತಾನ್ ಪ್ರಾಂತಗಳನ್ನು ವಶಪಡಿಸಿಕೊಂಡಿತು. ಟರ್ಕರ ದಾಳಿ: ಇದಾದ ಸುಮಾರು ಮೂರು ಶತಮಾನಗಳ ಅನಂತರ ಟರ್ಕಿ ಮೂಲದ ಮಹಮದ್ ಘಜನಿ ಭಾರತದ ಮೇಲೆ ದಾಳಿ ನಡೆಸಿದನು. ಅಫ್ಘಾನಿಸ್ತಾನದ ಘಜನಿ ಎಂಬ ಚಿಕ್ಕ ರಾಜ್ಯದ ಸುಲ್ತಾನನಾಗಿದ್ದ ಇವನು ಹದಿನೇಳು ಬಾರಿ ದಾಳಿ ನಡೆಸಿದನು. ಇದರ ಪರಿಣಾಮವಾಗಿ ಭಾರತದ ಹಲವಾರು ಸಂಪದ್ಭರಿತ ನಗರಗಳು ಸೂರೆಗೊಂಡವು.
ಮಹಮದ್ ಘೋರಿ: ಸಾ.ಶ. 12ನೆಯ ಶತಮಾನದ ಕೊನೆಯ ಭಾಗದಲ್ಲಿ ಅಫ್ಘಾನಿಸ್ತಾನದ ಮಹಮದ್ ಘೋರಿ ಭಾರತದ ಮೇಲೆ ದಾಳಿ ನಡೆಸಿ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡನು. ದಾಳಿ ಮುಂದುವರಿಯುತ್ತಿದ್ದಂತೆ ದಿಲ್ಲಿಯ ರಾಜ ಪೃಥ್ವೀರಾಜ್ ಚೌಹಾಣನು ಘೋರಿಯನ್ನು ಮೊದಲ ತರೈನ್ ಯುದ್ಧದಲ್ಲಿ ಸೋಲಿಸಿದನು. ಆದರೆ, ಮರುವರ್ಷ ಮತ್ತೆ ದಂಡೆತ್ತಿ ಬಂದ ಘೋರಿಯು ಎರಡನೆಯ ತರೈನ್ ಯುದ್ಧದಲ್ಲಿ ಪೃಥ್ವಿರಾಜನನ್ನು ಸೋಲಿಸಿ ಕೊಂದನು. ದಿಲ್ಲಿಯು ಘೋರಿಯ ವಶವಾಯಿತು.
ಗುಲಾಮಿ ಸಂತತಿ ಘೋರಿಯು ಗೆದ್ದುಕೊಂಡ ಪ್ರದೇಶಗಳನ್ನು ತನ್ನ ಸೇನಾನಿ ಕುತ್ಬುದ್ದೀನ್ ಐಬಕ್ ಎಂಬುವನಿಗೆ ಹಸ್ತಾಂತರಿಸಿದನು. ಘೋರಿಯ ಮರಣದ ನಂತರ ಕುತ್ಬುದ್ದೀನ್ ಐಬಕ್ ದಿಲ್ಲಿಯ ಸುಲ್ತಾನನಾಗಿ ಸ್ವತಂತ್ರ ಆಳ್ವಿಕೆ ಪ್ರಾರಂಭಿಸಿದನು. ದೆಹಲಿಯನ್ನು ಗುಲಾಮಿ, ಖಿಲ್ಜಿ, ತುಘಲಕ್, ಸಯ್ಯದ್ ಮತ್ತು ಲೂದಿ ಎಂಬ 5 ಸಂತತಿಗಳು ಆಳಿದವು.
ಕುತ್ಬುದ್ದೀನ್ ಐಬಕ್: ಕುತ್ಬುದ್ದೀನ್ ಪ್ರಾರಂಭದಲ್ಲಿ ಮಹಮದ್ ಘೋರಿಯ ಗುಲಾಮನಾಗಿದ್ದ. ಈ ಕಾರಣದಿಂದಾಗಿ ಇವನದು `ಗುಲಾಮಿ’ ಸಂತತಿ ಎಂದಾಯಿತು. ಇವನು ಶತ್ರುಗಳನ್ನು ಗೆದ್ದು, ಟರ್ಕರ ಆಳ್ವಿಕೆಯನ್ನು ಭದ್ರಗೊಳಿಸಿದನು. ತನ್ನ ವಿಜಯದ ದ್ಯೋತಕವಾಗಿ ದಿಲ್ಲಿಯ ಸಮೀಪದ ಮೆಹರೌಲಿ ಎಂಬಲ್ಲಿ ಕುತುಬ್ ಮಿನಾರಿನ ನಿರ್ಮಾಣಕಾರ್ಯ ಆರಂಭಿಸಿದನು. ಇಲ್ತಮಶ್ನ ಕಾಲದಲ್ಲಿ ಇದು ಪೂರ್ಣಗೊಂಡಿತು. ದಿಲ್ಲಿಯ ಸುಲ್ತಾನರ ಕಾಲದಲ್ಲಿ ಅಧಿಕಾರ ಸೂತ್ರವನ್ನು ಹಿಡಿದ ಏಕೈಕ ಮಹಿಳೆಯೆಂದರೆ ರಜಿಯಾ ಸುಲ್ತಾನಾ.
ಖಿಲ್ಜಿ ಸಂತತಿ ಅಲ್ಲಾವುದ್ದೀನ್ ಖಿಲ್ಜಿ : ಅಲ್ಲಾವುದ್ದೀನನು ಆಡಳಿತ, ಸೈನ್ಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದನು. ಅಗತ್ಯವಸ್ತುಗಳ ಮಾರಾಟದ ಮೇಲೆ ಹತೋಟಿಯಲ್ಲಿಟ್ಟುಕೊಂಡನು. ಮಾದಕ ಪದಾರ್ಥ ಸೇವನೆ, ಜೂಜಾಟಗಳನ್ನು ನಿಷೇಧ ಮಾಡಿದನು. ತಪ್ಪಿತಸ್ಥರೆಂದು ಕಂಡವರನ್ನು ಕ್ರೂರವಾಗಿ ದಂಡಿಸಿzಪ್ರಾರಂಭದಲ್ಲಿ ತನ್ನ ಸೈನಿಕ ಶಕ್ತಿಯಿಂದ ಉತ್ತರ ಭಾರತವನ್ನು ಗೆದ್ದುಕೊಂಡನು. ದಕ್ಷಿಣ ಭಾರತವನ್ನು ವಶಪಡಿಸಿಕೊಳ್ಳಲು ತನ್ನ ಆಪ್ತ ಗುಲಾಮನಾದ ಮಲ್ಲಿಕ್ ಕಾಫರ್ ಎಂಬ ಸೇನಾನಿಯನ್ನು ಭಾರಿ ಸೇನಾಪಡೆಯೊಂದಿಗೆ ಕಳುಹಿಸಿದನು. ಮಲ್ಲಿಕಾಫರ್ ದಕ್ಷಿಣ ಭಾರತದ ನಾಲ್ಕು ರಾಜ್ಯಗಳÀ ರಾಜಧಾನಿಗಳನ್ನು ಕೊಳ್ಳೆಹೊಡೆದನು. ಮಲ್ಲಿಕಾಫರ್ ಆಕ್ರಮಣ ಮಾಡಿದ ರಾಜ್ಯಗಳೆಂದರೆ: ಮಹಾರಾಷ್ಟ್ರದ ಯಾದವ (ರಾಜಧಾನಿ ದೇವಗಿರಿ), ಆಂಧ್ರದ ಕಾಕತೀಯ (ವಾರಂಗಲ್ಲು), ಕರ್ನಾಟಕದ ಹೊಯ್ಸಳ (ದ್ವಾರಸಮುದ್ರ) ಮತ್ತು ತಮಿಳುನಾಡಿನ ಪಾಂಡ್ಯ (ಮಧುರೆ). ಅಲ್ಲಾವುದ್ದೀನನು ಅಮೀರ್ ಖುಸ್ರು, ಅಮೀರ್ ಹಸನ್ ಮುಂತಾದ ಪರ್ಷಿಯನ್ ಕವಿಗಳನ್ನು ಪೆÇ್ರೀತ್ಸಾಹಿಸಿದ. ದಿಲ್ಲಿಯಲ್ಲಿ ‘ಸಿರಿ’ ಎಂಬ ರಾಜಧಾನಿಯನ್ನು ಕಟ್ಟಿಸಿದನು. ಅಲೈ ದರ್ವಾಜಾ ಇವನ ಭವ್ಯ ರಚನೆಯಾಗಿದೆ.
ತುಘಲಕರು ಮಹಮದ್ ಬಿನ್ ತುಘಲಕ್: ಆಡಳಿತ ಸುಧಾರಣೆಗಾಗಿ ಮಹಮದನು ಹಲವು ಪ್ರಯೋಗಗಳನ್ನು ನಡೆಸಿದನು. ಅವುಗಳಲ್ಲಿ ಮುಖ್ಯವಾದುದು ರಾಜಧಾನಿಯ ವರ್ಗಾವಣೆ. ದಿಲ್ಲಿಯ ಬದಲು ಭಾರತದ ಮಧ್ಯಭಾಗದಲ್ಲಿರುವ ದೇವಗಿರಿಯನ್ನು ರಾಜಧಾನಿಯನ್ನಾಗಿ ಮಾಡಿದರೆ ದಕ್ಷಿಣ ಭಾರತದ ಮೇಲೆ ನಿಯಂತ್ರಣ ಸಾಧಿಸಬಹುದು ಎಂಬುದು ಮಹಮದನ ನಂಬಿಕೆಯಾಗಿತ್ತು. ದಿಲ್ಲಿಯಿಂದ 700 ಮೈಲು ದೂರದಲ್ಲಿದ್ದ ದೇವಗಿರಿಗೆ ದೌಲತಾಬಾದ್ ಎಂದು ಹೆಸರಿಟ್ಟು, ದಿಲ್ಲಿಯ ಜನ ಅಲ್ಲಿಗೆ ಹೋಗಬೇಕೆಂದು ಕಟ್ಟಾಜ್ಞೆ ಹೊರಡಿಸಿದನು. ಆದರೆ ವಲಸೆ ಹೊರಟ ಜನ ಅನುಭವಿಸಿದ ಕಷ್ಟ-ನಷ್ಟ ಹೇಳತೀರದು. ಎಷ್ಟೋ ಜನ ದಾರಿಯಲ್ಲೇ ಮಡಿದರು. ತಾನು ಮಾಡಿದ್ದು ಪ್ರಮಾದವಾಯಿತೆಂದು ನಿಧಾನವಾಗಿ ಮನಗಂಡ ಅವನು ಜನರು ಮತ್ತೆ ದಿಲ್ಲಿಗೆ ಹಿಂದಿರುಗುವಂತೆ ಅಪ್ಪಣೆ ಮಾಡಿದನು. ಕೊನೆಗೆ ಬದುಕಿ ಉಳಿದು ದಿಲ್ಲಿಗೆ ಮರಳಿದವರು ಕೆಲವೇ ಮಂದಿ. ಖುಸ್ರು ಸಂಗೀತಗಾರನಾಗಿದ್ದು ತಬಲಾ, ಸಿತಾರ್ ಮುಂತಾದ ವಾದ್ಯಗಳನ್ನು ರೂಪಿಸಿದನು. ಜೈಸಿ ಎಂಬ ಕವಿ ಉರ್ದುವಿನಲ್ಲಿ `ಪದ್ಮಾವತ್’ ಎಂಬ ಸೂಫಿ ಕಾವ್ಯ ಬರೆದನು.
ಮೊಗÀಲರು 1526ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು, ದಿಲ್ಲಿ ಸುಲ್ತಾನರ ಆಳ್ವಿಕೆಯನ್ನು ಕೊನೆಗೊಳಿಸಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಭಾರತದ ಇತಿಹಾಸದಲ್ಲಿ ಮೂರು ಸಾಮ್ರಾಜ್ಯಗಳು ಪ್ರಸಿದ್ಧವಾದುವು. ಅವುಗಳಲ್ಲಿ ಒಂದು ಮೌರ್ಯ ಸಾಮ್ರಾಜ್ಯ ಮತ್ತೊಂದು ಗುಪ್ತ ಸಾಮ್ರಾಜ್ಯ. ಮೊಗದೊಂದು ಮೊಗಲ್ ಸಾಮ್ರಾಜ್ಯ. ಮೊಗÀÀಲ್ ರಾಜಮನೆತನದ ಸ್ಥಾಪಕ ಬಾಬರ್. ಆರಂಭದಲ್ಲಿ ಇವನು ಅಫ್ಘಾನಿಸ್ತಾನದ ಕಾಬೂಲ್ ಎಂಬ ಪುಟ್ಟ ಪ್ರದೇಶವನ್ನು ಆಳುತ್ತಿದ್ದ. ಬಾಬರ್: ದಿಲ್ಲಿಯ ಸುಲ್ತಾನರು ದುರ್ಬಲಗೊಳ್ಳುತ್ತಿದ್ದಂತೆ ಬಾಬರ್ ದಿಲ್ಲಿಯ ಇಬ್ರಾಹಿಂ ಲೂದಿಯ ಮೇಲೆ ದಂಡೆತ್ತಿ ಬಂದು ಅವನ ಆಳ್ವಿಕೆಯನ್ನು ಕೊನೆಗೊಳಿಸಿದನು. ನಂತರ ರಜಪೂತರು ಮತ್ತು ಅಫ್ಘನರನ್ನು ವೀರಯೋಧನಾಗಿದ್ದ ಬಾಬರ್ ತನ್ನ ಉತ್ತಮ ಶಸ್ತ್ರಾಸ್ತ್ರ ಬಲದಿಂದ ಎದುರಿಸಿ ಹಿಮ್ಮೆಟ್ಟಿಸಿದನು.
ಹುಮಾಯೂನ್: ಆರಂಭದಲ್ಲಿ ಹುಮಾಯೂನ್ ಶತ್ರುಗಳನ್ನು ಯುದ್ಧದಲ್ಲಿ ಸೋಲಿಸಿದನಾದರೂಅಫ್ಘನ್ ಸರದಾರನಾದ ಶೇರ್ಷಾ ಸೂರಿಯಿಂದ ಪರಾಜಯಗೊಂಡನು. ರಾಜ್ಯವನ್ನು ಕಳೆದುಕೊಂಡು ಪರ್ಷಿಯಕ್ಕೆ ಪಲಾಯನ ಮಾಡಿ ಅಲ್ಲಿ ಹದಿನೈದು ವರ್ಷಗಳ ಕಾಲವಿದ್ದನು.
ಅಕ್ಬರ್: ಹುಮಾಯೂನನ ಮಗನಾದ ಅಕ್ಬರ್ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟುವ ಆಕಾಂಕ್ಷೆಯುಳ್ಳವನಾಗಿದ್ದನು. ಈ ನಿಟ್ಟಿನಲ್ಲಿ ಕಲಿತನಕ್ಕೆ ಹೆಸರಾಗಿದ್ದ ರಜಪೂತ ಅರಸರನ್ನು ತನ್ನ ಪಕ್ಷದತ್ತ ಒಲಿಸಿಕೊಳ್ಳಲು ಯತ್ನಿಸಿದನು. ಅವರಲ್ಲಿ ಕೆಲವರು ಅಕ್ಬರನ ಪಕ್ಷ ವಹಿಸಿದರು. ಆದರೆ ಮೇವಾಡದ ರಾಣಾ ಪ್ರತಾಪಸಿಂಹನು ಅಕ್ಬರನಿಗೆ ಮಣಿಯಲಿಲ್ಲ. ಅವನು ಸ್ವಾಭಿಮಾನಿಯೂ ಮಹಾಶೂರನೂ ಆಗಿದ್ದನು. ಮುಂದೆ ಇವರ ನಡುವೆ ಹಾಲ್ಡಿಘಾಟ್ (ರಾಜಸ್ಥಾನ) ಎಂಬಲ್ಲಿ ಭೀಕರ ಕದನ ನಡೆಯಿತು. ಈ ಕದನದಲ್ಲಿ ರಾಣಾ ಪ್ರತಾಪಸಿಂಹನು ಸೋತನಾದರೂ ಕೊನೆಯವರೆಗೂ ಅಕ್ಬರನಿಗೆ ಶಿರಬಾಗಲಿಲಅವನು ನಿರಂಕುಶ ಪ್ರಭುವಾಗಿರಲಿಲ್ಲ. ಬಹುಸಂಖ್ಯಾತರಾದ ತನ್ನ ಹಿಂದು ಪ್ರಜೆಗಳ ವಿಶ್ವಾಸಗಳಿಸುವುದು ಅವಶ್ಯವೆಂದು ಮನಗಂಡನು. ಹಿಂದೂಗಳಿಗೆ ತನ್ನ ಆಸ್ಥಾನದಲ್ಲಿ ಉನ್ನತ ಹುದ್ದೆಗಳನ್ನು ನೀಡಿದನು. ಹಿಂದಿನ ಸುಲ್ತಾನರು ಹಿಂದೂಗಳ ಮೇಲೆ ವಿಧಿಸಿದ್ದ `ಜೆಸಿಯಾ’ (ಜಿಜಿಯಾ) ಎಂಬ ತಲೆಗಂದಾಯ ಹಾಗೂ ಯಾತ್ರಾ ತೆರಿಗೆಯನ್ನು ರದ್ದುಪಡಿಸಿದನು. ಅಕ್ಬರನು ಸತಿ ಪದ್ಧತಿಯನ್ನು ನಿಷೇಧಿಸಿದನು. ಬಾಲ್ಯ ವಿವಾಹವನ್ನು ವಿರೋಧಿಸಿದನು. ಅಕ್ಬರನ ಭೂಕಂದಾಯ ಪದ್ಧತಿ ಜನಮನ್ನಣೆಯನ್ನು ಗಳಿಸಿತು.
ಭೂಕಂದಾಯ ಪದ್ಧತಿಯನ್ನು ರೂಪಿಸಿದವನು ಮಂತ್ರಿಯಾಗಿದ್ದ ರಾಜಾ ತೋದರ್ಮಲ್. ಅಕ್ಬರನು ಧಾರ್ಮಿಕ ಸಹಿಷ್ಣುವಾಗಿದ್ದನು. ತನ್ನ ಹೊಸ ರಾಜಧಾನಿಯಾದ ಫತೇಪುರ್ ಸಿಕ್ರಿಯಲ್ಲಿ ‘ಇಬಾದತ್ ಖಾನಾ’ ಎಂಬ ಪ್ರಾರ್ಥನಾ ಮಂದಿರ ಕಟ್ಟಿಸಿದನು. ಇಲ್ಲಿ ಇಸ್ಲಾಂ, ಹಿಂದೂ, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಮುಂತಾದ ಧಾರ್ಮಿಕ ಮುಖಂಡರನ್ನೂ ಆಹ್ವಾನಿಸಿ ಧಾರ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದನು. ಈ ಚಿಂತನೆಗಳ ಫಲವಾಗಿ ಅಕ್ಬರ್ `ದೀನ್-ಇ-ಇಲಾಹಿ’ ಎಂಬ ತನ್ನದೇ ಆದ ಹೊಸ ಪಂಥವನ್ನು ಸ್ಥಾಪಿಸಿದನು. ಅದು ಎಲ್ಲ ಮತಧರ್ಮಗಳ ಉತ್ತಮ ಅಂಶಗಳನ್ನು ಒಳಗೊಂಡಿತ್ತು.
ಔರಂಗಜೇಬ ಷಹಜಹಾನನ ಮಗ ಔರಂಗಜೇಬ್ ಕೊನೆಯ ಪ್ರಸಿದ್ಧ ಮೊಗÀಲ ಸಾಮ್ರಾಟ ಔರಂಗಜೇಬನು ಸಂಪ್ರದಾಯವಾದಿ ಮುಸಲ್ಮಾನನಾಗಿದ್ದನು. ಮದ್ಯಪಾನ, ಜೂಜು, ಮೋಜು ಮತ್ತು ಸಂಗೀತಗಳಿಂದ ದೂರವಾಗಿದ್ದನು. ಈತನು ಸರಳ ಜೀವಿಯಾಗಿದ್ದನು ಔರಂಗಜೇಬನ ಮತೀಯ ಧೋರಣೆಯು ಸಿಖ್ಖರು, ಮರಾಠರು ಮತ್ತು ಜಾಟರನ್ನು ಕೆರಳಿಸಿತು. ಸಿಖ್ ಗುರು ತೇಜ್ ಬಹದ್ದೂರ್ನನ್ನು ದಿಲ್ಲಿಯಲ್ಲಿ ಬಹಿರಂಗವಾಗಿ ಕೊಲ್ಲಲಾಯಿತು. ಔರಂಗಜೇಬನ ಮತೀಯ ಧೋರಣೆಯು ಸಿಖ್ಖರು, ಮರಾಠರು ಮತ್ತು ಜಾಟರನ್ನು ಕೆರಳಿಸಿತು. ಸಿಖ್ ಗುರು ತೇಜ್ ಬಹದ್ದೂರ್ನನ್ನು ದಿಲ್ಲಿಯಲ್ಲಿ ಬಹಿರಂಗವಾಗಿ ಕೊಲ್ಲಲಾಯಿತು. ಅಕ್ಬರ್ನಾಮಾ’ ಅಬುಲ್ ಫಜಲನ ಪ್ರಮುಖ ಕೃತಿ. ಮೊಗÀಲ್ ರಾಜಕುಮಾರ ‘ದಾರಾ ಷುಕೋ’ ಶ್ರೇಷ್ಠ ವಿದ್ವಾಂಸನಾಗಿದ್ದು, ಭಗವದ್ಗೀತೆಯನ್ನು ಭಾಷಾಂತರ ಮಾಡಿದನು. ಹಿಂದಿ ಸಾಹಿತ್ಯವು ರಾಜಾಶ್ರಯ ಪಡೆಯದಿದ್ದರೂ ಸಂತರ ಯತ್ನದಿಂದ ಶ್ರೀಮಂತಗೊಂಡಿತು. ‘ರಾಮಚರಿತಮಾನಸ’ ಎಂಬ ತುಲಸೀದಾಸನ ಪ್ರಸಿದ್ಧ ಕೃತಿ ಇದೇ ಕಾಲದಲ್ಲಿ ರಚನೆಯಾಯಿತು ಮೊಗÀಲರ ಕಾಲದಲ್ಲಿ ನೂತನ ಚಿತ್ರಕಲಾ ಸಂಪ್ರದಾಯವೊಂದು ಹುಟ್ಟಿಕೊಂಡಿತು. ಇದನ್ನು ಚಿಕಣಿ ಎಂದು ಕರೆಯಲಾಗಿದೆ. ಅಕ್ಬರನ ಆಸ್ಥಾನದಲ್ಲಿ ನೂರಕ್ಕೂ ಹೆಚ್ಚು ಚಿತ್ರಕಾರರಿದ್ದರು. ಚಿತ್ರಕಲೆಯು ಜಹಾಂಗೀರನ ಆಶ್ರಯದಲ್ಲಿ ಪರಿಪಕ್ವಗೊಂಡಿತು. ಸಂಪ್ರದಾಯವಾದಿಯಾಗಿದ್ದ ಔರಂಗಜೇಬನು ಚಿತ್ರಕಲೆಗೆ ಪ್ರೋತ್ಸಾಹ ನೀಡಲಿಲ್ಲ. ತಾನ್ಸೇನನು ಅಕ್ಬರನ ಆಸ್ಥಾನದ ಅಮರ ಸಂಗೀತಗಾರ. ಜಹಾಂಗೀರ್ ಮತ್ತು ಷಹಜಹಾನನ ಕಾಲದಲ್ಲಿ ಕೂಡ ಸಂಗೀತಕ್ಕೆ ಪ್ರೋತ್ಸಾಹ ಸಿಕ್ಕಿತು. ಆದರೆ ಔರಂಗಜೇಬನು ಸಂಗೀತವನ್ನು ನಿಷೇಧ ಮಾಡಿದನು.
ಮರಾಠರು
ಶಿವಾಜಿ ಶಿವಾಜಿಯು ಪುಣೆಯ ಬಳಿ ಇರುವ ಶಿವನೇರಿದುರ್ಗದಲ್ಲಿ ಜನಿಸಿದನು. ಅವನ ತಂದೆ ಷಹಜಿ ಭೋಸ್ಲೆ. ಶಿವಾಜಿಯ ಹೆಜ್ಜೆಗುರುತು: ಶಿವಾಜಿಯು ತನ್ನ 19ನೇ ವರ್ಷದಲ್ಲಿ ವಿಜಂiÀiಪುರದ ಆದಿಲ್ಷಾನ ಅಧೀನದಲ್ಲಿದ್ದ ತೋರಣದುರ್ಗವನ್ನು ವಶಪಡಿಸಿಕೊಂಡನು. ನಂತರರಾಯಗಡ, ಸಿಂಹಗಡ, ಪ್ರತಾಪಗಡ ಮುಂತಾದ ಕೋಟೆಗಳನ್ನು ಒಂದೊಂದಾಗಿ ಗೆದ್ದುಕೊಂಡನು. ಇದರಿಂದ ಕುಪಿತನಾದ ವಿಜಯಾಪುರ ಸುಲ್ತಾನನು ಶಿವಾಜಿಯನ್ನು ಹತ್ತಿಕ್ಕಲು ತನ್ನ ಸೇನಾನಿ ಅಫ್ಜಲ್ಖಾನನನ್ನು ಕಳುಹಿಸಿದನು. ಅಫ್ಜಲ್ಖಾನ್ ಒಪ್ಪಂದದ ಮಾತುಗಳನ್ನಾಡಲು ಶಿವಾಜಿಯನ್ನು ಬರಹೇಳಿ, ಮೋಸದಿಂದ ಅವನನ್ನು ಕೊಲ್ಲಲೆತ್ನಿಸಿದನು. ಆದರೆ ಇದನ್ನು ನಿರೀಕ್ಷಿಸಿದ್ದ ಶಿವಾಜಿಯು ತಾನು ಅಡಗಿಸಿಟ್ಟುಕೊಂಡಿದ್ದ ‘ವ್ಯಾಘ್ರನಖ’ ಎಂಬ ಆಯುಧದಿಂದ ಅಫ್ಜಲ್ಖಾನನನ್ನು ಕೊಂದನು. ಶಿವಾಜಿಯು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಅರಿತ ಔರಂಗಜೇಬನು ಶಿವಾಜಿಯನ್ನು ನಿಗ್ರಹಿಸಲು ದಖನ್ ಪ್ರದೇಶದ ಅಧಿಕಾರಿಯಾಗಿದ್ದ ಷಯಿಸ್ತಾಖಾನನನ್ನು ಕಳುಹಿಸಿಕೊಟ್ಟ. ಆದರೆ ಶಿವಾಜಿ ಷಯಿಸ್ತಾಖಾನನನ್ನು ಉಪಾಯದಿಂದ ಸೋಲಿಸಿದನು.
ಶಿವಾಜಿಯ ಪಟ್ಟಾಭಿಷೇಕ: ನಂತರ ರಾಯಗಡದಲ್ಲಿ ‘ಛತ್ರಪತಿ’ ಎಂಬ ಬಿರುದಿನೊಂದಿಗೆ ಶಿವಾಜಿಯ ಪಟ್ಟಾಭಿಷೇಕ ಆಯಿತು. ಶಿವಾಜಿಯ ಆಡಳಿತ ಆಡಳಿತದಲ್ಲಿ ಸಹಕರಿಸಲು ಅಷ್ಟಪ್ರಧಾನರು ಎಂಬ ಎಂಟು ಮಂತ್ರಿಗಳಿದ್ದರು. ಪ್ರಧಾನಮಂತ್ರಿಯನ್ನು ಪೇಶ್ವೆ ಎಂದು ಕರೆಯಲಾಗುತ್ತಿತ್ತು.
ನಮ್ಮ ಸಂವಿಧಾನ
ಭಾರತ ಸಂವಿಧಾನದ ರಚನಾ ಸಭೆ ಭಾರತದ ಸಂವಿಧಾನವನ್ನು `ಸಂವಿಧಾನ ರಚನಾ ಸಭೆ’ ಎಂಬ ವಿಶೇಷ ಸಭೆಯು ಸಿದ್ಧಪಡಿಸಿತು. ಈ ಸಭೆಯ ಸದಸ್ಯರು ಅದರ ಪ್ರಥಮ ಅಧಿವೇಶನದಲ್ಲಿ ಡಾ. ರಾಜೇಂದ್ರಪ್ರಸಾದ್ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರುಸಂವಿಧಾನ ಸಭೆಯಲ್ಲಿ 299 ಮಂದಿ ಸದಸ್ಯರಿದ್ದರು. ಡಿಸೆಂಬರ್ 9, 1946ರಲ್ಲಿ ಅದರ ಪ್ರಥಮ ಅಧಿವೇಶನ ನಡೆಯಿತುಭಾರತದ ಸಂವಿಧಾನವನ್ನು ಜನವರಿ 26, 1950ರಂದು ಜಾರಿಗೊಳಿಸಲಾಯಿತು.ಈ ಸಂವಿಧಾನವು ಭಾರತವನ್ನು ಗಣರಾಜ್ಯವೆಂದು ಘೋಷಣೆ ಮಾಡಿತು.ಅದರ ನೆನಪಿಗಾಗಿ ನಾವು ಪ್ರತಿ ವರ್ಷವೂ ಜನವರಿ 26 ರಂದು ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತೇವೆ. ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನದ ನಿದೆರ್Éೀಶನದಂತೆ ಭಾರತದಲ್ಲಿ 1951-52ರಲ್ಲಿ ಪ್ರಥಮ ಮಹಾಚುನಾವಣೆಗಳು ನಡೆದವು.`ರಾಜ್ಯಸಭೆ’ ಮತ್ತು `ಲೋಕಸಭೆ’ ಎಂಬ ಎರಡು ಸದನಗಳನ್ನೊಳಗೊಂಡ ಮೊದಲ ಚುನಾಯಿತ ಸಂಸತ್ತು (ಪಾರ್ಲಿಮೆಂಟ್) 1952ರಲ್ಲಿ ಅಸ್ತಿತ್ವಕ್ಕೆ ಬಂದಿತು
ಆಕ್ರ್ಟಿಕ್ ಮಹಾಸಾಗರದಲ್ಲಿ ಅಸಂಖ್ಯಾತ ದ್ವೀಪಗಳಿದ್ದು, ಅವುಗಳಲ್ಲಿ ಗ್ರೀನ್ಲ್ಯಾಂಡ್ ಅತಿ ದೊಡ್ಡದಾಗಿದೆ. ಓಲ್ಡ್ ಫೇಥ್ಫುಲ್ ಎಂಬುದು - ಪ್ರಪಂಚದ ಹೆಸರಾಂತ ಗೈಸರ್ (ಬಿಸಿ ನೀರಿನ ಬುಗ್ಗೆ) ಆಗಿದ್ದು ಅಮೆರಿಕ ಸಂಯುಕ್ತ ಸಂಸ್ಥಾನದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಸುಪೀರಿಯರ್ ಸರೋವರವು ಮಹಾಸರೋವರಗಳಲ್ಲಿ ದೊಡ್ಡದಾಗಿದ್ದು ವಿಶ್ವದ ಅತಿ ದೊಡ್ಡಸಿಹಿ ನೀರಿನ ಸರೋವರವಾಗಿದೆ. ರಾಕೀ ಪರ್ವತಗಳು ಮತ್ತು ಮಿಸಿಸಿಪ್ಪಿ- ಮಿಸ್ಸೋರಿ ಬಯಲುಗಳ ಮಧ್ಯೆ ವಿಶಾಲವಾದ ಹುಲ್ಲುಗಾವಲು ಪ್ರದೇಶವಿದೆ. ಇದನ್ನು ಪ್ರೈರೀಸ್ ಎಂತಲೂ ಕರೆಯಲಾಗುತ್ತದೆ. ಇದು ವಾಸ್ತವವಾಗಿ ವಿಶಾಲವಾದ ವೃಕ್ಷರಹಿತ ಪ್ರದೇಶವಾಗಿದೆ. ಈ ಮೈದಾನ ಪ್ರದೇಶವು ಗೋಧಿ ಬೇಸಾಯ ಮತ್ತು ಪಶುಸಂಗೋಪನೆಗೆ ಹೆಸರುವಾಸಿಯಾಗಿದೆ. ಇದನ್ನು ಪ್ರಪಂಚದ ಗೋಧಿಯ ಕಣಜ ಅಥವಾ `ರೊಟ್ಟಿಯ ಬುಟ್ಟಿ' ಎಂದು ಕರೆಯುತ್ತಾರೆ. ಕ್ಯಾಲಿಫೋರ್ನಿಯವು ಉತ್ತರ ಅಮೆರಿಕದ ಶೇ.90ರಷ್ಟು ದ್ರಾಕ್ಷಿಯನ್ನು ಬಳಸಿ ದ್ರಾಕ್ಷಾರಸ ಉತ್ಪಾದಿಸುತ್ತದೆ. ಆದುದರಿಂದ ಕ್ಯಾಲಿಫೋರ್ನಿಯವನ್ನು `ದ್ರಾಕ್ಷಾರಸದ ನಾಡು' ಎಂದು ಕರೆಯಲಾಗಿzಉತ್ತರ ಅಮೆರಿಕ ಖಂಡದ ಈಶಾನ್ಯ ಭಾಗದ ಅಂಟ್ಲಾಂಟಿಕ್ ಸಾಗರ ತೀರದಲ್ಲಿ ಗ್ರ್ಯಾಂಡ್ ಬ್ಯಾಂಕ್ಗಳು, ನ್ಯೂಇಂಗ್ಲೆಂಡಿನ ಜಾರ್ಜಸ್ ಬ್ಯಾಂಕ್ಗಳು ಮತ್ತು ನ್ಯೂಫೌಂಡ್ ಲ್ಯಾಂಡ್ ಕರಾವಳಿಗಳ ಆಳವಿಲ್ಲದ ಖಂಡಾವರಣ ಪ್ರದೇಶಗಳು ಹೆಸರಾಂತ ಮೀನುಗಾರಿಕಾ ಪ್ರದೇಶಗಳಾಗಿªಪಿಟ್ಸ್ಬರ್ಗ್ ನಗರವನ್ನು `ಉಕ್ಕಿನ ನಗರ' ಎಂದು ಕರೆಯಲಾಗಿದೆಪನಾಮ ಕಾಲುವೆಯು (1912) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳ ಮಧ್ಯೆ ಇರುವ ಮುಖ್ಯ ಸಾಗರ ಮಾರ್ಗವಾಗಿದೆ.
ಆ್ಯಂಡೀಸ್ ಪರ್ವತಗಳು ಆ್ಯಂಡೀಸ್ ಪರ್ವತಗಳು ಪೆಸಿಫಿಕ್ ಸಾಗರದ ಕರಾವಳಿ ತೀರದುದ್ದಕ್ಕೂ ಸುಮಾರು 6,440 ಕಿ.ಮೀ.ಗಳಷ್ಟು ದೂರ ಹಬ್ಬಿರುವ ಪ್ರಪಂಚದ ಅತ್ಯಂತ ಉದ್ದವಾದ ಪರ್ವತ ಸರಣಿಯಾಗಿzಅಮೆಜಾನ್ (6,450 ಕಿ.ಮೀ.) ನದಿಯು ಆ್ಯಂಡೀಸ್ ಪರ್ವತದಲ್ಲಿ ಹುಟ್ಟುವ ದಕ್ಷಿಣ ಅಮೆರಿಕದ ಅತಿ ಉದ್ದವಾದ ನದಿಯಾಗಿರುವುದಲ್ಲದೆ ಪ್ರಪಂಚದ ಅತಿ ದೊಡ್ಡ ನದಿಯಾಗಿದೆ. ಟಿಟಿಕಾಕ ಸರೋವರವು (ಬೊಲಿವಿಯ) ಪ್ರಪಂಚದಲ್ಲಿಯೇ ಎತ್ತರದಲ್ಲಿರುವ ಸರೋವರವಾಗಿzಒಂದು ಭೂಭಾಗದ ಜಲರಾಶಿಯು ಬೆಳಗಿನಿಂದಲೇ ಸೂರ್ಯನ ಶಾಖದಿಂದ ಆವಿಯಾಗಿ ಮೇಲೇರಿ, ಮೋಡವಾಗಿ ಅಂದೇ ಅದೇ ಪ್ರದೇಶದಲ್ಲಿ ಮಳೆಯಾಗುವುದಕ್ಕೆ `ಪರಿಸರಣ ಮಳೆ' ಎನ್ನುತ್ತಾರೆ. ಸಮಭಾಜಕ ವೃತ್ತ ಪ್ರದೇಶದಲ್ಲಿ ಬೀಳುವ ಪರಿಸರಣ ಮಳೆಯನ್ನು ಅಪರಾಹ್ನದ ಮಳೆ, ಚಹ ವಿರಾಮದ ಮಳೆ, ಮತ್ತು 4 ಗಂಟೆಯ ಮಳೆ ಎಂದು ಕರೆಯಲಾಗಿದೆ
ಅಟಕಾಮ ಮರುಭೂಮಿಯು (ಚಿಲಿ) ಭೂಮಿಯ ಮೇಲಿನ ಅತಿ ಶುಷ್ಕ ಪ್ರದೇಶವಾಗಿದೆ. ಕಳೆದ 200 ವರ್ಷಗಳಿಂದಲೂ ಇಲ್ಲಿ ಮಳೆ ಬಿದ್ದಿಲ್ಲ. ದಕ್ಷಿಣ ಅಮೆರಿಕ ಖಂಡವನ್ನು `ಪಕ್ಷಿಗಳ ಖಂಡ' ಎಂದು ಕರೆಯಲಾಗಿzಬ್ರೆಜಿಲ್ನ್ನು `ಪ್ರಪಂಚದ ಕಾಫಿಯ ಪಾತ್ರೆ' ಎಂದು ಕರೆಯಲಾಗಿದೆ. ಆಫ್ರಿಕದಲ್ಲಿರುವ ಇಥಿಯೋಪಿಯಾ ದೇಶದ 'ಕಾಫಿ' ಪ್ರದೇಶವು ಕಾಫಿ ಬೆಳೆಯ ಮೂಲವಾಗಿದ್ದು 'ಕಾಫಾ' ಅಥವಾ ಕಾಫೀ ಎನ್ನುತ್ತಾರೆ. ಬ್ರೆಜಿಲ್ನ ಫೆಜೆಂಡಾದಲ್ಲಿ ಸಾವಿರಾರು ಕಾಫಿ ತೋಟಗಳಿವೆ. ರಿಯೋಡಿ ಜನೈರೊವನ್ನು `ವಿಶ್ವದ ಕಾಫಿ ಬಂದರು' ಎಂದು ಕರೆಯಲಾಗಿದೆ.
ಭಾರತಕ್ಕೆ ಯುರೋಪಿಯನ್ನರ ಆಗಮನ
ಸಾ.ಶ 1498 ರ ಮೇ 17ರಂದು ವಾಸ್ಕೋಡಗಾಮನು ಕೇರಳದ ಕಲ್ಲಿಕೋಟೆಯನ್ನು ತಲುಪಿ ಭಾರತಕ್ಕೆ ನೂತನ ಜಲಮಾರ್ಗವನ್ನು ಕಂಡು ಹಿಡಿದನು. ಇದು ಯುರೋಪಿಯನ್ನರು ಭಾರತಕ್ಕೆ ಬರಲು ಕಾರಣವಾಯಿತು. ಈ ಸಮುದ್ರಮಾರ್ಗದ ಅನ್ವೇಷಣೆ (ಸಂಶೋಧನೆ)ಯಿಂದಾಗಿ ಪೋರ್ಚುಗೀಸರು, ಡಚ್ಚರು, ಇಂಗ್ಲಿಷರು ಮತ್ತು ಫ್ರೆಂಚರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು ಕಲ್ಲಿಕೋಟೆಯ ದೊರೆ ಜಾಮೊರಿನ್ ಪೋರ್ಚಗೀಸ್ ನಾವಿಕ ವಾಸ್ಕೋಡಗಾಮನಿಗೆ ವ್ಯಾಪಾರಕ್ಕೆ ಅನುಮತಿ ನೀಡಿದನು.
• ಸಾ.ಶ. 1509 ರಲ್ಲಿ ಅಲ್ಬುಕರ್ಕ ಭಾರತಕ್ಕೆ ಗವರ್ನರ್ (ವೈಸರಾಯ್) ಆಗಿ ನೇಮಕಗೊಂಡನು. ಈತನು ಸಾ.ಶ. 1510ರಲ್ಲಿ ವಿಜಯಪುರದ ಸುಲ್ತಾನನಿಂದ ಗೋವಾವನ್ನು ವಶಪಡಿಸಿಕೊಂಡನು. ಪೋರ್ಚುಗೀಸರು ಭಾರತವನ್ನು ಬಿಟ್ಟು ಹೋಗುವವರೆಗು ಗೋವ ಪೋರ್ಚುಗೀಸರ ರಾಜಧಾನಿಯಾಗಿತ್ತು. ಪೋರ್ಚಗೀಸರ ಪ್ರಾನ್ಸಿಸ್ಕೋ-ಡಿ-ಅಲ್ಮೇಡಾ ಭಾರತದ ಪ್ರಥಮ ವೈಸರಾಯ್ (ಗವರ್ನರ್). ಭಾರತಕ್ಕೆ ಬಂದ ಮೊಟ್ಟ ಮೊದಲ ಯೂರೋಪಿಯನ್ನರು ಹಾಗೂ ಭಾರತ ತೊರೆದ ಕಟ್ಟಕಡೆಯ ಯೂರೋಪಿಯನ್ನರು ಪೋರ್ಚಗೀಸರೇ ಆಗಿದ್ದಾರೆ. ಕೊನೆಗೆ ಸಾ.ಶ.1961ರಲ್ಲಿ ಭಾರತೀಯ ಸೇನಾಪಡೆಯು ಪೋರ್ಚಗೀಸರನ್ನು ಬಡಿದೋಡಿಸುವುದರೊಂದಿಗೆ ಗೋವಾ ವಿಮೋಚನೆಗೊಂಡಿತು
ಡಚ್ಚರು (ಸಾ.ಶ.1596-1792) ಪೋರ್ಚುಗೀಸರ ನಂತರ ಭಾರತಕ್ಕೆ ಬಂದ ಯೂರೋಪಿಯನ್ನರಲ್ಲಿ ನೆದರ್ಲ್ಯಾಂಡ್ ದೇಶದ ಡಚ್ಚರು ಪ್ರಮುಖರು. ಸಾ.ಶ. 1602ರಲ್ಲಿ “ಡಚ್ ಈಸ್ಟ ಇಂಡಿಯಾ ಕಂಪನಿ” ಸ್ಥಾಪನೆಯಾಯಿತು. ಈ ಕಂಪನಿಯು ಪೂರ್ವದ ದೇಶಗಳೊಂದಿಗೆ ವ್ಯಾಪಾರವನ್ನು ಮಾಡುವ ಏಕಸ್ವಾಮ್ಯವನ್ನು ಪಡೆಯಿತು. ಈ ಪ್ರದೇಶಗಳಲ್ಲಿ ಯುದ್ಧ ಮಾಡುವ, ಶಾಂತಿ ಸಂಧಾನಗಳನ್ನು ಏರ್ಪಡಿಸುವ ಅಧಿಕಾರವನ್ನು ಪಡೆಯಿತು. ‘ಪುಲಿಕಾಟ್' ಡಚ್ಚರ ರಾಜಧಾನಿಯಾಗಿತ್ತು
ಇಂಗ್ಲಿಷರು (ಸಾ.ಶ.1600-1947) ಇಂಗ್ಲೆಂಡಿನ ವರ್ತಕರು ಪೂರ್ವ ದೇಶಗಳೊಡನೆ ವ್ಯಾಪಾರ ಸಂಪರ್ಕ ಹೊಂದಲು ಬಯಸಿ ಸಾ.ಶ.1600ರಲ್ಲಿ “ಈಸ್ಟ್ ಇಂಡಿಯಾ ಕಂಪನಿ” ಯನ್ನು ಸ್ಥಾಪಸಿದರು. ಎಲಿಜಬೆತ್ ರಾಣಿಯ ಅನುಮತಿ ಪಡೆದು ಭಾರತದೊಡನೆ ವ್ಯಾಪಾರ ಸಂಪರ್ಕ ಬೆಳೆಸಿದರು.
ಪ್ರಾರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಹಡಗುಗಳು ಸೂರತ್ ಬಂದರಿನಲ್ಲಿ ತಂಗುತ್ತಿದ್ದವು. ಸರ್ ಥಾಮಸ್ ರೋ ಸಾ.ಶ.1615ರಲ್ಲಿ ಮೊಗಲರ ಚಕ್ರವರ್ತಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿ ಸೂರತ್ನಲ್ಲಿ ವ್ಯಾಪಾರ ಮಾಡಲು ಅನುಮತಿ ಪಡೆದನು. ಮೊಗಲ್ ಚಕ್ರವರ್ತಿ ಫರೂಕ್ ಸಿಯಾರನಿಂದ ಬಂಗಾಲ ಪ್ರಾಂತ್ಯ (ಈಗಿನ ಬಂಗಾಳ, ಬಿಹಾರ ಮತ್ತು ಒರಿಸ್ಸಾ) ಮತ್ತು ಸೂರತ್ನಲ್ಲಿ ಸುಂಕರಹಿತ (ತೆರಿಗೆ ರಹಿತ) ವ್ಯಾಪಾರ ಮಾಡುವ ಪರವಾನಗಿಯಾದ ‘ದಸ್ತಕ್’ಗಳನ್ನು ಪಡೆದರು. ಸುಂಕವಿಲ್ಲದೆ ಮುಕ್ತ ವ್ಯಾಪಾರ ನಡೆಸಲು ಬ್ರಿಟಿಷ್ ವರ್ತಕರಿಗೆ ನೀಡಲಾದ ವಿಶೇಷ ಪರವಾನಗಿ ಪತ್ರ(ಪಾಸು)ಗಳೇ ದಸ್ತಕಗಳು
ಫ್ರೆಂಚರು ( ಸಾ.ಶ. 1664-1954) ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಫ್ರೆಂಚರೇ ಕೊನೆಯವರು. ಇವರು ಸಾ.ಶ. 1664ರಲ್ಲಿ “ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ”ಯನ್ನು ಸ್ಥಾಪಿಸಿದರು. ಭಾರತದಲ್ಲಿ ಫ್ರೆಂಚರು ತಮ್ಮ ಪ್ರಥಮ ವ್ಯಾಪಾರ ಕೋಠಿಯನ್ನು ಸಾ.ಶ.1668ರಲ್ಲಿ ಸೂರತ್ನಲ್ಲಿ ತೆರೆದರು. ಭಾರತಕ್ಕೆ ವ್ಯಾಪಾರಕ್ಕೆಂದು ಆಗಮಿಸಿದ ಬ್ರಿಟಿಷರು ಮತ್ತು ಫ್ರೆಂಚರ ಮಧ್ಯೆ ರಾಜಕೀಯ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಅನೇಕ ಯುದ್ಧಗಳು ನಡೆದವು. ಅವುಗಳನ್ನು ಕರ್ನಾಟಿಕ್ ಯುದ್ಧಗಳೆಂದು ಕರೆಯಲಾಗಿz
ಭಾರತದಲ್ಲಿ ಬ್ರಿಟಿಷರ ರಾಜಕೀಯ ಏಳಿಗೆ
ಪ್ಲಾಸಿ ಕದನ ( ಸಾ.ಶ.1757) ಬಂಗಾಳವು ಮೊಗಲ್ ಸಾಮ್ರಾಜ್ಯದ ಸಮೃದ್ಧ ಪ್ರಾಂತವಾಗಿತ್ತು. ಅದರ ಪ್ರಾಂತಾಧಿಕಾರಿಯಾಗಿದ್ದ ಅಲಿವರ್ಧಿಖಾನ್, ಮೊಗಲ್ ಸಾಮ್ರಾಜ್ಯ ಅವನತಿ ಹಾದಿಯಲ್ಲಿದ್ದಾಗ ಸ್ವತಂತ್ರನಾದನು. ಆತನ ನಂತರ ಸಿರಾಜ್-ಉದ್-ದೌಲ್ನು ಬಂಗಾಳದ ನವಾಬನಾದನು. ನವಾಬ ಸಿರಾಜ್-ಉದ್-ದೌಲ್ನು ಯುವಕನಾಗಿದ್ದರಿಂದ ಇಂಗ್ಲಿಷರು ಅವನನ್ನು ಕಡೆಗಣಿಸಿ, ಅವನ ಅನುಮತಿ ಪಡೆಯದೆ ಕಲ್ಕತ್ತದಲ್ಲಿ ‘ಪೋರ್ಟ್ವಿಲಿಯಂ’ ಕೋಟೆಯನ್ನು ಬಲಪಡಿಸಿದರು. ಅಲ್ಲದೆ ವ್ಯಾಪಾರದ ರಿಯಾಯಿತಿಗಳನ್ನು ದುರುಪಯೋಗ ಮಾಡುತ್ತಿದ್ದರು. ನವಾಬ್ ಸಿರಾಜ್ ಉದ್ದೌಲನ ದಾಳಿಯ ವಾರ್ತೆ ಕೇಳಿದ ಮದ್ರಾಸಿನ ಕಂಪನಿಯ ಅಧಿಕಾರಿಗಳು ರಾಬರ್ಟ್ ಕ್ಲೈವನ ನೇತೃತ್ವದಲ್ಲಿ ಕಲ್ಕತ್ತಕ್ಕೆ ಸೈನ್ಯ ರವಾನಿಸಿದರು. ಬಂಗಾಲದ ಪರಿಸ್ಥಿತಿಯನ್ನರಿತ ಕ್ಲೈವ್, ನವಾಬನ ವಿರುದ್ಧ ಒಳಸಂಚು ನಡೆಸಿದನು. ಸಿರಾಜನ ಸೇನಾನಿ ಮೀರ್ ಜಾಫರನಿಗೆ ನವಾಬಗಿರಿಯ ಆಸೆಯನ್ನು ತೋರಿಸಿ ರಹಸ್ಯ ಒಪ್ಪಂದ ಮಾಡಿಕೊಂಡನು. ನವಾಬನ ಸೇನಾನಿ ಮೀರ್ ಜಾಫರ್ ನವಾಬನಾಗುವ ಆಸೆಯಿಂದ ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಂಡನು.ಅದರಂತೆ ನವಾಬನಾದ ಕೂಡಲೇ ಇಂಗ್ಲಿಷರಿಗೆ 175 ಲಕ್ಷ ರೂಪಾಯಿ ಕೊಡಬೇಕಾಗಿತ್ತು. ಈ ಕಪ್ಪು ವ್ಯವಹಾರದಲ್ಲಿ ಅಮೀನಚಂದ್ ಎಂಬ ವರ್ತಕ ಮಧ್ಯಸ್ಥಿಕೆ ವಹಿಸಿದನು ಬ್ರಿಟಿಷರು ಮತ್ತು ಸಿರಾಜ್ ಉದ್ದೌಲನ ಸೈನ್ಯದ ನಡುವೆ ಪ್ಲಾಸಿ ಎಂಬಲ್ಲಿ ಸಾ.ಶ. 1757 ಜೂನ್ 23ರಂದು ಯುದ್ಧವಾಯಿತು.
ಬಕ್ಸಾರ್ ಕದನ (ಸಾ.ಶ.1764) ಮೀರ್ಜಾಫರನು ದೀರ್ಘಕಾಲ ಬ್ರಿಟಿಷರ ಕೊನೆ ಇಲ್ಲದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲನಾದನು. ಆಗ ಬ್ರಿಟಿಷರು ಬಂಗಾಳದ ನವಾಬ ಸ್ಥಾನದಿಂದ ಮೀರ್ ಜಾಫರ್ನನ್ನು ಪದಚ್ಯುತಗೊಳಿಸಿ ಅವನ ಅಳಿಯನಾದ ಮೀರ್ಕಾಸಿಂನನ್ನು ಅಧಿಕಾರಕ್ಕೆ ತಂದರುಇದರಿಂದ ದೃತಿಗೆಡದ ಮೀರ್ಕಾಸಿಂ ಅವಧ್ ಸಂಸ್ಥಾನದ ನವಾಬ ಷೂಜಾ-ಉದ್- ದೌಲ ಮತ್ತು ಮೊಗಲ್ ದೊರೆ ಎರಡನೇ ಷಾಆಲಂ ಅವರೊಡನೆ ಸ್ನೇಹ ಬೆಳೆಸಿದನುಈ ಕದನದಲ್ಲಿ ಹೆಕ್ಟರ್À ಮನ್ರೋ ನಾಯಕತ್ವದ ಬ್ರಿಟಿಷ್ ಸೇನೆ ಮೀರಕಾಸಿಂನ ಸಂಯುಕ್ತ ಸೇನಾ ಪಡೆಯನ್ನು ಸೋಲಿಸಿತು. ಷೂಜಾ-ಉದ್-ದೌಲ್ ರೋಹಿಲಖಂಡದಲ್ಲಿ ಆಶ್ರಯ ಪಡೆದನು. ಎರಡನೇ ಷಾಆಲಂ ಬ್ರಿಟಿಷರೊಂದಿಗೆ ಸೇರಿದನು. ಮೀರ್ಕಾಸಿಂ ಯುದ್ಧ ರಂಗದಿಂದ ಪಲಾಯನ ಮಾಡಿದನು.
ಕರ್ನಾಟಿಕ್ ಯುದ್ಧಗಳು (ಸಾ.ಶ.1746-1763) ಮೊಗಲ್ ಸಾಮ್ರಾಜ್ಯದ ಒಂದು ಪ್ರಾಂತವೇ ‘ಕರ್ನಾಟಿಕ್’. ಕೋರಮಂಡಲ ತೀರ (ಈಗಿನ ತಮಿಳುನಾಡು ಹಾಗೂ ಆಂದ್ರಪ್ರದೇಶದ ತೀರ ಪ್ರದೇಶ) ಮತ್ತು ಅದರ ಹಿನ್ನಾಡನ್ನು ಯುರೋಪಿಯನ್ನರು ‘ಕರ್ನಾಟಿಕ್’ (ಅಚಿಡಿಟಿಚಿಣiಛಿ) ಎಂದು ಕರೆಯುತ್ತಿದ್ದರು. ಪ್ರಥಮ ಕರ್ನಾಟಿಕ್ ಯುದ್ಧ( ಸಾ.ಶ.1746-1748) ಆರ್ಕಾಟ್ ಕರ್ನಾಟಿಕ ಸಂಸ್ಥಾನದ ರಾಜಧಾನಿಯಾಗಿತ್ತು. ಮೊದಲ ಕರ್ನಾಟಿಕ್ ಯುದ್ಧದಲ್ಲಿ ಫ್ರೆಂಚರು ಮೇಲುಗೈ ಸಾಧಿಸಿದರು. ಇದು ‘ಏಕ್ಸ್-ಲಾ- ಚಾಪೆಲ್’ ಒಪ್ಪಂದದೊಂದಿಗೆ ಅಂತ್ಯಗೊಂಡಿತು.
ಎರಡನೇ ಕರ್ನಾಟಿಕ್ ಯುದ್ಧ (ಸಾ.ಶ.1749-1754) ಕಾರಣ: ಆರ್ಕಾಟ್ ಮತ್ತು ಹೈದರಾಬಾದ್ಗಳಲ್ಲಿ ಪಟ್ಟಾಧಿಕಾರದ ಸಮಸ್ಯೆಗಳು ಉದ್ಭವಿಸಿದವು. ಇದು ಯುದ್ಧಕ್ಕೆ ಪ್ರಮುಖ ಕಾರಣವಾಯಿತು. ಆರ್ಕಾಟಿನಲ್ಲಿ ಚಂದಾಸಾಹೇಬ ಮತ್ತು ಅನ್ವರುದ್ದೀನ್ ಹಾಗೂ ಹೈದರಾಬಾದಿನಲ್ಲಿ ನಾಸಿರ್ಜಂಗ್ ಮತ್ತು ಮುಜಾಫರ್ಜಂಗರ ನಡುವೆ ಸಿಂಹಾಸನಕ್ಕಾಗಿ ಪೈಪೋಟಿ ಆರಂಭವಾಯಿತು. 1754ರ 'ಪಾಂಡಿಚೇರಿ ಒಪ್ಪಂದ'ದೊಂದಿಗೆ ಯುದ್ಧ ಕೊನೆಗೊಂಡಿತು
ಮೂರನೇ ಕರ್ನಾಟಿಕ್ ಯುದ್ಧ (ಸಾ.ಶ.1758-1763) ಕಾರಣ: ಯುರೋಪಿನಲ್ಲಿ ಸಪ್ತ ವಾರ್ಷಿಕ ಯುದ್ಧ ಸಾ.ಶ.1756ರಲ್ಲಿ ಆರಂಭವಾಯಿತು. ಇದರ ಪರಿಣಾಮವಾಗಿ ಭಾರತದಲ್ಲಿಯೂ ಫ್ರೆಂಚ್ ಮತ್ತು ಇಂಗ್ಲಿಷ್ರ ನಡುವೆ ಮೂರನೇ ಕರ್ನಾಟಿಕ್ ಯುದ್ಧ ಆರಂಭವಾಯಿತು. ಸಾ.ಶ. 1760ರಲ್ಲಿ ಇಂಗ್ಲಿಷ ಸೇನಾನಿ ಸರ್ ಐರ್ಕೋಟನಿಗೂ ಫ್ರೆಂಚರ ಗವರ್ನರ್ ಕೌಂಟ್ ಡಿ ಲ್ಯಾಲಿಗೂ ಪಾಂಡಿಚೇರಿ ಸಮೀಪ ವಾಂಡಿವಾಷ್ನಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಫ್ರೆಂಚರಿಗೆ ಸೋಲಾಯಿತು. ಫ್ರೆಂಚರು ಇಂಗ್ಲಿಷರಿಗೆ ಶರಣಾದರು. ಯುರೋಪಿನಲ್ಲಿ ಈ ವೇಳೆಗೆ ಸಪ್ತವಾರ್ಷಿಕ ಯುದ್ಧಗಳು ಕೊನೆಗೊಂಡು ಪ್ಯಾರಿಸ್ ಒಪ್ಪಂದವಾಯಿತು.
ಸಹಾಯಕ ಸೈನ್ಯ ಪದ್ಧತಿ (1798) ಇಂಗ್ಲಿಷರ ಗವರ್ನರ ಜನರಲ್ ಲಾರ್ಡ್ ವೆಲ್ಲೆಸ್ಲಿಯು ಸಹಾಯಕ ಸೈನ್ಯ ಪದ್ಧತಿಯನ್ನು ಸಾ.ಶ 1798ರಲ್ಲಿ ಜಾರಿಗೆ ತಂದನು. ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದಕ್ಕೆ ಒಳಗಾದ ರಾಜ್ಯಗಳು: ಹೈದರಾಬಾದ್, ಮೈಸೂರು, ತಿರುವಾಂಕೂರು, ಬರೋಡಾ, ಜೈಪುರ, ಜೋಧ್ಪುರ, ಭರತ್ಪುರ, ನಾಗಪುರ, ಗ್ವಾಲಿಯರ್, ಔದ್, ತಂಜಾವೂರು, ಸೂರತ್ ಮುಂತಾದವುಗಳು
ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿ (1848) ಲಾರ್ಡ್ ಡಾಲ್ಹೌಸಿ ಬ್ರಿಟಿಷ್ ಗವರ್ನರ ಜನರಲ್ ಲಾರ್ಡ್ ಡಾಲ್ ಹೌಸಿಯು “ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ’’ಯನ್ನು ಜಾರಿಗೆ ತಂದನು. ಯಾವುದೇ ಭಾರತದ ರಾಜನಿಗೆ ಗಂಡು ಮಕ್ಕಳಿಲ್ಲದಿದ್ದರೆ ದತ್ತು ಪುತ್ರನಿಗೆ ಪಟ್ಟವೇರುವ ಹಕ್ಕಿಲ್ಲವೆಂದು ಘೋಷಿಸಿದನುಸಾ.ಶ. 1856ರಲ್ಲಿ ಡಾಲ್ ಹೌಸಿಯು ತನ್ನ ದೇಶಕ್ಕೆ ಮರುಳುವಾಗ ಭಾರತದ 2/3 (ಮೂರನೇ ಎರಡು) ರಷ್ಟು ಭೂಪ್ರದೇಶವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು. ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ ತನ್ನ ಅಧಿಕಾರಾವಧಿಯಲ್ಲಿ ಕಂದಾಯ ವಸೂಲಿಗಾಗಿ ಹರಾಜು ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದನು.
1. ಖಾಯಂ ಜಮೀನ್ದಾರಿ ಪದ್ಧತಿ (ಸಾ.ಶ. 1793) ಗವರ್ನರ್ ಜನರಲ್ ಕಾರ್ನ್ವಾಲೀಸನು ಬಂಗಾಳ, ಬಿಹಾರ, ಒರಿಸ್ಸ್ಸಾಗಳಲ್ಲಿ ಭೂಕಂದಾಯವನ್ನು ಖಾಯಂ ನೆಲೆಯಲ್ಲಿ ನಿಗದಿಪಡಿಸಲು ನಿರ್ಧರಿಸಿದನು. ಕಂದಾಯ ಸಂಗ್ರಹಕ್ಕೆ ಸಂಬಂಧಿಸಿದಂತೆ, ಅವನು ಜಮೀನ್ದಾರರೊಡನೆ ಮಾಡಿಕೊಂಡ ಒಪ್ಪಂದವನ್ನು ಖಾಯಂ ಜಮೀನ್ದಾರಿ ಪದ್ಧತಿ ಎನ್ನುವರು. ಖಾಯಂ ಜಮೀನ್ದಾರಿ ಪದ್ಧತಿಯಡಿಯಲ್ಲಿ ಜಮೀನ್ದಾರರು ಬ್ರಿಟಿಷ್ ಸರ್ಕಾರದ ಏಜೆಂಟರಂತೆ ಕಾರ್ಯ ನಿರ್ವಹಿಸಿದರು.
2. ರೈತವಾರಿ ಪದ್ಧತಿ (ಸಾ.ಶ. 1820) ಮಧ್ಯವರ್ತಿಗಳ ಸಹಾಯವಿಲ್ಲದೆ ರೈತನೇ ನೇರವಾಗಿ ಸರ್ಕಾರಕ್ಕೆ ಕಂದಾಯ ಸಂದಾಯ ಮಾಡುವುದೇ ರೈತವಾರಿ ಪದ್ಧತಿಯಾಗಿದೆ. ಸರ್ಕಾರ ಮತ್ತು ಸಾಗುವಳಿದಾರನ ನಡುವಿನ ನೇರ ಸಂಬಂಧವೇ ರೈತವಾರಿ ಪದ್ಧತಿಯ ಮುಖ್ಯ ಲಕ್ಷಣವಾಗಿದೆ. ಈ ಪದ್ಧತಿಯನ್ನು ಮದ್ರಾಸ್ ಪ್ರಾಂತ್ಯದಾದ್ಯಂತ ಸರ್ ಥಾಮಸ್ ಮನ್ರೊ ಅವರು 1820 ರಲ್ಲಿ ಜಾರಿಗೆ ತಂದರು.
3. ಮಹಲ್ವಾರಿ ಪದ್ಧತಿ (ಸಾ.ಶ. 1833) ಮಹಲ್ ಎಂದರೆ ಗ್ರಾಮ ಅಥವಾ ಎಸ್ಟೇಟ್ ಎಂದರ್ಥ. ಮಹಲ್ಗೆ ಭೂಕಂದಾಯವನ್ನು ನಿಗಧಿಪಡಿಸಲಾಗುತ್ತಿತ್ತು. ಸ್ಥಳೀಯ ಜಮೀನ್ದಾರನು ಎಲ್ಲ ರೈತರ ಭೂಕಂದಾಯಕ್ಕೆ ಹೊಣೆಗಾರನಾಗಿರುತ್ತಿದ್ದನು. 1813ರ ಚಾರ್ಟರ್ ಕಾಯ್ದೆಯಲ್ಲಿ ಭಾರತೀಯರ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮೀಸಲಿಡಲಾಯಿತು. ಆದರೆ ಈ ಹಣದಲ್ಲಿ ಸರ್ಕಾರವು 1823 ರ ತನಕ ಒಂದು ರೂಪಾಯಿಯನ್ನು ಸಹÀ ಶಿಕ್ಷಣಕ್ಕಾಗಿ ಖರ್ಚು ಮಾಡಿರಲಿಲ್ಲಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಕೀರ್ತಿ ಲಾರ್ಡ್ ಮೆಕಾಲೆ ಮತ್ತು ಚಾಲ್ರ್ಸ್ ವುಡ್ ಅವರಿಗೆ ಸಲ್ಲಬೇಕು. 1784 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿ ಬಂದ ಸರ್ ವಿಲಿಯಂ ಜೋನ್ಸನು ಕಲ್ಕತ್ತದಲ್ಲಿ ‘ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಸ್ಥಾಪಿಸಿದನು. ಸಂಸ್ಕøತ ಭಾಷೆಯ ಹಿರಿಮೆಯನ್ನು ಸಾರಿದನು. ಸರ್ ಚಾಲ್ರ್ಸ್ ವಿಲ್ಕಿನ್ಸ್ 1785 ರಲ್ಲಿ ಭಗವದ್ಗೀತೆಯನ್ನು ಇಂಗ್ಲಿಷಿಗೆ ಭಾಷಾಂತರಿಸಿದನು. ಮ್ಯಾಕ್ಸ್ ಮುಲ್ಲರ್ ಋಗ್ವೇದ ಮತ್ತು ಇತರ ಕೃತಿಗಳನ್ನು ಭಾಷಾಂತರಿಸಿದನು1854 ರಲ್ಲಿ ಬ್ರಿಟಿಷರು ಹೊಸ ಶಿಕ್ಷಣ ನೀತಿಯನ್ನು ರೂಪಿಸಿದರು. ಇದು ಚಾಲ್ರ್ಸ್ವುಡ್ ವರದಿಯನ್ನು ಆಧರಿಸಿತ್ತು. ಅಲ್ಪಕಾಲದಲ್ಲೇ ಕಲ್ಕತ್ತ, ಮುಂಬೈ ಮತ್ತು ಮದ್ರಾಸುಗಳಲ್ಲಿ ವಿಶ್ವವಿದ್ಯಾಲಯಗಳನ್ನು (1857) ಸ್ಥಾಪನೆ ಮಾಡಲಾಯಿತು ಶಿಕ್ಷಣ ಕ್ಷೇತ್ರದ ಮೇಲ್ವಿಚಾರಣೆಗಾಗಿ ಶಿಕ್ಷಣ ಇಲಾಖೆಗಳನ್ನು ಪ್ರಾಂತಗಳಲ್ಲಿ ರಚಿಸಲಾಯಿತು. 1844 ರಲ್ಲಿ ಇಂಗ್ಲಿಷ್ ಭಾಷೆಯು ಆಡಳಿತದ ಅಧಿಕೃತ ಭಾಷೆಯಾಯಿತು. ದಾದಾಬಾಯಿ ನವರೋಜಿಯವರು ಹೇಳುವಂತೆ ಸಂಪತ್ತಿನ ಸೋರಿಕೆಯೇ (ಆಡಿಚಿiಟಿ oಜಿ ತಿeಚಿಟಣh) ಇದಕ್ಕೆ ಮುಖ್ಯ ಕಾರಣವಾಗಿತ್ತು‘ಅರ್ಥಶಾಸ್ತ್ರದ ಪಿತಾಮಹ’ ಆಡಂಸ್ಮಿತ್ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ‘ಸುಲಿಗೆಕೋರರು’ ಎಂದು ಬಣ್ಣಿಸಿದ್ದಾ£
ರೆಗ್ಯುಲೇಟಿಂಗ್ ಕಾಯ್ದೆ (ಸಾ.ಶ. 1773) ಭಾರತದ ಸಂವಿಧಾನ ಸುಧಾರಣೆಗಳು ಬ್ರಿಟಿಷರ ಆಡಳಿತ ಕಾಲದಿಂದ ಆರಂಭವಾಯಿತೆನ್ನಬಹುದು. ಈ ದೇಶದ ಸಂವಿಧಾನ ಇತಿಹಾಸದಲ್ಲಿ ರೆಗ್ಯುಲೇಟಿಂಗ್ ಕಾಯ್ದೆ ಒಂದು ಪ್ರಮುಖ ಕಾಲ ಘಟ್ಟ. ಭಾರತದಲ್ಲಿ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ ಈ ಶಾಸನವನ್ನು 1773 ರಲ್ಲಿ ಜಾರಿಗೆ ತಂದನು.
ಮಾರ್ಲೆ-ಮಿಂಟೋ ಸುಧಾರಣೆಗಳು (ಸಾ.ಶ. 1909) ಲಾರ್ಡ್ ಮಿಂಟೋ ಭಾರತದಲ್ಲಿ ವೈಸ್ರಾಯ್ ಆಗಿದ್ದನು. ಅದೇ ಅವಧಿಯಲ್ಲಿ ಲಾರ್ಡ್ ಮಾರ್ಲೆ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದನು.
ಮಾಂಟೆಗ್ಯು - ಚಲ್ಮ್ಸ್ ಫರ್ಡ್ ಸುಧಾರಣೆಗಳು (ಸಾ.ಶ. 1919) ಸೆಕ್ರೆಟರಿ ಆಫ್ ಸ್ಟೇಟ್ನ ಇಂಡಿಯಾ ಕೌನ್ಸಿಲ್ಲಿನಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಇವರ ಅಧಿಕಾರಾವಧಿ 5 ವರ್ಷಗಳೆಂದು ನಿರ್ಧರಿಸಲಾಯಿತು. ಭಾರತದ ಹೈಕಮಿಷನರ್ ಒಬ್ಬನನ್ನು ಲಂಡನ್ನಿನಲ್ಲಿ ನೇಮಕ ಮಾಡಲಾಯಿತು
1935 ರ ಶಾಸ£1935 ರ ಭಾರತ ಸರ್ಕಾರದ ಕಾಯಿದೆಯು ಮಹತ್ವದ ಬದಲಾವಣೆಯನ್ನುಂಟು ಮಾಡಿತು. ಪ್ರಾಂತಗಳು ಮತ್ತು ರಾಜ್ಯಗಳ ಒಕ್ಕೂಟದಿಂದ ಭಾರತದ ಒಕ್ಕೂಟದ ರಚನೆಯಾಯಿತು.
ಕೇಂದ್ರ ಸರ್ಕಾರದಲ್ಲಿ ದ್ವಿಮುಖ ಆಡಳಿತ ಪದ್ಧತಿಯನ್ನು ರೂಢಿಗೆ ತರಲಾಯಿತು.
ಸಾಮಾಜಿಕ ಮತ್ತು ಧಾರ್ಮಿಕ ಸುಧಾರu
ರಾಜಾ ರಾಮಮೋಹನರಾಯ್ (ಬ್ರಹ್ಮಸಮಾಜ - ಸಾ.ಶ. 1828) ಆಧುನಿಕ ಕಾಲಘಟ್ಟದ ಭಾರತದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದವರಲ್ಲಿ ರಾಜಾರಾಮಮೋಹನ ರಾಯ್ ಮೊದಲಿಗರು. ಇವರನ್ನು ‘ಭಾರತದ ನವೋದಯದ ಪಿತಾಮಹ’ ಎಂದು ರವೀಂದ್ರನಾಥ ಟ್ಯಾಗೋರ್ ಕರೆದಿರುವುದು ಸಮರ್ಥನೀಯವಾಗಿzರಾಜಾ ರಾಮಮೋಹನರಾಯ್ ‘ಆತ್ಮೀಯಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ 1828 ರಲ್ಲಿ ‘ಬ್ರಹ್ಮಸಭಾ’ವನ್ನು ಸ್ಥಾಪಿಸಿದರು. ಅದು ಮರು ವರ್ಷ ‘ಬ್ರಹ್ಮಸಮಾಜ’ ಎಂದು ನಾಮಕರಣಗೊಂಡಿತುಅಂದಿನ ಗರ್ವನರ್ ಜನರಲ್ ಆಗಿದ್ದ ವಿಲಿಯಮ್ ಬೆಂಟಿಂಕ್ನು ಸತಿ ಪದ್ಧತಿ ಆಚರಣೆಯನ್ನು ಕಾನೂನು ಬಾಹಿರವೆಂದು ಘೋಷಿಸಿದನು (ಸಾ.ಶ. 1829). ಪಾಶ್ಚಿಮಾತ್ಯ ಶಿಕ್ಷಣವನ್ನು ಪ್ರತಿಪಾದಿಸಿದ ರಾಮಮೋಹನರಾಯ್ ಆ ಮೂಲಕ ಅಮಾನವೀಯ ಪದ್ಧತಿಗಳನ್ನು ತೊಡೆದು ಹಾಕಬಹುದೆಂದು ಬಲವಾಗಿ ನಂಬಿದ್ದರು. ವಿಧವಾ ವಿವಾಹ ಮತ್ತು ಏಕದೇವತಾರಾಧನೆಯ ಪರವಾಗಿದ್ದ ರಾಮಮೋಹನ ರಾಯ್ ಅವರು ‘ಸಂವಾದ ಕೌಮುದಿ’ ಪತ್ರಿಕೆಯ ಮೂಲಕ ಸಾಮಾಜಿಕ ಸುಧಾರಣಾ ಚಳವಳಿಯ ಪ್ರಕ್ರಿಯೆಯನ್ನು ಆರಂಭಿಸಿದರು‘ರಾಜಾ’ ಎಂಬುದು ರಾಮಮೋಹನ ರಾಯ್ ಅವರಿಗೆ ಮೊಗಲ್ ಬಾದಷಹ 1829ರಲ್ಲಿ ನೀಡಿದ ಬಿರುದಾಗಿತ್ತು.
ಆತ್ಮಾರಾಮ್ ಪಾಂಡುರಂಗ (ಪ್ರಾರ್ಥನಾ ಸಮಾಜ -ಸಾ.ಶ. 1867) ಪ್ರಾರ್ಥನಾ ಸಮಾಜವನ್ನು ಆತ್ಮಾರಾಮ್ ಪಾಂಡುರಂಗರು ಪ್ರಾರಂಭಿಸಿದರು. ಇದು ಬ್ರಹ್ಮ ಸಮಾಜದ ನಂತರ ಮುಂಬೈ
ಪ್ರದೇಶದಲ್ಲಿ ಪ್ರಾರಂಭವಾದ ಪ್ರಮುಖ ಸಮಾಜ ಸುಧಾರಣಾ ಸಂಸ್ಥೆ. ಬಾಲ್ವಾಗ್ಲೆ, ಎನ್.ಜಿ. ಚಂದಾವರ್ಕರ್, ಎಂ.ಜಿ. ರಾನಡೆ ಮತ್ತು ಇತರರು ಇದರ ಪ್ರಮುಖ ನಾಯಕರು
ಮಹಾತ್ಮ ಜ್ಯೋತಿಬಾ ಫುಲೆ (ಸತ್ಯಶೋಧಕ ಸಮಾಜ- ಸಾ.ಶ. 1873) ಮಹಾತ್ಮ ಜ್ಯೋತಿಬಾ ಫುಲೆಯವರಿಂದ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳುವಳಿ ಆರಂಭವಾಯಿತು. ಮಹಾರಾಷ್ಟ್ರದ ಕೆಳವರ್ಗದವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಅಸ್ಪøಶ್ಯರು, ಅನಾಥರು ಮತ್ತು ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು. ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದ ಅವರು 'ಗುಲಾಮಗಿರಿ' ಎಂಬ ಕೃತಿಯನ್ನು ರಚಿಸಿ ತಮ್ಮ ಚಿಂತನೆಗಳನ್ನು ಸಂವಾದದ ರೂಪದಲ್ಲಿ ವಿವರಿಸಿದರುಫುಲೆ ಅವರನ್ನು ಬಿ.ಆರ್. ಅಂಬೇಡ್ಕರ್ ತಮ್ಮ ತಾತ್ವಿಕ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದ್ದರು.
ತರುಣ ಬಂಗಾಲಿ ಚಳವಳಿ ಆಂಗ್ಲೋಇಂಡಿಯನ್ ಯುವಕ ಹೆನ್ರಿ ವಿವಿಯನ್ ಡಿರೋಜಿಯರವರು ಈ ಚಳುವಳಿಯ ನೇತಾರರಾಗಿದ್ದರು. ಸ್ವಂತಿಕೆ ಮತ್ತು ವಿವೇಚನೆಯಿಂದ ಆಲೋಚಿಸುವಂತೆ ಅವರು ಯುವಕರಿಗೆ ಕರೆ ನೀಡಿದರು
ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜ - ಸಾ.ಶ. 1875) ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯ ಸಮಾಜವನ್ನು ಸ್ಥಾಪಿಸಿದರು. ಅವರ ಮೊದಲ ಹೆಸರು ಮೂಲಶಂಕರ ಎಂದಾಗಿತ್ತು. ದಯಾನಂದ ಸರಸ್ವತಿಯವರು “ವೇದಗಳಿಗೆ ಹಿಂದಿರುಗಿ” ಎಂದು ಕರೆ ನೀಡಿದರು. ಮೂರ್ತಿಪೂಜೆ, ಅಸ್ಪøಶ್ಯತೆ, ಬಾಲ್ಯವಿವಾಹ ಮತ್ತು ಜಾತಿ ಪದ್ಧತಿಯನ್ನು ಅವರು ಖಂಡಿಸಿದರು. ದಯಾನಂದ ಸರಸ್ವತಿಯವರು ಅಂತರ್ಜಾತೀಯ ಮತ್ತು ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಅಲ್ಲದೆ ಏಕದೇವತಾರಾಧನೆಯನ್ನು ಪ್ರತಿಪಾದಿಸಿದರು. ದಯಾನಂದ ಸರಸ್ವತಿಯವರು ತಮ್ಮ ವಿಚಾರಧಾರೆಯನ್ನು ಪ್ರಸಿದ್ಧ ಕೃತಿಯಾದ `ಸತ್ಯಾರ್ಥ ಪ್ರಕಾಶ'ದಲ್ಲಿ ಅಭಿವ್ಯಕ್ತಿಸಿದ್ದಾರೆ. ಆರ್ಯ ಸಮಾಜದ ನಾಯಕರಾದ ಲಾಲಾ ಹಂಸರಾಜ್ ಅವರು ಲಾಹೋರಿನಲ್ಲಿ "ದಯಾನಂದ ಆಂಗ್ಲೋವೇದಿಕ್ ಶಾಲೆ”ಯನ್ನು ಸ್ಥಾಪಿಸಿದರು. ಮತಾಂತರಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವುದಕ್ಕಾಗಿ ದಯಾನಂದರ ಶಿಷ್ಯರಾದ ಶ್ರದ್ಧಾನಂದರು “ಶುದ್ಧಿ ಚಳವಳಿ”ಯನ್ನು ಆರಂಭಿಸಿದರು.
ಸ್ವಾಮಿ ವಿವೇಕಾನಂದ (ರಾಮಕೃಷ್ಣ ಮಿಷನ್ - ಸಾ.ಶ. 1897) “ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಇದು ಸ್ವಾಮಿ ವಿವೇಕಾನಂದರು ಭಾರತೀಯ ಯುವಜನತೆಗೆ ನೀಡಿದ ಕರೆ. ಇವರ ಮೊದಲ ಹೆಸರು ನರೇಂದ್ರನಾಥ ದತ್ತ. ಕಲ್ಕತ್ತೆಯಲ್ಲಿ 1863 ಜನವರಿ 12 ರಂದು ಜನಿಸಿದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಇವರು ತದನಂತರದಲ್ಲಿ ಸನ್ಯಾಸ ಸ್ವೀಕರಿಸಿದರು. ರಾಮಕೃಷ್ಣರ ಮರಣದ ನಂತರ ಅವರ ಶಿಷ್ಯರನ್ನು ಒಗ್ಗೂಡಿಸಿ ಮಾರ್ಗದರ್ಶನ ನೀಡುವ ಜವಾಬ್ದಾರಿ ಸ್ವಾಮಿ ವಿವೇಕನಂದರ ಹೆಗಲ ಮೇಲೆ ಬಿತ್ತು. ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಪ್ರಥಮ ವಿಶ್ವಧರ್ಮ ಸಮ್ಮೇಳನದಲ್ಲಿ (1893) ಅವರು ವೇದಾಂತವನ್ನು ಕುರಿತು ಮಾಡಿದ ಭಾಷಣ ಅವರನ್ನು ವಿಶ್ವವಿಖ್ಯಾತರನ್ನಾಗಿಸಿತು. ಪಂಡಿತ ಈಶ್ವರಚಂದ್ರ ವಿದ್ಯಾಸಾಗರರವರು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗಾಗಿ ಸಂಸ್ಕøತ ಕಾಲೇಜನ್ನು ತೆರೆದರು. 1856ರಲ್ಲಿ ಮೊದಲಬಾರಿಗೆ ಮೇಲ್ವರ್ಗದಲ್ಲಿ ಕಾನೂನುಬದ್ದ ವಿಧವಾ ಪುನರ್ವಿವಾಹವು ಕಲ್ಕತ್ತದಲ್ಲಿ ವಿದ್ಯಾಸಾಗರರವರ ನೇತೃತ್ವದಲ್ಲಿ ನಡೆಯಿತು. ಸ್ವಾಮಿ ವಿವೇಕಾನಂದರನ್ನು ಬಾಲ ಗಂಗಾಧರ ತಿಲಕರು ‘ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ’ ಎಂದು ಬಣ್ಣಿಸಿದ್ದಾರೆ. ಸ್ತ್ರೀಯರ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ ಸ್ವಾಮೀಜಿಯವರು “ಸ್ತ್ರೀಯರ ಉದ್ಧಾರ ನಮ್ಮ ರಾಷ್ಟ್ರದ ಉದ್ಧಾರ” ಎಂದು ಒತ್ತಿ ಹೇಳಿದರು. ‘ದರಿದ್ರ ನಾರಾಯಣ’ರ (ಬಡವರ) ಸೇವೆಗೆ ಕರೆ ನೀಡಿದರು. ಒಟ್ಟಾರೆ ಭಾರತದ ಉನ್ನತಿಯ ಕನಸನ್ನು ಕಂಡರು. ಸ್ವಾಮಿ ವಿವೇಕಾನಂದರು ವಿಶ್ವ ಧರ್ಮಸಮ್ಮೇಳನಕ್ಕೆ ಹೋಗುವ ಮುನ್ನ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದರು. ವಿವೇಕಾನಂದರನ್ನು ತಮ್ಮ ಅರಮನೆಗೆ ಆಹ್ವಾನಿಸಿದ 10ನೇ ಚಾಮರಾಜ ಒಡೆಯರ್ ಅವರು ಸಮ್ಮೇಳನಕ್ಕೆ ಹೋಗಲು ಧನಸಹಾಯ ನೀಡಿದರು. ವಿವೇಕಾನಂದರ ಸಲಹೆ ಮೇರೆ ದಲಿತರಿಗೆ ಮೂರು ಪ್ರತ್ಯೇಕ ಶಾಲೆಗಳನ್ನು ಮೈಸೂರು ಒಡೆಯರ್ ತೆರೆದರು.
(ಥಿಯಸಾಫಿಕಲ್ ಸೊಸೈಟಿ - ಸಾ.ಶ. 1875) ಥಿಯಸಾಫಿಕಲ್ ಸೊಸೈಟಿ (ಬ್ರಹ್ಮವಿದ್ಯಾ ಸಮಾಜ)ಯನ್ನು ರಷ್ಯನ್ ಮಹಿಳೆ ಮ್ಯಾಡಂ ಎಚ್.ಪಿ. ಬ್ಲಾವಟ್ಸ್ಕಿ ಮತ್ತು ಅಮೆರಿಕದ ಕರ್ನಲ್ ಎಚ್.ಎಸ್. ಅಲ್ಕಾಟ್ ಇವರು ನ್ಯೂಯಾರ್ಕ್ನಲ್ಲಿ ಸ್ಥಾಪಿಸಿದರು. ಭಾರತಕ್ಕೆ ಆಗಮಿಸಿ ಚೆನ್ನೈ ಬಳಿಯ ಅಡಿಯಾರ್ ಎಂಬ ಸ್ಥಳದಲ್ಲಿ ಸೊಸೈಟಿಯ ಅಂತರ್ರಾಷ್ಟ್ರೀಯ ಕೇಂದ್ರವನ್ನು ಆರಂಭಿಸಿದರು. ನಂತರ ಡಾ. ಆನಿಬೆಸೆಂಟ್ ಇದರ ಅಧ್ಯಕ್ಷರಾಗಿದ್ದರುಡಾ. ಆನಿಬೆಸೆಂಟ್ ಭಾರತೀಯ ಸಂಸ್ಕøತಿಯಿಂದ ಪ್ರಭಾವಿತರಾಗಿದ್ದ ಅವರು ಭಗವದ್ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು. ‘ನ್ಯೂ ಇಂಡಿಯಾ’ ಎಂಬ ಪತ್ರಿಕೆಗಳನ್ನು ಹೊರಡಿಸಿದರು. ಆನಿಬೆಸೆಂಟ್ ಬನಾರಸಿನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ಇದೇ ಮುಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಂಬ ಹೆಸರನ್ನು ಪಡೆಯಿತು. ಬಾಲ್ಯವಿವಾಹವನ್ನು ತಡೆಯಲು ಮತ್ತು ಮೂಢನಂಬಿಕೆ ವಿರುದ್ಧ ಪ್ರಚಾರ ನಡೆಸಲು ‘ಮುಂದಾಳುಗಳು’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಮುಂದೆ ಹೋಂರೂಲ್ ಚಳವಳಿಯನ್ನು ಸಹ ಆರಂಭಿಸಿದರು. ಹಾಗೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು.
ಸರ್ ಸಯ್ಯದ್ ಅಹ್ಮದ್ಖಾನ್ (ಅಲಿಘರ್ ಚಳವಳಿ): ಆರಂಭದಲ್ಲಿ ನವಾಬ್ ಅಬ್ದುಲ್ ಲತೀಫರು 1863 ರಲ್ಲಿ ‘ಮಹಮಡನ್ ಲಿಟರರಿ ಸೊಸೈಟಿ’ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಮುಸ್ಲಿಮರಲ್ಲಿ ಇಂಗ್ಲಿಷ್ ಶಿಕ್ಷಣ ವಿಸ್ತರಿಸಲು ಪ್ರಯತ್ನಿಸಿದರುವೈಜ್ಞಾನಿಕ ಆಲೋಚನೆಗಳನ್ನು ಮುಸ್ಲಿಮರಲ್ಲಿ ಪ್ರಚಾರ ಪಡಿಸಲು ‘ಆಲಿಘರ್ ಇನ್ಸ್ಟಿಟ್ಯುಟ್ ಗೆÀಸೆಟ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. 1875 ಮಹಮಡನ್ ಆಂಗ್ಲೊ ಓರಿಯಂಟಲ್ ಕಾಲೇಜನ್ನು ಆರಂಭಿಸಿದರು. ಈ ಸಂಸ್ಥೆಯೇ 1920 ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿತು.
ಶ್ರೀ ನಾರಾಯಣಗುರು ಶ್ರೀ ನಾರಾಯಣಗುರು ಅವರ ಆಶಯವು ಈ ಹೇಳಿಕೆಯಲ್ಲಿ ವ್ಯಕ್ತವಾಗುತ್ತದೆ: “ಒಬ್ಬ ದೇವರು, ಒಂದು ಧರ್ಮ ಮತ್ತು ಒಂದು ಜಾತಿ” ಶ್ರೀ ನಾರಾಯಣಗುರು ಮತ್ತು ತಮಿಳುನಾಡಿನಲ್ಲಿ 1920ರ ದಶಕದಲ್ಲಿ ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದ ಪೆರಿಯಾರ್ ಅವರುಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿರಿ.
ಸಾವಿತ್ರಿಬಾಯಿ ಫು¯ಪತಿ ಜ್ಯೋತಿ ಬಾ ಫುಲೆಯವರೊಡಗೂಡಿ ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರಲ್ಲದೆ ತಾವೇ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು
ಪಂಡಿತ್ ರಮಾಬಾಯಿಭಾರತೀಯ ಮಹಿಳೆಯ ಉದ್ಧಾರಕ್ಕಾಗಿ ಜೀವನವನ್ನೇ ಮುಡುಪಿಟ್ಟು 1889 ರಲ್ಲಿ ‘ಮುಕ್ತಿ ಮಿಷನ್’ ಸಂಸ್ಥೆಯನ್ನು ಹುಟ್ಟು ಹಾಕಿದರು.
ಸ್ವಾತಂತ್ರ್ಯ ಹೋರಾಟಗಳು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಾ.ಶ. 1857-58) ಬ್ರಿಟಿಷರು ಸಾ.ಶ. 1857ರ ಐತಿಹಾಸಿಕ ಘಟನೆಯನ್ನು ಕೇವಲ `ಸಿಪಾಯಿಗಳ ದಂಗೆ' ಎಂದು ಪರಿಗಣಿಸಿದರೆ, ಭಾರತೀಯ ರಾಷ್ಟ್ರೀಯವಾದಿಗಳು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಸಾರಿದರು. ಸತಾರ, ಜೈಪುರ, ಸಂಬಲ್ಪುರ, ಉದಯಪುರ, ಝಾನ್ಸಿ, ಅವದ್ ಇವೇ ಮೊದಲಾದ ಪ್ರದೇಶಗಳು ಡಾಲ್ಹೌಸಿಯ ನೀತಿಗೆ ಬಲಿಯಾದ ರಾಜ್ಯಗಳು. ಮೀರತ್ನಲ್ಲಿ ದಂಗೆಯು ಸಾ.ಶ. 1857ರ ಮೇ 10ರಂದು ಮಂಗಲ್ಪಾಂಡೆ ಆರಂಭವಾಯಿತು ಮೀರತ್ನಲ್ಲಿ ದಂಗೆ ಸ್ಫೋಟಗೊಳ್ಳುವ ಮೊದಲೇ ಬ್ಯಾರಕ್ಪುರದ (ಬಂಗಾಲ) ಭಾರತೀಯ ಸಿಪಾಯಿ ಮಂಗಲ್ಪಾಂಡೆ ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿಕೊಂದನು. ದುರ್ಬಲ ಮೊಗಲ್ ದೊರೆ ಎರಡನೇ ಬಹಾದೂರ್ಷಾನನ್ನು ಭಾರತದ ಚಕ್ರವರ್ತಿ ಎಂದು ಘೋಷಣೆ ಮಾಡಿದರು. ದಿಲ್ಲಿಯಲ್ಲಿ ಸೇನಾಪತಿ ಬಖ್ತ್ಖಾನ್, ಕಾನ್ಪುರದಲ್ಲಿ ನಾನಾ ಸಾಹೇಬ್ ಮತ್ತು ತಾಂತ್ಯಾ ಟೋಪೆ, ಲಕ್ನೋದಲ್ಲಿ ಬೇಗಮ್ ಹಜ್ರತ್ ಮಹಲ್, ಝಾನ್ಸಿಯಲ್ಲಿ ಲಕ್ಷ್ಮೀಬಾಯಿ ಮತ್ತು ಬಿಹಾರದಲ್ಲಿ ಕುಂವರ್ ಸಿಂಗ್ರವರ ನೇತೃತ್ವದಲ್ಲಿ ದಂಗೆಗಳು ನಡೆದವು. ಬಂಡಾಯವು ಉತ್ತರ ಭಾರತಕ್ಕೆ ಸೀಮಿತವಾಗಿರದೆ, ದಕ್ಷಿಣ ಭಾರತಕ್ಕೂ ಹಬ್ಬಿತು. ಕರ್ನಾಟಕದಲ್ಲಿ ಮುಂಡರಗಿ ಭೀಮರಾವ್, ಹಲಗಲಿ ಬೇಡರು, ಸುರಪುರದ ನಾಲ್ಕನೇ ವೆಂಕಟಪ್ಪ ನಾಯಕ ಮತ್ತು ನರಗುಂದದ ಬಾಬಾಸಾಹೇಬ ಮುಖ್ಯ ನಾಯಕರಾಗಿದ್ದರು. ಈ ಹೋರಾಟವು ವಿಫಲಗೊಂಡರೂ ಅದು ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಿತು. ಈ ಹೋರಾಟದ ಪರಿಣಾಮವಾಗಿ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅಂತ್ಯಗೊಂಡು ಅದರ ಕೈಯಲ್ಲಿದ್ದ ಭಾರತದ ಆಳ್ವಿಕೆಯನ್ನು ಬ್ರಿಟಿಷ್ ರಾಣಿ ವಹಿಸಿಕೊಂಡಳು. ಸಾ.ಶ. 1858ರಲ್ಲಿ ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಒಂದು 'ಘೋಷಣೆ' ಯನ್ನು ಹೊರಡಿಸಿದಳು. ಈ ಘೋಷಣೆಯು ಭಾರತೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪಮಾಡುವುದಿಲ್ಲವೆಂದು ಸ್ಪಷ್ಟಪಡಿಸಿತು
ಭಾರತ ರಾಷ್ಟ್ರೀಯ ಕಾಂಗ್ರೆಸ್ (1885) ಭಾರತ ರಾಷ್ಟ್ರೀಯ ಕಾಂಗ್ರೆಸ್ ನಿವೃತ್ತ ಬ್ರಿಟಿಷ್ ನಾಗರಿಕ ಸೇವಾಧಿಕಾರಿ ಎಲನ್ ಆಕ್ಟೇವಿಯನ್ ಹ್ಯೂಮ್ (ಎ.ಓ.ಹ್ಯೂಮ್) ಅವರ ಕನಸಿನ ಕೂಸಾಗಿತ್ತು. ಇದು ಸಾ.ಶ. 1885ರಲ್ಲಿ ಮುಂಬೈಯಲ್ಲಿ ಸ್ಥಾಪಿತವಾಯಿತು. ಉಮೇಶಚಂದ್ರ ಬ್ಯಾನರ್ಜಿಯವರು ಕಾಂಗ್ರೆಸಿನ ಮೊದಲ ಅಧ್ಯಕ್ಷರಾಗಿದ್ದರು. ಮುಂಬೈಯಲ್ಲಿ ನಡೆದ ಕಾಂಗ್ರೆಸಿನ ಮೊದಲ ಅಧಿವೇಶನದಲ್ಲಿ 72 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಂದಗಾಮಿಗಳ ಯುಗ (1885-1905) ಭಾರತ ರಾಷ್ಟ್ರೀಯ ಕಾಂಗ್ರೆಸಿನ ಆರಂಭಿಕ ನಾಯಕರುಗಳನ್ನು ಮಂದಗಾಮಿಗಳು (ಸೌಮ್ಯವಾದಿಗಳು) ಎಂದು ಕರೆಯಲಾಗಿದೆ. ಸಾ.ಶ. 1885ರಿಂದ 1905ರ ನಡುವಿನ ಕಾಲಘಟ್ಟವನ್ನು 'ಮಂದಗಾಮಿಗಳ ಕಾಲ' ಎಂದು ಪರಿಗಣಿಸಲಾಗಿದೆ. ಪ್ರಮುಖ ಮಂದಗಾಮಿ ನಾಯಕರೆಂದರೆ ದಾದಾಬಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ ಮತ್ತು ಇನ್ನಿತರರು.ಟಿಮಂದಗಾಮಿಗಳ ಹೋರಾಟದ ಫಲವಾಗಿ ಭಾರತೀಯರು ಶಾಸನ ಸಭೆಗಳನ್ನು ಪ್ರವೇಶಿಸಲು ಸಾಧ್ಯವಾಯಿತು.
ತೀವ್ರಗಾಮಿಗಳ ಯುಗ (1905-1919) ಮಂದಗಾಮಿಗಳು ಜನತೆಯನ್ನು ಹೆಚ್ಚಾಗಿ ತಲುಪಲಿಲ್ಲ. ಅವರು ಅನುಸರಿಸಿದ ಪ್ರಾರ್ಥನೆ ಮತ್ತು ಮನವಿ ನೀತಿಗಳನ್ನು 'ತಿರುಪೆಯ ನೀತಿ' (ಪಾಲಿಸಿ ಆಫ್ ಮೆಂಡಿಕೆನ್ಸಿ) ಎಂದು ತೀವ್ರವಾದಿಗಳು ವ್ಯಂಗ್ಯವಾಡಿದರುಅವರೇ ತೀವ್ರಗಾಮಿಗಳು. ಲಾಲಾ ಲಜಪತ್ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ಚಂದ್ರ ಪಾಲ್ ಇವರು ತೀವ್ರಗಾಮಿ ಗುಂಪಿನ ನಾಯಕರಾಗಿದ್ದು `ಲಾಲ್ಬಾಲ್ಪಾಲ್' ಎಂದೇ ಜನಪ್ರಿಯರಾದರು. ಸಾ.ಶ. 1905-1919ರ ಕಾಲಾವಧಿಯನ್ನು ತೀವ್ರಗಾಮಿ ರಾಜಕೀಯದ ಕಾಲವೆಂದು ಗುರುತಿಸಲಾಗಿದೆ.
ತೀವ್ರಗಾಮಿಗಳ ಬೆಳವಣಿಗೆಗೆ ಕಾರಣಗಳು
•ಭಾರತೀಯರನ್ನು ಉನ್ನತ ಹುದ್ದೆಗಳಿಗೆ ಪರಿಗಣಿಸದಿದ್ದುದು. • 1905ರಲ್ಲಿ ಲಾರ್ಡ್ ಕರ್ಜನ್ನು ಬಂಗಾಳವನ್ನು ವಿಭಜಿಸುವ ಮೂಲಕ ಮತೀಯ ರಾಜಕಾರಣಕ್ಕೆ ಪ್ರಯತ್ನಿಸಿದ್ದು. • 1905ರಲ್ಲಿ ರಷ್ಯ ದೇಶವನ್ನು ಸಣ್ಣ ರಾಷ್ಟ್ರವಾದ ಜಪಾನ್ ಸೋಲಿಸಿದ ಘಟನೆಯು ಯೂರೋಪಿಯನ್ರನ್ನು ಏಷ್ಯನ್ರು ಸೋಲಿಸಬಹುದು ಎಂಬ ಆತ್ಮವಿಶ್ವಾಸ ಮೂಡಿಸಿತುಬಾಲಗಂಗಾಧರ ತಿಲಕರು ಒಬ್ಬ ಅಪ್ರತಿಮ ದೇಶಭಕ್ತ. "ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ನಾನು ಅದನ್ನು ಪಡೆದೇ ತೀರುತ್ತೇನೆ", ಎಂಬ ಅವರ ಘೋಷಣೆಯಲ್ಲಿ ಸ್ವಾತಂತ್ರ್ಯದ ಉತ್ಕಟತೆಯಿತ್ತು. ಜನರನ್ನು ಒಗ್ಗೂಡಿಸುವ ದೃಷ್ಟಿಯಿಂದ ತಿಲಕರು ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದರು. `ಮರಾಠ' (ಇಂಗ್ಲಿಷ್) ಮತ್ತು `ಕೇಸರಿ' (ಮರಾಠಿ) ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಜನರನ್ನು ರಾಜಕೀಯವಾಗಿ ಪ್ರೇರೇಪಿಸಿದರು. ಬಿಪಿನ್ಚಂದ್ರ ಪಾಲರು `ನ್ಯೂ ಇಂಡಿಯಾ' ಹಾಗೂ ಅರವಿಂದರು `ವಂದೇ ಮಾತರಂ' ಪತ್ರಿಕೆಗಳನ್ನು ಪ್ರಾರಂಭಿಸಿದರು. ಲಾಲಾ ಲಜಪತ್ರಾಯ್ `ಪಂಜಾಬಿನ ಸಿಂಹ' ಎಂದೇ ಜನಪ್ರಿಯರಾಗಿದ್ದರು.
ಬಂಗಾಳದ ವಿಭಜನೆ (1905 ಬಂಗಾಳವನ್ನು ಹಿಂದೂ ಮತ್ತು ಮುಸಲ್ಮಾನ ಎಂಬ ಮತೀಯ ಭಿನ್ನತೆಯ ಆಧಾರದ ಮೇಲೆ ವಿಭಜಿಸುವ ಮೂಲಕ ರಾಷ್ಟ್ರೀಯತೆಯ ತೀವ್ರತೆಯನ್ನು ಹತ್ತಿಕ್ಕಲು ವೈಸರಾಯ್ ಲಾರ್ಡ್ ಕರ್ಜನ್ ಪ್ರಯತ್ನಿಸಿದನು. ಈ ವಿಭಜನೆಯನ್ನು ವಿರೋಧಿಸಿ 1905 ಅಕ್ಟೋಬರ್ 16ರಂದು ಬಂಗಾಳದಾದ್ಯಂತ `ರಾಷ್ಟ್ರೀಯ ಶೋಕದಿನ'ವನ್ನಾಗಿ ಆಚರಿಸಿದರು.
ರವೀಂದ್ರನಾಥ ಟಾಗೋರ್ 'ಅಮರ್ ಸೋನಾರ್ ಬಾಂಗ್ಲ' ಗೀತೆಯನ್ನು ರಾಷ್ಟ್ರೀಯ ಗೀತೆಯಾಗಿ ಹಾಡಿದರು. ಬಂಕಿಮ ಚಂದ್ರರ `ವಂದೇ ಮಾತರಂ' ದೇಶಪ್ರೇಮಿಗಳ ಗೀತೆಯಾಗಿತ್ತು. ಬಂಗಾಳದ ಏಕತೆಯನ್ನು ಪ್ರತಿನಿಧಿಸಲು ಹಿಂದೂ ಮುಸಲ್ಮಾನರು ಪರಸ್ಪರ `ರಕ್ಷಾ ಬಂಧನ್' ಕಟ್ಟಿಕೊಂಡರು. ಜನತೆಯ ತೀವ್ರ ಪ್ರತಿಭಟನೆಗಳಿಗೆ ಮಣಿದು ಸಾ.ಶ. 1911ರಲ್ಲಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು.
ಮುಸ್ಲಿಮ್ ಲೀಗ್ ಸ್ಥಾಪನೆ (1906) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ಕಾಲದಿಂದಲೇ ಮುಸ್ಲಿಮರು ತಮ್ಮ ಸಮುದಾಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಳ್ಳುವಂತೆ ಬ್ರಿಟಿಷರು ಅವರನ್ನು ಪÉÇ್ರೀತ್ಸಾಹಿಸಿದರು. ಸಾ.ಶ. 1906ರಲ್ಲಿ ಮುಸ್ಲಿಂ ನಿಯೋಗವೊಂದು ಭಾರತದ ವೈಸರಾಯ್ ಆಗಿದ್ದ ಮಿಂಟೋ ಅವರನ್ನು
ಭೇಟಿ ಮಾಡಿತು. ಭೇಟಿಯ ಪ್ರೇರಣೆಯಿಂದಾಗಿ, ಸರ್ ಆಗಾಖಾನ್, ಢಾಕಾದ ನವಾಬ ಸಲಿಮುಲ್ಲ ಮತ್ತು ಇನ್ನಿತರರು ಸೇರಿ ಸಾ.ಶ. 1906ರಲ್ಲಿ ಭಾರತ ಮುಸ್ಲಿಮ್ ಲೀಗ್ನ್ನು ಢಾಕಾದಲ್ಲಿ (ಈಗಿನ ಬಾಂಗ್ಲಾದೇಶದ ರಾಜಧಾನಿ) ಸ್ಥಾಪಿಸಿದರುಸಾ.ಶ. 1907ರಲ್ಲಿ ಸೂರತ್ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ನಡುವೆ ಕಾಂಗ್ರೆಸ್ ಇಬ್ಭಾಗವಾಯಿತುತಿಲಕರಿಗೆ ಕರಿನೀರು ಶಿಕ್ಷೆಯನ್ನು ವಿಧಿಸಿ ಮಾಂಡೆಲೆ (ಬರ್ಮಾ) ಸೆರೆಮನೆಗೆ ಗಡಿಪಾರು ಮಾಡಲಾಯಿತು. ತೀವ್ರಗಾಮಿಗಳನ್ನು ರಾಜಕೀಯವಾಗಿ ನಿಷ್ಕ್ರಿಯಗೊಳಿಸುವ ಸಲುವಾಗಿ ಬ್ರಿಟಿಷರು ಮಂದಗಾಮಿಗಳು ಮತ್ತು ಮುಸ್ಲಿಮರಿಗೆ ಶಾಸಕಾಂಗದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿ ಒಲೈಸಲೆತ್ನಿಸಿದರು. ಈ ನಿಟ್ಟಿನಲ್ಲಿ ಮಿಂಟೋಮಾರ್ಲೆ ಸುಧಾರಣೆಗಳನ್ನು ಸಾ.ಶ. 1909ರಲ್ಲಿ ಜಾರಿಗೆ ತಂದರು. ಈ ಕಾಯಿದೆಯಲ್ಲಿ ಮುಸ್ಲಿಮರಿಗೆ ‘ಪ್ರತ್ಯೇಕ ಮತಕ್ಷೇತ್ರ’ವನ್ನು ಕಲ್ಪಿಸಿದರು. ಸಾ.ಶ. 1916ರಲ್ಲಿ ಲೋಕಮಾನ್ಯ ತಿಲಕರು ಮತ್ತು ಆ್ಯನಿ ಬೆಸೆಂಟರು ಹೋಂ ರೂಲ್ ಚಳವಳಿಯನ್ನು ಹಮ್ಮಿಕೊಂಡರು
ಹೋಂ ರೂಲ್ ಇದು ಐರಿಷ್ ಹೋಂ ರೂಲ್ ಚಳವಳಿಯಿಂದ ಪ್ರೇರೇಪಿತವಾಗಿತ್ತು. ಇದರ ಮುಖ್ಯ ಉದ್ದೇಶವೆಂದರೆ ಭಾರತಕ್ಕೆ ಸ್ವಯಂ ಆಡಳಿತ ತರುವುದು. ತಿಲಕ್ ಮತ್ತು ಆ್ಯನಿಬೆಸೆಂಟರು 1916ರಲ್ಲಿ ಪ್ರತ್ಯೇಕವಾಗಿ ಹೋಂ ರೂಲ್ ಚಳವಳಿಗಳನ್ನು ಮಹಾರಾಷ್ಟ್ರ ಮತ್ತು ತಮಿಳುನಾಡು ಪ್ರಾಂತ್ಯಗಳಲ್ಲಿ ಆರಂಭಿಸಿದರು
ಜಲಿಯನ್ವಾಲಾಬಾಗ್ ಹತ್ಯಾಕಾಂಡ (1919) ರೌಲಟ್ ಕಾಯಿದೆಯ ವಿರುದ್ಧ ಗಾಂಧೀಜಿ ಹಮ್ಮಿಕೊಂಡಿದ್ದ ಸತ್ಯಾಗ್ರಹದಿಂದಾಗಿ ಪಂಜಾಬಿನ ಬಹುತೇಕ ಭಾಗಗಳಲ್ಲಿ ಪ್ರತಿಭಟನೆಗಳು ಆರಂಭವಾದವು. ಸಾ.ಶ. 1919 ಏಪ್ರಿಲ್ 13ರಂದು ಅಮೃತಸರದ ಸುವರ್ಣ ಮಂದಿರದಿಂದ ಸ್ವಲ್ಪ ದೂರದಲ್ಲಿರುವ ಜಲಿಯನ್ವಾಲಾಬಾಗ್ ಎಂಬ ಉದ್ಯಾನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ತಮ್ಮ ನಾಯಕರಾಗಿದ್ದ ಸೈಪುದ್ದೀನ್ ಕಿಚ್ಲೂ ಮತ್ತು ಡಾ. ಸತ್ಯಪಾಲರ ಬಂಧನದ ವಿರುದ್ಧ ಪ್ರತಿಭಟನೆ ಮಾಡುವುದಾಗಿತುರಹಸ್ಯ ಸಂಘಟನೆಯನ್ನು ರೂಪಿಸಿಕೊಂಡ ಕ್ರಾಂತಿಕಾರಿಗಳಲ್ಲಿ ವಾಸುದೇವ ಬಲವಂತ ಫಡ್ಕೆ ಮೊದಲಿನವರು. ದಾಮೋದರ ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು ಅವರ ರಹಸÀ್ಯ ಸಂಘಟನೆಯ ಜೀವನಾಡಿಗಳಾಗಿದ್ದರು. ಇವರಿಬ್ಬರನ್ನೂ ಬಂಧಿಸಿ ಗಲ್ಲಿಗೇರಿಸಲಾಯಿತುಖುದಿರಾಮ್ ಸ್ವಾತಂತ್ರ್ಯ ಹೋರಾಟದಲ್ಲಿ ನೇಣುಗಂಬ ಏರಿದ ಭಾರತದ ಮೊದಲ ಹುತಾತ್ಮ (ಸಾ.ಶ. 1908). ಆಗ ಅವನ ವಯಸ್ಸು ಕೇವಲ 19 ವರ್ಷ. ವಿನಾಯಕ ದಾಮೋದರ ಸಾವರ್ಕರ್ ಮತ್ತೋರ್ವ ಕ್ರಾಂತಿಕಾರಿ. 1899ರಲ್ಲಿ ಅವರು `ಮಿತ್ರಮೇಳ' ಎನ್ನುವ ಪ್ರಥಮ ಗುಪ್ತ ಸಂಘಟನೆಯನ್ನು ಕಟ್ಟಿದರು. ಭಗತ್ ಸಿಂಗ್ ಹಿಂದೂಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಸಂಘಟನೆಯನ್ನು ಸೇರಿ ಅದರ ಪ್ರಧಾನ ಕಾರ್ಯದರ್ಶಿಯಾದರು. ಸಾ.ಶ. 1929ರಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ದಿಲ್ಲಿಯಲ್ಲಿ ಕೇಂದ್ರೀಯ ಶಾಸನಸಭೆಯ ಮೇಲೆ ಬಾಂಬೆಸೆದರು. ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಈ ಮೂವರನ್ನು ಗಲ್ಲಿಗೇರಿಸಲಾಯಿತು. ಭಗತ್ಸಿಂಗ್ "ಇಂಕ್ವಿಲಾಬ್ ಜಿಂದಾಬಾದ್" (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೊದÀಲ ಬಾರಿಗೆ ಮೊಳಗಿಸಿದ ಭಾರತೀಯರಾಗಿದ್ದಾg.
3. ಗಾಂಧಿ ಯುಗ (1919-1947) ಗಾಂಧೀಜಿಯವರು ಸಾ.ಶ. 1869ರ ಅಕ್ಟೋಬರ್ 2ರಂದು ಗುಜರಾತ್ ರಾಜ್ಯದ ಪÉÇೀರಬಂದರ್ ಎಂಬಲ್ಲಿ ಕರಮಚಂದ ಗಾಂಧಿ ಮತ್ತು ಪುತಲೀಬಾಯಿಯವರ ಮಗನಾಗಿ ಜನಿಸಿದರು. ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಪ್ರಮುಖ ಕೃತಿಗಳೆಂದರೆ:
ಭಗವದ್ಗೀತೆ, ಜಾನ್ ರಸ್ಕಿನನ `ಕೊನೆಯ ತನಕ' (Uಟಿಣo ಣhis ಐಚಿsಣ), ಟಾಲ್ಸ್ಟಾಯ್ ಅವರ `ನಿನ್ನಂತರಂಗವೇ ದೇವರ ರಾಜ್ಯ' (ಖಿhe ಏiಟಿgಜom oಜಿ ಉoಜ is Wiಣhiಟಿ ಙou) ಮತ್ತು `ಸತ್ಯ ಹರಿಶ್ಚಂದ್ರ ನಾಟಕ. ಗಾಂಧೀಜಿಯವರ ಆರಂಭಿಕ ಶಿಕ್ಷಣ ಪÉÇೀರಬಂದರಿನಲ್ಲಾಯಿತು. ಉನ್ನತ ಶಿಕ್ಷಣಕ್ಕಾಗಿ ಅವರು ಇಂಗ್ಲೆಂಡಿಗೆ ತೆರಳಿದರು. ಅವರು ಬ್ರಿಟನಿನಲ್ಲಿ ಕಾನೂನು ಪದವಿ ಪಡೆದರು. 1891ರಲ್ಲಿ ಭಾರತಕ್ಕೆ ಹಿಂದಿರುಗಿ ರಾಜ್ಕೋಟ್ ಮತ್ತು ಮುಂಬೈಯಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿದರು. ನಂತರ ದಾದಾ ಅಬ್ದುಲ್ಲಾ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು ಸತ್ಯಾಗ್ರಹ ಸಿದ್ಧಾಂತವು ಸಂಸ್ಕøತದ ಎರಡು ಪದಗಳಿಂದ ಕೂಡಿದೆ: `ಸತ್ಯ' ಎಂದರೆ ವಾಸ್ತವಿಕ ಸಂಗತಿ, `ಆಗ್ರಹ' ಎಂದರೆ ಒತ್ತಾಯ. ಇದರರ್ಥ "ಸತ್ಯದಪರ ದೃಢವಾಗಿ ನಿಲ್ಲು". ಸಾ.ಶ. 1915ರಲ್ಲಿ ಭಾರತಕ್ಕೆ ಹಿಂತಿರುಗಿದ ನಂತರ ಗಾಂಧೀಜಿಯವರು ಅಹಮದಾಬಾದ್ ಬಳಿ ಸಾಬರಮತಿ ಆಶ್ರಮವನ್ನು (ಸಾ.ಶ. 1916) ಸ್ಥಾಪಿಸಿದರು. ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನದ ಮೇರೆಗೆ ಭಾರತಾದ್ಯಂತ ಪ್ರವಾಸ ಮಾಡಿ ಜನತೆಯ ಶೋಚನೀಯ ಸ್ಥಿತಿಯನ್ನು ಕಂಡರು. ಚಂಪಾರಣ್ ಮತ್ತು ಖೇಡಾಗಳಲ್ಲಿ ರೈತರ ಪರ ಹೋರಾಟ ನಡೆಸಿದರುಸಾ.ಶ. 1917ರಲ್ಲಿ ಚಂಪಾರಣ್ ಸತ್ಯಾಗ್ರಹವನ್ನು ಆರಂಭಿಸಿದರು. ಕೊನೆಯಲ್ಲಿ ರೈತರ ಸಮಸ್ಯೆ ಪರಿಹಾರ ಕಂಡಿತು. ಈ ಚಳವಳಿಯ ಮೂಲಕ ಬಾಬು ರಾಜೇಂದ್ರ ಪ್ರಸಾದ್ ಪ್ರಮುಖ ನಾಯಕರಾಗಿ ರೂಪುಗೊಂಡರು.
ಖೇಡಾ ರೈತ ಹೋರಾಟ: ಖೇಡಾ ಗುಜರಾತ್ ರಾಜ್ಯದ ಪ್ರಮುಖ ಜಿಲ್ಲೆ.
ಸಾ.ಶ. 1918ರ ಸಂದರ್ಭದಲ್ಲಿ ಬೆಳೆಗಳು ವಿಫಲವಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದರು. ಈ ಹಿನ್ನೆಲೆಯಲ್ಲಿ ಅವರು ಕಂದಾಯ ಕಟ್ಟುವುದರಿಂದ ವಿನಾಯಿತಿ ನೀಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದರು. ಸರಕಾರ ಇವರ ಮನವಿಯನ್ನು ತಿರಸ್ಕರಿಸಿದ್ದಲ್ಲದೆ, ಕಂದಾಯ ಸಂಗ್ರಹಣೆಗೆ ಒತ್ತಾಯಿಸಿತು. ಪರಿಣಾಮವಾಗಿ ಖೇಡಾದಲ್ಲಿ ರೈತ ಹೋರಾಟ ಪ್ರಾರಂಭವಾಯಿತು. ಈ ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದ ನಾಯಕರೆಂದರೆ ಸರದಾರ ವಲ್ಲಭಭಾಯಿ ಪಟೇಲರು 1919ನೇ ಇಸವಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಇದು ಗಾಂಧೀಜಿಯವರು ಭಾರತದ ರಾಜಕೀಯ ರಂಗವನ್ನು ಪ್ರವೇಶಿಸಿದ ವರ್ಷ.
ಖಿಲಾಫತ್ ಚಳವಳಿ ಎಂದರೇನು 1919ರಲ್ಲಿ ಕಮಾಲ್ ಪಾಷಾ ಎಂಬ ನಾಯಕನು ಟರ್ಕಿಯ ಖಲೀಫರ ಅರಸೊತ್ತಿಗೆಯನ್ನು ಮೂಲೆಗೊತ್ತಿ ಅಧಿಕಾರಕ್ಕೇರಿದನು. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಮುಸ್ಲಿಮರು ಖಲೀಫರ ಪರವಾಗಿಯೂ ಬ್ರಿಟನಿನ ವಿರುದ್ಧವಾಗಿಯೂ ಆಂದೋಲನ ನಡೆಸಿದರು. ಇದನ್ನು ಖಿಲಾಫತ್ 'ಚಳವಳಿ' ಎನ್ನುವರು. ಗಾಂಧೀಜಿಯವರು ಚಳವಳಿಯ ಮುಂದಾಳುತನವನ್ನು ವಹಿಸಿದರು. ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ (ಆಲಿ ಸಹೋದರರು) ಈ ಚಳವಳಿಯ ಪ್ರಮುಖ ನಾಯಕರಾಗಿದ್ದರು. ಅಸಹಕಾರ ಚಳವಳಿ (1920-22) ಗಾಂಧೀಜಿಯವರ ನಾಯಕತ್ವದಲ್ಲಿ ಅಸಹಕಾರ ಚಳವಳಿಯು ಸಾ.ಶ. 1920ರಲ್ಲಿ ಆರಂಭವಾಯಿತು. ರವೀಂದ್ರನಾಥ್ ಟಾಗೋರ್ ತಮ್ಮ `ನೈಟ್ಹುಡ್' ಪ್ರಶಸ್ತಿಯನ್ನು ಹಾಗೂ ಗಾಂಧೀಜಿಯವರು ತಮ್ಮ `ಕೈಸರ್ಐಹಿಂದ್' ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂತಿರುಗಿಸಿದರು. ಇದೇ ವೇಳೆ ಸರ್ಕಾರವು ಚಳವಳಿಯನ್ನು ಹತ್ತಿಕ್ಕಲು ದಮನಕಾರಿ ಕ್ರಮಗಳನ್ನು ಅನುಸರಿಸಿತು. ಇದಕ್ಕೆ ಉತ್ತರವೆಂಬಂತೆ ಉತ್ತರ ಪ್ರದೇಶದ ಚೌರಿಚೌರಾದಲ್ಲಿ ಉದ್ರಿಕ್ತ ಜನಸ್ತೋಮ ಹಿಂಸಾಕೃತ್ಯದಲ್ಲಿ ತೊಡಗಿ ಅಲ್ಲಿನ ಠಾಣೆಯ 22 ಜನ ಪÉÇಲೀಸರನ್ನು ಜೀವಂತ ಸುಟ್ಟಿತು (ಸಾ.ಶ. 1922).
ಗಾಂಧೀಜಿಯವರ ಪ್ರಮುಖ ಕೃತಿಗಳು ಮತ್ತು ಪತ್ರಿಕೆಗಳು 'ಸತ್ಯದೊಂದಿಗೆ ನನ್ನ ಪ್ರಯೋಗಗಳು', 'ಹಿಂದ್ ಸ್ವರಾಜ್', 'ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ', ಇವು ಗಾಂಧೀಜಿ ಅವರ ಕೃತಿಗಳು. ‘ಹರಿಜನ’ ಮತ್ತು ‘ಯಂಗ್ ಇಂಡಿಯಾ’ ಇವು ಅವರು ಸಂಪಾದಕರಾಗಿದ್ದ ವೃತ್ತಪತ್ರಿಕೆಗಳು
ನೆಹರು ವರದಿ (ಸಾ.ಶ. 1927) ಬ್ರಿಟಿಷರು ಭಾರತೀಯ ರಾಜಕೀಯ ನಾಯಕರಿಗೆ ಎಲ್ಲಾ ಸಮುದಾಯದವರು ಒಪ್ಪÅವಂತಹ ಸಂವಿಧಾನವನ್ನು ರಚಿಸಿಕೊಳ್ಳುವಂತೆ ಸವಾಲೆಸೆದರು. ಭಾರತೀಯ ಸರ್ವಪಕ್ಷಗಳ ಸಮ್ಮೇಳನದಲ್ಲಿ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು.
ಸೈಮನ್ ನಿಯೋಗ (ಸಾ.ಶ. 1928) ಬ್ರಿಟಿಷ್ ಸರ್ಕಾರ ಸಾ.ಶ. 1919ರ ಸುಧಾರಣೆಗಳು ಭಾರತದ ಪ್ರಾಂತಗಳಲ್ಲಿ ಹೇಗೆ ಕಾರ್ಯಗತಗೊಂಡಿವೆ ಎಂದು ಅಧ್ಯಯನ ಮಾಡಿ ವರದಿ ನೀಡಲು ಸೈಮನ್ ನಿಯೋಗವನ್ನು (ಸಾ.ಶ. 1928) ಭಾರತಕ್ಕೆ ಕಳುಹಿಸಿತು. ನಿಯೋಗದಲ್ಲಿದ್ದ ಎಲ್ಲಾ ಸದಸ್ಯರೂ ಇಂಗ್ಲಿಷರೇ ಆಗಿದ್ದು, ಭಾರತೀಯರಿಗೆ ಅದರಲ್ಲಿ ಪ್ರಾತಿನಿಧ್ಯವಿರಲಿಲ್ಲ. ಲಾಹೋರಿನಲ್ಲಿ ನಡೆದ ಬಹಿರಂಗ ಪ್ರತಿಭಟನೆಯು ತೀವ್ರ ಸ್ವರೂಪವನ್ನು ತಾಳಿತು. ಈ ಸಂದರ್ಭದಲ್ಲಿ ನಡೆದ ಲಾಠಿ ಪ್ರಯೋಗದಲ್ಲಿ ಲಾಲಾ ಲಜಪತ್ ರಾಯ್ ಅವರು ಚೇತರಿಸಿಕೊಳ್ಳಲಾಗದೆ ಮರಣ (ಸಾ.ಶ. 1928) ಹೊಂದಿದರು 1929ರಲ್ಲಿ ಲಾಹೋರಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ "ಸಂಪೂರ್ಣ ಸ್ವಾತಂತ್ರ್ಯ"ದ ನಿರ್ಣಯವನ್ನು ಮಂಡಿಸಲಾಯಿತು. ಸಾ.ಶ. 1930ರ ಜನವರಿ 26ರಂದು ``ಪೂರ್ಣ ಸ್ವರಾಜ್ಯದಿನ'' ಎಂದು ಆಚರಿಸಲು ಅಧಿವೇಶನದಲ್ಲಿ ನಿರ್ಧರಿಸಲಾಯಿತು. ಈ ಐತಿಹಾಸಿಕ ಸಂಭ್ರಮಾಚರಣೆಯ ದಿನದ ನೆನಪನ್ನು ಹಸಿರಾಗಿಸಲು, ಸ್ವತಂತ್ರ ಭಾರತದ ಸಂವಿಧಾನವನ್ನು ಜನವರಿ 26, 1950ರಂದು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿವರ್ಷ ಆ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತಿದೆ.
ನಾಗರಿಕ ಕಾನೂನುಭಂಗ ಚಳವಳಿನಾಗರಿಕ ಕಾನೂನುಭಂಗ ಚಳವಳಿಯನ್ನು ಸಾ.ಶ. 1930ರ ಮಾರ್ಚ್ 12ರಂದು ಗಾಂಧೀಜಿ ಅವರು ಪ್ರಸಿದ್ಧ ದಂಡಿಯಾತ್ರೆಯೊಂದಿಗೆ ಆರಂಭಿಸಿದರು. ಆಯ್ದ 78 ಮಂದಿ ಅನುಯಾಯಿಗಳೊಡನೆ ಗಾಂಧೀಜಿ ಸಾಬರಮತಿ ಆಶ್ರಮದಿಂದ ಗುಜರಾತಿನ ಕಡಲತೀರದ ದಂಡಿಯವರೆಗೂ ಸುಮಾರು 375 ಕಿ.ಮೀ. ದೂರವನ್ನು ಕ್ರಮಿಸಿದರು. ಇದೇ ವೇಳೆ ವಾಯವ್ಯ ಭಾರತದಲ್ಲಿ `ಗಡಿನಾಡ ಗಾಂಧಿ' ಖಾನ್ ಅಬ್ದುಲ್ ಗಫಾರ್ ಖಾನರು `ಖುದಾಯಿ ಖಿದ್ಮತ್ಗಾರ' (ದೇವರ ಸೇವಕರು) ಎಂಬ ಸಂಘವನ್ನು ಸ್ಥಾಪಿಸಿದರು. ನಾಗಾಲ್ಯಾಂಡಿನಲ್ಲಿ 13 ವರ್ಷದ ಬಾಲೆ ರಾಣಿ ಗಾಯ್ಡಿಲ್ಯೂ ಬ್ರಿಟಿಷರ ವಿರುದ್ಧ ಬಂಡಾಯ ನಡೆಸಿದಳು.
ದುಂಡು ಮೇಜಿನ ಸಮ್ಮೇಳನಗಳು (1930-32) ದಂಡಿ ಯಾತ್ರೆಯ ಬಳಿಕ ಬ್ರಿಟಿಷ್ ಸರ್ಕಾರ ಮೂರು ದುಂಡುಮೇಜಿನ ಸಮ್ಮೇಳನಗಳನ್ನು ಲಂಡನಿನಲ್ಲಿ ಆಯೋಜಿಸಿತು. ಕಾಂಗ್ರೆಸ್ ಪರವಾಗಿ ಗಾಂಧೀಜಿಯವರು ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದರು. ಆದರೆ ಬ್ರಿಟನ್ ಪ್ರಧಾನಿ ರಾಮ್ಸೆ ಮ್ಯಾಕ್ಡೊನಾಲ್ಡ್ ಅವರು ದುಂಡು ಮೇಜಿನ ಸಮ್ಮೇಳನದ
ನಂತರ `ಮತೀಯ ತೀರ್ಪು' (ಕಮ್ಯೂನಲ್ ಎವಾರ್ಡ್) (1932) ಘೋಷಿಸಿದರು. ಅದರಲ್ಲಿ ದಲಿತ ವರ್ಗಕ್ಕೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕಲ್ಪಿಸಿತು. ಈ ತೀರ್ಪ ಭಾರತೀಯರ ಒಗ್ಗಟ್ಟನ್ನು ಒಡೆಯುವ ತಂತ್ರವೆಂದು ಗಾಂಧೀಜಿಯವರು ವಿರೋಧಿಸಿ ಪೂನಾದ ಯರವಾಡಾ ಜೈಲಿನಲ್ಲಿ ಆಮರಣ ಉಪವಾಸವನ್ನು ಕೈಗೊಂಡರು. ಅಂತಿಮವಾಗಿ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪೂನಾ ಒಪ್ಪಂದ (1932) ಏರ್ಪಟ್ಟಿತು.
ಭಾರತ ಬಿಟ್ಟು ತೊಲಗಿ ಚಳವಳಿ (1942) ಕ್ರಿಪ್ಸ್ ಆಯೋಗದ ವೈಫಲ್ಯವು ಭಾರತೀಯರನ್ನು ಕೆರಳಿಸಿತು. ಗಾಂಧೀಜಿ ಅವರು ಸಾ.ಶ. 1942ರ ಆಗಸ್ಟ್ 8ರಂದು ಮುಂಬೈನಲ್ಲಿ ಕಾಂಗ್ರೆಸಿನ ಸಭೆ ಕರೆದರು. ಅಲ್ಲಿ ಪ್ರಸಿದ್ಧ `ಭಾರತ ಬಿಟ್ಟು ತೊಲಗಿ' ಎಂಬ ನಿರ್ಣಯವನ್ನು ಅಂಗೀಕರಿಸಿದರು. ಭಾರತೀಯರಿಗೆ `ಮಾಡು ಇಲ್ಲವೆ ಮಡಿ' ಎಂಬ ಘೋಷಣೆ ನೀಡಿದರು.
ಸುಭಾಷ್ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆ (ಐ.ಎನ್.ಎ) ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ಚಂದ್ರ ಬೋಸರ ಪಾತ್ರ ಅನನ್ಯವಾದುದು. ಅವರು ಕಲ್ಕತ್ತ ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಲಂಡನಿನಲ್ಲಿ ಐ.ಸಿ.ಎಸ್. ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದರು. ಅವರು `ದೇಶಬಂಧು' ಚಿತ್ತರಂಜನ್ ದಾಸರ ಪ್ರಭಾವದಿಂದ ಚಳವಳಿಗೆ ಆಕÀರ್ಷಿತರಾಗಿ ರಾಜಕೀಯಕೆÀ್ಕ ಧುಮುಕಿದರು. ವಿಶೇಷವಾಗಿ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರವಣಿಗೆಗಳಿಂದ ಅವರು ಸ್ಫೂರ್ತಿ ಪಡೆದಿದ್ದರು. ಸುಭಾಷರು ಗಾಂಧೀಜಿಯವರ ಬಗೆಗೆ ಅಪಾರ ಗೌರವ ಹೊಂದಿದ್ದರು. ಆದರೆ ಅವರ ರಾಜನೀತಿಯನ್ನು ವಿರೋಧಿಸಿದರು. ಕೊನೆಗೆ ಗಾಂಧೀಜಿ ಅವರೊಂದಿಗೆ ತೀವ್ರ ಭಿನ್ನಾಭಿಪ್ರಾಯ ತಳೆದು 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದರು. ನಂತರ `ಫಾರ್ವರ್ಡ್ ಬ್ಲಾಕ್' ಎಂಬ ಹೊಸ ಪಕ್ಷವನ್ನು ಸಂಘಟಿಸಿದರುಜಪಾನ್ ಬ್ರಿಟಿಷರ ವಿರುದ್ಧ ಎರಡನೇ ಮಹಾಯುದ್ಧವನ್ನು ಪ್ರವೇಶಿಸಿತು. ಯುದ್ಧದಲ್ಲಿ ಬ್ರಿಟನಿನ ಪರ ಹೋರಾಡಿದ ಸುಮಾರು 40,000 ಭಾರತೀಯ ಸೈನಿಕರು ಜಪಾನಿನ ಯುದ್ಧ ಖೈದಿಗಳಾಗಿದ್ದರು. ಅವರು ಮೋಹನ್ ಸಿಂಗ್ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನೇಷನಲ್ ಆರ್ಮಿ - ಐ.ಎನ್.ಎ.) ಅಥವಾ ಆಜಾದ್ ಹಿಂದ್ ಫೌಜ್ ಎಂಬ ಹೆಸರಿನಿಂದ ಸಂಘಟಿತರಾಗಿದ್ದರು. 1943ರಲ್ಲಿ ಸುಭಾಷ್ಚಂದ್ರರು ಸಿಂಗಾಪುರಕ್ಕೆ ಬಂದು ಐ.ಎನ್.ಎ.ಯ ನಾಯಕತ್ವ ವಹಿಸಿಕೊಂಡರು. ಸುಭಾಷರನ್ನು `ನೇತಾಜಿ' ಎಂದು ಕರೆಯಲಾಯಿತು. ಶೀಘ್ರವೇ ನೇತಾಜಿಯವರು ಸಿಂಗಾಪುರದಲ್ಲಿ`ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ'ವನ್ನು ಸ್ಥಾಪಿಸಿದರು. ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಅದಕ್ಕೆ ಮಾನ್ಯತೆ ನೀಡಿದವು. `ಚಲೋ ದಿಲ್ಲಿ' ಎಂಬ ಘೋಷಣೆಯೊಂದಿಗೆ ನೇತಾಜಿಯವರ ನಾಯಕತ್ವದಲ್ಲಿ ಐ.ಎನ್.ಎ. ಬರ್ಮದ ಕಡೆಯಿಂದ ಭಾರತದ ಪ್ರದೇಶದಲ್ಲಿ (ಈಗಿನ ಮಣಿಪುರ) ಸುಮಾರು 150 ಮೈಲಿಗಳಷ್ಟು ಮುನ್ನುಗ್ಗಿತು. ಅಲ್ಪಕಾಲದಲ್ಲೇ ಬ್ರಿಟಿಷ್ ಸೇನೆ ಬರ್ಮದ ರಾಜಧಾನಿ ರಂಗೂನನ್ನು ವಶಪಡಿಸಿಕೊಂಡಿದ್ದರಿಂದ ಐ.ಎನ್.ಎ.ಗೆ ಹಿನ್ನಡೆ ಉಂಟಾಯಿತು. ಇದೇ ವೇಳೆ ಅಣುಬಾಂಬ್ ದಾಳಿಗೆ ಒಳಗಾದ ಜಪಾನ್ 1945 ಆಗಸ್ಟ್ ತಿಂಗಳಲ್ಲಿ ಶರಣಾಯಿತು. ಆಗಸ್ಟ್ 18 ರಂದು ನೇತಾಜಿ ಅವರು ವಿಮಾನದಲ್ಲಿ ಹೊರಟವರು ನಿಗೂಢವಾಗಿ ಕಣ್ಮರೆಯಾದರು.
ಅಂಬೇಡ್ಕರ್ ಮತ್ತು ಅವರ ಸುಧಾರಣೆಗಳುಅಂಬೇಡ್ಕರ್ ಅವರು ಮಧ್ಯಪ್ರದೇಶದ `ಮ್ಹೋ' ಎಂಬಲ್ಲಿ 14 ಏಪ್ರಿಲ್ 1891ರಂದು ಜನಿಸಿದರು. ತಂದೆ ರಾಮ್ಜಿ ಸಕ್ಪಲ್, ತಾಯಿ ಭೀಮಾಬಾಯಿ. ಅಂಬೇಡ್ಕರರ ಬಾಲ್ಯದ ಹೆಸರು ಭೀಮರಾವ್. ಅದಕ್ಕಾಗಿ ಅಸ್ಪøಶ್ಯತೆಯ ವಿರುದ್ಧ ಹಲವು ಹೋರಾಟಗಳನ್ನು ರೂಪಿಸಿದರು. ಅವುಗಳಲ್ಲಿ ಮಹಡ್ ಸತ್ಯಾಗ್ರಹ, ನಾಸಿಕ್ನ ಕಲಾರಾಮ ದೇವಾಲಯ ಪ್ರವೇಶದಂತಹ ಯಶಸ್ವಿ ಹೋರಾಟಗಳನ್ನು ಹಮ್ಮಿಕೊಂಡರು. ಹೀಗೆ ದಲಿತರಲ್ಲಿ ಜಾಗೃತಿ ಮತ್ತು ಸ್ವಾಭಿಮಾನವನ್ನುಂಟು ಮಾಡಿದರು. 'ಮೂಕನಾಯಕ' ಮತ್ತು 'ಬಹಿಷ್ಕøತ ಭಾರತ' ಎಂಬ ಪತ್ರಿಕೆಗಳ ಸಂಪಾದಕರಾಗಿ ದಲಿತ, ಶೋಷಿತ ಮತ್ತು ಅಸ್ಪøಶ್ಯರ ಧ್ವನಿಯಾದರು. ಬಹಿಷ್ಕøತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನೂ ಸ್ಥಾಪಿಸಿದರುಡಾ. ಅಂಬೇಡ್ಕರ್ ದಲಿತ ವರ್ಗಗಳ ಪ್ರತಿನಿಧಿಯಾಗಿ ಲಂಡನಿನಲ್ಲಿ ನಡೆದ ಮೂರೂ ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. ಬ್ರಿಟಿಷರಿಂದ ಘೋಷಿಸಲ್ಪಟ್ಟ `ಮತೀಯ ತೀರ್ಪು' (ಕಮ್ಯೂನಲ್ ಎವಾರ್ಡ್) (1932) ದಲಿತ ವರ್ಗಕ್ಕೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕಲ್ಪಿಸಿತು. ಈ ತೀರ್ಪನ್ನು ಒಪ್ಪದ ಗಾಂಧೀಜಿಯವರು ಪೂನಾದ ಯರವಾಡಾ ಸೆರೆಮನೆಯಲ್ಲಿ ಆಮರಣ ಉಪವಾಸವನ್ನು ಕೈಗೊಂಡರು. 1956 ಡಿಸೆಂಬರ್ 6ರಂದು ನಿಧನ ಹೊಂದಿದರು. ಇದಕ್ಕೆ ಕೆಲವೇ ತಿಂಗಳುಗಳ ಮೊದಲು ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದರು. 1990ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು. "ಶಿಕ್ಷಣ, ಸಂಘಟನೆ ಮತ್ತು ಹೋರಾಟ" ಇದು ಅಂಬೇಡ್ಕರರ ಪ್ರಸಿದ್ಧ ಘೋಷವಾಕ್ಯವಾಗಿದೆ.
ಸಮಾಜವಾದಿಗಳು 1956 ಡಿಸೆಂಬರ್ 6ರಂದು ನಿಧನ ಹೊಂದಿದರು. ಇದಕ್ಕೆ ಕೆಲವೇ ತಿಂಗಳುಗಳ ಮೊದಲು ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದರು. 1990ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು. "ಶಿಕ್ಷಣ, ಸಂಘಟನೆ ಮತ್ತು ಹೋರಾಟ" ಇದು ಅಂಬೇಡ್ಕರರ ಪ್ರಸಿದ್ಧ ಘೋಷವಾಕ್ಯವಾಗಿz ಸಾ.ಶ. 1930ರ ದಶಕದಲ್ಲಿ ಕಾಂಗ್ರೆಸಿನ ಒಳಗೂ ಹೊರಗೂ ಸಮಾಜವಾದಿ ಚಿಂತನೆಗಳು ಪ್ರಚಾರವಾದವು. ಸಾ.ಶ. 1934ರ ಕಾಂಗ್ರೆಸ್ ಅಧಿವೇಶನದಲ್ಲಿ ಸಮಾಜವಾದಿ ಗುಂಪೆÇಂದು ಕಾಂಗ್ರೆಸಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಸಮಾಜವಾದಿಗಳು ಬಹುತೇಕ ಯುವಪೀಳಿಗೆಗೆ ಸೇರಿದವರಾಗಿದ್ದರು. ಅವರು ಅಲ್ಪಕಾಲದಲ್ಲೇ ‘ಕಾಂಗ್ರೆಸ್ ಸೋಷಲಿಷ್ಟ್ ಪಕ್ಷ’ವನ್ನು ಸ್ಥಾಪಿಸಿದರು. ಅದರ ಮಹಾಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ್. ಆಚಾರ್ಯ ನರೇಂದ್ರ ದೇವ್ ಪಕ್ಷದ ಇನ್ನೊಬ್ಬ ಪ್ರಮುಖ ನಾಯಕರು.
ಜಯಪ್ರಕಾಶ್ ನಾರಾಯಣ್ (ಜೆ.ಪಿ.) ಸಾ.ಶ. 1974ರಲ್ಲಿ ಸಕ್ರಿಯ ರಾಜಕೀಯವನ್ನು ಪ್ರವೇಶಿಸಿದ್ದ ಜಯಪ್ರಕಾಶ್ ನಾರಾಯಣರು `ಸಂಪೂರ್ಣ ಕ್ರಾಂತಿ' ಎಂಬ ಆಂದೋಲನವನ್ನು ಹುಟ್ಟಿಹಾಕಿದರು. ಜನರು ಇವರನ್ನು ಪ್ರೀತಿಯಿಂದ `ಲೋಕನಾಯಕ' ಎಂದೇ ಕರೆದರು ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಅನುಸರಿಸಬೇಕಾದ ಮಾರ್ಗಗಳನ್ನು ಕಂಡು ಕೊಳ್ಳಲು ಬ್ರಿಟಿಷ್ ಸರ್ಕಾರ ಸಾ.ಶ. 1946ರಲ್ಲಿ ಕ್ಯಾಬಿನೇಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಆದರೆ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಪಾಕಿಸ್ತಾನವೆಂದು ಕರೆಯಲ್ಪಡುವ ಪ್ರತ್ಯೇಕ ಮುಸ್ಲಿಂ ದೇಶಕ್ಕಾಗಿ ಪಟ್ಟು ಹಿಡಿಯಿತು. ಹೀಗಾಗಿ ಭಾರತವನ್ನು ವಿಭಜಿಸುವುದು ಅನಿವಾರ್ಯವಾಯಿತು. 1947ರ ಜೂನ್ 3ರಂದು ಭಾರತದ 34ನೇ ಮತ್ತು ಕೊನೆಯ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಆದ ಲಾರ್ಡ್ ಮೌಂಟ್ಬ್ಯಾಟನ್ ಭಾರತವನ್ನು ವಿಭಜಿಸಿ ಅಧಿಕಾರವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂಬ ಐತಿಹಾಸಿಕ ನಿರ್ಣಯವನ್ನು ಘೋಷಿಸಿದರು
ಕರ್ನಾಟಕದ ಸಮಾಜಮುಖಿ ಚಳವಳಿಗಳು
1975ರಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ವರ್ಷಾಚರಣೆಪ್ರಾರಂಭವಾಯಿತು
ರೈತ ಚಳವಳಿ: ರೈತ ಹೋರಾಟಗಳು ಪ್ರಮುಖವಾಗಿ ಭೂಮಾಲೀಕರ ವಿರುದ್ಧ ನಡೆದವು. ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ನಾವು ಕಾಣುವ ಪ್ರಥಮ ರೈತ ಹೋರಾಟ 1951ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ನಡೆಯಿತು. ರೈತರು ಗೇಣಿಯನ್ನು ಅಳತೆ ಮಾಡುವ ‘ಕೊಳಗ’ದ ವಿರುದ್ಧ ಹೋರಾಟ ಪ್ರಾರಂಭಮಾಡಿದರು. ಕ್ರಮೇಣ ರೈತರ ಶೋಷಣೆಯ ವಿಷಯಗಳಾದ ಸಾಲದ ವಸೂಲಿ, ಗೇಣಿದಾರರಿಗೆ ನೀಡುತ್ತಿದ್ದ ಕಿರುಕುಳ ಮುಂತಾದ ಪ್ರಮುಖ ಸಮಸ್ಯೆಗಳ ವಿರುದ್ಧ ರೈತರು ಹೋರಾಟ ಮುಂದುವರೆಸಿದರು. ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲ ಗೌಡರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ಡಾ. ರಾಮಮನೋಹರ ಲೋಹಿಯಾ ಅವರು ಭೇಟಿ ನೀಡಿ ಈ ಹೋರಾಟಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟರು
ದಲಿತ ಚಳಚಳಿ ಸ್ವಾಮಿ ವಿವೇಕಾನಂದರ ಮೈಸೂರಿನ ಭೇಟಿಯ ನಂತರ ಅವರ ಸಲಹೆಯ ಮೇರೆಗೆ ದಲಿತ ವರ್ಗದ ಪ್ರಮುಖ ಪ್ರಶ್ನೆಗಳನ್ನು ಅಂದಿನ ಮೈಸೂರಿನ ಮಹಾರಾಜರಾದ ಹತ್ತನೇ ಚಾಮರಾಜ ಒಡೆಯರು ಗಂಭೀರವಾಗಿ ಪರಿಗಣಿಸಿ ದಲಿತರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದರು1936ರಲ್ಲಿ ದಕ್ಷಿಣ ಭಾರತದ ದಲಿತ ನಾಯಕರಲ್ಲಿ ಪ್ರಮುಖರಾದ ಎಂ.ಸಿ. ರಾಜಾ ಅವರ ಸಮ್ಮುಖದಲ್ಲಿ ಮೈಸೂರು ಅರಮನೆಗೆ ದಲಿತರ ಪ್ರವೇಶವಾಯಿತು ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿ ಬೆಳೆದ ಬ್ರಾಹ್ಮಣೇತರ ಚಳವಳಿಗಳು ದಲಿತರನ್ನು ಹೆಚ್ಚು ಒಳಗೊಳ್ಳಲಿಲ್ಲ. ಇದನ್ನು ಪ್ರಶ್ನಿಸುತ್ತಾ 1970ರ ದಶಕದಲ್ಲಿ `ದಲಿತ ಚಳವಳಿ'ಯು ರೂಪುಗೊಂಡು ಒಂದು ನಿರ್ಣಾಯಕ ಶಕ್ತಿಯಾಗಿ ಬೆಳೆಯಿತು. ಹೈದರಾಬಾದ್ಕರ್ನಾಟಕ ಪ್ರದೇಶದಲ್ಲಿ ಶಾಮಸುಂದರ್ ಅವರು 1970ರಲ್ಲಿ ಭೀಮಸೇನಾ ಸಂಘಟನೆಯನ್ನು ಹುಟ್ಟುಹಾಕಿದರು. ದಲಿತ ಚಳವಳಿಗೆ ಒಂದು ಹೊಸ ತಿರುವನ್ನು ಕೊಟ್ಟಿದ್ದು ‘ಬಸವಲಿಂಗಪ್ಪ ಬೂಸಾ ಪ್ರಕರಣ' (1973) ಸಚಿವರಾಗಿದ್ದ ಬಸವಲಿಂಗಪ್ಪನವರು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇದರ ವಿರುದ್ಧವಾಗಿ ಕರ್ನಾಟಕದಾದ್ಯಂತ ಹೋರಾಟಗಳಾದವು. ಕೊನೆಗೆ ಬಸವಲಿಂಗಪ್ಪನವರು ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದರು. ಈ ಪ್ರಕರಣ ಕ್ರಮೇಣ ದಲಿತ ಪ್ರಜ್ಞೆಯನ್ನು ತೀವ್ರವಾಗಿ ಬೆಳೆಸಲು ಕಾರಣವಾಯಿತು
ಕನ್ನಡ ಉಳಿಸಿ ಚಳವಳಿ ಅಥವಾ ಕನ್ನಡ ಕಾವಲು ಚಳವಳಿ: 1960ರ ದಶಕದ ನಂತರ ಬೆಂಗಳೂರಿನಲ್ಲಿ ಅನ್ಯಭಾಷಿಕರ ಅಬ್ಬರ ಹೆಚ್ಚಾದಾಗ ಅ.ನ.ಕೃ., ಚಿದಾನಂದಮೂರ್ತಿ, ಮ. ರಾಮಮೂರ್ತಿ, ವಾಟಾಳ ನಾಗರಾಜ್ ಮುಂತಾದವರು ಹಾಗೂ ಕರ್ನಾಟಕ ಯುವಜನ ಸಭಾ, ಕನ್ನಡ ಜಾಗೃತ ಪರಿಷತ್, ಕನ್ನಡ ಶಕ್ತಿಕೇಂದ್ರ ಮುಂತಾದ ಸಂಘಟನೆಗಳು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಮೇಲ್ಗೈಯನ್ನು ಸಾಧಿಸುವಲ್ಲಿ ಸಫಲರಾದರು.
ಗೋಕಾಕ್ ಚಳವಳಿ: 1982ರಲ್ಲಿ ಗೋಕಾಕ ವರದಿಯ ಅನುಷ್ಠಾನಕ್ಕಾಗಿ ಒಂದು ನಿರ್ಣಾಯಕ ಚಾರಿತ್ರಿಕ ಹೋರಾಟ ಪ್ರಾರಂಭವಾಯಿತು. ಕರ್ನಾಟಕದಲ್ಲಿದ್ದ ಭಾಷಾ ಅಲ್ಪಸಂಖ್ಯಾತರು ಕನ್ನಡವನ್ನು ಕಡ್ಡಾಯವಾಗಿ ಕಲಿಯದೆ ಅವರ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುತ್ತೇವೆಂಬ ಹಠಕ್ಕೆ ಬಿದ್ದರು. ಅಂದಿನ ಮುಖ್ಯಮಂತ್ರಿಗಳಾದ ಆರ್. ಗುಂಡೂರಾಯರು ಉಡುಪಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ಮಠಾಧಿಪತಿಗಳು ಸಂಸ್ಕøತಕ್ಕೆ ಪ್ರಾಶಸ್ತ್ಯ ಕೊಡಬೇಕೆಂದು ಒತ್ತಾಯಿಸಿದರು. ಇದರ ಪರಿಣಾಮವಾಗಿ ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎನ್ನುವ ಪ್ರಶ್ನೆಯನ್ನು ಬಿಟ್ಟು ಶಿಕ್ಷಣದಲ್ಲಿ ಭಾಷೆಗಳ ಸ್ಥಾನಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಒಂದು ಸಮಿತಿ ರಚನೆಯಾಯಿತು. ಡಾ. ವಿನಾಯಕ ಕೃಷ್ಣ ಗೋಕಾಕರ ಅಧ್ಯಕ್ಷತೆಯಲ್ಲಿ ಭಾಷಾ ಸಮಿತಿ ರಚನೆಯಾಯಿತು. ಈ ಸಮಿತಿಯು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಮತ್ತು ಕಡ್ಡಾಯ ಮಾಡಬೇಕೆಂದು ಶಿಫಾರಸು ಮಾಡಿತು. ಈ ಸಮಿತಿಯು ತ್ರಿಭಾಷಾ ಸೂತ್ರಕ್ಕೆ 350 ಅಂಕಗಳನ್ನು ನಿಗದಿಪಡಿಸಿತು. ತ್ರಿಭಾಷಾ ಪರೀಕ್ಷೆಯಲ್ಲಿ ಕನ್ನಡವು 150 ಅಂಕಗಳ ಪ್ರಥಮ ಭಾಷೆ ಆಗಿರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿತುಗೋಕಾಕ್ ಚಳವಳಿಯ ಪ್ರಮುಖ ಘೋಷಣೆಗಳೆಂದರೆ ``ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ'', ``ಏನೇ ಬರಲಿ ಕನ್ನಡ ಇರಲಿ'', ``ಗೋಕಾಕ್ ವರದಿ ಜಾರಿಗೆ ಬರಲಿ'', ``ಕರ್ನಾಟಕದಲ್ಲಿ ಕನ್ನಡದ ಉಸಿರು ತುಂಬಲಿ'', ಮುಂತಾದವು.
1959ರಲ್ಲಿ ಮೈಸೂರು ಗ್ರಾಮ ಪಂಚಾಯಿತಿಗಳ ಅಧಿನಿಯಮವನ್ನು ಜಾರಿಗೊಳಿಸಿತು. ತನ್ಮೂಲಕ ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಖಾಯಂ ನೆಲೆಯನ್ನು ಕಲ್ಪಿಸಿತು. ಹೊಸ ಕಾನೂನಿನ ಪ್ರಕಾರ ಆಡಳಿತ ವ್ಯವಸ್ಥೆಯ ಮೂರು ಹಂತಗಳು ಇವಾಗಿವೆ.
ಗ್ರಾಮಪಂಚಾಯತ್, ತಾಲ್ಲೂಕ್ಪಂಚಾಯತ್,ಮತ್ತು ಜಿಲ್ಲಾ ಪಂಚಾಯತ್.
ಒಂದು ಎಕರೆಗೆ 100 ಸೆಂಟ್ಸ್ ಅಥವಾ 40 ಗುಂಟೆ. 1974ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಭೂಹಿಡುವಳಿ ಬಗ್ಗೆ ಕ್ರಾಂತಿಕಾರಕ ಕಾನೂನನ್ನು ಕರ್ನಾಟಕದಲ್ಲಿಜಾರಿಗೊಳಿಸಿದರು
ಹಿಂದುಳಿದ ವರ್ಗಗಳ ಆಯೋಗಗಳು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭಾರತದಲ್ಲೇ ಪ್ರಥಮವಾಗಿ ಹಿಂದುಳಿದ ವರ್ಗಗಳ ಆಯೋಗವು ನ್ಯಾಯಮೂರ್ತಿ ಲೆಸ್ಲೆ ಸಿ. ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ 1918ರಲ್ಲಿ ನೇಮಕವಾಯಿತು. ಒಂದು ಜಾತಿಯಲ್ಲಿ ಶೇಕಡ ಐದು ಅಥವಾ ಅದಕ್ಕಿಂತ ಹೆಚ್ಚಿನವರು ಇಂಗ್ಲಿಷ್ ಬಲ್ಲವರಿದ್ದರೆ ಅಂತಹ ಜಾತಿಯನ್ನು ಮುಂದುವರೆದವರು ಎಂದು ಈ ಸಮಿತಿ ಅಭಿಪ್ರಾಯ ಪಟ್ಟಿತು. 1921ರಲ್ಲಿ ಮೈಸೂರು ರಾಜ್ಯದಲ್ಲಿ ಪ್ರಥಮ ಮೀಸಲಾತಿ ಆಜ್ಞೆ ಜಾರಿಗೆ ಬಂದಿತುಮುಖ್ಯಮಂತ್ರಿ ಡಿ. ದೇವರಾಜ್ ಅರಸ್ರವರು 1975 ರಲ್ಲಿ ಎಲ್.ಜಿ. ಹಾವನೂರು ಅವರ ನೇತೃತ್ವದಲ್ಲಿ ಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಿಸಿದರು1983ರಲ್ಲಿ ಟಿ. ವೆಂಕಟಸ್ವಾಮಿ ಆಯೋಗದ ನೇಮಕವಾಯಿತು.
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು
ರಾಣಿ ಅಬ್ಬಕ್ಕದೇವಿ ರಾಣಿ ಅಬ್ಬಕ್ಕದೇವಿ ಗಾಂಧಿ ಪೂರ್ವ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಹಿಳೆ “ರಾಣಿ ಅಬ್ಬಕ್ಕದೇವಿ“. ಇವರು ಚೌಟ ಮನೆತನಕ್ಕೆ ಸೇರಿದ್ದರು. ಇವರ ಚಿಕ್ಕಪ್ಪನಾದ ‘ತಿರುಮಲರಾಯರು’ ಅಬ್ಬಕ್ಕದೇವಿಗೆ ಯುದ್ಧ ತಂತ್ರಕಲೆಗಳಲ್ಲಿ ತರಬೇತಿಗೊಳಿಸಿದ ನಂತರ ಉಳ್ಳಾಲದ ರಾಣಿಯನ್ನಾಗಿ ಅಧಿಕಾರಕ್ಕೆ ತಂದರು. ಪೋರ್ಚುಗೀಸರು ಅಬ್ಬಕ್ಕಳಿಗೆ ಕಪ್ಪ ನೀಡಲು ಒತ್ತಾಯಿಸಿದಾಗ ಇವರು ತಿರಸ್ಕರಿಸಿದರು. ಪರಿಣಾಮವಾಗಿ 1555ರಲ್ಲಿ ಪೋರ್ಚುಗೀಸರು “ರಾಣಿ” ಮೇಲೆ ಯುದ್ಧ ಸಾರಿದರು. ಈ ಯುದ್ಧದಲ್ಲಿ ಅಬ್ಬಕ್ಕ ಜಯವನ್ನು ಸಾಧಿಸಿದಳು. ನಂತರ 1568ರಲ್ಲಿ ಪೋರ್ಚುಗೀಸರು ವೈಸರಾಯ್ ಆದ “ಆಂಟೋನಿಯೋಮೋರಹ” ರವರ ನೇತೃತ್ವದಲ್ಲಿ ಉಳ್ಳಾಲವನ್ನು ಪ್ರವೇಶಿಸಿದರು. ರಾಣಿ ಅಲ್ಲಿಂದ ತಪ್ಪಿಸಿಕೊಂಡು 200 ಮಂದಿ ಸೈನಿಕರೊಂದಿಗೆ ಪೋರ್ಚುಗೀಸ್ ಸೈನ್ಯದ ಮೇಲೆ ಎರಗಿದಳು. ಜನರಲ್ ‘ಪೆಕ್ಸೆಟೋ’ ಈ ಯುದ್ಧದಲ್ಲಿ ಅಸುನೀಗಿದನು. ಪೋರ್ಚುಗೀಸ್ ಸೈನಿಕರನ್ನು ಸೆರೆ ಹಿಡಿಯಲಾಯಿತು. ಮುಂದುವರೆದ ಮತ್ತೊಂದು ಯುದ್ಧದಲ್ಲಿ ಪೋರ್ಚುಗೀಸರ ಅಡ್ಮಿರಲ್ ‘ಮಾಸ್ಕಾರೆನ್ಸ್’ ನು ಉಳ್ಳಾಲದ ಸೈನಿಕರಿಂದ ಹತನಾದನುರಾಣಿ ಅಬ್ಬಕ್ಕ ಸ್ಮರಣಾರ್ಥವಾಗಿ ಮಂಗಳೂರು ಬಳಿಯ ಉಳ್ಳಾಲದಲ್ಲಿ ‘ವೀರರಾಣಿ ಅಬ್ಬಕ್ಕನ ಉತ್ಸವ’ ಆಚರಿಸುತ್ತಾರೆ.
ಬಳ್ಳಾರಿ ಸಿದ್ಧಮ್ಮ (1903-1981) ಬಳ್ಳಾರಿ ಸಿದ್ಧಮ್ಮನವರು 1938 ರಲ್ಲಿ ನಡೆದ ಶಿವಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ದಿನಾಂಕ 13-04-1938 ರಂದು ಧ್ವಜಾರೋಹಣ ಮಾಡಿ ದಸ್ತಗಿರಿಯಾದರು. ಒಂದು ತಿಂಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು. ಸಂಸ್ಥಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಲಾಹೋರ್ ಕಾಂಗ್ರೆಸ್ ಅಧಿವೇಶನದ ನಿರ್ಣಯದಂತೆ ಗಾಂಧೀಜಿಯವರು 12 ಮಾರ್ಚ್ 1930 ರಂದು ತಮ್ಮ 78 ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಮೇ 5 ರಂದು ದಂಡಿಯನ್ನು ತಲುಪಿ ಮೇ 6 ರಂದು ಉಪ್ಪನ್ನು ತಯಾರಿಸುವುದರ ಮೂಲಕ ಬ್ರಿಟಿಷರ ಉಪ್ಪಿನ ಕಾನೂನುಗಳನ್ನು ವಿರೋಧಿಸಿದರು.
ಯಶೋಧರಮ್ಮ ದಾಸಪ್ಪ (1905 - 1980) 1942 ರ ಕ್ವಿಟ್ ಇಂಡಿಯಾ ಚಳುವÀಳಿಯಲ್ಲಿ ಯಶೋಧರಮ್ಮ ದಾಸಪ್ಪರವರ ಮನೆ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ಭೂಗತ ಚಟುವಟಿಕೆಗಳ ಕೇಂದ್ರವಾಗಿತ್ತು. ಚಳುವಳಿ ಕುರಿತ ಲೇಖನಗಳನ್ನು ಗುಟ್ಟಾಗಿ ಮುದ್ರಿಸಿ ‘ಜ್ವಾಲೆ’ ಪತ್ರಿಕೆಯಲ್ಲಿ ಪ್ರಕಟಿಸಿದರು1923ರಲ್ಲಿ ಎನ್. ಎಸ್. ಹರ್ಡೇಕರ್ ರವರು ಸ್ಥಾಪಿಸಿದ ಸೇವಾದ¼
ಕರ್ನಾಟಕ ಏಕೀಕರಣ ಮತ್ತು ಗಡಿ ವಿವಾದಗಳು
ಏಕೀಕರಣದ ಆರಂಭಿಕ ಹೆಜ್ಜೆಯನ್ನು ಇಟ್ಟವರು ಮುಂಬೈ ಕರ್ನಾಟಕ ಭಾಗದ ಜನರು. ರಾ.ಹ. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ 1890ರಲ್ಲಿ ಆರಂಭವಾದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಏಕೀಕರಣ ಕಲ್ಪನೆಗೆ ಸಾಂಸ್ಥಿಕ ರೂಪವನ್ನು ನೀಡಿತು. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ 1915ರಲ್ಲಿ ಸ್ಥಾಪಿತವಾಯಿತು. ಇದು ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ ಮತ್ತು ಕರ್ನಾಟಕ ಏಕೀಕರಣಕ್ಕೆ ಪ್ರೋತ್ಸಾಹ ಇವೇ ಮುಂತಾದ ಗುರಿಗಳನ್ನು ಹೊಂದಿತ್ತು. ಕರ್ನಾಟಕ ಏಕೀಕರಣ ಸಭಾವನ್ನು ಧಾರವಾಡದಲ್ಲಿ 1916 ರಲ್ಲಿ ಪ್ರಾರಂಭಿಸಲಾಯಿತು1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾವ್ ಅವರು ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಸ್ವಾಗತಗೀತೆಯನ್ನು ಹಾಡುವ ಮೂಲಕ ಏಕೀಕರಣ ಚಳುವಳಿಗೆ ವಿದ್ಯುತ್ ಸಂಚಲನವನ್ನು ತಂದುಕೊಟ್ಟರು.
ಏಕೀಕರಣ ಚಳವಳಿಯಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಪಾತ್ರ: ವಿಶ್ವಕರ್ನಾಟಕ, ನವಕರ್ನಾಟಕ, ವಾಗ್ಬೂಷಣ, ಜಯಕರ್ನಾಟಕ, ಸಂಯುಕ್ತ ಕರ್ನಾಟಕ ಮೊದಲಾದ ದಿನಪತ್ರಿಕೆಗಳು, ವಾರಪತ್ರಿಕೆಗಳು ಏಕೀಕರಣ ಚಳವಳಿಗೆ ಪ್ರೇರಣೆ ನೀಡಿದವು. ಕನ್ನಡನಾಡು ನುಡಿಗಳ ವೈಭವವನ್ನು ಕನ್ನಡಿಗರಿಗೆ ತಿಳಿಸುವುದೇ ಆಲೂರು ವೆಂಕಟರಾಯರ ಉದ್ದೇಶವಾಗಿತ್ತು. ಅದಕ್ಕಾಗಿ ‘ಕರ್ನಾಟಕದ ಗತವೈಭವ’ ಎಂಬ ಗ್ರಂಥÀ ಬರೆದು ತಮ್ಮ ಖರ್ಚಿನಿಂದ ಪ್ರಕಟಿಸಿದರು. ಇದು ಅತ್ಯಂತ ಸ್ಫೂರ್ತಿದಾಯಕ ಪುಸ್ತಕವಾಗಿತ್ತು. ಹೈದರಾಬಾದಿನ ಕನ್ನಡಿಗರು ಅವರಿಗೆ ಸನ್ಮಾನ ಮಾಡಿ (1941) ‘ಕರ್ನಾಟಕ ಕುಲಪುರೋಹಿತ’ ಎಂಬ ಬಿರುದನ್ನು ಅರ್ಪಿಸಿದರು.
1. ಮೊದಲನೆಯ ಹಂತ (ಸಾ.ಶ. 1947-48) 1947 ರ ಮೊದಲು ನಮ್ಮ ದೇಶದಲ್ಲಿ ಎರಡು ಬಗೆಯ ರಾಜ್ಯಗಳಿದ್ದವು: ಬ್ರಿಟಿಷ್ ಭಾರತದ ಪ್ರಾಂತ್ಯಗಳು ಮತ್ತು ಅರಸೊತ್ತಿಗೆಯ (ಸಂಸ್ಥಾನಿಕ) 562 ರಾಜ್ಯಗಳು
2. ಎರಡನೆಯ ಹಂತ ( ಸಾ.ಶ. 1953)1951-52 ರಲ್ಲಿ ಲೋಕಸಭೆಗೆ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯಿತು. ಚುನಾವಣೆಯ ನಂತರ ಉಗ್ರ ಚಳುವಳಿಯ ಮನೋಭಾವದ ‘ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್’ ಎಂಬ ಪಕ್ಷ ಉದಯಿಸಿತು (1952). ಆಂಧ್ರ ಪ್ರದೇಶ ರಚನೆಯಾದ ನಂತರ ಭಾಷೆಯ ಆಧಾರದಲ್ಲಿ ಪ್ರಾಂತ್ಯ ಪುನರ್ವಿಂಗಡನೆಯ ಬೇಡಿಕೆ ತೀವ್ರಗೊಂಡಿತು. ಕೇಂದ್ರ ಸರ್ಕಾರವು ರಾಜ್ಯಗಳ ಪುನರ್ ವಿಂಗಡಣೆಯನ್ನು ಕುರಿತು ವರದಿ ನೀಡಲು ‘ರಾಜ್ಯ ಪುನರ್ವಿಂಗಡಣಾ ಆಯೋಗ’ವನ್ನು (ಎಸ್.ಆರ್.ಸಿ) ನೇಮಿಸಿತು. ಅದರ ಅಧ್ಯಕ್ಷರು ಎಸ್. ಫಜಲ್ಅಲಿ (ಆದ್ದರಿಂದ ‘ಫÀಜಲ್ಅಲಿ ಆಯೋಗ’ ಎನ್ನುವರು). ಅದರ ಇತರ ಸದಸ್ಯರು ಎಚ್.ಎನ್. ಕುಂಜ್ರು ಮತ್ತು ಕೆ.ಎಂ. ಪಣಿಕ್ಕರ್. ಆಯೋಗವು 1955 ರಲ್ಲಿ ವರದಿಯನ್ನು ಸಲ್ಲಿಸಿತು. 1956 ರಲ್ಲಿ ಏಕೀಕೃತ ವಿಶಾಲ ಮೈಸೂರು ರಾಜ್ಯಕ್ಕೆ ಎಸ್. ನಿಜಲಿಂಗಪ್ಪನವರು ಪ್ರಥಮ ಮುಖ್ಯಮಂತ್ರಿಗಳಾದರು. ಮುಂದೆ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸರು 1973 ರನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರುನಾಮಕರಣ ಮಾಡಿದರು.
1. ಕರ್ನಾಟಕ, ಮಹಾರಾಷ್ಟ್ರ, ಕೇರಳಗಳ ನಡುವಣ ಗಡಿ ವಿವಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದ ಗಡಿ ಸಮಸ್ಯೆಯನ್ನು ಬಗೆಹರಿಸಲು 1965 ರಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಮಹಾಜನ್ರವರ ಏಕಸದಸಆಯೋಗವನ್ನು ರಚಿಸಿತು.
ನಮ್ಮ ರಕ್ಷಣಾ ಪಡೆಗಳುಭಾರತವು 15,200 ಕಿ.ಮೀ. ಭೂಗಡಿ ಪ್ರದೇಶವನ್ನು ಮತ್ತು 7516.5 ಕಿ.ಮೀ. ಜಲಗಡಿ ಪ್ರದೇಶವನ್ನು ಹೊಂದಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಆಯವ್ಯಯದ ಶೇ.40 ಕ್ಕಿಂತ ಹೆಚ್ಚಿನ ಹಣಕಾಸನ್ನು ಮೀಸಲು ಇಡಲಾಗುತ್ತದೆ. ರಕ್ಷಣಾಪಡೆಗಳಲ್ಲಿ ತಮ್ಮ ಸಾಮಥ್ರ್ಯಗಳನ್ನು ಮೆರೆಯಲು ತರಬೇತಿ ಕೇಂದ್ರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು: ರಾಷ್ಟ್ರೀಯ ರಕ್ಷಣಾ ಕಾಲೇಜು, ನವದೆಹಲಿ, ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕೇಂದ್ರ, ಉದಕಮಂಡಲ, ಭಾರತೀಯ ಮಿಲಿಟರಿ ಅಕಾಡೆಮಿ, ಡೆಹರಾಡೂನ್ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್ವಾಸ್ಲಾ, ಪುಣೆ.
ಭಾರತೀಯ ರೆಡ್ಕ್ರಾಸ್ ಸಂಸ್ಥೆ (Iಟಿಜiಚಿಟಿ ಖeಜ ಅಡಿoss Soಛಿieಣಥಿ): ರೆಡ್ಕ್ರಾಸ್ ಸಂಸ್ಥೆಯು ಭಾರತದಾದ್ಯಂತ 700 ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತ್ತಿದೆ. ರಾಷ್ಟ್ರಪತಿಗಳು ಇದರ ಅಧ್ಯಕ್ಷರಾಗಿದ್ದಾರೆ. ರೆಡ್ಕ್ರಾಸ್ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ `ಮಾನವೀಯತೆ ಮತ್ತು ಸ್ವಯಂಸೇª ಸಂವಿಧಾನ ತಿದ್ದುಪಡಿ
ಸಂವಿಧಾನ ತಿದ್ದುಪಡಿ ವಿಧಾನಗಳು ನಮ್ಮ ಸಂವಿಧಾನವನ್ನು ಮೂರು ವಿಧಾನಗಳ ಮೂಲಕ ತಿದ್ದುಪಡಿ ಮಾಡಬಹುದು. ಅವುಗಳೆಂದರೆ:
1. ಸರಳ ಬಹುಮತÀ ತಿದ್ದುಪಡಿ ವಿಧಾನ
2. ವಿಶೇಷ ಬಹುಮತÀ ತಿದ್ದುಪಡಿ ವಿಧಾನ
3. ವಿಶೇಷ ಬಹುಮತದೊಂದಿಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಪಡೆದು ತಿದ್ದುಪಡಿ ಮಾಡುವ ವಿಧಾನ ಮೇಲೆ ತಿಳಿಸಿರುವ ತಿದ್ದುಪಡಿ ವಿಧಾನಗಳ ವಿವರಣೆ ಕೆಳಕಂಡಂತಿª
ಹದಿನೇಳನೆಯ ಶತಮಾನದಲ್ಲಿ ಯೂರೋಪಿನ ಜೇಮ್ಸ್ ಕುಕ್ನಿಂದ ಕಂಡುಹಿಡಿಯಲ್ಪಟ್ಟ ಆಸ್ಟ್ರೇಲಿಯವನ್ನು ಹೊಸ ಭೂಖಂಡವೆನ್ನುವರು. ಆಸ್ಟ್ರೇಲಿಯದ ಪೂರ್ವ ತೀರದಿಂದಾಚೆ ದಕ್ಷಿಣೋತ್ತರವಾಗಿ "ಗ್ರೇಟ್ ಬ್ಯಾರಿಯರ್ ರೀಫ್'' ಎಂಬ ಹವಳ ದಿಣ್ಣೆಗಳು (2000 ಕಿ.ಮೀ.) ಹಬ್ಬಿª ಅಂಟಾರ್ಕ್ಟಿಕ ಶ್ವೇತ ಭೂಖಂಡ ಮಂಜ ಮಂದವಾಗಿದ್ದು, ಎಲ್ಲೆಡೆಯೂ ಶ್ವೇತವರ್ಣಮಯ. ಹೀಗಾಗಿ ಈ ಖಂಡವನ್ನು `ಶ್ವೇತ ಖಂಡ', `ಹಿಮದ ಮರುಭೂಮಿ' ಎಂತಲೂ ಹಾಗೂ ಅತ್ಯಂತ ಶೀತವಾಗಿರುವುದರಿಂದ `ಶೀತಲ ಖಂಡ' ಎಂದೂ ಕರೆಯಲಾಗಿದೆ. ದಕ್ಷಿಣ ಧ್ರುವಕ್ಕೆ ಸಮೀಪದಲ್ಲಿರುವ ಈ ಖಂಡದ `ವೋಸ್ಟಾಕ್' ಪ್ರಪಂಚದಲ್ಲೇ ಅತ್ಯಂತ ಕಡಿಮೆ ಉಷ್ಣಾಂಶವನ್ನು ದಾಖಲಿಸುವ ಸ್ಥಳ (890'ಸೆ). ಈ ಖಂಡವು ವೈಜ್ಞಾನಿಕ ಸಂಶೋಧನೆಗಷ್ಟೇ ಮೀಸಲು. ಹೀಗಾಗಿ ಈ ಖಂಡವನ್ನು ``ವಿಜ್ಞಾನ ಭೂಖಂಡ'' ಎಂತಲೂ ಕರೆಯುತ್ತಾರೆ. ಅಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವಂತಿಲ್ಲ. ಭಾರತವು ಸಹ ತನ್ನ ಸ್ವಂತ ಸಂಶೋಧನಾ ಕೇಂದ್ರವನ್ನು ಈ ಖಂಡದಲ್ಲಿ ಸ್ಥಾಪಿಸಿದೆ. ಮೊಟ್ಟಮೊದಲಿಗೆ 1981ರ ಡಿಸೆಂಬರ 6ರಂದು ಎಸ್.ಜೆಡ್.ಕಾಸಿಂರ ನೇತೃತ್ವದಲ್ಲಿ ವಿಜ್ಞಾನಿಗಳ ತಂಡವು ಗೋವಾದಿಂದ ಪ್ರಯಾಣ ಆರಂಭಿಸಿತು. ಈ ತಂಡವನ್ನು ಒಯ್ದ ಪÉÇೀಲಾರ್ ಸರ್ಕಲ್ ನೌಕೆಯು 1982 ಜನವರಿ 9ರಂದು ಅಂಟಾರ್ಕ್ಟಿಕ ಖಂಡವನ್ನು ತಲಪಿತು. ಭಾರತೀಯ ತಂಡ ಸ್ಥಾಪಿಸಿದ ಮೊದಲ ಸಂಶೋಧನಾ ಕೇಂದ್ರದ ಹೆಸರು "ದಕ್ಷಿಣ ಗಂಗೋತ್ರಿ".ಇದು ನಿರ್ಮಾಣಗೊಂಡದ್ದು 1983ರಲ್ಲಿ ಮತ್ತು ಈ ಹೆಸರನ್ನು ಕೊಟ್ಟದ್ದು 1989ರಲ್ಲಿ. ಮೊದಲ ಯಾನದ ಯಶಸ್ಸಿನ ನಂತರ ಈವರೆಗೆ ಸುಮಾರು 50 ಬಾರಿ ಭಾರತದ ಸಂಶೋಧನಾ ತಂಡಗಳು ಅಂಟಾರ್ಕ್ಟಿಕ ಖಂಡಕ್ಕೆ ಹೋಗಿ ಬಂದಿವೆ. ``ಮೈತ್ರಿ'' ಎರಡನೆಯ ಸಂಶೋಧನಾ ಕೇಂದ್ರ. ಇದು ಶಿರ್ಮಾಚರ್ ಓಯಸಿಸ್ ಮೇಲೆ ನಿರ್ಮಾಣ ಗೊಂಡಿದೆ (1988-89). ಇದು ಸರ್ವಋತು ಕೇಂದ್ರ ಮತ್ತು 26 ಮಂದಿ ಒಟ್ಟಿಗೆ ಇರಲು ಅನುಕೂಲವಿದೆ. ಇಲ್ಲಿಂದ 255 ಮೀ. ದೂರದಲ್ಲಿ ಸಿಹಿನೀರಿನ ಪೂರೈಕೆಗಾಗಿ ``ಪ್ರಿಯದರ್ಶಿನಿ'' ಎಂಬ ಸರೋವರವನ್ನು ಭಾರತ ನಿರ್ಮಿಸಿದೆ. ಮೈತ್ರಿ ಕೇಂದ್ರದಲ್ಲಿ ಭೂವಿಜ್ಞಾನ, ಭೂಗೋಳಶಾಸ್ತ್ರ ಮತ್ತು ಔಷಧಿಗಳ ಬಗ್ಗೆ ಸಂಶೋಧನೆ ನಡೆಯುತ್ತದೆ. ``ಭಾರತಿ'' ಎಂಬ ಮತ್ತೊಂದು ಸಂಶೋಧನಾ ಕೇಂದ್ರವನ್ನು ಅಂಟಾರ್ಕ್ಟಿಕದಲ್ಲಿ ಸ್ಥಾಪಿಸಲು ಭಾರತವು ಯೋಚಿಸಿದೆ.
ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ
ಪೂರ್ವ ಕರಾವಳಿಯು ಕೋರಮಂಡಲದ ತೀರವೆಂದು ಕರೆಸಿಕೊಂಡಿದೆಪಶ್ಚಿಮದ ಕರಾವಳಿಯನ್ನು ಕೊಂಕಣ ಮತ್ತು ಮಲಬಾರ್ ತೀರವೆಂದು ಕರೆದಿದ್ದಾರೆ.
ಭಾರತದ ಪ್ರಾಚೀನ ನಾಗರಿಕತೆಗಳು
ಇರಾನ್ಗೆ ಸಾಗಿಹೋಗುವ ಮಾರ್ಗವಾದ ಬೊಲಾನ್ಪಾಸಿನ ಫಲವತ್ತಾದ ಮೈದಾನದ ಸಮೀಪದಲ್ಲಿ ಮೆಹರ್ಗರ್ ಎಂಬ ನೆಲೆಯಿದೆ. ಮೆಹರ್ಗರ್ನ ಜನ ಬಾರ್ಲಿ ಮತ್ತು ಗೋಧಿಯನ್ನು ಬೆಳೆಯುವುದನ್ನು ಹಾಗೂ ಕುರಿ ಮತ್ತು ಮೇಕೆ ಸಾಕುವುದನ್ನು ಕಲಿತಿದ್ದರು. ಇದು ಪ್ರಾಕ್ತನಶಾಸ್ತ್ರಜ್ಞರ ಗಮನಕ್ಕೆ ಬಂದಿರುವ ಮೊಟ್ಟಮೊದಲ ಹಳ್ಳಿ. ಕಾಲಿಬಂಗನ್ ಮತ್ತು ಲೋಥಾಲ್ಗಳಲ್ಲಿ ಬೆಂಕಿಯ ಒಲೆಗಳು ಕಂಡುಬಂದಿವೆ ವೇದಗಳ ಕಾಲವನ್ನು ಸಾ.ಶ.ಪೂ. 1500 ರಿಂದ ಸಾ.ಶ.ಪೂ 700 ನಡುವಿನ ಅವಧಿ ಎಂದು ಗುರುತಿಸಲಾಗಿದೆ.
ವೇದಗಳು ನಾಲ್ಕು : ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಪ್ರಮುಖವಾಗಿ ವೇದಗಳು ಪ್ರಕೃತಿ ಆರಾಧನೆ, ಯಾಗ-ಯಜ್ಞಾದಿಗಳು, ಮಾಟವಿದ್ಯೆ ಮುಂತಾದವುಗಳ ಬಗೆಗಿನ ಸಂಗ್ರಹವಾಗಿವೆ. ಅವುಗಳನ್ನು ‘ಸಂಹಿತೆ’ ಎಂದೂ ಕರೆಯಲಾಗಿದೆ. ಪ್ರತಿಯೊಂದು ಸಂಹಿತೆಗೆ ಧಾರ್ಮಿಕ ಆಚರಣೆಗಳ ಬಗ್ಗೆ ವಿವರ ನೀಡುವಂತಹ ‘ಬ್ರಾಹ್ಮಣ’ಗಳೆಂಬ ಪಠ್ಯಗಳಿವೆ. ಪ್ರತಿಯೊಂದು ಬ್ರಾಹ್ಮಣವೂ ಒಂದು ‘ಅರಣ್ಯಕ’ ಮತ್ತು ‘ಉಪನಿಷತ್’ನಿಂದ ಕೂಡಿದೆ. ಅರಣ್ಯದಲ್ಲಿ ವಾಸಿಸುತ್ತಿದ್ದ ಋಷಿಗಳಿಗೆ ಅಗತ್ಯವಾದ ‘ಅತೀಂದ್ರಿಯ’ ಉಪದೇಶಗಳು ಅರಣ್ಯಕದಲ್ಲಿದೆ.
ಋಗ್ವೇದ ಕಾಲ ವೇದಗಳಲ್ಲಿ ಋಗ್ವೇದ ಮೊದಲಿನದು. ಅದರ ಭಾಷೆ, ಅದರಲ್ಲಿ ಬರುವ ಭೌಗೋಳಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಇದನ್ನು ಪುಷ್ಟೀಕರಿಸುತ್ತವೆ. ಋಗ್ವೇದದಲ್ಲಿ 1028 ಸೂಕ್ತ ಅಥವಾ ಸ್ತುತಿಗೀತೆಗಳಿದ್ದು ಅವು 10 ಮಂಡಲಗಳಲ್ಲಿ ವಿಂಗಡಣೆಯಾಗಿವೆ. ಋಗ್ವೇದದ ಭಾಷೆ ಇಂಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದೆ. ಋಗ್ವೇದದ ಹತ್ತನೆಯ (ಸುಮಾರು ಸಾ.ಶ.ಪೂ. 1000ದಲ್ಲಿ) ಮಂಡಲದಲ್ಲಿ ಬರುವ ಪುರುಷ ಸೂಕ್ತದಲ್ಲಿ ಹೊಸ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಚಿತ್ರಣ ಸಿಗುತ್ತದೆ. ಋಗ್ವೇದದಲ್ಲಿ ಸಾಗುವಳಿ ಮಾಡಿದ ಗದ್ದೆಯನ್ನು ‘ಕ್ಷೇತ್ರ’ವೆಂದು, ಉಳುಮೆ ಮಾಡುವ ಕಾರ್ಯವನ್ನು ‘ಕೃಷಿ’ ಎಂದು ಕರೆಯಲಾಗಿದೆ. ರಾಜನ ಸುತ್ತ ಸಾರ್ವಜನಿಕರು ಸೇರುವ ಅರ್ಥದಲ್ಲಿ ‘ಸಭಾ’ ಮತ್ತು ‘ಸಮಿತಿ’ ಎಂಬ ಶಬ್ದಗಳ ಉಲ್ಲೇಖವಿದೆ. ಯಜ್ಞಗಳನ್ನು ನಡೆಸಿಕೊಡುವ ಪುರೋಹಿತನನ್ನು ‘ಹೊತರ್’ ಎಂದು ಕರೆಯಲಾಗುತ್ತಿತ್ತು. ಇದರಲ್ಲಿ ಮಂತ್ರಗಳ ಉಚ್ಛಾರಣೆ ಮತ್ತು ‘ಸೋಮ’ ಪಾನ ಸೇವನೆ ಇರುತ್ತಿತ್ತು. ಆರ್ಯರ ಧರ್ಮದಲ್ಲಿ ಮೂರ್ತಿ ಪೂಜೆ ಇರಲಿಲ್ಲ. ಮನುಷ್ಯ, ಪ್ರಾಣಿ ಅಥವಾ ಇನ್ನಾವುದೇ ಸಂಕೇತಗಳನ್ನು ಬಳಸುತ್ತಿರಲಿಲ್ಲ.
ಅಶ್ವಮೇಧಯಾಗ
ಅಶ್ವಮೇಧಯಾಗದ ಪ್ರಾರಂಭದಲ್ಲಿ ರಾಜನ ವಿಶೇಷ ಕುದುರೆಯೊಂದನ್ನು ಮುಕ್ತವಾಗಿ ಬಿಡಲಾಗುತ್ತಿತ್ತು. ಅದರ ಹಿಂದೆ ವಿಶೇಷ ಯೋಧರ ದಂಡೊಂದು ಹೋಗುತ್ತಿತ್ತು. ಅದು ಪ್ರವೇಶಿಸಿದ ಪ್ರದೇಶಗಳ ರಾಜರು ಸಾರ್ವಭೌಮತ್ವವನ್ನು ಒಪ್ಪಿ ಅಶ್ವಮೇಧದ ಒಡೆಯನಿಗೆ ಅಧೀನರಾಗಿ ಕಪ್ಪವನ್ನು ನೀಡುತ್ತಿದ್ದರು. ಯಾರಾದರೂ ಕುದುರೆಯನ್ನು ಕಟ್ಟಿಹಾಕಿದರೆ ಅದು ರಾಜನ ಸಾರ್ವಭೌಮತ್ವಕ್ಕೆ ಸವಾಲಾಗುತ್ತಿತ್ತು ಹಾಗೂ ಅದು ಮುಂದಿನ ಸಮರಕ್ಕೆ ನಾಂದಿಯಾಗುತ್ತಿತ್ತು. ಹೀಗೆ ಪ್ರದೇಶಗಳನ್ನೆಲ್ಲ ಜಯಿಸಿಕೊಂಡು ಅಧೀನಗೊಳಿಸಿದ ನಂತರ ಅಶ್ವಮೇಧಯಾಗವನ್ನು ಮಾಡಲಾಗುತ್ತಿತ್ತು. ಬಹುತೇಕ ಎಲ್ಲ ಪ್ರಮುಖ ಅರಸರ ಮಹದಾಸೆ ಇದಾಗಿತ್ತು.
ಜಗತ್ತಿನ ಪ್ರಾಚೀನ ನಾಗರಿಕತೆಗಳು
ಈಜಿಪ್ಟಿನ ನಾಗರಿಕತೆ ಸಾಮಾನ್ಯವಾಗಿ ಎಲ್ಲ ನಾಗರಿಕತೆಗಳು ನದಿಯ ಬಯಲುಸೀಮೆ ಪ್ರದೇಶಗಳಲ್ಲಿಯೇ ಹುಟ್ಟಿಕೊಂಡಿವೆ. ಈಜಿಪ್ಟಿನ ನಾಗರಿಕತೆಯು ಚಿಗುರೊಡೆದದ್ದು ಇಲ್ಲಿ ಹರಿಯುವ ನೈಲ್ ನದಿಯಿಂದಾಗಿ. ಇಲ್ಲಿ ದೊರೆತಿರುವ ಅವಶೇಷಗಳು ಈಜಿಪ್ಟಿನ ವೈಭವವನ್ನು ಸಾರುವಂತಹವು. ಮಿಗಿಲಾಗಿ ಅವರು ಬರವಣಿಗೆಯ ಕಲೆಯನ್ನು ರೂಪಿಸಿಕೊಂಡಿದ್ದರು. ಇದು ಸಂಕೇತಗಳ ಭಾಷೆಯಾಗಿತ್ತು. ಸಣ್ಣ ಚಿತ್ರಣಗಳನ್ನು ಒಳಗೊಂಡ ಇದನ್ನು ಹಿರೋಗ್ಲೈಫಿಕ್ಸ್ (ಪವಿತ್ರ ಬರವಣಿಗೆ) ಎಂದು ಕರೆಯುತ್ತಾರೆ. ಈಜಿಪ್ಟನ್ನು ಆಳುತ್ತಿದ್ದ ರಾಜರುಗಳನ್ನು ‘ಫ್ಯಾರೊ’ಗಳೆಂದು ಕರೆÀಯುತ್ತಾರೆ. ಫ್ಯಾರೋ ಎಂದರೆ ‘ದೊಡ್ಡ ಮನೆಯಲ್ಲಿ ವಾಸಿಸುವ ಮನುಷ್ಯ’ ಎಂದರ್ಥ. ಇಲ್ಲಿ ಹರಿಯುವ ಎರಡು ನದಿಗಳಾದ ಯುಪ್ರೆಟಿಸ್ ಮತ್ತು ಟೈಗ್ರಿಸ್ ನದಿಗಳು ಪಶ್ಚಿಮ ಏಷ್ಯಾದ ಬರಡು ಭೂಮಿಯನ್ನು ಫಲವತ್ತಾಗಿಸಿವೆ. ಉತ್ತರದ ಗುಡ್ಡವಾಸಿಗಳಾದ ಸುಮೇರಿಯನ್ನರು ಇಲ್ಲಿಗೆ ಬಂದ ಮೊದಲಿಗರು. ತಮ್ಮ ದೇವರುಗಳನ್ನು ಬೆಟ್ಟದ ತಪ್ಪಲಿನ ಮೇಲೆ ಆರಾಧಿಸುತ್ತಿದ್ದ ಇವರು, ಸಮತಟ್ಟಾದ ಪ್ರದೇಶಕ್ಕೆ ಬಂದು ನೆಲಸಿದ ಮೇಲೆ ಕೃತಕವಾದ ಬೆಟ್ಟಗಳನ್ನು ಕಟ್ಟಿ ಅದರ ಮೇಲೆ ಆರಾಧನಾ ಸ್ಥಳಗಳನ್ನು ಕಟ್ಟಿಕೊಂಡರು. ಅವುಗಳನ್ನು ‘ಜಗ್ಗುರಾತ್’ ಎಂದು ಕರೆಯುತ್ತಾರೆ.
ಬ್ಯಾಬಿಲೋನಿಯಾದ ತೂಗುವ ಉದ್ಯಾನ ದಂತ ಕಥೆಯಾದ ಈ ಉದ್ಯಾನವನವನ್ನು ಯುಪ್ರಿಟೆಸ್ ನದಿಯ ದಂಡೆಯ ಮೇಲೆ ಸುಮಾರು ಸಾ.ಶ.ಪೂ. 7ನೆಯ ಶತಮಾನದಲ್ಲಿ ನಿರ್ಮಿಸಲಾಯಿತು. ಇದು ಪ್ರಾಚೀನ ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದು. ಸೋಜಿಗವೆಂದರೆ, ಬ್ಯಾಬಿಲೋನಿನ ಕ್ಯೂನಿಫಾರ್ಮ್ ದಾಖಲೆಗಳು ಅಲ್ಲಿನ ಅರಮನೆ, ಬ್ಯಾಬಿಲೋನ್ನ ನಗರ ಮತ್ತು ಅದರ ಗೋಡೆಗಳನ್ನು ಉಲ್ಲೇಖಿಸುವಂತೆ ತೂಗುವ ಉದ್ಯಾನವನದ ಬಗ್ಗೆ ಎಳ್ಳಷ್ಟು ಉಲ್ಲೇಖಿಸದಿರುವುದು ಅಚ್ಚರಿಯನ್ನು ಮೂಡಿಸಿದೆ. ಬಹುತೇಕ ವಿದ್ವಾಂಸರು ತೂಗುವ ಉದ್ಯಾನವನ್ನು ಕಟ್ಟಿದವನು ದೊರೆ ಎರಡನೆ ನೆಬುಕಡ್ನeóÁರ್ ಎಂದು ಅಭಿಪ್ರಾಯಪಡುತ್ತಾರೆ.
ಹಮ್ಮುರಬಿಯ ಕಾನೂನು ಹಮ್ಮುರಬಿ ಸಂಹಿತೆಯ ನಿಯಮಗಳಿಗೆ ಮುಖ್ಯ ಆಧಾರವೆಂದರೆ ಸಾ.ಶ.ಪೂ. 1901ರಲ್ಲಿ ಪತ್ತೆಮಾಡಲಾದ ಶಿಲಾಶಾಸನ. ಇದನ್ನು ಇಂದು ಪ್ಯಾರಿಸ್ಸಿನ ‘ಲೋರ್’ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಹಮ್ಮುರಬಿಯ ಸಂಹಿತೆ ‘ಕಣ್ಣಿನ ಬದಲು ಕಣ್ಣು ಮತ್ತು ಹಲ್ಲಿನ ಬದಲು ಹಲ್ಲು’ ಎನ್ನುವ ತರ್ಕವನ್ನು ಪ್ರತಿಪಾದಿಸುತ್ತಿತ್ತು. ಹಮ್ಮುರಬಿಯ ಸಂಹಿತೆಯು ನಮಗೆ ಲಭ್ಯವಿರುವ ಅತ್ಯಂತ ಪುರಾತನ ನಿಯಮಗಳಲ್ಲಿ ಒಂದೆನಿಸಿದೆ.
ಚೀನಾ ದೇಶದ ನಾಗರಿಕತೆ ಚೀನಾ ನಾಗರಿಕತೆಯ ಬೆಳವಣಿಗೆ ಕೂಡ ಇದರಿಂದ ಹೊರತೇನಿಲ್ಲ. ಆದರೆ ಚೀನಾದ ನಾಗರಿಕತೆಗೆ ಕಾರಣವಾದ ನದಿಯೊಂದು ಮಾತ್ರ ‘ಚೀನಾದ ದುಗುಡ’ವೆಂದು ಕರೆಯಲ್ಪಟ್ಟಿದೆ. ಇದು ಇಲ್ಲಿನ ಹವಾಂಗೊ ನದಿಯನ್ನು ಕುರಿತದ್ದು. ಪ್ರವಾಹದ ನಂತರ ಈ ನದಿಯು ಆಗಿಂದಾಗ್ಗೆ ತನ್ನ ಹಾದಿಯನ್ನು ಬದಲಿಸುವುದರಿಂದ ಮನೆಗಳು ಹಾಗೂ ಕೃಷಿಭೂಮಿ ಈ ನೆರೆಗೆ ಆಹುತಿಯಾಗುತ್ತಿದ್ದವು. ಪ್ರಾಕ್ತನಶಾಸ್ತ್ರದ ಆಧಾರದ ಮೇಲೆ ಚೀನಾದಲ್ಲಿ ಕಂಡು ಬಂದಿರುವ ನಾಗರಿಕತೆಯ ಪ್ರಥಮ ರಾಜ ಮನೆತನಶಾಂಗ್ ಎಂಬ ಹೆಸರಿನದು.
ಗ್ರೀಕ್, ರೋಮನ್ ಹಾಗೂ ಅಮೆರಿಕದ ನಾಗರಿಕvಗ್ರೀಕರ ನಾಗರಿಕತೆ : ಡ್ರಾಕೋ ಎಂಬಾತನು ಅಥೆನ್ಸ್ನಲ್ಲಿ ನಿರ್ದಯ ಕಾನೂನುಗಳನ್ನು ಜಾರಿಗೆ ತಂದನು. ಅಥೆನ್ಸ್ನಲ್ಲಿ ಪೆರಿಕ್ಲಿಸ್ನ ಕಾಲ ಆರಂಭವಾಯಿತು. ಇವನ ಕಾಲವನ್ನು ಗ್ರೀಕ್ನ ಸುವರ್ಣಯುಗವೆಂದೇ ಕರೆಯಲಾಗುತ್ತದೆ. ಏಕೆಂದರೆ ಪೆರಿಕ್ಲಿಸನ ಕಾಲದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ತತ್ವಜ್ಞಾನ ಮುಂತಾದ ಕ್ಷೇತ್ರಗಳ ಪ್ರಗತಿಯು ಉತ್ತುಂಗಕ್ಕೇರಿತು. ಆದ್ದರಿಂದ ಅಥೆನ್ಸನ್ನು ‘ಹೆಲ್ಲಾಸ್ನ ಶಾಲೆ’ (Sಛಿhooಟ oಜಿ ಊeಟಟಚಿs) ಎಂದು ಪೆರಿಕ್ಲಿಸ್ ಕರೆದಿದ್ದಾನೆ. ಶ್ರೇಷ್ಠ ತತ್ವಜ್ಞಾನಿ ಸಾಕ್ರಟಿಸ್ ಅವನ ಶಿಷ್ಯ ಪ್ಲೇಟೋ, ಅವನ ಶಿಷ್ಯ ಅರಿಸ್ಟಾಟಲ್ ಅವನ ಶಿಷ್ಯ ಮ್ಯಾಸಿಡೋನಿಯಾದ ರಾಜನಾದ ಅಲೆಕ್ಸಾಂಡರ್ ಮಹಾಶಯ. ಇದೊಂದು ಶ್ರೇಷ್ಠ ಗುರುಪರಂಪರೆಯಾಗಿದೆ. ಪ್ಲೇಟೊ ‘ಅಕಾಡೆಮಿ’ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದರೆ, ಅರಿಸ್ಟಾಟಲನು ‘ಲೀಸಿಯಂ’ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಆರಂಭಿಸಿದನು. ಡೆಮೊಸ್ತೆನಿಸ್ ಅತ್ಯುತ್ತಮ ಭಾಷಣಕಾರನಾಗಿದ್ದನು. ಹೋಮರ್ ಎಂಬ ಅಂಧ ಕವಿಯು ‘ಈಲಿಯಾಡ್’ ಮತ್ತು ‘ಒಡಿಸ್ಸಿ’ ಎಂಬ ಮಹಾಕಾವ್ಯಗಳಲ್ಲಿ ಒಂದಾದ `ಇಡಿಪಸ್ ಮತ್ತುಅಂತಿಗೋನೆ'ಯನ್ನು ಬರೆದಿದ್ದಾನೆ. ಪೆರಿಕ್ಲಿಸನು ಅಥೆನ್ಸ್ನ ಪಾರ್ಥೆನಾನ್ ದೇವಾಲಯವನ್ನು ಅಮೃತ ಶಿಲೆಗಳಿಂದ ನಿರ್ಮಾಣ ಮಾಡಿಸಿದನುÁವ್ಯಗಳನ್ನು ರಚಿಸಿದನುಸೊಪೆÇೀಕ್ಲಿಸ್ ಜಗತ್ತಿನ ಸುಪ್ರಸಿದ್ಧ ನಾಟಕಅಣು ಸಿದ್ಧಾಂತವನ್ನು ಅಸ್ಪಷ್ಟವಾಗಿ ಪ್ರತಿಪಾದಿಸಿದ ಡೆಮಾಕ್ರಿಟಸ್, ಮೀನಿನಿಂದ ಮಾನವ ಎಂಬ ವಿಕಾಸವಾದ ತತ್ವವನ್ನು ಸಾರಿದ ಅನಾಕ್ಸಿಮಿಂಡರ್ (ಂಟಿಚಿximiಟಿಜeಡಿ) ಪ್ರಮುಖ ವಿಜ್ಞಾನಿಗಳು. ರೋಗಗಳಿಗೆ ವೈಜ್ಞಾನಿಕವಾಗಿ ಔಷಧ ಹುಡುಕುವ ಸಾಧನೆ ಮಾಡಿದ ‘ವೈದ್ಯಶಾಸ್ತ್ರದ ಪಿತಾಮಹ’ ಹಿಪ್ಪೋಕ್ರಿಟಿಸ್ ಕೂಡ ಗ್ರೀಕ್ ದೇಶದವನು. ಸಾ.ಶ.ಪೂ. 776ರಲ್ಲಿ ಪ್ರಥಮ ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ ಪ್ರಾರಂಭವಾಯಿತು.
ಒಲಂಪಿಕ್ ಆಟಗಳನ್ನು ಇಲಿಸ್ ಪ್ರದೇಶದ ಒಲಂಪಿಯಾದಲ್ಲಿ ಏರ್ಪಡಿಸಲಾಗುತಿತ್ತು. ಇದು ಒಲಂಪಿಕ್ ಹಬ್ಬದ ಭಾಗವಾಗಿತ್ತು. ಇಲಿಸ್ ಮತ್ತು ಪಿಸಾಗಳೆಂಬ ನಗರ-ರಾಜ್ಯಗಳ ನಡುವೆ ಏರ್ಪಟ್ಟ ಶಾಂತಿ ಒಪ್ಪಂದದ ಪ್ರಯುಕ್ತ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು. ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ಆಟವನ್ನು ಕಾಲಮಾಪನಕ್ಕಾಗಿಯೂ ಗ್ರೀಕರು ಬಳಸುತ್ತಿದ್ದರು.
ಪ್ಲೇಟೋ : ಇವನು ಜಗತ್ಪ್ರಸಿದ್ಧ ತತ್ವಜ್ಞಾನಿಗಳಲ್ಲಿ ಒಬ್ಬನಾಗಿದ್ದಾನೆ. ಸಾಕ್ರಟೀಸನ ಶಿಷ್ಯನಾದ ಈತ ಸಾಮಾಜಿಕ ನ್ಯಾಯ, ನೀತಿ ಮುಂತಾದ ವಿಚಾರಗಳನ್ನು ಪ್ರತಿಪಾದಿಸಿದನು. ಇವನು ‘ಆದರ್ಶರಾಜ್ಯ’ ಎಂಬ ಕಲ್ಪನೆಯ ರೂವಾರಿ. ವಿದ್ಯಾ ಪಕ್ಷಪಾತಿಯಾದ ಇವನು ‘ದಿ ಅಕಾಡೆಮಿ’ ಎಂಬ ಶಾಲೆಯನ್ನು ಅಥೆನ್ಸಿನಲ್ಲಿ ಪ್ರಾರಂಭಿಸಿದನು. ಇದು ಯುರೋಪಿನ ಮೊಟ್ಟಮೊದಲನೆಯ ವಿಶ್ವವಿದ್ಯಾಲಯವೆಂದು ಖ್ಯಾತಿಹೊಂದಿತು. ಪ್ಲೇಟೋನು ರಚಿಸಿದ ಕೃತಿಗಳಲ್ಲಿ ಮುಖ್ಯವಾದವುಗಳೆಂದರೆ, ‘ರಿಪಬ್ಲಿಕ್’ ಮತ್ತು ‘ದಿ ಟೆಕ್ಸ್ಟ್ ಅಂಡ್ ಹಿಸ್ಟರಿ’ ಎಂಬುವುಗಳಾಗಿವೆ. ಸಾಕ್ರಟೀಸ್, ಪ್ಲೇಟೋ, ಅರಿಸ್ಟಾಟಲ್ ಇವರು ಪ್ರಾಚೀನ ಗ್ರೀಸಿನ ಮೂವರು ಬಹುಮುಖ್ಯ ತತ್ವಶಾಸ್ತ್ರಜ್ಞರು.
ಅರಿಸ್ಟಾಟಲ್ : ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ ಪ್ಲೇಟೋವಿನಷ್ಟೇ ಮಹತ್ವವುಳ್ಳ ಗ್ರೀಕ್ ಚಿಂತಕನೆಂದರೆ ಅರಿಸ್ಟಾಟಲ್. ಇವನು ಪ್ಲೇಟೋವಿನ ಶಿಷ್ಯ. ಇವನ ತತ್ವ ಚಿಂತನೆ ಪ್ಲೇಟೋವಿನ ಚಿಂತನೆಯ ಬೆಳವಣಿಗೆ ಎನ್ನಬಹುದು. ಪ್ಲೇಟೋವಿನ ವಿದ್ಯಾಲಯಕ್ಕೆ ಪೂರಕವಾಗಿ ಅಥೆನ್ಸ್ನಲ್ಲಿ ‘ಲೈಷಿಯಮ್’ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದನು. ‘ನಾನು ನನ್ನ ಗುರುವನ್ನು ಗೌರವಿಸುತ್ತೇನೆ ಆದರೆ ಸತ್ಯವನ್ನು ಅದಕ್ಕಿಂತಲೂ ಹೆಚ್ಚು ಗೌರವಿಸುತ್ತೇನೆ.’
ರೋಮನ್ ನಾಗರಿಕತೆ ಯೂರೋಪಿನ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿ ನೀಳವಾಗಿ ಚಾಚಿಕೊಂಡಿರುವ ಪರ್ಯಾಯ ದ್ವೀಪವೇ ಇಟಲಿ. ಇಟಲಿಯ ಉತ್ತರದಲ್ಲಿ ಆಲ್ಫ್ಸ್ ಪರ್ವತ ಶ್ರೇಣಿಗಳು ಮತ್ತು ಮಧ್ಯ ಭಾಗದಲ್ಲಿ ಅಪೆನೈನ್ ಪರ್ವತ ಶ್ರೇಣಿಗಳು ಹಬ್ಬಿವೆ. ಇಲ್ಲಿಯೇ ಹರಿಯುವ ಟೈಬರ್ ನದಿಯ ದಡದಲ್ಲಿ ರೋಮ್ ನಗರವಿದೆ. ಹೊಸ ಪ್ರದೇಶಗಳ ವಿಸ್ತರಣೆಯ ಅಭಿಲಾಷೆಯು ರೋಮನ್ನರನ್ನು ಹೊಸ ಸಂಘರ್ಷಕ್ಕೆ ಎಡೆಮಾಡಿತು. ಹೀಗಾಗಿ ಇವರು ಉತ್ತರ ಆಫ್ರಿಕಾದ ಕರಾವಳಿಯಲ್ಲಿರುವ ಕಾರ್ಥೇಜ್ ಎಂಬ ನಗರದ ಜೊತೆ ಕಾದಾಡಿದರು. ಸಿಸೆಲ್ಲಿ ಎಂಬುದೊಂದು ಫಲವತ್ತಾದ ಪ್ರದೇಶ. ಇದರ ಹಿಡಿತಕ್ಕಾಗಿಯೇ ಇವರು 118 ವರ್ಷಗಳ ಕಾಲ ಕಾದಾಡಿದರು. ಇದನ್ನೇ ‘ಪ್ಯೂನಿಕ್ಯುದ್ಧ’ಗಳೆಂದು ಕರೆಯಲಾಗಿದೆ. ಈ ಯುದ್ಧದಲ್ಲಿ ಕಾರ್ಥೇಜಿಯನರು ಪರಾಭವಗೊಂಡರು.
ಗ್ಲ್ಯಾಡಿಯೇಟರ್
ಪ್ರಾಚೀನ ರೋಮಿನ ಕುಸ್ತಿಪಟುಗಳನ್ನು ‘ಗ್ಲ್ಯಾಡಿಯೇಟರ್’ ಎಂದು ಕರೆಯುತ್ತಿದ್ದರು. ಇವರುಗಳಲ್ಲಿ ನುರಿತ ಹಾಗು ಪೂರ್ವಭಾವಿ ಸಿದ್ಧತೆ ಇಲ್ಲದವರೂ ಇದ್ದರು. ಪ್ರೇಕ್ಷಕರ ಮನೋರಂಜನೆಗಾಗಿ ಕುಸ್ತಿಗಳನ್ನು ಏರ್ಪಡಿಸಲಾಗುತ್ತಿತ್ತು. ಮನುಷ್ಯ-ಮನುಷ್ಯರ ಹಾಗೂ ಮನುಷ್ಯ-ಮೃಗಗಳ ನಡುವೆ ನಡೆಯುತ್ತಿದ್ದ ಈ ಸಮರಗಳು ಕೆಲವೊಮ್ಮೆ ಆಟಗಾರರ ದಾರುಣ ಮರಣದಲ್ಲಿ ಅಂತ್ಯವಾಗುತಿತ್ತು. ಗ್ಲ್ಯಾಡಿಯೇಟರ್ಗಳ ಸಮರಗಳು ನಡೆಯುತ್ತಿದ್ದ ಸ್ಥಳಗಳನ್ನು ‘ಎಂಪಿಥಿಯೇಟರ್’ ಹಾಗೂ ‘ಕಲೋಸ್ಸಿಯಂ’ಗಳೆಂದು ಕರೆಯುತ್ತಿದ್ದರು.
ಜೂಲಿಯಸ್ ಸೀಸರ್: ಮುಂದೆ ರೋಮಿನಲ್ಲಿ ಕ್ರಾಸಸ್, ಪಾಂಪೆ ಮತ್ತು ಜೂಲಿಯಸ್ಸರನ್ನು ಒಳಗೊಂಡ ಮೊದಲ ತ್ರಿಮೂರ್ತಿಗಳ ಆಡಳಿತ (ಈiಡಿsಣ ಖಿಡಿiumviಡಿಚಿಣe) ಆರಂಭವಾಯಿತು. ದಂಡನಾಯಕರಾಗಿಜೂಲಿಯಸ್ ಸೀಸರ್ ಫ್ರಾನ್ಸ್ (ಗಾಲ್), ಇಂಗ್ಲೆಂಡ್ಗಳನ್ನು ಗೆದ್ದರೆ, ಪಾಂಪೆಯು ಸಿರಿಯಾ, ಟರ್ಕಿಗಳನ್ನು ಗೆದ್ದನು. ಕ್ರಾಸಸ್ ಪಾರ್ಥಿಯವನ್ನು ಗೆದ್ದು ಅಲ್ಲಿಯೇ ಅಸುನೀಗಿದನು.
ಅಗಸ್ಟಸ್ ಸೀಸರ್: ಅಗಸ್ಟಸ್ನ ಮೊದಲ ಹೆಸರು ಆಕ್ಟೇವಿಯಸ್. ಅವನು ಮಾರ್ಕ್ ಆಂಟೋನಿ, ಲೆಪಿಡಸ್ ಜೊತೆಗೆ ಸೇರಿ ಎರಡನೇ ತ್ರಿಮೂರ್ತಿಗಳ ಆಡಳಿತವನ್ನು (Seಛಿoಟಿಜ ಖಿಡಿiumviಡಿಚಿಣe) ಆರಂಭಿಸಿದನುಆಂಟೋನಿಯು ಕ್ಲಿಯೋಪಾತ್ರಳ ಪಕ್ಷ ಸೇರಿದ್ದರಿಂದ ಅವನನ್ನು ಅಗಸ್ಟಸ್ ಆಕ್ಟೇವಿಯಂ ಕದನದಲ್ಲಿ ಸೋಲಿಸಿದನು. ಅಂತಿಮವಾಗಿ ಆಂಟೋನಿ ಮತ್ತು ಕ್ಲಿಯೋಪಾತ್ರ ಆತ್ಮಹತ್ಯೆಗೆ ಶರಣಾದರು. ನಂತರ ಅಗಸ್ಟಸ್ನು ‘ಇಂಪರೇಟರ್’ ಎಂಬ ಬಿರುದನ್ನು ಹೊಂದಿದನು. ಎಲ್ಲಾ ಅಧಿಕಾರಗಳನ್ನು ತನ್ನಲ್ಲಿ ಕೇಂದ್ರೀಕರಿಸಿಕೊಂಡು ಆಳಲಾರಂಭಿಸಿದನು. ಅಗಸ್ಟಸ್ ಸೀಸರ್ನ ಕಾಲವನ್ನು ರೋಮಿನ ಸುವರ್ಣಯುಗವೆಂದು ಕರೆಯಲಾಗುವುದುರೋಮನ್ನರಿಗೆ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಆಳವಾದ ಜ್ಞಾನವಿತ್ತು. ಹಿರಿಯ ಫ್ಲಿನಿಯು ‘ನ್ಯಾಚುರಲ್ ಹಿಸ್ಟರಿ’ ಎಂಬ ವಿಶ್ವಕೋಶವನ್ನೇ ರಚಿಸಿದ್ದನು. ಸೀಜೆರಿಯನ್ (ಶಸ್ತ್ರಚಿಕಿತ್ಸೆಯ ಮೂಲಕ ಪ್ರಸೂತಿ ಮಾಡಿಸುವುದು), ಕಣ್ಣುಪೆÇರೆಯ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಗ್ಯಾಲನ್ ರೋಮಿನ ಪ್ರಸಿದ್ಧ ತಜ್ಞ ವೈದ್ಯ. ಸ್ಟ್ರಾಬೋ, ಟಾಲೆಮಿ ಅಂದಿನ ಕಾಲದ ಖ್ಯಾತ ಭೂಗೋಳ ತಜ್ಞರಾಗಿದ್ದರು ಮಾಯ ನಾಗರಿಕತೆ ಮೆಕ್ಸಿಕೊದ ಯುಕಟೆನ್ ಪ್ರದೇಶದಲ್ಲಿನ ಅಮೆರಿಕದ ಇಂಡಿಯನ್ ಮೂಲನಿವಾಸಿಗಳಿಗೆ ಮಾಯ ಎನ್ನುವರು. ಸಾಮಾನ್ಯವಾಗಿ ಅವರ ಭಾಷೆಯನ್ನು ಈಗ ಯುಕಟೆಕ್ ಎಂದು ಕರೆಯಲಾಗಿದೆ. ದೈಹಿಕವಾಗಿ ಮಾಯದ ಜನ ಗಿಡ್ಡವಾಗಿದ್ದು, ಕಂದುಬಣ್ಣ, ನೇರಕೂದಲನ್ನು ಹಾಗೂ ಬಹುತೇಕ ಗುಂಡನೆಯ ತಲೆಯನ್ನು ಹೊಂದಿದವರಾಗಿದ್ದಾರೆ.
ಜೈನ ಮತ್ತು ಬೌದ್ಧ ಧರ್ಮಗಳ ಉದಯಜೈನ ಧರ್ಮ ಅತ್ಯಂತ ಪುರಾತನ ಧರ್ಮಗಳಲ್ಲಿ ಜೈನ ಧರ್ಮವೂ ಒಂದು. ಸಾಂಪ್ರದಾಯಕವಾಗಿ ಜೈನರಲ್ಲಿ 24ತೀರ್ಥಂಕರರಿದ್ದರೆಂಬ ನಂಬಿಕೆಯಿದೆ. ಋಷಭ ಇವರಲ್ಲಿ ಮೊದಲನೆಯ ತೀರ್ಥಂಕರನಾದರೆ ಪಾಶ್ರ್ವನಾಥ 23ನೆಯ ತೀರ್ಥಂಕರ. ಪಾಶ್ರ್ವನಾಥನು ಸಾ.ಶ.ಪೂ. 8ನೆಯ ಶತಮಾನದಲ್ಲಿ ರಾಜ ಅಶ್ವಸೇನನ ಮಗನಾಗಿ ಜನಿಸಿದನು.
ಪಾಶ್ರ್ವನಾಥನು ಬೋಧಿಸಿದ ನಾಲ್ಕು ತತ್ವಗಳು 1. ಅಹಿಂಸೆ, 2. ಸತ್ಯ 3. ಆಸ್ತೇಯ (ಕದಿಯದಿರುವುದು)
4. ಅಪರಿಗ್ರಹ (ಆಸ್ತಿಯನ್ನು ಹೊಂದದಿರುವುದು). 5ನೆಯ ತತ್ವವಾದ ಬ್ರಹ್ಮಚರ್ಯವನ್ನು ವರ್ಧಮಾನನು ಬೋಧಿಸಿದನು. ಇವನೇ 24ನೆಯ ತೀರ್ಥಂಕರ.
ವರ್ಧಮಾನ ಮಹಾವೀರ (ಸಾ.ಶ.ಪೂ. 599-527) ವರ್ಧಮಾನನು ಗಣರಾಜ್ಯಗಳಲ್ಲೊಂದಾದ ವೈಶಾಲಿಯ ಕುಂಡಲಗ್ರಾಮದಲ್ಲಿ ಜನಿಸಿದನು. ಇವನ ತಂದೆ ಸಿದ್ಧಾರ್ಥ, ಜ್ಞಾತ್ರಿಕ ಎಂಬ ಬುಡಕಟ್ಟಿನ ರಾಜ. ತಾಯಿ ತ್ರಿಶಲಾದೇವಿ, ಪ್ರಬಲ ಗಣರಾಜ್ಯವಾಗಿದ್ದ ಲಿಚ್ಛವಿಗಳ ಯುವರಾಣಿ. ತನ್ನ 30ನೆಯ ವಯಸ್ಸಿನಲ್ಲಿ ಸತ್ಯಾನ್ವೇಷಣೆಯ ಹುಡುಕಾಟದಲ್ಲಿ ತೊಡಗಿದ ಈತ ಮನೆಯನ್ನು ತ್ಯಜಿಸಿದನು. ನಂತರ ಇವನು 12 ವರ್ಷಗಳ ಕಾಲ ಸತ್ಯದ ಹುಡುಕಾಟದಲ್ಲಿ ಅಲೆದಾಡಿದ, ತಪಸ್ಸು ಮಾಡಿದ. ಇವನು ಉಪವಾಸ ಮಾಡುವ ಮೂಲಕ ಸ್ವತಃ ತನ್ನ ದೇಹವನ್ನು ದಂಡಿಸಿಕೊಂಡನು. ಆತ 42ನೆಯ ವಯಸ್ಸಿನಲ್ಲಿ ಕೈವಲ್ಯ ಜ್ಞಾನವನ್ನು ಪಡೆದನು. ಇವನು ಇಂದ್ರಿಯಗಳನ್ನು ನಿಗ್ರಹಿಸಿ ಸುಖ ಹಾಗೂ ಯಾತನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡ. ಈ ಸಾಧನೆಗಾಗಿ ಇವನು ‘ಮಹಾವೀರ’ನೆಂದು ಕರೆಸಿಕೊಂಡು ‘ಜಿನ’ನಾದನು. ‘ಜಿನ’ನೆಂದರೆ ಎಲ್ಲವನ್ನು ನಿಗ್ರಹಿಸಿದವನು, ಜಯಿಸಿದವನು ಎಂದರ್ಥ. ಹೀಗಾಗಿಯೆ ಇವನ ಅನುಯಾಯಿಗಳನ್ನು ಜೈನರೆಂದು ಕರೆಯುತ್ತಾgಇವನು ತನ್ನ 72ನೆಯ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ ನಿರ್ವಾಣವನ್ನು ಹೊಂದಿದನು. ಸಾಂಪ್ರದಾಯಿಕವಾಗಿ ಜೈನರಲ್ಲಿ ಶ್ವೇತಾಂಬರ ಹಾಗೂ ದಿಗಂಬರರೆಂಬ ಎರಡು ಮುಖ್ಯ ಪಂಗಡಗಳನ್ನು ಕಾಣುತ್ತೇವೆ. ಬಿಳಿಯ ಉಡುಪು ಧರಿಸಿದ ಜೈನ ಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ಶ್ವೇತಾಂಬರರೆಂದು ಕರೆಯುತ್ತಾರೆ. ಉಡುಪನ್ನು ಧರಿಸದ ಜೈನಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ದಿಗಂಬರ ಪಂಥಕ್ಕೆ ಸೇರಿದವರೆಂದು ಪರಿಗಣಿಸಲಾಗಿದೆ. ಮೊದಲ ಜೈನ ಸಮಾವೇಶದ ನಂತರ ಮಹಾವೀರನ ವಿಚಾರಗಳನ್ನು 12 ಗ್ರಂಥಗಳಲ್ಲಿ ಸಂಗ್ರಹಿಸಿಡಲಾಯಿತು. ಇವುಗಳನ್ನು ಜೈನರು 12 ಅಂಗಗಳೆಂದು ಕರೆದರು. ಇವುಗಳು ಪ್ರಾಕೃತ ಭಾಷೆಯಲ್ಲಿªಬೌದ್ಧ ಧರ್ಮ ಗೌತಮ ಬುದ್ಧನೆಂದೇ ಪ್ರಖ್ಯಾತನಾದ ಸಿದ್ದಾರ್ಥನು ಸಾ.ಶ.ಪೂ. 6ನೆಯ ಶತಮಾನದಲ್ಲಿ ಜನಿಸಿದನು. ತಂದೆ ಶುದ್ಧೋದನನು ಶಾಕ್ಯ ಗಣ-ಸಂಘದ ರಾಜ. ಸಿದ್ದಾರ್ಥನು
ರಾಜರ ಭೋಗವನ್ನು ಹಾಗೂ ಸಂಸಾರದ ಸುಖವನ್ನು ತ್ಯಜಿಸಿ ಸನ್ಯಾಸಿಯಾದನು. ಪ್ರಚಲಿತ ಬದುಕಿನ ದಾರಿಗಳ ನಿರರ್ಥಕತೆಯನ್ನು ಕಂಡು ಸತ್ಯದ ಹುಡುಕಾಟದಲ್ಲಿ ನಿರತನಾಗಿ ಜ್ಞಾನೋದಯವನ್ನು ಪಡೆದು ಬುದ್ಧನಾದನು. ಜ್ಞಾನೋದಯದ ನಂತರ ಈತ ಮೊದಲಿಗೆ ತೆರಳಿದ್ದು ಬನಾರಸ್ ಸಮೀಪದ ಸಾರನಾಥಕ್ಕೆ. ಇಲ್ಲಿನ ಜಿಂಕೆವನದಲ್ಲಿ ಈತನು ತನ್ನ ಮೊಟ್ಟಮೊದಲ ಬೋಧನೆಯನ್ನು ಮಾಡಿದನು. ಇದು ‘ಧರ್ಮ ಚಕ್ರ ಪ್ರವರ್ತನ’ವೆಂದು ಕರೆಯಲ್ಪಟ್ಟಿದೆ. ಇಲ್ಲಿ ಬುದ್ಧನು ಚತುರ್ ಆರ್ಯಸತ್ಯ ಹಾಗೂ ಅಷ್ಟಾಂಗಿಕ ಮಾರ್ಗವನ್ನು ಬೋಧಿಸಿದನು
80ನೆಯ ಇಳಿ ವಯಸ್ಸಿನಲ್ಲಿ ಬುದ್ಧನ ಅವಿರತವಾದ ಸಾರ್ಥಕ ಬದುಕು ಕುಶಿನಗರದಲ್ಲಿ ಅಂತ್ಯಗೊಂಡಿತು. ಇದನ್ನು ‘ಮಹಾಪರಿ ನಿರ್ವಾಣ’ವೆಂದು ಕರೆಯಲಾಗಿz
1956ರಲ್ಲಿ ಭಾರತದ ಪ್ರಮುಖ ಸಾಮಾಜಿಕ ಚಿಂತಕರಾದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರು ಬುದ್ಧನ ಬೋಧನೆಗಳಿಂದ ಪ್ರೇರಿತರಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಸಾ.ಶ.ಪೂ. 4ನೆಯ ಶತಮಾನದಲ್ಲಿ ಮ್ಯಾಸೆಡೊನಿಯಾದ ದೊರೆ ಅಲೆಗ್ಸಾಂಡರ್ ಗ್ರೀಕ್ ನಗರ ರಾಜ್ಯಗಳನ್ನು ಗೆದ್ದು ಪರ್ಶಿಯಾವನ್ನು ವಶಪಡಿಸಿಕೊಂಡನು. ಇದರಿಂದಾಗಿ ಭಾರತದ ಗಡಿಯವರೆವಿಗಿದ್ದ ಪರ್ಶಿಯಾ ಭಾಗವು ಅಲೆಗ್ಸಾಂಡರನ ಕೈವಶವಾಯಿತು. ಪರ್ಶಿಯಾವನ್ನು ಗೆದ್ದ ನಂತರ ಅಲೆಗ್ಸಾಂಡರ್ ಕಂದಾಹಾರ್ ಹಾಗೂ ಹಿಂದುಕುಶ್ನ ಮಾರ್ಗವಾಗಿ ಭಾರತವನ್ನು ಪ್ರವೇಶಿಸಿದ. ರಾವಿ ಮತ್ತು ಬಿಯಾಸ್ ನದಿಯವರೆಗೂ ಸಾಗಿದ ಈತನಿಗೆ ಇನ್ನು ಹೆಚ್ಚು ಮುಂದುವರಿಯಲಾಗದೆ ಜೀಲಂ ನದಿಯ ಮೂಲಕ ಭಾರತದ ಗಡಿದಾಟಿ ಹಿಂದಿರುಗುವ ಮಾರ್ಗದಲ್ಲಿ ಬ್ಯಾಬಿಲೋನಿನವರೆವಿಗೆ ಸಾಗಿ ಅಲ್ಲಿ ಮೃತನಾz
ಅಲೆಗ್ಸಾಂಡರ್-ಪೌರವರ ಕದನ : ತಕ್ಷಶಿಲೆಯ ರಾಜನಾದ ಅಂಬಿಯ ಆಮಂತ್ರಣವನ್ನು ಪಡೆದು ಬಂದ ಅಲೆಗ್ಸಾಂಡರನಿಗೆ ಎದುರಾದದ್ದು ಪೌರವ. ಇವನನ್ನು ಪೆÇೀರಸ್ ಎಂದೂ ಕರೆಯುತ್ತಾರೆ. ಭೀಕರವಾದ ಚಂಡಮಾರುತ ಹಾಗೂ ಪ್ರವಾಹಭರಿತ ಜೀಲಂನದಿಯ ಎದುರು ಎರಡು ಸೇನೆಗಳು ಮುಖಾಮುಖಿಯಾದವು. ಪ್ರವಾಹದ ಮಧ್ಯದಲ್ಲಿ ನದಿಯನ್ನು ದಾಟುವುದನ್ನು ನಿರೀಕ್ಷಿಸದ ಪೌರವನ ಮೇಲೆ ಅಲೆಗ್ಸಾಂಡರನ ಸೇನೆಯು ಆಕ್ರಮಣ ಮಾಡಿತು. ಹೋರಾಟದಲ್ಲಿ ಅಲೆಗ್ಸಾಂಡರನ ಸೇನೆಯು ಜಯಗಳಿಸಿತು. ಸೆರೆಯಾದ ಪೌರವನನ್ನು ಕುರಿತು ಅಲೆಗ್ಸಾಂಡರ್ `ನಿನ್ನನ್ನು ನಾನು ಹೇಗೆ ನಡೆಸಿಕೊಳ್ಳಬೇಕು?' ಎಂದು ಕೇಳಿದನು. ಆಗ ಪೌರವನು ಅತ್ಯಂತ ಧೈರ್ಯ, ಸ್ವಾಭಿಮಾನಗಳಿಂದ ‘ಒಬ್ಬ ರಾಜ ಮತ್ತೊಬ್ಬ ರಾಜನನ್ನು ಹೇಗೆ ನಡೆಸಿಕೊಳ್ಳಬೇಕೋ ಹಾಗೆ’ ಎಂದು ಉತ್ತರಿಸಿದ.
ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯತೆಗ್ರೀಕ್ ತತ್ವಜ್ಞಾನಿಗಳಾದ ಸಾಕ್ರೆಟೀಸ್ ಮತ್ತು ಆತನ ಶಿಷ್ಯ ಪ್ಲೇಟೋ ರಾಜ್ಯಶಾಸ್ತ್ರದ ಚಿಂತಕರಾಗಿದ್ದರು. ಪ್ಲೇಟೋ ತನ್ನ ‘ರಿಪಬ್ಲಿಕ್’ ಎಂಬ ಮಹಾಕೃತಿಯಲ್ಲಿ ಪ್ರಥಮ ಬಾರಿಗೆ ರಾಜ್ಯ ಮತ್ತು ಸರ್ಕಾರದ ಸ್ವರೂಪ ಮತ್ತು ಕರ್ತವ್ಯಗಳ ಬಗ್ಗೆ ಚರ್ಚಿಸಿದ್ದಾರೆ. ಆದರೆ ಗ್ರೀಸ್ ದೇಶದ ಮತ್ತೊಬ್ಬ ದಾರ್ಶನಿಕ ಅರಿಸ್ಟಾಟಲನಿಗೆ ರಾಜ್ಯಶಾಸ್ತ್ರದ ‘ಪಿತಾಮಹ’ ಎಂದು ಗೌರವ ನೀಡಲಾಗಿದೆ, ಏಕೆಂದರೆ, ಅರಿಸ್ಟಾಟಲ್ ರಾಜ್ಯಶಾಸ್ತ್ರ ಅಧ್ಯಯನವನ್ನು ಕ್ರಮಬದ್ಧಗೊಳಿಸಿ ರಾಜ್ಯಶಾಸ್ತ್ರಕ್ಕೆ ತಳಪಾಯ ಹಾಕಿದ ಪ್ರಥಮ ಚಿಂತಕರೆನಿಸಿದ್ದಾರೆ. ಅರಿಸ್ಟಾಟಲ್ ರಾಜ್ಯಶಾಸ್ತ್ರವನ್ನು ಕುರಿತು ಪ್ರಪಂಚದಲ್ಲಿಯೇ ಪ್ರಥಮ ಗ್ರಂಥ ‘ಪಾಲಿಟಿಕ್ಸ್’ ಎಂಬ ಕೃತಿಯನ್ನು ರಚಿಸಿದನು. ಸಾರ್ವಜನಿಕ ಆಡಳಿತ’ ಎಂಬುದು ಆಡಳಿತ ಎಂಬ ವ್ಯಾಪಕ ವ್ಯಾಪ್ತಿಯ ಕ್ಷೇತ್ರದ ಒಂದು ನಿರ್ದಿಷ್ಟ ಭಾಗವಾಗಿದೆ. ಸಾರ್ವಜನಿಕ ಎನ್ನುವ ಪದ ಸರ್ಕಾರಿ (ಉoveಡಿಟಿmeಟಿಣ) ಎನ್ನುವ ಅರ್ಥ ಸೂಚಿಸುತ್ತದೆ. ಸಾರ್ವಜನಿಕ ಆಡಳಿತ ಎಂಬ ಪದವನ್ನು 1812ರಲ್ಲಿ ಮೊಟ್ಟಮೊದಲ ಬಾರಿಗೆ ಅಲೆಕ್ಸಾಂಡರ್ ಹ್ಯಾಮಿಲ್ಟನ್ರು ಬಳಸಿದರು
ಕೇಂದ್ರ ಲೋಕಸೇವಾ ಆಯೋಗ ಕೇಂದ್ರ ಲೋಕಸೇವಾ ಆಯೋಗವು ಸಂವಿಧಾನದ ವಿಧಿ 315ರ ಅಡಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನಾತ್ಮಕ ಆಯೋಗವಾಗಿರುತ್ತದೆ. ಈ ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು 10 ಜನ ಸದಸ್ಯರು ಇರುತ್ತಾರೆ. ಇವರುಗಳನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸದಸ್ಯರುಗಳ ಅಧಿಕಾರಾವಧಿಯು ನೇಮಕವಾದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಅಥವಾ ಅವರಿಗೆ 65 ವರ್ಷ ವಯಸ್ಸಿನವರೆಗೆ ಅವಕಾಶವಿದ್ದು, ಇವುಗಳಲ್ಲಿ ಯಾವುದು ಮೊದಲು ಅದನ್ನು ಪರಿಗಣಿಸಿ ಸದಸ್ಯತ್ವದ ಅವಧಿಯನ್ನು ಅಂತ್ಯಗೊಳಿಸಲಾಗುತ್ತದೆ.
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ ಕೇಂದ್ರ ಹಂತದಲ್ಲಿ ಕೇಂದ್ರ ಲೋಕಸೇವಾ ಆಯೋಗವಿರುವಂತೆಯೇ ರಾಜ್ಯ ಹಂತದಲ್ಲಿ ರಾಜ್ಯ ಲೋಕಸೇವಾ ಆಯೋಗ ಸಂವಿಧಾನದ ನಿರ್ದೇಶನದನ್ವಯ ಅಸ್ತಿತ್ವದಲ್ಲಿರುತ್ತದೆ. ಇದನ್ನು ಕರ್ನಾಟಕದಲ್ಲಿ ಕರ್ನಾಟಕ ಲೋಕಸೇವಾ ಆಯೋಗವೆಂದು ಕರೆಯುತ್ತಾರೆ. ಇದು ದಿನಾಂಕ 18-5-1951ರಲ್ಲಿ ಸ್ಥಾಪಿಸಲ್ಪಟ್ಟಿತು. ಆಯೋಗವು ಒಬ್ಬರು ಅಧ್ಯಕ್ಷರು ಮತ್ತು 9 ಜನ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಇವರುಗಳನ್ನು ರಾಜ್ಯಪಾಲರು ನೇಮಿಸುತ್ತಾರೆ. ಇವರುಗಳ ಅಧಿಕಾರಾವಧಿಯು ನೇಮಕದಿಂದ ಆರು ವರ್ಷಗಳು ಅಥವಾ ಅವರುಗಳ 62ನೇ ವಯಸ್ಸಿನವರೆU
ಕೇಂದ್ರ ಸಚಿವಾಲಯದ ರಚನೆ: ಕೇಂದ್ರ ಸಚಿವಾಲಯವು ವಿವಿಧ ಖಾತೆಗಳ ಮತ್ತು ಇಲಾಖೆಗಳ ಸಂಗ್ರಹವಾಗಿದೆ. ಸಂವಿಧಾನದ 77(3) ವಿಧಿ ಅನ್ವಯ ರಾಷ್ಟ್ರಾಧ್ಯಕ್ಷರು ಭಾರತ ಸರ್ಕಾರದ ಆಡಳಿತ ವ್ಯವಹಾರಗಳ ಸುಗುಮ ನಿರ್ವಹಣೆಗಾಗಿ ಹಾಗೂ ಮಂತ್ರಿಗಳಲ್ಲಿ ಆ ವ್ಯವಹಾರಗಳ ಹಂಚುವಿಕೆಗಾಗಿ ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿರುತ್ತಾg
ಸಚಿವಾಲಯದ ರಚನೆ : ಮುಖ್ಯಮಂತ್ರಿಗಳು ಮಂತ್ರಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡುತ್ತಾರೆ. ಸಚಿವರ ಖಾತೆಗಳ ಸಂಖ್ಯೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನತೆಯಿರುತ್ತದೆ. ಸಾಮಾನ್ಯವಾಗಿ ಇಲಾಖೆಗಳ ಸಂಖ್ಯೆ 16ರಿಂದ 35ರವರೆಗೆ ಇರುತ್ತದೆ.
ಕೇಂದ್ರದ ಪಾತ್ರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಹಲವು ವಿಧಿಗಳಲ್ಲಿ ತಿಳಿಸಲಾಗಿದೆ. ಉದಾ-ಸಂವಿಧಾನ 355ನೇ ವಿಧಿ ಪ್ರಕಾರ ಬಾಹ್ಯ ದಾಳಿಯಿಂದ ರಾಜ್ಯಗಳನ್ನು ರಕ್ಷಿಸುವುದು, ಸಂವಿಧಾನದ 356ನೇ ವಿಧಿಯನ್ವಯ ರಾಜ್ಯದಲ್ಲಿ ಸಂವಿಧಾನಾತ್ಮಕ ಆಡಳಿತ ವಿಫಲವಾದಾಗ ರಾಜ್ಯ ತುರ್ತು ಪರಿಸ್ಥಿತಿ ಅಥವಾ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವುದು
1. ಆಗಸ್ಟ್ ಕಾಮ್ಟೆ (1798-1857) : ಆಗಸ್ಟ್ ಕಾಮ್ಟೆ ಫ್ರಾನ್ಸನ ಒಬ್ಬ ಮಹಾನ್ ಚಿಂತಕ. ಮೊದಲ ಸಾಮಾಜಿಕ ತತ್ವಜ್ಞಾನಿ. ‘ಸಮಾಜಶಾಸ್ತ್ರದ ಪಿತಾಮಹ’ ಎಂದು ಆಗಸ್ಟ ಕಾಮ್ಟೆ ಅವರನ್ನು ಕರೆಯಲಾಗುತ್ತದೆ. ಆಗಸ್ಟ್ ಕಾಮ್ಟೆ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸಮಾಜಶಾಸ್ತ್ರಕ್ಕೆ ವಿಜ್ಞಾನದ ಸ್ಥಾನ ಸಿಗುವಂತೆ ಮಾಡಿದ್ದಾರೆ
ಡಾ. ಬಿ.ಆರ್. ಅಂಬೇಡ್ಕರ್ (1891-1956) : ಆಧುನಿಕ ಭಾರತದ ನಿರ್ಮಾಪಕರ ಶ್ರೇಣಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ರವರ ಕೊಡುಗೆ ಅತ್ಯಂತ ಮಹತ್ವದ್ದು. ಇವರ ಪೂರ್ಣ ಹೆಸರು ಭೀಮರಾವ್ ರಾಮ್ಜಿ ಅಂಬೇಡ್ಕರ್. ಜೀವನ ಮತ್ತು ಶಿಕ್ಷಣ : ಬಿ.ಆರ್.ಅಂಬೇಡ್ಕರ್ ಅವರು ಮಹಾರಾಷ್ರ್ಟದ ಅಂಬಾವಾಡೆ ಎಂಬ ಗ್ರಾಮದಲ್ಲಿ ಏಪ್ರಿಲ್ 14, 1891ರಂದು ಜನಿಸಿದರು. ಅಂಬೇಡ್ಕರ್ 6 ವರ್ಷದಲ್ಲಿದ್ದಾಗ ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮ ಮೀರಾಬಾಯಿಯವರ ಆಶ್ರಯದಲ್ಲಿ ಬೆಳೆದರು. 1920 ರಲ್ಲಿ ಮೂಕನಾಯಕ ಎಂಬ ಪಾಕ್ಷಿಕವನ್ನು ಆರಂಭಿಸುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ರವರ ಪ್ರಮುಖ ಪುಸ್ತಕಗಳೆಂದರೆ ಜಾತಿ ವಿನಾಶ-1936, ಯಾರು ಶೂದ್ರರು-1946, ಬುದ್ಧ ಮತ್ತು ಅವನ ಧಮ್ಮ-1957, ಇತ್ಯಾದಿ. ಇವರ ಎಲ್ಲಾ ಬರವಣಿಗೆಗಳನ್ನು ಕರ್ನಾಟಕ ಸರ್ಕಾರ 26 ಸಂಪುಟಗಳಲ್ಲಿ ಮುದ್ರಿಸಿ ಪ್ರಕಟಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು.
ಭೂಮಿ-ನಮ್ಮ ಜೀವಂತ ಗ್ರಹ
ಸೂರ್ಯ ಮತ್ತು ಭೂಮಿಯ ನಡುವಿನ ದೂರ, ಜೀವಿಗಳಿಗೆ ಪೂರಕವಾದ ಉಷ್ಣಾಂಶ, ಅನಿಲಗಳು, ವಾಯುಗೋಳ ಮತ್ತು ಜಲಚಕ್ರ ಇತ್ಯಾದಿಗಳಾಗಿವೆ. ಹೀಗಾಗಿ ಭೂಮಿಯನ್ನು ‘ಜೀವಂತಗ್ರಹ’, ‘ವಿಶಿಷ್ಟಗ್ರಹ’, ‘ಜಲಾವೃತ ಗ್ರಹ,’ ‘ನೀಲಿಗ್ರಹ’ ಹೀಗೆ ವಿವಿಧ ಹೆಸರಿನಿಂದ ಕರೆಯಲಾಗಿzಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು 510 ದಶಲಕ್ಷಚದರ ಕಿ.ಮೀ.ಗಳಾಗಿದ್ದು ಅದರಲ್ಲಿ 361 ದಶಲಕ್ಷ ಚದರ ಕಿ.ಮೀ. ಗಳಷ್ಟು (70.78%) ಕ್ಷೇತ್ರವು ನೀರಿನಿಂದ ಆವರಿಸಲ್ಪಟ್ಟಿದೆ. ಉಳಿದ 149 ದಶಲಕ್ಷ ಚದರ ಕಿ.ಮೀ.ನಷ್ಟು ಕ್ಷೇತ್ರವು (29.22%) ಭೂ ಭಾಗದಿಂದ ಕೂಡಿದೆ. ಹೀಗೆ ಭೂಮಿಯ ಜಲ ಹಾಗೂ ಭೂ ಭಾಗಗಳ ಹಂಚಿಕೆ ಅಸಮತೆಯಿಂದ ಕೂಡಿದೆ. ಭೂ ಮತ್ತು ಜಲರಾಶಿಗಳ ಕ್ಷೇತ್ರ 1:2.43ರಷ್ಟು ಅನುಪಾತವನ್ನು ಹೊಂದಿವೆ.
ಭೂಮಿಯ ಆಕಾರ : ಭೂಮಿಯ ಆಕಾರವನ್ನು ‘ಭೂಮ್ಯಾಕಾರ’ (ಜಿಯಾಡ್) ಅಥವಾ ‘ಗೋಳಾಕಾರ’ ಎಂದು ಕರೆಯಲಾಗಿದೆ. ಏಕೆಂದರೆ ಭೂಮಿಯು ಧ್ರುವಗಳ ಬಳಿ ಸ್ವಲ್ಪ ಚಪ್ಪಟೆಯಾಗಿದ್ದು ಸಮಭಾಜಕವೃತ್ತದ ಬಳಿ ಉಬ್ಬಿದಂತಿದೆ. ಭೂಮಿಯ ಸಮಭಾಜಕವೃತ್ತದ ವ್ಯಾಸ 12,756 ಕಿ.ಮೀ.ಗಳು ಮತ್ತು ಧ್ರುವೀಯ ವ್ಯಾಸ 12,714 ಕಿ.ಮೀ ಆಗಿದೆ. ಇವೆರಡರ ವ್ಯಾಸದ ವ್ಯತ್ಯಾಸ 42 ಕಿ.ಮೀ.ಗಳಾಗಿದೆ. ಅದೇ ರೀತಿ ಸಮಭಾಜಕ ವೃತ್ತದ ಸುತ್ತಳತೆ 40,076ಕಿ.ಮೀ.ಗಳು ಮತ್ತು ಧ್ರುವೀಯ ಸುತ್ತಳತೆ 40,008 ಕಿ.ಮೀ.ಗಳಷ್ಟಿದೆ. ಇದರಲ್ಲಿ 68ಕಿ.ಮೀಗಳಷ್ಟು ವ್ಯತ್ಯಾಸವಿzಭೂ ನೆಲ ಭಾಗವನ್ನು ಏಳು ಭೂ ಖಂಡಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಏಷ್ಯ, ಆಫ್ರಿಕ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾಕ್ರ್ಟಿಕ, ಯುರೋಪ್ ಮತ್ತು ಆಸ್ಟ್ರೇಲಿಯ. ಈ ಭೂ ಖಂಡಗಳು ವಿಸ್ತಾರವಾದ ಭೂಭಾಗಗಳಾಗಿವೆ. ಏಷ್ಯಾವು ಅತಿ ದೊಡ್ಡ ಖಂಡವಾದರೆ, ಆಸ್ಟ್ರೇಲಿಯಾವು ಅತಿ ಚಿಕ್ಕ ಖಂಡವಾಗಿದೆ. ಅವುಗಳೆÀಂದರೆ ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂಮಹಾಸಾಗರ ಮತ್ತು ಆಕ್ರ್ಟಿಕ್ ಸಾಗರ. ಪೆಸಿಫಿಕ್ ಸಾಗರವು ಅತಿ ವಿಶಾಲವಾದ ಹಾಗೂ ಹೆಚ್ಚು ಆಳವಾದುದಾಗಿದೆ. ಆಕ್ರ್ಟಿಕ್ ಸಾಗರವು ಅತಿ ಚಿಕ್ಕದು ಮತ್ತು ಕಡಿಮೆ ಆಳ ಹೊಂದಿದೆ. ನೆಲ ಮತ್ತು ಜಲರಾಶಿಗಳು ಉತ್ತರಗೋಳಾರ್ಧ ಮತ್ತು ದಕ್ಷಿಣಗೋಳಾರ್ಧದಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಉತ್ತರಗೋಳಾರ್ಧದಲ್ಲಿ ಶೇ.60 ಭಾಗದಷ್ಟು ಭೂ ಭಾಗವಿದ್ದು, ಶೇ.40 ಭಾಗದಷ್ಟು ಜಲರಾಶಿಯಿರುವುದು. ಆದ್ದರಿಂದ ಇದನ್ನು ‘ಭೂ ಪ್ರಧಾನ ಗೋಳಾರ್ಧ’ವೆಂದು ಕರೆಯಲಾಗಿದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣಗೋಳಾರ್ಧದಲ್ಲಿ ಶೇ.81 ಭಾಗದಷ್ಟು ಜಲರಾಶಿಯಿದ್ದು ಶೇ.19 ಭಾಗದಷ್ಟು ನೆಲ ಭಾಗವಿದೆ. ಇದರಿಂದ ಇದನ್ನು ‘ಜಲಪ್ರಧಾನ ಗೋಳಾರ್ಧ’ ವೆಂದೂ ಕರೆಯುವರು
ಅಕ್ಷಾಂಶ ಮತ್ತು ರೇಖಾಂಶಗಳುಅಕ್ಷಾಂಶಗಳು : ಭೂಮಧ್ಯೆ ರೇಖೆಯಿಂದ ಉತ್ತರ ಅಥವಾ ದಕ್ಷಿಣಕ್ಕಿರುವ ಕೋನಾಂತರವೇ ಆಕ್ಷಾಂಶ. ಇವು ಕಾಲ್ಪನಿಕ ರೇಖೆಗಳಾಗಿದ್ದು, ಅವುಗಳನ್ನು ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಧ್ರುವಗಳ ಮಧ್ಯದಲ್ಲಿ ಭೂಅಕ್ಷಕ್ಕೆ ಲಂಬವಾಗಿ ಎಳೆದ ಕಾಲ್ಪನಿಕ ರೇಖೆಯೇ ಸಮಭಾಜಕವೃತ್ತ. ಈ ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿರುವಂತೆ ಗೋಳದ ಮೇಲೆ ಪೂರ್ವ ಪಶ್ಚಿಮವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳನ್ನೇ ‘ಅಕ್ಷಾಂಶಗಳು’ (ಐಚಿಣiಣuಜes) ಎನ್ನುವರು. ಸಮಭಾಜಕವೃತ್ತವು 00 ಮಹಾವೃತ್ತವಾಗಿದ್ದು ಅದು ಭೂ ಸುತ್ತಳತೆಗೆ ಸಮನಾಗಿದೆ. ಒಂದು ಅಕ್ಷಾಂಶದಿಂದ ಮತ್ತೊಂದು ಅಕ್ಷಾಂಶಕ್ಕಿರುವ ಭೂಮಿಯ ಮೇಲಿನ ಅಂತರ 110.4 ಕಿ.ಮೀ. ಗಳಾಗುತ್ತದೆ. 00 ಅಕ್ಷಾಂಶ ಅಥವಾ ಭೂಮಧ್ಯರೇಖೆ ಸೇರಿಕೊಂಡು 181 ಅಕ್ಷಾಂಶಗಳಾಗುತ್ತª1) 00 ಅಕ್ಷಾಂಶ - ಸಮಭಾಜಕವೃತ್ತ 2) 23ಳಿo ಉತ್ತರ ಅಕ್ಷಾಂಶ - ಕರ್ಕಾಟಕ ಸಂಕ್ರಾಂತಿ ವೃತ್ತ. 3) 23ಳಿo ದಕ್ಷಿಣ ಅಕ್ಷಾಂಶ - ಮಕರ ಸಂಕ್ರಾಂತಿ ವೃತ್ತ. 4) 66ಳಿo ಉತ್ತರ ಅಕ್ಷಾಂಶ - ಉತ್ತರಧ್ರುವ ವೃತ್ತ
(ಆಕ್ರ್ಟಿಕ್ ವೃತ್ತ). 5) 66ಳಿo ದಕ್ಷಿಣ ಅಕ್ಷಾಂಶ-ದಕ್ಷಿಣಧ್ರುವ ವೃತ್ತ. (ಅಂಟಾಕ್ರ್ಟಿಕ್ ವೃತ್ತ). 6) 900 ಉತ್ತರ ಅಕ್ಷಾಂಶ - ಉತ್ತರಧ್ರುವ. 7) 900 ದಕ್ಷಿಣ ಅಕ್ಷಾಂಶ - ದಕ್ಷಿಣಧ್ರುª
ರೇಖಾಂಶಗಳು : ಸಮಭಾಜಕ ವೃತ್ತವನ್ನು ಸಮಕೋನದಲ್ಲಿ ಛೇದಿಸಿ ಉತ್ತರ ಮತ್ತು ದಕ್ಷಿಣ ಧ್ರ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳು ಎನ್ನುವರುರೇಖಾಂಶಗಳನ್ನು ಮಧ್ಯಾಹ್ನ ಅಥವಾ ಮೆರಿಡಿಯನ್ ರೇಖೆಗಳೆನ್ನುವರು. (ಮೆರಿ-ಮಧ್ಯ, ಡಿಯನ್- ದಿನ). ಇಂಗ್ಲೆಂಡಿನ ಗ್ರೀನ್ವಿಚ್ನ ಮೇಲೆ ಹಾದುಹೋಗುವ ರೇಖಾಂಶವನ್ನು ‘ಪ್ರಧಾನ ರೇಖಾಂಶ’ವೆಂದು ಆಯ್ಕೆಮಾಡಲಾಗಿದೆ. ಇದನ್ನು 0o ಎಂದು ಗುರುತಿಸಲಾಗಿದೆ. ಗ್ರೀನ್ವಿಚ್ ರೇಖಾಂಶದ ಪೂರ್ವಕ್ಕೆ 1800ಹಾಗೂ ಪಶ್ಚಿಮಕ್ಕೆ 1800 ರೇಖಾಂಶಗಳಿವೆ. ಭೂಗೋಳದಲ್ಲಿ ಒಟ್ಟು 3600 ರೇಖಾಂಶ ರೇಖೆಗಳಿರುತ್ತವೆಸಮಭಾಜಕವೃತ್ತದ ಮೇಲೆ ಎರಡು ರೇಖಾಂಶಗಳ ನಡುವಿನ ಅಂತರ ಅತಿ ಹೆಚ್ಚು ಅಂದರೆ ಸುಮಾರು 111 ಕಿ.ಮೀ.ಗಳಾಗಿರುತ್ತz. ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಇರುವ ವೇಳೆಯ ವ್ಯತ್ಯಾಸ 4 ನಿಮಿಷಗಳಾಗಿದ್ದು, ಪ್ರತಿ 15 ರೇಖಾಂಶಗಳಿಗೆ ಒಂದು ಗಂಟೆ ಅಥವಾ 60 ನಿಮಿಷಗಳಾಗುತ್ತವೆ. (360 ್ಠ 4 = 1440 60 = 24 ಗಂಟೆಗಳು). ನಾವು ಗ್ರೀನಿಚ್ನಿಂದ ಪಶ್ಚಿಮದಿಂದ ಪೂವರ್Àದ ಕಡೆಗೆ ಚಲಿಸುವಾಗ ವೇಳೆಯು ಹೆಚ್ಚಾಗುತ್ತದೆ. (ಇಉಂ =ಇಚಿsಣ ಉಚಿiಟಿ ಂಜಜ) ಹಾಗೂ ಪೂವರ್Àದಿಂದ ಪಶ್ಚಿಮದ ಕಡೆಗೆ ಚಲಿಸುವಾಗ ವೇಳೆಯು ಕಡಿಮೆಯಾಗುತ್ತಾ ಹೋಗುತ್ತದೆ (WಐS - Wesಣ ಐose Subಣಡಿಚಿಛಿಣs) ಭಾರತದಲ್ಲಿ 82(0 ಪೂರ್ವ ರೇಖಾಂಶವನ್ನು ದೇಶದ ಅಥವಾ ಆದರ್ಶ ರೇಖಾಂಶವೆಂದು ನಿರ್ಧರಿಸಲಾಗಿದೆ. ಇದು ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ನಗರದ ಮೂಲಕ ಹಾದುಹೋಗಿದೆ.
ಭಾರತದ ವೇಳೆ ಈ ರೇಖಾಂಶವನ್ನು ಆಧರಿಸುವುದರಿಂದ ಇದನ್ನು ಭಾರತದ ಆದರ್ಶ ವೇಳೆ (I S ಖಿ) ಎನ್ನುವರು. ಇದು ಗ್ರೀನ್ವಿಚ್ ವೇಳೆಗಿಂತ 5 ಗಂಟೆ 30 ನಿಮಿಷಗಳಷ್ಟು ಮುಂದಿರುತ್ತದೆ.
ಶಿಲಾಗೋಳ:
ಅರ್ಥ ಮತ್ತು ಪ್ರಾಮುಖ್ಯತೆ ಭೂಮಿಯ ಅತ್ಯಂತ ಮೇಲ್ಭಾಗದ ಘನ ಪದರವನ್ನು ‘ಶಿಲಾಗೋಳ’ ಎನ್ನುವರು. ಈ ಪದರವು ಭೂಖಂಡಗಳಲ್ಲಿ ಹೆಚ್ಚು ದಪ್ಪವಾಗಿದ್ದು ಮತ್ತು ಸಾಗರಗಳ ತಳಭಾಗದಲ್ಲಿ ಸ್ವಲ್ಪ ತೆಳುವಾಗಿದೆ. ಶಿಲಾಗೋಳವು ವಿವಿಧ ಬಗೆಯ ಶಿಲೆ, ಖನಿಜ, ಮಣ್ಣು ಇತ್ಯಾದಿಗಳಿಂದ ಕೂಡಿದೆ. ಇನ್ನೂ ಹೆಚ್ಚು ಆಳಕ್ಕೆ ಹೋದಂತೆ ಉಷ್ಣಾಂಶವು ಹೆಚ್ಚಾಗುವುದರಿಂದ (ಪ್ರತಿ 32 ಮೀಟರ್ಗೆ 10 ಸೆಂಟಿಗ್ರೇಡ್) ಆಳದ ಬಗ್ಗೆ ಹೆಚ್ಚು ತಿಳಿಯಲು ಕಷ್ಟವಾಗುತ್ತದೆ.
ಭೂಚಿಪ್ಪು (ಅಡಿusಣ) : ಇದು ಭೂಮಿಯ ಅತ್ಯಂತ ಮೇಲ್ಭಾಗದ ಪದರವಾಗಿದೆ. ಇದು ಹೆಚ್ಚಾಗಿ ಸಿಲಿಕ, ಅಲ್ಯೂಮಿನಿಯಂ ಮತ್ತು ಮೆಗ್ನೀಷಿಯಂಗಳಿಂದ ಕೂಡಿದೆ. ಇದನ್ನು ‘ಶಿಲಾಗೋಳ’ ಎನ್ನುವರು. ಭೂ ಮೇಲ್ಭಾಗದಿಂದ ಇದು ಸುಮಾರು 60 ಕಿ.ಮೀ. ಆಳದವರೆಗೆ ವಿಸ್ತರಿಸಿದೆ. ಈ ಪದರದ ಮೇಲ್ಭಾಗವು ಹೆಚ್ಚು ಹಗುರವಾದ ವಸ್ತುಗಳಿಂದ ಕೂಡಿದೆ. ಇವುಗಳಲ್ಲಿ ಸಿಲಿಕ ಮತ್ತು ಅಲ್ಯೂಮಿನಿಯಂಗಳ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ‘ಸಿಯಾಲ್’ (Siಚಿಟ) ಎಂದು ಕರೆಂiÀiಲಾಗಿದೆ. ಇದನ್ನು ‘ಭೂಖಂಡಗಳ ಮೇಲ್ಪದರ’ ಎಂದೂ ಸಹ ಕರೆಯುವರು. ಇದರ ಕೆಳಭಾಗವು ಸಿಲಿಕ ಮತ್ತು ಮೆಗ್ನೀಷಿಯಂಗಳಿಂದ ಕೂಡಿದ್ದು, ಹೆಚ್ಚು ಸಾಂದ್ರಯುತವಾಗಿದೆ. ಇದನ್ನು ‘ಸೈಮಾ’ (Simಚಿ) ಎಂದು ಕರೆಯಲಾಗಿದೆ. ಇದನ್ನು ಕೆಲವೊಮ್ಮೆ ‘ಸಾಗರೀಯ ಮೇಲ್ಪದರ’ ಎಂತಲೂ ಕರೆಯುವರು.
ii. ಮ್ಯಾಂಟಲ್ : ಇದು ಭೂಮಿಯ ಅಂತರಾಳದ ಎರಡನೆಯ ಹಾಗೂ ಮಧ್ಯಭಾಗದ ಪದರು.
ಮ್ಯಾಂಟಲ್ ವಲಯವು ಭೂ ಮೇಲ್ಮೈನಿಂದ ಸುಮಾರು 2900 ಕಿ.ಮಿ.ಗಳ ಆಳದವರೆಗೆ ವಿಸ್ತರಿಸಿದೆ. ಇದರ ಮೇಲ್ಪದರದಲ್ಲಿನ ವಸ್ತಗಳು ಭಾಗಶಃ ದ್ರವ ಮತ್ತು ಘನ ಸ್ಥಿತಿಯಲ್ಲಿರುವುದರಿಂದ ಇದನ್ನು ‘ಶಿಲಾಪಾಕ’ (ಮ್ಯಾಗ್ಮಾ) ಎಂದು ಕರೆಯುವರು. ಮ್ಯಾಂಟಲ್ ವಲಯವು ಹೆಚ್ಚು ಸಾಂದ್ರತೆಯುಳ್ಳ ಹಾಗೂ ಕಠಿಣ ಶಿಲಾ ವಸ್ತುಗಳಿಂದ ಕೂಡಿದ್ದು ಪ್ರಮುಖವಾಗಿ ಖನಿಜಗಳನ್ನು ಹೊಂದಿದೆ. ಅವುಗಳೆಂದರೆ ಮೆಗ್ನೀಷಿಯಂ ಮತ್ತು ಕಬ್ಬಿಣ. ಮ್ಯಾಂಟಲ್ನಲ್ಲಿ ಎರಡು ಭಾಗಗಳಿವೆ. ಎ) ಮ್ಯಾಂಟಲ್ನ ಮೇಲ್ಪದರು ಅಥವಾ ‘ಏಸ್ತೆನೋಸ್ಪಿಯರ್’ ಎನ್ನುವರು. ಇದು ಭಾಗಶಃ ದ್ರವರೂಪದಲ್ಲಿದೆ. ಬಿ) ಮ್ಯಾಂಟಲ್ನ ಕೆಳಪದರು ಅಥವಾ `ಮೆಸಾಸ್ಪಿಯರ್’ ಎನ್ನುವರು. ಇದು ಘನರೂಪದಲ್ಲಿರುತ್ತದೆ.
ಭೂಚಿಪ್ಪು ಮತ್ತು ಮ್ಯಾಂಟಲ್ ಸಂಧಿಸುವ ಸೀಮಾ ವಲಯವನ್ನು ‘ಮೊಹೊರೋವಿಸಿಕ್’ ಅಥವಾ ‘ಮೋಹೋ’ ವಲಯ ಎನ್ನುವರು. ಅದೇರೀತಿ ಮ್ಯಾಂಟಲ್ ಮತ್ತು ಕೇಂದ್ರಗೋಳವನ್ನು ಬೇರ್ಪಡಿಸುವ ಗಡಿಯನ್ನು ‘ಗುಟೆನ್ಬರ್ಗ್ ಸೀಮಾವಲಯ’ ಎನ್ನುವರು. ಇಲ್ಲಿಂದ ಮೇಲೆ ಅಥವಾ ಕೆಳಗೆ ಶಿಲೆಗಳು ವಿವಿಧ ರಾಸಾಯನಿಕ ಸಂಯೋಜನೆಗಳಿಂದ ಕೂಡಿರುತ್ತವೆ.
iii. ಕೇಂದ್ರ ಗೋಳ(ಭೂ ತಿರುಳು): ಇದು ಭೂಮಿಯ ಅತ್ಯಂತ ಒಳಭಾಗ. ಇದು ಭೂಮಿಯ ಮೇಲ್ಮೈನಿಂದ 6,371 ಕಿ.ಮೀ ಆಳದವರೆಗೆ ಇರುವುದು. ಕೇಂದ್ರಗೋಳವು ಪ್ರಧಾನವಾಗಿ ನಿಕ್ಕಲ್ (ಓi) ಮತ್ತು ಕಬ್ಬಿಣ (ಈe)ದ ವಸ್ತುಗಳಿಂದ ಕೂಡಿರುವುದು. ಇದರಿಂದ ಕೇಂದ್ರವಲಯವನ್ನು ಸಾಂಕೇತಿಕವಾಗಿ ‘ನಿಫೆ’ (ಓiಜಿe) ಎಂದು ಕರೆಯಲಾಗಿದೆ. ಕೇಂದ್ರವಲಯವನ್ನು ಎರಡು ಉಪ ವಲಯಗಳಾಗಿ ವಿಂಗಡಿಸಲಾಗಿದೆ.ಅವುಗಳೆಂದರೆ
ಎ) ಹೊರಕೇಂದ್ರ ಗೋಳ-ಇದು ಅರೆದ್ರವರೂಪ ಸ್ಥಿತಿಯಲ್ಲಿದೆ. ಬಿ) ಒಳಕೇಂದ್ರ ಗೋಳ - ಇದು ಘನರೂಪದಲ್ಲಿದೆ.
ಪಂಚದಲ್ಲಿ ಅತಿ ಆಳವಾದ ಕೆಲವು ಭೂ ಗಣಿಕೇಂದ್ರಗಳು
1. ರಷ್ಯಾದ ಅಕೋಲ ಪರ್ಯಾಯ ದ್ವೀಪ ಸುಮಾರು 12 ಕಿ.ಮೀ. ಆಳವಾಗಿದೆ.
2. ದಕ್ಷಿಣ ಆಫ್ರಿಕಾದಲ್ಲಿ ಕಿಂಬರ್ಲಿ ವಜ್ರದ ಗಣಿಯು ಸುಮಾರು 3.9 ಕಿ.ಮೀ. ಆಳವಿದೆ.
3. ಭಾರತದ ಕರ್ನಾಟಕದಲ್ಲಿನ ಕೆ.ಜಿ.ಎಫ್.ನ ಚಾಂಪಿಯನ್ ರೀಫ್ ಗಣಿಯು ಸುಮಾರು 1.5ಕಿ.ಮೀ. ಆಳವಿದೆ.
ಶಿಲೆಗಳು (ಖoಛಿಞs)
1. ಅಗ್ನಿ ಶಿಲೆಗಳು (Igಟಿeous ಖoಛಿಞs) : ಅಗ್ನಿ ಶಿಲೆಗಳನ್ನು ಆಂಗ್ಲಭಾಷೆಯಲ್ಲಿ ‘ಇಗ್ನಿಯಸ್ ರಾಕ್ಸ್’ ಎಂದು ಕರೆಯುವರು. ಅಗ್ನಿ ಶಿಲೆಗಳು ಭೂಮಿಯ ಅಂತರಾಳದಿಂದ ಶಿಲಾಪಾಕವು ಹೊರಹೊಮ್ಮಿ ಭೂ ಮೇಲ್ಮೈಯಲ್ಲಿ ತಂಪಾಗಿ ಘನೀಭವಿಸುವುದರಿಂದ ಉತ್ಪತ್ತಿಯಾಗುತ್ತವೆ.
ಅಗ್ನಿಶಿಲೆಗಳು ಮೊದಲು ನಿರ್ಮಾಣವಾಗುವುದರಿಂದ ಇವುಗಳನ್ನು ‘ಪ್ರಾಥಮಿಕ ಶಿಲೆ’ಗಳೆಂದೂ ಕರೆಯುವರು. ಅಗ್ನಿ ಶಿಲೆಗಳಲ್ಲಿ ಈ ಕೆಳಕಂಡಂತೆ ವಿಧಗಳಿವೆ.
ಅಂತಸ್ಸರಣ ಶಿಲೆಗಳು: ಶಿಲಾಪಾಕ ಅಥವಾ ಮ್ಯಾಗ್ಮಾ ಭೂ ಮೇಲ್ಮೈಯನ್ನು ತಲುಪುವ ಮೊದಲೇ ಕೆಲವು ವೇಳೆ ಅಂತರಾಳದಲ್ಲಿ ತಂಪಾಗಿ, ಘನೀಭವಿಸಿ ನಿಧಾನವಾಗಿ ಶಿಲೆಗಳು ನಿರ್ಮಿತವಾಗುತ್ತವೆ. ಇವುಗಳನ್ನು ಅಂತಸ್ಪರಣ ಶಿಲೆಗಳು ಎನ್ನುವರು. ಈ ಶಿಲೆಗಳು ದಪ್ಪ ಹರಳಿನಿಂದ ಕೂಡಿರುತ್ತವೆ ಮತ್ತು ಇವುಗಳು ಭೂಮಿಯ ಒಳಭಾಗದಲ್ಲಿ ಹೆಚ್ಚು ಆಳದಲ್ಲಿರುತ್ತವೆ.
ಉದಾ: ಗ್ರಾನೈಟ್, ಡಯೊರೈಟ, ಗ್ಯಾಬ್ರೊ ಇತ್ಯಾದಿ.
ಬಹಿಸ್ಸರಣ ಶಿಲೆಗಳು : ಶಿಲಾಪಾಕವು (ಮ್ಯಾಗ್ಮಾ) ಹೊರಹೊಮ್ಮಿ ಕ್ರಮೇಣ ಭೂಮೇಲ್ಮೈಯಲಿತಂಪಾಗಿ ಉತ್ಪತ್ತಿಯಾದ ಶಿಲೆಗಳನ್ನು ಬಹಿಸ್ಸರಣ ಶಿಲೆಗಳು ಎಂದು ಕರೆಯಲಾಗಿದೆ. ಈ ಶಿಲೆಗಳು ಸಾಮಾನ್ಯವಾಗಿ ಸಣ್ಣ ಹರಳುಗಳಿಂದ ಕೂಡಿದ್ದು ಗಾಜಿನಂತೆ ನಯವಾಗಿರುತ್ತವೆ. ಏಕೆಂದರೆ ಲಾವಾರಸವು ಭೂಮಿಯ ಮೇಲೆ ಬಹುಬೇಗ ತಂಪಾಗಿ, ಘನೀಭವಿಸಿ ಶಿಲೆಗಳಾಗುತ್ತವೆ. ಉದಾ: ಬಸಾಲ್ಟ್, ಆಂಡೆಸೈಟ್.
2. ಕಣ ಶಿಲೆಗಳು: ಇದು ಆಂಗ್ಲಭಾಷೆಯ ಸೆಡಿಮೆಂಟರಿ ಪದವು ಲ್ಯಾಟಿನ್ ಭಾಷೆಯ ‘ಸೆಡಿಮೆಂಟಮ್’ ಎಂಬ ಪದದಿಂದ ಬಳಕೆಗೆ ಬಂದಿದೆ. ಅಂದರೆ ತಳಸೇರುವಿಕೆ ಎಂದರ್ಥ. ಕಣಶಿಲೆಗಳು ನೀರು, ಗಾಳಿ ಮತ್ತು ಹಿಮನದಿ ಮುಂತಾದ ಕರ್ತೃಗಳಿಂದ ನಿರ್ಮಾಣವಾಗುತ್ತವೆ. ಈ ಕರ್ತೃಗಳು ಅಗ್ನಿಶಿಲೆಗಳನ್ನು ಚೂರುಚೂರಾಗಿ ಒಡೆದು ಸವೆಸುತ್ತವೆ. ಒಡೆದ ಶಿಲಾಚೂರುಗಳು ಸಾಗಿಸಲ್ಪಟ್ಟು ಕೆಲವು ಸ್ಥಳಗಳಲ್ಲಿ ಸಂಚಯಗೊಳ್ಳುತ್ತವೆ. ಇವು ಪದರು ರೂಪದಲ್ಲಿ ರಚನೆಯಾಗುವುದರಿಂದ ಕಣಶಿಲೆಗಳನ್ನು ಪದರು ಶಿಲೆಗಳೆಂದು ಕರೆಯುವರು. ಕಣಶಿಲೆಗಳು ಅಗ್ನಿಶಿಲೆಯ ನಂತರ ರಚನೆಯಾಗುವುದರಿಂದ ದ್ವಿತೀಯ ಶಿಲೆಗಳೆಂದೂ ಕರೆಯುವರು. ಸಾಮಾನ್ಯವಾಗಿ ಇವು ಸಮುದ್ರ, ಸಾಗರ ಮೊದಲಾದ ಜಲರಾಶಿಗಳಲ್ಲಿ ಸಂಚಯಿತವಾಗಿ ನಿರ್ಮಿತವಾಗುವುದರಿಂದ ಇವುಗಳನ್ನು ‘ಜಲಶಿಲೆ’ಗಳೆಂದೂ ಕರೆಯುವರು.
ಭೌತಿಕ ಕ್ರಿಯೆಯಿಂದಾದ ಕಣ ಶಿಲೆಗಳು : ಶಿಥಿಲೀಕರಣ ಮತ್ತು ನಗ್ನೀಕರಣ ಕಾರ್ಯದಿಂದ ಮೂಲಕಲೆಗಳಿಂದ ಉತ್ಪತ್ತಿಯಾದ ಶಿಲಾಕಣಗಳಿಂದ ಈ ಶಿಲೆಗಳು ನಿರ್ಮಿತವಾಗುತ್ತವೆ. ಉದಾ: ಮರಳುಗಲ್ಲು (ಮರುಳುಮಯಶಿಲೆ) ಮತ್ತು ಜೇಡಿಶಿಲೆ (ಮೃಣ್ಮಯ ಶಿಲೆಗಳು).
ರಾಸಾಯನಿಕ ಕ್ರಿಯೆಯಿಂದಾದ ಕಣ ಶಿಲೆಗಳು : ಲವಣಾಂಶಗಳಿಂದ ಕೂಡಿರುವ ನೀರಿನ ದ್ರಾವಣವು ಉಷ್ಣಾಂಶದಿಂದ ಭಾಷ್ಪೀಭವನಗೊಳ್ಳುವುದರಿಂದ ರಾಸಾಯನಿಕ ಕಣಗಳು ಸಂಚಯಗೊಂಡು ಇಂತಹ ಶಿಲೆಗಳು ನಿರ್ಮಿತವಾಗುತ್ತವೆ. ಉದಾ : ಕಲ್ಲುಪ್ಪು, ಜಿಪ್ಸಂ ಇತ್ಯಾದಿ.
ಜೈವಿಕ ಕ್ರಿಯೆಗಳಿಂದಾದ ಕಣಶಿಲೆಗಳು : ಜೀವಾವಶೇಷಗಳಾದ ಜಲಚರಗಳ ಚಿಪ್ಪುಗಳು, ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಪಳೆಯುಳಿಕೆಗಳು ಮಣ್ಣಿನಲ್ಲಿ ಸೇರಿ ಗಟ್ಟಿಯಾಗಿ ಜೈವಿಕ ಕಣಶಿಲೆಗಳಾಗುತ್ತವೆ. ಉದಾ: ಸುಣ್ಣಕಲ್ಲು (ಚೂರ್ಣಾಧಿಕ್ಯಶಿಲೆ) ಮತ್ತು ಕಲ್ಲಿದ್ದಲು (ಇಂಗಾಲಾಧಿಕ್ಯಶಿಲೆ).
3. ರೂಪಾಂತರ ಶಿಲೆಗಳು: ಅಗ್ನಿಶಿಲೆಗಳು ಹಾಗೂ ಕಣಶಿಲೆಗಳು ಅತ್ಯಧಿಕ ಉಷ್ಣ ಹಾಗೂ ಒತ್ತಡದ ಪರಿಣಾಮದಿಂದ ಮಾರ್ಪಾಡು ಹೊಂದಿ ರೂಪಾಂತರ ಶಿಲೆಗಳು ರೂಪುಗೊಳ್ಳುತ್ತವೆಎ) ಗ್ರಾನೈಟ್ >ನೀಸ್, ಡಿ) ಮರುಳು ಶಿಲೆ->ಸ್ಫಟಿಕ ಶಿಲೆ, ಬಿ) ಬಸಾಲ್ಟ್-> ಶಿಸ್ಟ್, ಇ) ಕಲ್ಲಿದ್ದಲು->ಗ್ರಾಫೈಟ್,
ಸಿ) ಸುಣ್ಣಕಲ್ಲು->ಅಮೃತಶಿಲೆ, ಎಫ್) ಗ್ರಾಫೈಟ್->ವಜ್ರ.
ರೂಪಾಂತರ ಶಿಲೆಗಳು ಅತ್ಯಂತ ಕಠಿಣವಾದವು. ಇವುಗಳು ಅಮೂಲ್ಯವಾದ ಖನಿಜಗಳನ್ನು ಮತ್ತು ಬೆಲೆಬಾಳುವ ಹರಳುಗಳನ್ನು ಒಳಗೊಂಡಿರುತ್ತವೆ. ಉದಾ: ವಜ್ರ, ರೂಬಿ, ಎಮರಾಲ್ಡ್ ಇತ್ಯಾದಿ.
ಜ್ವಾಲಾಮುಖಿಗಳು (ಗಿoಟಛಿಚಿಟಿoes) ಭೂ ಮೇಲ್ಮೈನಲ್ಲಿ ಬಿರುಕು ಅಥವಾ ರಂಧ್ರಗಳು ಅಥವಾ ದ್ವಾರಗಳು ಉಂಟಾಗಿ ಅವುಗಳ ಮೂಲಕ ಭೂಮಿಯ ಒಳಗಿನ ಶಿಲಾಪಾಕವು ಹೊರಬೀಳುವುದನ್ನು ಜ್ವಾಲಾಮುಖಿಯೆಂದು ಕರೆಯುವರು.
i) ಜಾಗೃತ ಜ್ವಾಲಾಮುಖಿಗಳು (ಂಛಿಣive ಗಿoಟಛಿಚಿಟಿoes): ನಿರಂತರವಾಗಿ ಸ್ಫೋಟಗೊಳ್ಳುವ ಲಾವಾರಸ, ಅನಿಲ, ಬೂದಿ ಇತ್ಯಾದಿಗಳನ್ನು ಹೊರಚಿಮ್ಮುವ ಜ್ವಾಲಾಮುಖಿಗಳಿಗೆ ಜಾಗೃತ ಜ್ವಾಲಾಮುಖಿಗಳು ಎನ್ನುವರು. ಪ್ರಪಂಚದಾದ್ಯಂತ ಸುಮಾರು 600 ಜಾಗೃತ ಜ್ವಾಲಾಮುಖಿಗಳಿವೆ. ಉದಾ: ಫಿಲಿಫೈನ್ಸ್ ದ್ವೀಪದ ಪಿನಾಟುಬೊ, ಇಟಲಿಯ ಸ್ಟ್ರಾಂಬೋಲಿ ಮತ್ತು ಎಟ್ನಾ, ಯುಎಸ್ಎಯ ಸೇಂಟ್ ಹೆಲೆನಾ, ಹವಾಯಿ ದ್ವೀಪದ ಮËನಲೋವ ಮೊದಲಾದವು.
ii) ಸುಪ್ತ ಜ್ವಾಲಾಮುಖಿಗಳು (ಆoಡಿmಚಿಟಿಣ ಗಿoಟಛಿಚಿಟಿoes) : ಒಮ್ಮೆ ಸ್ಫೋಟಿಸಿ ಅನಂತರ ಬಹುಕಾಲ ಕಾರ್ಯಾಚರಣೆ ನಡೆಸದೆ ಸುಪ್ತವಾಗಿದ್ದು ಯಾವಾಗಲೋ ಒಮ್ಮೆ ಜಾಗೃತವಾಗಿ ಕಾರ್ಯಾಚರಣೆ ನಡೆಸುವ ಜ್ವಾಲಾಮುಖಿಗಳನ್ನು ಸುಪ್ತ ಜ್ವಾಲಾಮುಖಿ ಎನ್ನುವರು. ಉದಾ: ಇಟಲಿಯ ಮೌಂಟ್ ವೆಸೂವಿಯಸ್, ಜಪಾನಿನ ಪ್ಯೂಜಿಯಾಮ, ಇಂಡೋನೇಷ್ಯಾದ ಕ್ರಕಟೋವ, ತಾಂಜೇನಿಯಾದ ಕಿಲಿಮಂಜರೋ ಮೊದಲಾದವು.
iii) ಲುಪ್ತ ಜ್ವಾಲಾಮುಖಿಗಳು (ಇxಣiಟಿಛಿಣ ಗಿoಟಛಿಚಿಟಿoes): ಇವುಗಳು ಪುರಾತನ ಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು ನಂತರದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಿಲ್ಲ. ಉದಾ: ಅರ್ಜೆಂಟೈನಾದ ಅಕಾಂಕಗುವಾ, ತಾಂಜೇನಿಯಾದ ಗೊರಾಂಗೊರೊ, ಸ್ಕಾಟ್ಲೆಂಡ್ನ್ ಆರ್ಥರ್ಸೀಟ್ ಮೊದಲಾದವು1. ಮೌಂಟ್ ವೆಸೂವಿಯಸ್ (ಇಟಲಿ). 2. ಕ್ರಕಟೋವ (ಇಂಡೋನೇಷ್ಯ). 3. ಮೌಂಟ್ ಪಿಲೀ (ವೆಸ್ಟ್ ಇಂಡೀಸ್). 4. ಮೌಂಟ್ ಫ್ಯೂಜಿಯಾಮ ಜ್ವಾಲಾಮುಖಿಯನ್ನು ಜಪಾನಿಯರು ದೇವರೆಂದು ಪೂಜಿಸುತ್ತಾರೆಭೂಮಿಯ ಅಂತರಾಳದಲ್ಲಿ ಉಂಟಾಗುವ ಭೂಕಂಪದ ಉಗಮಸ್ಥಾನವನ್ನು ‘ಭೂಕಂಪನಾಭಿ’ ಅಥವಾ ಭೂಕಂಪ ಒಳಕೇಂದ್ರವೆಂದು ಕರೆಯುವರು. ಭೂಕಂಪ ನಾಭಿಯಿಂದ ಲಂಬಕೋನದಲ್ಲಿರುವ ಭೂ ಮೇಲ್ಮೈನ ಸ್ಥಳವನ್ನು “ಭೂಕಂಪ ಹೊರಕೇಂದ್ರ”ವೆನ್ನುವರು.
ಭೂಕಂಪ ಕುರಿತ ವೈಜ್ಞಾನಿಕ ಅಧ್ಯಯನವನ್ನು ಭೂಕಂಪಶಾಸ್ತ್ರ (Seismoಟogಥಿ) ಎನ್ನುವರು.
ಭೂಕಂಪ ಅಲೆಗಳ ಆರಂಭ ಸ್ಥಳ, ವೇಳೆ, ವೇಗ ಹಾಗೂ ದಿಕ್ಕನ್ನು ದಾಖಲಿಸುವ ಉಪಕರಣವನ್ನು ಭೂಕಂಪಮಾಪಕ (Seismogಡಿಚಿಠಿh) ಎನ್ನುವರು.
ಭೂಕಂಪನ ಅಲೆಗಳು 1. ಪ್ರಾಥಮಿಕ ಅಲೆಗಳು : ಇವುಗಳು ಭೂಕಂಪನದ ಒಳಕೇಂದ್ರದಿಂದ ಮೊದಲು ಹೊರಕೇಂದ್ರವನ್ನು ತಲುಪುತ್ತವೆ. ಇವುಗಳು ನೀಳ ಅಲೆಗಳಾಗಿದ್ದು ಅತ್ಯಂತ ವೇಗವಾಗಿ ಚಲಿಸುತ್ತವೆ. ಇವುಗಳು ಘನ, ದ್ರವ ಮತ್ತು ಅನಿಲಗಳ ಮೂಲಕ ಚಲಿಸುತ್ತವೆ.
2. ದ್ವಿತೀಯ ಅಲೆಗಳು : ಇವುಗಳನ್ನು ‘ಅಡ್ಡ ಅಲೆ’ (ಖಿಡಿಚಿಟಿsveಡಿse) ಗಳೆಂತಲೂ ಕರೆಯುವರು. ಇವು ದ್ರವ ವಸ್ತುಗಳ ಮೂಲಕ ಚಲಿಸಲಾರವು. ಪ್ರಾಥಮಿಕ ಅಲೆಗಳ ನಂತರ ಇವು ಹೊರ ಕೇಂದ್ರವನ್ನು ತಲುಪುತ್ತವೆ.
3. ಮೇಲ್ಮೈ ಅಲೆಗಳು : ಇವುಗಳನ್ನು ‘ಉದ್ದ ಅಲೆ’ಗಳೆಂದೂ ಸಹ ಕರೆಯುವರು. ಇವು ಅತ್ಯಂತ ನಿಧಾನಗತಿಯ ಭೂಕಂಪನ ಅಲೆಗಳಾಗಿವೆ. ಆದರೆ ಇವು ಅತ್ಯಂತ ಹಾನಿಕಾರಕ ಅಲೆಗಳಾಗಿವೆ.
ಭಾರತದಲ್ಲಿರುವ ಕೆಲವು ಭೂಕಂಪನ ದಾಖಲೆಯ ಕೇಂದ್ರಗಳೆಂದರೆ : ಗೌರಿಬಿದನೂರು, ಕೊಡೈಕೆನಾಲ್, ಪುಣೆ, ಹೈದರಾಬಾದ್ ಮತ್ತು ಡೆಹರಾಡೂನ್.
ಹಿಮನದಿಯ ವಿಧಗಳು : ಹಿಮನದಿಗಳಲ್ಲಿ ಎರಡು ಮುಖ್ಯ ವಿಧಗಳಿವೆ. ಅವುಗಳೆಂದರೆ ಖಂಡಾಂತರ ಹಿಮನದಿ ಮತ್ತು ಪರ್ವತ ಹಿಮನದಿ.
ಖಂಡಾಂತರ ಹಿಮನದಿ : ಧ್ರ್ರುವಪ್ರದೇಶಗಳಲ್ಲಿರುವ ವಿಸ್ತಾರವಾದ ಮಂಜುಗಡ್ಡೆಯ ಹಾಳೆಯನ್ನು ಖಂಡಾಂತರ ಹಿಮನದಿ ಎನ್ನುವರು. ಉದಾ : ಗ್ರೀನ್ಲ್ಯಾಂಡ್ ಮತ್ತು ಅಂಟಾಕ್ರ್ಟಿಕಾ.
ಸುಣ್ಣಕಲ್ಲಿನ ಗುಹೆಗಳು. 1. ಆಕಳ ಗವಿ (ಉಳವಿ) ಗುಹೆಗಳು - ಕರ್ನಾಟಕದ ಉತ್ತರಕನ್ನಡ ಜಿಲ್ಲೆ
2. ಬೇಲಂ ಮತ್ತು ಬೊರ್ರಾ ಗುಹೆಗಳು -ಆಂಧ್ರಪ್ರದೇಶ
ಅರ್ಥಶಾಸ್ತ್ರ ಪರಿಚಯ
ಅರ್ಥಶಾಸ್ತ್ರಜ್ಞರಿಂದ ಅರ್ಥಶಾಸ್ತ್ರದ ವ್ಯಾಖ್ಯೆಗಳು : “ಸಂಪತ್ತನ್ನು ಆಧ್ಯಯನ ಮಾಡುವ ವಿಷಯವೇ ಅರ್ಥಶಾಸ್ತ್ರ” - ಆಡಂ ಸ್ಮಿತ್ (1776) (ಅರ್ಥಶಾಸ್ತ್ರದ ಪಿತಾಮಹ).
“ಜನರ ಸಾಮಾನ್ಯ ಜೀವನದ ವ್ಯವಹಾರವನ್ನು ಅರ್ಥಶಾಸ್ತ್ರ ಆಧ್ಯಯನ ಮಾಡುತ್ತದೆ” - ಆಲ್ಫ್ರೆಡ್ ಮಾರ್ಷಲ್ (1890). “ವಿವಿಧ ಉಪಯುಕ್ತತೆಗಳನ್ನು ಹೊಂದಿರುವ ಕೊರತೆಯಲ್ಲಿರುವ ಸಂಪನ್ಮೂಲಗಳ ಮತ್ತು ಮಾನವನ ಅಪರಿಮಿತ ಬಯಕೆಗಳ ನಡುವಿನ ಸಂಬಂಧವಾಗಿ ಮಾನವನ ನಡವಳಿಕೆಯನ್ನು ಅಧ್ಯಯನ ಮಾಡುವ ವಿಜ್ಞಾನವೇ ಅರ್ಥಶಾಸ್ತ್ರ”- ಲಿಯೋನಿಲ್ ರಾಬಿನ್ಸ (1932).
“ವಿವಿಧ ಸಮಾಜಗಳು ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಉಪಯುಕ್ತ ಸರಕುಗಳನ್ನು ಉತ್ಪಾದಿಸಿ ಅವುಗಳನ್ನು ಜನರಲ್ಲಿ ಹೇಗೆ ವಿತರಿಸುತ್ತವೆ ಎಂಬುದನ್ನು ಅಭ್ಯಸಿಸುವ ವಿಷಯವೇ ಅರ್ಥಶಾಸ್ತ್ರ” - ಪಾಲ್.ಎ. ಸಾಮ್ಯೂಯೆಲಸನ್ (1948).
1950ರಲ್ಲಿ ಭಾರತದ ಅಭಿವೃದ್ಧಿಗೆ ಸಾಮಾಜಿಕ-ಆರ್ಥಿಕ ಯೋಜನೆಗಳನ್ನು ರೂಪಿಸಲು ಯೋಜನಾ ಆಯೋಗವನ್ನು ರಚಿಸಲಾಯಿತು ಆದರೆ, 2015ರಲ್ಲಿ ನೀತಿ ಆಯೋಗ ಅದರ ಸ್ಥಾನದಲ್ಲಿ ಸ್ಥಾಪಿತವಾಯಿತು.
ಮಿಶ್ರ ಅರ್ಥ ವ್ಯವಸ್ಥೆ . ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹ ಅಸ್ತಿತ್ವ: ಲಾಭದ ಉದ್ದೇಶ ಹೊಂದಿರುವÀ ಖಾಸಗಿ ಉದ್ಯಮಗಳು ಮತ್ತು ಕಲ್ಯಾಣಪರ ಉದ್ದೇಶ ಹೊಂದಿದ ಸರ್ಕಾರದ ಒಡೆತನದ ಉದ್ಯಮಗಳು ಜೊತೆಯಲ್ಲಿ ಅಸ್ತಿತ್ವದಲ್ಲಿರುತ್ತವೆ.
ಮೌರ್ಯರು ಮತ್ತು ಕುಶಾಣರು
ಭಾರತ ಕಂಡ ಮೊಟ್ಟಮೊದಲ ಸಾಮ್ರಾಜ್ಯ ಮೌರ್ಯರದು. ಇವರು ಮಗಧದಿಂದ ರಾಜ್ಯವನ್ನಾಳಿದರು. ಚಂದ್ರಗುಪ್ತಮೌರ್ಯ, ಬಿಂದುಸಾರ ಹಾಗೂ ಅಶೋಕ ಈ ಮನೆತನದ ರಾಜರುಗಳಲ್ಲಿಯೇ ಪ್ರಮುಖರು. ಈ ರಾಜಮನೆತನವು ಚಂದ್ರಗುಪ್ತಮೌರ್ಯನಿಂದ ಸ್ಥಾಪನೆಯಾಯಿತು. ಇವನ ಪ್ರಖ್ಯಾತಿಯನ್ನು ಗ್ರೀಕರ ರಾಯಭಾರಿಯಾಗಿದ್ದ ಮೆಗಸ್ತನಿಸನು ‘ಇಂಡಿಕಾ’ದಲ್ಲಿ ದಾಖಲಿಸಿ ಅಮರಗೊಳಿಸಿದನುಮೆಗಸ್ತನಿಸನ ‘ಇಂಡಿಕಾ’ : ಮೆಗಸ್ತನೀಸನು ಗ್ರೀಕ್ನ ರಾಯಭಾರಿಯಾಗಿ ಚಂದ್ರಗುಪ್ತಮೌರ್ಯನ ಆಸ್ಥಾನಕ್ಕೆ ಬಂದನು. ಅವನು ಮೌರ್ಯರ ರಾಜಧಾನಿ ‘ಪಾಟಲಿಪುತ್ರ’ದಲ್ಲಿನ ತನ್ನ ಅನುಭವಗಳನ್ನು ‘ಇಂಡಿಕಾ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾನೆ. ಈ ಕೃತಿಯು ನಮಗೆ ಇಂದು ದೊರೆತಿಲ್ಲವಾದರೂ, ಅದರಲ್ಲಿನ ಸಂಗತಿಗಳನ್ನು ನಂತರ ಬಂದ ಗ್ರೀಕಿನ ಬರಹಗಾರರಾದ ಡಿಯೋಡೋರಸ್, ಸಿಕ್ಯುಲಸ್, ಸ್ಟ್ರಾಬೋ, ಫ್ಲಿನಿ ಮತ್ತು ಅರಿಯನ್ ಅವರುಗಳು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ. ‘ಇಂಡಿಕಾ’ ಕೃತಿಯು ಮೌರ್ಯರ ಕಾಲದ ನಗರಾಡಳಿತ, ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕುರಿತು ತಿಳಿಸಿಕೊಡುತ್ತದೆ ಅರ್ಥಶಾಸ್ತ್ರ: ಅರ್ಥಶಾಸ್ತ್ರವನ್ನು ಚಂದ್ರಗುಪ್ತಮೌರ್ಯನ ಗುರು ಹಾಗೂ ಪ್ರಧಾನಮಂತ್ರಿಯಾದ ಕೌಟಿಲ್ಯನು ಬರೆದಿದ್ದಾನೆ. ಅವನಿಗೆ ಚಾಣಕ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರುಗಳೂ ಇವೆ. ಅರ್ಥಶಾಸ್ತ್ರ ಗ್ರಂಥವು ಸಂಸ್ಕøತ ಭಾಷೆಯಲ್ಲಿ ರಚಿಸಲ್ಪಟ್ಟಿದೆ. ಇದು ರಾಜನೊಬ್ಬನು ತಿಳಿಯಲೇಬೇಕಾದ ರಾಜ್ಯಾಡಳಿತ, ವಿದೇಶಾಂಗ ನೀತಿ, ನ್ಯಾಯದಾನದ ಸಂಗತಿಗಳನ್ನು ವಿವರವಾಗಿ ತಿಳಿಸುತ್ತದೆ. ಈ ಗ್ರಂಥದಿಂದ ಮೌರ್ಯರ ಕಾಲದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ, ಸಾಮಾಜಿಕ ಮೊದಲಾದ ಸಂಗತಿಗಳನ್ನು ತಿಳಿಯಬಹುದು1902ರಲ್ಲಿ ಮೈಸೂರಿನ ಓರಿಯಂಟಲ್ ಗ್ರಂಥಾಲಯದಲ್ಲಿ ಆರ್.ಶಾಮಶಾಸ್ತ್ರಿಯವರು ಕೌಟಿಲ್ಯನು ರಚಿಸಿದ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಪತ್ತೆಮಾಡಿದರು.
ಮುದ್ರಾರಾಕ್ಷಸ: ಇದು ವಿಶಾಖದತ್ತ ಬರೆದ ಒಂದು ಸಂಸ್ಕøತ ನಾಟಕ. ಇದರಲ್ಲಿ ಕೌಟಿಲ್ಯನು ಚಂದ್ರಗುಪ್ತ ಮೌರ್ಯನನ್ನು ಅಧಿಕಾರಕ್ಕೆ ತಂದ ಕಥಾನಕವು ನಿರೂಪಿತವಾಗಿದೆ.
• ದೀಪವಂಶ ಮತ್ತು ಮಹಾವಂಶ: ಇವು ಶ್ರೀಲಂಕಾದ ಬೌದ್ಧ ಸಾಹಿತ್ಯ ಕೃತಿಗಳು. ಇದರಲ್ಲಿ ಅಶೋಕನು ಬೌದ್ಧಧರ್ಮವನ್ನು ಶ್ರೀಲಂಕಾಗೆ ವಿಸ್ತರಿಸಿದ ಬಗೆಗಿನ ವಿವರಗಳು ದೊರಕುತ್ತವೆ.
• ಅಶೋಕನ ಶಾಸನಗಳು: ಅಶೋಕನ ಬಗೆಗೆ ಅತ್ಯಂತ ಅಧಿಕೃತವಾಗಿ ಹೇಳುವ ದಾಖಲೆಗಳೆಂದರೆ ಶಾಸನಗಳು. ಈ ಶಾಸನಗಳಿಂದ ಅಶೋಕನ ಸಾಮ್ರಾಜ್ಯದ ವಿಸ್ತಾರ, ಅವನ ಧಮ್ಮ ಸಂದೇಶದ ವಿಚಾರ, ಕಳಿಂಗ ಯುದ್ಧದ ವಿವರ ಮೊದಲಾದ ಸಂಗತಿಗಳನ್ನು ತಿಳಿಯಬಹುದು
ಚಂದ್ರಗುಪ್ತಮೌರ್ಯ (ಸಾ.ಶ.ಪೂ. 321-298) ಮೌರ್ಯ ಸಾಮ್ರಾಜ್ಯವನ್ನು ಚಂದ್ರಗುಪ್ತಮೌರ್ಯ ಸ್ಥಾಪಿಸಿದನು. ಚಂದ್ರಗುಪ್ತಮೌರ್ಯನು ತನ್ನ ಗುರುವಾದ ಕೌಟಿಲ್ಯನ ಮಾರ್ಗದರ್ಶನದಲ್ಲಿ ನಂದ ವಂಶದ ಕೊನೆಯ ದೊರೆಯನ್ನು ಪದಚ್ಯುತಗೊಳಿಸಿ ತನ್ನ 25ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದನು. ಈ ಹೊತ್ತಿಗೆ ವಾಯವ್ಯ ಭಾರತದಲ್ಲಿ ಪಂಜಾಬ್ ಪ್ರಾಂತ್ಯದವರೆಗಿನ ಈ ಪ್ರದೇಶವನ್ನು ಅಲೆಕ್ಸಾಂಡರನ ಉತ್ತರಾಧಿಕಾರಿಯಾದ ಸೆಲ್ಯೂಕಸ್ ನಿಕ್ಯಾಟರ್ ಆಳುತ್ತಿದ್ದನು. ಸಾ.ಶ.ಪೂ. 305ರಲ್ಲಿ ಅವನೊಂದಿಗೆ ಚಂದ್ರಗುಪ್ತಮೌರ್ಯನು ಯುದ್ಧ ಸಾರಿದನು. ಅಂತಿಮವಾಗಿ ಯುದ್ಧವು ಒಪ್ಪಂದದೊಂದಿಗೆ ಅಂತ್ಯಗೊಂಡಿತು. ಅದರಂತೆ, ಸೆಲ್ಯೂಕಸನು ಇಂದಿನ ಆಫ್ಘಾನಿಸ್ತಾನ ಮತ್ತು ಬಲೂಚಿಸ್ತಾನದ ಪ್ರದೇಶಗಳು ಸೇರಿದಂತೆ ನಾಲ್ಕು ಪ್ರಾಂತ್ಯಗಳನ್ನು ಚಂದ್ರಗುಪ್ತ ಮೌರ್ಯನಿಗೆ ವಹಿಸಿಕೊಟ್ಟನು.
ಅಲ್ಲದೆ, ತನ್ನ ಮಗಳನ್ನು ಚಂದ್ರಗುಪ್ತಮೌರ್ಯನಿಗೆ ವಿವಾಹ ಮಾಡಿಕೊಟ್ಟನು. ಇದರಿಂದ ಮಗದ ಸಾಮ್ರಾಜ್ಯ ವಾಯವ್ಯ ವಿಭಾಗದಲ್ಲಿ ವಿಸ್ತಾರವಾದ ಭೂ ಪ್ರದೇಶಗಳಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿತು ಚಂದ್ರಗುಪ್ತಮೌರ್ಯನು ತನ್ನ ಕೊನೆಯ ಕಾಲದಲ್ಲಿ ಜೈನ ಧರ್ಮವನ್ನು ಸ್ವೀಕರಿಸಿದನು. ಅವನು ಸಾಮ್ರಾಜ್ಯವನ್ನು ತನ್ನ ಮಗನಾದ ಬಿಂದುಸಾರನಿಗೆ ವಹಿಸಿ, ಜೈನ ಗುರು ಭದ್ರಬಾಹು ಹಾಗೂ ಕೆಲವು ಯತಿಗಳೊಡನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳಕ್ಕೆ ಬಂದನು. ಈ ಸಂಪ್ರದಾಯವು ಅಂತಿಮವಾಗಿ, ಸಲ್ಲೇಖನ ವ್ರತವನ್ನು ಕೈಗೊಂಡು ಅಲ್ಲಿಯೇ ಮರಣ ಹೊಂದಿದನೆಂದು ಹೇಳುತ್ತದೆ. ಸಾಮ್ರಾಟ ಅಶೋಕ (ಸಾ.ಶ.ಪೂ. 273-232) ಭಾರತದ ಇತಿಹಾಸದಲ್ಲಿಯೇ ಅಶೋಕನು ಈ ವಂಶದ ಅತ್ಯಂತ ಪ್ರಸಿದ್ಧ ದೊರೆ. ಬಿಂದುಸಾರನ ಮಗನಾದ ಅಶೋಕನು ತನ್ನ ತಂದೆಯ ಆಳ್ವಿಕೆಯ ಕಾಲದಲ್ಲಿ ಉಜ್ಜೈನಿ ಮತ್ತು ತಕ್ಷಶಿಲೆ ಪ್ರಾಂತ್ಯಗಳ ರಾಜ್ಯಪಾಲನಾಗಿ ಕಾರ್ಯ ನಿರ್ವಹಿಸಿದ್ದನು.
ಕಳಿಂಗ ಯುದ್ಧ ಮೌರ್ಯ ಸಾಮ್ರಾಜ್ಯದ ಅಧಿಪತ್ಯವನ್ನು ಒಪ್ಪಿಕೊಳ್ಳದ ಕಳಿಂಗ ರಾಜ್ಯವನ್ನು ಆಕ್ರಮಿಸಿಕೊಳ್ಳಲು ಸಾ.ಶ.ಪೂ. 261ರಲ್ಲಿ ಅಶೋಕನು ಯುದ್ಧ ಸಾರಿದನು. ಈ ಯುದ್ಧದ ಬಗೆಗೆ ಅಶೋಕನ 13ನೇ ಬಂಡೆಗಲ್ಲು ಶಾಸನವುಮಾಹಿತಿ ನೀಡುತ್ತದೆ.
ಬೌದ್ಧ ಧರ್ಮ ಮತ್ತು ಅಶೋಕ: ಕಳಿಂಗ ಯುದ್ಧದ ನಂತರ ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದನು. ಬೌದ್ಧ ವಿಹಾರ ಮತ್ತು ಚೈತ್ಯಗಳಿಗೆ ದಾನ ನೀಡಿದನು. ತನ್ನ ಸಾಮ್ರಾಜ್ಯದಲ್ಲಿ ಪ್ರಾಣಿ, ಪಕ್ಷಿಗಳ ಹತ್ಯೆಯನ್ನು ನಿಷೇಧಿಸಿದನು. ಅಶೋಕನು ಸಾಮ್ರಾಜ್ಯದಲ್ಲಿ ಧರ್ಮ ಪ್ರಚಾರ ಮಾಡಲು ‘ಧರ್ಮಮಹಾಮಾತ್ರ’ ಎಂಬ ಅಧಿಕಾರಿಗಳನ್ನು ನೇಮಿಸಿದನು. ಸಾಮ್ರಾಜ್ಯದ ಉದ್ದಗಲಕ್ಕೂ ಧರ್ಮ ಸಂದೇಶ ಸಾರುವ ಶಾಸನಗಳನ್ನು ಹಾಕಿಸಿದನು. ದೇಶವಿದೇಶಗಳಿಗೂ ಧರ್ಮ ಪ್ರಚಾರಕರನ್ನು ಕಳುಹಿಸಿದನು. ಬನವಾಸಿಗೆ ರಕ್ಷಿತ, ಮಹಿಷಮಂಡಲಕ್ಕೆ (ಮೈಸೂರು) ಮಹಾದೇವ ಎಂಬ ಪ್ರಚಾರಕರನ್ನು ಕಳುಹಿಸಿದನು. ಅಲ್ಲದೆ, ಸಿಲೋನಿಗೆ ತನ್ನ ಮಗ ರಾಹುಲ ಮತ್ತು ಮಗಳು ಸಂಘಮಿತ್ರೆಯನ್ನು ಕಳುಹಿಸಿಕೊಟ್ಟನು. ಸಾ.ಶ.ಪೂ. 250ರಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ಪಾಟಲೀಪುತ್ರದಲ್ಲಿ ನೆರವೇರಿಸಿದನು
ಅಶೋಕನ ಶಾಸನಗಳು : ಅಶೋಕನನ್ನು ‘ಶಾಸನಗಳ ಪಿತಾಮಹ’ ಎಂದು ಕರೆಯಲಾಗುತ್ತದೆ. 1837ರಲ್ಲಿ ಬ್ರಿಟಿಷ್ ಅಧಿಕಾರಿಯಾದ ಜೇಮ್ಸ್ ಪ್ರಿನ್ಸೆಪ್ ಅವರು ಅಶೋಕನ ಶಾನಸಗಳನ್ನು ಮೊತ್ತಮೊದಲ ಬಾರಿಗೆ ಓದಿದರು. 1915ರವರೆಗೆ ದೊರೆತ ಅಶೋಕನ ಎಲ್ಲಾ ಶಾಸನಗಳಲ್ಲಿಯೂ ಅವನ ಹೆಸರಿನ ಬದಲು
‘ದೇವನಾಂಪ್ರಿಯ’ ‘ಪ್ರಿಯದರ್ಶಿ’ ಎಂಬ ಬಿರುದುಗಳು ಮಾತ್ರ ಇದ್ದವು. ಚಾಲ್ರ್ಸ್ ಬೇಡೆನ್ ಎಂಬ ಬ್ರಿಟಿಷ್ ಎಂಜಿನಿಯರ್ ಒಬ್ಬರು 1915ರಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದರು. ಈ ಶಾಸನದಲ್ಲಿ ಮೊತ್ತಮೊದಲ ಬಾರಿಗೆ ‘ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ’ ಎಂಬ ಉಲ್ಲೇಖ ಕಂಡುಬಂದಿತು. ಮೌರ್ಯರ ಕಾಲದಲ್ಲಿ ಕೆರೆ ನೀರಾವರಿ ಮತ್ತು ಕಾಲುವೆ ನೀರಾವರಿ ವ್ಯವಸ್ಥೆ ಉತ್ತಮವಾಗಿದ್ದುದಕ್ಕೆ ನಿದರ್ಶನಗಳಿವೆ. ಚಂದ್ರಗುಪ್ತಮೌರ್ಯನ ರಾಜ್ಯಪಾಲನಾದ ಪುಷ್ಯಗುಪ್ತನು ಗುಜರಾತಿನ ಜುನಾಗಡದ ಬಳಿ ‘ಸುದರ್ಶನ ಸರೋವರ’ ಎಂಬ ಅಣೆಕಟ್ಟನ್ನು ನಿರ್ಮಿಸಿದನು. ತಕ್ಷಶಿಲೆ, ಉಜ್ಜೈನಿ, ದೌಲಿ, ಸುವರ್ಣಗಿರಿ ಮತ್ತು ಗಿರ್ನಾರ್ಗಳು ಪ್ರಾಂತೀಯ ಆಡಳಿತ ಕೇಂದ್ರಗಳಾಗಿದ್ದವು. ರಜುಕ (ನ್ಯಾಯಿಕ ಅಧಿಕಾರಿ), ಯುಕ್ತ (ಮಾಹಿತಿಗಳನ್ನು ದಾಖಲಿಸುವ ಅಧಿಕಾರಿ) ಮೊದಲಾದ ಅಧಿಕಾರಿಗಳಿದ್ದರು.
ಕುಶಾಣರು
ಗ್ರೀಕರ ನಂತರ ಭಾರತೀಯ ಚರಿತ್ರೆ ಹಾಗೂ ಸಂಸ್ಕøತಿಯ ಮೇಲೆ ಪ್ರಭಾವ ಬೀರಿದವರು ಕುಶಾಣರು.
ಬೌದ್ಧ ಧರ್ಮಕ್ಕೆ ವಿಶೇಷ ಚಲನೆಯನ್ನು ನೀಡಿದವರು ಇವರು. ಮಹಾಯಾನಪಂಥವು ಇವರ ಆಶ್ರಯದಲ್ಲಿ ಹೆಚ್ಚಿನ ಪÉÇ್ರೀತ್ಸಾಹವನ್ನು ಪಡೆಯಿತು. ಗಾಂಧಾರ ಶಿಲ್ಪಕಲೆಯು ಇವರಿಂದ ವಿಕಸಿತಗೊಂಡಿತುಮೌರ್ಯರ ನಂತರದಲ್ಲಿ ಕಾಣುವ ಪ್ರಮುಖ ರಾಜಮನೆತನವೇ ಗಾಂಧಾರ ಶೈಲಿಯ ಬುದ್ಧ: ಕುಶಾಣರದು. ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಅಲೆಮಾರಿ ಜನಾಂಗದ ಮೂಲ ಹೊಂದಿದವರು ಕುಶಾಣರು. ಇವರು ಯೂಚಿ ಸಂತತಿಯವರು ಕುಜಲಕಡ್ಫೀಸಸ್ ಈ ರಾಜಮನೆತನದ ಸಂಸ್ಥಾಪಕ. ವಿಮಕಡ್ಫೀಸಸ್ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಹೊರಡಿಸಲಾಯಿತು. ವಿಮಕಡ್ಫೀಸಸ್ನ ನಂತರ ಬಂದವನೆ ಕನಿಷ್ಕ. ಇವನ ಆಳ್ವಿಕೆಯಡಿಯಲ್ಲಿ ಕುಶಾಣರ ಮನೆತನವು ವ್ಯಾಪಕವಾಗಿ ಬೆಳೆಯಿತು. ಇವನು ಸಾ.ಶ. 78ರಲ್ಲಿ ರಾಜಾಳ್ವಿಕೆಯನ್ನು ಪ್ರಾರಂಭಿಸಿ ಹೊಸ ಯುಗವೊಂದಕ್ಕೆ ನಾಂದಿಹಾಡಿದನು. ಇದನ್ನು ‘ಶಕ’ಯುಗವೆಂದು ಕರೆಯುತ್ತಾರೆ. ಪುರುಷಪುರವು ಕನಿಷ್ಕನ ರಾಜಧಾನಿ. ಇವನ ಕಾಲದ ಮತ್ತೊಂದು ಮುಖ್ಯನಗರ ಮಥುರಾ. ನಾಲ್ಕನೆಯ ಬೌದ್ಧ ಸಮಾವೇಶವನ್ನು ಕಾಶ್ಮೀರದಲ್ಲಿ ಕನಿಷ್ಕನ ನೇತೃತ್ವದಲ್ಲಿಯೇ ನಡೆಸಲಾಯಿತು. ಈತನೂ ಅಶೋಕನ ರೀತಿಯಲ್ಲಿಯೇ ಬೌದ್ಧಧರ್ಮ ಪ್ರಚಾರಕ್ಕಾಗಿ ಮಧ್ಯಏಷ್ಯ ಹಾಗೂ ಚೀನಾಗಳಿಗೆ ನಿಯೋಗಗಳನ್ನು ಕಳುಹಿಸಿದ್ದನು.
ಗುಪ್ತರು ಮತ್ತು ವರ್ಧನರು ಮೌರ್ಯರು ಹಾಗೂ ಕುಶಾಣರ ನಂತರ ಉದಯವಾದ ಸಾಮ್ರಾಜ್ಯವೇ ಗುಪ್ತರ ಸಾಮ್ರಾಜ್ಯ. ಮೌರ್ಯ ಸಾಮ್ರಾಜ್ಯದ ಪತನದ ನಂತರ ಉತ್ತರದಲ್ಲಿ ಕುಶಾಣರು ಹಾಗೂ ದಕ್ಷಿಣದಲ್ಲಿ ಶಾತವಾಹನರು ಆಳ್ವಿಕೆ ನಡೆಸಿದರುಗುಪ್ತರ ಸಂತತಿಯು ಸಾ.ಶ. 275ರಲ್ಲಿ ಅಧಿಕಾರಕ್ಕೆ ಬಂದಿತು. ಶ್ರೀಗುಪ್ತ ಈ ವಂಶದ ಮೂಲ ಸ್ಥಾಪಕ.
ಪ್ರಯಾಗದಿಂದ ತಮ್ಮ ಆಳ್ವಿಕೆಯನ್ನು ಆರಂಭಿಸಿದರು. ಗುಪ್ತರು ಪಾಟಲೀಪುತ್ರವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. ಇತಿಹಾಸಕಾರರಾದ ವಿ.ಎ. ಸ್ಮಿತ್ರವರು ಗುಪ್ತರ ಕಾಲವನ್ನು ಸುವರ್ಣಯುಗವೆಂದು ಕರೆದಿದ್ದಾರೆ. ಒಂದನೇ ಚಂದ್ರಗುಪ್ತನು ಸಾ.ಶ. 319-20ರಲ್ಲಿ ಪಟ್ಟಕ್ಕೆ ಬಂದಾಗ ಗುಪ್ತ ಶಕೆ ಆರಂಭವಾಯಿತು.
ಸಮುದ್ರಗುಪ್ತ (ಸಾ.ಶ. 335 - 380) ಚಂದ್ರಗುಪ್ತನ ನಂತರ ಇವನ ಮಗ ಸಮುದ್ರಗುಪ್ತನು ಅಧಿಕಾರಕ್ಕೆ ಬಂದನು. ಹರಿಸೇನನು ರಚಿಸಿದ ಅಲಹಾಬಾದ್ ಶಾಸನದಿಂದ ಅವನ ಸಾಧನೆಗಳು ಅಮರಗೊಂಡಿವೆ. ಇದು ಸಂಸ್ಕøತ ಭಾಷೆಯಲ್ಲಿದ್ದು, ಅಶೋಕನ ಸ್ತಂಭಶಾಸನವೊಂದರ ಮೇಲೆ ಕೆತ್ತಲಾಗಿದೆ. ಭಾರತದ ಬಹುಭಾಗವು ಇವನ ಕಾಲದಲ್ಲಿ ಗುಪ್ತರ ಆಳ್ವಿಕೆಗೆ ಒಳಪಟ್ಟಿತ್ತು. ಇವನ ಅಶ್ವಮೇಧಯಾಗವು ವೈದಿಕ ವಿಧಿ ವಿಧಾನಗಳನ್ನು ಮರುಕಳಿಸಿತು. ಸಮುದ್ರಗುಪ್ತನು ಕೇವಲ ಆಕ್ರಮಣಕಾರಿಯಲ್ಲ. ಇವನು ಮಹಾಕವಿ ಹಾಗೂ ಸಂಗೀತಪ್ರಿಯನೂ ಆಗಿದ್ದನು. ಇವನ ಸಂಗೀತದ ವ್ಯಾಮೋಹವು ಅವನ ಕಾಲದ ಚಿನ್ನದ ನಾಣ್ಯಗಳಲ್ಲಿ ವೀಣೆಯನ್ನು ನುಡಿಸುತ್ತಿರುವ ಚಿತ್ರದ ಮೂಲಕ ವ್ಯಕ್ತವಾಗಿz ದೆಹಲಿಯ ಕುತುಬ್ ಮಿನಾರ್ ಬಳಿ ಇರುವ ಮೆಹರೂಲಿಯಲ್ಲಿರುವ ಕಬ್ಬಿಣದ ಸ್ತಂಭ ಇದಾಗಿದೆ. ಇದು 23 ಅಡಿ ಹಾಗೂ 8 ಅಂಗುಲ ಉದ್ದವಿದ್ದು 6000 ಕಿ.ಲೋ ಗ್ರಾಂ ತೂಕವಿದೆ. ಇದು ಅಂದಿನ ತಾಂತ್ರಿಕ ಸಾಧನೆಗೆ ಸಾಕ್ಷಿ. ಇದು ಇಂದಿಗೂ ತುಕ್ಕು ಹಿಡಿಯದೆ ನಿಂತಿದೆ. ಆಗಿನ ಕಾಲದಲ್ಲಿಯೇ ಅಂತಹ ಒಳ್ಳೆಯ ಗುಣಮಟ್ಟದ ಕಬ್ಬಿಣವನ್ನು ತಯಾರಿಸುವ ಕಲೆಯನ್ನು ಭಾರತೀಯರು ತಿಳಿದಿದ್ದರು
ಎರಡನೆಯ ಚಂದ್ರಗುಪ್ತ (ಸಾ.ಶ.380-412) ಸುಪ್ರಸಿದ್ಧ ಸಂಸ್ಕøತ ಕವಿ ಹಾಗೂ ನಾಟಕಕಾರ ಕಾಳಿದಾಸನು ಇದೇ ಕಾಲಕ್ಕೆ ಸೇರಿದವನು. ಮೇಘದೂತ, ರಘುವಂಶ, ಕುಮಾರಸಂಭವ ಹಾಗೂ ಋತುಸಂಹಾರ ಅವನ ಕಾವ್ಯಗಳು. ಅಭಿಜ್ಞಾನ ಶಾಕುಂತಲವು ಅವನ ಶ್ರೇಷ್ಠ ನಾಟಕಗಳಲ್ಲಿ ಒಂದು. ಶೂದ್ರಕನ ಮೃಚ್ಛಕಟಿಕ ಹಾಗೂ ವಿಶಾಖದತ್ತನ ಮುದ್ರರಾಕ್ಷಸ ಈ ಕಾಲದ ಇತರ ಕೃತಿಗಳು ವರಾಹಮಿಹಿರ, ಭಾಸ್ಕರ, ಆರ್ಯಭಟ, ಚರಕ ಹಾಗೂ ಶುಶ್ರುತ ಈ ಕಾಲದ ಶ್ರೇಷ್ಠ ವಿಜ್ಞಾನಿಗಳು. ವರಾಹಮಿಹಿರ, ಭಾಸ್ಕರ ಮತ್ತು ಆರ್ಯಭಟ ಜ್ಯೋತಿಷ್ಯಶಾಸ್ತ್ರ, ಖಗೋಳ ಹಾಗೂ ಗಣಿತ ಅಧ್ಯಯನಕ್ಕೆ ಮಹತ್ವದ ಕೊಡುಗೆಯನ್ನು ನೀಡಿದವರು. ಚರಕ ಹಾಗೂ ಶುಶ್ರುತರು ವೈದ್ಯಕೀಯ ಅಧ್ಯಯನವನ್ನು ಮಾಡಿದರು. ಚರಕನು ಚರಕ ಸಂಹಿತೆಯನ್ನು ರಚಿಸಿದನು. ಶುಶ್ರುತನು ಶಸ್ತ್ರಚಿಕಿತ್ಸೆಯನ್ನು ಕುರಿತಾದ ಶುಶ್ರುತ ಸಂಹಿತೆಯನ್ನು ರಚಿಸಿದನು
ವರಾಹಮಿಹಿರ: ಇವನು ಪ್ರಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದನು. ಪಂಚಸಿದ್ಧಾಂತಿಕಾ ಎಂಬ ಖಗೋಳ ಶಾಸ್ತ್ರದ ಗ್ರಂಥವನ್ನು ರಚಿಸಿದನು. ಈ ಗ್ರಂಥವನ್ನು ‘ಖಗೋಳಶಾಸ್ತ್ರದ ಬೈಬಲ್’ ಎಂದು ಕರೆಯುವರು. ಬೃಹತ್ ಸಂಹಿತಾ, ಬೃಹತ್ ಜಾತಕ, ಲಘು ಜಾತಕ ಎಂಬ ಗ್ರಂಥಗಳನ್ನು ಇವನು ರಚಿಸಿದ್ದಾನೆ.
ವರ್ಧನರು ಪುಷ್ಯಭೂತಿಯು ಈ ವಂಶದ ಸಂಸ್ಥಾಪಕ. ಪ್ರಭಾಕರವರ್ಧನ ಹಾಗೂ ಹರ್ಷವರ್ಧನರು ಈ ಮನೆತನದ ಪ್ರಮುಖ ದೊರೆಗಳು. ಹರ್ಷನ ತಂದೆಯಾದ ಪ್ರಭಾಕರವರ್ಧನ ಹಾಗೂ ಸೋದರನಾದ ರಾಜವರ್ಧನನ ಮರಣದ ನಂತರ ಇವನು ಥಾಣೇಶ್ವರದ ಅಧಿಪತಿಯಾದನು. ಇವನ ಸೋದರಿ ರಾಜಶ್ರೀಯನ್ನು ಕನೋಜಿನ ರಾಜನಿಗೆ ಕೊಟ್ಟು ಮದುವೆಮಾಡಿದನುಬಂಗಾಳದ ದೊರೆಯಾದ ಶಶಾಂಕನು ಕನೋಜಿನ ದೊರೆಯನ್ನು ಕೊಂದ ನಂತರ ಹರ್ಷನು ಕನೋಜನ್ನು ವಶಪಡಿಸಿಕೊಂಡನು. ಬಂಗಾಳದ ರಾಜನ ಮೇಲೆ ದಂಡೆತ್ತಿಹೋದನು. ಬಂಗಾಳ ಹಾಗೂ ಮಗಧ ಇವನ ಆಳ್ವಿಕೆಗೆ ಒಳಪಟ್ಟವು. ಶಾತವಾಹನರು (ಸಾ.ಶ.ಪÀÇ. 230 - ಸಾ.ಶ. 220) ಶಾತವಾಹನ ವಂಶವು ದಖನ್ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶವಾಗಿದೆ. ಸಾ.ಶ.ಪೂ. 220ರ ವೇಳೆಗೆ ಸಿಮುಖನು ಸ್ವತಂತ್ರನಾಗಿ ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡನುಈ ವಂಶದ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿ. ಸಾಮ್ರಾಜ್ಯಕ್ಕೆ ಕಂಠಕರಾಗಿದ್ದ ಶಖರನ್ನು ಭಾರತದಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು. ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತೆಂದು ನಂಬಲಾಗಿದೆ. ಕೊಂಕಣ, ಬೀರಾರ್, ಸೌರಾಷ್ಟ್ರ, ಮಾಳವಗಳಲ್ಲದೆ ಅನೇಕ ಹೊಸ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಇವನಿಗೆ ತ್ರೈ ಸಮುದ್ರತೋಯಪೀತವಾಹನ, ಶಾತವಾಹನ ಕುಲಯಶಃ ಪ್ರತಿಷ್ಠಾಪನಕರ ಎಂಬ ಬಿರುದುಗಳಿದ್ದವು. ಯಜ್ಞ ಶ್ರೀ ಶಾತಕರ್ಣಿಯು ಈ ವಂಶದ ಕೊನೆಯರಸ.
ಕದಂಬರು (ಸಾ.ಶ. 325 ರಿಂದ ಸಾ.ಶ. 540) ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಸ್ಥಳೀಯ ರಾಜವಂಶ ಇದಾಗಿದೆ. ಇವರ ರಾಜಧಾನಿ ಬನವಾಸಿ, ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಮಯೂರವರ್ಮನು ಈ ಸಂತತಿಯ ಸ್ಥಾಪಕ ಮತ್ತು ಶ್ರೇಷ್ಠನಾದ ರಾಜನು. ಪಲ್ಲವರಾಜ ಶಿವಸ್ಕಂದವರ್ಮನಿಂದ ಅಪಮಾನಗೊಂಡಾಗ ಮಯೂರಶರ್ಮ ತನ್ನ ವರ್ಣವನ್ನು ತ್ಯಜಿಸಿ ಕ್ಷತ್ರಿಯ ವರ್ಣ ಸ್ವೀಕರಿಸಿ ಮಯೂರವರ್ಮನಾದನು. ಪಲ್ಲವರನ್ನು ಸೋಲಿಸಿ ಕದಂಬರಾಜ್ಯ ಸ್ಥಾಪಿಸಿದನು. ಇವನು ಕನ್ನಡಿಗರ ಸ್ವಾಭಿಮಾನದ ಸಂಕೇತ. ಚಿತ್ರದುರ್ಗದ ಚಂದ್ರವಳ್ಳಿಯ ಶಾಸನದ ಪ್ರಕಾರ
ಮಯೂರವರ್ಮನು ಚಂದ್ರವಳ್ಳಿ ಕೆರೆಯ ಒಡ್ಡನ್ನು ಎತ್ತರಿಸಿದನೆಂದು ತಿಳಿದು ಬರುತ್ತzಕದಂಬರು ವೈದಿಕ ಧರ್ಮಾನುಯಾಯಿ ಗಳಾದರೂ ಜೈನ ಮತ್ತು ಬೌದ್ಧಧರ್ಮಗಳನ್ನು ಪೆÇ್ರೀತ್ಸಾಹಿಸಿದರು. ಮೊದಲು ಪ್ರಾಕೃತ ನಂತರ ಸಂಸ್ಕøತ ರಾಜಭಾಷೆಯಾಯಿತು. ಕನ್ನಡವೂ ಜನರ ಭಾಷೆ ಆಗಿತ್ತು. ಕದಂಬರ ಕಾಲದಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಅಭಿವೃದ್ಧಿಗೊಂಡು ಶಿಕ್ಷಣ ಕೇಂದ್ರಗಳಾದ ಅಗ್ರಹಾರಗಳು, ಬ್ರಹ್ಮಪುರಿಗಳು ಮತ್ತು ಘಟಿಕ ಸ್ಥಾನಗಳು ಸ್ಥಾಪನೆಗೊಂಡವು. ಆ ಕಾಲದ ಪ್ರಮುಖ ಅಗ್ರಹಾರಗಳು
ತಾಳಗುಂದ ಮತ್ತು ಬಳ್ಳಿಗಾವೆಯಲ್ಲಿದ್ದವು. ಅಗ್ರಹಾರಗಳು ಗುರುಕುಲಗಳಾಗಿದ್ದು ವಸತಿ ಶಾಲೆಗಳಂತೆ ನಡೆಯುತ್ತಿದ್ದವುಮಳವಳ್ಳಿ ಶಾಸನವು ಪ್ರಾಕೃತ ಭಾಷೆಯ ಪರಿಚಯ ನೀಡುತ್ತದೆ. ತಾಳಗುಂದ ಶಾಸನವು ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕøತ ಶಾಸನವಾಗಿದೆ.
ಗಂಗರು (ಸಾ.ಶ. 350 - ಸಾ.ಶ. 1004) ಗಂಗರು ಗಂಗರಾಜ ವಂಶದ ಉನ್ನತಿ ಮತ್ತು ಅವನತಿ ಕರ್ನಾಟಕದ ಇತಿಹಾಸದ ಆದಿಭಾಗದ ಒಂದು ಮುಖ್ಯ ಅಧ್ಯಾಯವಾಗಿದೆ. ಗಂಗವಂಶದ ಸಂಸ್ಥಾಪಕರು ತಮ್ಮನ್ನು ಇಕ್ಷ್ವಾಕು ವಂಶದವರೆಂದು ಹೇಳಿಕೊಂಡರುದುರ್ವಿನೀತನು ಗಂಗರಸರಲ್ಲಿ ಪ್ರಸಿದ್ಧನಾದವನು. ಅಪ್ರತಿಮ ವೀರ ಹಾಗೂ ವಿದ್ವಾಂಸ. ದೀರ್ಘಕಾಲ ಆಳಿದ ಇವನು ತನ್ನ ರಾಜ್ಯವನ್ನು ಬಲಪಡಿಸಿಕೊಳ್ಳಲು ಪುನ್ನಾಟವನ್ನು ಗೆದ್ದುಕೊಂಡನು. ಇವನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು ನಲ್ಲಾಳ ತಾಮ್ರ ಪಟಗಳಿಂದ ತಿಳಿದುಬರುತ್ತದೆ. ಗುಣಾಢ್ಯನ ವಡ್ಡಕಥಾ ಗ್ರಂಥವನ್ನು ಪ್ರಾಕೃತದಿಂದ ಸಂಸ್ಕøತಕ್ಕೆ ಭಾಷಾಂತರಿಸಿದ್ದಾನೆ. ಚೈತ್ಯಾಲಯ, ದೇವಾಲಯ, ಮಠ ಹಾಗೂ ಅಗ್ರಹಾರಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದವು. ಉನ್ನತ ವಿದ್ಯಾಭ್ಯಾಸಕ್ಕೆ ಬ್ರಹ್ಮಪುರಿ ಮತ್ತು ಘಟಿಕ ಸ್ಥಾನಗಳಿದ್ದವು. ತಲಕಾಡು, ಶ್ರವಣಬೆಳಗೊಳ, ಬಂಕಾಪುರ ಮತ್ತು ಪೆರೂರುಗಳನ್ನು ಜ್ಞಾನಾರ್ಜನೆಯ ಕೇಂದ್ರಗಳೆಂದು ಹೆಸರಿಸಲಾಗಿದೆ.
ಬಾಹುಬಲಿ - ಗೊಮ್ಮಟೇಶ್ವರ ಶ್ರವಣಬೆಳಗೊಳದ ಗೊಮ್ಮಟೇಶ್ವರ (ಬಾಹುಬಲಿ) ಮೂರ್ತಿಯು ವಿರಕ್ತ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಜೀವನದ ಸಂಕೇತವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯನು ಇದನ್ನು ನಿರ್ಮಿಸಿದವನು. 100 ಜನ ಸಹೋದರರಲ್ಲಿ ಭರತ ಹಿರಿಯವ, ಬಾಹುಬಲಿ ಕಿರಿಯವ. ಭರತನಿಗೆ ರಾಜ್ಯಾಭಿಷೇಕವಾದ ಮೇಲೆ ಒಂದು ಚಕ್ರರತ್ನ ದೊರಕಿ ಎಲ್ಲಾ ರಾಜ್ಯಗಳನ್ನು ಗೆದ್ದು ಚಕ್ರಾಧಿಪತಿಯಾಗುತ್ತಾನೆ. ಅದಕ್ಕೂ ಮೊದಲು ಎಲ್ಲಾ ತಮ್ಮಂದಿರೂ ಅವನ ಅಧಿಪತ್ಯವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬಾಹುಬಲಿ ಒಪ್ಪದಿದ್ದಾಗ, ಯುದ್ಧಕ್ಕೆ ಅಣಿಯಾಗುತ್ತಾರೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧದಲ್ಲಿ ಭರತ ಸೋಲುತ್ತಾನೆ. ಮಲ್ಲಯುದ್ಧದ ಅಂತ್ಯದಲ್ಲಿ ಬಾಹುಬಲಿ ಭರತನನ್ನು ಚಕ್ರದಂತೆ ತಿರುಗಿಸಿ ಇನ್ನೇನು ಬಿಸಾಡಬೇಕು ಎನ್ನುವಷ್ಟರಲ್ಲಿ ಬಾಹುಬಲಿಯ ಮನದಲ್ಲಿ ವಿರಕ್ತಿ ಉಂಟಾಗಿ, ಅಣ್ಣನನ್ನು ಕೆಳಗಿಳಿಸಿ ನಮಸ್ಕಾರ ಮಾಡಿ ನಿರ್ವಾಣಕ್ಕೆ ಹೋಗಿ ನಿಂತೇ ತಪಸ್ಸು ಮಾಡುತ್ತಾನೆ. ಆದರೂ ಮುಕ್ತಿಯಾಗದಿದ್ದಾಗ, ಬಾಹುಬಲಿಯು ತನ್ನ ಅಣ್ಣನ ಸಾಮ್ರಾಜ್ಯದಲ್ಲಿ ನಿಂತು ತಪಸ್ಸು ಮಾಡುತ್ತಿರುವುದರಿಂದ ಅವನಿಗೆ ನಿರ್ವಾಣ ದೊರಕುತ್ತಿಲ್ಲವೆಂದು ತಿಳಿಯುತ್ತದೆ. ಆಗ ಭರತನೇ ಬಂದು ಬಾಹುಬಲಿಗೆ ಇಡೀ ಸಾಮ್ರಾಜ್ಯವೇ ಬಾಹುಬಲಿಯದೆಂದೂ, ಅದನ್ನುಆಳುತ್ತಿರುವವನು ತಾನೆಂದು ತಿಳಿಸಿದಾಗ ಮೋಕ್ಷ ಲಭಿಸುತ್ತದೆ.
ಇಮ್ಮಡಿ ಮಾಧವನು ‘ದತ್ತಕ ಸೂತ್ರ’ಕ್ಕೆ ಟಿಪ್ಪಣಿ ಬರೆದನು. ದುರ್ವಿನೀತನು ‘ಶಬ್ದಾವತಾರ’ ಸಂಸ್ಕøತ ಕೃತಿಯನ್ನು ರಚಿಸಿದನಲ್ಲದೇ, ಗುಣಾಢ್ಯನ ‘ವಡ್ಡಕತೆ’ಯನ್ನು ಸಂಸ್ಕøತಕ್ಕೆ ಅನುವಾದ ಮಾಡಿದನು. ಶ್ರೀ ಪುರುಷನು ‘ಗಜಶಾಸ್ತ್ರ’ವನ್ನು, ಎರಡನೇ ಶಿವಮಾಧವನು ‘ಗಜಾಷ್ಟಕ’ ಕನ್ನಡ ಕೃತಿಯನ್ನು ರಚಿಸಿದನು. ಕವಿ ಹೇಮಸೇನನು ‘ರಾಘವ ಪಾಂಡವೀಯ’ವನ್ನು, ವಾದೀಬಸಿಂಹನು ‘ಗದ್ಯ ಚಿಂತಾಮಣಿ’ ಮತ್ತು ‘ಷಾತ್ರ ಚೂಡಾಮಣಿ’ಯನ್ನು, ನೇಮಿಚಂದ್ರನು ‘ದ್ರವ್ಯಸಾರ ಸಂಗ್ರಹ’ವನ್ನು, ಚಾವುಂಡರಾಯನು ‘ಚಾವುಂಡ ಪುರಾಣ’ವನ್ನು ರಚಿಸಿ ಪ್ರಸಿದ್ಧರಾದರು.
ಬಾದಾಮಿಯ ಚಾಳುಕ್ಯರು ಮತ್ತು ಕಂಚಿಯ ಪಲ್ಲವರು ಬಾದಾಮಿಯ ಚಾಳುಕ್ಯರು (ಸಾಶ. 540 - 753) ಚಾಳುಕ್ಯರ ಆಳ್ವಿಕೆ ಆರನೆಯ ಶತಮಾನದಿಂದ ಆರಂಭಗೊಂಡು ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ಕೊನೆಗೊಂಡಿತು. ರಾಜಾ ಜಯಸಿಂಹನು ಈ ವಂಶದ ಸಂಸ್ಥಾಪಕನು. ದೊರೆ ಮಹೇಂದ್ರವರ್ಮನು ಪುಲಿಕೇಶಿಯ ಪರಮಾಧಿಕಾರತ್ವವನ್ನು ಒಪ್ಪಿಕೊಳ್ಳದ ಕಾರಣ ಪುಲಿಕೇಶಿಯು ಆತÀನನ್ನು ಸೋಲಿಸಿದನು. ಉತ್ತರ ಭಾರತವನ್ನು ಆಳುತ್ತಿದ್ದ ಹರ್ಷವರ್ಧನನನ್ನು ನರ್ಮದಾ ನದಿಯ ದಂಡೆಯಲ್ಲಿ ತಡೆಗಟ್ಟಿ ಸೋಲಿಸಿ, ‘ದಕ್ಷಿಣಾ ಪಥೇಶ್ವರ’, ‘ತ್ರಿಸಾಗರಗಳಿಂದಾವೃತವಾದ ಪ್ರದೇಶದ ಅಧಿಪತಿ’ ಎಂಬ ಬಿರುದಾಂಕಿತನಾದನು
ಚಾಳುಕ್ಯರ ಕೊಡುಗೆಗಳು ಕನ್ನಡ ನಾಡು, ನುಡಿ, ಸಂಸ್ಕøತಿಗಳನ್ನು ಬೆಳೆಸಿ, ಪೆÇೀಷಿಸಿ, ರಕ್ಷಿಸಿ, ಧರ್ಮ, ಸಾಹಿತ್ಯ, ಕಲೆ, ವಾಸ್ತುಶಿಲ್ಪದಲ್ಲಿ ಅಗಾಧ ಕೊಡುಗೆ ನೀಡಿದವರು. ಈ ದೇಶಕ್ಕೆ ‘ಕರ್ನಾಟಕ’ ಎಂಬ ಹೆಸರು ಕೊಟ್ಟವರು ಇವರೇಈ ಕಾಲದ ಸಂಸ್ಕøತ ವಿದ್ವಾಂಸರುಗಳೆಂದರೆ ರವಿಕೀರ್ತಿ, ವಿಜ್ಜಿಕ ಮತ್ತು ಅಕಳಂಕರು. ಎರಡನೇ ಪುಲಿಕೇಶಿಯ ಸೊಸೆಯಾದ ವಿಜ್ಜಿಕ ಎಂಬ ಕವಿಯತ್ರಿಯು ಬರೆದ ‘ಕೌಮುದೀಮಹೋತ್ಸವ’, ಶಿವಭಟ್ಟಾರಕನ ‘ಹರ ಪಾರ್ವತೀಯ’ ಮುಖ್ಯವಾದ ಸಂಸ್ಕøತ ನಾಟಕಗಳಾಗಿª
ಕಂಚಿಯ ಪಲ್ಲವರು (ಸಾ.ಶ. 350 - 895) ಶಿವಸ್ಕಂದವರ್ಮನು ಈ ಸಂತತಿಯ ಮೊದಲ ದೊರೆಯಾಗಿದ್ದನು. ಪಲ್ಲವರು ಮತ್ತು ಕದಂಬರು ನಿರಂತರ ಶತ್ರುತ್ವ ಹೊಂದಿದ್ದರು. ಆನಂತರ ಚಾಲುಕ್ಯ ವಂಶದ ಇಮ್ಮಡಿ ಪುಲಿಕೇಶಿಯು ಪಲ್ಲವರ ಮಹೇಂದ್ರವರ್ಮನನ್ನು ಸೋಲಿಸಿದನು. ಮುಂದೆ ಬಂದ ಪ್ರಥಮ ನರಸಿಂಹವರ್ಮನು ಪಲ್ಲವ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧನು. ತನಗೆ ಚಾಲುಕ್ಯರ ಮೇಲಿದ್ದ ಸೇಡನ್ನು ತೀರಿಸಿಕೊಂಡು ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ವಾತಾಪಿಯನ್ನು
ವಶಪಡಿಸಿಕೊಂಡನು. ಇದರಿಂದ ಈತನು ‘ಮಹಾಮಲ್ಲ’ ಮತ್ತು ‘ವಾತಾಪಿಕೊಂಡ’ ಎಂಬ ಬಿರುದುಗಳನ್ನು ಹೊಂದಿದ್ದನು. ಈತನ ಆಳ್ವಿಕೆಯ ಕಾಲದಲ್ಲಿ ಹ್ಯೂಯೆನ್ತ್ಸಾಂಗನು ಕಂಚಿಯನ್ನು ದರ್ಶಿಸಿದ್ದನು. ಕಂಚಿ ಬಳಿಯಲ್ಲಿನ ಸಮುದ್ರ ತೀರದಲ್ಲಿ ನರಸಿಂಹವರ್ಮನು ಒಂದು ನಗರವನ್ನು ನಿರ್ಮಿಸಿ, ಅದಕ್ಕೆ ‘ಮಹಾಬಲಿಪುರಂ’ ಎಂಬ ಹೆಸರನ್ನು ಇಟ್ಟನು.
ಪಲ್ಲವರ ಕೊಡುಗೆಗಳುಪಲ್ಲವರು ಸಂಸ್ಕøತ ಮತ್ತು ತಮಿಳು ಭಾಷೆಗಳೆರಡಕ್ಕೂ ಪೆÇ್ರೀತ್ಸಾಹ ನೀಡಿದರು. ಕಂಚಿಯು ಸಂಸ್ಕøತ ಸಾಹಿತ್ಯದ ಕೇಂದ್ರವಾಗಿತ್ತು. ಪಲ್ಲವರ ಆಸ್ಥಾನದಲ್ಲಿದ್ದ ಕವಿಗಳು ಭಾರವಿ (ಕಿರಾತಾರ್ಜುನೀಯ) ಹಾಗೂ ದಂಡಿ (ದಶಕುಮಾರ ಚರಿತ). ರಾಜ ಮಹೇಂದ್ರವರ್ಮನು ಸ್ವತಃ ‘ಮತ್ತ್ತ ವಿಲಾಸ ಪ್ರಹಸನ’ ಎಂಬ ಸಾಮಾಜಿಕ ನಾಟಕವನ್ನು ಹಾಗೂ ‘ಭಗವದುಜ್ಜುಕ’À ಗ್ರಂಥವನ್ನು ರಚಿಸಿದ್ದಾ£ ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರು
ರಾಷ್ಟ್ರಕೂಟರು (ಸಾ.ಶ. 753 - 973) ದಂತಿದುರ್ಗನಿಂದ ಪ್ರಾರಂಭವಾದ ಸಾಮ್ರಾಜ್ಯಅರಬ್ ಯಾತ್ರಿಕ ಸುಲೈಮಾನ್. ಇವನು ಅಮೋಘವರ್ಷನನ್ನು ಕುರಿತು, `ಜಗತ್ತಿನ ನಾಲ್ವರು ಪ್ರಬಲ ಚಕ್ರವರ್ತಿಗಳಲ್ಲಿ ಒಬ್ಬನೆಂದಿದ್ದಾನೆ’. ಎರಡನೇ ಕರ್ಕನ ಕಾಲದಲ್ಲಿನ ಆಡಳಿತ ದುರ್ಬಲತೆಯು ಸಾಮಂತರಾಗಿದ್ದ ಕಲ್ಯಾಣ ಚಾಲುಕ್ಯ ಎರಡನೇ ತೈಲಪನ ಉದಯಕ್ಕೆ ದಾರಿಯಾಗಿ ಇದು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗೊಳಿಸಿತು. ತ್ರಿವಿಕ್ರಮನು ‘ನಳಚಂಪು’ ಎಂಬ ಸಂಸ್ಕøತ ಸಾಹಿತ್ಯದ ಪ್ರಥಮ ಚಂಪÀÇಕೃತಿಯನ್ನು ರಚಿಸಿದನು. ಹಲಾಯುಧನು ‘ಕವಿರಹಸ್ಯ’ವನ್ನು ಬರೆದನು, ಜಿನಸೇನ, ಗಣಿತಜ್ಞ ಮಹಾವೀರಾಚಾರ್ಯ, ವ್ಯಾಕರಣ ಶಾಸ್ತ್ರಜ್ಞನಾದ ಶಕಟಾಯನ, ಗುಣಭದ್ರ, ವೀರಸೇನ, ಅಮೋಘವರ್ಷನ ಆಸ್ಥಾನದಲ್ಲಿದ್ದರು. ಆದಿಕವಿ ಪಂಪನು ‘ಆದಿಪುರಾಣ’, `ವಿಕ್ರಮಾರ್ಜುನ ವಿಜಯ'ವನ್ನು ಕನ್ನಡದಲ್ಲಿ ಬರೆದನು. ಉಭಯಕವಿ ಚಕ್ರವರ್ತಿ ಪೆÇನ್ನನು ‘ಶಾಂತಿಪುರಾಣ’ವನ್ನು ರಚಿಸಿದನು. ಅಮೋಘವರ್ಷನ ಆಸ್ಥಾನದಲ್ಲಿದ್ದ ಶ್ರೀ ವಿಜಯ ‘ಕವಿರಾಜಮಾರ್ಗ’ವನ್ನು ರಚಿಸಿದನು. ಇದು ಕನ್ನಡದ ಮೇರುಕೃತಿಯಾಗಿದೆ. ಆದಿಕವಿ ಪಂಪನ ಹೆಸರಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು, ‘ನಾಡೋಜ’ ಎಂಬ ಪ್ರಶಸ್ತಿಯನ್ನು ಕರ್ನಾಟಕದ ಹಿರಿಯ ಸಾಧಕರಿಗೆ ನೀಡುತ್ತಾ ಬಂದಿದೆರಾಷ್ಟ್ರಕೂಟರ ಕಾಲದ ಇನ್ನೊಂದು ಸಂಪನ್ನವಾದ ಗದ್ಯಕೃತಿ ‘ವಡ್ಡಾರಾಧನೆ’, ಶಿವಕೋಟ್ಟಾಚಾರ್ಯ ಇದರ ಕರ್ತೃ. ಇದು ಜೈನ ಧಾರ್ಮಿಕ ಕಥೆಗಳ ಸಂಗ್ರಹ. ಒಂದನೇ ಕೃಷ್ಣನು ಕೊರೆಸಿದ ಎಲ್ಲೋರಾದ ಕೈಲಾಸ ಮಂದಿರವು ಏಕಶಿಲೆಯ ಅದ್ಭುತ ರಚನೆಯಾಗಿದೆ. 100 ಅಡಿ ಎತ್ತರ, 276 ಅಡಿ ಉದ್ದ ಹಾಗೂ 154 ಅಡಿ ಅಗಲವಾಗಿದ್ದು, ಬೃಹತ್ ಬಂಡೆಯನ್ನು ಕೊರೆದು ಕಟ್ಟಲಾಗಿದೆ. ಅಲ್ಲಿಯೇ ಪ್ರಸಿದ್ಧ ದಶಾವತಾರ ಗುಹಾಲಯವಿದೆ. ಮುಂಬೈ ಬಳಿಯ ಎಲಿಫೆಂಟಾದ ಗುಹೆಗಳಲ್ಲಿಯ ಶಿಲ್ಪಕಲೆಯು ರಾಷ್ಟ್ರಕೂಟರ ಕಾಲದ ಶಿಲ್ಪಕಲೆಗೆ ಮುಕುಟಪ್ರಾಯವಾಗಿದೆ.
ಕಲ್ಯಾಣದ ಚಾಳುಕ್ಯರು (ಸಾ.ಶ. 973 - ಸಾ.ಶ. 1189) ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿ ರಾಜಧಾನಿಯನ್ನಾಗಿ ಮಾಡಿದ ಕೀರ್ತಿ ಒಂದನೇ ಸೋಮೇಶ್ವರನಿಗೆ ಸಲ್ಲುತ್ತದೆರಾಷ್ಟ್ರಕೂಟರ ಸಾಮಂತನಾಗಿದ್ದ ಎರಡನೇ ತೈಲಪನು ರಾಷ್ಟ್ರಕೂಟರ ರಾಜ ಎರಡನೇ ಕರ್ಕನನ್ನು ಪರಾಭವಗೊಳಿಸಿ ಮಾನ್ಯಖೇಟವನ್ನು ವಶಪಡಿಸಿಕೊಂಡು ಕಲ್ಯಾಣ ಚಾಳುಕ್ಯ ಸಾಮ್ರಾಜ್ಯ ಸ್ಥಾಪಿಸಿದನು. ಸುಮಾರು 24 ವರ್ಷಗಳ ಕಾಲ ಆಡಳಿತ ನಡೆಸಿದನು. ಈ ವಂಶದ ಪ್ರಮುಖ ಅರಸರಲ್ಲಿ ಒಂದನೇ ಸೋಮೇಶ್ವರ ಪ್ರಮುಖನಾದವನು. ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿಸಿ ರಾಜಧಾನಿಯನ್ನಾಗಿ ಮಾಡಿಕೊಂಡನು. ಇದೇ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಎನಿಸಿದೆ. ಒಂದನೇ ಸೋಮೇಶ್ವರನ ಮಗನಾದ ಆರನೆಯ ವಿಕ್ರಮಾದಿತ್ಯನು ಈ ವಂಶದ ಶ್ರೇಷ್ಠನಾದ ಅರಸ. ಅಸಾಧಾರಣ ವೀರ, ಉತ್ತಮ ಆಡಳಿತಗಾರ. ಇವನು ಸಾ.ಶ. 1076ರಲ್ಲಿ ಚಾಳುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು. ಇವನು ಹೊಯ್ಸಳರ ವಿಷ್ಣುವರ್ಧನನ ಬಂಡಾಯ ಅಡಗಿಸಿದನು. ಶ್ರೀಲಂಕೆಯ ಅರಸನಾದ ವಿಜಯಬಾಹುವಿನೊಂದಿಗೆ ಸಂಪರ್ಕ ಹೊಂದಿದ್ದನು. ರನ್ನನು ಬರೆದ ‘ಗದಾಯುದ್ಧ’ (ಸಾಹಸಭೀಮ ವಿಜಯ), ದುರ್ಗಸಿಂಹನ ‘ಪಂಚತಂತ್ರ’, ಬಿಲ್ಹಣನ ‘ವಿಕ್ರಮಾಂಕದೇವ ಚರಿತ’, ನಯಸೇನನ ‘ಧರ್ಮಾಮೃತ’ಹಾಗೂ ವಿಜ್ಞಾನೇಶ್ವರನು ಬರೆದ ಕಾನೂನು ಗ್ರಂಥ ‘ಮಿತಾಕ್ಷರ’ ಮುಖ್ಯವಾದ ಗ್ರಂಥಗಳಾಗಿವೆ. ರಾಜ ಮೂರನೆಯಸೋಮೇಶ್ವರನು ಬರೆದ ‘ಮಾನಸೋಲ್ಲಾಸ’ ಸಂಸ್ಕøತ ವಿಶ್ವಕೋಶವೆನಿಸಿದೆ. ಗದ್ಯಾಣ, ಪಣ, ದ್ರುಮ್ಮ, ಪೆÇನ್, ಸುವರ್ಣ ಎಂಬ ನಾಣ್ಯಗಳನ್ನು ಟಂಕಿಸಲು ಲಕ್ಕುಂಡಿ ಹಾಗೂ ಸೂಡಿ ಎಂಬಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿದರು. ಎರಡನೆಯ ಜಗದೇಕಮಲ್ಲನ ‘ಸಂಗೀತ ಚೂಡಾಮಣಿ’ ಗ್ರಂಥಗಳಲ್ಲಿ ವ್ಯಕ್ತವಾಗಿª
ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು
ಚೋಳರು (ಸಾ.ಶ. 850 - 1279) ಸಂಗಮ್ ಸಾಹಿತ್ಯದ ಪ್ರಕಾರ ಕರಿಕಾಲ ಚೋಳನು ಈ ವಂಶದ ಮೂಲಪುರುಷ. ವಿಜಯಾಲಯ ಚೋಳ ರಾಜ್ಯವನ್ನು ಪುನರುಜ್ಜೀವನಗೊಳಿಸಿ ತಂಜಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಚೋಳರ ಪ್ರಮುಖ ರಾಜ ಒಂದನೆಯ ರಾಜರಾಜ. ಶೂರ, ಶ್ರೇಷ್ಠ ಯೋಧ ಹಾಗೂ ದಕ್ಷ ಆಡಳಿತಗಾರನಾಗಿದ್ದನು. ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಭದ್ರಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. ಚೇರರನ್ನು, ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು. ನೌಕಾ ಸೈನ್ಯವನ್ನುನಿರ್ಮಿಸಿ ಶ್ರೀಲಂಕಾವನ್ನು ವಶಪಡಿಸಿಕೊಂಡನು. ಮಲೇಶಿಯಾ, ಸಿಂಗಪುರಗಳಲ್ಲಿ ಇಂದಿಗೂ ತಮಿಳರ ಪ್ರಾಬಲ್ಯವನ್ನು ಗಮನಿಸಬಹುದುಈತನು ಕಟ್ಟಿದ ತಂಜಾವೂರಿನ ಬೃಹದೀಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾದುದು.
ದ್ವಾರಸಮುದ್ರದ ಹೊಯ್ಸಳರು (ಸಾ.ಶ. 984 - ಸಾ.ಶ. 1346) ಚಾಲುಕ್ಯರು ಕ್ಷೀಣಿಸಿದ ನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಳರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಸೊಸೆವೂರು (ಈಗಿನ ಅಂಗಡಿ) ಹಳ್ಳಿಯ ಬಳಿ ಈ ಮನೆತನದ ಮೂಲ ಪುರುಷ ಸಳನು ಜೈನಮುನಿಯಾದ ಸುದತ್ತ ಮುನಿಯ ಆದೇಶದಂತೆ ಹುಲಿಯೊಡನೆ ಕಾದಾಡಿ ಅದನ್ನು ಕೊಂದು ‘ಹೊಯ್ಸಳ’ ಎನಿಸಿಕೊಂಡು ಈ ವಂಶದ ಸ್ಥಾಪಕನಾದನುವಿಷ್ಣುವರ್ಧನ. ಈ ವಂಶದ ಶ್ರೇಷ್ಠ ದೊರೆಯಾದ ಈತನು ಚೋಳರಿಂದ ಗಂಗವಾಡಿಯನ್ನು ಗೆದ್ದು ‘ತಲಕಾಡುಗೊಂಡ’ ಎಂಬ ಬಿರುದು ಪಡೆದನು. ಈ ವಿಜಯದ ನೆನಪಿಗಾಗಿ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಹಾಗೂ ಬೇಲೂರಿನ ಚೆನ್ನಕೇಶವ (ವಿಜಯ ನಾರಾಯಣ) ದೇವಾಲಯವನ್ನು ಕಟ್ಟಿಸಿದನುರುದ್ರಭಟ್ಟನು ‘ಜಗನ್ನಾಥ ವಿಜಯ’ವನ್ನು ಕವಿಚಕ್ರವರ್ತಿ ಜನ್ನನು ‘ಯಶೋಧರ ಚರಿತೆ’ಯನ್ನು, ಹರಿಹರನು ‘ಗಿರಿಜಾ ಕಲ್ಯಾಣ’ ಎಂಬ ಚಂಪೂಕಾವ್ಯವನ್ನು, ರಾಘವಾಂಕನು ‘ಹರಿಶ್ಚಂದ್ರ ಕಾವ್ಯ’ ಹಾಗೂ ಕೇಶೀರಾಜನು ‘ಶಬ್ದಮಣಿ ದರ್ಪಣ’ವನ್ನು ರಚಿಸಿದ್ದಾರೆ. ಹೊಯ್ಸಳರ ಶಿಲ್ಪಕಲೆ ಜಗದ್ವಿಖ್ಯಾತವಾದುದು. ಬಳಪದ ಮೃದು ಕಲ್ಲಿನಿಂದ ಹೊಯ್ಸಳರು ಅಸಂಖ್ಯಾತ ದೇವಾಲಯಗಳನ್ನು ರಚಿಸಿದರು. ಇವರ ದೇವಾಲಯಗಳಲ್ಲಿ ನಕ್ಷತ್ರಾಕಾರದ ಗರ್ಭಗೃಹ, ಉಪಪೀಠ (ಜಗತಿ), ಭಿತ್ತಿ ಅಲಂಕರಣ, ಶಿಖರ ಹಾಗೂ ಕಂಬಗಳೆಂಬ ಐದು ಲಕ್ಷಣಗಳನ್ನು ನೋಡಬಹುದು
ಮಾನವ ಹಕ್ಕುಗಳು
ಮ್ಯಾಗ್ನಕಾರ್ಟ (ಸಾ.ಶ. 1215) ಸಾ.ಶ. 1215ರಲ್ಲಿ ಇಂಗ್ಲೆಂಡಿನ ರಾಜ ಜಾನ್ನು ಅನೇಕ ಪ್ರಾಚೀನ ನಿಯಮಗಳನ್ನು ಮತ್ತು ಸಂಪ್ರದಾಯಗಳನ್ನು ಉಲ್ಲಂಘಿಸಿದನು. ಇದರಿಂದಾಗಿ ಪ್ರಜೆಗಳು ತಮ್ಮ ಹಕ್ಕುಗಳನ್ನು ನೀಡುವಂತೆ ಹೋರಾಟ ಮಾಡಿದರು. ಇದರ ಪರಿಣಾಮವಾಗಿ ರಾಜನು ಮ್ಯಾಗ್ನಕಾರ್ಟಗೆ ಸಹಿ ಮಾಡಿದನು. ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದಲೇ ಜೀವಿಸುವ ಮತ್ತು ಸ್ವಾಂತಂತ್ರ್ಯದ ಹಕ್ಕುಗಳನ್ನು ಪಡೆದಿರುತ್ತಾನೆ. ಇದರಿಂದಾಗಿ ವ್ಯಕ್ತಿಯ ಹಕ್ಕುಗಳಿಗೆ ಪ್ರಾಮುಖ್ಯತೆ ಹೆಚ್ಚಾಯಿತು. ಇದಕ್ಕೆ ಪೂರಕವಾಗಿ 1688ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ರಕ್ತರಹಿತ ಕ್ರಾಂತಿಯ ಪ್ರತಿಫಲವಾಗಿ 1689ರಲ್ಲಿ `ಬಿಲ್ ಆಫ್ ರೈಟ್ಸ್' ಜಾರಿಗೊಳಿಸಲಾಯಿತು. ಇದರಲ್ಲಿ ಮೊದಲ ಬಾರಿಗೆ ಶಾಸನ ರೂಪದಲ್ಲಿ ಮಾನವ ಹಕ್ಕುಗಳಿಗೆ ಭದ್ರತೆಯನ್ನು ನೀಡಲಾಯಿತು. ಮೊದಲ ಜಾಗತಿಕ ಮಹಾಯುದ್ಧದ ನಂತರ ಸ್ಥಾಪಿಸಲ್ಪಟ್ಟ ರಾಷ್ಟ್ರಗಳ ಸಂಘ (ಲೀಗ್ ಆಫ್ ನೇಷನ್ಸ್) ಮಾನವ ಹಕ್ಕುಗಳ ಸಂರಕ್ಷಣೆಗೆ ಪೂರಕವಾದ ಒಂದು ಕಾರ್ಯಸೂಚಿಯನ್ನು ಹೊಂದಿತ್ತು. ಎರಡನೇ ಜಾಗತಿಕ ಮಹಾಯುದ್ಧದ ನಂತರ ಮಾನವ ಹಕ್ಕುಗಳ ಸಂರಕ್ಷಣೆ ಉದ್ದೇಶದಿಂದ ರೂಸ್ವೆಲ್ಟ್, ಸ್ಟಾಲಿನ್ ಮತ್ತು ಚರ್ಚಿಲ್ ಇವರುಗಳ ಪ್ರಯತ್ನದಿಂದ ವಿಶ್ವಸಂಸ್ಥೆ ಸ್ಥಾಪಿತವಾಯಿತು.
ಭಾರತ ಸಂವಿಧಾನ
ಸಂವಿಧಾನದ 3ನೆಯ ಭಾಗದ ಮೂಲಭೂತ ಹಕ್ಕುಗಳಲ್ಲಿ ವಿಧಿ 12ರಿಂದ ವಿಧಿ 35ರ ಅಡಿಯಲ್ಲಿ ತಿಳಿಸಲಾಗಿದೆ. ಮೂಲ ಸಂವಿಧಾನದಲ್ಲಿ ಏಳು ಮೂಲಭೂತ ಹಕ್ಕುಗಳನ್ನು ನೀಡಲಾಗಿತ್ತು. 1978ರಲ್ಲಿ ಸಂವಿಧಾನದ 44ನೆಯ ತಿದ್ದುಪಡಿ ಕಾಯ್ದೆಯನ್ವಯ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಭಾಗದಿಂದ ತೆಗೆದು ವಿಧಿ 300ಂ ಅಡಿಯಲ್ಲಿ ಶಾಸನೀಯ ಹಕ್ಕಾಗಿ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಪ್ರಸ್ತುತ ಆರು ಮೂಲಭೂತ ಹಕ್ಕುಗಳಿವೆ.
ಸಂವಿಧಾನದ 86ನೇ ತಿದ್ದುಪಡಿ ಮಾಡಿ 21 ‘ಎ’ ವಿಧಿಯನ್ವಯ 2002 ರಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ಪರಿಗಣಿಸಲಾಗಿದೆ. ಇದರ ಅನ್ವಯ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೂ ರಾಜ್ಯವೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಶಾಸನಾತ್ಮಕ ಸಂಸ್ಥೆಯಾಗಿದೆ. 1993ರಲ್ಲಿ ಸಂಸತ್ತಿನ ಶಾಸನದ ಮೂಲಕ ರಚಿಸಲಾಗಿದೆ. ಇದು ಒಬ್ಬ ಅಧ್ಯಕ್ಷರು ಮತ್ತು ನಾಲ್ಕು ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷರು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರಬೇಕು. ಸದಸ್ಯರುಗಳು ಸರ್ವೋಚ್ಚ ನ್ಯಾಯಾಲಯದ ಸೇವೆಯಲ್ಲಿರುವ ಅಥವಾ ನಿವೃತ್ತ ನ್ಯಾಯಾಧೀಶರಾಗಿರಬೇಕು, ಉಚ್ಚ ನ್ಯಾಯಾಲಯದ ನಿವೃತ್ತ ಅಥವಾ ಸೇವೆಯಲ್ಲಿರುವ ನ್ಯಾಯಾಧೀಶರಾಗಿರಬೇಕು ಮತ್ತು ಇಬ್ಬರು ಸದಸ್ಯರು ಮಾನವ ಹಕ್ಕುಗಳ ಸಂರಕ್ಷಣಾ ಪ್ರಾಯೋಗಿಕ ಅಥವಾ ವಿಶೇಷ ಜ್ಞಾನ ಹೊಂದಿದವರಾಗಿರಬೇಕು. ಈ ಆಯೋಗವು ನಾಲ್ಕು ಪದನಿಮಿತ್ತ ಸದಸ್ಯರುಗಳನ್ನು ಹೊಂದಿರುತ್ತದೆ. ಅಧ್ಯಕ್ಷ ಮತ್ತು ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ. ಇವರ ಅಧಿಕಾರವಧಿ 5 ವರ್ಷಗಳು ಅಥವಾ 70 ವರ್ಷಗಳನ್ನು ಹೊಂದುವವರೆಗೆ ಇವುಗಳಲ್ಲಿ ಪ್ರಥಮವಾಗಿರುವುದನ್ನು ಪರಿಗಣಿಸಲಾಗುತ್ತದೆ.
ರಾಜ್ಯ ಮಾನವ ಹಕ್ಕುಗಳ ಆಯೋಗ : ಮಾನವ ಹಕ್ಕುಗಳ ಕಾಯ್ದೆ 1993ರನ್ವಯ ರಾಜ್ಯಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿರುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರಣೆಯನ್ನು ಮಾಡುತ್ತದೆ. ಈ ಆಯೋಗವು ಒಬ್ಬ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷರು ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರಬೇಕು. ಸದಸ್ಯರು ಉಚ್ಚ ನ್ಯಾಯಾಲಯದ ಸೇವೆಯಲ್ಲಿರುವ ಅಥವಾ ನಿವೃತ್ತ ನ್ಯಾಯಾಧೀಶರಾಗಿರಬೇಕು. ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ 7 ವರ್ಷಗಳು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು. ಇವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ.
ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ : 2003ರಲ್ಲಿ ಭಾರತ ಸಂವಿಧಾನದ ವಿಧಿ 338ಕ್ಕೆ 89ನೇ ತಿದ್ದುಪಡಿ ಕಾಯ್ದೆಯನ್ನು ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಪ್ರತ್ಯೇಕಿಸಲಾಯಿತು. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವಾಗಿ ಮಾಡಲಾಯಿತು
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ: 1993ರಲ್ಲಿ ಈ ಆಯೋಗವನ್ನು ಸ್ಥಾಪಿಸಲಾಗಿದೆ. ಇದು ಒಬ್ಬ ಅಧ್ಯಕ್ಷರು ಮತ್ತು ನಾಲ್ಕು ಸದಸ್ಯರನ್ನು ಒಳಗೊಂಡಿರುತ್ತದೆ. ಈ ಆಯೋಗವು ಹಿಂದುಳಿದ ವರ್ಗಗಳ ಹಕ್ಕುಗಳ ಸಂರಕ್ಷಣೆಯ ಹೊಣೆಯನ್ನು ಹೊಂದಿರುತ್ತದೆ.
ರಾಷ್ಟ್ರೀಯ ಮಹಿಳಾ ಆಯೋಗ: ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ 1990ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆಯನ್ನು ರಚಿಸಲಾಯಿತು. ಇದು ಒಬ್ಬ ಅಧ್ಯಕ್ಷರು ಹಾಗೂ ಐದು ಸದಸ್ಯರುಗಳನ್ನು ಹೊಂದಿರುತ್ತದೆ.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ: ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆಯ ಉದ್ದೇಶದಿಂದ 1992ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆಯನ್ನು ರಚಿಸಲಾಯಿತು. ಆರು ಧಾರ್ಮಿಕ ಸಮುದಾಯಗಳಾದ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಪಾರ್ಶಿಗಳು ಮತ್ತು ಜೈನರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿದೆ.
ಕನಿಷ್ಠ ಕೂಲಿ ಕಾಯಿದೆ-1948
ಅನೈತಿಕ ವ್ಯವಹಾರ ಕಾಯಿದೆ-1956
ವರದಕ್ಷಿಣೆ ನಿಷೇಧ ಕಾಯಿದೆ-1961
ಜೀತಪದ್ಧತಿ ನಿರ್ಮೂಲನಾ ಕಾಯಿದೆ-1976
ಸತಿ ನಿಷೇಧ ಕಾಯಿದೆ-1987
ಮಾನವ ಹಕ್ಕುಗಳ ರಕ್ಷಣಾ ಕಾಯಿದೆ-1993
ಮಾಹಿತಿ ಹಕ್ಕು ಅಧಿನಿಯಮ-2005
ಕೌಟುಂಬಿಕ ದೌರ್ಜನ್ಯ ಕಾಯಿದೆ-2005
ಸ್ಥಳೀಯ ಸರ್ಕಾರ: 1882ರಲ್ಲಿ ಲಾರ್ಡ್ ರಿಪ್ಪನ್ನ್ ಸ್ಥಳೀಯ ಸರ್ಕಾರದ ಗೊತ್ತುವಳಿಯನ್ನು ರಚಿಸಿದನು. ಈ ಗೊತ್ತುವಳಿಯು ಸ್ಥಳೀಯ ಸರ್ಕಾರದ ವ್ಯವಸ್ಥಿತ ರಚನೆಗೆ ಅವಕಾಶ ನೀಡಿತು. ಹಾಗಾಗಿ ಲಾರ್ಡ್ ರಿಪ್ಪನ್ನರನ್ನು ಭಾರತದ ಸ್ಥಳೀಯ ಸರ್ಕಾರದ ಪಿತಾಮಹಾ ಎಂದು ಕರೆಯಲಾಗಿದೆ ಹಾಗೂ 1919 ಮತ್ತು 1935 ರಲ್ಲಿ ಬ್ರಿಟಿಷ್ ಸರ್ಕಾರ ಜಾರಿಮಾಡಿದ ಕಾಯಿದೆಗಳು ಸ್ಥಳೀಯ ಸರ್ಕಾರಕ್ಕೆ ಹೆಚ್ಚು ಅಧಿಕಾರವನ್ನು ಒದಗಿಸಿಕೊಟ್ಟಿವೆ. ರಾಷ್ಟ್ರಪಿತ ಗಾಂಧೀಜಿಯವರ ಕನಸಾದ ಗ್ರಾಮಸ್ವರಾಜ್ಯವನ್ನು ನನಸಾಗಿಸಲು ನಮ್ಮ ಸಂವಿಧಾನದ ನಾಲ್ಕನೆಯ ಭಾಗದಲ್ಲಿ ರಾಜ್ಯ ನೀತಿ
ನಿರ್ದೇಶಕ ತತ್ವಗಳಡಿಯಲ್ಲಿ ವಿಧಿ 40ರಲ್ಲಿ ಪಂಚಾಯತ್ ಸಂಘಟನೆಯ ಕುರಿತು ತಿಳಿಸಲಾಗಿz 1992ರಲ್ಲಿ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿ ಕಾಯ್ದೆಗಳನ್ವಯ ಸ್ಥಳೀಯ ಸರ್ಕಾರಕ್ಕೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನೀಡಲಾಯಿತು. 73ನೇ ತಿದ್ದುಪಡಿ ಕಾಯ್ದೆಯು 1993 ಏಪ್ರಿಲ್ 24ರಂದು ಜಾರಿಗೆ ಬಂದಿತು. 1993ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ರಚಿಸಲಾಯಿತು. 2015ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಮಯ 1993 ಎಂದು ಮರುನಾಮಕರಣ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳು ಸಾಮಾನ್ಯವಾಗಿ ಜನಸಂಖ್ಯೆಯ ಆಧಾರದ ಮೇಲೆ ರಚಿತಗೊಳ್ಳುತ್ತವೆ. ಒಟ್ಟು 5000 ದಿಂದ 7000 ಜನಸಂಖ್ಯೆಗಳಿರುವ ಗ್ರಾಮ ಅಥವಾ ಗ್ರಾಮಗಳು ಸಮೂಹಕ್ಕೆ ಗ್ರಾಮ ಪಂಚಾಯಿತಿ ರಚಿಸಲಾಗುತ್ತದೆ. ಪ್ರತಿ 400 ಜನಸಂಖ್ಯೆಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ 12,500 ರಿಂದ 15,000 ಜನಸಂಖ್ಯೆಗೊಬ್ಬರಂತೆ ತಾಲ್ಲೂಕು ಪಂಚಾಯಿತಿಯು ಸದಸ್ಯರನ್ನು ಹೊಂದಿರುತ್ತದೆ.
ಕರ್ನಾಟಕದಲ್ಲಿ ಹತ್ತು ನಗರ ಪಾಲಿಕೆಗಳು ಹಾಗೂ ಒಂದು ಬೃಹತ್ ಮಹಾನಗರಪಾಲಿಕೆ ಇವೆ. ಅವುಗಳೆಂದರೆ
1. ಮೈಸೂರು
2. ಹುಬ್ಬಳ್ಳಿ-ಧಾರವಾಡ
3. ಬಳ್ಳಾರಿ
4. ಬೆಳಗಾವಿ
5. ಕಲಬುರಗಿ
6. ದಾವಣಗೆರೆ
7. ಮಂಗಳೂರು
8. ಶಿವಮೊಗ್ಗ
9. ತುಮಕೂರು
10. ವಿಜಯಪುರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಃಃಒP) ಯನ್ನು ಒಳಗೊಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಃಃಒP) ಯಲ್ಲಿ ಒಟ್ಟು198 ಜನ ಪಾಲಿಕೆ ಸದಸ್ಯರಿದ್ದಾರೆ.
ವಾಯುಗೋಳ
ಭೂಮಿಯನ್ನು ಸುತ್ತುವರಿದಿರುವ ಅನಿಲಗಳ, ಧೂಳಿನ ಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ವಾಯುಗೋಳವೆಂದು ಕರೆಯುತ್ತೇವೆ. ಈ ಅನಿಲದ ಪದರವು ಭೂಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವಿನ ರಕ್ಷಣಾ ವಲಯ. ವಾಯುಗೋಳದ ದಪ್ಪÀ ಸುಮಾರು 1000 ಕಿ.ಮೀ. ಗಳಿದ್ದು, ಇದು ಭೂಮಿಯ ಎಲ್ಲಾ ಬಗೆಯ ಜೀವಿಗಳಿಗೆ ಅತ್ಯವಶ್ಯವಾಗಿದೆ. ವಾಯುಗೋಳದ ಕೆಲವು ಅನಿಲಗಳು ಮಾನವ ಮತ್ತು ಇತರ ಜೀವಿಗಳ ಉಸಿರಾಟಕ್ಕೆ ಅತ್ಯವಶ್ಯವಾಗಿದೆ. ವಾಯುಗೋಳದ ಮುಖ್ಯ ಅನಿಲಗಳೆಂದರೆ ಸಾರಜನಕ ಶೇ.78.08, ಆಮ್ಲಜನಕ ಶೇ.20.94, ಆರ್ಗಾನ್ ಶೇ.0.93, ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005. ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ. ವಾಯುಗೋಳದ ಪದರುಗಳು ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪರಿವರ್ತನಾಮಂಡಲ, ಸಮೋಷ್ಣಮಂಡಲ, ಮಧ್ಯಂತರಮಂಡಲ, ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.
ಪರಿವರ್ತನಾಮಂಡಲ (ಖಿಡಿoಠಿosಠಿheಡಿe) : ಇದು ವಾಯುಗೋಳದ ಅತ್ಯಂತ ಕೆಳಪದರ. ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು. ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ. ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ. ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.
ಸಮೋಷ್ಣಮಂಡಲ (Sಣಡಿಚಿಣosಠಿheಡಿe) : ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ. ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು. ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ. ಈ ಪದರವು ಮೋಡ ಹಾಗೂ ಇತರೆÀ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು. ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.
ಮಧ್ಯಂತರ ಮಂಡಲ (ಒesosಠಿheಡಿe) : ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ. ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು. ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.
ಉಷ್ಣತಾಮಂಡಲ (ಖಿheಡಿmosಠಿheಡಿe) : ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ. ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ. ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು. ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.
ಬಾಹ್ಯಮಂಡಲ (ಇxosಠಿheಡಿe) : ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ. ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.
ವಾಯುಗೋಳದ ಉಷ್ಣಾಂ± ಉಷ್ಣಾಂಶದ ಸಾಮಾನ್ಯ ಇಳಿಕೆಯ ಪ್ರಮಾಣ : ಎತ್ತರಕ್ಕೆ ಹೋದಂತೆ ಅನಿಲಗಳ ಪ್ರಮಾಣ ಕಡಿಮೆಯಾಗುವುದರಿಂದ ಒತ್ತಡ ಕಡಿಮೆಯಾಗಿ ಉಷ್ಣಾಂಶವು ಕಡಿಮೆಯಾಗುತ್ತದೆ. ಇದನ್ನು ಉಷ್ಣಾಂಶದ ಸಾಮಾನ್ಯ ಇಳಿಕೆ ಪ್ರಮಾಣ ಎನ್ನುವರು. ಪ್ರತಿಸಾವಿರ ಮೀಟರ್ಗಳ ಎತ್ತರಕ್ಕೆ (1.ಕಿ.ಮೀ) 6.40 ಸೆಂ. ಅಥವಾ 165 ಮೀಟರ್ಗೆ 10. ಸೆಂ. ಉಷ್ಣಾಂಶವು ಕಡಿಮೆಯಾಗುತ್ತದೆ. ಉಷ್ಣಾಂಶದ ವಲಯಗಳು: ಭೂ ಮೇಲ್ಮೈಯಲ್ಲಿ ಉಷ್ಣಾಂಶದ ಹಂಚಿಕೆಯು ಏಕ ರೀತಿಯಾಗಿಲ್ಲ. ಸೂರ್ಯಜನ್ಯಶಾಖದ ಆಧಾರದಿಂದ ಭೂಮಿಯನ್ನು ಮೂರು ಉಷ್ಣಾಂಶ ವಲಯಗಳಾಗಿ ವಿಂಗಡಿಸಬಹುದು. ಅವು ಕೆಳಕಂಡಂತಿವೆ:
i) ಉಷ್ಣವಲಯ (ಖಿoಡಿಡಿiಜ Zoಟಿe) : ಇದರಲ್ಲಿ ಸೌರಶಾಖವು ಅತ್ಯಧಿಕ. ಇದು ಸಮಭಾಜಕವೃತ್ತ ಶಾಖ ಹೆಚ್ಚು. ಇದು 00 ಅಕ್ಷಾಂಶ ಸಮಭಾಜಕವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತ (23ಳಿ0 ಉತ್ತರ) ಮಕರ ಸಂಕ್ರಾಂತಿ ವೃತ್ತದವರೆಗೆ (23ಳಿo ದಕ್ಷಿಣ) ವಿಸ್ತರಿಸಿದೆ. ಈ ವಲಯವು ಸೂರ್ಯನ ನೇರವಾದ ಕಿರಣಗಳನ್ನು ಪಡೆಯುವುದು.
ii) ಸಮಶೀತೋಷ್ಣವಲಯಗಳು (ಖಿemಠಿeಡಿಚಿಣe Zoಟಿe) : ಈ ವಲಯದಲ್ಲಿ ಉಷ್ಣಾಂಶವು ಅತಿ ಹೆಚ್ಚು ಅಥವಾ ಅತಿಕಡಿಮೆಯಿರದೆ ಸಮತೋಲನವಾಗಿರುವುದು. ಇದು ಉತ್ತರಾರ್ಧಗೋಳದಲ್ಲಿ 23ಳಿoಉತ್ತರದಿಂದ, 66ಳಿo ಉತ್ತರ (ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಆಕ್ರ್ಟಿಕ್ ವೃತ್ತ)ದವರೆಗೆ ಮತ್ತು ದಕ್ಷಿಣಾರ್ಧಗೋಳದಲ್ಲಿ 23ಳಿo ದಕ್ಷಿಣದಿಂದ 66ಳಿo ದಕ್ಷಿಣದವರೆಗೆ (ಮಕರ ಸಂಕ್ರಾಂತಿ ವೃತ್ತದಿಂದ ಅಂಟಾಕ್ರ್ಟಿಕ್ ವೃತ್ತ) ವರೆಗೆ ವಿಸ್ತರಿಸಿವೆ.
iii) ಶೀತವಲಯಗಳು (ಈಡಿigiಜ Zoಟಿe) : ಇವು ಅತ್ಯಂತ ಶೀತಪ್ರದೇಶಗಳು. ಇವು 66ಳಿo (ಆಕ್ರ್ಟಿಕ್ವೃತ್ತ) ಉತ್ತರದಿಂದ 900 ಉತ್ತರ ಧ್ರುವದವರೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ 66ಳಿo ದಕ್ಷಿಣದಿಂದ (ಅಂಟಾಕ್ರ್ಟಿಕ್ ವೃತ್ತ) 900 ದಕ್ಷಿಣ ಧ್ರುವದÀವರೆಗೆ ಹರಡಿವೆ. ಈ ವಲಯದಲ್ಲಿ ಸೂರ್ಯನ ಕಿರಣಗಳು ಅತ್ಯಂತ ಓರೆಯಾಗಿ ಬೀಳುವುದರಿಂದ, ಉಷ್ಣಾಂಶ ಅತಿ ಕಡಿಮೆ. ಇಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ ಸ್ವಲ್ಪ ಹೆಚ್ಚಾಗುತ್ತದೆ ಮತ್ತು ಚಳಿಗಾಲದಲ್ಲಿ ಉಷ್ಣಾಂಶ ಅತಿ ಕಡಿಮೆ ಇರುತ್ತದೆ.
1. ಆಫ್ರಿಕಾ ಖಂಡದ ಲಿಬಿಯಾ ದೇಶದಲ್ಲಿನ ಆಲ್ಅಜೀಜಿಯಾದಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಉಷ್ಣಾಂಶವು ದಾಖಲಾಗುತ್ತದೆÉ (ಸರಾಸರಿ+580ಸೆಂ). ಆದರೆ ರಷ್ಯಾದ ಸೈಬೀರಿಯಾ ಭಾಗದಲ್ಲಿರುವ ವರ್ಕೋಯನ್ಸ್ಕ್, ಭೂಭಾಗದಲ್ಲೇ (ಜನವಸತಿಯಿರುವ) ಅತಿಕಡಿಮೆ ಉಷ್ಣಾಂಶವನ್ನು ದಾಖಲಿಸಿದೆ.(ಸರಾಸರಿ -240 ಸೆಂ). 2. ಭಾರತದಲ್ಲಿ ರಾಜಸ್ತಾನದ ಗಂಗಾನಗರದಲ್ಲಿ ಬೇಸಿಗೆಯಲ್ಲಿ ಅತ್ಯಂತ ಗರಿಷ್ಠ ಉಷ್ಣಾಂಶವು ದಾಖಲಾಗುತ್ತದೆ. ( ಸರಾಸರಿ +540 ಸೆಂ) ಮತ್ತು ಜಮ್ಮು ಕಾಶ್ಮೀರದ ಲ್ಹೇ ಪ್ರದೇಶದಲ್ಲಿ ಚಳಿಗಾಲದಲ್ಲಿ ಅತಿ ಕಡಿಮೆ ಉಷ್ಣಾಂಶವು ದಾಖಲಾಗುತ್ತದೆ. (ಸರಾಸರಿ -100 ಸೆಂ).
3. ಅಂರ್ಟಾಕ್ಟಿಕ್ದಲ್ಲಿರುವ ಓಸ್ಟಕ್ ಪ್ರದೇಶವನ್ನು ಪ್ರಪಂಚದ ಅತ್ಯಂತ ಶೀತ (ಸರಾಸರಿ-890 ಸೆಂ) ಪ್ರದೇಶವೆಂದು ಪರಿಗಣಿಸಿದೆ.
ಸಮುದ್ರ ಮಟ್ಟದಲ್ಲಿ ವಾಯುಮಂಡಲದ ಸರಾಸರಿ ಒತ್ತಡ 1013.25 ಮಿಲಿಬಾರ್ಗಳಷ್ಟಿರುತ್ತದೆ. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ: ಇದು ಹೆಚ್ಚು ಉಷ್ಣಾಂಶದ ವಲಯವಾಗಿದ್ದು ಕಡಿಮೆ ಒತ್ತಡವನ್ನು ಹೊಂದಿದೆ. ಇದು ಸಮಭಾಜಕವೃತ್ತದಿಂದ 50 ಉತ್ತರ ಮತ್ತು 50 ದಕ್ಷಿಣ ಅಕ್ಷಾಂಶದವರೆಗೆ ಕಂಡುಬರುವುದು. ಈ ಭಾಗವು ವರ್ಷವೆಲ್ಲಾ ಸೂರ್ಯನ ಲಂಬವಾದ ಕಿರಣಗಳನ್ನು ಪಡೆಯುವುದು.
ಇದರಿಂದ ವಾಯು ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ ಹಾಗೂ ಇಲ್ಲಿ ವಾಯು ಚಲನೆ ಕಡಿಮೆ. ಈ ವಲಯವು ಪ್ರಶಾಂತವಾಗಿದ್ದು (ಛಿಚಿಟm) ಲಘುಮಾರುತಗಳಿರುವುದರಿಂದ ಇದನ್ನು ‘ಶಾಂತವಲಯ’ (ಆoಟಜಡಿum) ಎಂದೂ ಕರೆಯುವರು. ಈ ಪ್ರದೇಶವನ್ನು ಅಂತರ ಉಷ್ಣ ಸಂಧಿವಲಯ (Iಟಿಣeಡಿ ಖಿಡಿoಠಿiಛಿಚಿಟ ಅoಟಿveಡಿgeಟಿಛಿe Zoಟಿe –IಖಿಅZ) ಎಂಬ ಹೆಸರಿನಲ್ಲೂ ಕರೆಯುವರು.
ಅ) ಉತ್ತರ ಉಪ-ಉಷ್ಣವಲಯದ ಅಧಿಕ ಒತ್ತಡ ಪ್ರದೇಶ: ಈ ಪಟ್ಟಿಗಳು 300 ಉ. ದಿಂದ 350 ಉ. ಅಕ್ಷಾಂಶಗಳವರೆಗೆ ಕಂಡುಬರುತ್ತವೆ. ಈ ವಲಯವನ್ನು ಅಶ್ವ ಅಕ್ಷಾಂಶಗಳ ವಲಯ ಎಂತಲೂ ಕರೆಯುವರು.
ಬ) ದಕ್ಷಿಣ ಉಪ-ಉಷ್ಣವಲಯದ ಅಧಿಕ ಒತ್ತಡ ಪ್ರದೇಶ : ಇದು 300 ದಕ್ಷಿಣ ದಿಂದ ದಕ್ಷಿಣ 350 ಅಕ್ಷಾಂಶಗಳವರೆಗೆ ಕಂಡುಬರುತ್ತವೆ.
ಅ) ಉತ್ತರ ಉಪಧ್ರುವೀಯ ಕಡಿಮೆ ಒತ್ತಡ ಪ್ರದೇಶ (600ಉತ್ತರದಿಂದ 650 ಉತ್ತರದವರೆಗೆ), ಬ) ದಕ್ಷಿಣ ಉಪಧ್ರವೀಯ ಕಡಿಮೆ ಒತ್ತಡ ಪ್ರದೇಶ (600 ದಕ್ಷಿಣದಿಂದ 650 ದಕ್ಷಿಣದವರೆಗೆ). ಇಲ್ಲಿ ಚಂಡ ಮಾರುತಗಳು ವಿಶೇಷವಾಗಿ ಚಳಿಗಾಲದಲ್ಲಿ ಕಂಡುಬರುತ್ತವೆ.
ಮಾರುತಗಳು
ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಚಲಿಸುವ ವಾಯುವನ್ನು ‘ಮಾರುತ’ಗಳೆನ್ನುವರು.
1. ನಿರಂತರ ಮಾರುತಗಳು (Pಟಚಿಟಿeಣಚಿಡಿಥಿ Wiಟಿಜs) : ಇವುಗಳನ್ನು ‘ನಿತ್ಯ ಮಾರುತ’ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು. ಇವು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.
ವಾಣಿಜ್ಯ ಮಾರುತಗಳು (ಖಿಡಿಚಿಜe Wiಟಿಜs) : ಇವುಗಳು ಉಪ ಉಷ್ಣವಲಯದ ಅಧಿಕ ಒತ್ತಡ ಪ್ರದೇಶದಿಂದ ಸಮಭಾಜಕ ವೃತ್ತದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುತ್ತವೆ. ಉತ್ತರಗೋಳಾರ್ಧದಲ್ಲಿ ಇವು ಈಶಾನ್ಯದಿಂದ ನೈಋತ್ಯ ದಿಕ್ಕಿನ ಕಡೆಗೆ ಹಾಗೂ ದಕ್ಷಿಣಗೋಳಾರ್ಧದಲ್ಲಿ ಆಗ್ನೇಯದಿಂದ ವಾಯವ್ಯ ದಿಕ್ಕಿನ ಕಡೆಗೆ ಬೀಸುತ್ತವೆ. ಇವುಗಳನ್ನು ಕ್ರಮವಾಗಿ ಈಶಾನ್ಯ ವಾಣಿಜ್ಯ ಮಾರುತಗಳು ಹಾಗೂ ಆಗ್ನೇಯ ವಾಣಿಜ್ಯ ಮಾರುತಗಳೆಂದು ಕರೆಯುವರು.
ಪ್ರತಿ ವಾಣಿಜ್ಯ ಮಾರುತಗಳು(ಂಟಿಣi ಣಡಿಚಿಜe Wiಟಿಜs) : ಇವುಗಳನ್ನು ಪಶ್ಚಿಮದ ಮಾರುತಗಳೆಂತಲೂ ಕರೆಯುವರು. ಇವು ಉಪ ಉಷ್ಣವಲಯದ ಅಧಿಕ ಒತ್ತಡ ಪ್ರದೇಶದಿಂದ ಉಪಧ್ರುವೀಯ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುತ್ತವೆ. ಇವುಗಳ ದಿಕ್ಕು ಉತ್ತರಗೋಳಾರ್ಧದಲ್ಲಿ ನೈಋತ್ಯದಿಂದನಈಶಾನ್ಯದ ಕಡೆಗಿದ್ದು, ದಕ್ಷಿಣಗೋಳಾರ್ಧದಲ್ಲಿ ವಾಯವ್ಯದಿಂದ ಆಗ್ನೇಯದ ಕಡೆಗಿರುವುದು. ಈ ಮಾರುತಗಳು ದಕ್ಷಿಣಗೋಳಾರ್ಧ ಸಾಗರಗಳ ಮೇಲೆ ಅತ್ಯಂತ ಪ್ರಬಲವಾಗಿ ಬೀಸುತ್ತವೆ. ಅವುಗಳನ್ನು 400 ದಕ್ಷಿಣ ಅಕ್ಷಾಂಶಗಳಲ್ಲಿ ‘ನಲ್ವತ್ತರ ಅಬ್ಬರಗಾಳಿ’, 500 ದಕ್ಷಿಣ ಅಕ್ಷಾಂಶಗಳಲ್ಲಿ ‘ಐವತ್ತರ ಉಗ್ರಗಾಳಿ’ ಹಾಗೂ 600 ದಕ್ಷಿಣ ಅಕ್ಷಾಂಶಗಳಲ್ಲಿ ‘ಅರವತ್ತರ ಅರಚುವ ಗಾಳಿ’ಗಳೆಂದು ಕರೆಯುವರು ಧ್ರುವೀಯ ಮಾರುತಗಳು (Poಟಚಿಡಿ Wiಟಿಜs) : ಇವುಗಳನ್ನು ಪೂರ್ವದ ಮಾರುತಗಳು ಎಂದು ಕರೆಯುವರು. ಈ ಮಾರುತಗಳು ಧ್ರುವೀಯ ಅಧಿಕ ಒತ್ತಡ ವಲಯದಿಂದ ಉಪಧ್ರುವೀಯ ಕಡಿಮೆ ಒತ್ತಡ ವಲಯದ ಕಡೆಗೆ ಬೀಸುತ್ತವೆ. ಇವುಗಳು ಉತ್ತರÀಗೋಳಾರ್ಧದಲ್ಲಿ ಈಶಾನ್ಯದಿಂದ ನೈಋತ್ಯದ ಕಡೆಗೆ ಹಾಗೂ ದಕ್ಷಿಣಗೋಳಾರ್ಧದಲ್ಲಿ ಆಗ್ನೇಯದಿಂದ ವಾಯವ್ಯದ ಕಡೆಗೆ ಬೀಸುವುವು. ಇವುಗಳು ಶೀತವಾದ ಶುಷ್ಕ ಮಾರುತಗಳಾಗಿದ್ದು, ಧ್ರುವೀಯ ವಲಯದ ಹಿಮಾಚ್ಛಾದಿತ ಭಾಗಗಳಿಂದ ಬೀಸುತ್ತವೆ.
2. ನಿಯತಕಾಲಿಕ ಮಾರುತಗಳು (Seಚಿsoಟಿಚಿಟ Wiಟಿಜs) : ಇವುಗಳನ್ನು ಋತು ಮಾರುತಗಳು, ಕ್ಲುಪ್ತ ಮಾರುತಗಳು ಎಂದೂ ಕರೆಯುವರು. ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾಹರಣೆಯಾಗಿವೆ. ಭಾರತದಲ್ಲಿ ಬೇಸಿಗೆಯಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ನೈಋತ್ಯ ದಿಕ್ಕಿನಿಂದ ಈಶಾನ್ಯದ ಕಡೆಗೆ ಬೀಸುತ್ತವೆ. ಇವುಗಳು ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗೆ ಬೀಸುತ್ತವೆ. ಅನಂತರ ಈಶಾನ್ಯದ ಮಾನ್ಸೂನ್ ಮಾರುತಗಳು ಸೆಪ್ಟಂಬರ್ ಅಂತ್ಯದಿಂದ ಡಿಸೆಂಬರ್ ಮಧ್ಯದವರೆಗೆ ಈಶಾನ್ಯದಿಂದ ನೈಋತ್ಯದ ಕಡೆಗೆ ಬೀಸುವುವು
3. ಸ್ಥಳೀಯಮಾರುತಗಳು (ಐoಛಿಚಿಟ Wiಟಿಜs) : ನಿರಂತರ ಮತ್ತು ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಮತ್ತು ಒತ್ತಡ, ತೇವಾಂಶಗಳ ವ್ಯತ್ಯಾಸದ ಪರಿಣಾಮವಾಗಿ ಸ್ಥಳೀಯ ಮಾರುತಗಳುಂಟಾಗುತ್ತವೆ. ಪ್ರಮುಖ ಸ್ಥಳೀಯ ಮಾರುತಗಳಾವುವೆಂದರೆ, ಭೂಗಾಳಿ, ಸಮುದ್ರಗಾಳಿ, ಪರ್ವತಗಾಳಿ, ಕಣಿವೆಗಾಳಿ ಮತ್ತು ಇತರೆ ಕೆಲವು ಮಾರುತಗಳನ್ನು ಭಾರತದಲ್ಲಿ ‘ಲೂ’ ಎಂದು, ಯು.ಎಸ್.ಎ.ಯಲ್ಲಿ ‘ಚಿನೂಕ್’ ಅಥವಾ ‘ಹಿಮಭಕ್ಷಕ’ ಎಂದು, ಆಲ್ಪ್ಸ್ಪರ್ವತಗಳಲ್ಲಿ ‘ಫೋಹ್ನ್’ ಎಂದು, ಫ್ರ್ರಾನ್ಸ್ನಲ್ಲಿ ‘ಮಿಸ್ಟ್ರಲ್’ ಎಂದು, ಸಹರಾ ಮರುಭೂಮಿಯಲ್ಲಿ ಸಿರಾಕ್ಕೊ ಎಂದು, ಆಸ್ಟ್ರೇಲಿಯದಲ್ಲಿ ಬ್ರಿಕ್ ಫೀಲ್ಡರ್ ಎಂದೂ ಹಾಗೂ ಅಂಟಾಕ್ರ್ಟಿಕಾದಲ್ಲಿ ಬ್ಲಿಜರ್ಡ್ ಎಂದೂ ಕರೆಯುತ್ತಾರೆ.
ಆವರ್ತ ಮಾರುತಗಳನ್ನು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುವರು. ಉದಾ: ಚೀನಾ ಮತ್ತು ಜಪಾನಿನಲ್ಲಿ- ಟೈಫೂನ್, ಅಮೆರಿಕ ಮತ್ತು ಮೆಕ್ಸಿಕೊ -ಹರಿಕೇನ್, ಆಸ್ಟ್ರೇಲಿಯಾ-ವಿಲ್ಲಿ ವಿಲ್ಲೀಸ್, ಭಾರತ-ಸೈಕ್ಲೋನ್, ರಷ್ಯಾ -ವಿರ್ಲ್ಪೂಲ್. ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತವು ಕೆಲವು ಪ್ರಬಲವಾದ ಆವರ್ತ ಮಾರುತಗಳನ್ನು ದಾಖಲಿಸಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಬೋಲಾ, ನರ್ಗೀಸ್, ನಿಶಾ, ಐಲಾ, ಲೈಲಾ, ಬಿಜಿಲಿ, ಜಲ್ ಥೇಸ್ ಇತ್ಯಾದಿ
ಮೋಡಗಳು (ಅಟouಜs) ವಾಯುಗೋಳದಲ್ಲಿ ಉಷ್ಣಾಂಶವು ಕಡಿಮೆಯಾದಾಗ, ಅದರಲ್ಲಿನ ಜಲಾಂಶವು ಘನೀಕರಣಗೊಂಡು ನಿರ್ಮಾಣವಾಗುವ ಸಣ್ಣ ಸಣ್ಣ ನೀರಿನಹನಿಗಳು ಅಥವಾ ಹಿಮಕಣಗಳ ರಾಶಿಯನ್ನು ‘ಮೋಡ’ ಗಳೆನ್ನುವರು.
ಪದರು ಮೋಡಗಳು (Sಣಡಿಚಿಣus ಅಟouಜs) : ಇವುಗಳು ವಾಯುಗೋಳದ ಅತ್ಯಂತ ಕೆಳಮಟ್ಟದಲ್ಲಿರುತ್ತವೆ. ಭೂಮಿಯ ಮೇಲ್ಮೈನಿಂದ 2.ಕಿ.ಮೀ.ಗಳಷ್ಟು ಎತ್ತರದವರೆಗೆ ಇವುಗಳು ಕಂಡುಬರುತ್ತವೆ. ಇವು ತೆಳುವಾದ ಬೂದುಹಾಳೆ ಅಥವಾ ವಿಸ್ತಾರವಾದ ಪದರುಗಳಂತೆ ಕಾಣುತ್ತವೆ. ಪದರು ಮೋಡಗಳು ಉತ್ತಮ ಹವಾಮಾನಕ್ಕೆ ಸಹಕಾರಿಯಾಗಿದ್ದು ತುಂತುರು ಮಳೆಯನ್ನು ಸುರಿಸುತ್ತವೆ.
• ರಾಶಿ ಮೋಡಗಳು (ಅumuಟus ಅಟouಜs): ಇವು ಊಧ್ರ್ವಮುಖವಾಗಿ ಬೆಳೆದಿದ್ದು ಅವುಗ¼ಮೇಲ್ಮೈ ಗೋಪುರಾಕೃತಿಯಲ್ಲಿದ್ದು ಬಾಗಿರುವುದರಿಂದ ಹೂಕೋಸಿನ ರಚನೆಯನ್ನು ಹೋಲುತ್ತದೆ. ಇವುಗಳು
ಮಳೆತರುವ ಮೋಡಗಳಾಗಿವೆ. ಈ ಮೋಡಗಳು ಉಣ್ಣೆಯ ಗುಡ್ಡೆಯಂತೆ ಕಂಡು ಬರುವುದರಿಂದ ಇವುಗಳನ್ನು ‘ಉಣ್ಣೆಯ ಗುಡ್ಡೆಮೋಡ’ ಎಂತಲೂ ಕರೆಯುವರು. ಇವು ಮಳೆಯನ್ನು ಸುರಿಸುವ ಮೋಡಗಳು.
ಹಿಮಕಣ ಮೋಡಗಳು (ಅiಡಿಡಿus ಅಟouಜs): ಇವುಗಳು ವಾಯುಮಂಡಲದಲ್ಲಿ ಅತಿ ಹೆಚ್ಚು ಎತ್ತರದಲ್ಲಿ ಅಂದರೆ 6 ಕಿ.ಮೀ.ಗಳಿಗಿಂತಲೂ ಎತ್ತರದಲ್ಲಿರುತ್ತವೆ. ಈ ಮೋಡಗಳು ‘ಗುಂಗುರುಕೂದಲ’ನ್ನು ಹೋಲುತ್ತಿದ್ದು ಗರಿಗಳ ಅಥವಾ ನಾರಿನಾಕಾರ ಹೊಂದಿರುವಂತೆ ಕಾಣುತ್ತವೆ. ಇದು ಹಿತಕರವಾದ ಹವಾಮಾನ ಸ್ಥಿತಿಯನ್ನು ಸೂಚಿಸುತ್ತದೆ ಹಾಗೂ ಈ ಮೋಡಗಳಲ್ಲಿ ಪ್ರಕಾಶಮಾನವಾಗಿ ಸೂರ್ಯ ಬೆಳಗುತ್ತಾನೆ. ವಾಯುವಿನಲ್ಲಿ ಈ ಮೋಡಗಳು ಹಿಂಜಿದ ಅರಳೆಯಂತೆ ತೇಲುತ್ತವೆ. ಇವುಗಳ ಜನಪ್ರಿಯ ಹೆಸರು ‘ಕುದುರೆಬಾಲ’ದ ಮೋಡಗಳು.
ರಾಶಿವೃಷ್ಟಿ ಮೋಡಗಳು (ಓimbus ಅಟouಜs): ಈ ಮೋಡಗಳು ನಿರಂತರ ಮಳೆತರುವ ಮೋಡಗಳಾಗಿದ್ದು ಕೆಳಮಟ್ಟ ದಲ್ಲಿರುತ್ತವೆ. ಈ ಮೋಡಗಳು ಪದರು ಅಥವಾ ರಾಶಿಮೋಡಗಳ ಆಕಾರದಲ್ಲಿರುತ್ತವೆ. ಇವು ಹೆಚ್ಚು ಮಳೆ ಮತ್ತು ಹಿಮಮಳೆಯನ್ನು ಸುರಿಸುತ್ತವೆ. ವೃಷ್ಟಿಪದರು ಮೋಡಗಳು ದಪ್ಪವಾಗಿದ್ದು ಅಧಿಕ ಮಳೆತರುವ ಮೋಡಗಳಾಗಿವೆ.
ಮಳೆಯ ವಿಧಗಳು: ಮಳೆಯು ಮೂರು ರೀತಿಯಲ್ಲಿ ಉಂಟಾಗುವುದು. ಅವುಗಳೆಂದರೆ : ಪರಿಸರಣ ಮಳೆ, ಪರ್ವತ ಮಳೆ ಮತ್ತು ಆವರ್ತ ಮಳೆ.
ಪರಿಸರಣ ಮಳೆ: (ಅoಟಿ ಗಿeಛಿಣioಟಿಚಿಟ ಖಚಿiಟಿಜಿಚಿಟಟ) ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ‘ಪರಿಸರಣಮಳೆ’ ಎಂದು ಕರೆಯುವರುಉಷ್ಣಾಂಶವು ಹೆಚ್ಚಾಗಿರುವ ಸನ್ನೀವೇಶಗಳಲ್ಲಿ ವಾಯು ಬಿಸಿಯಾಗಿ ಮೇಲ್ಮುಖವಾಗಿ ಚಲಿಸುತ್ತಾ ವಿಕಾಸ ಹೊಂದುವುದು. ಅನಂತರ ಸಾಕಷ್ಟು ಎತ್ತರವನ್ನು ತಲುಪಿ ತಂಪಾಗಿ ಅದರಲ್ಲಿರುವ ಜಲಾಂಶವು ಹನಿಗಳಾಗಿ ವಿಸರ್ಜನೆಗೊಳ್ಳುವ ಮೂಲಕ ಮಳೆ ಬೀಳುವುದು. ಇದೇ ಪರಿಸರಣ ಮಳೆ. ಈ ರೀತಿ ಮಳೆಯು ಸಮಭಾಜಕ ವೃತ್ತ ವಲಯದಲ್ಲಿ ಹಾಗೂ ಉಷ್ಣ ವಲಯದ ಭೂ ಭಾಗಗಳಲ್ಲಿ ಬೇಸಿಗೆ ಯಲ್ಲಿ ಸಾಮಾನ್ಯ. ಸಮಭಾಜಕ ವೃತ್ತ ಪ್ರದೇಶಗಳಲ್ಲಿ ಬೀಳುವುದು ಇದನ್ನು ‘ಅಪರಾಹ್ನ ಮಳೆ’, ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ. ಇದರೊಂದಿಗೆ ಕೆಲವೊಮ್ಮೆ ಆಲಿಕಲ್ಲುಗಳು ಬೀಳುತ್ತವೆ.
ಪರ್ವತ ಮಳೆ (ಔಡಿogಡಿಚಿಠಿhiಛಿ ಖಚಿiಟಿಜಿಚಿಟಟ) : ಇದನ್ನು ಆರೋಹ ಮಳೆ ಹಾಗೂ ಭೂಸ್ವರೂಪ ಮಳೆಯೆಂದೂ ಸಹ ಕರೆಯುವರು. ತೇವಾಂಶವನ್ನು ಹೊಂದಿರುವ ವಾಯುವು ಚಲನ ದಿಕ್ಕಿಗೆ ಅಡ್ಡಲಾಗಿರುವ ಪರ್ವತ ಮಳೆ ಪರ್ವತಗಳ ಅಡಚಣೆಯಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ವಾಯು ತಂಪಾಗಿ ಅದರಲ್ಲಿರುವ ಜಲಾಂಶವು ಘನಿಕರೀಸಿ ಮಳೆ ಬೀಳುವುದು. ಹೀಗೆ ಪರ್ವತಗಳಿಂದ ಉಂಟಾಗುವ ಮಳೆಯೇ ಪರ್ವತ ಮಳೆ ಅಥವಾ ಆರೋಹ ಮಳೆ.
ಆವರ್ತಮಳೆ (ಅಥಿಛಿಟoಟಿiಛಿ ಖಚಿiಟಿಜಿಚಿಟಟ) : ಉಷ್ಣವಲಯದ ಆವರ್ತ ಮಾರುತÀಗಳಲ್ಲಿ ಗಾಳಿಯು ವೃತ್ತಕಾರವಾಗಿ ಮೇಲೇರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು. ಇದಕ್ಕೆ ಬದಲಾಗಿ ಸಮಶೀತೋಷ್ಣ ವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣ ವಾಯುರಾಶಿಯು ಭಾರವಾದ ಶೀತವಾಯು ರಾಶಿಯ ಮೇಲೇರುವುದು. ಉಷ್ಣವಾಯುರಾಶಿ ಸಾಕಷ್ಟು ಮೇಲೇರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು. ಉಷ್ಣ ಮತ್ತು ಶೀತವಾಯು ರಾಶಿಗಳ ನಡುವಿನ ವಲಯವನ್ನು ‘ವಾಯುಮುಖ’ (ಈಡಿoಟಿಣ) ಎನ್ನುವರು. ಇದರಿಂದ ಸಮಶೀತೋಷ್ಣ ವಲಯದ ಆವರ್ತ ಮಾರುತಗಳ ಮಳೆಯನ್ನು ‘ವಾಯುಮುಖ ಮಳೆ’ಯೆಂದು ಸಹ ಕರೆಯುವರು.
1. ಭಾರತದ ಮೇಘಾಲಯ ರಾಜ್ಯದ ಮಾಸಿಮ್ ರಾಂ ಒಂದು ವರ್ಷದಲ್ಲಿ 1140 ಸೆಂ.ಮೀ. ಗಳಷ್ಟು ಮಳೆಯನ್ನು ದಾಖಲಿಸಿದೆ. ಇದು ಪ್ರಪಂಚದ ಅತ್ಯಂತ ತೇವಯುತ ಸ್ಥಳ.
2.ಕರ್ನಾಟಕದ ಆಗುಂಬೆಯನ್ನು ‘ದಕ್ಷಿಣ ಭಾರತದ ಮಾಸಿನ್ರಾಂ’ ಎನ್ನುವರು.
3. ಭಾರತದ ರಾಜಸ್ತಾನದ ‘ರೂಯ್ಲಿ’ ಅತಿ ಕಡಿಮೆ ಮಳೆ ಪಡೆಯುವ ಸ್ಥಳ. ಇದು ವರ್ಷದಲ್ಲಿ ಕೇವಲ 8 ಸೆಂ.ಮೀ ಮಾತ್ರ ಮಳೆ ಪಡೆಯುವುದು.
4. ಚಿತ್ರದುರ್ಗ ಜಿಲ್ಲೆಯ ‘ನಾಯಕನಹಟ್ಟಿ’ ಯು ಕರ್ನಾಟಕದ ಅತ್ಯಂತ ಒಣಪ್ರದೇಶವಾಗಿದೆ.
5. ಭೂಮಿಯ ಮೇಲೆ ಕಳೆದ 200 ವರ್ಷಗಳಿಂದ ಮಳೆ ಬಾರದಿರುವ ಪ್ರದೇಶವೆಂದರೆ ಚಿಲಿ ದೇಶದ ಅಟಕಾಮ ಮರುಭೂಮಿ
ಜಲಗೋಳ
ಜಲರಾಶಿಗಳ ಹಂಚಿಕೆ ಭೂಮಿಯನ್ನು ಸಾಮಾನ್ಯವಾಗಿ ‘ನೀಲಿಗ್ರಹ’ ಅಥವಾ ‘ಜಲಾವೃತ ಗ್ರಹ’ ವೆಂದೂ ಕರೆಯುವರು. ಇದಕ್ಕೆ ಕಾರಣ ಭೂಮೇಲ್ಮೈನ 70.78% ಭಾಗ ಅಂದರೆ 361 ದಶಲಕ್ಷ ಚ.ಕಿ.ಮೀ. ಪ್ರದೇಶವು ನೀರಿನಿಂದ ಆವರಿಸಿದೆ. ಪ್ರಪಂಚದ ಅತಿ ದೊಡ್ಡ ಜಲರಾಶಿಗಳೆಂದರೆ ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಕಟಿಕ್ ಸಾಗರ ಏಷ್ಯ ಮತ್ತು ಆಫ್ರಿಕಾ ಖಂಡಗಳ ನಡುವಿನ ಸೂಯೆಜ್ ಕಾಲುವೆ, ದಕ್ಷಿಣ ಮತ್ತು ಉತ್ತರ ಅಮೆರಿಕಾ ಖಂಡಗಳ ನಡುವಿನ ಪನಾಮ ಕಾಲುವೆ.
1. ಖಂಡಾವರಣ ಪ್ರದೇಶ: (ಅoಟಿಣiಟಿeಟಿಣಚಿಟ Sheಟಜಿ) : ಸಾಗರ ಅಥವಾ ಸಮುದ್ರದ ಅಂಚಿನಲ್ಲಿರುವ ಆಳವಿಲ್ಲದ ಭಾಗವನ್ನೇ ಖಂಡಾವರಣ ಪ್ರದೇಶವೆನ್ನುವರು. ಇದರ ಒಂದು ಕಡೆಗೆ ಸಮುದ್ರತೀರವಿದ್ದರೆ ಮತ್ತೊಂದು ಕಡೆ ಖಂಡಾವರಣ ಇಳಿಜಾರು ಇರುವುದು. ಈ ವಲಯದ ಸರಾಸರಿ ಆಳ 100 ಫ್ಯಾಧಮ್ ಗಳು (1 ಫ್ಯಾಧಮ್ =6 ಅಡಿ).
3. ಆಳಸಾಗರದ ಮೈದಾನ (ಆeeಠಿ Seಚಿ Pಟಚಿiಟಿ) : ಸಾಗರಗಳ ತಳದಲ್ಲಿರುವ ವಿಸ್ತಾರವಾದ ಮೈದಾನ ಭಾಗವಾಗಿರುವುದು. ಇದನ್ನು ಆಳಸಾಗರ ಮೈದಾನ ಅಥವಾ ‘ಅಬಿಸಲ್ ಮೈದಾನ’ವೆನ್ನುವರು. ಸಾಗರಗಳ ಭೂಸ್ವರೂಪ ವಿಭಾಗಗಳಲ್ಲೇ ಇದು ಅತಿ ವಿಸ್ತಾರವಾದುದು. ಈ ವಲಯದಲ್ಲಿಯೇ ಗುಡ್ಡಗಳಂತಿರುವ ಸಮುದ್ರ ಪರ್ವತಗಳು (Seಚಿ mouಟಿಣs) ಹಾಗೂ ಚಪ್ಪಟೆಯಾಗಿರುವ ಗುಡ್ಡಾಕಾರದ ‘ಗುಯೋಟ್ಸ್’ ಗಳು(guಥಿoಣs) ಕಂಡು ಬರುತ್ತವೆ.
4. ಸಾಗರ ತಗ್ಗುಗಳು (ಔಛಿeಚಿಟಿ ಆeeಠಿs) : ಸಾಗರ ತಗ್ಗುಗಳನ್ನು ಸಾಗರ ಪ್ರಪಾತಗಳೆಂದೂ ಕರೆಯುವರು. ಇವು ಸಾಗರಗಳಲ್ಲಿ ಅತ್ಯಂತ ನೀಳವಾದ ಮತ್ತು ದೀರ್ಘವಾದ ತಗ್ಗು ಭಾಗಗಳು. ಪಿಲಿಫೈನ್ಸ್ ದ್ವೀಪಗಳ ಬಳಿಯಿರುವ ‘ಚಾಲೆಂಜರ್ ತಗ್ಗು’ (ಪೆಸಿಫಿಕ್ ಸಾಗರ) 11033 ಮೀ. ಆಳವಾಗಿದ್ದು ಇದು ಪ್ರಪಂಚದಲ್ಲಿ ಅತಿ ಆಳವಾಗಿರುವ ಸ್ಥಳವಾಗಿದೆ. ಸಾಗರದ ನೀರಿನಲ್ಲಿ ಆಳಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು. ಇದಕ್ಕೆ ಕಾರಣ ಸೂರ್ಯನ ಕಿರಣಗಳು ನೀರಿನಲ್ಲಿ 200 ಮೀ.ಗಳವರೆಗೆ ಮಾತ್ರ ಪ್ರವೇಶಿಸುತ್ತವೆ. ಈ ವಲಯದಲ್ಲಿಯೇ ಅನೇಕ ಬಗೆಯ ಜೀವಿಗಳು ಕಂಡುಬರುತ್ತವೆ. ಸಾಗರದ ನೀರಿನ ಸರಾಸರಿ ಲವಣತೆ 35/000 (ಅಂದರೆ 1000 ಭಾಗದಲ್ಲಿ 35 ಭಾಗ ಎಂದರ್ಥ) ಸಾಗರದ ನೀರು ಆವಿಯಾಗಿ ಅದರಲ್ಲಿರುವ ಲವಣಗಳು ಅಲ್ಲಿಯೇ ಉಳಿದಿರುವುದರಿಂದ ನೀರು ನಿರಂತರವಾಗಿ ಉಪ್ಪಾಗಿ ಪರಿಣಮಿಸುವುದು.
ಸಮುದ್ರದ ನೀರು ಏಕೆ ಉಪ್ಪಾಗಿರುವುದು? ಭೂಭಾಗಗಳಿಂದ ಹರಿದು ಸಮುದ್ರ ಅಥವಾ ಸಾಗರವನ್ನು ಸೇರುವ ನದಿಗಳ ನೀರು ಹಲವಾರು ಬಗೆಯ ಲವಣಗಳನ್ನು ಕರಗಿಸಿ ದ್ರಾವಣದ ರೂಪದಲ್ಲಿ ತನ್ನೊಡನೆ ತರುವುದು. ಸಾಗರ-ಸಮುದ್ರದ ನೀರು ಉಷ್ಣಾಂಶದಿಂದ ಆವಿಯಾಗಿ ವಾಯುಮಂಡಲವನ್ನು ಸೇರುವುದು. ಆದರೆ ನೀರಿನಲ್ಲಿದ್ದ ಲವಣವು ಸಮುದ್ರದಲ್ಲಿಯೇ ಉಳಿಯುತ್ತಾ ಹೋಗುವುದು. ಈ ಪ್ರಕ್ರಿಯೆ ದೀರ್ಘಕಾಲದಿಂದಲೂ ಮುಂದುವರೆದಿರುವುದರಿಂದ ಸಾಗರ, ಸಮುದ್ರಗಳಲ್ಲಿ ಲವಣಗಳು ಸಂಗ್ರಹವಾಗಿದ್ದು ಸಮುದ್ರದ ನೀರು ಉಪ್ಪಾಗಿದೆ.
ಪ್ರಪಂಚದಲ್ಲಿ ಅತಿ ಹೆಚ್ಚು ಲವಣತೆ ಹೊಂದಿರುವ ಕೆಲವು ಜಲಭಾಗಗಳು .
1. ಟರ್ಕಿಯ ವ್ಯಾನ್ಸರೋವರ - 330/000
2. ಮೃತ ಸಮುದ್ರ - (ಜೋರ್ಡಾನ್) - 300/000
3. ಸಾಂಬಾರ್ ಸರೋವರ - (ಭಾರತ) - 265/000
4. ಕೆಂಪು ಸಮುದ್ರ - (ಏಷ್ಯಾ ಮತ್ತು ಆಫ್ರಿಕಾ) - 240/000
ಸಾಗರ ಪ್ರವಾಹಗಳು (ಔಛಿeಚಿಟಿ ಅuಡಿಡಿeಟಿಣs) ಸಾಗರದ ನೀರು ಮೂರು ಪ್ರಮುಖ ಚಲನೆಗಳನ್ನು ಒಳಗೊಂಡಿದೆ. ಅವುಗಳೆಂದರೆ ಸಮತಲ ಚಲನೆಗೆ ಅಲೆಗಳು, ಪ್ರವಾಹಗಳು ಮತ್ತು ಲಂಬ ಚಲನೆಗೆ ಉಬ್ಬರ ವಿಳಿತಗಳು. ನಿಶ್ಚಿತ ದಿಕ್ಕಿನಲ್ಲಿ ನಿರಂತರವಾಗಿ ಚಲಿಸುವ ಸಾಗರದ ಮೇಲ್ಮೈ ನೀರನ್ನು ‘ಸಾಗರ ಪ್ರವಾಹ’ ಗಳೆಂದು ಕರೆಯುವರು. ಸಾಗರ ಪ್ರವಾಹಗಳÀಲ್ಲಿ ಎರಡು ವಿಧಗಳಿವೆ.
ಉಷ್ಣ ಸಾಗರ ಪ್ರವಾಹಗಳು: ಇವು ಸಮಭಾಜಕವೃತ್ತದಿಂದ ಪ್ರದೇಶಗಳಲ್ಲಿ ಪ್ರಾರಂಭವಾಗಿ ಉಪ ಧ್ರುವೀಯ ಪ್ರದೇಶಗಳ ಕಡೆಗೆ ಹರಿಯುತ್ತವೆ.
ಶೀತಸಾಗರÀ ಪ್ರವಾಹಗಳು: ಇವು ಧ್ರುವಪ್ರದೇಶಗಳಲ್ಲಿ ಪ್ರಾರಂಭವಾಗಿ ಸಮಭಾಜಕವೃತ್ತದ ಕಡೆಗೆ ಹರಿಯುತ್ತವೆ.
ಸಾಗರ ಪ್ರವಾಹಗಳು (ಔಛಿeಚಿಟಿ ಅuಡಿಡಿeಟಿಣs) ಉಷ್ಣ ಸಾಗರ ಪ್ರವಾಹಗಳು: ಇವು ಸಮಭಾಜಕವೃತ್ತದಿಂದ ಪ್ರದೇಶಗಳಲ್ಲಿ ಪ್ರಾರಂಭವಾಗಿ ಉಪ ಧ್ರುವೀಯ ಪ್ರದೇಶಗಳ ಕಡೆಗೆ ಹರಿಯುತ್ತವೆ.
ಪೆಸಿಫಿಕ್ ಸಾಗರದ ಪ್ರವಾಹಗಳು ಶೀತಸಾಗರÀ ಪ್ರವಾಹಗಳು: ಇವು ಧ್ರುವಪ್ರದೇಶಗಳಲ್ಲಿ ಪ್ರಾರಂಭವಾಗಿ ಸಮಭಾಜಕವೃತ್ತದ ಕಡೆಗೆ ಹರಿಯುತ್ತವೆ.
ಉಷ್ಣಸಾಗರ ಪ್ರವಾಹಗಳು ಕ್ಯಾಲಿಫೆÀÇೀರ್ನಿಯಾ ಪ್ರವಾಹ, ದಕ್ಷಿಣ ಸಮಭಾಜಕವೃತ್ತ ಪ್ರವಾಹ, ಪೂರ್ವ ಆಸ್ಟ್ರೇಲಿಯನ್ ಪ್ರವಾಹ,
ಶೀತಸಾಗರ ಪ್ರವಾಹಗಳು ಕುರೊಶಿವೊ ಪ್ರವಾಹ, ಓಯಾಶಿವೋ ಪ್ರವಾಹ, ಪೆರು ಅಥವಾ ಹಂಬೋಲ್ಟ್ ಪ್ರವಾಹ, ಪಶ್ಚಿಮ ಮಾರುತಗಳ ಪ್ರವಾಹ
ಅಟ್ಲಾಂಟಿಕ್ ಸಾಗರ ಪ್ರವಾಹಗಳು
ಉಷ್ಣಸಾಗರ ಪ್ರವಾಹಗಳು
ಉತ್ತರ ಸಮಭಾಜಕ ವೃತ್ತ ಪ್ರವಾಹ, ಗಲ್ಫ್ ಸ್ಟ್ರೀಂ ಪ್ರವಾಹ, ಉತ್ತರ ಅಟ್ಲಾಂಟಿಕ್ ಪ್ರವಾಹ, ಬ್ರೆಜಿಲ್ ಪ್ರವಾಹ,
ಶೀತಸಾಗರ ಪ್ರವಾಹಗಳು: ನಾರ್ವೇಜಿಯನ್ ಪ್ರವಾಹ, ಲಾಬ್ರಡಾರ್ ಪ್ರವಾಹ, ಕ್ಯಾನರಿ ಪ್ರವಾಹ, ಪಾಕ್ಲ್ಯಾಂಡ್ ಪ್ರವಾಹ, ಬೆಂಗ್ವುಲಾ ಪ್ರವಾಹ.
ಹಿಂದೂ ಮಹಾಸಾಗರದ ಪ್ರವಾಹಗಳು
ದಕ್ಷಿಣ ಹಿಂದೂ ಮಹಾ ಸಾಗರದ ಮುಖ್ಯ ಪ್ರವಾಹಗಳೆಂದರೆ: ಮೊಝಾಂಬಿಕ್, ಮಲಗಾಸಿ, ಅಗುಲ್ಹಾಸ್ ಇವು ಉಷ್ಣಪ್ರವಾಹಗಳು ಮತ್ತು ಪಶ್ಚಿಮ ಆಸ್ಟ್ರೇಲಿಯಾ ಪ್ರವಾಹ ಶೀತಪ್ರವಾಹವಾಗಿದೆ.
ಪ್ರಮುಖ ಮೀನುಗಾರಿಕಾ ಪ್ರದೇಶಗಳು
1. ಹೊನ್ಷು, ಹೊಕೈಡೋ ಮೀನುಗಾರಿಕೆ ಪ್ರದೇಶಗಳು - ಕುರೋಶಿವೊ ಉಷ್ಣಪ್ರವಾಹ ಮತ್ತು ಒಯಾಶಿವೊ ಶೀತ ಪ್ರವಾಹಗಳು ಸಂಧಿಸುವ ಪ್ರದೇಶ. (ಜಪಾನ್)
2. ಗ್ರಾಂಡ್ ಬ್ಯಾಂಕ್ - ಗಲ್ಫ್ ಸ್ಟ್ರೀಂ ಉಷ್ಣಪ್ರವಾಹ ಮತ್ತು ಲ್ಯಾಬ್ರಡಾರ್ ಶೀತ ಪ್ರವಾಹಗಳು ಸಂಧಿಸುವ ಪ್ರದೇಶ. (ನ್ಯೂಫೌಂಡ್ ಲ್ಯಾಂಡ್ ಉತ್ತರ ಅಮೆರಿಕ)
3. ಡಾಗ್ಗರ್ಬ್ಯಾಂಕ್- ಉತ್ತರಸಮುದ್ರವಲಯ (ಯುರೋಪ್)
ಉಬ್ಬರ ವಿಳಿತಗಳು: ಸಮುದ್ರ ಅಥವಾ ಸಾಗರದ ನೀರಿನ ಮಟ್ಟವು ನಿರಂತರ ಮತ್ತು ನಿಯಮಿತವಾಗಿ ಏರುವುದು ಹಾಗೂ ಇಳಿಯುವುದನ್ನೇ ‘ಉಬ್ಬರ ವಿಳಿತ’ ವೆಂದು ಕರೆಯುವರುಒಂದು ಏರುಬ್ಬರ ಮತ್ತು ಒಂದು ಇಳಿಯುಬ್ಬರಗಳ ನಡುವೆ 6 ಗಂಟೆ 13 ನಿಮಿಷಗಳಷ್ಟು ಸಮಯ ಅಂತರವಿರುತ್ತದೆ. ಒಂದು ಅಧಿಕ ಉಬ್ಬರದಿಂದ ಮತ್ತೊಂದು ಅಧಿಕ ಉಬ್ಬರಗಳ ನಡುವೆ 12 ಗಂಟೆ 26 ನಿಮಿಷ ವೇಳೆಯ ಅಂತರವಿರುತ್ತದೆ. 24 ಗಂಟೆ, 52 ನಿಮಿಷಗಳ ಅವಧಿಯಲ್ಲಿ 2 ಏರುಬ್ಬರ ಮತ್ತು 2 ಇಳಿಯುಬ್ಬರಗಳುಂಟಾಗುತ್ತವೆ.
ಜೀವಗೋಳ (ಃIಔSPಊಇಖಇ)
ಓಜೋನ್ ಪದರ ಕ್ಷೀಣತೆ: (ಔzoಟಿe ಆeಠಿಟeಣioಟಿ): ವಾಯುಮಂಡಲದ ಸಮೋಷ್ಣ ವಲಯದಲ್ಲಿ ತೆಳುವಾದ ಓಜೋನ್ ಅನಿಲದ ಪದರವಿರುವುದು. ಇದು ಸೂರ್ಯನಿಂದ ಪ್ರಸರಿಸುವÀ ಅತ್ಯಂತ ಅಪಾಯಕಾರಿಯಾದ ಅಲ್ಟ್ರಾವೈಲೆಟ್ (Uಗಿ) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಬಗೆಯ ಜೀವರಾಶಿಗಳನ್ನು ರಕ್ಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ಏರ್ಕಂಡಿಷನರ್, ರೆಫ್ರಿಜಿರೇಟರ್, ಸ್ಪ್ರೇಯರ್, ಸುಗಂಧದ್ರವ್ಯಗಳು ಮೊದಲಾದುವುಗಳ ಮಿತಿಮೀರಿದÀ ಬಳಕೆಯಿಂದ ಕ್ಲೊರೋ ಫೆÇ್ಲೀರೋ ಕಾರ್ಬನ್ (ಅ.ಈ.ಅ ಗಳು ಹೆಚ್ಚಾಗಿ ಬಿಡುಗಡೆಗೊಂಡು ವಾಯುಮಂಡಲದ ಓಜೋನ್ ಪದರವನ್ನು ನಾಶಪಡಿಸುತ್ತಿವೆ. ಈಗಾಗಲೇ ಅಂಟಾಕ್ರ್ಟಿಕಾದ ವಾಯುಮಂಡಲದಲ್ಲಿ ಓಜೋನ್ ಪದರವು ನಾಶವಾಗಿರುವುದನ್ನು ಕಂಡುಹಿಡಿಯಲಾಗಿದೆ.
ಆಮ್ಲ ಮಳೆ: (ಂಛಿiಜ ಖಚಿiಟಿ): ಮಳೆಯ ಹನಿಗಳು ಮಾಲಿನ್ಯಗೊಂಡ ವಾಯುಮಂಡಲ ಮೂಲಕ ಬೀಳುವಾಗ ಅದರಲ್ಲಿ ಸಲ್ಫೂರಿಕ್ ಆಮ್ಲ ಮತ್ತು ಇಂಗಾಲದ ಮಾನಾಕ್ಸೈಡ್ ಮುಂತಾದವು ವಿಲೀನಗೊಂಡು ಬೀಳುವ ಮಳೆಯನ್ನು ಆಮ್ಲ ಮಳೆ ಎನ್ನುವರುಆಮ್ಲ ಮಳೆಯನ್ನು `ಲೇಕ್ಕಿಲ್ಲರ್’ ಎಂದು ಕರೆಯುತ್ತಾರೆ. ಪೆÇೀಲೆಂಡ್, ಜೆಕ್ಗಣರಾಜ್ಯ ಮತ್ತು ಆಗ್ನೇಯ ಜರ್ಮನಿಯ ಭಾಗಗಳು ಪ್ರಪಂಚದಲ್ಲೇ ಅತಿ ಹೆಚ್ಚು ಆಮ್ಲ ಮಳೆಯ ಪರಿಣಾಮಕ್ಕೆ ಒಳಪಟ್ಟಿರುವ ಪ್ರದೇಶಗಳಾಗಿರುವುದರಿಂದ ಇವುಗಳನ್ನು “ಕಪ್ಪು ತ್ರಿಕೋನ” ಎನ್ನುವರು.
ಭಾರತದಲ್ಲಿ 1950ರಲ್ಲಿ ಯೋಜನಾ ಆಯೋಗವನ್ನು ರಚಿಸಲಾಯಿತು. 2015ರಲ್ಲಿ ಯೋಜನಾ ಆಯೋಗದ ಜಾಗದಲ್ಲಿ ನೀತಿ (ಓಚಿಣioಟಿಚಿಟ Iಟಿsಣiಣuಣe ಜಿoಡಿ ಖಿಡಿಚಿಟಿsಜಿoಡಿmiಟಿg Iಟಿಜiಚಿ (ಓIಖಿI) ಂಥಿog) ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಲಾಯಿತು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ : ಜೀವ ವಿಮೆಯನ್ನು ಎಲ್ಲರಿಗೂ ಕಡಿಮೆ ದರದಲ್ಲಿ ವಿಸ್ತರಿಸುವ ಯೋಜನೆ ಇದಾಗಿದ್ದು 18ರಿಂದ 50 ವರ್ಷಗಳವರೆಗಿನ ಎಲ್ಲ ವ್ಯಕ್ತಿಗಳು ಅತ್ಯಂತ ಕನಿಷ್ಠ ಪ್ರಿಮಿಯಮ್ ನೀಡಿ ಜೀವ ವಿಮೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
5. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ : ಇದೊಂದು ಅಪಘಾತ ವಿಮಾ ಯೋಜನೆಯಾಗಿದ್ದು 18ರಿಂದ 70 ವರ್ಷಗಳವರೆಗಿನ ಎಲ್ಲ ವ್ಯಕ್ತಿಗಳು ಕಡಿಮೆ ವೆಚ್ಚದಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.
6. ಅಟಲ್ ಪೆನ್ಶನ್ ಯೋಜನೆ : ಈ ಯೋಜನೆಯು ಅಸಂಘಟಿತ ವಲಯದಲ್ಲಿರುವ 18 ರಿಂದ 40 ವರ್ಷಗಳವರೆಗಿನ ವ್ಯಕ್ತಿಗಳಿಗೆ ಮಾಸಿಕ 1000 ರೂಪಾಯಿಗಳಿಂದ 5000 ರೂಪಾಯಿಗಳವರೆಗಿನ ಪೆನ್ಶನ್ ಹಣವನ್ನು ಅವರ ಕೊಡುಗೆ ಆಧರಿಸಿ ನೀಡುವ ಉದ್ದೇಶ ಹೊಂದಿದೆ.
ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳುಕ್ರೈಸ್ತ ಧರ್ಮ: ಕ್ರೈಸ್ತ ಧರ್ಮವು ಸಾ.ಶ. 1ನೆಯ ಶತಮಾನದ ಆರಂಭದಲ್ಲಿ ರೋಮನ್ ಸಾಮ್ರಾಜ್ಯದ ಆಡಳಿತಕ್ಕೆ ಒಳಗಾಗಿದ್ದ ಪ್ಯಾಲಸ್ಟೈನ್ ಪ್ರಾಂತ್ಯದ ನಜರತ್ನಲ್ಲಿ ಸ್ಥಾಪನೆಯಾಯಿತು. ಇದರ ಸ್ಥಾಪಕರು ಜೀಸಸ್ ಕ್ರಿಸ್ತರು. ಕ್ರೈಸ್ತ ಧರ್ಮ ಸ್ಥಾಪನೆಗೆ ಮುಂಚೆ ಪ್ಯಾಲಸ್ಟೈನ್ ಪ್ರಾಂತ್ಯದಲ್ಲಿ ನೆಲೆಸಿದ್ದ ಯಹೂದಿಗಳು ಸಾಕಷ್ಟು ಮೂಢನಂಬಿಕೆಗಳಿಗೆ ಮತ್ತು ರೋಮನ್ ಸಾಮ್ರಾಜ್ಯದ ದುರಾಡಳಿತಕ್ಕೆ ಒಳಗಾಗಿ ಅನೇಕ ಕಷ್ಟಗಳಿಗೆ ಗುರಿಯಾಗಿದ್ದರು. ಅಂತಹ ಸಂದರ್ಭದಲ್ಲಿ ಜೀಸಸ್ರ ಜನನವಾಗಿ ನಂತರ ಧರ್ಮಸ್ಥಾಪನೆಯಾಯಿತು. ಜೀಸಸ್ರು ಸಾ.ಶ. 1ನೆಯಶತಮಾನದಲ್ಲಿ ಜೆರೂಸಲಂ ಬಳಿಯ ಬೆತ್ಲಹ್ಯಾಂ ಎಂಬ ಹಳ್ಳಿಯಲ್ಲಿ ಒಂದು ಬಡಕುಟುಂಬವೊಂದರಲ್ಲಿ ಮೇರಿ ಮತ್ತು ಜೋಸೆಫ್ರ ಮಗನಾಗಿ ಜನಿಸಿದರು. ಜೀಸಸ್ರು ತನ್ನ 30ನೆಯ ವಯಸ್ಸಿನಲ್ಲಿ ಜಾನ್ ಬ್ಯಾಪ್ಟಿಸ್ಟ್ ಎಂಬುವವರ ಪ್ರಭಾವಕ್ಕೆ ಒಳಗಾಗಿ ಅವರಿಂದ ದೀಕ್ಷಾ ಸ್ನಾನ ಪಡೆದರು. ದೀಕ್ಷೆಯನ್ನು ನೀಡಿದ ಜಾನ್ ಜೀಸಸರನ್ನು ಮಸೀಹ ಅಥವಾ ಮಹಾರಕ್ಷಕನೆಂದು ಕರೆದರು. ಜೀಸಸ್ರÀನ್ನು ಗೋಲ್ಗೋಥ ಎಂಬ ಬೆಟ್ಟದಲ್ಲಿ ಒಂದು ಶುಕ್ರವಾರದ ದಿನ ಶಿಲುಬೆಗೆ ಏರಿಸಿದರು. ಈ ದಿನವನ್ನು ಕ್ರೈಸ್ತ ಸಮುದಾಯದವರು ಗುಡ್ ಫ್ರೈಡೇ ಎಂದು ಆಚರಿಸುತ್ತಾರೆ.
ಕ್ರೈಸ್ತ ಧವರ್iದ ಪ್ರಸಾರ: ಜೀಸಸ್ರು ಬದುಕಿದ್ದಾಗ ತನ್ನ ತತ್ವಗಳನ್ನು ಪ್ರಪಂಚದ ಎಲ್ಲಾ ಭಾಗಗಳಿಗೂ ತಲುಪಿಸಿ, ಆ ಮೂಲಕ ಕಷ್ಟದಲ್ಲಿರುವವರನ್ನು ರಕ್ಷಿಸಬೇಕೆಂಬ ಜವಾಬ್ದಾರಿಯನ್ನು ಮತ್ತು ದೀಕ್ಷೆಯನ್ನು ತನ್ನ 12 ಜನ ಶಿಷ್ಯರಿಗೆ ವಹಿಸಿದರು. ಅವರನ್ನು ಅಪೆÇೀಸಲ್ಸ್ ಎಂದು ಕರೆಯಲಾಗಿದೆ. ಇವರಲ್ಲಿ ಸಂತ ಪೀಟರನು ಅತೀ ಪ್ರಮುಖನಾಗಿದ್ದು ರೋಮಿಗೆ ತೆರಳಿ ಚರ್ಚ್ ಸ್ಥಾಪಿಸಿ ಪ್ರಪಂಚದಾದ್ಯಂತ ಧವರ್i ಪ್ರಚಾರಕರನ್ನು ಕಳುಹಿಸಿ ಕ್ರೈಸ್ತ ಧರ್ಮದ ಸುವಾರ್ತೆಗಳ ಪ್ರಚಾರ ಆರಂಭಿಸಿದನುಅಧಿಕಾರಕ್ಕೆ ಬಂದ ಕಾನ್ಸ್ಟೆಂಟೈನ್ ಸಾ.ಶ. 313ರಲ್ಲಿ ಕ್ರೈಸ್ತ ಧರ್ಮವನ್ನು ರಾಜ್ಯಧವರ್iವಾಗಿ ಸ್ವೀಕರಿಸಿದನು. ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ‘ಬೈಬಲ್’ ಆಗಿದೆ. ಮಾರ್ಟಿನ್ಲೂಥರ್ ನೇತೃತ್ವದಲ್ಲಿ ಜರ್ಮನಿಯಲ್ಲಿ ಸುಧಾರಣಾ ಚಳುವಳಿ ಪ್ರಾರಂಭವಾಯಿತು. ಇದರಿಂದ ಕ್ರೈಸ್ತ ಧರ್ಮವು ಎರಡು ಪಂಗಡಗಳಾಯಿತು. ಅವುಗಳೆಂದರೆ; 1) ಕ್ಯಾಥೋಲಿಕರು 2) ಪ್ರೊಟೆಸ್ಟಂಟರು ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್. ಇದರಲ್ಲಿ ಎರಡು ಭಾಗಗಳಿವೆ 1) ಓಲ್ಡ್ ಟೆಸ್ಟ್ಮೆಂಟ್ (ಹಳೆಯ ಒಡಂಬಡಿಕೆ) 2) ನ್ಯೂ ಟೆಸ್ಟ್ಮೆಂಟ್ (ಹೊಸ ಒಡಂಬಡಿಕೆ) ಇದು ಮೊದಲು ಹೀಬ್ರೂ ಭಾಷೆಯಲ್ಲಿ ರಚನೆಯಾಗಿದ್ದು, ಇಂಗ್ಲೆಂಡಿನ 1ನೆಯ ಜೇಮ್ಸ್ನ ಅವಧಿಯಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿತು. 1ನೆಯ ಭಾಗದಲ್ಲಿ ಯಹೂದಿಗಳ ಧಾರ್ಮಿಕ ನಂಬಿಕೆಗಳ ಬಗ್ಗೆ ಮಾಹಿತಿಯಿದ್ದರೆ, 2ನೆಯ ಭಾಗದಲ್ಲಿ ಜೀಸಸ್ರ ಜೀವನ ಹಾಗೂ ಬೋಧÀನೆಗಳಿವೆ.
ಇದು ಪ್ರಪಂಚದಲ್ಲಿ ಅತೀ ಹೆಚ್ಚು ಭಾಷೆಗಳಿಗೆ ಅನುವಾದಿಸಲಾದ ಗ್ರಂಥಗಳಲ್ಲಿ ಒಂದಾಗಿದೆ.
ಇಸ್ಲಾಂ ಧರ್ಮ: ಇಸ್ಲಾಂ ಧರ್ಮ ಪ್ರಾರಂಭವಾದುದು ಅರೇಬಿಯಾ ದೇಶದಲ್ಲಿ. ಇದು ಪಶ್ಚಿಮ ಏಷ್ಯಾದ ಒಂದು ಪರ್ಯಾಯ ದ್ವೀಪ. ಈ ಪ್ರದೇಶ ಮರುಭೂಮಿಯಾಗಿದ್ದು, ವ್ಯವಸಾಯಕ್ಕೆ ಯೋಗ್ಯವಾಗಿರಲಿಲ್ಲ, ಇದರಿಂದಾಗಿ ಅರಬ್ಬರು ವಲಸೆಗಾರರಾಗಿ ಎಲ್ಲಿ ಫಲವತ್ತಾದ ಭೂಮಿ ಮತ್ತು ನೀರು ದೊರಕುತ್ತಿತ್ತೋ ಅಲ್ಲಿ ನೆಲೆಸುತ್ತಿದ್ದರು. ಈ ರೀತಿ ನೆಲೆಸಿದ ಪ್ರದೇಶಗಳೇ ಮೆಕ್ಕಾ ಮತ್ತು ಮದೀನಾಗಳು. ಕಾಬ-ಇದು ಮೆಕ್ಕಾದಲ್ಲಿರುವ ಮುಸ್ಲಿಮರ ಪವಿತ್ರ ಸ್ಥಳ, ಮುಸ್ಲಿಮರು ಪ್ರತಿ ದಿನ ಕಾಬದ ಕಡೆ ಮುಖ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗೂ ಈ ಪ್ರದೇಶಕ್ಕೆ ಕೈಗೊಳ್ಳುವ ಪ್ರಯಾಣವನ್ನು ‘ಹಜ್’ ಯಾತ್ರೆ ಎನ್ನುತ್ತಾರೆ
ಮಹಮ್ಮದ್ಪೈಗಂಬರ್ರ ಜೀವನ ಇಸ್ಲಾಂ ಧರ್ಮದ ಸ್ಥಾಪಕರಾದ ಮಹಮ್ಮದ್ ಪೈಗಂಬರ್ರವರು ಸಾ.ಶ. 570ರಲ್ಲಿ ಮೆಕ್ಕಾದಲ್ಲಿ ಜನಿಸಿದರುಇಸ್ಲಾಂಧರ್ಮದ ಪವಿತ್ರ ಗ್ರಂಥ ‘ಕುರಾನ್’ ಅಗಿದೆ. ಪೈಗಂಬರರು ತಮ್ಮ ತತ್ವಗಳನ್ನು ಮೆಕ್ಕಾದಲ್ಲಿ ಪ್ರಚಾರ ಮಾಡಲಾರಂಭಿಸಿದರು. ಬಹುದೇವತಾರಾಧÀÀÀನೆಯನ್ನು ವಿರೋಧಿಸಿದ ಪೈಗಂಬರ್ರÀನ್ನು ಮೆಕ್ಕಾದ ಜನರು ವಿರೋಧಿಸಿ ಅವರ ಕೊಲೆಗೆ ಸಂಚು ಹೂಡಿದರು. ಇದನ್ನು ತಿಳಿದ ಪೈಗಂಬರರು ಸಾ.ಶ. 622ರಲ್ಲಿ ಮೆಕ್ಕಾದಿಂದ ಮದೀನಾಗೆ ಪ್ರಯಾಣ ಬೆಳೆಸಿದರು. ಈ ಘಟನೆಯನ್ನು ಹಿಜಿರಾ (ಪಲಾಯನ) ಎಂದು ಕರೆದು ಇದನ್ನು ಮುಸ್ಲಿಮರು `ಹಿಜಿರಾಶಕ' ಎಂದು ಪರಿಗಣಿಸಿದ್ದಾರೆ. (ಮುಸ್ಲಿಮರ ಲೂನಾರ್ ಕ್ಯಾಲೆಂಡರ್ ಇದರ ಆಧಾರದ ಮೇಲೆ ರಚನೆಯಾಗಿದೆ)
ಇಸ್ಲಾಂ ಧರ್ಮದ ಆಚರಣೆಗಳು: ಇಸ್ಲಾಂ ಧರ್ಮದಲ್ಲಿ ಐದು ಪ್ರಮುಖ ಆಚರಣೆಗಳಿವೆ.
1) ಕಲೀಮಾ - ಅಲ್ಲಾನಲ್ಲಿ ಮಾತ್ರ ನಂಬಿಕೆ. ಮಹಮ್ಮದರು ಅವರ ಪ್ರವಾದಿಗಳು.
2) ನಮಾಜ್ - ಪ್ರತೀ ದಿನ ಐದು ಬಾರಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಬೇಕು.
3) ರೋಜ - ರಂಜಾನ್ ತಿಂಗಳಲ್ಲಿ ಉಪವಾಸ.
4) ಜಕಾತ್ - ಆದಾಯದಲ್ಲಿ ನಿಗದಿಪಡಿಸಿದ ಭಾಗವನ್ನು ಬಡವರಿಗೆ ದಾನ ನೀಡಬೇಕು.
5) ಹಜ್ - ಜೀವನದಲ್ಲಿ ಒಂದು ಬಾರಿ ಮೆಕ್ಕಾ ಯಾತ್ರೆ ಕೈಗೊಳ್ಳಬೇಕುಮಹಮ್ಮದ್ ಪೈಗಂಬರರ ಉತ್ತರಾಧಿಕಾರಿಗಳನ್ನು `ಖಲೀಫರು' ಎನ್ನುವರು. ಮಹಮದ್ ಪೈಗಂಬರ್ರ ನಂತರ ಖಲೀಫರು ಇಸ್ಲಾಂ ಧರ್ಮದ ಧಾರ್ಮಿಕ ಮತ್ತು ರಾಜಕೀಯ ಮುಖಂಡರಾದರು. ಅಬೂಬಕರ್ ಮೊದಲನೆಯ ಖಲೀಫನಾಗಿದ್ದನು
ಮಧ್ಯಕಾಲೀನ ಭಾರತ ರಜಪೂತ ಮನೆತನಗಳು
ಗುರ್ಜರ ಪ್ರತಿಹಾರರು: ಪ್ರತಿಹಾರರು ಅವರ ಕೆಲವು ಶಾಸನಗಳಲ್ಲಿ ಅವರು ರಾಮಾಯಣ ಕಾಲದ ಸೂರ್ಯವಂಶಕ್ಕೆ ಸೇರಿದ ಕ್ಷತ್ರಿಯ ಲಕ್ಷ್ಮಣ ತಮ್ಮ ವಂಶದ ಮೂಲ ಸ್ಥಾಪಕನೆಂದು ಹೇಳಿಕೊಂಡಿದ್ದಾರೆ. ಆದರೆ ದೊರೆತಿರುವ ಆಧಾರಗಳು ನಾಗಭಟ್ಟನು ಈ ವಂಶದ ಸಂಸ್ಥಾಪಕನೆಂದು ಸೂಚಿಸುತ್ತವೆ. ಕನೂಜ್ನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಪ್ರತಿಹಾರರು ಸಿಂಧ್ ಪ್ರಾಂತ್ಯದ ಮೇಲೆ ಅಧಿಪತ್ಯ ಸ್ಥಾಪಿಸಿ ಆಗಾಗ ದಾಳಿ ಮಾಡುತ್ತಿದ್ದ ಅರಬ್ಬರನ್ನು ಎದುರಿಸಿ ಹಿಮ್ಮೆಟಿಸಿದರು.
ಗಹಡ್ವಾಲರು: ಈ ಮನೆತನದ ಸ್ಥಾಪಕ ಚಂದ್ರದೇವ. ಈತನು ವಾರಣಾಸಿಯನ್ನು ಮುಖ್ಯ ಕೇಂದ್ರವಾಗಿರಿಸಿ ಕೊಂಡು ಉತ್ತರ ಭಾರತದ ಬಹುಭಾಗದ ಮೇಲೆ ರಾಜ್ಯಭಾರ ಮಾಡಿದನು. ಪರಮಾರರು : ಪ್ರತಿಹಾರರರ ಅವನತಿಯ ನಂತರ ಮಾಳ್ವ ಪ್ರಾಂತ್ಯದಲ್ಲಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. ರಾಷ್ಟ್ರಕೂಟರ ಸಾಮಂತನಾಗಿದ್ದ ಉಪೇಂದ್ರ ಕೃಷ್ಣರಾಜ ಈ ಮನೆತನವನ್ನು ಸ್ಥಾಪಿಸಿದವನು. ಧಾರಾನಗರ ಇವರ ರಾಜಧಾನಿ
ಸೋಳಂಕಿಯರು: ಮೊದಲನೆ ಮೂಲರಾಜ ಈ ಮನೆತನದ ಸ್ಥಾಪಕ. ಈ ಮನೆತನದಲ್ಲಿ ಮೊದಲನೆ ಭೀಮ ಹೆಸರುವಾಸಿಯಾಗಿದ್ದರೂ, ಘಜ್ನಿಯಿಂದ ಸೋಮನಾಥ ದೇವಾಲಯವನ್ನು ರಕ್ಷಿಸಲಾಗಲಿಲ್ಲ. ಎರಡನೇ ಮೂಲರಾಜ ಮಹಮ್ಮದ್ ಘಜ್ನಿಯನ್ನು ಮೌಂಟ್ಅಬುವಿನ ಬಳಿ ಸೋಲಿಸಿದ. ಈ ಮನೆತನದ ಆಳ್ವಿಕೆಯಲ್ಲಿ ಖ್ಯಾತ ಜೈನ ಪಂಡಿತ ಹೇಮಚಂದ್ರ ‘ದೇಶಿಮಾಲಾ’ ಎಂಬ ನಿಘಂಟನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದನು.
ಚಂದೇಲರು: ಬುಂದೇಲ್ ಖಂಡದಲ್ಲಿ ಪ್ರವರ್ಧಮಾನಕ್ಕೆ ಬಂದ ಚಂದೇಲರ ಮನೆತನದ ಪ್ರಸಿದ್ಧ ಅರಸನೆಂದರೆ ಢಂಗ.
ಚೌವ್ಹಾಣರು : ಈ ಮನೆತನವೂ ರಜಪÀÇತ ಮನೆತನಗಳಲ್ಲಿ ಪೃಥ್ವಿರಾಜ ಚೌವ್ಹಾಣ ಪ್ರಮುಖವಾದುದು. ಮೂರನೇ ಪೃಥ್ವಿರಾಜ. ಪರಾಕ್ರಮಿಯಾಗಿದ್ದ ಪೃಥ್ವಿರಾಜನು ಬಂದೇಲ ಖಂಡದ ಚಂದೇಲರನ್ನು ಸೋಲಿಸಿ ಮಹೇಬ ಮತ್ತು ಕಾಲಿಂಜರ್ಗಳನ್ನು ವಶಪಡಿಸಿಕೊಂಡನು. ಘೋರ್ ಸಾಮ್ರಾಜ್ಯವನ್ನು ಸಿಂಧ್ಪ್ರಾಂತ್ಯದ ಕಡೆಗೆ ವಿಸ್ತರಿಸಬೇಕೆಂದಿದ್ದ ಘೋರಿಮಹಮ್ಮದ್ನನ್ನು ಎದುರಿಸಿದ ಪೃಥ್ವಿರಾಜ ತರೈನ್ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮಹಮ್ಮದ್ನನ್ನು ಸೋಲಿಸಿ ಓಡಿಸಿದನು. ಈ ಯುದ್ಧದಲ್ಲಿ ಗಾಯಗೊಂಡ ಮಹಮ್ಮದ್ ಘೋರ್ಗೆ ಮರಳಿದ ನಂತರ ಮರುವರ್ಷ ಮತ್ತೆ ದೆಹಲಿಯ ಕಡೆಗೆ ದಂಡೆತ್ತಿ ಬಂದು ಹಿಂದೆ ಯುದ್ಧ ನಡೆದಿದ್ದ ತರೈನ್ನಲ್ಲಿಯೇ ಪೃಥ್ವಿರಾಜನನ್ನು ಸೋಲಿಸಿದನು. ರಜಪೂತರ ಕೊಡುಗೆಗಳು ಜಯದೇವನ ‘ಗೀತಗೋವಿಂದ’, ಭಾರವಿಯ ‘ಕಿರಾತಾರ್ಜುನೀಯ’, ಭರ್ತೃಹರಿಯ ‘ರಾವಣ ವಧಾ’, ಮಹೇಂದ್ರಪಾಲನ ‘ಕಾವ್ಯ ಮೀಮಾಂಸೆ’ ಕಾವ್ಯಗಳು ಇವರ ಕಾಲದಲ್ಲಿ ರಚನೆಯಾದವು. ನಾಟಕಗಳಾದ ರಾಜಶೇಖರ ರಚಿಸಿದ ‘ಬಾಲ ರಾಮಾಯಣ’ ಮತ್ತು ‘ಕರ್ಪೂರ ಮಂಜರಿ’, ಭವಭೂತಿ ರಚಿಸಿದ ‘ಮಹಾವೀರಚರಿತ’, ಹಾಗೂ ‘ಉತ್ತರರಾಮಚರಿತ’, ಐತಿಹಾಸಿಕ ಕೃತಿಗಳಾದ ಕಲ್ಹಣನ ‘ರಾಜ ತರಂಗಿಣಿ’, ಜಯನಿಕನ ‘ಪೃಥ್ವಿರಾಜ ವಿಜಯ’ ಮತ್ತು ಹೇಮಚಂದ್ರನ ‘ಕುಮಾರಪಾಲಚರಿತ’ ಮಹತ್ವದ್ದಾಗಿವೆ. ರಜಪೂತ ಅರಸರ ಜೀವನ ಕೃತಿಗಳಾದ ‘ಪೃಥ್ವಿರಾಜ ರಾಸೋ’ವನ್ನು ಚಂದ್ ಬರದಾಯಿ ಮತ್ತು ‘ಭೋಜ ಪ್ರಬಂಧ’ವನ್ನು ಬಲ್ಲಾಳ ಎಂಬುವರು ರಚಿಸಿದರು.
ಟರ್ಕರ ಆಗಮನ: ಟರ್ಕರು ಮಧ್ಯ ಏಷ್ಯಾ ಭೂಭಾಗದಲ್ಲಿರುವ ಮಂಗೋಲಿಯಾದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಅಲೆಮಾರಿ ಬುಡಕಟ್ಟುಗಳಿಗೆ ಸೇರಿದವರು. ಈ ಮೂಲಕ್ಕೆ ಸೇರಿದ ಅಲಪ್ತ್ಗೀನ್ ಎಂಬುವವನು ಅಫ್ಘಾನಿಸ್ತಾನದ ‘ಘಜನಿ’ ಪ್ರದೇಶದಲ್ಲಿ ಸಾ.ಶ. 963ರಲ್ಲಿ ಸ್ವತಂತ್ರ ರಾಜ್ಯವನ್ನು ಕಟ್ಟಿದನು. ಇವನ ಕಾಲದಿಂದಲೇ ಘಜ್ನಿಯ ಟರ್ಕರಿಗೂ ಮತ್ತು ರಜಪೂತ ರಾಜರ ನಡುವೆ ಯುದ್ಧಗಳು ಆರಂಭವಾದವು.
ಮಹಮ್ಮದ್ ಘಜ್ನಿ: ಅಲಪ್ತ್ಗೀನ್ನ ನಂತರ ಸಾ.ಶ.999ರಲ್ಲಿ ಘಜ್ನಿಯ ಸಿಂಹಾಸನವೇರಿದ ಮಹಮ್ಮದ್, ಟರ್ಕರ ಆಕ್ರಮಣವನ್ನು ಮುಂದುವರಿಸಿ ಭಾರತದ ಮೇಲೆ ಹದಿನೇಳು ಬಾರಿ ದಾಳಿಗಳನ್ನು ಮಾಡಿದನು. ಇವನ ದಾಳಿಗೆ ಪ್ರಖ್ಯಾತವಾದ ಗುಜರಾತಿನ ಸೋಮನಾಥ, ಸೌರಾಷ್ಟ್ರದ ದೇವಾಲಯಗಳು ನಾಶವಾದವು. ಇಡೀ ಪಶ್ಚಿಮ ಭಾರತದಲ್ಲಿದ್ದ ರಜಪೂತ ರಾಜ್ಯಗಳು ಜರ್ಝರಿತವಾದವು.
ಮಹಮ್ಮದ್ ಘೋರಿ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಶಾನ್ಸ್ಬಾನಿ ಮನೆತನಕ್ಕೆ ಸೇರಿದ ಟರ್ಕರ ಸಂತತಿಯೊಂದು ಪ್ರಾಬಲ್ಯಕ್ಕೆ ಬಂದು ಘಜ್ನಿ ಮನೆತನವನ್ನು ಕೊನೆಗಾಣಿಸಿತು. ಈ ಮನೆತನಕ್ಕೆ ಸೇರಿದ ಘಿಯಾಸುದ್ಧೀನ್ ಮಹಮ್ಮದ್, ಘೋರ್ ರಾಜ್ಯದ ಸಿಂಹಾಸನವೇರಿದ. ಮಹಮ್ಮದ್ನು ಹಿಂದೆ ಘಜ್ನಿ ಮಹಮ್ಮದ್ನ ಕಾಲದಿಂದ ಟರ್ಕರ ಅಧೀನದಲ್ಲಿದ್ದ ಸಿಂಧ್ ಪ್ರಾಂತ್ಯದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮುಲ್ತಾನಿಗೆ ಮುತ್ತಿಗೆ ಹಾಕುವ ಮೂಲಕ ಮೊದಲ ದಂಡಯಾತ್ರೆಯನ್ನು ಆರಂಬಿಸಿದನು. ಚೌವ್ಹಾಣ ದೊರೆ ಮೂರನೇ ಪೃಥ್ವಿರಾಜ ಟರ್ಕರನ್ನು ಎದುರಿಸಿದನು. ಸಾ.ಶ. 1191ರಲ್ಲಿ ತರೈನ್ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಪೃಥ್ವಿರಾಜನ ನಾಯಕತ್ವದಲ್ಲಿ ಒಗ್ಗೂಡಿದ ರಜಪೂತ ರಾಜರು ಮಹಮ್ಮದನನ್ನು ಸೋಲಿಸಿ ಒಡಿಸಿದರು
ದೆಹಲಿ ಸುಲ್ತಾನರು: ಮಹಮ್ಮದನ ನಿರ್ಗಮನ ನಂತರ ಅವನ ಗುಲಾಮರು, ಟರ್ಕರು ವಶಪಡಿಸಿಕೊಂಡಿದ್ದ ಭೂ ಭಾಗಗಳಲ್ಲಿ ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಾರಂಭಿಸಿದರು. ಈ ಗುಲಾಮರಲ್ಲಿ ಮಹಮ್ಮದ್ನ ವಿಶ್ವಾಸಕ್ಕೆ ಪಾತ್ರನಾಗಿ, ಅವನಿಗೆ ತೀರ ಹತ್ತಿರದಲ್ಲಿದ್ದ ಕುತ್ಬುದ್ದೀನ್ ಐಬಕ್ ಚೌವ್ಹ್ಹಾಣರ ರಾಜಧಾನಿಯಾದ ದೆಹಲಿಯನ್ನು ಹಿಡಿದು ಅದನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡನು. ಭಾರತದಲ್ಲಿದ್ದ ಇನ್ನಿತರ ಟರ್ಕ್ ಸೇನಾಧಿಪತಿಗಳು ಕುತ್ಬುದೀನ್ ಐಬಕ್ನನ್ನು ಸುಲ್ತಾನನೆಂದು ಒಪ್ಪಿಕೊಂಡರು, ಕುತ್ಬುದ್ದೀನ್ ಐಬಕ್ ಗುಲಾಮಿ ಸಂತತಿಯ ಸ್ಥಾಪಕನಾದನು.
ಗುಲಾಮಿ ಸಂತತಿ ಮಹಮ್ಮದ್ ಘೋರಿ ಗೆದ್ದಿದ್ದ ಭಾರತದ ಭೂ ಭಾಗಗಳಲ್ಲಿದ್ದ ಅವನ ಉತ್ತರಾಧಿಕಾರಿಗಳೆಲ್ಲರೂ ಗುಲಾಮರೇ ಆಗಿದ್ದರು.
ಕುತ್ಬುದ್ದೀನ್ ಐಬಕ್ ಮಿನಾರ್ ಕುತಬ್ ಮಿನಾರ್ ನಿಮಗಿದು ತಿಳಿದಿರಲಿ : ಕುತುಬ್ ಮಿನಾರ್ ದೆಹಲಿಯಲ್ಲಿರುವ ಭಾರತದ ಅತ್ಯಂತ ಎತ್ತರದ ಗೋಪುರ. ಇದನ್ನು ಕುತುಬುದ್ದೀನ್ ಐಬಕ್ ನಿರ್ಮಿಸಲು ಪ್ರಾರಂಭಿಸಿ ಇಲ್ತಮಶ್ ಪೂರ್ಣಗೊಳಿಸಿದನು. ಇದು 225 ಅಡಿ ಎತ್ತರವಾಗಿದ್ದು ಅದರ ಮೇಲೆ ಸೂಕ್ಷ್ಮ ಕೆತ್ತನೆಗಳಿವೆ. ಐದು ಅಂತಸ್ತಿನ ಕಟ್ಟಡದಲ್ಲಿ ಮೆಟ್ಟಿಲುಗಳಿವೆ. ಈತನು ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದನು. ಅಫ್ಘಾನಿಸ್ತಾನದ ತುರ್ಕಿ ಜನಾಂಗಕ್ಕೆ ಸೇರಿದ ಕುತ್ಬುದ್ದೀನ್ನನ್ನು ಬಾಲ್ಯದಲ್ಲಿ ಈತನ ಪಾಲಕರು ನಿಶಾಪುರದ ಖಾಜಿಗೆ ಗುಲಾಮನನ್ನಾಗಿ ಮಾರಿದರು. ಐಬಕನು ದೆಹಲಿಯ ಕುವ್ಹಾತ್-ಉಲ್-ಇಸ್ಲಾಂ ಮಸೀದಿಯನ್ನು ಕಟ್ಟಿಸಿದನು. ಇವನು ಅಲ್ಲಿಯೇ ಕುತುಬ್ಮಿನಾರ್ ನಿರ್ಮಿಸಲು ಪ್ರಾರಂಭಿಸಿದನು. ಇವನ ಆಸ್ಥಾನದಲ್ಲಿ ನಿಜಾಮಿ ಮತ್ತು ಪಖ್-ಇ-ಮುದಬ್ಬೀರಯೆಂಬ ವಿದ್ವಾಂಸರಿದ್ದರು. ‘ತಾಜುಲ್ ಮಾಸಿರ್’ ಐಬಕ್ನ ಬಗ್ಗೆ ಮಾಹಿತಿ ನೀಡುವ ಕೃತಿಯಾಗಿದೆ. ಇಲ್ತಮಶ್ಇ ಲ್ಬರಿ ಕುಟುಂಬಕ್ಕೆ ಸೇರಿದ ಈತನು ಕುತ್ಬುದ್ದೀನ್ನ ಗುಲಾಮನಾಗಿದ್ದನು. ಗ್ವಾಲಿಯರ್ನಲ್ಲಿ ಆಡಳಿತಗಾರನಾಗಿದ್ದ ಇವನು ಐಬಕ್ನ ಉತ್ತರಾಧಿಕಾರಿಯಾದನು. ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಮಂಗೋಲರು ಚೆಂಗೀಸ್ ಖಾನನ ನೇತೃತ್ವದಲ್ಲಿ ದಾಳಿ ಮಾಡಿದರು. ಇಲ್ತಮಶ್ ಅವರನ್ನು ಯಶಸ್ವಿಯಾಗಿ ಹಿಮ್ಮೆಟಿಸಿದನು. ಈ ಸಾಧನೆಗಳಿಂದಾಗಿ ಬಾಗ್ದಾದಿನ ಖಲೀಫನು ಇಲ್ತಮಶ್ನಿಗೆ ಅಧಿಕೃತ ಅಧಿಕಾರ ಸಮ್ಮತಿ ಪತ್ರ ನೀಡಿದನುಇಲ್ತಮಶ್ ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ. ಆಡಳಿತ ನಿರ್ವಹಣೆಗಾಗಿ ಇಕ್ತಾದಾರರನ್ನು ನೇಮಿಸಿದನು. ಆಡಳಿತದಲ್ಲಿ ಸಲಹೆ ಸೂಚನೆ ನೀಡಲು ‘ನಲವತ್ತು ಸರದಾರರ ಕೂಟ’ ನೇಮಕ ಮಾಡಿದನು. ಇವನು ಕುತ್ಬುದ್ದೀನನ ಕಾಲದಲ್ಲಿ ನಿರ್ಮಿಸಿಲು ಪ್ರಾರಂಭವಾಗಿದ್ದ ದೆಹಲಿಯ ಕುತುಬ್ಮಿನಾರನ್ನು ಪೂರ್ಣಗೊಳಿಸಿದನು.
ರಜಿಯಾ ಸುಲ್ತಾನಾ ಇಲ್ತಮಶ್ನ ಪುತ್ರ ರುಕ್ಬುದ್ದೀನ್ ಫಿರೋಜ್ ಅಸಮರ್ಥನಾದ್ದರಿಂದ ಅವನ ಪುತ್ರಿ ರಜಿಯಾ ಬೇಗಂ ಆತನ ಉತ್ತರಾಧಿಕಾರಿಯಾದಳು. ದೆಹಲಿ ಸಿಂಹಾಸನವನ್ನೇರಿದ ಪ್ರಥಮ ಮಹಿಳೆ, ಸುಲ್ತಾನಾ ಎಂಬ ಬಿರುದು ಪಡೆದು ಪುರುಷನಂತೆ ವೇಷ ಧರಿಸಿ, ಯುದ್ಧದಲ್ಲಿ ಭಾಗವಹಿಸುತ್ತಿದ್ದಳು. ಘಿಯಾಸ್-ಉದ್-ದೀನ್ ಬಲ್ಬನ್ ದೆಹಲಿಯ ಇಲ್ತಮಶ್ನಿಗೆ ಗುಲಾಮನಾಗಿದ್ದ ಬಲ್ಬನ್ ತನ್ನ ಸ್ವಾಮಿನಿಷ್ಠೆ, ಬುದ್ಧಿಮತ್ತೆ, ಸದ್ಗುಣಗಳಿಂದ ಟರ್ಕಿ ಗುಲಾಮರ ಕೂಟದ ಸದಸ್ಯನಾದನು. ರಜಿಯಾ ಸುಲ್ತಾನಳ ಆಸ್ಥಾನದಲ್ಲಿ ಅಮೀರ್-ಇ-ಶಿಕಾರ್ ಎಂಬ ಹುದ್ದೆಗೆ ನೇಮಿಸಲ್ಪಟ್ಟನು. ತನ್ನನ್ನು ದೇವರ ಪ್ರತಿನಿಧಿಯೆಂದು ಸಾರಿ ನಿರಂಕುಶ ರಾಜಪ್ರಭುತ್ವ ಜಾರಿಗೆ ತಂದನು. ಅನುಭವಿ ಹಾಗೂ ವಿಶ್ವಾಸಾರ್ಹ ಸೇನಾಪತಿಗಳ ನೇತೃತ್ವದಲ್ಲಿ ಸೈನ್ಯವನ್ನು ಪುನರ್ ಸಂಘಟಿಸಿದನು. ಮಂಗೋಲರ ದಾಳಿ ತಡೆಗಟ್ಟಲು ವಾಯುವ್ಯ ಗಡಿ ಭಾಗದಲ್ಲಿ ಕೋಟೆಗಳನ್ನು ಕಟ್ಟಿಸಿದನು. ದಕ್ಷ ಆಡಳಿತಗಾರನಾಗಿದ್ದ ಬಲ್ಬನ್ನನ ನಂತರ ಕೈಕುಬಾದನು ಸುಲ್ತಾನನಾದನು. ಆದರೆ ತನ್ನ ವಜೀರನಿಂದ ಕೊಲೆಯಾದನು. ಅಲ್ಲಿಗೆ ಗುಲಾಮ ಸಂತತಿಯ ಆಡಳಿತ ಅಂತ್ಯಗೊಂಡಿತು.
ಖಿಲ್ಜಿ ಸಂತತಿ (ಸಾ.ಶ. 1290-1320) ಖಿಲ್ಜಿ ಸಂತತಿಯನ್ನು ಜಲಾಲುದ್ದೀನನು ಸ್ಥಾಪಿಸಿದನು. ಅಲ್ಲಾವುದ್ದೀನ್ ಖಿಲ್ಜಿ: ಈತನು ಬಾಲ್ಯದಲ್ಲಿ ಜಲಾಲುದ್ದೀನ್ನ ಆಶ್ರಯದಲ್ಲಿ ಬೆಳೆದನು. ಶೂರ ಯೋಧನಾದ ಇವನು ರಾಜ್ಯಪಾಲನಾಗಿ ಹಾಗೂ ದಂಡನಾಯಕನಾಗಿ ಸೇವೆ ಸಲ್ಲಿಸಿದನು. ಇವನ ಕಾಲದಲ್ಲಿ ದಕ್ಷಿಣ ಭಾರತದ ದಂಡೆಯಾತ್ರೆ ಯಶಸ್ವಿಗೊಳಿಸಿದ ಕೀರ್ತಿ ಈತನ ದಂಡನಾಯಕ ಮಲಿಕ್ಕಾಫರ್ನಿಗೆ ಸಲ್ಲುತ್ತದೆ. ದೇವಗಿರಿ, ವಾರಂಗಲ್, ದ್ವಾರಸಮುದ್ರ ಮತ್ತು ಮಧುರೈಗಳ ಮೇಲೆ ದಾಳಿ ನಡೆಸಿ ಅವುಗಳ ಅವನತಿಗೆ ಕಾರಣನಾದನು. ಮುಂದೆ ಘಾಜಿ ಮಲಿಕ್ (ಘಿಯಾಸುದ್ದೀನ್ ತುಘಲಕ್) ಖುಸ್ರುವನ್ನು ಕೊಂದು ತುಘಲಕ್ ಸಂತತಿ ಸ್ಥಾಪಿಸಿದನುಸೈನಿಕರ ಚಹರೆಗಳನ್ನು ಗುರ್ತಿಸಿ ದಾಖಲು ಮಾಡಿಕೊಳ್ಳುವ ಪದ್ಧತಿ ಆರಂಭವಾಯಿತು. ಈ ಕಾರ್ಯಕ್ಕಾಗಿ ಹುಲಿಯ ಎನ್ನುವ ಹೆಸರಿನ ದಸ್ತಾವೇಜುಗಳನ್ನು ಚಾಲ್ತಿಗೆ ತರಲಾಯಿತು. ಕುದುರೆಗಳಿಗೆ ‘ದಾಗ್’ಅಂದರೆ ಮುದ್ರೆಹಾಕುವುದು ಜಾರಿಗೆ ಬಂದಿತು. ಮಾರುಕಟ್ಟೆಗಳನ್ನು ನಿಯಂತ್ರಿಸಲು ‘ಸಹನಾ-ಇ-ಮಂಡಿ’ಯೆಂಬ ಉನ್ನತಾಧಿಕಾರಿಯನ್ನು ನೇಮಕ ಮಾಡಿದನು. ದೋ-ಅಬ್ ಎರಡು ನದಿಗಳ ನಡುವಣ ಪ್ರದೇಶವನ್ನು ದೋ-ಅಬ್ ಎನ್ನುತ್ತಾರೆ.
ಉದಾ: ಗಂಗಾ-ಯಮುನ ದೋ-ಅಬ್.
ತುಘಲಕ್ ಸಂತತಿ (ಸಾ.ಶ. 1320-1399) ತುಘಲಕ್ ಸಂತತಿಯನ್ನು ಘಿಯಾಸುದ್ದೀನ್ ಸ್ಥಾಪಿಸಿದನು. ದೆಹಲಿ ಬಳಿ ತುಘಲಕಾಬಾದ್ ಕೋಟೆ ಕಟ್ಟಿಸಿದನು
ಮಹಮ್ಮದ್ ಬಿನ್ ತುಘಲಕ್ ಈತನು ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು. ಗಣಿತ, ಭೌತವಿಜ್ಞಾನ,ವೈದ್ಯಶಾಸ್ತ್ರ, ಪರ್ಶಿಯನ್ ಕಾವ್ಯ, ಖಗೋಳಶಾಸ್ತ್ರ ಮುಂತಾದ ವಿಷಯಗಳಲ್ಲಿ ಪರಿಣಿತಿ ಪಡೆದಿದ್ದನು. ಅಪಾರ ಜ್ಞಾನ ಹೊಂದಿದ್ದರೂ, ಆತನ ವ್ಯಕ್ತಿತ್ವದಲ್ಲಿ ಕೆಲವು ಅಸಹಜತೆಗಳಿದ್ದವು. ಕೃಷಿ ಇಲಾಖೆಯನ್ನು ಸ್ಥಾಪಿಸಿದನುರೈತರಿಗೆ ಆರ್ಥಿಕ ನೆರವು ನೀಡಲು ತಕಾವಿ ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದನು.
1. ಖರಜ್ - ಮುಸ್ಲಿಮೇತರ ಮೇಲಿನ ಭೂ ತೆರಿಗೆ
2. ಉಶ್ರ್ - ಮುಸ್ಲಿಮರ ಮೇಲಿನ ಕೃಷಿ ತೆರಿಗೆ
3. ಜಕಾತ್ - ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ
4. ಜೆಸಿಯಾ - ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ
ರಾಜಧಾನಿಯ ವರ್ಗಾವಣೆ : ಮಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ಮಧ್ಯ ಭಾರತದಲ್ಲಿದ್ದ ದೇವಗಿರಿಗೆ ವರ್ಗಾಯಿಸಿದನು. ಇದರ ಮುಖ್ಯ ಉದ್ದೇಶ ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರಭಾಗದಲ್ಲಿರಬೇಕು ಹಾಗೂ ಪರಕೀಯ ದಾಳಿಗಳಿಂದ ರಕ್ಷಿಸಲು ಅನುಕೂಲವಾಗಿರಬೇಕೆಂಬುದಾಗಿತ್ತು. ನಾಣ್ಯಗಳನ್ನು ಟಂಕಿಸುವುದು ಸರ್ಕಾರದ ಏಕಸ್ವಾಮ್ಯವಾಗಿರಲಿಲ್ಲ. ಪರಂಪರಾನುಗತವಾಗಿ ನಾಣ್ಯಗಳನ್ನು ಟಂಕಿಸುವ ಹಕ್ಕನ್ನು ಹೊಂದಿದ್ದ ಮನೆತನಗಳಿದ್ದವು. ಸುಲ್ತಾನನ ಅನುಮತಿ ಪಡೆಯದೆ ಅಗತ್ಯಕ್ಕಿಂತ ಹೆಚ್ಚು ನಾಣ್ಯಗಳನ್ನು ಟಂಕಿಸಿದ್ದರಿಂದ ಅವ್ಯವಸ್ಥೆ ಉಂಟಾಯಿತು. ಸಯ್ಯದ್ ಸಂತತಿ ( ಸಾ.ಶ. 1414-1451) ತುಘಲಕರ ನಂತರ ಸಯ್ಯದ್ ಸಂತತಿ ಪ್ರವರ್ದಮಾನಕ್ಕೆ ಬಂದಿತು. ಮುಲ್ತಾನದ ರಾಜ್ಯಪಾಲನಾಗಿದ್ದ ಖಿಜರ್ಖಾನ್ಸಯ್ಯದ್ ದೆಹಲಿಯನ್ನು ವಶಪಡಿಸಿಕೊಂಡು ಈ ಸಂತತಿಯ ಆಡಳಿತಕ್ಕೆ ಬುನಾದಿ ಹಾಕಿದನು. ಅಲಂ ಷಾನನ್ನು ಬಹಲೋಲ್ ಲೋಧಿ ಸೋಲಿಸಿ ಸಯ್ಯದ್ ಸಂತತಿಯ ಆಡಳಿತವನ್ನು ಅಂತ್ಯಗೊಳಿಸಿದನು.
ಲೋದಿ ಸಂತತಿ (ಸಾ.ಶ. 1451-1526) ಇದು ದೆಹಲಿಯನ್ನಾಳಿದ ಕೊನೆಯ ಸುಲ್ತಾನ ಸಂತತಿ. ಬಹುಲೋಲ್ ಲೋದಿ, ಸಿಕಂದರ್ ಲೋದಿ ಮತ್ತು ಇಬ್ರಾಹಿಂ ಲೋದಿ ಈ ಸಂತತಿಯ ಸುಲ್ತಾನರು. ಭಾರತದ ಮೇಲೆ ದಾಳಿ ಮಾಡುವಂತೆ ರಾಜ್ಯಪಾಲರಾದ ಆಲಂಖಾನ್ ಮತ್ತು ದೌಲತ್ಖಾನ್ ಮೊಘಲರಿಗೆ ಆಮಂತ್ರಣ ನೀಡಿದರು. ಅದರಂತೆ ಬಾಬರ್ ಭಾರತದ ಮೇಲೆ ದಾಳಿ ಮಾಡಿ ಸಾ.ಶ. 1526ರಲ್ಲಿ ನಡೆದ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ ಮೊಘಲರ ಆಳ್ವಿಕೆ ಪ್ರಾರಂಭಿಸಿದನುಸುಲ್ತಾನರ ಕಾಲದಲ್ಲಿ ಖರಾಜ್ (ಭೂತೆರಿಗೆ), ಜಕಾತ್, ಉಶ್ರು, ಖಮ್ಸ್ (ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತಿನ ತೆರಿಗೆ) ಜೆಸಿಯ, ವಾರಸುದಾರಿಲ್ಲದ ಆಸ್ತಿ ಮೇಲೆ ತೆರಿಗೆ, ಆಮದು ಸುಂಕ, ಮನೆ ತೆರಿಗೆ ಮುಂತಾದವುಗಳು ವರಮಾನದ ಪ್ರಮುಖ ಮೂಲಗಳಾಗಿದ್ದವುಮಹಮ್ಮದ್ ಘಜ್ನಿಯ ಆಸ್ಥಾನದಲ್ಲಿ ಆಲ್ಬೆರೂನಿ ಎಂಬ ಪ್ರಸಿದ್ಧ ವಿದ್ವಾಂಸನಿದ್ದನು. ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ವಿಷಯಗಳನ್ನೊಳಗೊಂಡ `ಕಿತಾಬುಲ್ ಹಿಂದ್’ ಕೃತಿಯನ್ನು ರಚಿಸಿದನುಅಮೀರ್ ಖುಸ್ರು ಆರು ಪ್ರಮುಖ ಗ್ರಂಥಗಳನ್ನು ರಚಿಸಿ ಹಿಂದೂ-ಮುಸ್ಲಿಂ ಸಂಸ್ಕøತಿಯ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಈತನನ್ನು ‘ಭಾರತದ ಗಿಳಿ’ ಎಂದು ಕರೆಯಲಾಗಿತ್ತು. ಜಿಯಾಯುದ್ದೀನ್ ಬರನಿಯು ‘ತಾರಿಖ್-ಇ-ಫಿರೋಜ್ಷಾಹಿ’ ಹಾಗೂ ಫಿರೋಜ ತುಘಲಕ್ನು ‘ಪುತುಹತ್-ಇ- ಫಿರೋಜ್ಷಾಹಿ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ಕಲೆ ಮತ್ತು ವಾಸ್ತುಶಿಲ್ಪ: ದೆಹಲಿ ಸುಲ್ತಾನರು ಭಾರತದಲ್ಲಿ ‘ಇಂಡೋ-ಇಸ್ಲಾಮಿಕ್’ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು. ಕಮಾನುಗಳು, ಗುಮ್ಮಟಗಳು ಹಾಗೂ ಮಿನಾರ್ಗಳು ಈ ಶೈಲಿಯ ಮುಖ್ಯ ಲಕ್ಷಣಗಳು,
ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು
ಶಂಕರಾಚಾರ್ಯರು – ಅದ್ವೈತ ಶಂಕರಾಚಾರ್ಯರು ಶಂಕರರು ಕೇರಳದ ಕಾಲಡಿ ಗ್ರಾಮದ ನಂಬೂದರಿ
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶಿವಗುರು, ತಾಯಿ ಆರ್ಯಾಂಬ..ಶಂಕರರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಆಳವಾದ ಅಧ್ಯಯನ ಮಾಡಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
‘ಅದ್ವೈತ’ ಎಂದರೆ ಏಕ ಅಥವಾ ಒಂದೇ ಎಂದರ್ಥ. ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲವೆಂದು ಪ್ರತಿಪಾದಿಸಿದ ಶಂಕರರು ಇದನ್ನೇ “ನಾನೇ ಬ್ರಹ್ಮನು” ಅಥವಾ “ಅಹಂಬ್ರಹ್ಮಾಸ್ಮಿ” ಎಂಬುದಾಗಿ ಪ್ರತಿಪಾದಿಸಿ ಸಕಲ ಜೀವರಾಶಿಗಳಲ್ಲಿರುವ ಚೇತನ ಶ್ರೇಷ್ಠವಾದದು ಎಂದು ಪ್ರತಿಪಾದಿಸುವ ಮೂಲಕ ಅಸ್ತಿತ್ವದ ನೆಲೆಯಲ್ಲಿ ಸಮಾನತೆಯನ್ನು ಬೋಧಿಸಿದರು.
ಶಂಕರರು ರಚಸಿದ ಗ್ರಂಥಗಳು: ಶಂಕರಭಾಷ್ಯ, ಆನಂದಲಹರಿ, ಸೌಂದರ್ಯ ಲಹರಿ, ಶಿವಾನಂದ ಲಹರಿ, ವಿವೇಕ ಚೂಡಾಮಣಿ, ಪ್ರುಬುದ್ಧ ಸುಧಾಕರ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರ ಮುಖ್ಯವಾದ ಗ್ರಂಥಗಳು.
ಶಂಕರರ “ಭಜಗೋವಿಂದಂ” ಸ್ತೋತ್ರವು ಅತ್ಯಂತ ಜನಪ್ರಿಯವಾಗಿದೆ
ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು
1. ಬದರಿ-ಜ್ಯೋತಿರ್ಪೀಠ
2. ದ್ವಾರಕಾ - ಕಾಳಿಕಾ ಪೀಠ
3. ಪುರಿ-ಗೋವರ್ಧನ ಪೀಠ
4. ಶೃಂಗೇರಿ- ಶಾರದಾಪೀಠ
5. ಕಂಚಿ-ಕಾಮಕೋಟಿ ಪೀಠ.
ರಾಮಾನುಜಾಚಾರ್ಯರು - ವಿಶಿಷ್ಟಾದ್ವೈತ ರಾಮಾನುಜಾಚಾರ್ಯರು ರಾಮಾನುಜಾಚಾರ್ಯರು ತಮಿಳುನಾಡಿನ ಚೆನ್ನೈನ ಸಮೀಪ ಶ್ರೀ ಪೆರಂಬದೂರ್ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕೇಶವ
ಸೋಮಯಾಜಿ ತಾಯಿ ಕಾಂತೀಮತಿಶೈವ ಧರ್ಮಾವಲಂಬಿಯಾದ ಚೋಳ ದೊರೆಯು ರಾಮಾನುಜಾಚಾರ್ಯರಿಗೆ ಕಿರುಕುಳ ನೀಡುತ್ತಿದ್ದ. ಆಗ ಕರ್ನಾಟಕ ಭಾಗದ ಹೊಯ್ಸಳ ದೊರೆ ಬಿಟ್ಟಿದೇವನು ಇವರನ್ನು ಸ್ವಾಗತಿಸಿದನು. ನಂತರ ದೊರೆ ಬಿಟ್ಟಿದೇವನು ವೈಷ್ಣವ ಸಂಪ್ರದಾಯಕ್ಕೆ ಮತಾಂತರಗೊಂಡು ವಿಷ್ಣುವರ್ಧನ ಎಂಬ ಹೆಸರು ಪಡೆದನೆಂದು ಹೇಳಲಾಗುತ್ತದೆ. ರಾಮಾನುಜರು ಮೇಲುಕೋಟೆಗೆ ತೆರಳಿ ಚೆಲುವನಾರಾಯಣನ ದೇವಾಲಯವನ್ನು ನಿರ್ಮಿಸಿದರು. ರಾಮಾನುಜಾಚಾರ್ಯರು ಜನಸಾಮಾನ್ಯರಿಗೆ ಮುಕ್ತಿಮಾರ್ಗವನ್ನು ತೋರಿಸಲು ಅತೀವ ಆಸಕ್ತಿವಹಿಸಿದರು. ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು “ವಿಶಿಷ್ಟಾದ್ವೈತ” ಎಂದು ಕರೆಯಲಾಗುವುದು. ರಾಮಾನುಜರು ಶಾಸ್ತ್ರಗಳ ಅಧ್ಯಯನ ಮಾಡಿ, ಅನೇಕ ಕೃತಿಗಳನ್ನು ರಚಿಸಿದರು. ವೇದಾಂತ ಸಂಗ್ರಹ, ವೇದಾಂತಸಾರ, ವೇದಾಂತ ದೀಪಿಕ, ಶ್ರೀಭಾಷ್ಯ ಹಾಗೂ ತಮ್ಮ ಮಹತ್ವಪೂರ್ಣ ಗ್ರಂಥವಾದ “ಗೀತಾಭಾಷ್ಯ”ದಲ್ಲಿ ಭಕ್ತಿ ತತ್ವಕ್ಕೆ ಅನನ್ಯತೆಯನ್ನು ಮತ್ತು ಪ್ರಾಧಾನ್ಯತೆಯನ್ನು ತಂದುಕೊಟ್ಟಿದ್ದಾರೆ. ವಿಜಯನಗರದ ತುಳುವ ಮತ್ತು ಅರವೀಡು ವಂಶದ ದೊರೆಗಳು ಈ ತತ್ವದ ಅನುಯಾಯಿಗಳಾದರು
ದಕ್ಷಿಣ ಭಾರತದಲ್ಲಿನ ಕೆಲವು ಪ್ರಮುಖ ಶ್ರೀ ವೈಷ್ಣವ ಮಠಗಳು.
1) ಯತಿರಾಜ ಮಠ - ಮೇಲುಕೋಟೆ ಮತ್ತು ಶ್ರೀಪೆರಂಬದೂರು
2) ಪರಕಾಲ (ಬ್ರಹ್ಮತಂತ್ರ) ಮಠ - ಮೈಸೂರು
3) ಅಹೋಬಲ ಮಠ - ಅಹೋಬಲ, (ಗುಂಟೂರು, ಆಂಧ್ರ ಪ್ರದೇಶ)
4) ಆಂಡವನ್ ಮಠ - ಶ್ರೀರಂಗಂ
5) ವಾಮೈಮಲೈ ಮಠ - ಸುಚೀಂದ್ರಂ
ಮಧ್ವಾಚಾರ್ಯರು – ದ್ವೈತ ಮಧ್ವಾಚಾರ್ಯರು ಮಧ್ವಾಚಾರ್ಯರು ಕರ್ನಾಟಕದ ಉಡುಪಿ ಬಳಿ ಪಾಜಕದಲ್ಲಿ ಜನಿಸಿದರು. ಮಧ್ವಗೇಹಭಟ್ಟ ಮತ್ತು ವೇದಾವತಿ ಇವರ ತಂದೆ-ತಾಯಿಗಳು. ವಿಷ್ಣು ಇವರ ಆರಾಧ್ಯ ದೈವ. ಇವರು ‘ದ್ವೈತ’ ಸಿದ್ಧಾಂತವನ್ನು ಪ್ರತಿಪಾದಿಸಿದರು. ದ್ವೈತ ಎಂದರೆ ಎರಡು ಎಂದರ್ಥ. ಹಡಗಿನ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಶ್ರೀಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿದರು.
ಮಧ್ವರು ಸ್ಥಾಪಿಸಿದ ಅಷ್ಟಮಠಗಳು: ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣೆಯೂರ ಮತ್ತು ಪೇಜಾವರ ಮಠಗಳು.
ಬಸವೇಶ್ವರರು
ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾgಬಸವೇಶ್ವರರು ಈಗಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರು. ತಮ್ಮ ಕಾರ್ಯದಕ್ಷತೆಯಿಂದ ಬಸವೇಶ್ವರರು ಕಲಚೂರಿ ಅರಸ ಬಿಜ್ಜಳನ ಭಂಡಾರದ ಅಧಿಕಾರಿಯಾಗಿದ್ದರುಬಸವೇಶ್ವರರು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ `ಅನುಭವ ಮಂಟಪ’ ಎಂಬ ಹೆಸರಿನ ಒಂದು ಶರಣರ ಆಧ್ಯಾತ್ಮ ಕೇಂದ್ರವನ್ನು ಆರಂಭಿಸಿದರು.
ವಿಜಯನಗರ ಮತ್ತು ಬಹಮನಿ ರಾಜ್ಯ
ಹಕ್ಕ-ಬುಕ್ಕರು ಸಾ.ಶ. 1336ರಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಈ ರಾಜ್ಯವನ್ನು ಸ್ಥಾಪಿಸಿದರು. ಮುಂದೆ ಹಂಪೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಯಿತು.
ಬುಕ್ಕರಾಯ
ಮಧುರೈಯ ಸುಲ್ತಾನನನ್ನು ಪದಚ್ಯುತಗೊಳಿಸಿ ಬುಕ್ಕನ ಪುತ್ರ ಕಂಪಣನು ಸಾಮ್ರಾಜ್ಯವನ್ನು ವಿಸ್ತರಿಸಿದನು. ಈ ದಿಗ್ವಿಜಯದ ಬಗ್ಗೆ ಗಂಗಾದೇವಿ ಬರೆದ ‘ಮಧುರಾವಿಜಯಂ’ ಸಂಸ್ಕøತ ಕೃತಿಯು ಹೆಚ್ಚಿನ ವಿವರಣೆ ನೀಡುತ್ತದೆ. ಕೊಚೀನಾ ದೇಶದ ಮಿಂಗ್ ವಂಶದ ಸಾಮ್ರಾಟನ ಆಸ್ಥಾನಕ್ಕೆ ಬುಕ್ಕರಾಯ ರಾಯಭಾರಿಯನ್ನು ಕಳುಹಿಸಿದ್ದನು.
ಎರಡನೆಯ ದೇವರಾಯ (ಪ್ರೌಢದೇವರಾಯ) (1424-1446) ಇವನಿಗೆ ಪ್ರತಾಪರುದ್ರ ಎನ್ನುವ ಮತ್ತೊಂದು ಹೆಸರೂ ಇತ್ತು. ಸಂಗಮ ವಂಶದಲ್ಲಿಯೇ ಶ್ರೇಷ್ಠ ದೊರೆ ಎರಡನೆಯ ದೇವರಾಯ (ಪ್ರೌಢದೇವರಾಯ). ಈತ ‘ಗಜ ಬೇಂಟೆಕಾರ’ ಎಂಬ ಬಿರುದು ಸಹ ಧರಿಸಿದ್ದ. ಎರಡನೆಯ ದೇವರಾಯನು ಒರಿಸ್ಸಾದ ಗಜಪತಿ ಕಪಿಲೇಂದ್ರನನ್ನು ಸೋಲಿಸಿ ಕೊಂಡವೀಡನ್ನು ಗೆದ್ದುಕೊಂಡನು. ಗಡಿ ಪ್ರದೇಶದ ನಾಯಕರುಗಳನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದ. ನಂತರ ಕೇರಳವನ್ನು ಗೆದ್ದು, ಕೇರಳ, ಶ್ರೀಲಂಕಾದಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು. ಇದರಿಂದ “ದಕ್ಷಿಣಾಪಥದ ಚಕ್ರವರ್ತಿ” ಎನಿಸಿದನ್ಯೂನಿಜ್ನ ಪ್ರಕಾರ ಪ್ರೌಢದೇವರಾಯನಿಗೆ ಸಿಲೋನ್, ಪುಲಿಕಾಟ್, ಪೆಗು, ತೆನಾಸ್ಸೆರಿಂ (ಬರ್ಮಾ ಭಾಗ) ಮತ್ತು ಮಲಯದ ರಾಜರು ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು. ಪರ್ಷಿಯಾ ದೇಶದ ರಾಯಭಾರಿ ಅಬ್ದುಲ್ ರಝಾಕ್ ಸಾ.ಶ. 1443 ಏಪ್ರಿಲ್ ಕೊನೆಯಲ್ಲಿ ವಿಜಯನಗರ ರಾಜಧಾನಿ ಯಲ್ಲಿದ್ದು, ಇದರ ವೈಭವದಿಂದ ಪ್ರಭಾವಿತನಾಗಿ ಹೇಳಿದ ಮಾತುಗಳು ಈ ಕೆಳಗಿವೆ. “ವಿಜಯನಗರದಂತಹ ನಗರವನ್ನು ಕಣ್ಣು ಕಂಡಿಲ್ಲ ಮತ್ತು ಕಿವಿ ಕೇಳಿಲ್ಲ. ಏಕೆಂದರೆ ಇದಕ್ಕೆ ಸರಿದೂಗುವ ಪಟ್ಟಣವೇ ಪ್ರಪಂಚದಲ್ಲಿ ಕಾಣಲಾಗದು”.
ಕೃಷ್ಣದೇವರಾಯ (ಸಾ.ಶ. 1509-1529)
ತುಳುವ ಸಂತತಿಯ ನರಸನಾಯಕನ ಹಾಗೂ ಎರಡನೆಯ ಸತಿ ನಾಗಲಾಂಬಿಕೆಯ ಪುತ್ರನಾದ ಕೃಷ್ಣದೇವರಾಯನು ವಿಜಯನಗರ ಸಾಮ್ರಾಜ್ಯದ ಅರಸರಲ್ಲಿಯೇ ಅತ್ಯಂತ ಶ್ರೇಷ್ಠ ದೊರೆ. ಇವನ ಆಳ್ವಿಕೆಯ ಅವಧಿಯಲ್ಲಿ ವಿಜಯನಗರವು ತನ್ನ ಸಾಧನೆಗಳ ಪರಾಕಾಷ್ಠತೆಯನ್ನು ತಲುಪಿತು ಕೃಷ್ಣದೇವರಾಯನು ಬಂಧನದಲ್ಲಿದ್ದ ಮಹಮದ್ ಶಾಹನನ್ನು ಬಿಡುಗಡೆಗೊಳಿಸಿ ಬಹಮನಿಯ ರಾಜನನ್ನಾಗಿಸಿದನು. ಹಾಗಾಗಿ ‘ಯವನರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದು ಧರಿಸಿದನು. ಒರಿಸ್ಸಾದ ಗಜಪತಿ ಪ್ರತಾಪರುದ್ರದೇವನ ದಕ್ಷಿಣ ಭಾಗಗಳು. ಒಡಿಸ್ಸಾದ ಗಜಪತಿ ಶರಣಾಗಿ ತನ್ನ ಮಗಳನ್ನು ಕೃಷ್ಣದೇವರಾಯನಿಗೆ ವಿವಾಹ ಮಾಡಿಕೊಟ್ಟನು. ಬಿಜಾಪುರದ ಇಸ್ಮಾಯಿಲ್ ಆದಿಲ್ಶಾ ರಾಯಚೂರನ್ನು 1520ರಲ್ಲಿ ವಶಪಡಿಸಿಕೊಂಡನು. ರಾಯಚೂರಿಗಾಗಿ ವಿಜಯನಗರ ಬಿಜಾಪುರ ಸುಲ್ತಾನರ ನಡುವೆ ಘೋರವಾದ ಯುದ್ಧ ನಡೆಯಿತು. ರಾಜ್ಯಾಡಳಿತ ವಿಚಾರದಲ್ಲಿ ಈತನಿಗೆ ಇದ್ದ ವ್ಯಾವಹಾರಿಕ ಜ್ಞಾನವನ್ನು ಇವನು ಬರೆದ ‘ಆಮುಕ್ತ ಮಾಲ್ಯದ’ ತೆಲುಗು ಕೃತಿಯು ತಿಳಿಸುತ್ತದೆ. ಮದುವೆಯ ಮೇಲಿನ ತೆರಿಗೆಯನ್ನು ರದ್ದುಗೊಳಿಸಿದನು. ಸ್ವತ: ಕವಿಯಾಗಿದ್ದ ಕೃಷ್ಣದೇವರಾಯ ‘ಜಾಂಬವತಿ ಕಲ್ಯಾಣ’ ಎಂಬ ನಾಟಕವನ್ನು ಸಂಸ್ಕøತ ಭಾಷೆಯಲ್ಲಿ ರಚಿಸಿದನು. ಅಲ್ಲಸಾನಿ ಪೆದ್ದಣ್ಣ, ನಂದಿ ತಿಮ್ಮಣ್ಣ, ದೂರ್ಜಟಿ, ತೆನಾಲಿರಾಮಕೃಷ್ಣ ಮುಂತಾದವರು ಆಸ್ಥಾನದ ತೆಲುಗು ಕವಿಗಳಾಗಿದ್ದರು ಕೃಷ್ಣದೇವರಾಯನು ಹಂಪೆಯಲ್ಲಿ ಕೃಷ್ಣ ದೇವಾಲಯವನ್ನು ಕಟ್ಟಿಸಿದನು. ಈತನು ತನ್ನ ಕಾಲದಲ್ಲಿ ಇನ್ನೂ
ಕೆಲವು ದೇವಾಲಯಗಳ ಜೊತೆಗೆ ಹಂಪೆಯ ವಿರೂಪಾಕ್ಷ ದೇವಾಲಯದ ಮಹಾ ರಂಗಮಂಟಪವನ್ನು ನಿರ್ಮಿಸಿದನು. ಎಲ್ಲ ಮತೀಯರು ಈತನ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹೊಂದಿದ್ದರೆಂದು ಪೆÇೀರ್ಚುಗೀಸ್ ಪ್ರವಾಸಿಗಳಾದ ಪಾಯೆಸ್ ಮತ್ತು ಬರ್ಬೋಸ ಹೇಳುತ್ತಾ, ಇವನ ಘನತೆ ಮತ್ತು ಸಾಮಥ್ರ್ಯವನ್ನು ಕೊಂಡಾಡಿದ್ದಾರೆ. ಸಾ.ಶ. 1565 ರಲ್ಲಿ ನಾಲ್ಕು ರಾಜ್ಯಗಳ ಒಕ್ಕೂಟ ಸೈನ್ಯ ವಿಜಯನಗರದ ಮೇಲೆ ದಾಳಿ ಮಾಡಿತು. ಇದರಲ್ಲಿ ರಾಮರಾಯನ ಸೈನ್ಯ ಸೋತಿತು ಮತ್ತು ಅವನು ಹತನಾದನು.
ವಿದೇಶಿ ಪ್ರವಾಸಿಗರು: ವಿಜಯನಗರ ಕಾಲಘಟ್ಟದ ಬಗೆಗೆ ತಿಳಿಯಲು ವಿದೇಶಿ ಪ್ರವಾಸಿಗರ ಕಥನÀಗಳು ಮುಖ್ಯವಾಗಿವೆÉ. ಈ ಕಾಲಘಟ್ಟದಲ್ಲಿ ಅಸಂಖ್ಯಾತ ಪ್ರವಾಸಿಗರು ವಿಜಯನಗರಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸಿ ಕಥನಗಳು ವಿಜಯನಗರದ ರಾಜಕೀಯ, ಆರ್ಥಿಕತೆ, ಸಮಾಜ ಮತ್ತು ಸಂಸ್ಕøತಿ, ಸಮಕಾಲೀನ ಇತರ ರಾಜಮನೆತನಗಳ ಕುರಿತು ಮಾಹಿತಿ ನೀಡುವುವು. ವಿಜಯನಗರಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರೆಂದರೆ,
1ನೆಯ ಹರಿಹರ - ಇಬನ್ ಬತೂತ (ಮೊರಾಕ್ಕೊ), ಪ್ರೌಢದೇವರಾಯ - ನಿಕೊಲೊ-ಡಿ-ಕೊಂತಿ
(ವೆನಿಷಿಯಾ), ಅಬ್ದುಲ್ ರಜಾಕ್ (ಪರ್ಷಿಯಾ), ನಿಕಿಟನ್ (ರಷ್ಯ), 2ನೆ ನರಸಿಂಹ - ಲೊಡೆವಿಕೊ ದಿ
ವರ್ತೆಮಾ (ಇಟಲಿ), ಕೃಷ್ಣದೇವರಾಯ - ಬಾರ್ಬೊಸಾ (ಪೆÇೀರ್ಚುಗೀಸ್), ಡೊಮಿಂಗೊ ಪಯಾಸ್
(ಪೆÇೀರ್ಚುಗೀಸ್), ಅಚ್ಯುತದೇವರಾಯ - ನ್ಯೂನಿಜ್ (ಪೆÇೀರ್ಚುಗೀಸ್), ರಕ್ಕಸತಂಗಡಿ ಯುದ್ಧದ ನಂತರಸೀಜರ್ ಫೆಡ್ರಿಕ್ (ವೆನಿಸ್), 1ನೆಯ ರಾಜ ವೆಂಕಟನ ನಿಧನನದ ನಂತರ ಬ್ಯಾರಡಸ್ (ಇಂಗ್ಲೆಂಡ್)
ಮೊದಲಾದವರು ಇವರಲ್ಲಿ ಐರೋಪ್ಯರೆ ಹೆಚ್ಚಿರುವುದಕ್ಕೆ ಕಾರಣ ಯೂರೋಪ್ನಿಂದ ವ್ಯಾಪಾರಕ್ಕಾಗಿ
ಪೂರ್ವದೇಶಗಳಿಗೆ ಜಲಮಾರ್ಗವನ್ನು ಕಂಡುಹಿಡಿಯಲಾಗಿತ್ತು.
ಹೊನ್ನಮ್ಮ ಎಂಬುವವಳು 2 ನೇ ದೇವರಾಯನ ಆಸ್ಥಾನದಲ್ಲಿ ವರದಿಗಾರಳಾಗಿದ್ದಳು.
• ವಿಜಯನಗರ ಕಾಲದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಕುಸ್ತಿ. ಹರಿಯಕ್ಕ ಎಂಬುವಳು ಆ ಕಾಲದ ಖ್ಯಾತ ಮಹಿಳಾ ಕುಸ್ತಿಪಟು.
ಚಿನ್ನದ ವರಹ, ಗದ್ಯಾಣ ಮತ್ತು ಪಗೋಡ, ಬೆಳ್ಳಿಯ ತಾರಾ, ತಾಮ್ರದ ಪಣ, ದುಡ್ಡು ಮತ್ತು ಕಾಸುಗಳು ಬಳಕೆಯಲ್ಲಿದ್ದವು ರತ್ನಾಕರವರ್ಣಿ ಬರೆದ ‘ಭರತೇಶ ವೈಭವ’, ಚಾಮರಸರು ರಚಿಸಿದ ‘ಪ್ರಭುಲಿಂಗಲೀಲೆ’, ಕುಮಾರವ್ಯಾಸನ ‘ಗದುಗಿನ ಭಾರತ’ ಕನ್ನಡದ ಮುಖ್ಯ ಕಾವ್ಯಗಳಾಗಿವೆ. ಭೀಮಕವಿಯು ಪಾಲ್ಕುರಿಕೆ ಸೋಮನಾಥನ ತೆಲುಗು ಕೃತಿ ‘ಬಸವ ಪುರಾಣ’ವನ್ನು ಕನ್ನಡದಲ್ಲಿ ಬರೆದಿದ್ದಾನೆ. ವೀರಶೈವರ ವಚನಗಳ ಸಂಕಲನವಾದ ‘ಶೂನ್ಯ ಸಂಪಾದನೆ’ ರಚನೆಯಾಯಿತು. ಲಕ್ಕಣದಂಡೇಶನ ‘ಶಿವತತ್ವ ಚಿಂತಾಮಣಿ’ಸಂಸ್ಕøತದಲ್ಲಿ ವಿದ್ಯಾರಣ್ಯರ ‘ಶಂಕರ ವಿಜಯ’ ಮತ್ತು ‘ಸರ್ವದರ್ಶನ ಸಂಗ್ರಹ’ ರಚನೆಗೊಂಡವು. ಇವರ ಸೋದರ ಸಾಯಣಾಚಾರ್ಯರು ‘ವೇದಾರ್ಥ ಪ್ರಕಾಶ’ ಎಂಬ ವೇದಭಾಷ್ಯ ಮತ್ತು ಆಯುರ್ವೇದ ಸುಧಾನಿಧಿ, ಪುರುಷಾರ್ಥ ಸುಧಾನಿಧಿ ಮುಂತಾದ ಕೃತಿಗಳನ್ನು ರಚಿಸಿದರು. ಎರಡನೇ ದೇವರಾಯನ ಆಸ್ಥಾನ ಕವಿಯಾದ ಶ್ರೀನಾಥನು ‘ಕವಿ ಚಕ್ರವರ್ತಿ’ ಎ ಂಬ ಬಿರುದನ್ನು ಪಡೆದಿದ್ದನು. ಅಲ್ಲಸಾನಿ ಪೆದ್ದಣನ ‘ಮನುಚರಿತಮು’, ತಿಮ್ಮಣನ ‘ಪಾರಿಜಾತಾಪಹರಣಂ’, ತೆನಾಲಿ ರಾಮಕೃಷ್ಣನ‘ಉಭಟಾರಾಧ್ಯ ಚರಿತಂ’ ಪ್ರಮುಖ ಕೃತಿಗಳಾಗಿವೆ.
ಬಹಮನಿ ರಾಜ್ಯ
ಸಾ.ಶ. 1347ರಲ್ಲಿ ಅಲ್ಲಾಉದ್ದೀನ್ ಹಸನ್ಗಂಗು ಬಹಮನ್ಷಾನು ಇದನ್ನು ಸ್ಥಾಪಿಸಿದನು.
ಸಾ.ಶ. 1347 ರಿಂದ 1527ರವರೆಗೆ ಬಹಮನಿ ಹಾಗೂ 1686ರವರೆಗೆ ಶಾಹಿ ಮನೆತನಗಳು ಆಳ್ವಿಕೆ ಮಾಡಿದವು. ಮೊದಲ ಹಂತದಲ್ಲಿ ಗುಲ್ಬರ್ಗ ರಾಜಧಾನಿಯಾಗಿತ್ತು. ಷಿಯಾಬುದ್ದೀನ್ ಅಹಮದ್ ರಾಜಧಾನಿಯನ್ನು ಬೀದರ್ಗೆ ಸ್ಥಳಾಂತರಿಸಿದನು. ಬಹಮನಿಗಳ ಅಂತ್ಯದವರೆಗು ಬೀದರ್ ರಾಜಧಾನಿಯಾಗಿತ್ತು.
ಮಹಮ್ಮದ್ ಗವಾನ (ಸಾ.ಶ. 1411-1481): ಸಾ.ಶ. 1347 ರಿಂದ ಸಾ.ಶ. 1426 ರವರೆಗೆ ಗುಲ್ಬರ್ಗ ಬಹಮನಿಯರ ರಾಜಧಾನಿಯಾಗಿತ್ತು. ಗವಾನನಿಗೆ ದೊರೆ ಮೂರನೇ ಮಹಮ್ಮದನು ನೀಡಿದ ಬಿರುದುಗಳೆಂದರೆ ‘ಖ್ವಾಜಾ-ಇ-ಜಹಾನ್ ಮತ್ತು ಮಲ್ಲಿಕ್ ಉಲ್ತಜರ್.
ಎರಡನೇ ಇಬ್ರಾಹಿಂ ಆದಿಲ್ ಷಾ (ಸಾ.ಶ. 1580-1627) : ಆದಿಲ್ ಶಾಹಿಗಳಲ್ಲಿ ಶ್ರೇಷ್ಠ ದೊರೆಯಾದ ಎರಡನೇ ಇಬ್ರಾಹಿಂನು ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಸಿಂಹಾಸನಾರೋಹಣ ಮಾಡಿದನು.. “ಕಿತಾಬ್-ಏ-ನವರಸ” ಎಂಬ ಗ್ರಂಥದಲ್ಲಿ ಈತನು ಸರಸ್ವತಿ, ಗಣೇಶ ಮತ್ತು ನರಸಿಂಹರ ಸ್ತುತಿಯೊಂದಿಗೆ ಆರಂಭಿಸಿದ್ದು ಇದರ ವೈಶಿಷ್ಟ್ಯವಾಗಿದೆ. ಇದರಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆಯೂ ಸ್ತುತಿಗಳಿªಹೊನ್ನು’ ಎಂಬ ಬಂಗಾರದ ನಾಣ್ಯ, ‘ಲಾರಿ’, ‘ಟಂಕ’ ಎಂಬ ಬೆಳ್ಳಿ ನಾಣ್ಯಗಳು ಚಲಾವಣೆಯಲ್ಲಿದ್ದವು.
ಗೋಲ್ಗುಂಬಜ್ : ನಮ್ಮ ರಾಜ್ಯದ ವಿಜಯಪುರದಲ್ಲಿ ಈ ಸ್ಮಾರಕವಿದೆ. ಇದನ್ನು ಮಹಮ್ಮದ್ ಆದಿಲ್ ಷಾ ನಿರ್ಮಿಸಿದನೆಂದು ತಿಳಿದಿದೆ. ಇದರ ಕಟ್ಟಡ ನಿರ್ಮಾಣ ಕಾರ್ಯವು ಸುಮಾರು ಸಾ.ಶ. 1626ರಲ್ಲಿ ಪ್ರಾರಂಭವಾಗಿ ಸಾ.ಶ. 1656ರಲ್ಲಿ ಮುಗಿಯಿತೆಂದು ತಿಳಿದಿದೆ. ಇದು ಸುಮಾರು 51ಮೀ. ಎತ್ತರವನ್ನು ಹೊಂದಿದ್ದು ವಿಶಾಲವಾದ ಗುಮ್ಮಟವಾಗಿರುತ್ತದೆ.
ನಮ್ಮ ಸಂವಿಧಾನ
ಭಾರತ ಸಂವಿಧಾನ ರಚನಾ ಸಭೆ: ಒಂದು ರಾಷ್ಟ್ರದ ಮೂಲಭೂತ ಕಾನೂನನ್ನು ಸಂವಿಧಾನವೆಂದು ಕರೆಯಲಾಗುತ್ತದೆ. ಸಂವಿಧಾನವು ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಒದಗಿಸುತ್ತದೆ. ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಮೋತಿಲಾಲ್ ನೆಹರೂ ಸಮಿತಿಯ ಶಿಫಾರಸ್ಸು ಮತ್ತು 1939ರ ರಾಷ್ಟ್ರೀಯ ಕಾಂಗ್ರೆಸ್ನ ಕರಾಚಿ ಅಧಿವೇಶನದ ನಿರ್ಣಯಗಳು ಪ್ರೇರಕವಾದವು. ಸಂವಿಧಾನ ರಚನೆ ಮಾಡಲು ಕ್ಯಾಬಿನೆಟ್ ಆಯೋಗದ ಶಿಫಾರಸ್ಸಿನ ಅನ್ವಯ 1946ರಲ್ಲಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು. ಈ ಸಭೆಯು 389 ಸದಸ್ಯರನ್ನು ಒಳಗೊಂಡಿತ್ತು. ಭಾರತವು ಇಬ್ಭಾಗವಾಗಿ ಸ್ವಾತಂತ್ರ್ಯಗೊಂಡ ನಂತರ 299 ಸದಸ್ಯರನ್ನು ಒಳಗೊಂಡಿತು. ಮೈಸೂರು ಸಂಸ್ಥಾನದಿಂದ 7 ಜನ ಸದಸ್ಯರು ನಾಮಕರಣಗೊಂಡಿದ್ದರು. ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ಡಿಸೆಂಬರ್ 9, 1946ರಂದು ನಡೆಯಿತು. ಅದೊಂದು ಐತಿಹಾಸಿಕ ಘಟನೆ. ಸಚ್ಚಿದಾನಂದ ಸಿನ್ಹಾ ಹಂಗಾಮಿ ಅಧ್ಯಕ್ಷರಾಗಿದ್ದರು. ಡಿಸೆಂಬರ್ 11, 1946ರಂದು ಡಾ. ರಾಜೇಂದ್ರಪ್ರಸಾದ್ರವರನ್ನು ಖಾಯಂ ಅಧ್ಯಕ್ಷರನ್ನಾಗಿಯೂ ಮತ್ತು ಟಿ.ಟಿ.ಕೃಷ್ಣಮಾಚಾರಿಯವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಕ್ಯಾಬಿನೆಟ್ ನಿಯೋಗ : ಲಾರ್ಡ್ ಫೆಥಿಕ್ ಲಾರೆನ್ಸ್ - ಭಾರತದ ವ್ಯವಹಾರಗಳ ಕಾರ್ಯದರ್ಶಿ, ಸರ್ ಸ್ಟಾಫೋರ್ಡ್ ಕ್ರಿಪ್ಸ್-ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಎ.ವಿ.ಅಲೆಗ್ಸಾಂಡರ್ - ನೌಕಾ ಪಡೆಯ ಮುಖ್ಯಸ್ಥ
ಕರಡು ರಚನಾ ಸಮಿತಿ ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ. ಡಾ. ಬಿ.ಆರ್. ಅಂಬೇಡ್ಕರ್ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು `ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್. ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ. ಮಾಧವರಾವ್ ಅವರು ಸದಸ್ಯರಾಗಿದ್ದರು
ಸಂವಿಧಾನದ ರಚನೆ: ಸಂವಿಧಾನ ರಚನಾ ಸಭೆಯು ರಚನಾ ಕಾರ್ಯವನ್ನು ಮುಗಿಸಲು ಎರಡು ವರ್ಷ 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತುಬ್ರಿಟಿಷ್ ಸರ್ಕಾರ ಹೊರಡಿಸಿದ 1909, 1919 ಮತ್ತು 1935ರ ಕಾಯಿದೆ, ಬ್ರಿಟನ್ನಿನ ಸಂಸದೀಯ ವ್ಯವಸ್ಥೆ, ಅಮೆರಿಕಾದ ಬಿಲ್ ಆಫ್ ರೈಟ್ಸ್, ಐರ್ಲೆಂಡಿನ ಸಾಮಾಜಿಕ ನಿರ್ದೇಶಕ ತತ್ವಗಳು ಮುಂತಾದವುಗಳನ್ನು ಅಳವಡಿಸಿಕೊಳ್ಳಲು ನಿರ್ಣಯಿಸಲಾಯಿತು. ಅಂತಿಮವಾಗಿ ನವೆಂಬರ್ 26, 1949 ರಂದು ಅಂಗೀಕರಿಸಲ್ಪಟ್ಟು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನವನ್ನೇ ಗಣರಾಜ್ಯ ದಿನವಾಗಿ ಆಚರಿಸುತ್ತೇವೆ.
ಸಂವಿಧಾನದ ಪ್ರಸ್ತಾವನೆ (ಪೂರ್ವ ಪೀಠಿಕೆ) ಭಾರತ ಸಂವಿಧಾನವು ತನ್ನದೇ ಆದ ಪ್ರಸ್ತಾವನೆ ಹೊಂದಿದ್ದು, ಈ ಪ್ರಸ್ತಾವನೆ ಸಂವಿಧಾನದ ಸಂವಿಧಾನ ರಚನಾಕಾರರ ವಿಚಾರಧಾರೆಗಳನ್ನು ಒಳಗೊಂಡಿದೆ. ಈ ಪ್ರಸ್ತಾವನೆಯು ಡಿಸೆಂಬರ್ 13, 1946ರಂದು ಜವಹಾರ ಲಾಲ್ ನೆಹರುರವರು ಮಂಡಿಸಿದ ‘ಧ್ಯೇಯಗಳ ನಿರ್ಣಯ’ (ಔbರಿeಛಿಣive ಖesoಟuಣioಟಿ) ವನ್ನು ಸಂವಿಧಾನ ರಚನಾ ಸಭೆ ಜನವರಿ 22, 1947ರಂದು ಅಂಗೀಕರಿಸಿತು. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯು ತುಂಬಾ ಅರ್ಥಗರ್ಭಿತವಾಗಿದ್ದು, ದೇಶದ ರಾಜಕೀಯ ವ್ಯವಸ್ಥೆಯ ಚಿತ್ರಣವನ್ನು ಚಿತ್ರಿಸುತ್ತದೆ. ಸಂವಿಧಾನದ ಕೈ ದೀಪವಾಗಿದೆ. ಇದನ್ನು ಕೆಲವರು ‘ಸಂವಿಧಾನದ ಒಡವೆ’ (ಎeತಿeಟ) ಎಂದು ಬಣ್ಣಿಸಿದರೆ, ಕೆ.ಎಂ. ಮುನ್ಷಿ ‘ರಾಜಕೀಯ ಜಾತಕ’ ಎಂದು ಕರೆದಿದ್ದಾರೆ. ‘ಸಮಾಜವಾದ’ ಎಂಬ ಪದವನ್ನು 1976ರಲ್ಲಿ 42ನೇ ತಿದ್ದುಪಡಿ ಮೂಲಕ ಅಳವಡಿಸಿಕೊಳ್ಳಲಾಗಿದೆ. ಜಾತ್ಯತೀತ’ ಎಂಬ ಪದವನ್ನು ಸಂವಿಧಾನದ 42ನೇ ತಿದ್ದುಪಡಿ ಮೂಲಕ 1976ರಲ್ಲಿ ಅಳವಡಿಸಿದೆ.
ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳು: ನಮ್ಮ ಸಂವಿಧಾನವು ಮೂಲತಃ 22 ಭಾಗಗಳು, 8 ಅನುಸೂಚಿಗಳು ಮತ್ತು 395 ವಿಧಿಗಳನ್ನು ಹೊಂದಿತ್ತು. ನಂತರದಲ್ಲಿ ಹಲವಾರು ತಿದ್ದುಪಡಿಗಳಿಂದಾಗಿ 25 ಭಾಗಗಳು, 12 ಅನುಸೂಚಿಗಳು ಮತ್ತು 465 ವಿಧಿಗಳನ್ನು ಒಳಗೊಂಡ ಬೃಹತ್ ಸಂವಿಧಾನವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಂಚಿಕೆಯಾಗಿದೆ (ಕೇಂದ್ರಪಟ್ಟಿ 100 ವಿಷಯಗಳು, ರಾಜ್ಯಪಟ್ಟಿ 61 ವಿಷಯಗಳು ಮತ್ತು ಸಮವರ್ತಿ ಪಟ್ಟಿ 52 ವಿಷಯಗಳನ್ನು ಒಳಗೊಂಡಂತೆ ಅಧಿಕಾರ ವಿಭಜನೆಯಾಗಿದೆ). ಈ ಎರಡೂ ಸರ್ಕಾರಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸಲು ಸುಪ್ರೀಂಕೋರ್ಟ್ ಅಧಿಕಾರ ಪಡೆದಿದೆ.
ಮೂಲಭೂತ ಕರ್ತವ್ಯಗಳು: ರಾಜ್ಯಕ್ಕೆ ನಾವು ಏನನ್ನು ಮಾಡಬೇಕು ಎನ್ನುವುದೇ ಕರ್ತವ್ಯಗಳು. ನಮ್ಮ ಸಂವಿಧಾನದ 4 ನೇ ‘ಎ’ ಭಾಗದಲ್ಲಿ 51 ‘ಎ’ ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಅಳವಡಿಸಿದೆ. ಮೂಲ ಸಂವಿಧಾನವು ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿರಲಿಲ್ಲ. 1976ರಲ್ಲಿ 42ನೆಯ ತಿದ್ದುಪಡಿ ಕಾಯ್ದೆಯನ್ವಯ 10 ಮೂಲಭೂತ ಕರ್ತವ್ಯಗಳನ್ನು ಅಳವಡಿಸಲಾಗಿದೆ. 2002 ರಲ್ಲಿ ಸಂವಿಧಾನದ 86ನೆಯ ತಿದ್ದುಪಡಿ ಮೂಲಕ 6 ರಿಂದ 14 ವರ್ಷ ವಯೋಮಿತಿಯಲ್ಲಿನ ಎಲ್ಲಾ ಮಕ್ಕಳಿಗೂ ಪೆÇೀಷಕರು ಕಡ್ಡಾಯ ಶಿಕ್ಷಣ ಕೊಡಿಸಲು ಅವಕಾಶ ಕಲ್ಪಿಸಿದೆ ಎಂಬ 11ನೆಯ ಕರ್ತವ್ಯವನ್ನು ಸೇರಿಸಲಾಗಿದೆ.
ರಾಜ್ಯ ನಿರ್ದೇಶಕ ತತ್ವಗಳು: ನಮ್ಮ ಸಂವಿಧಾನದ 4ನೆಯ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಿದೆ. ಇವುಗಳನ್ನು ಐರಿಷ್ ಸಂವಿಧಾನದಿಂದ ಪಡೆಯಲಾಗಿದೆ. ಇವುಗಳು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬುನಾದಿಯಾಗಿವೆ. ಇವುಗಳನ್ನು ಸರ್ಕಾರ ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಆದರೂ ಇವು ದೇಶದ ಆಡಳಿತಕ್ಕೆ ಮೂಲ ಬುನಾದಿಯಾಗಿವೆ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು: ನಮ್ಮ ಸಂವಿಧಾನದ 3ನೇ ಭಾಗದಲ್ಲಿ 7 ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿತ್ತು. ಆದರೆ ಸಂವಿಧಾನದ 44ನೇ ತಿದ್ದುಪಡಿಯಿಂದಾಗಿ ಆಸ್ತಿ ಹಕ್ಕನ್ನು ರದ್ದು ಪಡಿಸಲಾಗಿದೆ. ಪ್ರಸ್ತುತ 06 ಮೂಲಭೂತ ಹಕ್ಕುಗಳಿವೆ.
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ರಾಜಕೀಯ ವಾತಾವರಣವನ್ನೇ ಮೂಲಭೂತ ಹಕ್ಕುಗಳು ಎಂದು ಕರೆಯುತ್ತಾರೆ. ಸಮಾಜದಲ್ಲಿ ಮನುಷ್ಯನು ನಾಗರೀಕ ಜೀವನ ನಡೆಸಲು ಮೂಲಭೂತ ಹಕ್ಕುಗಳು ಅತ್ಯವಶ್ಯಕ. ಈ ಹಕ್ಕುಗಳು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದವುಗಳು. ನಮ್ಮ ಸಂವಿಧಾನದ 3ನೇ ಭಾಗದಲ್ಲಿ 7 ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿತ್ತು. ಆದರೆ ಸಂವಿಧಾನದ 44ನೇ ತಿದ್ದುಪಡಿಯಿಂದಾಗಿ ಆಸ್ತಿ ಹಕ್ಕನ್ನು ರದ್ದು ಪಡಿಸಲಾಗಿದೆ. ಪ್ರಸ್ತುತ 06 ಮೂಲಭೂತ ಹಕ್ಕುಗಳಿವೆ.
ಸಮಾನತೆಯ ಹಕ್ಕು : ಕಾನೂನಿನ ಮುಂದೆ ಎಲ್ಲರೂ ಸಮಾನರು, ಕಾನೂನಿಗಿಂತ ಯಾರೂ ಶ್ರೇಷ್ಠರಲ್ಲ. ಪ್ರತಿಯೊಬ್ಬರೂ ರಾಜ್ಯದ ಕಾನೂನಿಗೆ ಬದ್ಧರಾಗಿರಬೇಕು. ಜಾತಿ, ಧರ್ಮ, ಲಿಂಗ, ಜನ್ಮಸ್ಥಳಗಳ ಆಧಾರದ ಮೇಲೆ ಭೇದಭಾವ ಮಾಡಬಾರದು. ಸಾರ್ವಜನಿಕ ಸ್ಥಳಗಳು, ಹೋಟೆಲ್ಗಳು, ಅಂಗಡಿಗಳು, ಮನರಂಜನಾ ಸ್ಥಳಗಳು, ದೇವಾಲಯಗಳು ಮುಂತಾದ ಸ್ಥಳಗಳಲ್ಲಿ ಯಾರೊಬ್ಬರಿಗೂ ಪ್ರವೇಶ ನಿರಾಕರಿಸಬಾರದು. ಸರ್ಕಾರಿ ಉದ್ಯೋಗ ಸೇರಲು ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರಕಿಸಿದೆ ಅಸ್ಪøಶ್ಯತೆಯನ್ನು ಆಚರಿಸಬಾರದು1895ರಲ್ಲಿ ರಾಷ್ಟ್ರೀಯ ಕಾಂಗ್ರೆಸ್, ಪ್ರಜೆಗಳ ಹಕ್ಕುಗಳ ಬಗ್ಗೆ ಆಗ್ರಹಪಡಿಸಿತು. 1895ರಲ್ಲಿ ಬಾಲಗಂಗಾಧರ ತಿಲಕ್ ತಮ್ಮ ‘ಸ್ವರಾಜ್ಯ ಬಿಲ್’ನಲ್ಲಿ ಹಕ್ಕುಗಳಿಗಾಗಿ ಒತ್ತಾಯಿಸಿದ್ದರು. 1925ರಲ್ಲಿ ಶ್ರೀಮತಿ ಅನಿಬೆಸೆಂಟ್ ‘ಕಾಮನ್ವೆಲ್ತ್ ಆಫ್ ಇಂಡಿಯಾ’ ಬಿಲ್ನಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಆತ್ಮಸಾಕ್ಷಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಕಾನೂನಿನ ಮುಂದೆ ಸಮಾನರು ಎಂಬುದನ್ನು ಪ್ರತಿಪಾದಿಸಿದರು. 1945ರ ವರದಿ 1946ರ ಕ್ಯಾಬಿನೆಟ್ ಮಿಷನ್ ಮೂಲಭೂತ ಹಕ್ಕುಗಳನ್ನು ಬೆಂಬಲಿಸಿದವು.
ಸ್ವಾತಂತ್ರ್ಯದ ಹಕ್ಕು : ಮೂಲಭೂತ ಹಕ್ಕುಗಳಲ್ಲಿ ಸ್ವಾತಂತ್ರ್ಯದ ಹಕ್ಕು ಮಹತ್ವದ ಸ್ಥಾನ ಪಡೆದಿದೆ. ಈ ಹಕ್ಕಿನಡಿಯಲ್ಲಿ ವಾಕ್ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ, ಶಸ್ತ್ರರಹಿತ ಶಾಂತಿಯುತವಾಗಿ ಸಭೆ ಸೇರುವ, ಸಂಘ ಸಂಸ್ಥೆಗಳನ್ನು ಸ್ಥಾಪಿಸುವ, ಭಾರತದಲ್ಲಿ ಸಂಚರಿಸುವ, ವಾಸಿಸುವ, ಯಾವುದೇ ವೃತ್ತಿ ಹೊಂದುವ ಸ್ವಾತಂತ್ರ್ಯ ನೀಡಲಾಗಿದೆ. ಪೌರರಿಗೆ ಇದು ರಕ್ಷಣಾತ್ಮಕ ಹಕ್ಕಾಗಿದ್ದು, ಸಕಾರಣವಿಲ್ಲದೆ ವ್ಯಕ್ತಿಯನ್ನು ಬಂಧಿಸುವಂತಿಲ್ಲ ಮತ್ತು ರಾಜ್ಯ ಕಾನೂನನ್ನು ಮಾಡುವುದರ ಮೂಲಕ ವ್ಯಕ್ತಿಯ ಜೀವ ತೆಗೆಯುವ ಅಥವಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿಲ್ಲ.
ಶೋಷಣೆಯ ವಿರುದ್ಧದ ಹಕ್ಕು : ಶೋಷಣೆ ಒಂದು ಸಾಮಾಜಿಕ ಪಿಡುಗಾಗಿದೆ. ಈ ಪಿಡುಗನ್ನು ನಿರ್ಮೂಲನ ಮಾಡಲು ಶೋಷಣೆಯ ವಿರುದ್ಧದ ಹಕ್ಕನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ರಾಜ್ಯವಾಗಲೀ, ಯಾವುದೇ ವ್ಯಕ್ತಿಯಾಗಲೀ, ದುರ್ಬಲರನ್ನು, ಬಡವರನ್ನು, ಮಹಿಳೆಯರನ್ನು, ಮಕ್ಕಳನ್ನು ಶೋಷಣೆ ಮಾಡುವಂತಿಲ್ಲ. ಭಿಕ್ಷಾಟನೆ, ದೇವದಾಸಿ ಪದ್ಧತಿ, ಸತಿ ಆಚರಣೆ, ಅನೈತಿಕ ಚಟುವಟಿಕೆ ಮತ್ತು ಬಲವಂತ ದುಡಿಮೆಯನ್ನು ನಿಷೇಧಿಸಲಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಅಪಾಯಕಾರಿ ಕೆಲಸಗಳಿಗೆ ನೇಮಿಸಿಕೊಳ್ಳುವಂತಿಲ್ಲ.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು : ಭಾರತ ಜಾತ್ಯತೀತ (ಧರ್ಮನಿರಪೇಕ್ಷ) ರಾಷ್ಟ್ರ. ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಅಂಗೀಕರಿಸಿಲ್ಲ. ಪೌರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯ ಪಡೆದಿದ್ದಾರೆ. ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗಾಗಿ ತೆರಿಗೆ ಕೊಡಬೇಕೆಂದು ಒತ್ತಾಯಿಸುವಂತಿಲ್ಲ. ಧಾರ್ಮಿಕ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವಂತಿಲ್ಲ.
ಸಾಂಸ್ಕøತಿಕ ಮತ್ತು ವಿದ್ಯಾಭ್ಯಾಸದ ಹಕ್ಕು : ದೇಶದಲ್ಲಿ ವಾಸಿಸುವ ಪೌರರು ತಮ್ಮದೇ ಆದ ಭಾಷೆ, ಲಿಪಿ, ಸಂಸ್ಕøತಿಯನ್ನು ಹೊಂದಿದ್ದಾರೆ. ಇವುಗಳ ರಕ್ಷಣೆ ರಾಜ್ಯದ್ದಾಗಿರುತ್ತದೆ. ಧಾರ್ಮಿಕ-ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ಹಕ್ಕನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಅಲ್ಪಸಂಖ್ಯಾತರ ಸಂಸ್ಥೆಗಳು ಮತ್ತು ರಾಜ್ಯದ ಧನಸಹಾಯ ಪಡೆದು ನಡೆಸುವ ವಿದ್ಯಾ ಸಂಸ್ಥೆಗಳಲ್ಲಿ ಯಾರಿಗೇ ಆಗಲಿ ಪ್ರವೇಶ ನಿರಾಕರಿಸುವಂತಿಲ್ಲ. ಸಂವಿಧಾನದ 86 ನೇ ತಿದ್ದುಪಡಿ ಮಾಡಿ 21 ‘ಎ’ ವಿಧಿಯನ್ವಯ 2002 ರಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ಪರಿಗಣಿಸಲಾಗಿದೆ. ಇದರ ಅನ್ವಯ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೂ ರಾಜ್ಯವೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಕರ್ನಾಟಕ ರಾಜ್ಯವು ಶಿಕ್ಷಣ ಹಕ್ಕು ಕಾಯಿದೆ (ಆರ್.ಟಿ.ಇ. 2009) ಯನ್ನು ಜಾರಿಗೊಳಿಸಿದೆ.
ಸಂವಿಧಾನದ ಪರಿಹಾರದ ಹಕ್ಕು : ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನದ 32ನೇ ವಿಧಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಂವಿಧಾನದಲ್ಲಿ ಇದೊಂದು ವಿಶೇಷ ಲಕ್ಷಣವಾಗಿದೆ. ಆದುದರಿಂದ ಬಿ.ಆರ್. ಅಂಬೇಡ್ಕರ್ ಈ ಹಕ್ಕನ್ನು `ಸಂವಿಧಾನದ ಆತ್ಮ ಮತ್ತು ಹೃದಯ’ವಿದ್ದಂತೆ ಎಂದಿದ್ದಾರೆ.
ಮೂಲಭೂತ ಹಕ್ಕುಗಳಿಗೆ ಯಾವುದೇ ವ್ಯಕ್ತಿಯಿಂದಾಗಲೀ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದಾಗಲೀ ಧಕ್ಕೆ ಉಂಟಾದರೆ ರಕ್ಷಣೆಗಾಗಿ ನೇರವಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಬಹುದು. ಆದುದರಿಂದ ಸರ್ವೋಚ್ಚ ನ್ಯಾಯಾಲಯವನ್ನು `ಮೂಲಭೂತ ಹಕ್ಕುಗಳ ರಕ್ಷಕ’ ಎಂದು ಕರೆಯಲಾಗಿದೆ. ವಿಧಿ 226ರನ್ವಯ ಉಚ್ಚ ನ್ಯಾಯಾಲಯಗಳು ಕೂಡಾ ಹಕ್ಕುಗಳ ರಕ್ಷಣೆಗಾಗಿ ಈ ಕೆಳಕಂಡ ರಿಟ್ಗಳನ್ನು ಹೊರಡಿಸುವ ಅಧಿಕಾರ ಹೊಂದಿರುತ್ತವೆ.
ಎ) ಬಂಧೀ ಪ್ರತ್ಯಕ್ಷೀಕರಣ: ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಅಕ್ರಮವಾಗಿ ಬಂಧಿತವಾದ ವ್ಯಕ್ತಿಯನ್ನು ತನ್ನ ಮುಂದೆ ನಿಗದಿತ ಅವಧಿಯೊಳಗೆ ಹಾಜರುಪಡಿಸುವಂತೆ ನೀಡುವ ಆಜ್ಞೆಯೇ ಬಂಧಿ ಪ್ರತ್ಯಕ್ಷೀಕರಣವಾಗಿರುತ್ತದೆ. ಇದು ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ.
ಬಿ) ಪರಮಾದೇಶ : ಶಾಸಕಾಂಗ, ಕಾರ್ಯಾಂಗ ಅಥವಾ ಅವುಗಳ ಅಧೀನ ಸಂಸ್ಥೆಗಳು ನಿರ್ವಹಿಸಬೇಕಾದ ಕಾರ್ಯಗಳನ್ನು, ನಿರ್ವಹಿಸದೇ ಇದ್ದಾಗ, ಸಂಬಂಧಪಟ್ಟ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ನಿರ್ವಹಿಸುವಂತೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯ ನೀಡುವ ಆಜ್ಞೆಯೇ ಪರಮಾದೇಶವಾಗಿರುತ್ತದೆ. ಈ ಆಜ್ಞೆಯನ್ನು ಖಾಸಗಿ ವ್ಯಕ್ತಿಗಳು, ರಾಜ್ಯಪಾಲರು ಮತ್ತು ರಾಷ್ಟ್ರಾಧ್ಯಕ್ಷರ ವಿರುದ್ಧ ಹೊರಡಿಸಲು ಬರುವುದಿಲ್ಲ.
ಸಿ) ಪ್ರತಿಬಂಧಕಾಜ್ಞೆ : ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ನೈಸರ್ಗಿಕ ನಿಯಮಗಳಿಗೆ ವಿರುದ್ಧವಾಗಿ ತೀರ್ಪು ನೀಡಿದಾಗ, ಉನ್ನತ ನ್ಯಾಯಾಲಯ ಅಂತಹ ತೀರ್ಪನ್ನು ತಕ್ಷಣ ಸ್ಥಗಿತಗೊಳಿಸುವಂತೆ ನೀಡುವ ಆಜ್ಞೆಯೇ ಪ್ರತಿಬಂಧಕಾಜ್ಞೆಯಾಗಿರುತ್ತದೆ. ಈ ಆಜ್ಞೆಯನ್ನು ಉನ್ನತ ನ್ಯಾಯಾಲಯ ಅಧೀನ ನ್ಯಾಯಾಲಯಗಳ ವಿರುದ್ಧ ಮಾತ್ರ ಹೊರಡಿಸಬಹುದಾಗಿದೆ.
ಡಿ) ಉತ್ಪ್ರೇಕ್ಷಣಾ ಲೇಖ (ಸರ್ಷಿಯೋರರಿ) : ಅಧಿನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ನೈಸರ್ಗಿಕ ನಿಯಮಗಳಿಗೆ ವಿರುದ್ಧವಾಗಿ ತೀರ್ಪು ನೀಡಿದಾಗ, ಉನ್ನತ ನ್ಯಾಯಾಲಯ ತೀರ್ಪಿಗೆ ಸಂಬಂಧಪಟ್ಟ ದಾಖಲೆಗಳನ್ನು ತನಗೆ ನೀಡುವಂತೆ ಆಜ್ಞೆ ಮಾಡುವದೆ ಉತ್ಪ್ರೇಕ್ಷಣಾ ಲೇಖವಾಗಿರುತ್ತದೆ.
ಇ) ಅಧಿಕಾರ ಲೇಖ(ಕೋ-ವಾರಂಟ್) : ಸರಿಯಾದ ವ್ಯಕ್ತಿ ಸರಿಯಾದ ಸಾರ್ವಜನಿಕ ಸ್ಥಾನವನ್ನು ಹೊಂದುವಂತೆ ಉನ್ನತ ನ್ಯಾಯಾಲಯ ನೀಡುವ ಆಜ್ಞೆಯೇ ಅಧಿಕಾರ ಲೇಖವಾಗಿರುತ್ತದೆ. ಅಕ್ರಮವಾಗಿ ಸಾರ್ವಜನಿಕ ಸ್ಥಾನಗಳನ್ನು ಹೊಂದುವರ ವಿರುದ್ಧ ಉನ್ನತ ನ್ಯಾಯಾಲಯ ಈ ಆಜ್ಞೆಯನ್ನು ಹೊರಡಿಸುತ್ತದೆ.
ಮೂಲಭೂತ ಕರ್ತವ್ಯಗಳು ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಕರ್ತವ್ಯರಹಿತ ಹಕ್ಕಿಗೆ ಪ್ರಾಮುಖ್ಯತೆಯಾಗಲೀ, ಮೌಲ್ಯವಾಗಲೀ ಇರುವುದಿಲ್ಲ. ಸಂವಿಧಾನಕ್ಕೆ 1976ರಲ್ಲಿ 42ನೆಯ ತಿದ್ದುಪಡಿ ಮಾಡಿ 4 ‘ಎ’ ಭಾಗ 51 ‘ಎ’ ವಿಧಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. 2002ರಲ್ಲಿ 86ನೆಯ ಸಂವಿಧಾನ ತಿದ್ದುಪಡಿಯಂತೆ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ.
ರಾಜ್ಯ ನಿರ್ದೇಶಕ ತತ್ವಗಳು : ಸುಖೀ ರಾಜ್ಯದ ಕಲ್ಪನೆಯಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಂವಿಧಾನದ 4ನೇ ಭಾಗದಲ್ಲಿ 36 ರಿಂದ 51ನೇ ವಿಧಿಗಳಡಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ: ಭಾರತವು ಸಂಸದೀಯ ಮಾದರಿಯ ಸರ್ಕಾರವನ್ನು ಹೊಂದಿದ್ದು, ಕೇಂದ್ರ ಶಾಸಕಾಂಗವನ್ನು ಸಂಸತ್ತು ಎಂದು ಕರೆಯಲಾಗಿದೆ. ನಮ್ಮ ಸಂವಿಧಾನದ 79ನೇ ವಿಧಿಯು ಸಂಸತ್ತಿನ ರಚನೆಗೆ ಅವಕಾಶ ಮಾಡಿಕೊಟ್ಟಿದೆ. ಸಂಸತ್ತು ದ್ವಿಸದನ ಪದ್ಧತಿಯನ್ನು ಹೊಂದಿದ್ದು, ಮೇಲ್ಮನೆಯನ್ನು ರಾಜ್ಯಸಭೆ ಎಂದು, ಕೆಳಮನೆಯನ್ನು ಲೋಕಸಭೆ ಎಂದು ಕರೆಯಲಾಗುತ್ತದೆ.
ರಾಜ್ಯಸಭೆ
ರಾಜ್ಯಸಭೆಯು 250 ಸದಸ್ಯರನ್ನು ಒಳಗೊಂಡಿದೆ. 238 ಸದಸ್ಯರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾದರೆ, ಉಳಿದ 12 ಸದಸ್ಯರು ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಸಮಾಜ ಸೇವೆಯಲ್ಲಿ ವಿಶೇಷ ಅನುಭವ ಪಡೆದವರನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ. ಇದನ್ನು ಹಿರಿಯರ ಸದನವೆಂದೂ ಕರೆಯುತ್ತಾರೆ.
ಅಧಿಕಾರ ಅವಧಿ : ರಾಜ್ಯಸಭೆಯು ಖಾಯಂ ಸದನವಾಗಿದ್ದು, ಲೋಕಸಭೆಯಂತೆ ವಿಸರ್ಜಿಸಲಾಗದು.
ಆದರೆ ಸದಸ್ಯರ ಅಧಿಕಾರ ಅವಧಿ 6 ವರ್ಷಗಳಾಗಿದ್ದು, ಪ್ರತಿ 2 ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಅಷ್ಟೆ ಸದಸ್ಯರು ಆಯ್ಕೆಯಾಗುತ್ತಾರೆ.
ಸದಸ್ಯರಾಗಲು ಇರಬೇಕಾದ ಅರ್ಹತೆಗಳು
1. ಭಾರತದ ಪ್ರಜೆಯಾಗಿರಬೇಕು.
2. ಕನಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
3. ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು.
4. ಮತಿಭ್ರಮಣೆಯುಳ್ಳವರಾಗಿರಬಾರದು.
5. ಸಂಸತ್ತು ಕಾಲಕಾಲಕ್ಕೆ ನಿಗದಿಪಡಿಸುವ ಅರ್ಹತೆ ಪಡೆದಿರಬೇಕು.
ಉಪರಾಷ್ಟ್ರಪತಿಯವರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಸದನದ ಸದಸ್ಯರಲ್ಲೇ ಒಬ್ಬರನ್ನು ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ. ಸಭೆಯ ಅಧಿವೇಶನ ನಡೆಯಬೇಕಾದರೆ ಸದನದ 10% ರಷ್ಟು (ಕನಿಷ್ಠ 25 ಸದಸ್ಯರು) ಸದಸ್ಯರು ಹಾಜರಿರಬೇಕು. ಒಂದು ಅಧಿವೇಶನಕ್ಕೂ ಮತ್ತೊಂದು ಅಧಿವೇಶನಕ್ಕೂ ಗರಿಷ್ಠ ಅಂತರ 6 ತಿಂಗಳ ಅಂತರ ಮೀರಬಾರದು
ಲೋಕಸಭೆ : ಲೋಕಸಭೆಯ ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗುವುದರಿಂದ ಇದನ್ನು ಜನತಾ ಸದನ ಎಂದೂ ಕರೆಯುತ್ತಾರೆ. ಪ್ರಸ್ತುತ ಒಟ್ಟು ಸದಸ್ಯರ ಸಂಖ್ಯೆ 545 ಇದ್ದು, 543 ಸದಸ್ಯರು ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆ. ಉಳಿದ ಇಬ್ಬರು ಆಂಗ್ಲೋ-ಇಂಡಿಯನ್ನರನ್ನು ಸದಸ್ಯರನ್ನಾಗಿ ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ. ಪರಿಶಿಷ್ಟ ಜಾತಿಯವರಿಗೆ 79 ಸ್ಥಾನಗಳು ಮತ್ತು ಪರಿಶಿಷ್ಟ ಪಂಗಡದವರಿಗೆ 41 ಸ್ಥಾನಗಳನ್ನು ಮೀಸಲಿಡಲಾಗಿದೆ.
ಅಧಿಕಾರ ಅವಧಿ : ಲೋಕಸಭೆಯ ಅಧಿಕಾರ ಅವಧಿ 5 ವರ್ಷ. ಅವಧಿ ಮುಗಿಯುವುದಕ್ಕೆ ಮೊದಲೇ ಪ್ರಧಾನಿ ಸಲಹೆ ಮೇರೆಗೆ ರಾಷ್ಟ್ರಪತಿಗಳು ಲೋಕಸಭೆ ವಿಸರ್ಜಿಸಬಹುದು. ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಮಯದಲ್ಲಿ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಬಹುದು.
ಸಭಾಧ್ಯಕ್ಷರು : ಲೋಕಸಭಾ ಸದಸ್ಯರಲ್ಲೇ ಒಬ್ಬರನ್ನು ಸಭಾಧ್ಯಕ್ಷರನ್ನಾಗಿ (ಸ್ಪೀಕರ್), ಮತ್ತೊಬ್ಬರನ್ನು ಉಪ ಸಭಾಧ್ಯಕ್ಷರನ್ನಾಗಿ (ಡೆಪ್ಯೂಟಿ ಸ್ಪೀಕರ್) ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸದನದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸಭೆಯ ಕಾರ್ಯಕಲಾಪಗಳ ಅಧ್ಯಕ್ಷತೆ ವಹಿಸಿ ಸದನದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡುತ್ತಾರೆ.
ಸಂಸತ್ತಿನ ಅಧಿಕಾರ ಮತ್ತು ಕಾರ್ಯಗಳು: ಹಣಕಾಸಿನ ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಲಾಗುತ್ತದೆ. ಉಳಿದ ಮಸೂದೆಗಳನ್ನು ಯಾವುದೇ ಸದನಗಳಲ್ಲಿ ಮಂಡಿಸಬಹುದು. ಆದರೆ ಮಸೂದೆ ಊರ್ಜಿತವಾಗಬೇಕಾದರೆ ಚರ್ಚೆಗಳ ಮೂಲಕ ಉಭಯ ಸದನಗಳ ಅನುಮೋದನೆ ಪಡೆಯಬೇಕು. ಮಸೂದೆಯ ಬಗ್ಗೆ ಸದನಗಳ ನಡುವೆ ಭಿನ್ನಾಭಿಪ್ರಾಯ ಮೂಡಿದರೆ ರಾಷ್ಟ್ರಾಧ್ಯಕ್ಷರು ಸಂಸತ್ತಿನ ಜಂಟಿ ಅಧಿವೇಶನ ಕರೆಯಬಹುದಾಗಿದೆ. ಸದನಗಳ ಒಪ್ಪಿಗೆ ದೊರೆತರೆ ಆ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗುತ್ತದೆ.
ಹಣಕಾಸಿನ ಅಧಿಕಾರ : ಲೋಕಸಭೆಯು ರಾಷ್ಟ್ರದ ಹಣಕಾಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ. ಹಣಕಾಸಿನ ಮಸೂದೆಯನ್ನು (ಆಯ-ವ್ಯಯ) ಮೊದಲು ಲೋಕಸಭೆಯಲ್ಲಿ ಮಂಡಿಸುವ ನಿಯಮವಿದೆ. ಹಣಕಾಸು ಮಸೂದೆಗೆ ಲೋಕಸಭೆ ಅನುಮೋದ£ಪಡೆದ ನಂತರ ರಾಜ್ಯಸಭೆಗೆ ಕಳುಹಿಸಲಾಗುತ್ತದೆ. ರಾಜ್ಯಸಭೆ ಮಸೂದೆಯ ಬಗ್ಗೆ ಕೆಲವು ಸಲಹೆ ಮತ್ತು ಸೂಚನೆ ಕೊಡುವ ಹಾಗೂ 14 ದಿನಗಳ ಕಾಲ ತಡೆಹಿಡಿಯುವ ಅವಕಾಶ ಹೊಂದಿದೆ. 14 ದಿನಗಳೊಳಗೆ ಹಿಂತಿರುಗಿಸದೇ ಹೋದರೆ ಮಸೂದೆ ಅಂಗೀಕಾರ ಪಡೆದಿದೆ ಎಂದು ಪರಿಗಣಿಸಿ ಲೋಕಸಭೆ ಅದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸುತ್ತದೆ.
ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ : ಸಂವಿಧಾನ ತಿದ್ದುಪಡಿ ಮಾಡುವ ವಿಷಯದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗೆ ಸಮಾನ ಅಧಿಕಾರವಿದೆ. ತಿದ್ದುಪಡಿಗೆ ಸಂಬಂಧಿಸಿದ ಮಸೂದೆಯನ್ನು ಯಾವುದೇ ಸದನದಲ್ಲಿ ಮೊದಲು ಮಂಡಿಸಬಹುದು. ಆದರೆ ಮಸೂದೆಗೆ ಉಭಯ ಸದನಗಳ ಅಂಗೀಕಾರ ಪಡೆಯಬೇಕು. ಒಂದು ಸದನ ಅಂಗೀಕರಿಸಿದ ಮಸೂದೆಯನ್ನು ಇನ್ನೊಂದು ಸದನ ತಿರಸ್ಕರಿಸಿದರೆ ಸಂವಿಧಾನ ತಿದ್ದುಪಡಿ ಸಾಧ್ಯವಿಲ್ಲ. ಕೆಲವು ಸಂವಿಧಾನ ತಿದ್ದುಪಡಿಗೆ ರಾಜ್ಯಗಳ ವಿಧಾನಸಭೆಗಳ ಸಹಮತವೂ ಅವಶ್ಯಕವಾಗಿದೆ.
ಕೇಂದ್ರ ಕಾರ್ಯಾಂಗ ಕೇಂದ್ರ ಶಾಸಕಾಂಗ ರೂಪಿಸುವ ಕಾಯಿದೆಗಳನ್ನು ಜಾರಿಗೊಳಿಸುವುದೇ ಕಾರ್ಯಾಂಗ. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಹಾಗೂ ನೀತಿಗಳನ್ನು ಜಾರಿಗೊಳಿಸುತ್ತದೆ. ಈ ಕಾರ್ಯಾಂಗವು ರಾಷ್ಟ್ರಪತಿ, ಪ್ರಧಾನಮಂತ್ರಿ ಒಳಗೊಂಡ ಮಂತ್ರಿಮಂಡಲವನ್ನು ಒಳಗೊಂಡಿರುತ್ತದೆ. ರಾಷ್ಟ್ರಪತಿಗಳು ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರಾದರೆ ಪ್ರಧಾನಮಂತ್ರಿಯನ್ನು ಒಳಗೊಂಡ ಮಂತ್ರಿಮಂಡಲ ನಿಜವಾದ ಕಾರ್ಯಾಂಗವಾಗಿದೆ.
ರಾಷ್ಟ್ರಪತಿ
ನಮ್ಮ ಸಂವಿಧಾನದ 52ನೆಯ ವಿಧಿಯು ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಭಾರತದ ರಾಷ್ಟ್ರಪತಿಯವರು ಸಂವಿಧಾನ ಮುಖ್ಯಸ್ಥರೂ, ರಾಷ್ಟ್ರದ ಪ್ರಥಮ ಪ್ರಜೆಯೂ, ಕಾರ್ಯಾಂಗದ ನಾಮಮಾತ್ರ ಮುಖ್ಯಸ್ಥರೂ ಹಾಗೂ ಮೂರು ಸೇನಾಪಡೆಗಳ (ವಾಯುಪಡೆ, ಭೂಪಡೆ, ನೌಕಾಪಡೆ) ಮಹಾದಂಡನಾಯಕರು ಆಗಿರುತ್ತಾರೆ.
ರಾಷ್ಟ್ರಪತಿಯವರ ಚುನಾವಣಾ ವಿಧಾನ : ಸಂವಿಧಾನ 54 ಮತ್ತು 55 ನೇ ವಿಧಿಯಲ್ಲಿ ರಾಷ್ಟ್ರಪತಿಯವರನ್ನು ಚುನಾಯಿಸುವ ವಿಧಾನವನ್ನು ಅಳವಡಿಸಲಾಗಿದೆ. ರಾಷ್ಟ್ರಪತಿಯವರನ್ನು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು, ಎಲ್ಲಾ ರಾಜ್ಯಗಳ ಮತ್ತು ದೆಹಲಿ, ಪುದುಚೆರಿ ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ಮತದಾರ ವರ್ಗ ಚುನಾಯಿಸುತ್ತದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರು ಇವರಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ಇವರ ಅಧಿಕಾರಾವಧಿ 5 ವರ್ಷವಾಗಿದ್ದು, ಪುನರಾಯ್ಕೆಗೆ ಅರ್ಹರಾಗಿರುತ್ತಾರೆ. ಸಂವಿಧಾನವನ್ನು ಉಲ್ಲಂಘಿಸಿದಲ್ಲಿ ರಾಷ್ಟ್ರಪತಿಯವರನ್ನು ಮಹಾಭಿಯೋಗಗೊಳಿಸುವ ಅಧಿಕಾರ ಸಂಸತ್ತಿಗಿರುತ್ತದೆ.
ಮಹಾಭಿಯೋಗ : ರಾಷ್ಟ್ರಪತಿಗಳು ಸಂವಿಧಾನವನ್ನು ಉಲ್ಲಂಘಿಸಿದರೆ ಸಂಸತ್ತು ಯಾವುದೇ ಸದನದಲ್ಲಿ ಮಹಾಭಿಯೋಗ ಗೊತ್ತುವಳಿಯನ್ನು ಮಂಡಿಸಬಹುದಾಗಿದೆ. ಗೊತ್ತುವಳಿಯನ್ನು ಮಂಡಿಸಿದ ಸದನದ ಕನಿಷ್ಠ 1 4 ರಷ್ಟು ಸದಸ್ಯರ ಬೆಂಬಲದ ನೋಟಿಸನ್ನು 14 ದಿನ ಮುಂಚಿತವಾಗಿ ರಾಷ್ಟ್ರಪತಿಗೆ ನೀಡಬೇಕು. ಸಂಸತ್ತಿನ ಎರಡೂ ಸದನಗಳಲ್ಲಿ ಒಟ್ಟು ಸದಸ್ಯರ ಬಹುಮತ ಮತ್ತು ಹಾಜರಿರುವ ಸದಸ್ಯರ ಕನಿಷ್ಠ 2 3 ರಷ್ಟು ಸದಸ್ಯರ ಬಹುಮತದಿಂದ ಸ್ವೀಕೃತವಾದರೆ ರಾಷ್ಟ್ರಪತಿಯ ಸ್ಥಾನವು ಖಾಲಿಯಾಯಿತೆಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ರಾಷ್ಟ್ರಪತಿಯನ್ನು ಮಹಾಭಿಯೋಗ ಗೊಳಿಸಲಾಗಿರುವುದಿಲ್ಲ.
ಅರ್ಹತೆಗಳು
1) ಭಾರತದ ಪ್ರಜೆಯಾಗಿರಬೇಕು.
2) ಕನಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
3) ಲೋಕಸಭೆಯ ಸದಸ್ಯರಾಗಲು ಅರ್ಹತೆ ಹೊಂದಿರಬೇಕು.
4) ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು
ಕಾರ್ಯಾಂಗಾಧಿಕಾರ : ರಾಷ್ಟ್ರದ ಎಲ್ಲಾ ಆಡಳಿತವು ರಾಷ್ಟ್ರಪತಿಯವರ ಹೆಸರಿನಲ್ಲಿಯೇ ನಡೆಯುತ್ತಿದೆ. ಪ್ರಧಾನಮಂತ್ರಿಯವರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ನಂತರ ಪ್ರಧಾನಮಂತ್ರಿ ಸಲಹೆ ಮೇರೆಗೆ ಇತರೆ ಮಂತ್ರಿಗಳನ್ನು ನೇಮಿಸುತ್ತಾರೆ. ಭಾರತದ ಉನ್ನತ ಹುದ್ದೆಗಳಾದ ಅಟಾರ್ನಿ ಜನರಲ್, ಕಂಟ್ರೋಲರ್ ಅಂಡ್ ಆಡಿಟರ್ ಜನರಲ್, ಸುಪ್ರೀಂಕೋರ್ಟಿನ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಧೀಶರು, ರಾಜ್ಯಪಾಲರುಗಳು, ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು, ಚುನಾವಣಾ ಆಯುಕ್ತರು, ರಕ್ಷಣಾ ಪಡೆಗಳ ದಂಡನಾಯಕರುಗಳು ಹಾಗೂ ವಿವಿಧ ರಾಷ್ಟ್ರಗಳಿಗೆ ರಾಯಭಾರಿಗಳನ್ನು ನೇಮಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ.
ಶಾಸನಾಧಿಕಾರ : ರಾಷ್ಟ್ರಪತಿಗಳು ಸಂಸತ್ತಿನ ಅಧಿವೇಶನ ಕರೆಯುವುದು, ಮುಂದೂಡುವುದು, ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಹಾಗೂ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ. ಲೋಕಸಭೆಗೆ ಇಬ್ಬರು ಆಂಗ್ಲೋ-ಇಂಡಿಯನ್ರನ್ನು ಮತ್ತು ರಾಜ್ಯಸಭೆಗೆ 12 ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರವಿದೆ. ಈ ಎಲ್ಲಾ ಅಧಿಕಾರಗಳನ್ನು ಮಂತ್ರಿಮಂಡಲದ ಸಲಹೆಯಂತೆ ನಿರ್ವಹಿಸುತ್ತಾರೆ.
ಹಣಕಾಸಿನ ಅಧಿಕಾರ : ರಾಷ್ಟ್ರಪತಿಯವರ ಅನುಮತಿ ಇಲ್ಲದೆ ಹಣಕಾಸಿನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ.
ತುರ್ತುಪರಿಸ್ಥಿತಿಯ ಅಧಿಕಾರಗಳು: ಅಸಾಮಾನ್ಯ ಸಂದರ್ಭದಲ್ಲಿ ರಾಷ್ಟ್ರಪತಿ ತುರ್ತುಪರಿಸ್ಥಿತಿ ಘೋಷಿಸುವ ಅಧಿಕಾರ ಹೊಂದಿರುತ್ತಾರೆ. ಸಂವಿಧಾನದ ಘಿಗಿIIIನೇ ಭಾಗದಲ್ಲಿ 352ರಿಂದ 360ನೇ ವಿಧಿವರೆಗೆ ತಿಳಿಸಲಾಗಿದೆ. ಈ ಅಂಶಗಳನ್ನು 1935ರ ಭಾರತ ಸರ್ಕಾರದ ಶಾಸನದಿಂದ ಎರವಲು ಪಡೆದುಕೊಳ್ಳಲಾಗಿದೆ. ತುರ್ತುಪರಿಸ್ಥಿತಿ ಸಮಯದಲ್ಲಿ ಮೂಲಭೂತ ಹಕ್ಕುಗಳ ಮೇಲೆ ಉಂಟಾಗುವ ಪರಿಣಾಮವನ್ನು ಜರ್ಮನಿ (ವ್ಹೇಮರ್) ಸಂವಿಧಾನದಿಂದ ಎರವಲು ಪಡೆದುಕೊಳ್ಳಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮೂರು ವಿಧಗಳಿವೆ:
1. ರಾಷ್ಟ್ರೀಯ ತುರ್ತುಪರಿಸ್ಥಿತಿ (ವಿಧಿ 352)
2. ರಾಜ್ಯ ತುರ್ತುಪರಿಸ್ಥಿತಿ (ವಿಧಿ 356)
3. ಹಣಕಾಸು ತುರ್ತುಪರಿಸ್ಥಿತಿ (ವಿಧಿ 360)
1) ರಾಷ್ಟ್ರೀಯ ತುರ್ತುಪರಿಸ್ಥಿತಿ : (352 ನೆಯ ವಿಧಿ) ಇಡೀ ದೇಶಕ್ಕೆ ಅಥವಾ ದೇಶದ ಯಾವುದೇ ಭಾಗದ ಭದ್ರತೆಗೆ ಯುದ್ಧ ಅಥವಾ ಹೊರಗಿನ ಆಕ್ರಮಣದಿಂದ ಧಕ್ಕೆ ಉಂಟಾದಾಗ ಅಥವಾ ದೇಶದೊಳಗಡೆ ಶಸ್ತ್ರಾಸ್ತ್ರಗಳ ಹೋರಾಟದಿಂದ ಕಾನೂನು ಸುವ್ಯವಸ್ಥೆ ವಿಫಲವಾದಾಗ ರಾಷ್ಟ್ರಪತಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸುವ ಅಧಿಕಾರ ಹೊಂದಿರುತ್ತಾರೆ. ಘೋಷಿಸಿದ ಒಂದು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ತುರ್ತುಪರಿಸ್ಥಿತಿ 6 ತಿಂಗಳವರೆಗೆ ಮುಂದುವರೆಯುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಳ್ಳುತ್ತಾ ಅನಿರ್ಧಿಷ್ಟ ಅವಧಿಯವರೆಗೆ ತುರ್ತುಪರಿಸ್ಥಿತಿ ಘೋಷಿಸಬಹುದಾಗಿದೆ. ಉದಾ : 1962, 1971 ಮತ್ತು 1975ರಲ್ಲಿ ಘೋಷಿಸಲಾಗಿದೆ.
2) ರಾಜ್ಯ ತುರ್ತುಪರಿಸ್ಥಿತಿ: (356ನೆಯ ವಿಧಿ) ರಾಜ್ಯವೊಂದರ ರಾಜ್ಯಪಾಲರ ವರದಿಯ ಆಧಾರದ ಮೇಲೆ ಅಥವಾ ತಾವೇ ಸ್ವತಃ ಸಂವಿಧಾನದ ವಿಫಲತೆಯಾದಾಗ 356ನೆಯ ವಿಧಿಯನ್ವಯ ರಾಷ್ಟ್ರಪತಿಗಳು ತುರ್ತುಪರಿಸ್ಥಿತಿ ಘೋಷಿಸಬಹುದು. ಉದಾ: ಕರ್ನಾಟಕದಲ್ಲಿ ಆರು ಬಾರಿ ರಾಜ್ಯ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಈ ತುರ್ತುಪರಿಸ್ಥಿತಿ ಘೋಷಿಸಿದ ಎರಡು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ಗರಿಷ್ಠ ಮೂರು ವರ್ಷಗಳವರೆಗೆ ತುರ್ತುಪರಿಸ್ಥಿತಿ ಘೋಷಿಸಬಹುದಾಗಿದೆ.
3) ಹಣಕಾಸಿನ ತುರ್ತು ಪರಿಸ್ಥಿತಿ : (360ನೆಯ ವಿಧಿ) ದೇಶದ ಹಣಕಾಸಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಕಂಡುಬಂದರೆ 360 ನೇ ವಿಧಿಯನ್ವಯ ಹಣಕಾಸಿನ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ಆದರೆ ಇದನ್ನು ಇದುವರೆಗೂ ಘೋಷಿಸಿಲ್ಲ.
ಪ್ರಧಾನ ಮಂತ್ರಿ
ಅವಿಶ್ವಾಸ ಗೊತ್ತುವಳಿ: ಅಧಿಕಾರ ಚಲಾಯಿಸುತ್ತಿರುವ ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲದ ಮೇಲೆ ಲೋಕಸಭೆಯ ಬಹುಸಂಖ್ಯಾತ ಸದಸ್ಯರು ವಿಶ್ವಾಸ ಕಳೆದುಕೊಂಡರೆ, ಪ್ರಧಾನಿ ಹಾಗೂ ಮಂತ್ರಿ ಮಂಡಲ ರಾಜೀನಾಮೆ ಕೊಡಬೇಕಾಗುತ್ತದೆ. ಇದನ್ನೇ ಅವಿಶ್ವಾಸ ಗೊತ್ತುವಳಿ ಎಂದು ಕರೆಯಲಾಗುತ್ತದೆ.
ಭಾರತದ ಇತಿಹಾಸದಲ್ಲಿ ಇದುವರೆಗೂ ಸುಮಾರು 34 ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಲಾಗಿದೆ
ರಾಜ್ಯ ಸರ್ಕಾರ: ಸಂವಿಧಾನದ ವಿಧಿ 171ರನ್ವಯ ದ್ವಿಸದನ ಶಾಸಕಾಂಗ ಹೊಂದಿರುವ ರಾಜ್ಯಗಳು ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ತೆಲಂಗಾಣ (ನೆನಪಿರಲು ಸರಳ ವಿಧಾನ ಏUಒಃಎಂಖಿ)
ರಾಜ್ಯ ಶಾಸಕಾಂಗ ರಾಜ್ಯ ಶಾಸಕಾಂಗವು ರಾಜ್ಯಪಾಲರನ್ನೂ ಮತ್ತು ಎರಡು ಸದನಗಳಲ್ಲಿ ಅಥವಾ ರಾಜ್ಯದಲ್ಲಿ ಒಂದೇ ಸದನವಿದ್ದರೆ ಆ ಸದನವನ್ನು ಒಳಗೊಂಡಿರುತ್ತದೆ. ಮೇಲ್ಮನೆಯನ್ನು ವಿಧಾನ ಪರಿಷತ್ ಎಂತಲೂ, ಕೆಳಮನೆಯನ್ನು ವಿಧಾನಸಭೆ ಎಂತಲೂ ಕರೆಯಲಾಗಿದೆ. ವಿಧಾನಸಭೆಯು ರಾಜ್ಯದ ಜನತೆಯನ್ನು ಪ್ರತಿನಿಧಿಸಿದರೆ, ವಿಧಾನಪರಿಷತ್ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ.
ವಿಧಾನಸಭೆ
ವಿಧಾನಸಭೆಯ ಸದಸ್ಯರ ಸಂಖ್ಯೆಯು ಆ ರಾಜ್ಯದ ಜನಸಂಖ್ಯೆಯನ್ನು ಆಧರಿಸಿರುತ್ತದೆ. ಯಾವುದೇ ರಾಜ್ಯದ ವಿಧಾನಸಭಾ ಸದಸ್ಯರ ಸಂಖ್ಯೆ 500ಕ್ಕಿಂತ ಹೆಚ್ಚಾಗಿರಬಾರದು, 60ಕ್ಕಿಂತ ಕಡಿಮೆ ಇರಬಾರದು. ರಾಜ್ಯಪಾಲರು ವಿಧಾನಸಭೆಯಲ್ಲಿ ಆಂಗ್ಲೋ ಭಾರತೀಯರ ಸರಿಯಾದ ಪ್ರಾತಿನಿಧ್ಯವಿಲ್ಲವೆಂದು ನಿರ್ಧರಿಸಿದರೆ ಒಬ್ಬ ಆಂಗ್ಲೋ ಭಾರತೀಯನನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ. ಆದರೂ ಚಿಕ್ಕ ರಾಜ್ಯಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದೆ. ಉದಾ: ಮಿಜೋರಾಂ, ಗೋವಾದಲ್ಲಿ ತಲಾ 40 ಸದಸ್ಯರಿದ್ದಾರೆ. ಕರ್ನಾಟಕ ವಿಧಾನಸಭೆಯು 225 ಸದಸ್ಯರನ್ನು ಹೊಂದಿದೆ. 224 ಸದಸ್ಯರು ಚುನಾವಣೆಯ ಮೂಲಕ ಚುನಾಯಿಸಲ್ಪಟ್ಟರೆ ಉಳಿದ ಒಬ್ಬರು ಆಂಗ್ಲೋ-ಇಂಡಿಯನ್ನರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.
ವಿಧಾನ ಪರಿಷತ್ : ರಾಜ್ಯ ಶಾಸಕಾಂಗದ ಮೇಲ್ಮನೆಯನ್ನು ವಿಧಾನ ಪರಿಷತ್ ಎಂದು ಕರೆಯಲಾಗುತ್ತದೆ. ಇದರ ಸದಸ್ಯರ ಗರಿಷ್ಠ ಸಂಖ್ಯೆಯು ಆ ರಾಜ್ಯದ ವಿಧಾನಸಭಾ ಸದಸ್ಯರ ಮೂರನೇ ಒಂದು ಭಾಗದಷ್ಟಿರುತ್ತದೆ. ಆದರೆ 40 ಕ್ಕಿಂತ ಕಡಿಮೆ ಇರಬಾರದು. ಕರ್ನಾಟಕದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ 75. ಈ ಸದಸ್ಯರು 5 ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ. ವಿಧಾನಸಭಾ ಸದಸ್ಯರಿಂದ, ಸ್ಥಳೀಯ ಸಂಸ್ಥೆಗಳಿಂದ, ಪದವೀಧರ ಕ್ಷೇತ್ರದಿಂದ, ಶಿಕ್ಷಕರ ಕ್ಷೇತ್ರದಿಂದ ಚುನಾಯಿಸಲ್ಪಟ್ಟರೆ, ಕಲೆ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ, ವಿಜ್ಞಾನ ಮತ್ತು ಸಹಕಾರ ಚಳವಳಿ ಕ್ಷೇತ್ರಗಳಲ್ಲಿನ ಸೇವೆಯನ್ನು ಪರಿಗಣಿಸಿ ರಾಜ್ಯಪಾಲರು ನಾಮಕರಣ ಮಾಡುತ್ತಾರೆ. ವಿಧಾನ ಪರಿಷತ್ತು ಖಾಯಂ ಸದನವಾಗಿರುತ್ತದೆ.
ಸದಸ್ಯರಿಗಿರಬೇಕಾದ ಅರ್ಹತೆಗಳು :
(1) ಭಾರತದ ಪ್ರಜೆಯಾಗಿರಬೇಕು.
(2) 30 ವರ್ಷ ವಯೋಮಿತಿ ಹೊಂದಿರಬೇಕು.
(3) ವಿಧಾನಸಭಾ ಸದಸ್ಯರಾಗಲು ಇರಬೇಕಾದ ಎಲ್ಲಾ ಅರ್ಹತೆಗಳನ್ನು ಪಡೆದಿರಬೇಕು.
ಪ್ರತಿ ಎರಡು ವರ್ಷಕ್ಕೊಮ್ಮೆ ಅವಧಿ ಪೂರ್ಣಗೊಂಡ 3 1 ರಷ್ಟು ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಅಷ್ಟೇ ಸದಸ್ಯರು ಆಯ್ಕೆಯಾಗುತ್ತಾರೆ. ಆಯ್ಕೆಯಾದ ಸದಸ್ಯರ ಅಧಿಕಾರ ಅವಧಿ 6 ವರ್ಷ.
ಶಾಸನೀಯ ಅಧಿಕಾರ : ಶಾಸನ ಮಾಡುವಲ್ಲಿ ವಿಧಾನ ಪರಿಷತ್ ಸಹ ಅಧಿಕಾರ ಪಡೆದಿದೆ. ಸಾಮಾನ್ಯ ಮಸೂದೆಯನ್ನು ಎರಡೂ ಸದನದಲ್ಲಿ ಮಂಡಿಸಬಹುದು. ಒಂದು ಸದನ ಅಂಗೀಕರಿಸಿದ ಮಸೂದೆಯನ್ನು ಇನ್ನೊಂದು ಸದನಕ್ಕೆ ಕಳುಹಿಸಲಾಗುತ್ತದೆ. ವಿಧಾನ ಪರಿಷತ್ ಮಸೂದೆಯನ್ನು 3 ತಿಂಗಳವರೆಗೆ ತಡೆಹಿಡಿಯಬಹುದು. ಎರಡನೇ ಬಾರಿಗೆ ಮತ್ತೆ ಕಳುಹಿಸಿಕೊಟ್ಟಾಗ ಒಂದು ತಿಂಗಳೊಳಗೆ ಅಂಗೀಕಾರ ನೀಡಬೇಕು. ಇಲ್ಲವಾದಲ್ಲಿ ಎರಡೂ ಸದನಗಳಿಂದ ಅಂಗೀಕರಿಸಲ್ಪಟ್ಟಿದೆ ಎಂದು ಭಾವಿಸಿ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿಕೊಡಲಾಗುತ್ತದೆ.
ಹಣಕಾಸಿನ ಅಧಿಕಾರ : ರಾಜ್ಯಪಾಲರ ಒಪ್ಪಿಗೆ ಇಲ್ಲದೆ ಹಣಕಾಸಿನ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವಂತಿಲ್ಲ. ರಾಜ್ಯದ ಹಣಕಾಸು ಆಯೋಗ ನೇಮಿಸುವ ಅಧಿಕಾರ ಪಡೆದಿದ್ದಾರೆ. ರಾಜ್ಯದ ಸಾದಿಲ್ವಾರು ನಿಧಿ ಇವರ ಹೆಸರಿನಲ್ಲಿದ್ದು ಬರ, ಪ್ರವಾಹ, ಭೂಕಂಪದಂತಹ ಆಕಸ್ಮಿಕ ಘಟನೆಗಳನ್ನು ನಿಭಾಯಿಸಲು ಈ ನಿಧಿಯಿಂದ ಹಣ ಬಿಡುಗಡೆ ಮಾಡುವ ಅಧಿಕಾರವಿದೆ
ನ್ಯಾಯಾಂಗೀಯ ಅಧಿಕಾರ : ಅಪರಾಧ ಮಾಡಿ ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾದಾನ ನೀಡುವ, ಕಡಿಮೆ ಮಾಡುವ, ಮುಂದೂಡುವ ಅಥವಾ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರ ಇವರಿಗಿದೆ. ರಾಜ್ಯದ ಅಡ್ವೋಕೇಟ್ ಜನರಲ್ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವಿದೆ.
ಭೂಗೋಳ ವಿಜ್ಞಾನ
ನಮ್ಮ ರಾಜ್ಯ - ಕರ್ನಾಟಕ: ಕರ್ನಾಟಕ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಇದನ್ನು ಕರುನಾಡು (ಕರ್ + ನಾಡು - ಅಂದರೆ ಕಪ್ಪುಮಣ್ಣಿನ ನಾಡು) ಎಂದು ಕರೆಯುತ್ತಿದ್ದರು. ತಮಿಳಿನ ‘ಶಿಲಪ್ಪದಿಕಾರಂ’ ಪ್ರಾಚೀನ ಕೃತಿಯಲ್ಲಿ ‘ಕರುನಾಟ್’ ಎಂಬ ಶಬ್ದದಿಂದ ಕರ್ನಾಟಕ ಎಂದು ಕರೆದಿರುವುದು ತಿಳಿದುಬರುತ್ತದೆ. ಕರುನಾಟ್ ಎಂದರೆ ಉನ್ನತ ಅಥವಾ ಎತ್ತರದಲ್ಲಿರುವ ನಾಡು ಎಂದರ್ಥ. ಇದು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆಂದು ನೃಪತುಂಗನ ಆಸ್ಥಾನಿಕ ಕವಿ ಶ್ರೀವಿಜಯನ ಅಲಂಕಾರಗ್ರಂಥ ಕವಿರಾಜಮಾರ್ಗದಲ್ಲಿ ಉಲ್ಲೇಖಿಸಲಾಗಿದೆ.
ಭೌಗೋಳಿಕ ಸ್ಥಾನ ಭಾರತದ 29 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇದು ಭಾರತದ ದಕ್ಷಿಣದಲ್ಲಿದ್ದು, ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ. ಇದು 110-31| ಮತ್ತು 180-45| ಉತ್ತರ ಅಕ್ಷಾಂಶಗಳು ಹಾಗೂ 740-12| ಮತ್ತು 780-40|, ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ. ಅತ್ಯಂತ ಉತ್ತರದ ತುದಿಯಾzಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಿಂದ ದಕ್ಷಿಣದ ತುದಿಯಾದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 750 ಕಿ.ಮೀ. ಉದ್ದವಿದೆ. ಪಶ್ಚಿಮದಿಂದ ಪೂರ್ವಕ್ಕೆ 400 ಕಿ.ಮೀ.ಗಳಷ್ಟು ಅಗಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರವು ಅತ್ಯಂತ ಪಶ್ಚಿಮದಲ್ಲಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಪೂರ್ವ ತುದಿಯಲ್ಲಿದೆ. ಕರ್ನಾಟಕ ರಾಜ್ಯವು ಭೂ ಮತ್ತು ಜಲ ಮೇರೆಗಳೆರಡನ್ನೂ ಸಹ ಒಳಗೊಂಡಿರುವುದು. ಪಶ್ಚಿಮಕ್ಕೆ ಅರಬ್ಬೀ ಸಮುದ್ರವಿದ್ದು, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರಪ್ರದೇಶ, ದಕ್ಷಿಣ ಮತ್ತು ಆಗ್ನೇಯಕ್ಕೆ ತಮಿಳುನಾಡು, ನೈಋತ್ಯಕ್ಕೆ ಕೇರಳ, ವಾಯವ್ಯಕ್ಕೆ ಗೋವಾ ರಾಜ್ಯಗಳು ಮೇರೆಗಳಾಗಿವೆ. ಆಕಾರದಲ್ಲಿ ಕರ್ನಾಟಕವು ಗೋಡಂಬಿಯನ್ನು ಹೋಲುತ್ತದೆ. ವಿಸ್ತೀರ್ಣ ಕರ್ನಾಟಕ ರಾಜ್ಯವು 1,91,791 ಚದರ ಕಿ.ಮೀ. ವಿಸ್ತಾರವಾಗಿದೆ. ವಿಸ್ತೀರ್ಣದಲ್ಲಿ ಭಾರತದ ಎಂಟನೆಯ ದೊಡ್ಡ ರಾಜ್ಯ ಹಾಗೂ 2011 ರ ಜನಗಣತಿಯ ಪ್ರಕಾರ 6,11,30,704 ಜನಸಂಖ್ಯೆಯನ್ನು ಹೊಂದಿದ್ದು, ಜನಸಂಖ್ಯೆಯಲ್ಲಿ ಒಂಭತ್ತನೆಯ ಸ್ಥಾನವನ್ನು ಹೊಂದಿದೆ. ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣವು ಶೇ. 5.83 ಭಾಗದಷ್ಟಿದೆ. ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ಅತಿ ದೊಡ್ಡದುಹಾಗೂ ಬೆಂಗಳೂರು ನಗರ ಅತಿ ಚಿಕ್ಕ ಜಿಲ್ಲೆಯಾಗಿದೆ.
ನಿಮಗಿದು ತಿಳಿದರಲಿ: ಕೇಂದ್ರ ಸರ್ಕಾರದ ವಿಶೇಷ ಸ್ಥಾನ ಪಡೆದಿರುವ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು-ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ. ಬೆಂಗಳೂರು ಕರ್ನಾಟಕದ ರಾಜಧಾನಿ. ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಕರ್ನಾಟಕವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ; ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳು. ಕೇಂದ್ರ ಸರ್ಕಾರದ ವಿಶೇಷ ಸ್ಥಾನ ಪಡೆದಿರುವ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು-ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ.
ಕರ್ನಾಟಕದ ಪ್ರಾಕೃತಿಕ ವಿಭಾಗಗಳು ಭೂರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನಾಧರಿಸಿ ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ :
(1) ಕರಾವಳಿ ಮೈದಾನ
(2) ಮಲೆನಾಡು
(3) ಮೈದಾನ ಪ್ರದೇಶ.
1. ಕರಾವಳಿ ಮೈದಾನ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಫಲವಾಗಿ ಕರ್ನಾಟಕ ರಾಜ್ಯಕ್ಕೆ ಸಮುದ್ರ ತೀರ ಹಾಗೂ ಕರಾವಳಿ ಮೈದಾನ ಲಭ್ಯವಾಯಿತು. ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದವರೆಗೆ 320 ಕಿ.ಮೀ. ಉದ್ದವಿದೆ ಹಾಗೂ 12 ರಿಂದ 64 ಕಿ.ಮೀ. ಅಗಲವಾಗಿದೆ. ದಕ್ಷಿಣದಲ್ಲಿ ಅಗಲವಾಗಿದ್ದು ಉತ್ತರದ ಕಡೆಗೆ ಕಿರಿದಾಗುತ್ತಾ ಕಡಿದಾದ ಇಳಿಜಾರಿನಿಂದ ಕೂಡಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 200 ಮೀಟರ್ಗಳನ್ನು ಮೀರುತ್ತದೆ. ಇದನ್ನು ‘ಕೆನರಾ ಅಥವಾ ಕರ್ನಾಟಕ ಕರಾವಳಿ’ ಎಂದೇ ಕರೆಯುವರು. ಮಂಗಳೂರು ಸಮೀಪದ ಸೋಮೇಶ್ವರ, ಉಳ್ಳಾಲ, ಪಣಂಬೂರು, ಉಡುಪಿ ಸಮೀಪದ ಮಲ್ಪೆ, ಕಾರವಾರ, ಹೊನ್ನಾವರ ಸಮೀಪದ ಮುರ್ಡೇಶ್ವರ, ಮರವಂತೆ ಮತ್ತು ಗೋಕರ್ಣ ಸಮೀಪದ ಓಂ ಬೀಚ್ ಪ್ರಮುಖವಾಗಿವೆ. ಕರಾವಳಿಯ ಸಮೀಪ ಅನೇಕ ಸಣ್ಣ ಸಣ್ಣ ದ್ವೀಪಗಳಿವೆ. ಅವುಗಳಲ್ಲಿ ಮಲ್ಪೆಗೆ ಸಮೀಪದಲ್ಲಿರುವ ಸೇಂಟ್ ಮೇರೀಸ್ ದ್ವೀಪ (ಕೋಕೋನಟ್ ದ್ವೀಪ) ಕಾರವಾರ ಸಮೀಪದ ಅಚಿಜ ದ್ವೀಪ, ದೇವಗಡ, ಕಾಂಜಿಗುಡ್ಡ ದ್ವೀಪ ಮುಂತಾದುವು.
• ಕರ್ನಾಟಕದ ಹೆಬ್ಬಾಗಿಲು - ನವ ಮಂಗಳೂರು ಬಂದರು.
• ಸೇಂಟ್ ಮೇರೀಸ್ ದ್ವೀಪವನ್ನು ಸ್ಥಳೀಯವಾಗಿ `ತೋನ್ಸೆಪಾರ್’ ಎಂದು ಕರೆಯುವರು.
• ಮುರ್ಡೇಶ್ವರದ ಸಮೀಪ `ನೇತ್ರಾಣಿ’ ದ್ವೀಪವಿದೆ. ಇಲ್ಲಿ ಪಾರಿವಾಳಗಳು ಅಧಿಕವಾಗಿರುವುದರಿಂದ ಇದನ್ನು `ಪಿಜಿನ್ ಐಲ್ಯಾಂಡ್’ ಎಂದು ಕರೆಯುತ್ತಾರೆ.
2. ಮಲೆನಾಡು ಪ್ರದೇಶ ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳನ್ನೇ ಮಲೆನಾಡು ಎನ್ನುವರು. ಇದನ್ನೇ ‘ಸಹ್ಯಾದ್ರಿ ಬೆಟ್ಟ’ಗಳೆಂತಲೂ ಕರೆಯುವರು. ಮುಳ್ಳಯ್ಯನಗಿರಿಯು (1913 ಮೀ)ರಾಜ್ಯದಲ್ಲೇ ಎತ್ತರವಾದುದು 1. ಚಾರ್ಮಾಡಿ ಘಾಟಿ : ಮಂಗಳೂರು ಮತ್ತು ಚಿಕ್ಕಮಗಳೂರುಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
2. ಶಿರಾಡಿ ಘಾಟಿ : ಹಾಸನ - ಸಕಲೇಶಪುರ - ಮಂಗಳೂರುಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
3. ಆಗುಂಬೆ ಘಾಟಿ : ಶಿವಮೊಗ್ಗ ಮತ್ತು ಉಡುಪಿಯ ನಡುವೆ ಸಂಪರ್ಕ ಕಲ್ಪಿಸುತ್ತದೆ.
4. ಹುಲಿಕಲ್ ಘಾಟಿ : ಶಿವಮೊಗ್ಗ - ಕುಂದಾಪುರ ನಡುವೆ ಸಂಪರ್ಕ ಕಲ್ಪಿಸುತ್ತದೆ.
ಅಧಿಕ ಕಾಫಿ ಬೆಳೆಯುವುದರಿಂದ ಚಿಕ್ಕಮಗಳೂರನ್ನು ‘ಕಾಫಿನಾಡು’ ಎನ್ನುವರು. ಕೊಡಗು ಜಿಲ್ಲೆಯಲ್ಲಿ ತಂಪಾದ ವಾತಾವರಣವಿರುವುದರಿಂದ ‘ಕರ್ನಾಟಕದ ಕಾಶ್ಮೀರ’ ಎಂದು ಕರೆಯುವರು ಹಾಗೂ ಇಲ್ಲಿ ಕಿತ್ತಳೆ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ‘ಕಿತ್ತಳೆನಾಡು’ ಎಂದೂ ಕರೆಯುವರು. ಇಂದು ಮಲೆನಾಡು ಪ್ರದೇಶವನ್ನು ‘ಜೀವಿವೈವಿಧ್ಯತಾ ವಲಯ’ ಎಂದು ಗುರುತಿಸಿ ರಕ್ಷಿಸಲಾಗುತ್ತಿದೆ. ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಮಲೆನಾಡು ಜಿಲ್ಲೆಗಳಾಗಿªಬಾಬಾಬುಡನ್ಗಿರಿಯ ಮತ್ತೊಂದು ಹೆಸರು ಚಂದ್ರದ್ರೋಣ ಪರ್ವತ. ಉತ್ತರದ ಮೈದಾನದಲ್ಲಿವೆ. ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ವಿರುವುದರಿಂದ ಇದನ್ನು ‘ಬಿಸಿಲ ನಾಡು’ ಎನ್ನುವರುತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟ. ಇದು ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಏಕಶಿಲಾ ಬೆಟ್ಟವಾಗಿದೆ.
ಕರ್ನಾಟಕದ ವಾಯುಗುಣ, ಮಣ್ಣುಗಳು,
ಸ್ವಾಭಾವಿಕ ಸಸ್ಯವರ್ಗ ಕರ್ನಾಟಕದ ವಾಯುಗುಣ ಕರ್ನಾಟಕದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವಿದೆ.
ವಾಯುಗುಣದ ಋತುಗಳು : ಭಾರತದಂತೆ ಕರ್ನಾಟಕದ ವಾರ್ಷಿಕ ವಾಯುಗುಣವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ತಿಳಿಯಬಹುದು.
1) ಬೇಸಿಗೆ ಕಾಲ (ಮಾರ್ಚ್-ಮೇ)
2) ಮಳೆಗಾಲ (ಜೂನ್-ಸೆಪ್ಟೆಂಬರ್)
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್-ನವೆಂಬರ್)
4) ಚಳಿಗಾಲ (ಡಿಸೆಂಬರ್-ಫೆಬ್ರವರಿ)
1. ಬೇಸಿಗೆ ಕಾಲ : ಈ ಕಾಲದಲ್ಲಿ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ.ಮಾರ್ಚ್ ತಿಂಗಳ ನಂತರ ರಾಜ್ಯಾದ್ಯಂತ ಉಷ್ಣಾಂಶವು ಏಕಪ್ರಕಾರವಾಗಿ ಹೆಚ್ಚಾಗುತ್ತಾ ಏಪ್ರಿಲ್-ಮೇ ತಿಂಗಳುಗಳಲ್ಲಿ ಅದು ಗರಿಷ್ಠ ಮಟ್ಟವನ್ನು ತಲುಪುವುದು. ರಾಯಚೂರಿನಲ್ಲಿ ಸಾಮಾನ್ಯವಾಗಿ ಪ್ರತಿವರ್ಷ 45.60 ಸೆ. ಉಷ್ಣಾಂಶ ದಾಖಲಾಗುವುದರಿಂದ ಅದು ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶವನ್ನು ದಾಖಲಿಸುವ ಪ್ರದೇಶವಾಗಿದೆ.
2. ಮಳೆಗಾಲ : ಇದನ್ನು ‘ನೈಋತ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಕರೆಯುತ್ತಾರೆ. ಅರಬ್ಬಿಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮಲೆನಾಡು ಘಟ್ಟಗಳು ತಡೆದು ಅಧಿಕ ಮಳೆ ಸುರಿಸುತ್ತವೆ. ಪೂರ್ವದ ಕಡೆಗೆ ಹೋದಂತೆಲ್ಲಾ ಮಳೆಯ ಪ್ರಮಾಣ ಕಡಿಮೆಯಾಗುತ್ತದೆÉ. ಹೀಗಾಗಿ ಪೂರ್ವದ ಮೈದಾನವು ಮಳೆ ನೆರಳಿನ ಪ್ರದೇಶವಾಗಿ ಪರಿಣಮಿಸುತ್ತದೆ. ಆಗುಂಬೆ ರಾಜ್ಯದ ಅಧಿಕ ಮಳೆ ಬೀಳುವ ಸ್ಥಳವಾಗಿದೆ. ಇದನ್ನು ದಕ್ಷಿಣದ ಚಿರಾಪುಂಜಿ ಎನ್ನುವರು. ಭಾಗಮಂಡಲ ಮತ್ತು ಹುಲಿಕಲ್ಗಳು ಇತರ ಅಧಿಕ ಮಳೆ ಪಡೆಯುವ ಸ್ಥಳಗಳಾಗಿವೆ. ಚಿತ್ರದುರ್ಗದ ಚಳ್ಳಕೆರೆ ಸಮೀಪದ ನಾಯಕನ ಹಟ್ಟಿ ಅತಿ ಕಡಿಮೆ ಮಳೆ ಬೀಳುವ ಸ್ಥಳ.
3. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ : ಇದನ್ನು ‘ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಕರೆಯುತ್ತಾರೆ. ಉತ್ತರ ಭಾರತದಲ್ಲಿ ಉಷ್ಣಾಂಶವು ಕಡಿಮೆಯಾಗಿ ಒತ್ತಡ ಹೆಚ್ಚಾಗುವುದರಿಂದ ನೈಋತ್ಯ ಮಾನ್ಸೂನ್ ಮಾರುತಗಳು ಈಶಾನ್ಯದಿಂದ ನೈಋತ್ಯಕ್ಕೆ ಬೀಸುತ್ತ ನಿರ್ಗಮಿಸುತ್ತವೆ. ಭೂಭಾಗದಿಂದ ಬೀಸುವ ಈ ಮಾರುತಗಳು ಮಳೆ ತರುವುದಿಲ್ಲ.
4. ಚಳಿಗಾಲ : ಈ ಕಾಲದಲ್ಲಿ ಕಡಿಮೆ ಉಷ್ಣಾಂಶ, ಕಡಿಮೆ ಆದ್ರ್ರ್ರತೆ, ಮಳೆಯೂ ಕಡಿಮೆ ಹಾಗೂ ತಿಳಿಯಾದ ಆಕಾಶವುಳ್ಳ ಹವಾಗುಣವಿರುತ್ತದೆ. ಸರಾಸರಿ ಉಷ್ಣಾಂಶ 250 ರಿಂದ 270 ಸೆಲ್ಸಿಯಸ್. ಜನವರಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ತಿಂಗಳು. ಇದನ್ನು ‘ಕರ್ನಾಟಕದ ಪ್ರವಾಸ ಮಾಸ’ ಎನ್ನುವರು.
ಕರ್ನಾಟಕದ ಮಣ್ಣುಗಳು
1. ಕೆಂಪು ಮಣ್ಣು: ಇದು ಗ್ರಾನೈಟ್, ನೀಸ್ ಶಿಲಾದ್ರವ್ಯಗಳಿಂದ ರೂಪುಗೊಂಡಿದ್ದು, ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ. ಈ ಮಣ್ಣು ಅಷ್ಟೊಂದು ಫಲವತ್ತಾದುದಲ್ಲ. ತೇವಾಂಶ ಉಳಿಸಿಕೊಳ್ಳುವ ಸಾಮಥ್ರ್ಯ ಕಡಿಮೆ. ಈ ಮಣ್ಣಿನಲ್ಲಿ ತೃಣಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಜೋಳ, ಹಾರಕ ಇತ್ಯಾದಿ, ತಂಬಾಕು, ದ್ವಿದಳ ಧಾನ್ಯಗಳು, ನೆಲಗಡಲೆಗಳಂತಹ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಬಹುದು. ನೀರಾವರಿ ಸೌಲಭ್ಯವಿರುವ ಕಡೆ ಭತ್ತ, ಕಬ್ಬು, ಆಲೂಗೆಡ್ಡೆ, ತರಕಾರಿಗಳು, ಬಾಳೆ, ತೆಂಗು, ಅಡಕೆ ಇತ್ಯಾದಿ ಬೆಳೆಯಲು ಯೋಗ್ಯವಾಗಿದೆ. ತುಮಕೂರು, ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.
2. ಕಪ್ಪು ಮಣ್ಣು: ಇದು ಬಸಾಲ್ಟ್ ಶಿಲೆಯ ಶಿಥಿಲೀಕರಣದಿಂದಾಗಿದ್ದು, ಇದರಲ್ಲಿ ಹೆಚ್ಚು ಮೆಗ್ನೀಷಿಯಂ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್ಗಳಿರುತ್ತವೆ. ಹೀಗಾಗಿ ಇದರ ಬಣ್ಣ ಕಪ್ಪು. ಇದನ್ನು ‘ಎರೆಮಣ್ಣು’ಅಥವಾ ‘ಕಪ್ಪು ಹತ್ತಿ ಮಣ್ಣು’ (ಃಟಚಿಛಿಞ ಛಿoಣಣoಟಿ soiಟ) ಎಂದೂ ಕರೆಯುವರು. ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಈ ಮಣ್ಣಿನಲ್ಲಿ ಹತ್ತಿ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಮೆಕ್ಕೆಜೋಳ, ಬೇಳೆಕಾಳು, ಕಬ್ಬು, ಈರುಳ್ಳಿ ಮತ್ತು ಭತ್ತವನ್ನು ಬೆಳೆಯಲಾಗುತ್ತದೆ. ಈ ಮಣ್ಣು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ.
3. ಜಂಬಿಟ್ಟಿಗೆ ಮಣ್ಣು : ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ವಿಧದ ಮಣ್ಣು ಕಂಡುಬರುತ್ತದೆ. ನೀರಿನಲ್ಲಿ ಕರಗುವ ಸುಣ್ಣ ಮತ್ತು ಸಿಲಿಕೇಟ್ಗಳು ಮಳೆ ನೀರಿನಲ್ಲಿ ಕರಗಿ ತಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತವೆ. ನೀರಿನಲ್ಲಿ ಕರಗದಂತಹ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು ಮೇಲ್ಪದರದಲ್ಲಿ ಉಳಿಯುತ್ತವೆ. ಈ ಮಣ್ಣಿನಲ್ಲಿ ಗೋಡಂಬಿ, ಕಾಫಿ, ಚಹ, ಏಲಕ್ಕಿ, ಮೆಣಸು, ರಬ್ಬರ್, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಮುಂತಾದ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಹಂಚಿಕೆಯಾಗಿದೆ. 4. ಕರಾವಳಿಯ ಮೆಕ್ಕಲು ಮಣ್ಣು : ನದಿ, ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಸಂಗ್ರಹವಾಗಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಣ್ಣು ಕಂಡುಬರುತ್ತದೆ
ಸಸ್ಯವರ್ಗದ ವಿಧಗಳು
ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ‘ಸ್ವಾಭಾವಿಕ ಸಸ್ಯವರ್ಗ’ ಎನ್ನುವರು
1. ನಿತ್ಯಹರಿದ್ವರ್ಣದ ಕಾಡುಗಳು : ಪ್ರಮುಖವಾಗಿ 250 ಸೆಂ.ಮೀ.ಗಳಿಗೂ ಅಧಿಕ ವಾರ್ಷಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ
2. ಎಲೆ ಉದುರಿಸುವ ಸಸ್ಯವರ್ಗ : ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ‘ಎಲೆ ಉದುರಿಸುವ ಸಸ್ಯವರ್ಗ’ ಎನ್ನುವರು. ವಾರ್ಷಿಕ 60-120 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗವಿದೆ..
3. ಮಿಶ್ರ ಬಗೆಯ ಕಾಡುಗಳು : ನಿತ್ಯಹರಿದ್ವರ್ಣ ಮತ್ತು ಅಗಲ ಎಲೆಗಳನ್ನುಳ್ಳ ಎಲೆ ಉದುರಿಸುವ ಪ್ರಕಾರದ ಮರಗಳು ಬೆಳೆಯುವ ಸಸ್ಯವರ್ಗವೇ ಮಿಶ್ರ ಬಗೆಯ ಕಾಡುಗಳು. ವಾರ್ಷಿಕ 120-150 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗ ಕಂಡುಬರುತ್ತದೆ.
4. ಹುಲ್ಲುಗಾವಲು ಮತ್ತು ಕುರುಚಲು ಸಸ್ಯಗಳು : ಕರ್ನಾಟಕದಲ್ಲಿ 60 ಸೆಂ.ಮೀ.ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಇಂತಹ ಸಸ್ಯವರ್ಗ ಹಂಚಿಕೆಯಾಗಿದೆ.ಕÀರಾವಳಿಯಂಚಿನಲ್ಲಿರುವ ನದಿ ಮುಖಜಭೂಮಿ, ಅಳಿವೆಗಳು ಹಾಗೂ ಮರಳು ದಂಡೆಗಳ ಭಾಗಗಳಲ್ಲಿ ಬಿಳಿಲುಗಳಿಂದ ಕೂಡಿರುವ ಸಸ್ಯಗಳಿವೆ. ಇವು ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮಥ್ರ್ಯವನ್ನು ಹೊಂದಿವೆ. ಇದನ್ನೇ ‘ಮ್ಯಾಂಗ್ರೋವ್ ಸಸ್ಯ’ಗಳೆನ್ನುವರು• ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.
• ಶಿಡ್ಲಘಟ್ಟದ ಟಿ. ವೆಂಕಟಾಪುರ ಬಳಿ ಅತಿದೊಡ್ಡ ಬೇವಿನ ಮರವಿದೆ.
• ಸವಣೂರಿನ ಬಳಿ ಬೃಹತ್ ಹುಣಸೆ ಮರವಿದೆ.
ಅರಣ್ಯಗಳ ಹಂಚಿಕೆ : ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ.22.6 ಭಾಗದಷ್ಟಾಯಿತು. ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ ರಾಜ್ಯಗಳಲ್ಲಿ ಕರ್ನಾಟಕವು ಏಳನೆಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡ ಜಿಲ್ಲೆ. ತರುವಾಯ ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿವೆ. ವಿಜಯಪುರ ಅತಿ ಕಡಿಮೆ ಅರಣ್ಯವುಳ್ಳ ಜಿಲ್ಲೆಯಾಗಿದೆ.
ಪ್ರಾಣಿ ಸಂಪತ್ತು: ಕರ್ನಾಟಕದಲ್ಲಿ 5 ಪ್ರಮುಖ ಹುಲಿ ಸಂರಕ್ಷಣಾ ವಲಯಗಳಿವೆ. ಬಂಡೀಪುರ, ನಾಗರಹೊಳೆ, ಭದ್ರಾ, ದಾಂಡೇಲಿ, ಅನ್ಸಿ ಮತ್ತು ಬಿಳಿಗಿರಿರಂಗನಾಥ ದೇವಾಲಯಗಳು
• ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ - ರಂಗನತಿಟು
ಇಂದು ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನ, 5 ಪಕ್ಷಿಧಾಮ ಮತ್ತು ಸುಮಾರು 27 ವನ್ಯ ಪ್ರಾಣಿಧಾಮಗಳಿವೆ.
ಕರ್ನಾಟಕದ ಜಲಸಂಪನ್ಮೂಲಗಳುಕರ್ನಾಟಕದ ನದಿಗಳು: ಜಲ ಸಂಪನ್ಮೂಲಗಳಲ್ಲಿ ನದಿಗಳಿಗೆ ಮಹತ್ವದ ಸ್ಥಾನವಿದೆ. ಕರ್ನಾಟಕದ ನದಿ ಜಾಲಗಳನ್ನು ಮುಖ್ಯವಾಗಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಎಂದು ಎರಡು ವಿಧಗಳಾಗಿ ವಿಂಗಡಿಸಬಹುದು.
ನಿಮಗೆ ತಿಳಿದಿರಲಿ: ಕಾವೇರಿಯು ತನ್ನ ಪಾತ್ರದಲ್ಲಿ ಚುಂಚನಕಟ್ಟೆ, ಶಿವನಸಮುದ್ರ ಮತ್ತು ಹೊಗೇನ್ಕಲ್ ಎಂಬಲ್ಲಿ ಮೂರು ಜಲಪಾತಗಳು ಮತ್ತು ಶ್ರೀರಂಗಪಟ್ಟಣ, ಶಿವನಸಮುದ್ರ ಮತ್ತು ಶ್ರೀರಂಗ ಎಂಬಲ್ಲಿ 3 ದ್ವೀಪಗಳನ್ನು ನಿರ್ಮಿಸಿದೆ.
1. ಪೂರ್ವಾಭಿಮುಖವಾಗಿ ಹರಿಯುವ ನದಿಗಳು : ಕೃಷ್ಣಾ, ಕಾವೇರಿ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ ಪ್ರಮುಖ ನದಿಗಳು. ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೇ ಮುಖ್ಯ ನದಿ. ಇದು ಮಹಾಬಲೇಶ್ವರ ಎಂಬಲ್ಲಿ ಉಗಮ ಹೊಂದಿ 1392 ಕಿ.ಮೀ. ದೂರ ಪೂರ್ವದೆಡೆಗೆ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ. ಆದರೆ ಇದು ಕರ್ನಾಟಕದಲ್ಲಿ 480 ಕಿ.ಮೀ. ದೂರ ಹರಿಯುವುದು. ಭೀಮ, ತುಂಗಭದ್ರ, ಘಟಪ್ರಭ ಮತ್ತು ಮಲಪ್ರಭ ಇದರ ಉಪನದಿಗಳಾಗಿವೆ. ಕಾವೇರಿಯು ಕರ್ನಾಟಕದ ಅತಿ ಪ್ರಮುಖ ನದಿ. ದಕ್ಷಿಣ ಗಂಗೆ ಎಂದೇ ಪ್ರಸಿದ್ಧಿ. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮ ಹೊಂದಿ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಪೂರ್ವಾಭಿಮುಖವಾಗಿ 804 ಕಿ.ಮೀ. ದೂರ ಹರಿದು ಬಂಗಾಳ ಕೊಲ್ಲಿಗೆ ಸೇರುವುದು. ಕರ್ನಾಟಕದಲ್ಲಿ 380 ಕಿ.ಮೀ. ದೂರ ಹರಿಯುತ್ತದೆ. ಈ ನದಿಗೆ ಹಲವು ಉಪನದಿಗಳು ಸೇರುತ್ತವೆ. ಉದಾ: ಹೇಮಾವತಿ, ಹಾರಂಗಿ, ಲೋಕಪಾವನಿ, ಅರ್ಕಾವತಿ, ಶಿಂಷಾ, ಲಕ್ಷ್ಮಣತೀರ್ಥ, ಕಪಿಲೆ ಮತ್ತು ಸುವರ್ಣಾವತಿ. ಕಾವೇರಿಯು ತನ್ನ ಪಾತ್ರದಲ್ಲಿ ಚುಂಚನಕಟ್ಟೆ, ಶಿವನಸಮುದ್ರ ಮತ್ತು ಹೊಗೇನ್ಕಲ್ ಎಂಬಲ್ಲಿ ಮೂರು ಜಲಪಾತಗಳು ಮತ್ತು ಶ್ರೀರಂಗಪಟ್ಟಣ, ಶಿವನಸಮುದ್ರ ಮತ್ತು ಶ್ರೀರಂಗ ಎಂಬಲ್ಲಿ 3 ದ್ವೀಪಗಳನ್ನು ನಿರ್ಮಿಸಿzಕೂಡಲಸಂಗಮದಲ್ಲಿ ಮಲಪ್ರಭಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ.
• ಕೂಡಲಿ ಎಂಬುದು ತುಂಗ ಮತ್ತು ಭದ್ರಾ ನದಿಗಳು ಸಂಗಮವಾಗುವ ಸ್ಥಳ.
• ಕೃಷ್ಣರಾಜ ಸಾಗರದ ಬಳಿ ಹೇಮಾವತಿ ನದಿಯು ಕಾವೇರಿ ನದಿಯನ್ನು ಸೇರುತ್ತದೆ.
ಪೆನ್ನಾರ್ ನದಿಗೆ ಮತ್ತೊಂದು ಹೆಸರು ಪಿನಾಕಿನಿ. ತಮಿಳುನಾಡಿನಲ್ಲಿ ದಕ್ಷಿಣ ಪೆನ್ನಾರ್ ನದಿಯನ್ನು (ದಕ್ಷಿಣ ಪಿನಾಕಿನಿ) ಪೆÇನ್ನೈಯಾರ್ ಎಂದು ಕರೆಯುತ್ತಾರೆ.
2. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು: ಅನೇಕ ನದಿಗಳು ಮಲೆನಾಡಿನಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ. ಶರಾವತಿ ನದಿ ನಿರ್ಮಿತ ಜೋಗ್ ಜಲಪಾತ ಜಗತ್ಪ್ರಸಿದ್ಧವಾದುದು. ಇದು ಭಾರತದ ಎತ್ತರದ ಜಲಪಾತವಾಗಿದೆ (253 ಮೀ.). ರಾಜ್ಯದ ಇತರೆ ಪ್ರಮುಖ ಜಲಪಾತಗಳೆಂದರೆ ಗೋಕಾಕ್ (ಘಟಪ್ರಭ), ಬಂಡಾಜೆ (ನೇತ್ರಾವತಿ), ಉಂಚಳ್ಳಿ (ಅಘನಾಶಿನಿ), ಛಾಯ ಭಗವತಿ (ದೋಣಿ ನದಿ), ಚುಂಚನಕಟ್ಟೆ, ಶಿಂಷಾ, ಗಗನಚುಕ್ಕಿ, ಭರಚುಕ್ಕಿ (ಕಾವೇರಿ), ಮಾಗೋಡು ಜಲಪಾತ (ಬೆಡ್ತಿ) ಇತ್ಯಾದಿ ಕರ್ನಾಟಕದ ಮೊಟ್ಟಮೊದಲ ದೊಡ್ಡ ಜಲಾಶಯ ವಾಣಿವಿಲಾಸ ಸಾಗರ 1907ರಲ್ಲಿ ಹಿರಿಯೂರು ಬಳಿ ನಿರ್ಮಿಸಲಾಯಿತು. ಇದನ್ನು `ಮಾರಿಕಣಿವೆ ಯೋಜನೆ’ ಎಂದೂ ಕರೆಯುವರು.
ಜಲವಿದ್ಯುಚ್ಛಕ್ತಿ
ಭಾರತದಲ್ಲಿ ಮೊಟ್ಟಮೊದಲಿಗೆ ಜಲವಿದ್ಯುಚ್ಛಕ್ತಿ ತಯಾರಿಕೆಯಲ್ಲಿ ಯಶಸ್ಸು ಪಡೆದ ಹಿರಿಮೆ ಕರ್ನಾಟಕಕ್ಕೆ ಸಲ್ಲುತ್ತದೆ. ಕೋಲಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡಲು 1902 ರಲ್ಲಿ ಶಿವನಸಮುದ್ರದ ಬಳಿ ವಿದ್ಯುದಾಗಾರವು ಕಾರ್ಯ ಆರಂಭಿಸಿತು. ಇದು ಕಾವೇರಿ ನದಿಗೆ ನಿರ್ಮಿಸಿದ ಯೋಜನೆ. ಇದಕ್ಕೆ ಸಮೀಪದಲ್ಲೇ ರಾಜ್ಯದ ಎರಡನೆಯ ಜಲವಿದ್ಯುತ್ ಯೋಜನೆಯನ್ನು 1940 ರಲ್ಲಿ ಶಿಂಷಾ ನದಿಗೆ ನಿರ್ಮಿಸಲಾಯಿತು. ಹೆಚ್ಚಾದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಶರಾವತಿ ನದಿಯ ಜೋಗ್ ಜಲಪಾತದ ಬಳಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ (1947) ಸ್ಥಾಪನೆಯಾಯಿತು. ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು : ಶಿವನಸಮುದ್ರ, ಶಿಂಷಾ (ಕಾವೇರಿ ನದಿ), ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ (ಶರಾವತಿ ನದಿ), ಸೂಪ, ನಾಗಝರಿ, ಕದ್ರ ಮತ್ತು ಕೊಡಸಳ್ಳಿ (ಕಾಳಿನದಿ), ವಾರಾಹಿ ಮತ್ತು ಮಾರಿಕಣಿವೆ, ಭದ್ರ, ತುಂಗಭದ್ರಾ ಮತ್ತು ಆಲಮಟ್ಟಿ (ಕೃಷ್ಣಾ ನದಿ) ಯೋಜನೆಗಳು.
ನದಿ ಜಲವಿವಾದಗಳು ಕರ್ನಾಟಕ ರಾಜ್ಯದ ಕಾವೇರಿ ಮತ್ತು ಕೃಷ್ಣಾ ನದಿಗಳ ಜಲವಿವಾದಗಳೂ ಸೇರಿವೆ.
ಕಾವೇರಿ ನದಿಯ ಜಲಾನಯನ ಪ್ರದೇಶ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಹರಡಿದೆ. ಕರ್ನಾಟಕ ಮತ್ತು ತಮಿಳುನಾಡುಗಳ ನಡುವೆ ನೀರಿನ ಹಂಚಿಕೆಗೆ ಸಂಬಂಧಿಸಿದ ವಿವಾದ ಶತಮಾನಕ್ಕೂ ಹಳೆಯದು, ಈಗಲೂ ಇದೊಂದು ಜ್ವಲಂತ ಸಮಸ್ಯೆಯಾಗಿ ಮುಂದುವರಿದಿದೆ.
ಕೃಷ್ಣಾ ನದಿಯೂ ಅಂತರರಾಜ್ಯಗಳಲ್ಲಿ ಹರಿಯುವ ನದಿಯಾಗಿದ್ದು, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹರಿಯುತ್ತದೆ. ಇದೂ ಕೂಡ ಕರ್ನಾಟಕದ ಮತ್ತೊಂದು ನದಿ ಜಲವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕಾವೇರಿ ನದಿಯು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ಹರಿಯುತ್ತದೆ. ಕೃಷ್ಣಾ ನದಿಯು ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ ಹರಿಯುತ್ತದೆ. ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಉತ್ತಮ ಸ್ಥಾನದಲ್ಲಿದೆ. ಅದು ವೈವಿಧ್ಯ ಭೂಸ್ವರೂಪಗಳು, ಮಣ್ಣು, ವನಸ್ಪತಿ, ಖನಿಜಗಳು, ನದಿ ಮತ್ತು ಅಂತರ್ಜಲ ಸಂಪತ್ತು ಇತ್ಯಾದಿಗಳನ್ನೊಳಗೊಂಡಿzಕಲಬುರಗಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದೆ. ಅನಂತರದ ಸ್ಥಾನಗಳಲ್ಲಿ ಬೆಳಗಾವಿ, ವಿಜಯಪುರ, ತುಮಕೂರು, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳು ಬರುತ್ತವೆ. ತೀವ್ರ ನಗರೀಕರಣದಿಂದ ಬೆಂಗಳೂರು ಜಿಲ್ಲೆ ಕನಿಷ್ಠ ಸಾಗುವಳಿ ಭೂಮಿಯನ್ನು ಹೊಂದಿದೆ.
ಅರಣ್ಯ ಪ್ರದೇಶ : ಉತ್ತರ ಕನ್ನಡ ಜಿಲ್ಲೆಯು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಬಿಜಾಪುರ ಜಿಲ್ಲೆಯು ಅತಿ ಕನಿಷ್ಠ ಅರಣ್ಯ ಪ್ರದೇಶವನ್ನು ಹೊಂದಿದೆ. ಕಲಬುರಗಿ ಜಿಲ್ಲೆ ಅಧಿಕ ಬೀಳು ಭೂಮಿಯನ್ನು ಹೊಂದಿದೆ.
ಕರ್ನಾಟಕದ ಪ್ರಮುಖ ಬೆಳೆಗಳು
ಆಹಾರದ ಬೆಳೆಗಳು ನಿಮಗೆ ತಿಳಿದಿರಲಿ: ಭತ್ತವು ‘ಪೆÇಯೆಸಿ’ ಹುಲ್ಲಿನ ವರ್ಗದ ಸಸ್ಯ. ಇದರ ವೈಜ್ಞಾನಿಕ ಹೆಸರು ಒರೈಸಾ ಸಟೈವಾ.
1. ಭತ್ತ : ಇದು ಕರ್ನಾಟಕದ ಅತ್ಯಂತ ಪ್ರಮುಖ ಆಹಾರದ ಬೆಳೆ. ರಾಜ್ಯದ ಜನರು ಅಕ್ಕಿಯನ್ನು ಮುಖ್ಯ ಆಹಾರವಾಗಿ ಬಳಸುವರು. ನಂಜನಗೂಡು - ರಸಬಾಳೆ ಬ್ಯಾಡಗಿ - ಮೆಣಸಿನಕಾಯಿ ತಿಪಟೂರು - ತೆಂಗಿನಕಾಯಿ ಮೈಸೂರು - ವೀಳ್ಯೆದೆಲೆ ಬೆಂಗಳೂರು - ನೀಲಿದ್ರಾಕ್ಷಿ ದೇವನಹಳ್ಳಿ – ಚಕ್ಕೋತ ಈರನಗೆರೆ - ಬದನೆಕಾಯಿ ನಿಪ್ಪಾಣಿ - ಹೊಗೆಸೊಪುಭತ್ತವು ‘ಪೆÇಯೆಸಿ’ ಹುಲ್ಲಿನ ವರ್ಗದ ಸಸ್ಯ. ಇದರ ವೈಜ್ಞಾನಿಕ ಹೆಸರು ಒರೈಸಾ ಸಟೈವಾ. ಸುಮಾರು ಶೇ.70 ಭಾಗದಷ್ಟು ಫಸಲನ್ನು ಜೂನ್-
ಆಗಸ್ಟ್ ತಿಂಗಳುಗಳಲ್ಲಿ ನಾಟಿ ಮಾಡಿ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಕಟಾವು ಮಾಡಲಾಗುವುದು. ಇದನ್ನು ‘ಹೈನುಬೆಳೆ’ ಎನ್ನುವರು. ಬೇಸಿಗೆಯಲ್ಲೂ ನೀರಾವರಿ ಸೌಲಭ್ಯ ದೊರೆಯುವ ಪ್ರದೇಶಗಳಲ್ಲಿ ಭತ್ತ ಬೆಳೆಯುವರು. (ಫೆಬ್ರವರಿ-ಜೂನ್). ಇದನ್ನು ‘ಕಾರುಬೆಳೆ’ ಎನ್ನುವರು. ರಾಯಚೂರು ಜಿಲ್ಲೆ ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
2. ಜೋಳ : ಭತ್ತದ ನಂತರ ಜೋಳವು ಕರ್ನಾಟಕದ ಎರಡನೆಯ ಸ್ಥಾನದ ಬೆಳೆಯಾಗಿದೆ. ಭಾರತದಲ್ಲೇ ಕರ್ನಾಟಕವು ಜೋಳದ ಉತ್ಪಾದನೆಯಲಿಎರಡನೆಯ ಸ್ಥಾನದಲ್ಲಿದೆ. ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಇದನ್ನು ವೈಜ್ಞಾನಿಕವಾಗಿ ‘ಸೊರ್ಗಾಮ್ ವಲ್ಗರೆ’ ಎಂದು ಕರೆಯುವರುವಿಜಯಪುರ ಜಿಲ್ಲೆಯು ಜೋಳದ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಕಲಬುರಗಿಯನ್ನು ತೊಗರಿಯ ಕಣಜ ಎಂದು ಕರೆಯುತ್ತಾರೆ.
3. ರಾಗಿ: ಇದು ಉತ್ತಮ ಪೆÇೀಷಕಾಂಶಗಳನ್ನು ಹೊಂದಿರುವ ಆಹಾರ ಧಾನ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ‘ಯೆಲಿಯುಸಿನ್ ಕೋರಾಕಾನ’. ರಾಗಿಯ ಉತ್ಪಾದನೆಯಲ್ಲಿ ಭಾರತದಲ್ಲೇ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ತುಮಕೂರು ಅತಿ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ.
ವಾಣಿಜ್ಯ ಬೆಳೆಗಳು 1. ಕಬ್ಬು: ಇದು ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಬೆಳೆಯಾಗಿದೆ.
ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ರಾಜ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ‘ಸಖ್ಯಾರಮ್ ಅಫಿಸಿನೇರಮ್’. ಬೆಳಗಾವಿಯು ರಾಜ್ಯದಲ್ಲಿಯೇ ಅತೀ ಹೆಚ್ಚು ಕಬ್ಬು ಉತ್ಪಾದಿಸುವ ಜಿಲ್ಲೆಯಾಗಿದೆ.
2. ಹತ್ತಿ: ಹತ್ತಿಯು ನಾರಿನ ಬೆಳೆ. ಹತ್ತಿ ಬಟ್ಟೆಕೈಗಾರಿಕೆಯ ಕಚ್ಚಾವಸ್ತು. ಜೊತೆಗೆ ಜಮಖಾನ, ಹಗ್ಗ, ಹಾ ಸಿಗೆ, ದಿಂಬುಗಳ ತಯಾರಿಕೆಗೂ ಬಳಸಲಾಗುವುದುಹಾವೇರಿ ಜಿಲ್ಲೆ ಹತ್ತಿ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
3. ತಂಬಾಕು (ಹೊಗೆಸೊಪ್ಪು) : ಇದು ನಿಕೋಷಿಯಾನ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ಇದರಲ್ಲಿ ‘ನಿಕೋಟಿನ್’ ಎಂಬ ಮಾದಕ ವಸ್ತುವಿದೆ. ವರ್ಜೀನಿಯಾ ತಂಬಾಕು ಉತ್ತಮ ದರ್ಜೆಯದ್ದಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಗಳಿಸಿದೆ. ಮೈಸೂರು ಜಿಲ್ಲೆಯು ತಂಬಾಕು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
4. ಕಾಫಿ : ಕಾಫಿಯು ಕರ್ನಾಟಕದ ಪ್ರಸಿದ್ಧ ನೆಡುತೋಟದ ಹಾಗೂ ಪಾನೀಯ ಬೆಳೆ. ಕರ್ನಾಟಕವು ಭಾರತದಲ್ಲೇ ಕಾಫಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕ್ರಿ.ಶ. 1670 ರ ಸುಮಾರಿಗೆ ಬಾಬಾಬುಡನ್ ಎಂಬ ಮುಸ್ಲಿಂ ಸಂತನು ಚಿಕ್ಕಮಗಳೂರಿನ ಬೆಟ್ಟಗಳ ಸಾಲಿನಲ್ಲಿ ಕಾಫಿ ಸಸಿಗಳನ್ನು ಬೆಳೆಸಿದನು. ಆದ್ದರಿಂದ ಆ ಬೆಟ್ಟಗಳನ್ನು ಬಾಬಾಬುಡನ್ ಗಿರಿ ಎನ್ನುವರು. ಆದರೆ ಕ್ರಮಬದ್ಧವಾದ ಬೇಸಾಯವು 1826 ರಲ್ಲಿ ಪ್ರಾರಂಭವಾಗಿ ಇಂದು ಕರ್ನಾಟಕದಲ್ಲಿ ವಿಸ್ತಾರವಾದ ಕಾಫಿ ತೋಟಗಳು ಕಂಡುಬರುತ್ತªಕರ್ನಾಟಕವು ಅರೇಬಿಕ ಹಾಗೂ ರೊಬುಸ್ಟ ಎಂಬ ಎರಡು ಪ್ರಭೇದದ ಕಾಫಿಯನ್ನು ಉತ್ಪಾದಿಸುತ್ತಿದೆ. ಇದರಲ್ಲಿ ಅರೇಬಿಕ ಶ್ರೇಷ್ಠ ದರ್ಜೆಯದಾಗಿದ್ದು ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ. ದೇಶದ ಕಾಫಿಯ ಉತ್ಪಾದನೆಯಲ್ಲಿ ಶೇ. 70 ಭಾಗವನ್ನು ಕರ್ನಾಟಕವೇ ಉತ್ಪಾದಿಸುತ್ತಿದೆ. ಕೊಡಗು ಜಿಲ್ಲೆಯು ಕಾಫಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಭಾರತದ ಜನಸಂಖ್ಯೆಯ ಲಕ್ಷಣಗಳು: 2011 ರಲ್ಲಿ ಭಾರತದ ಜನಸಾಂದ್ರತೆ 382 ಇತ್ತು. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಾಗಿರುವುದು ಕಂಡುಬರುತ್ತದೆ. ಭಾರತವು ವಿಶ್ವದ ಶೇ.2.4 ಭೂಪ್ರದೇಶವನ್ನು ಹೊಂದಿದ್ದು, ವಿಶ್ವದ ಶೇ.16.7 ಜನರನ್ನು ಹೊಂದಿದೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಲಿಂಗ ಅನುಪಾತವು ಕೇವಲ 943 ಇದ್ದು ಇದು ಮಹಿಳಾ ಸಬಲೀಕರಣ ಮತ್ತು ಆರೋಗ್ಯಕರ ಸಾಮಾಜಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಅನಾನುಕೂಲಕರವಾಗಿz2011ರಲ್ಲಿ ಶೇ. 68.8 ಜನರು ಗ್ರಾಮವಾಸಿಗರಾಗಿದ್ದರು. 2011ರಲ್ಲಿ ಭಾರತದ ಶೇ. 74ರಷ್ಟು ಜನರು ಮಾತ್ರ ಓದು-ಬರಹ ಬಲ್ಲವರಾಗಿದ್ದರು. ಸುಮಾರು 31 ಕೋಟಿಗಿಂತಲೂ ಅಧಿಕ ಜನರು ನಿರಕ್ಷರಿಗಳಾಗಿದ್ದರು ಎಂಬುದನ್ನು ಇದು ಹೇಳುತ್ತದೆ. ಮಹಿಳೆÉಯರ ಸಾಕ್ಷರತೆ ಇನ್ನೂ ಕಡಿಮೆ ಇದ್ದು ಕೇವಲ ಶೇ. 65ರಷ್ಟು ಮಹಿಳೆಯರು ಸಾಕ್ಷರರಾಗಿದ್ದರು
ಹಿಂದುಳಿದ ದೇಶ - ಜನನ ದರ ಮತ್ತು ಮರಣ ದರ ಹೆಚ್ಚು, ಜನಸಂಖ್ಯಾ ಬೆಳವಣಿಗೆ ದರ ಕಡಿಮೆ
ಮುಂದುವರಿಯುತ್ತಿರುವ ದೇಶ - ಜನನ ದರ ಹೆಚ್ಚು ಮತ್ತು ಮರಣ ದರ ಕಡಿಮೆ, ಜನಸಂಖ್ಯಾ ಬೆಳವಣಿಗೆ ದರ ಹೆಚ್ಚು ಮುಂದುವರಿದ ದೇಶ - ಜನನದರ ಮತ್ತು ಮರಣ ದರ ಕಡಿಮೆ, ಜನಸಂಖ್ಯಾ ಬೆಳವಣಿಗೆ ದರ ಕಡಿಮೆ.
ನಿರೀಕ್ಷಿತ ಜೀವಿತಾವಧಿ ದರ : ಹುಟ್ಟಿದ ಪ್ರತಿಯೊಂದು ಮಗು ಬದುಕುಳಿಯಬಹುದಾದ ಅಂದಾಜು ವರ್ಷ.
ಶಿಶು ಮರಣ ದರ : ಪ್ರತಿ ಸಾವಿರ ಜನನದಲ್ಲಿ ಒಂದು ವರ್ಷದ ಒಳಗೆ ಮರಣಹೊಂದುವ ಶಿಶುಗಳ ಸರಾಸರಿ ಸಂಖ್ಯೆ.
ಮಕ್ಕಳ ಮರಣ ದರ : ಪ್ರತಿ ಸಾವಿರ ಜನನದಲ್ಲಿ ಒಂದು ವರ್ಷದ ಒಳಗೆ ಮರಣಹೊಂದುವ ಮಕ್ಕಳ ಸರಾಸರಿ ಸಂಖ್ಯೆ.
ಮಾತೃ ಮರಣ ದರ : ಪ್ರತಿ ಒಂದು ಲಕ್ಷ ಜನನದಲ್ಲಿ ಮರಣ ಹೊಂದುವ ತಾಯಂದಿರ ಸರಾಸರಿ ಸಂಖ್ಯೆ
ಮೊಘಲರು ಮತ್ತು ಮರಾಠರು
ಭಾರತದಲ್ಲಿ ಮೊಘಲರ ಆಡಳಿತ (ಸಾ.ಶ.1526-1707) ಬಾಬರ್ ಬಾಬರನಾಮಾ (ತುಝುಕ್-ಇ-ಬಾಬರಿ) ಬಾಬರ್ ತನ್ನ ಆತ್ಮ ಚರಿತೆÀ್ರಯನ್ನು ತುರ್ಕಿ ಬಾಷೆಯಲ್ಲಿ ಬರೆದನು. ಈ ಗ್ರಂಥದಲ್ಲಿ ರಾಜಕೀಯ ಸಂಘಟನೆಯಲ್ಲದೆ ವಿವಿಧ ನಾಡುಗಳ ಪ್ರಾಕೃತಿಕ ಸ್ವರೂಪ, ಸೌಂಧರ್ಯ, ಅಲ್ಲಿನ ಪ್ರಾಣಿ ಸಂಕುಲ, ಸಸ್ಯವರ್ಗ, ಪಕ್ಷಿ, ತೋಟಗಳ ಬಗ್ಗೆ ವರ್ಣಿಸಲಾಗಿದೆ. ಬಾಬರ್ ಕವಿ ಹಾಗೂ ಉತ್ತಮ ಚಿತ್ರಕಾರನಾಗಿದ್ದನು. ಅಬ್ದುಲ್ರಹೀಮ್ಖಾನ್ ಇದನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದನು.
ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ್ ಮೂಲತಃ ತುರ್ಕಿಸ್ಥಾನದವನು. ಈತನ ತಂದೆ ಉಮರ್ಶೇಖ್ ಮಿರ್ಜಾ ಮಧ್ಯ ಏಷಿಯಾದ ಚಿಕ್ಕ ರಾಜ್ಯವಾದ ಫರ್ಗಾನದ ದೊರೆ. ತಂದೆಯ ಮರಣದಿಂದಾಗಿ ಬಾಬರ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಫರ್ಗಾನದ ಸಿಂಹಾಸನ ಏರಿದನು ಸಾ.ಶ.1526ರಲ್ಲಿ ನಡೆದ ಮೊದಲನೆಯ ಪಾಣಿಪತ್ ಯುದ್ಧದಲ್ಲಿ ದೆಹಲಿ ಸುಲ್ತಾನನಾಗಿದ್ದ ಇಬ್ರಾಹಿಂ ಲೋದಿ ಹಾಗೂ ಆತನ ಆಫ್ಘನ್ ಬೆಂಬಲಿಗರನ್ನು ಸೋಲಿಸಿ ಭಾರತದಲ್ಲಿ ಮೊಘಲರ ಆಳ್ವಿಕೆಗೆ ಅಡಿಪಾಯ ಹಾಕಿದನು. ದೆಹಲಿ ಈತನ ರಾಜಧಾನಿಯಾಯಿತು.
ಹÅಮಾಯೂನ್
ಹÅಮಾಯೂನನು ಬಾಬರ್ನ ಹಿರಿಯ ಮಗ. ಇವನು ಸಾ.ಶ.1530ರಲ್ಲಿ ಅಧಿಕಾರಕ್ಕೆ ಬಂದಾಗ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಕೊನೆಗೆ ಶೇರ್ಷಾನಿಂದ ಸೋತ ಹÅಮಾಯೂನನು ಸಿಂಧ್ ಪ್ರಾಂತ್ಯದಲ್ಲಿ ಆಶ್ರಯ ಪಡೆದು ಶೇರ್ಷಾನ ಮರಣದ ನಂತರ ಪುನ: ಆಡಳಿತ ನಡೆಸಿದನು. ಶೇರ್ಷಾ (ಸಾ.ಶ. 1540-1545) ಶೇರ್ಷಾನು ಮೂಲತಃ ಅಫ್ಘಾನಿಸ್ತಾನದ ಸೂರ್ ಮನೆತನಕ್ಕೆ ಸೇರಿದವನು. ಇವನ ಮೂಲ ಹೆಸರು ಫರೀದ್. ದಕ್ಷಿಣ ಬಿಹಾರದ ದೊರೆಯಾಗಿದ್ದ ಬಹಾರಖಾನ್ ಲೋಹಣಿಯ ಸೇವೆಯಲ್ಲಿದ್ದಾಗ ಒಬ್ಬನೇ ಹÅಲಿಯನ್ನು ಕೊಂದ. ಆದ್ದರಿಂದ ಫರೀದನಿಗೆ ಶೇರ್ಖಾನ್ ಎಂಬ ಬಿರುದು ಬಂದಿತು. ಶೇರ್ಷಾ ‘ದಾಮ್’ ಎಂಬ ಹೆÇಸ ಬೆಳ್ಳಿಯ ರೂಪಾಯಿ ನಾಣ್ಯವನ್ನು ಜಾರಿಗೆ ತಂದನು. ಈ ಬೆಳ್ಳಿ ನಾಣ್ಯದ ತೂಕ 180 ಗುಲಗಂಜಿ. ಇದನ್ನು ನಂತರದ ಎಲ್ಲ ಮೊಘಲ್ ದೊರೆಗಳು ಮುಂದುವರಿಸಿಕೊಂಡು ಬಂದರು. ಸೋನಾರ್ ಗಾಂವ್ನಿಂದ ಆರಂಭಿಸಿ ಆಗ್ರಾ, ದಿಲ್ಲಿ ಹಾಗೂ ಲಾಹೆÇೀರ್ಗಳ ಮೂಲಕ ಸಿಂಧೂ ನದಿ ತೀರದವರೆಗೆ. ಈ ಮಾರ್ಗವನ್ನು ಸಡಕ್-ಇ-ಅಜಂ ಎಂದು ಕರೆಯಲಾಗುತ್ತಿತ್ತು.
ಅಕ್ಬರ್
ಮೊಘಲ ಅರಸರಲ್ಲಿಯೇ ಪ್ರಸಿದ್ಧ ದೊರೆ ಅಕ್ಬರ್. ಇವನು ಸಿಂಧ್ನ ಅಮರಕೋಟೆಯಲ್ಲಿ ಜನಿಸಿದನು. ಈತನ ತಂದೆ ಹÅಮಾಯೂನ್, ತಾಯಿ ಹಮಿದಾಬಾನು ಬೇಗಂ. ಅಧಿಕಾರಕ್ಕೆ ಬಂದಾಗ ಅಕ್ಬರ್ನು ಹದಿಮೂರು ವರ್ಷದ ಬಾಲಕ ಆಗಿದ್ದರಿಂದ ಅವನ ಪೆÇೀಷಕನಾಗಿದ್ದ ಬೈರಾಮ್ಖಾನ್ ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸಿದನು. ಅಕ್ಬರ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಂಗಾಳದ ದೊರೆ ಮಹಮ್ಮದಷಾ ಅಬ್ದಾಲಿಯ ದಂಡನಾಯಕ ಹೇಮು ಮೊಘಲರನ್ನು ವಿರೋಧಿಸತೊಡಗಿದನು. ಅಲ್ಲದೆ ದೆಹಲಿ ಹಾಗೂ ಆಗ್ರಾವನ್ನು ವಶಪಡಿಸಿಕೊಂಡನು. ಹೀಗಾಗಿ ಹೇಮು ಮತ್ತು ಅಕ್ಬರನ ನಡುವೆ ಸಾ.ಶ 1556ರಲ್ಲಿ 2ನೇ ಪಾಣಿಪತ್ ಯುದ್ಧ ಸಂಭವಿಸಿತು. ಈ ಯುದ್ಧದಲ್ಲಿ ಬೈರಾಮ್ಖಾನನ ನೆರವಿನಿಂದ ಅಕ್ಬರ್ನಿಗೆ ಗೆಲುವು ಲಭಿಸಿತು ಹಿಂದೂಗಳ ಮೇಲಿನ ಜೆಸಿಯಾ ತಲೆಗಂದಾಯವನ್ನು ರದ್ದುಪಡಿಸಿದನು. ಹಿಂದೂ ಧರ್ಮ ಗ್ರಂಥಗಳನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದನು. ತನಗೆ ಕಂಡ ಅರ್ಹ ಹಿಂದೂಗಳಿಗೆ ಉನ್ನತ ಹÅದ್ದೆಗಳನ್ನು ನೀಡಿದನು. ಹನ್ನೆರಡು ಪ್ರಾಂತೀಯ ಅರ್ಥಸಚಿವರಲ್ಲಿ ಎಂಟು ಜನರೂ ಹಿಂದೂಗಳೇ ಆಗಿದ್ದರು. ಆಸ್ಥಾನದಲ್ಲಿ ರಾಖೀ, ದೀಪಾವಳಿ ಹಾಗೂ ಶಿವರಾತ್ರಿ ಮುಂತಾದ ಹಬ್ಬಗಳ ಆಚರಣೆಗೂ ಆದೇಶ ನೀಡಿದನು.
ದೀನ್-ಇ-ಇಲಾಹಿ : ಅಕ್ಬರನು 1582ರಲ್ಲಿ ದೀನ್-ಇ-ಇಲಾಹಿ ಎಂಬ ಹೆÇಸ ಪಂಥ(ಧರ್ಮ)ವನ್ನು ಸ್ಥಾಪಿಸಿದನು. ಎಲ್ಲ ಧರ್ಮಗಳ ಉತ್ತಮಾಂಶಗಳು ಇದರಲ್ಲಿ ಸೇರಿದ್ದವು. ಇಬಾದತ್ಖಾನದಲ್ಲಿ ನಡೆಯುತ್ತಿದ್ದ ಹಿಂದೂ, ಜೈನ, ಜೊರಾಸ್ಟ್ರಿಯನ್ ಹಾಗೂ ಕ್ರೈಸ್ತ ಧರ್ಮಗಳ ಧಾರ್ಮಿಕ ಚರ್ಚೆಗಳ ಅಂತಿಮ ಸಾರವಾಗಿ ಈ ಹೆÇಸ ಪಂಥ ರೂಪ ತಳೆಯಿತು. ಈ ಮೂಲಕ ತನ್ನ ಸಾಮ್ರಾಜ್ಯದ ಎಲ್ಲ ಜನರನ್ನೂಒಂದುಗೂಡಿಸುವುದು ಅವನ ಗುರಿಯಾಗಿತ್ತು. ಇದೊಂದು ಧಾರ್ಮಿಕ ಪಂಥವಾಗಿದ್ದು, ಅಬುಲ್ ಫಜಲನು ಇದರ ಮುಖ್ಯ ರೂವಾರಿಯಾಗಿದ್ದದೀನ್-ಇ-ಇಲಾಹಿ- ರಕ್ತಬೀಪಾಸುಗಳಾಗಿದ್ದ ಮೂಲಭೂತವಾದ ವರ್ಗವನ್ನು ನಿಯಂತ್ರಣದಲ್ಲಿ ಇಡುವುದು ಈ ಹೊಸ ಪಂಥದ ಸ್ಥಾಪನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು.
ಕಂದಾಯ ವ್ಯವಸ್ಥೆ: ಅಕ್ಬರನು ಜುಬ್ತಿ ಪದ್ಧತಿಯನ್ನು ಜಾರಿಗೆ ತಂದನು. ಇದನ್ನು ತೋದರಮಲ್ಲನ ಬಂದೋಬಸ್ತ್ ಪದ್ಧತಿ ಎಂದು ಕರೆಯಲಾಗಿದೆ. ಭೂಮಾಪನಕ್ಕಾಗಿ ಕಬ್ಬಿಣದ ಕೊಂಡಿಗಳುಳ್ಳ ಬಿದಿರಿನ ಅಳತೆಗೋಲುಗಳನ್ನು ಬಳಸುತ್ತಿದ್ದರು
ಅಕ್ಬರನ ಆಸ್ಥಾನದಲ್ಲಿನ ನವರತ್ನಗಳು: ತೋದರಮಲ್ಲ, ಅಬುಲ್ ಫಜಲ್, ಫೈಜಿ, ಬೀರಬಲ್, ತಾನಸೇನ, ಅಬ್ದುರ ರಹೀಂ ಖಾನ್, ಹಮೀಮ ಹÅಮಾಮ್, ಮುಲ್ಲಾ ದೊ ಪಯ್ಯಾಜ ಮತ್ತು ಮಾನಸಿಂಗ್
ಷಾಜಹಾನ್
ಷಾಜಹಾನನ ಅವಧಿಯಲ್ಲಿಯೂ ಮೊಘಲರ ದಾಳಿಗಳು ದಕ್ಷಿಣ ಭಾರತದ ಮೇಲೆ ಮುಂದುವರಿದವು. ಆಫ್ಘಾನಿಸ್ಥಾನದ ನೊಬೆಲ್ ಖಾನ್ಜಹಾನ್ ಲೋದಿಯು ಇವನ ವಿರುದ್ಧ ದಂಗೆ ಎದ್ದು ಸೋತನು. ಅಲ್ಲದೆ ಸಾ.ಶ.1632ರಲ್ಲಿ ಪೆÇೀರ್ಚುಗೀಸರನ್ನು ಸೋಲಿಸಿ ಹÇಗ್ಲಿಯನ್ನು ವಶಪಡಿಸಿಕೊಂಡನು. ಅಹಮದ್ನಗರವನ್ನು ತನ್ನ ಅಧೀನಕ್ಕೆ ತೆಗೆದುಕೊಂಡನುದೆಹಲಿಯ ಕೆಂಪುಕೋಟೆ, ಆಗ್ರಾದ ತಾಜಮಹಲ್ ಹಾಗೂ ಇನ್ನಿತರೆ ಕಟ್ಟಡಗಳು ಇವನ ಮಹತ್ವದ ಕೊಡುಗೆಗಳಾಗಿವೆ. ಮೊಘಲರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಪೆÇ್ರೀತ್ಸಾಹದಿಂದಾಗಿ ಇವನ ಅವಧಿಯನ್ನು ‘ಸುವರ್ಣಯುಗ’ವೆಂದು ಕರೆಯಲಾಗಿದೆ. ಕೊನೆಯಲ್ಲಿ ಷಹಜಹಾನ್ನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ನಡೆದ ಆಂತರಿಕ ಕಲಹದಲ್ಲಿ ಔರಂಗಜೇಬ ಮೊಘಲರ ದೊರೆಯಾದನು
ತಾಜಮಹಲ್ : ಇದನ್ನು ಷಾಜಹಾನನು ತನ್ನ ಪತ್ನಿ ಮಮತಾಜ್ ಮಹಲ್ಳ ನೆನಪಿಗಾಗಿ ಕಟ್ಟಿಸಿದನು. ಇದು ಆಗ್ರಾ ಬಳಿಯ ಯಮುನಾ ನದಿಯ ದಂಡೆಯಲ್ಲಿ (ಈಗಿನ ಉತ್ತರ ಪ್ರದೇಶ) ಇದೆ. ಸಾ.ಶ. 1632ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿ 1653ರ ಹೆÇತ್ತಿಗೆ ಪೂರ್ಣಗೊಂಡಿದೆ. ಇದನ್ನು ಬಿಳಿಯ ಮಾರ್ಬಲ್ ಕಲ್ಲುಗಳಿಂದ ನಿರ್ಮಿಸಿರುವುದು ವಿಶೇಷ
ಔರಂಗಜೇಬ ತಂದೆ ಷಾಜಹಾನ್ನನ್ನು ಬಂಧನದಲ್ಲಿಟ್ಟು ‘ಅಲಂಗೀರ್’ ಎಂಬ ಬಿರುದಿನೊಂದಿಗೆ ಔರಂಗಜೇಬನು ಸಿಂಹಾಸನ ಏರಿದನು. ಇವನ ಆಡಳಿತದ ವಿರುದ್ಧ ಈಶಾನ್ಯ ಭಾಗದಲ್ಲಿ ಅಹೆÇೀಮರು, ವಾಯುವ್ಯದಲ್ಲಿ ಯೂಸಫ್ಪಾಯಿಗಳು ದಂಗೆ ಎದ್ದಾಗ ಅವುಗಳನ್ನು ತಾತ್ಕಾಲಿಕವಾಗಿ ಅಡಗಿಸಿದನು. ಮರಾಠ ದೊರೆ ಶಿವಾಜಿಯನ್ನು ಅವಮಾನಗೊಳಿಸಿ, ಬಂಧಿಸಿದ್ದು ಮುಂದೆ ಮೊಘಲರ ವಿರುದ್ಧ ದಾಳಿಗಳನ್ನು ನಡೆಸಲು ಕಾರಣವಾಯಿತು.
ಔರಂಗಜೇಬನು ಕುರಾನಿನ ತತ್ವಗಳನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಲು ಪ್ರಯತ್ನಿಸಿದನು. ಇವನ ಕಾಲದಲ್ಲಿ ಹಲವು ಪ್ರಸಿದ್ಧ ಹಿಂದೂ ದೇವಾಲಯಗಳು ನಾಶವಾದವು. ಸಾಮ್ರಾಜ್ಯದಲ್ಲಿ ಸತಿ ಆಚರಣೆ, ಸಂಗೀತ ಕಚೇರಿ, ಮೆರವಣಿಗೆ, ಜೂಜಾಟ, ಮದ್ಯಪಾನ ಹಾಗೂ ಗಾಂಜಾ ಉತ್ಪನ್ನಗಳನ್ನು ಉಪಯೋಗಿಸುವುದನ್ನು ನಿಷೇಧಿಸಿದನು. ಆಡಂಬರಕ್ಕೆ ಮಹತ್ವ ನೀಡದೆ ಸರಳವಾಗಿ ತನ್ನ ಬದುಕನ್ನು ಕಳೆದನು. ಇವನನ್ನು ಜಿಂದಾ ಫಕೀರ್ ಅಥವಾ ಜೀವಂತ ಫಕೀರ ಎಂದು ಕರೆಯುತ್ತಿದ್ದರುಬಾಬರ್ ಹಾಗೂ ಜಹಂಗೀರ್ ಸ್ವತಃ ವಿದ್ವಾಂಸರಾಗಿದ್ದು ತಮ್ಮ ಆತ್ಮಕಥನಗಳಾದ `ಬಾಬರ್ನಾಮಾ’ ಹಾಗೂ ‘ತುಜಿಕಿ-ಇ-ಜಹಂಗೀರ್’ಗಳನ್ನು ರಚಿಸಿದರು. ಹÅಮಾಯೂನ್ ಕೂಡ ಲೇಖಕನಾಗಿದ್ದನು. ಅಕ್ಬರನ ಆಸ್ಥಾನದಲ್ಲಿ ಅಬುಲ್ ಫಜಲ್ನು ‘ಐನ್-ಇ-ಅಕ್ಬರಿ’, ‘ಅಕ್ಬರ್ ನಾಮಾ’ ಕೃತಿಗಳನ್ನು ಪರ್ಶಿಯನ್ ಭಾಷೆಯಲ್ಲಿ ರಚಿಸಿದನು. ಬದೌನಿಯು ರಾಮಾಯಣ, ಫೈಜಿಯು ಲೀಲಾವತಿ ಎಂಬ ಗ್ರಂಥ, ತೋದರಮಲ್ಲನು ಭಾಗವತ ಪುರಾಣವನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದರು.
ತುಳಸಿದಾಸರ-ರಾಮಚರಿತ ಮಾನಸ, ಸೂರದಾಸರ-ಸೂರ್ಸಾಗರ್ ಹಿಂದಿ ಭಾಷೆಯಲ್ಲಿ ರಚಿತವಾದ ಮಹತ್ವದ ಕೃತಿಗಳುಅಕ್ಬರನ ಅವಧಿಯಲ್ಲಿ ಇಂಡೋ-ಪರ್ಶಿಯನ್ ಶೈಲಿಯ ಸಮ್ಮಿಶ್ರಣವಿದೆ. ಪ್ರಸಿದ್ಧ ಅರಮನೆಗಳಾದ ಅಕ್ಬರಿ ಮಹಲ್, ಜಹಾಂಗಿರಿ ಮಹಲ್, ಫತೇಪುರ್ ಸಿಕ್ರಿ(ವಿಜಯದ ನಗರ)ಯಲ್ಲಿ ಪಂಚಮಹಲ್, ಜೋದಾಬಾಯಿ ಮಹಲ್, ಬೀರ್ಬಲ್ ಮಹಲ್, ಇಬಾದತ್-ಖಾನಾ, ಜಾಮಿ ಮಸೀದಿ, ಬುಲಂದ್ದರ್ವಾಜ್ ಇವನ ಕಾಲದ ಮಹತ್ವದ ಕೊಡುಗೆಗಳು.
ಕೆಂಪುಕೋಟೆ
ಷಾಜಹಾನನ ಕಾಲದಲ್ಲಿ ದೆಹಲಿಯಲ್ಲಿ ಕೆಂಪುಕೋಟೆ, ಮೋತಿ ಮಸೀದಿ, ದಿವಾನ್-ಇ-ಆಮ್, ದಿವಾನ್-ಇ ಖಾಸ್, ರಂಗಮಹಲ್, ಖಾಸ್ ಮಹಲ್, ಮಮತಾಜ್ ಮಹಲ್ ಮುಂತಾದ ಕಟ್ಟಡಗಳನ್ನು ನಿರ್ಮಿಸಲಾಯಿತು.
ಮರಾಠರು
ಹದಿನೇಳನೆಯ ಶತಮಾನದಲ್ಲಿ ದಖನ್ ಭಾಗದಲ್ಲಿ ಮರಾಠ ರಾಜ್ಯ ಉದಯವಾಗಿದ್ದು ಒಂದು ಪ್ರಮುಖ ಬೆಳವಣಿಗೆ. ಇದು ಇಂದಿನ ಪಶ್ಚಿಮ ಭಾರತದ ಭಾಗದಲ್ಲಿ ವಿಸ್ತರಿಸಿತ್ತು. ಹದಿನೇಳನೆಯ ಶತಮಾನದಲ್ಲಿ ಮರಾಠವಾಡ ಪ್ರದೇಶವು ಅಹಮ್ಮದ್ನಗರದ ನಿಜಾಮಷಾಹಿ ಮತ್ತು ಬಿಜಾಪÀÅರದ ಆದಿಲಷಾಹಿಗಳ ಅಧೀನದಲ್ಲಿತ್ತು. ಈ ಸುಲ್ತಾನರು ಸ್ಥಳೀಯ ಮರಾಠರನ್ನು ಸೈನ್ಯದಲ್ಲಿ ನೇಮಕ ಮಾಡಿಕೊಂಡರು. ಶಹಾಜಿ ಭೋಸ್ಲೆ ಬಿಜಾಪುರದ ಸುಲ್ತಾನರಲ್ಲಿ ಆಡಳಿತಗಾರನಾಗಿದ್ದು ಸುಲ್ತಾನರಿಂದ ಕೆಲವು ಜಾಗೀರುಗಳನ್ನು ಪಡೆದುಕೊಂಡಿದ್ದನು.
ಶಿವಾಜಿ
ಮರಾಠ ರಾಜ್ಯದ ಸ್ಥಾಪನೆ ಮಧ್ಯಕಾಲದ ಭಾರತದ ಇತಿಹಾಸದಲ್ಲಿ ಹೊಸ ಅದ್ಯಾಯವನ್ನು ಪ್ರಾರಂಭಿಸಿತು. ಔರಂಗಜೇಬನ ಆಳ್ವಿಕೆಯ ಕಾಲಕ್ಕೆ ಮೊಘಲ್ ಸಾಮ್ರಾಜ್ಯ ಅವನತಿ ಹೊಂದುತ್ತಿತ್ತು. ಹಿಂದಿನ ಮೊಘಲ್ ಸಾಮ್ರಾಟರು ಕಟ್ಟಿದ್ದ ಸಮರ್ಥವಾದ ಆಡಳಿತ ಕ್ರಮೇಣ ದುರ್ಬಲವಾಗುತ್ತಿತುಶಿವಾಜಿ ಪುಣೆ ಜಿಲ್ಲೆಯ ಶಿವನೇರಿ ಎಂಬಲ್ಲಿ ಜನಿಸಿದನು. ಈತನ ತಂದೆ ಶಹಾಜಿ ಭೋಸ್ಲ್ಲೆ ಬಿಜಾಪುರ ಸುಲ್ತಾನರ ಸೇವೆಯಲ್ಲಿದ್ದನು. ಇವನ ತಾಯಿಯಾದ ಜೀಜಾಬಾಯಿ ಧರ್ಮ, ಶ್ರದ್ಧೆಯುಳ್ಳ ಸಾತ್ವಿಕ ಮಹಿಳೆಯಾಗಿದ್ದು ಪುತ್ರನಲ್ಲಿ ಧರ್ಮಶ್ರದ್ಧೆ, ಸ್ಥೈರ್ಯ, ಜೀವನ ನಿಷ್ಠೆ ಹಾಗೂ ಉನ್ನತಾದರ್ಶಗಳನ್ನು ಬೆಳೆಸಿದಳು. ದಾದಾಜಿಕೊಂಡದೇವ ಶಿವಾಜಿಯ ಗುರುವಾಗಿದ್ದು, ಶಸ್ತ್ರಾಸ್ತ್ರ ಮತ್ತು ಶಾಸ್ತ್ರಗಳಲ್ಲಿ ತರಬೆÉೀತಿಗೊಳಿಸಿದನು. ಶಿವಾಜಿಯು ತನ್ನ ಸ್ಥಳೀಯ ನಿವಾಸಿಗಳಾದ ಮಾವಳಿ ಯುವಕರ ಸೈನ್ಯ ಸಂಘಟಿಸಿ ಅವರಿಗೆ ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ಸೈನಿಕ ತರಬೇತಿ ನೀಡಿದನು. ಪ್ರತಾಪಗಡ ಎಂಬ ಹೊಸ ಕೋಟೆಯನ್ನು ನಿರ್ಮಿಸಿದನು.
ಮೊಘಲರು ಹಾಗೂ ಶಿವಾಜಿ ಸಂಬಂಧ
ಶಿವಾಜಿ ಅನೇಕ ವರ್ಷಗಳ ಕಾಲ ಮೊಘಲ ದೊರೆ ಔರಂಗಜೇಬನೊಂದಿಗೆ ಹೋರಾಟ ನಡೆಸಿದನುಶಾಯಿಸ್ತಾಖಾನ, ಜೈಸಿಂಗ್ರನ್ನು ನೇಮಕ ಮಾಡಿದನು. ಜೈಸಿಂಗ್ ಶಿವಾಜಿಯನ್ನು ಸೋಲಿಸಿ ಪುರಂದರದಲ್ಲಿ ಒಪ್ಪಂದ ಮಾಡಿಕೊಂಡನು. ಅದರನ್ವಯ ಶಿವಾಜಿ ತನ್ನ 23 ದುರ್ಗಗಳನ್ನು ಹಾಗೂ ವಾರ್ಷಿಕ 16 ಲಕ್ಷ ವರಮಾನಬರುವÀ ಪ್ರದೇಶವನ್ನು ನೀಡಿದನು. ಮೊಘಲ್ರೊಂದಿಗೆ ನಿಷ್ಠೆಯಿಂದಿರುವುದಾಗಿ ಹೇಳಿ ತನ್ನ ಪುತ್ರ ಸಂಭಾಜಿಯ ನೇತೃತ್ವದಲ್ಲಿ 5000 ಅಶ್ವದಳದೊಂದಿಗೆ ದೆಹಲಿಗೆ ಕಳುಹಿಸಿದನು. ಬಿಜಾಪುರದ ಆದಿಲ್ ಷಾ ಹಾಗೂ ಗೋಲ್ಕಂಡದ ಕುತುಬ್ ಶಾಹಿ ಸುಲÁ್ತನರೊಂದಿಗೆ ಶಿವಾಜಿ ಕೈಜೋಡಿಸಬಾರದೆಂಬ ಉದ್ದೇಶದಿಂದ ಆತನಿಗೆ ಆಗ್ರಾಕ್ಕೆ ಬರಲು ಜೈಸಿಂಗ್ ತಿಳಿಸಿದನು. ಔರಂಗಜೇಬ ತನ್ನ ದರ್ಬಾರಿನಲ್ಲಿ ಶಿವಾಜಿಗೆ ಸೂಕ್ತ ಗೌರವ ನೀಡದೆ ಅಪಮಾನಗೊಳಿಸಿದನು. ಇದನ್ನು ಪ್ರತಿಭಟಿಸಿದ್ದಕ್ಕಾಗಿ ಶಿವಾಜಿ ಹಾಗೂ ಅವನ ಪುತ್ರ ಸಂಭಾಜಿಯನ್ನು ಆಗ್ರಾದ ಸೆರೆಮನೆಯಲ್ಲಿ ಬಂಧನದಲ್ಲಿಡಲಾಯಿತು. ಆದರೆ ಕೆಲವು ದಿನಗಳಲ್ಲಿ ಶಿವಾಜಿ ತನ್ನ ಪುತ್ರನೊಂದಿಗೆ ಮಿಠಾಯಿ ಬುಟ್ಟಿಯಲ್ಲಿ ಕುಳಿತುಕೊಂಡು ಸೆರೆಮೆನೆಯಿಂದ ಪಾರಾಗಿ ರಾಯಗಢ ತಲುಪಿದನು ಶಿವಾಜಿಯು ಮೊಘಲ್ ಮತ್ತು ಷಾಹಿ ಪ್ರದೇಶಗಳಿಂದ ಚೌತ (ಭೂಕಂದಾಯದ ಒಂದರ ನಾಲ್ಕಾಂಶ ಭಾಗ) ಮತ್ತು ತನ್ನ ರಾಜ್ಯದಲ್ಲಿ ಸರದೇಶಮುಖಿ (ಭೂಕಂದಾಯzಒಂದರ ಹತ್ತಾಂಶ ಭಾಗ) ಸಂಗ್ರಹಿಸುತ್ತಿದ್ದನು. ಸಾ.ಶ.1674ರಲ್ಲಿ ರಾಯಘÀಢದಲ್ಲಿ ಶಿವಾಜಿಯ ಪಟ್ಟಾಭಿಷೇಕ ನಡೆಯಿತು. ಅಲ್ಲಿ ಶಿವಾಜಿಗೆ ‘ಛತ್ರಪತಿ’ಯೆಂಬ ಬಿರುದು ನೀಡಿ ಗೌರವಿಸಲಾಯಿತು.
ಗೆರಿಲ್ಲಾ ಯುದ್ಧ : ಬೆಟ್ಟ-ಗುಡ್ಡ, ಕಾಡು-ಮೇಡುಗಳಲ್ಲಿ ಅಡಗಿ ಕುಳಿತು ಒಮ್ಮೆಲೇ ಶತ್ರುಗಳ ಮೇಲೆ ದಾಳಿ ಮಾಡುವ ಯುದ್ಧ ಕಲೆ.
ಪೇಶ್ವೆಗಳು
ಬಾಲಾಜಿ ವಿಶ್ವನಾಥ (ಸಾ.ಶ.1713-1720) : ಶಾಹುನ ಸೇನಾಪತಿಯಾಗಿ ಪ್ರಸಿದ್ಧಿಯನ್ನು ಪಡೆದ ಇವನು ಮರಾಠ ನಾಯಕನಾಗಿ ರೂಪಗೊಂಡನು. ನಿಷ್ಠೆ ಹಾಗೂ ಸಾಮಥ್ರ್ಯವನ್ನು ಗುರುತಿಸಿ ಬಾಲಾಜಿ ವಿಶ್ವನಾಥನನ್ನು ಪೇಶ್ವೆಯೆಂದು ನೇಮಕ ಮಾಡಲಾಯಿತು.
ಒಂದನೆಯ ಬಾಜೀರಾವ್ (ಸಾ.ಶ. 1720-1740) : ಬಾಲಾಜಿ ವಿಶ್ವನಾಥನ ಮರಣದ ನಂತರ ಆತನ ಹಿರಿಯ ಪುತ್ರನಾದ ಒಂದನೆಯ ಬಾಜೀರಾವ್ ಪೇಶ್ವೆಯಾಗಿ ನೇಮಕಗೊಂಡನು. ಕೇವಲ ಹತ್ತೊಂಬತ್ತು ವರ್ಷದವನಾಗಿದ್ದರೂ ಇವನು ಅಪ್ರತಿಮ ವೀರನಾಗಿದ್ದನು. ಒಂದನೆಯ ಬಾಜಿರಾವ್ ದಕ್ಷತೆಯಿಂದ ಆಡಳಿತ ನಡೆಸಿದನಲ್ಲದೆ ಮರಾಠ ರಾಜ್ಯದ ಕೀರ್ತಿಯನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾದನು. ಇದರಿಂದ ಇವನಿಗೆ ಎರಡನೆಯ ಶಿವಾಜಿಯೆಂದು ಹೆಸರು ಬಂದಿತು.
ಬಾಲಾಜಿ ಬಾಜಿರಾವ್ (ಸಾ.ಶ. 1740-1761): ಇವನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಆಡಳಿತದ ಮಾರ್ಗದರ್ಶನಕ್ಕಾಗಿ ಹತ್ತಿರ ಸಂಬಂಧಿ ಸದಾಶಿವ ಬಾವುನನ್ನು ನೇಮಕ ಮಾಡಿಕೊಂಡಿದ್ದನು.
ಒಂದನೆಯ ಮಾಧವ ರಾವ್ : ಬಾಲಾಜಿ ಬಾಜಿರಾವ್ನ ಎರಡನೆಯ ಪುತ್ರನಾದ ಇವನು ತಂದೆಯ ಮರಣದ ನಂತರ ಪೇಶ್ವೆಯಾದನು.
ಭಕ್ತಿಪಂಥ
ರಮಾನಂದ
ರಮಾನಂದರು ಅಲಹಾಬಾದ್ನ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ವಾರಣಾಸಿಯಲ್ಲಿ ಹಿಂದೂ ಧಾರ್ಮಿಕ ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ರಾಮಾನುಜರ ತತ್ವದ ಅನುಯಾಯಿಗಳಾದರು. ಉತ್ತರ ಭಾರತದ ಕೆಲವಡೆ ಸಂಚರಿಸಿ ರಾಮ-ಸೀತೆಯರ ಪೂಜೆಯ ಭಕ್ತಿ ಆರಾಧನ ಸಿದ್ಧಾಂತದ ಪ್ರತ್ಯೇಕ ಪಂಥವನ್ನು ಜನಪ್ರಿಯಗೊಳಿಸಿದರು.
ಕಬೀರ್ (ಸುಮಾರು 1440-1510) : ಉತ್ತರ ಭಾರತದ ಈ ಕಾಲದ ಮತ್ತೊಬ್ಬ ಪ್ರಸಿದ್ಧ ಸಂತ ಕಬೀರ್. ಕಬೀರರು ವಾರಣಾಸಿಯ `ಜುಲಾಸ್’ ಎಂದು ಕರೆಯುವ ನೇಕಾರ ಕಸುಬಿನ ಮುಸಲ್ಮಾನ ಕುಟುಂಬದಲ್ಲಿ ಬೆಳೆದರು. ರಮಾನಂದರ ಶಿಷ್ಯರಾಗಿದ್ದ ಇವರು ಹೆಚ್ಚು ಕಾಲವನ್ನು ವಾರಣಾಸಿಯಲ್ಲಿ ಕಳೆದರು. ಕಬೀರರು ದೋಹೆಗಳೆಂಬ ಪದ್ಯಗಳನ್ನು ರಚಿಸಿದರು. ಅವುಗಳನ್ನು ಹಿಂದೂ-ಮುಸಲ್ಮಾನರುಗಳು ಉತ್ತರ ಭಾರತದಲ್ಲಿ ಈಗಲೂ ಹಾಡುತ್ತಾರೆ. ಕಬೀರರ ಅನುಯಾಯಿಗಳನ್ನು “ಕಬೀರ್-ಪಂಥಿ”ಗಳೆಂದು ಕರೆಯುತ್ತಾರೆ. ಚೈತನ್ಯ (ಸುಮಾರು 1486-1533) : ಭಕ್ತಿ ಚಳವಳಿಯ ಪ್ರಸಿದ್ಧ ಸಂತರಲ್ಲಿ ಚೈತನ್ಯ ಒಬ್ಬರು. ಇವರು ಬಂಗಾಳದ ನಾಡಿಯಾದಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ತಮ್ಮ 25ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದು ಶ್ರೀಕೃಷ್ಣ ಪಂಥದ ಅನುಯಾಯಿಗಳಾದರು. ಅವರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು “ಚೈತನ್ಯ ಚರಿತಾಮೃತ” ಎಂಬುದರಲ್ಲಿ ಸಂಗ್ರಹಿಸಲಾಗಿದೆ.
ಗುರುನಾನಕ್ (ಸುಮಾರು 1469-1539) : ಈ ಕಾಲದ ಮತ್ತೊಬ್ಬ ಭಕ್ತಿ ಪಂಥದ ಪ್ರತಿಪಾದಕ ಗುರುನಾನಕ್ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಗುರುನಾನಕರು ಹಿಂದಿನ ಪಾಕಿಸ್ತಾನದ `ತಳವಂಡಿ’ ಗ್ರಾಮದಲ್ಲಿ ಜನಿಸಿದರು. ಹಿಂದೂ ಹಾಗೂ ಮುಸಲ್ಮಾನ ಶಿಷ್ಯರುಗಳಿದ್ದರು. ಇವರ ಶಿಷ್ಯರನ್ನು “ಸಿಖ್ಖರು” ಎಂದು ಕರೆಯಲಾಗಿದೆ. ಇವರ ಬೋಧನೆಗಳನ್ನು “ಗುರು ಗ್ರಂಥ ಸಾಹಿಬ್”ನಲ್ಲಿ ಸಂಗ್ರಹಿಸಲಾಗಿದ್ದು ಇದು ಸಿಖ್ಖರ ಪವಿತ್ರ ಗ್ರಂಥವಾಗಿದೆ. ಇದನ್ನು ಸಿಖ್ಖರ ಆದಿ ಗ್ರಂಥ ಎಂದೂ ಕರೆಯುತ್ತಾರೆ. ಇದನ್ನು ಗುರುದ್ವಾರದಲ್ಲಿಟ್ಟು ಪೂಜಿಸುತ್ತಾರೆ.
ಮೀರಾಬಾಯಿ: ಭಕ್ತಿಪಂಥಕ್ಕೆ ಹೆಸರಾದ ಮೀರಾಬಾಯಿ ಮೇವಾಡದ ರಜಪೂತ ರಾಜಕುಮಾರಿ. ಮೇವಾರದ ರಾಜಕುಮಾರನನ್ನು ವರಿಸಿದ್ದಳು. ಅನಂತರದಲ್ಲಿ ಲೌಕಿಕ ಬದುಕಿನಿಂದ ದೂರ ಸರಿದಳು. ಅಂದು ಅಸ್ಪøಶ್ಯ ಕುಲವೆಂದು ಪರಿಗಣಿಸಿದ ಸಮುದಾಯದಲ್ಲಿ ಹುಟ್ಟಿ ಭಕ್ತಿಸಂತನಾದ ರವಿದಾಸ (ರಾಯ್ದಾಸ್) ಎಂಬುವರ ಶಿಷ್ಯಯಾದಳು. ಮೀರಾಬಾಯಿ ತನ್ನ ಬದುಕನ್ನೆಲ್ಲಾ ಶ್ರೀಕೃಷ್ಣನ ಆರಾಧನೆಗೆ ಮೀಸಲಿಟ್ಟು ಕೃಷ್ಣನನ್ನು ಕುರಿತು ಭಕ್ತಿಪೂರಿತವಾದ ಕೀರ್ತನೆಗಳನ್ನು ಬರೆದಳು. ಜಾತಿ ಶ್ರೇಷ್ಠತೆಯ ಮನೋಧರ್ಮವನ್ನು ತನ್ನ ಕೀರ್ತನೆಗಳಲ್ಲಿ ವಿಡಂಭಿಸಿದಳು. ಈ ಕೀರ್ತನೆಗಳು “ಭಜನೆಗಳು” ಎಂದು ಜನಪ್ರಿಯವಾದವೆ.
ಸೂಫಿ ಸಂತರು: ಸೂಫಿ ಸಂತರು ಪರ್ಷಿಯಾದಿಂದ ಬಂದು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿದರು. ಅವರನ್ನು ಪೀರ (ಗುರು) ಎಂದು ಕರೆಯುತ್ತಾರೆ. “ಸೂಫ್” ಎಂಬ ಸಾದಾ ಉಣ್ಣೆಯ ಅಂಗಿ ತೊಡುತ್ತಿದ್ದುದರಿಂದ ಮುಸ್ಲಿಂ ಸಂತರುಗಳನ್ನು “ಸೂಫೀ” ಎಂದು ಕರೆದರು. Àುತುಬನ್ ಎನ್ನುವನ “ಮೃಗಾವತಿ” ಹಾಗೂ ಮಲ್ಲಿಕ್ ಮಹಮದ್ ಜಯ್ಸಿಯ “ಪದ್ಮಾವತ್” ಎಂಬ ಕಾವ್ಯಗಳು ಸೂಫಿ ಕವಿ ಪರಂಪರೆ ಉತ್ತಮ ಉದಾಹರಣೆಗಳಾಗಿವೆ.
ಶಿಶುನಾಳ ಶರೀಫ (ಸುಮಾರು 1819-1889)
ಶಿಶುನಾಳ ಶರೀಫ್ ಇಮಾಮ್-ಹಜೂಮಾ- ಇವರ ತಂದೆ-ತಾಯಿಗಳು ಇಂದಿನ ಗದಗ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳದಲ್ಲಿ ಶರೀಫ್ರು 1819ರಲ್ಲಿ ಜನ್ಮ ತಳೆದರು ಖಾಜ್ಹಿಯ ಸಲಹೆಯ ಮೇರೆಗೆ ತಂದೆ ಇಮಾಮ್ ಸಾಹೇಬ ಮಗುವಿಗೆ ‘ಮಹಮ್ಮದ್ ಶರೀಫ’ ಎಂದು ನಾಮಕರಣ ಮಾಡಿದರು ಶಿಶುನಾಳ ಶರೀಫರು ಚಿಕ್ಕಂದಿನಿಂದಲೇ ಇಸ್ಲಾಂ, ವೀರಶೈವ ಹಾಗೂ ವೈದಿಕ ತತ್ವ ಸಿದ್ದಾಂತಗಳಿಂದ ಪ್ರಭಾವಿತರಾಗಿದ್ದರು. ತ್ರಿಕಾಲ ಜ್ಞಾನಿಯಾಗಿದ್ದ ಗೋವಿಂದಭಟ್ಟರು ಇವರ ಗುರುಗಳು.
ಪುರಂದರದಾಸರು (ಸುಮಾರು 1484-1564) ದಾಸರೆಂದರೆ ಪುರಂದರದಾಸರಯ್ಯ-ಎಂದು ಗುರುಗಳಾದ ವ್ಯಾಸರಾಯರಿಂದ ಪ್ರಶಂಸೆಗೆ ಪಾತ್ರವಾಗಿರುವ ಪುರಂದರದಾಸರು ವೈಷ್ಣವ ಭಕ್ತಿ ಪಾರಮ್ಯದ ಹರಿ ಸಂಕೀರ್ತನಗಳ ಮುಖಾಂತರ ಕನ್ನಡ ಸಾಹಿತ್ಯ, ಕರ್ನಾಟಕ ಸಂಗೀತಕ್ಕೆ ಮೌಖಿಕ ಕೊಡುಗೆ ನೀಡಿ, ‘ಕರ್ನಾಟಕ ಸಂಗೀತ ಪಿತಾಮಹ’ ಎಂದೇ ಹೆಸರಾಗಿದ್ದಾgಪುರಂದರರು ಇಂದು ಮಹಾರಾಷ್ಟ್ರದಲ್ಲಿರುವ ಪುರಂಗಢದ ಆಗರ್ಭ ಶ್ರೀಮಂತ ವರ್ತಕ ಕುಟುಂಬದಲ್ಲಿ ಜನಿಸಿದರು. ವರದಪ್ಪನಾಯಕ ಮತ್ತು ಲಕ್ಷ್ಮಿದೇವಿ ಇವರ ತಂದೆ ತಾಯಿಗಳು. ಇವರ ಪೂರ್ವಾಶ್ರಮದ ಹೆಸರು ಶೀನಪ್ಪನಾಯಕ, ಚಿನ್ನದ ವ್ಯಾಪಾರ ಮಾಡುತ್ತಿದ್ದ ಶೀನಪ್ಪನಾಯಕ ಕಟ್ಟು ನಿಟ್ಟಿನ ವ್ಯವಹಾರಸ್ಥರಾಗಿದ್ದರು
ಕನಕದಾಸರು : ಬೀರಪ್ಪ ಮತ್ತು ಬಚ್ಚಮ್ಮ ಕನಕರ ತಂದೆ ತಾಯಿಗಳು ಶ್ರೀ ವೈಷ್ಣವ ಮತಾನುಯಾಯಿಗಳಾಗಿದ್ದರು ತನಗೆ ಜನಿಸಿದ ಓರ್ವನೇ ಪುತ್ರನಿಗೆ ತನ್ನ ಕುಲದೈವ ವೆಂಕಟಪತಿಯ ಹೆಸರಿಡಬೇಕೆಂದು ತಿಮ್ಮಪ್ಪನೆಂಬುದಾಗಿ ನಾಮಕರಣ ಮಾಡಿದರುಕನಕರು ತಮಗೆ ದೊರೆತ ದ್ರವ್ಯವನ್ನು ದುರ್ವಿನಿಯೋಗ ಮಾಡದೆ ಕಾಗಿನೆಲೆಯಲ್ಲಿ ಪ್ರಸಿದ್ಧ ಆದಿಕೇಶವ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗಿದೆ. ಕನಕದಾಸರು ಒಬ್ಬ ಭಕ್ತಿ ಕವಿಯೂ ಆಗಿದ್ದು ಅಸಂಖ್ಯ ಸಂಕೀರ್ತನೆಗಳ ಜೊತೆಗೆ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಅವುಗಳು-ಮೋಹನತರಂಗಿಣಿ, ‘ನಳಚರಿತ್ರೆ’, ‘ರಾಮಧಾನ್ಯ ಚರಿತೆ’ ಮತ್ತು ‘ಹರಿಭಕ್ತಿಸಾರ’ ಮುಖ್ಯವಾದವುಗಳಾಗಿವೆ.
ಮಧ್ಯಯುಗದ ಯುರೋಪ್
ರೋಮನ್ ಸಾಮ್ರಾಜ್ಯದ ಪತನ: ಸಾ.ಶ.ಪೂ. 395ರವರೆಗೆ ಏಕೀಕೃತವಾಗಿದ್ದ ರೋಮನ್ ಸಾಮÁ್ರಜ್ಯವು, ನಂತರ ಎರಡು ಸಾಮ್ರಾಜ್ಯಗಳಾದವು. ಸಾ.ಶ.ಪೂ. 395ರಿಂದ 476ರಲ್ಲಿ ರೋಮ್ಯುಲಸ್ ಆಗಸ್ಟ್ಯುಲಸ್’ನ ಪದಚ್ಯುತಿಯವರೆಗೆ ಪಶ್ಚಿಮ ಸಾಮ್ರಾಜ್ಯವು ಅಸ್ತಿತ್ವದಲ್ಲಿತ್ತು. ಸಾ.ಶ.ಪೂ. 395ರಿಂದ 1453ವರೆಗೆ ಪೂರ್ವರೋಮನ್ ಸಾಮ್ರಾಜ್ಯವು ಅಸ್ತಿತ್ವದಲ್ಲಿತ್ತು. ಪೂರ್ವರೋಮನ್ ಸಾಮ್ರಾಜ್ಯವನ್ನು ‘ಬೈಜಾಂಟೈನ್ ಸಾಮ್ರಾಜ್ಯ’ವೆಂದೂ ಕರೆಯಲಾಗುತ್ತzಸಾಮಾನ್ಯವಾಗಿ ಟರ್ಕರು ಕಾನ್ಸ್ಟೆಂಟಿನೋಪಲ್ನ್ನು ಸಾ.ಶ.ಪೂ. 1453ರಲ್ಲಿ ವಶಪಡಿಸಿಕೊಂಡ ವರ್ಷವನ್ನು ಮಧ್ಯಯುಗದ ಕೊನೆಯೆಂದು ಭಾವಿಸಲಾಗಿzಹಿಡುವಳಿದಾರನು ಹೊಂದಿದ್ದ ಭೂಮಿಯನ್ನು ‘ಉಂಬಳಿ’ ಎನ್ನುತ್ತಿದ್ದರು. ಆಧುನಿಕ ಯುರೋಪ್ಸಾ.ಶ. 1455ರಲ್ಲಿ ಜರ್ಮನಿಯ ಗುಟನ್ಬರ್ಗ್ ಎಂಬುವರು ಮುದ್ರಣಯಂತ್ರವನ್ನು ಶೋಧಿಸಿದರು.
ಇದರಿಂದ ಯುರೋಪಿನಾದ್ಯಂತ ಜ್ಞಾನ ಪ್ರಸಾರದ ವೇಗವು ಹೆಚ್ಚಿತು. ಜ್ಞಾನ ಪುನರುಜ್ಜೀವನ ಚಳುವಳಿಯು ಮೊದಲು ಪ್ರಾರಂಭವಾದದ್ದು ಇಟಲಿಯಲ್ಲಿ. ಆನಂತರ ಅದು ಯುರೋಪಿನ ಇತರೆ ಭಾಗಗಳಿಗೆ ಹರಡಿತು. ಆದ್ದರಿಂದ ಇಟಲಿಯನ್ನು “ಪುನರುಜ್ಜೀವನ”ದ ತವರು ಎಂಬುದಾಗಿ ಕರೆಯುತ್ತಾರೆ.
ಪೆಟ್ಟ್ರಾರ್ಕ್ : (ಸಾ.ಶ. 1304 - 1374) ಪೆಟ್ಟ್ರಾರ್ಕ್ನನ್ನು “ಪುನರುಜ್ಜೀವನದ ಜನಕ” ಎಂದು ಕರೆಯಲಾಗಿದೆ. ಇವನು ಸುಮಾರು 200 ಲ್ಯಾಟಿನ್ ಮತ್ತು ಗ್ರೀಕ್ ಹಸ್ತಪ್ರತಿಗಳನ್ನು ಸಂಗ್ರಹಿಸಿದನು.
“ಆಫ್ರಿಕಾ” ಇವನ ಪ್ರಸಿದ್ಧ ಕಾವ್ಯ. ಇದು ಲ್ಯಾಟಿನ್ ಭಾಷೆಯಲ್ಲಿದೆ. ಬೊಕಾಷಿಯೋ ಇಟಾಲಿಯನ್ ಭಾಷೆಯಲ್ಲಿ ರಚಿಸಿದ ನೂರು ಕಥೆಗಳ ಸಂಗ್ರಹ “ಡೆಕಾಮೆರಾನ್”, ಡಾಂಟೆ ರಚಿಸಿದ ಪ್ರಸಿದ್ಧ ಕೃತಿ “ಡಿವೈನ್ ಕಾಮಿಡಿ”, ಇಂಗ್ಲೆಂಡಿನ ಛಾಸರ್ ಬರೆದ “ಕ್ಯಾಂಟರ್ಬರಿ ಟೇಲ್ಸ್”, ಸ್ಪೈನಿನ ಸರ್ವಾಂಟಿಸ್ ಬರೆದ “ಡಾನ್ ಕ್ವಿಕ್ಸಾಟ್”, ಇಂಗ್ಲೆಂಡ್ನ ಥಾಮಸ್ ಮೋರ್ ರಚಿಸಿದ “ಯುಟೋಪಿಯಾ” ಇವು ಪ್ರಸಿದ್ಧ ಕೃತಿಗಳು. ಲಿಯೋನಾರ್ಡ್- ಡ-ವಿಂಚಿಯ “ಲಾಸ್ಟ್ ಸಪ್ಪರ್” ಮತ್ತು “ಮೊನಾಲಿಸಾ”, ರಾಫೇಲ್ನ “ಸಿಸ್ಟೈನ್ ಮಡೋನ್ನ” ಮತ್ತು ಟಿಟಿಯನ್ನ “ಅಸಂಪ್ಷನ್ ಆಫ್ ದಿ ವರ್ಜಿನ್” ಮುಖ್ಯವಾದ ವರ್ಣಚಿತ್ರಗಳಾಗಿದ್ದವು. ಪೆÇೀಲೆಂಡಿನ ಕೊಪರ್ನಿಕಸ್ನು ಗ್ರೀಸ್ನ ಟಾಲೆಮಿಯ ಭೂಕೇಂದ್ರದ ವಾದವು ಸುಳ್ಳೆಂದು ತೋರಿಸಿ ಗ್ರಹಗಳ ಸೂರ್ಯ ಕೇಂದ್ರೀತ ಸಿದ್ಧಾಂತವನ್ನು ಪ್ರತಿಪಾದಿಸಿದನು.
ಕೆಪ್ಲರ್: ಕೆಪ್ಲರ್ನು ಒಬ್ಬ ಜರ್ಮನಿಯ ವಿಜ್ಞಾನಿ. ಗ್ರಹಗಳು ಸೂರ್ಯನನ್ನು ಅಂಡಾಕೃತಿಯಲ್ಲಿ ಸುತ್ತುತ್ತವೆ ಎಂದು ತಿಳಿಸಿದನು
ಗೆಲಿಲಿಯೋ: ಗೆಲಿಲಿಯೋ ದೂರದರ್ಶಕ ಯಂತ್ರವನ್ನು ಕಂಡುಹಿಡಿದನು. ಕೊಪರ್ನಿಕಸ್ನ ಸೂರ್ಯಕೇಂದ್ರಿತ ಪರಿಕಲ್ಪನೆಯನ್ನು ಬೆಂಬಲಿಸಿದನು.
ಭೌಗೋಳಿಕ ಅನ್ವೇಷಣೆಗಳು ಸಾ.ಶ. 16ನೇ ಶತಮಾನವನ್ನು “ಭೌಗೋಳಿಕ ಅನ್ವೇಷಣೆಗಳ ಯುಗ” ಎಂದು ಕರೆಯಲಾಗಿದೆ. ದಿಕ್ಸೂಚಿ ನಾವಿಕರು ತಲುಪಬೇಕಾದ ಪ್ರದೇಶದ ದೂರಮತ್ತು ಮಾರ್ಗಗಳನ್ನು ತಿಳಿಯಲು ಉಪಯೋಗಿಸುವ ಸಾಧನ.
ಅಸ್ಟ್ರೋಲೋಬ್: ಸೂರ್ಯ, ಗ್ರಹಗಳು ಮತ್ತು ನಕ್ಷತ್ರಗಳಿಗೆ ಭೂಮಟ್ಟದಿಂದಿರುವ ದೂರ ಹಾಗೂ ಕಾಲವನ್ನು ತಿಳಿಸುವ ಸಾಧನ.
ಭೂಶೋಧನೆಗಳು
ಭಾರ್ಥಲೋಮ್ಯೂ ಡಯಾಸ್ ಎಂಬ ನಾವಿಕನು ಆಫ್ರಿಕಾದ ದಕ್ಷಿಣ ಭಾಗವನ್ನು ತಲುಪಿ ಅದನ್ನು ಗುಡ್ಹೋಪ್ ಭೂಶಿರ ಎಂದು ಕರೆದನು. ಸಾ.ಶ. 1498ರಲ್ಲಿ ವಾಸ್ಕೋ-ಡ-ಗಾಮನು ಆಫ್ರಿಕಾದ ಗುಡ್ಹೋಪ್ ಭೂಶಿರವನ್ನು ಸುತ್ತುಹಾಕಿ ಹಿಂದೂ ಮಹಾಸಾಗರವನ್ನು ದಾಟಿ ಭಾರತದ ಕಲ್ಲಿಕೋಟೆಯನ್ನು ತಲುಪಿದನು. ಪೋರ್ಚ್ಗೀಸ್ ನಾವಿಕ ಫರ್ಡಿನಾಂಡ್ ಮೆಗೆಲನ್ ಭೂಶಿರವನ್ನು ಸುತ್ತುವರಿದ ಮೊದಲನೆಯವನು. ಸುಮಾರು ಐದು ತಿಂಗಳ ಕಾಲ ಪ್ರಯಾಣಿಸಿ, ಸಾ.ಶ. 1520ರಲ್ಲಿ ದಕ್ಷಿಣ ಅಮೇರಿಕಾವನ್ನು ತಲುಪಿದನು.
ಮತಸುಧಾರಣೆ
ಯುರೋಪಿನಲ್ಲಿ ಅಧುನಿಕ ಯುಗ ಗೋಚರಿಸುತ್ತಿದ್ದಂತೆ ಕ್ಯಾಥೋಲಿಕ್ ಚರ್ಚಿನ ಮತ್ತು ಪೋಪ್ನ ಅಧಿಕಾರವನ್ನು ಪ್ರಶ್ನಿಸಿ ನೆಡೆಸಿದ ಧಾರ್ಮಿಕ ಚಳವಳಿಯನ್ನು ಮತಸುಧಾರಣೆ ಎನ್ನುತ್ತೇವೆ.
ಮಾರ್ಟಿನ್ ಲೂಥರ್ (1483-1546) ಮಾರ್ಟಿನ್ ಲೂಥರ್ ಮತಸುಧಾರಣೆಯ ಮೂಲ ಪುರುಷ. 1483ರ ನವಂಬರ್ನಲ್ಲಿ ಹಾನ್ಸ್ ಮತ್ತು ಮಾರ್ಗೇಟ್ ದಂಪತಿಗಳ ಮಗನಾಗಿ ಇಸಲ್ಬೇನ್ ಎಂಬಲ್ಲಿ ಜನಿಸಿದಮಾರ್ಟಿನ್ ಲೂಥರನು ಆರಂಭಿಸಿದ ಧಾರ್ಮಿಕ ಚಳುವಳಿಯು “ಮತ ಸುಧಾರಣೆ” ಎಂಬ ಹೆಸರನ್ನು ಪಡೆಯಿತು. ಮಾರ್ಟಿನ್ ಲೂಥರನ ಅನುಯಾಯಿಗಳಿಗೆ “ಪ್ರಾಟೆಸ್ಟೆಂಟ್”ರೆಂದು ಹೆಸರಾಯಿತು. ಚರ್ಚ್ನ ನಿಯಮ ಉಲ್ಲಂಘಿಸುವವರನ್ನು ವಿಚಾರಣೆ ನಡೆಸುವ ಹಾಗೂ ಶಿಕ್ಷಿಸುವ ಉದ್ದೇಶದ “ಇಂಕ್ವಿಜಿಶನ್” ಎಂಬ ಧಾರ್ಮಿಕ ವಿಚಾರಣಾ ಪದ್ಧತಿ ಸಾ.ಶ. 1542 ರಿಂದ ಜಾರಿಗೆ ಬಂದಿತುಸಾ.ಶ.1764ರಲ್ಲಿ ಜೇಮ್ಸ್ ಹಾರ್ಗ್ರೀವ್ಸ್ ಎಂಬುವನು ಸ್ಪಿನ್ನಿಂಗ್ ಜೆನ್ನಿ ಎಂಬ ನೂಲುವ ಯಂತ್ರವನ್ನು ಕಂಡುಹಿಡಿದನು.
ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ: ಸಪ್ತ ವಾರ್ಷಿಕ ಯುದ್ಧ (ಸಾ.ಶ. 1756 - 63) ವು ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ನೌಕಾ ಕಾಯಿದೆಯು 1760ರಲ್ಲಿ ಜಾರಿಗೊಂಡಿತು. ಇಂಗ್ಲೆಂಡ್ ವಸಾಹತು ಸಮುದ್ರ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಅನುಭವಿಸಿತು. 1764ರಲ್ಲಿ ಜಾರಿಗೆ ತಂದ ಮೊಲಾಸಿಸ್ (ಕಾಕಂಬಿ) ಕಾಯಿದೆಯು ಅಮೆರಿಕಾದ ಮದ್ಯ ತಯಾರಿಕರಿಗೆ ಕಾಕಂಬಿ ಸಾಗಿಸಲು ಅನುಕೂಲವೊದಗಿಸಿತು. ಸಾ.ಶ. 1774ರ ಕ್ವಿಬೆಕ್ ಕಾಯಿದೆಯು ವಸಾಹತುಗಳ ಅಸಹನೆಗೆ ಕಾರಣವಾಯಿತು. 1765ರಲ್ಲಿ ಸ್ಟಾಂಪ್ ಕಾಯಿದೆ ಜಾರಿಗೆ ಬಂದು, ಸಾ.ಶ. 1767ರಲ್ಲಿ ಚಹಾ, ಕಾಗದ, ಗಾಜು ಮುಂತಾದ ವಸ್ತುಗಳ ಮೇಲೆ ತೆರಿಗೆ ಹಾಕಲು ಸಾಧ್ಯವಾಯಿತುಬಾಸ್ಟನ್ ಚಹಾಕೂಟ (ಕ್ರಿ.ಶ. 1773): ವಿರೋಧ ಇದ್ದರೂ ಬ್ರಿಟನ್ ಚಹಾ ಪುಡಿ ತುಂಬಿದ ಹಡಗೊಂದನ್ನು ಬಾಸ್ಟನ್ ಬಂದರಿಗೆ ಕಳುಹಿಸಿತು ಇದು ವಸಾಹತುಗಾರರನ್ನು ಕೆರಳಿಸಿತು. 50ಜನರ ಗುಂಪೆÇಂದು ರೆಡ್ ಇಂಡಿಯನ್ರ ವೇಷ ಧರಿಸಿಕೊಂಡು ಚಹ ತುಂಬಿದ ಹಡಗನ್ನು ಪ್ರವೇಶಿಸಿ ಅದರಲ್ಲಿದ್ದ 340 ಚಹಾ ಪೆಟ್ಟಿಗೆಗಳನ್ನು ಸಮುದ್ರಕ್ಕೆ ಎಸೆದರು.
ಸ್ವಾತಂತ್ರ್ಯ ಘೋಷಣೆ: ಪರಿಸ್ಥಿತಿಯನ್ನು ವಿಮರ್ಶಿಸಲು ಸಾ.ಶ. 1774ರಲ್ಲಿ ಅಮೆರಿಕಾದ ಹದಿಮೂರು ಇಂಗ್ಲಿಷ್ ವಸಾಹತುಗಳ ಪ್ರತಿನಿಧಿಗಳು ಫಿಲಿಡೆಲ್ಫಿಯಾ ನಗರದಲ್ಲಿ ಸಭೆ ಸೇರಿದರುಸಾ.ಶ. 1775, ಏಪ್ರಿಲ್ 19ರಂದು “ಲೆಕ್ಸಿಂಗ್ಟನ್” ಎಂಬಲ್ಲಿ ವಸಾಹತುಗಾರರ ಒಂದು ಸೈನ್ಯದ ತುಕುಡಿಯು ಬ್ರಿಟೀಷರ ಮೇಲೆ ದಾಳಿ ಮಾಡಿದಾಗ, ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು. ಫಿಲಿಡೆಲ್ಫಿಯಾ ಸಭೆಯು ಆಗ ಜಾರ್ಜ್ ವಾಷಿಂಗ್ಟನ್ನನ್ನು ವಸಾಹತುಗಾರರ ಸೈನ್ಯದ ದಂಡನಾಯಕನನ್ನಾಗಿ ನೇಮಿಸಿತು.
ಜಾರ್ಜ್ವಾಷಿಂಗ್ಟನ್ : ಜಾರ್ಜ್ ವಾಷಿಂಗ್ಟನ್ ವರ್ಜೀನಿಯಾದ ಒಬ್ಬ ತೋಟಗಾರ. ಇವನು ಫ್ರೆಂಚg ವಿರುದ್ಧ ನಡೆದ ಸಪ್ತ ವಾರ್ಷಿಕ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿ, ಸೈನ್ಯಾಧಿಕಾರಿಯಾಗಿ ಕೀರ್ತಿ ಗಳಿಸಿದ್ದ. ಸಾ.ಶ. 1776, ಜುಲೈ 4ರಂದು ಫಿಲಿಡೆಲ್ಫಿಯಾದ ರಾಷ್ಟ್ರೀಯ ಸಭೆಯು ಪ್ರಖ್ಯಾತವಾದ ‘ಸ್ವಾತಂತ್ರ ಘೋಷಣೆ’ಯನ್ನು ಅಂಗೀಕರಿಸಿತು ಸಾ.ಶ. 1787ರಲ್ಲಿ ಫಿಲಿಡೆಲ್ಫಿಯಾದಲ್ಲಿ ಸ್ವಾತಂತ್ರ ಪಡೆದ ಎಲ್ಲಾ ವಸಾಹತುಗಳ ಪ್ರತಿನಿಧಿಗಳು ಸಭೆ ಸೇರಿ, ಜಾರ್ಜ್ ವಾಷಿಂಗ್ಟನ್ನನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷನನ್ನಾಗಿ ಆರಿಸಿದರು. ಅವರುಗಳು ಒಂದು ಸಂವಿಧಾನವನ್ನು ರಚಿಸಿದರು. ಅದೇ ಜಗತ್ತಿನ ಪ್ರಥಮ ಲಿಖಿತ ಸಂವಿಧಾನವಾಯಿತು.
ಫ್ರಾನ್ಸಿನ ಮಹಾಕ್ರಾಂತಿ: ತಮ್ಮ ದೊರೆಗಳ ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಿ, ಸಮಾನತೆ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಹೊಸ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸುವುದೇ ಫ್ರೆಂಚ್ ಕ್ರಾಂತಿಯ ಪ್ರಮುಖ ಉದ್ದೇಶವಾಗಿತ್ತು.
ಮಾಂಟೆಸ್ಕ್ಯೂ: ಮಾಂಟೆಸ್ಕ್ಯೂ ತನ್ನ “Sಠಿiಡಿiಣ oಜಿ ಐಚಿತಿs” ಕೃತಿಯಲ್ಲಿ ರಾಜರ ದೈವದತ್ತ ಅಧಿಕಾರ
(ಆiviಟಿe ಖighಣ oಜಿ ಏiಟಿgs) ನಿರಾಧಾರವೆಂದು ಟೀಕಿಸಿ, ಸಂವಿಧಾನಿಕ ರಾಜ ಪ್ರಭುತ್ವಕ್ಕೆ ಬೆಂಬಲ ನೀಡಿದನು. ರೂಸೋ: ರೂಸೋ ತನ್ನ ಕೃತಿ “ಸಾಮಾಜಿಕ ಒಪ್ಪಂದ”ದಲ್ಲಿ (Soಛಿiಚಿಟ ಅoಟಿಣಡಿಚಿಛಿಣ) “ಮಾನವ ಸ್ವತಂತ್ರವಾಗಿ ಜನಿಸಿದ ಆದರೆ ಎಲ್ಲೆಲ್ಲೂ ಸರಪಳಿಯಿಂದ ಬಂಧಿಸಲ್ಪಟ್ಟಿದ್ದಾನೆ” ಎಂದು ಹೇಳಿದ್ದಾನೆ. ಮ್ಯಾಜಿನಿ ಹೆಸರಾಂತ ಕ್ರಾಂತಿಕಾರಿ ಚಿಂತಕ ಮತ್ತು ಬರಹಗಾರ. “ತರುಣ ಇಟಲಿ” (ಙouಟಿg Iಣಚಿಟಥಿ) ಎಂಬ ಒಂದು ಪಕ್ಷವನ್ನು ಕಟ್ಟಿದ್ದಲ್ಲದೇ ರಾಷ್ಟ್ರೀಯ ಸ್ವಾತಂತ್ರ್ಯ ಮತ್ತು ಇಟಲಿಯ ಏಕೀಕರಣದ ಗುರಿಗಳನ್ನು ಹೊಂದಿದ್ದನು
ಗ್ಯಾರಿಬಾಲ್ಡಿ ಒಬ್ಬ ಯೋಧ, ಹೋರಾಟಗಾರ. ಇವನು “ತರುಣ ಇಟಲಿ” ಪಕ್ಷವನ್ನು ಸೇರಿ ಅನೇಕ ಸಾರಿ ಅದರ ಕ್ರಾಂತಿಯ ನಾಯಕತ್ವವನ್ನು ವಹಿಸಿದ್ದನು. ಆನಂತರ “ಕೆಂಪಂಗಿ ದಳ” ಎಂಬ ಸೈನ್ಯವನ್ನು ವ್ಯವಸ್ಥೆಗೊಳಿಸಿ ಸಾರ್ಡೀನಿಯ ಜೊತೆಗೂಡಿ ಆಸ್ಟ್ರೀಯಾದೊಡನೆ ಹೋರಾಡಿದ.
ಬಿಸ್ಮಾರ್ಕ್: ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ, ಆಟ್ಟೋವಾನ್ ಬಿಸ್ಮಾರ್ಕ್. ಇವನು ಪ್ರಷ್ಯಾ ರಾಜ್ಯದ ದೊರೆ ಒಂದನೇ ವಿಲಿಯಂನ ಮುಖ್ಯಮಂತ್ರಿಯಾಗಿದ್ದನುಬಿಸ್ಮಾರ್ಕ್ ಜರ್ಮನಿಯ ಸಮಸ್ಯೆಯನ್ನು ಬಗೆಹರಿಸಲು “ರಕ್ತ ಮತ್ತು ಕಬ್ಬಿಣ” ತತ್ವದಿಂದ ಮಾತ್ರ ಸಾಧ್ಯವೆಂದು ಮನಗಂಡಿದ್ದನು. ರಕ್ತ ಮತ್ತು ಕಬ್ಬಿಣ ತತ್ವ ಎಂದರೆ ಯುದ್ಧ ನೀತಿ.
ನ್ಯಾಯಾಂಗ ವ್ಯವಸ್ಥೆ
ಸರ್ವೋಚ್ಚ ನ್ಯಾಯಾಲಯ: ಸಂವಿಧಾನದಲ್ಲಿ ಹೇಳಿರುವಂತೆ ಸಂಸತ್ತಿನ ಶಾಸನದಿಂದ ರಚಿಸಲಾದ ಸರ್ವೋಚ್ಚ ನ್ಯಾಯಾಲಯವು ಜನವರಿ 28, 1950 ರಂದು ಅಸ್ತಿತ್ವಕ್ಕೆ ಬಂದಿದ್ದು, ಕೇಂದ್ರ ಕಛೇರಿ ದೆಹಲಿಯಲ್ಲಿದೆ. ಈ ನ್ಯಾಯಾಲಯದಮುಖ್ಯ ನ್ಯಾಯಾಧೀಶರು ಮತ್ತು ಇತರೆ ನ್ಯಾಯಾಧೀಶರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ. ಪ್ರಸ್ತುತ ಮುಖ್ಯ ನ್ಯಾಯಾಧೀಶರನ್ನೊಳಗೊಂಡು 31 ಮಂದಿ ನ್ಯಾಯಾಧೀಶರಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು:
1. ಭಾರತದ ಪ್ರಜೆಯಾಗಿರಬೇಕು,
2. ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಕನಿಷ್ಠ 5 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು ಅಥವಾ ಯಾವುದೇ ಉಚ್ಚ ನ್ಯಾಯಾಲಯದಲ್ಲಿ 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಅಥವಾ ರಾಷ್ಟ್ರ.ಪತಿಯವರ ಅಭಿಪ್ರಾಯದಲ್ಲಿ ನ್ಯಾಯ ನಿಪುಣರಾಗಿರಬೇಕು.
ಈ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷ ಮತ್ತು ಅದಕ್ಕೂ ಮುಂಚೆಯೇ ರಾಷ್ಟ್ರಪತಿಗಳಿಗೆ ರಾಜೀನಾಮೆ ನೀಡಬಹುದು. ಅವರು ಕರ್ತವ್ಯಲೋಪ ಎಸಗಿದಲ್ಲಿ ಸಂಸತ್ತಿನ ಎರಡೂ ಸದನಗಳ ನಿರ್ದಿಷ್ಟ ಬಹುಮತದ ಕೋರಿಕೆಯಂತೆ ರಾಷ್ಟ್ರಪತಿಗಳು ಅವರನ್ನು ಪದಚ್ಯುತಗೊಳಿಸಬಹುದು. ಅಧಿಕಾರ ಕಾರ್ಯಗಳು
ಮೂಲ ಅಧಿಕಾರ ವ್ಯಾಪ್ತಿ : ಸರ್ವೋಚ್ಚ ನ್ಯಾಯಾಲಯದಲ್ಲಿ ನೇರವಾಗಿ ಮೊಕದ್ದಮೆ ಹೂಡುವುದೇ ಮೂಲ ಅಧಿಕಾರ ವ್ಯಾಪ್ತಿ. ಕೇಂದ್ರ-ರಾಜ್ಯಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕಿದೆ. ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು, ಸಂವಿಧಾನಕ್ಕೆ ಅರ್ಥ ವಿವರಣೆ ನೀಡುವ ಅಧಿಕಾರ, ಆಜ್ಞೆ (ರಿಟ್) ಗಳನ್ನು ನೀಡುವುದು.
ಮೇಲ್ಮನವಿ ಅಧಿಕಾರ ವ್ಯಾಪ್ತಿ: ಕೆಳ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಕಕ್ಷಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇಂತಹ ಮೇಲ್ಮನವಿ ಸ್ವೀಕರಿಸಿ ವಿಚಾರಣೆ ನಡೆಸುವ ಅಧಿಕಾರ ಈ ನ್ಯಾಯಾಲಯಕ್ಕಿದೆ ಮತ್ತು ಮೇಲ್ಮನವಿ ಸಲ್ಲಿಸುವಂತೆ ವಿಶೇಷ ಅನುಮತಿ ನೀಡುವ ಅಧಿಕಾರವೂ ಈ ನ್ಯಾಯಾಲಯಕ್ಕೆ ಇದೆ.
ಸಲಹಾ ಅಧಿಕಾರ ವ್ಯಾಪ್ತಿ: ಸಾರ್ವಜನಿಕವಾಗಿ ಪ್ರಮುಖವಾಗಿರುವ ವಿಷಯದ ಬಗ್ಗೆ ರಾಷ್ಟ್ರಪತಿಗಳು ಸಲಹೆ ಕೇಳಿದಾಗ ಸರ್ವೋಚ್ಚ ನ್ಯಾಯಾಲಯ ಸಲಹೆ ನೀಡುವ ಅಧಿಕಾರವಿದೆ. ಸಂವಿಧಾನ ಜಾರಿಗೆ ಬರುವುದಕ್ಕಿಂತ ಮುಂಚೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ, ಕರಾರು ಮುಂತಾದ ವಿಷಯಗಳ ಬಗ್ಗೆ ವಿವಾದ ಉಂಟಾದರೆ ರಾಷ್ಟ್ರಪತಿಗಳು ಈ ನ್ಯಾಯಾಲಯದ ಸಲಹೆ ಕೇಳಬಹುದು.
ಉಚ್ಚ ನ್ಯಾಯಾಲಯ : ಪ್ರತಿಯೊಂದು ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯ ಇರಬೇಕೆಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ನ್ಯಾಯಾಲಯ ವಿರಬಹುದು. ಉಚ್ಛ ನ್ಯಾಯಾಲಯವು ಒಬ್ಬ ಮುಖ್ಯ ನ್ಯಾಯಾಧೀಶರು ಮತ್ತು ರಾಷ್ಟ್ರಪತಿಗಳು ನಿಗದಿಪಡಿಸಬಹುದಾದಷ್ಟು ಇತರೆ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ನ್ಯಾಯಾಧೀಶರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
ನಿಮಗಿದು ತಿಳಿದಿರಲಿ: 1) 1862ರಲ್ಲಿ ಬ್ರಿಟೀಷರು ಭಾರತದಲ್ಲಿ ಮೊಟ್ಟಮೊದಲು ಕಲ್ಕತ್ತಾ, ಬಾಂಬೆ, ಮದ್ರಾಸ್ಗಳಲ್ಲಿ 3 ಹೈಕೋರ್ಟ್ಗಳನ್ನು ಸ್ಥಾಪಿಸಿದರು. ಪ್ರಸ್ತುತ ರಾಷ್ಟ್ರದಲ್ಲಿ ಒಟ್ಟು 25 ಉಚ್ಚ ನ್ಯಾಯಾಲಯಗಳಿವೆ.
2) ಪಂಜಾಬ್, ಹರಿಯಾಣ ರಾಜ್ಯಗಳಿಗೆ ಚಂಡಿಗಢದಲ್ಲಿ ಒಂದೇ ಉಚ್ಚ ನ್ಯಾಯಾಲಯವಿದೆ. ಅಸ್ಸಾಂ, ನಾಗಾಲ್ಯಾಂಡ್, ಮೀಜೋರಂ ಮತ್ತು ಅರುಣಾಚಲ ಪ್ರದೇಶಗಳಿಗೆ ಅಸ್ಸಾಂನ ಗೌಹಾತಿಯಲ್ಲಿ ಒಂದೇ ಉಚ್ಚನ್ಯಾಯಾಲಯವಿದೆ.
3. 1884ರಲ್ಲಿ ಮೈಸೂರು ಉಚ್ಚನ್ಯಾಯಾಲಯ ಸ್ಥಾಪನೆಯಾಯಿತು. 1973ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಎಂದು ಮರುನಾಮಕರಣ ಮಾಡಲಾಯಿತು. ಕರ್ನಾಟಕದಲ್ಲಿ ಇತ್ತೀಚೆಗೆ ಬೆಂಗಳೂರು ಉಚ್ಚನ್ಯಾಯಾಲಯದ ಜೊತೆಗೆ ಧಾರವಾಡ ಮತ್ತು ಕಲಬುರಗಿಗಳಲ್ಲಿ ಪೀಠ ಸ್ಥಾಪಿಸಲಾಗಿದೆ
ಉಚ್ಚ ಅಥವಾ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಲು ಇರುವ ಅರ್ಹತೆಗಳೆಂದರೆ
1) ಭಾರತದ ಪ್ರಜೆಯಾಗಿರಬೇಕು.
2) ಕನಿಷ್ಠ 10 ವರ್ಷಗಳು ನ್ಯಾಯಾಧಿಕಾರಿಯಾಗಿ ಸೇವೆ ಸಲ್ಲಿಸಿರಬೇಕು ಅಥವಾ 10 ವರ್ಷಗಳ ಕಾಲ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು. ಅಥವಾ
3) ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ನ್ಯಾಯನಿಪುಣರಾಗಿರಬೇಕು.
ನ್ಯಾಯಾಧೀಶರು ತಮ್ಮ 62ನೇ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ದುರ್ನಡತೆ ಅಥವಾ ಅಸಮರ್ಥತೆ ಆಧಾರದ ಮೇಲೆ ಅಥವಾ ಸಂವಿಧಾನ ಉಲ್ಲಂಘಿಸಿದಾಗ ಸಂಸತ್ತು ಪದಚ್ಯುತಗೊಳಿಸಬಹುದಾಗಿದೆ.
ನಾಗರಿಕ ನ್ಯಾಯಾಲಯ (ಅiviಟ ಅouಡಿಣ) : ಇದು ಪ್ರತಿಯೊಂದು ಜಿಲ್ಲೆಯಲ್ಲೂ ಇದ್ದು, ಜಿಲ್ಲಾ
ನ್ಯಾಯಾಧೀಶರು ಇದರ ಮುಖ್ಯ ನ್ಯಾಯಾಧೀಶರಾಗಿರುತ್ತಾರೆ. ಈ ನ್ಯಾಯಾಧೀಶರನ್ನು ರಾಜ್ಯ ಶ್ರೇಷ್ಠ
ನ್ಯಾಯಾಲಯದ ನ್ಯಾಯಾಧೀಶರೊಡನೆ ಸಮಾಲೋಚಿಸಿ ರಾಜ್ಯಪಾಲರು ನೇಮಿಸುತ್ತಾರೆ. ಈ ನ್ಯಾಯಾಧೀಶರು ರಾಷ್ಟ್ರದ ಅಥವಾ ರಾಜ್ಯದ ಯಾವುದೇ ನ್ಯಾಯಾಂಗ ಸೇವೆಯಲ್ಲಿ 7 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
ಅಪರಾಧ ನ್ಯಾಯಾಲಯ ಅಥವಾ ದಂಡಾಧಿಕಾರ ನ್ಯಾಯಾಲಯ (ಅಡಿimiಟಿಚಿಟ ಅouಡಿಣ):
ಅಪರಾಧ ನ್ಯಾಯಾಲಯವು ಏಪ್ರಿಲ್ 1, 1974 ರಂದು ಅಸ್ತಿತ್ವಕ್ಕೆ ಬಂದಿತು. ಇದನ್ನು ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯ ಎಂದು ಕರೆಯಲಾಗುತ್ತದೆ.
ಕಂದಾಯ ನ್ಯಾಯಾಲಯಗಳು ಪ್ರತಿಯೊಂದು ಜಿಲ್ಲೆಯು ಕಂದಾಯ ನ್ಯಾಯಾಲಯಗಳನ್ನು ಹೊಂದಿರುತ್ತವೆ. ಇವು ಕಂದಾಯಕ್ಕೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ, ಭೂ ದಾಖಲೆಗಳು, ಭೂ ಕಂದಾಯ ಮುಂತಾದವುಗಳ ವಿಚಾರಣೆ ನಡೆಸುತ್ತವೆ. ಕಂದಾಯ ನ್ಯಾಯಾಲಯವು ಈ ಕೆಳಕಂಡ ನ್ಯಾಯಾಲಯಗಳನ್ನು ಒಳಗೊಂಡಿದೆ.
ತಹಸೀಲ್ದಾರ್ ನ್ಯಾಯಾಲಯ : ಕಂದಾಯ ನ್ಯಾಯಾಲಯಗಳಲ್ಲಿ ಅತಿ ಕೆಳಗಿನ ನ್ಯಾಯಾಲಯವೆಂದರೆ ತಹಶೀಲ್ದಾರ್ ನ್ಯಾಯಾಲಯವಾಗಿದ್ದು, ತಹಶೀಲ್ದಾರ್ ನ್ಯಾಯಾಧೀಶರಾಗಿರುತ್ತಾರೆ. ಈ ನ್ಯಾಯಾಲಯವನ್ನು ತಾಲ್ಲೂಕು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂಬುದಾಗಿಯೂ ಕರೆಯುತ್ತಾರೆ.
ಜಿಲ್ಲಾ ಉಪವಿಭಾಗಾಧಿಕಾರಿಗಳ ನ್ಯಾಯಾಲಯ : ತಹಸೀಲ್ದಾರ್ ನ್ಯಾಯಾಲಯಗಳ ನಿರ್ಣಯಗಳು ಮತ್ತು ತೀರ್ಪುಗಳ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು ಸ್ವೀಕರಿಸಿ ವಿಚಾರಣೆ ನಡೆಸುತ್ತದೆ. ಸಹಾಯಕ ಆಯುಕ್ತರು (ಂssisಣಚಿಟಿಣ ಅommissioಟಿeಡಿ) ಈ ನ್ಯಾಯಾಲಯದ ನ್ಯಾಯಾಧೀಶರಾಗಿರುತ್ತಾರೆ.
ಜಿಲ್ಲಾ ಕಂದಾಯ ನ್ಯಾಯಾಲಯ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ : ಈ ನ್ಯಾಯಾಲಯವು ಜಿಲ್ಲಾ ಕೇಂದ್ರದಲ್ಲಿದ್ದು, ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳು ನೀಡಲಾದ ತೀರ್ಪುಗಳ ವಿರುದ್ಧ ಸಲ್ಲಿಸುವ ಮೇಲ್ಮನವಿಯನ್ನು ಸ್ವೀಕರಿಸಿ ವಿಚಾರಣೆ ನಡೆಸುತ್ತದೆ. ಜಿಲ್ಲಾಧಿಕಾರಿಗಳು (ಆeಠಿuಣಥಿ ಅommissioಟಿeಡಿ) ಈ ನ್ಯಾಯಾಲಯದ ನ್ಯಾಯಾಧೀಶರಾಗಿರುತ್ತಾರೆ.
ಆಯುಕ್ತರ ನ್ಯಾಯಾಲಯ : ಆಯುಕ್ತರ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಕೊಡುವ ತೀರ್ಪಿನ ವಿರುದ್ಧ ಮೇಲ್ಮನವಿ ಸ್ವೀಕರಿಸಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುತ್ತವೆ. ಇದರ ನ್ಯಾಯಾಧೀಶರು ರಾಜ್ಯ ಮಟ್ಟದ ವಿಭಾಗಾಧಿಕಾರಿಗಳಾಗಿರುತ್ತಾರೆ.
ಜನತಾ ನ್ಯಾಯಾಲಯಗಳು (ಲೋಕ್ ಅದಾಲತ್) ಭಾರತದಲ್ಲಿ ನ್ಯಾಯ ವಿತರಣೆಯು ವಿಳಂಬವೂ ಹಾಗೂ ವೆಚ್ಚದಾಯಕವೂ (ದುಬಾರಿ) ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮೊಕದ್ದಮೆಗಳನ್ನು ಶೀಘ್ರಗತಿಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಇತ್ಯರ್ಥಪಡಿಸಲು ಜನತಾ ನ್ಯಾಯಾಲಯಗಳು 1985 ರ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದವು. ಒಂದು ನಿರ್ದಿಷ್ಟ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ವ್ಯಕ್ತಿಗಳ ನಡುವಿನ ವಿವಾದಗಳನ್ನು ರಾಜಿ ಸಂಧಾನ ಮಾಡಿಸುವುದು ಅಥವಾ ಇತ್ಯರ್ಥ ಪಡಿಸುವ ಉದ್ದೇಶವನ್ನು ಹೊಂದಿದೆ. ಭಾರತದ ಚುನಾವಣಾ ವ್ಯವಸ್ಥೆ: ನಮ್ಮ ಸಂವಿಧಾನದ ಘಿಗಿ ನೇ ಭಾಗದಲ್ಲಿ 324 ರಿಂದ 329ರ ವರೆಗಿನ ವಿಧಿಗಳಡಿಯಲ್ಲಿ ಸ್ವತಂತ್ರವಾದ ಚುನಾವಣಾ ಆಯೋಗದ ವ್ಯವಸ್ಥೆ ಕುರಿತು ತಿಳಿಸಲಾಗಿದೆ. ಈ ಚುನಾವಣಾ ಆಯೋಗ ಅಖಿಲ ಭಾರತ ಸಂಸ್ಥೆಯಾಗಿದೆ. ಅಂದರೆ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳ ಜವಾಬ್ದಾರಿಯನ್ನು ಹೊಂದಿರುತ್ತದೆ. ವಿಧಿ 324 ಏ ಮತ್ತು Zಂ ಅನ್ವಯ ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುತ್ತದೆ.
ಚುನಾವಣಾ ಆಯೋಗದ ರಚನೆ (Sಣಡಿuಛಿಣuಡಿe oಜಿ ಇಟeಛಿಣioಟಿ ಅommisioಟಿ)
ಸಂವಿಧಾನದ ವಿಧಿ 324 ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುತ್ತದೆ. ಭಾರತ ಚುನಾವಣಾ ಆಯೋಗ 1950 ಜನವರಿ 25ರಂದು ಸ್ಥಾಪಿತವಾಯಿತು. ಪ್ರಾರಂಭದಲ್ಲಿ ಒಬ್ಬ ಮುಖ್ಯಚುನಾವಣಾ ಆಯುಕ್ತರನ್ನು ಮಾತ್ರ ಒಳಗೊಂಡಿತ್ತು. 1989ರಲ್ಲಿ ಸಂವಿಧಾನದ 61ನೆಯ ತಿದ್ದುಪಡಿ ಅನ್ವಯ ಸಾರ್ವತ್ರಿಕ ವಯಸ್ಕ ಮತದಾನದ ವಯಸ್ಸನ್ನು 21 ವರ್ಷದಿಂದ 18ನೇ ವರ್ಷಕ್ಕೆ ಕಡಿಮೆಗೊಳಿಸಲಾಯಿತು ರಾಷ್ಟ್ರಪತಿಯವರು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ. ಅವರ ಅಧಿಕಾರವಧಿ 6 ವರ್ಷಗಳು ಅಥವಾ ತಮ್ಮ ಅರವತ್ತೈದನೆಯ ವಯಸ್ಸನ್ನು ಹೊಂದುವವರೆಗೆ, ಇವುಗಳಲ್ಲಿ ಪ್ರಥಮವಾಗುವುದನ್ನು ಪರಿಗಣಿಸಲಾಗುತ್ತದೆ. ಇವರು ಯಾವುದೇ ಸಮಯದಲ್ಲಿ ರಾಷ್ಟ್ರಪತಿಗೆ ರಾಜೀನಾಮೆ ನೀಡಬಹುದಾಗಿದೆ. ಸಂಸತ್ತು ಅಸಮರ್ಥತೆ ಮತ್ತು ದುರ್ನಡತೆ ಆಧಾರದ ಮೇಲೆ ಪದಚ್ಯುತಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ. ಚುನಾವಣಾ ಆಯೋಗವು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ವಿಧಾನ ಪರಿಷತ್ತು ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ನಡೆಸುತ್ತದೆ. ಚುನಾವಣಾ ದಿನಾಂಕ ನಿಗದಿಪಡಿಸುವುದರಿಂದ ಫಲಿತಾಂಶವನ್ನು ಪ್ರಕಟಣೆಗೊಳಿಸುವವರೆಗಿನ ಅವಧಿಯಲ್ಲಿ ಸಂಪೂರ್ಣ ಅವಧಿಯನ್ನು ಹೊಂದಿರುತ್ತದೆ. ಪಂಚಾಯತ್ಗಳ ಹಾಗು ಪೌರ ಸಂಸ್ಥೆಗಳ ಚುನಾವಣೆಯನ್ನು ರಾಜ ಚುನಾವಣಾ ಆಯೋಗ ನಡೆಸುತ್ತದೆ. ಸಂವಿಧಾನದ ವಿಧಿ 243 ಏ ಮತ್ತು Zಂ ವಿಧಿಗಳನ್ವಯ ರಾಜ್ಯಪಾಲರು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ. ಕರ್ನಾಟಕದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರಲ್ಲಿಯ ಪ್ರಕರಣ 308ರನ್ವಯ ರಾಜ್ಯ ಚುನಾವಣಾ ಆಯೋಗವನ್ನು ಹೊಂದಲಾಗಿದ್ದು, ಇದು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ದೇಶದ ರಕ್ಷಣೆ ನಮ್ಮ ಸೇನಾಪಡೆಗಳ ರಚನೆ ನಮ್ಮ ದೇಶದಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಿವೆ. ಭಾರತದ ರಾಷ್ಟ್ರಪತಿಯವರು ಈ ಸೇನಾಪಡೆಗಳ ಪ್ರಧಾನ ದಂಡನಾಯಕರಾಗಿದ್ದಾರೆ. ಭೂಸೇನೆಯ ಮುಖ್ಯಸ್ಥರನ್ನು ದಂಡನಾಯಕ (ಜನರಲ್) ಎಂದೂ, ನೌಕಾಪಡೆಯ ಮುಖ್ಯಸ್ಥರನ್ನು ಅಡ್ಮಿರಲ್ ಎಂದೂ ಮತ್ತು ವಾಯುದಳದ ಮುಖ್ಯಸ್ಥರನ್ನು ಏರ್ ಚೀಫ್ ಮಾರ್ಷಲ್ ಎಂತಲೂ ಕರೆಯುತ್ತಾರೆ. 2001 ರಲ್ಲಿ ಈ ಮೂರು ಘಟಕಗಳ ಸಮನ್ವಯಕ್ಕಾಗಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಎಂಬ ಅಧಿಕಾರಿಯನ್ನು ನೇಮಿಸಿದೆ. ರಾಷ್ಟ್ರದ ರಕ್ಷಣಾ ಮಂತ್ರಿಗಳು
ಸಮಗ್ರ ಮೂರೂ ಪಡೆಗಳ (ಭೂಸೇನೆ, ವಾಯುಪಡೆ, ನೌಕಾಪಡೆ) ಕಾರ್ಯಗಳನ್ನು ಸಂಘಟಿಸುತ್ತಾರೆ. ಪುಣೆ ನಗರದ ಹತ್ತಿರವಿರುವ ಖಡಕ್ವಾಸ್ಲಾದಲ್ಲಿಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ,
ಉದಕಮಂಡಲದ ಬಳಿಯಲ್ಲಿರುವ ವೆಲ್ಲಿಂಗ್ಟನ್ನಲ್ಲಿಯ ರಕ್ಷಣಾ ಸೇನಾ ಸಿಬ್ಬಂದಿ ಕಾಲೇಜು,
ನವದೆಹಲಿಯಲ್ಲಿರುವ ರಾಷ್ಟ್ರೀಯ ರಕ್ಷಣಾ ಕಾಲೇಜು, ಡೆಹರಾಡೂನ್ನಲ್ಲಿರುವ ಭಾರತೀಯ ಮಿಲಿಟರಿ
ಅಕಾಡೆಮಿ, ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಶಾಲೆ ಮುಂತಾದುವು ಪ್ರಮುಖ ತರಬೇತಿ ಕೇಂದ್ರಗಳಾಗಿವೆ.
ಭಾರತೀಯ ನೌಕಾದಳ ಪ್ರಪಂಚದ ಬಹುದೊಡ್ಡ ಜಲಮೇರೆಯನ್ನು ಹೊಂದಿರುವ ಭಾರತ, ಉದ್ದವಾದ ಕರಾವಳಿಯನ್ನು, ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪಗಳನ್ನು ಒಳಗೊಂಡಿದೆ. ಇವುಗಳನ್ನು ರಕ್ಷಿಸಲು ಬಲಿಷ್ಠವಾದ ನೌಕಾದಳವಿದೆ. ಇದರ ಕೇಂದ್ರ ಕಛೇರಿಯೂ ಸಹ ದೆಹಲಿಯಲ್ಲಿದೆ. ಭಾರತೀಯ ನೌಕಾದಳಕ್ಕೆ ಎರಡು ಫ್ಲೀಟ್ಗಳಿವೆ. ಪಶ್ಚಿಮ ಫ್ಲೀಟ್ ಹಾಗೂ ಪೂರ್ವ ಫ್ಲೀಟ್. ವಿಶಾಖಪಟ್ಟಣದಲ್ಲಿ ಹಿಂದೂಸ್ಥಾನ ಹಡಗು ಕಾರ್ಖಾನೆಯಿದೆ. ಅಲ್ಲದೆ ಕೊಲ್ಕತ್ತಾ ಮತ್ತು ಗೋವಾಗಳಲ್ಲಿ ಕೂಡ ಹಡಗು ನಿರ್ಮಾಣ ಕಾರ್ಯ ನಡೆಯುತ್ತದೆ. ಭಾರತೀಯ ನೌಕಾದಳಕ್ಕೆ ಎರಡು ಫ್ಲೀಟ್ಗಳಿವೆ.
ಪಶ್ಚಿಮ ಫ್ಲೀಟ್ ಹಾಗೂ ಪೂರ್ವ ಫ್ಲೀಟ್. ವಿಶಾಖಪಟ್ಟಣದಲ್ಲಿ ಹಿಂದೂಸ್ಥಾನ ಹಡಗು ಕಾರ್ಖಾನೆಯಿದೆ. ಅಲ್ಲದೆ ಕೊಲ್ಕತ್ತಾ ಮತ್ತು ಗೋವಾಗಳಲ್ಲಿ ಕೂಡ ಹಡಗು ನಿರ್ಮಾಣ ಕಾರ್ಯ ನಡೆಯುತ್ತದೆ.
ವಾಯುದಳ: ನಮ್ಮ ಸೇನಾಪಡೆಯು ಗಾತ್ರದಲ್ಲಿ ಜಗತ್ತಿನ 4 ನೇ ಸ್ಥಾನದಲ್ಲಿದೆ. ವಾಯುಪಡೆಯಲ್ಲಿ 5 ನೆಯದು ಮತ್ತು ನೌಕಾಪಡೆಯಲ್ಲಿಯೂ 5 ನೇ ಸ್ಥಾನ ಗಳಿಸಿಕೊಂಡಿದೆ. ನಮ್ಮ ಸೇನೆಯನ್ನು ಬಲಪಡಿಸಲೆಂದೇ ಕಾರವಾರದ ಬಳಿ ಸೀಬರ್ಡ್ ನೌಕಾನೆಲೆಯನ್ನು ತೆರೆಯಲಾಗಿದೆ.
ಅಲ್ಲದೆ 1958ರಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯನ್ನು (ಆಖಆಔ – ಆeಜಿeಟಿಛಿe ಖeseಚಿಡಿಛಿh ಚಿಟಿಜ ಆeveಟoಠಿmeಟಿಣ ಔಡಿgಚಿಟಿisಚಿಣioಟಿ) ಸ್ಥಾಪಿಸಿ ಭೂಮಿಯಿಂದ ಭೂಮಿಗೆ ಜಿಗಿಯುವ ಕ್ಷಿಪಣಿಯಾದ ಪೃಥ್ವಿ, ತ್ರಿಶೂಲ್, ಆಕಾಶ್, ನಾಘ, ಅಗ್ನಿ 1, 2, 3, 4, 5 ಎಂಬ ಅತ್ಯಾಧುನಿಕ ಕ್ಷಿಪಣಿಗಳನ್ನು ಹೊಂದಿದೆ 19 ಏಪ್ರಿಲ್ 2012 ರಲ್ಲಿ ಅಗ್ನಿ 5 ನ್ನು 5 ಸಾವಿರ ಕಿ.ಮೀ.ನ್ನು ಗುರಿ ಹೊಂದಿದ ಕ್ಷಿಪಣಿಯನ್ನು ಉಡಾಯಿಸಲಾಯಿತು. ಭೋಫೋರ್ಸ್ ಫಿರಂಗಿಗಳನ್ನು ಕಾರ್ಗಿಲ್ ಯುದ್ಧದಲ್ಲಿ (ಭಾರತ ಮತ್ತು ಪಾಕಿಸ್ತಾನ) ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.
ಕಾರ್ಗಿಲ್ ಯುದ್ಧ - 1999 : ಭಾರತ ಮತ್ತು ಪಾಕಿಸ್ತಾನಗಳ ನಡುವೆ 1999ರ ಮೇ-ಜೂನ್ನಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಮೇ. 16 ರಂದು ಪಾಕ್ ಸೈನಿಕರು ಕಾಶ್ಮೀರದ ಅತ್ಯಂತ ಎತ್ತರವಾದ ಪ್ರದೇಶದ ಮೇಲೆ ವೈಮಾನಿಕ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಆಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ಭಾರತ ಪ್ರತಿದಾಳಿ ಆರಂಭಿಸಿತು. ಮೊದಲು ಭಾರತದ ಸೈನ್ಯಕ್ಕೆ ಹಿನ್ನಡೆಯಾಯಿತು. ಆನಂತರ ಹೋರಾಟ ದ್ವಿಗುಣಗೊಳಿಸಿ ಬೋಪೆÇೀರ್ಸ್ ಬಂದೂಕಗಳಿಂದ ಜೂನ್ 14ರಂದು ಪ್ರತಿ ದಾಳಿ ಮಾಡಿದಾಗ ಪಾಕಿಸ್ತಾನ ಅವಮಾನಕರ ಸೋಲುಂಡು ಹಿಂದಕ್ಕೆ ಸರಿಯಿತು. ಭಾರತದ ಭೂಸೇನೆಗೆ ಬೆಂಬಲವಾಗಿ ಭಾರತೀಯ ವಾಯುಪಡೆ ಆಪರೇಷನ್ ಸೇಪ್ಡ್ ಸಾಗರ್ ಕಾರ್ಯಾಚರಣೆಯನ್ನು ಆರಂಭಿಸಿತು. ಜುಲೈ ಕೊನೆಯ ವಾರದಲ್ಲಿ ಭಾರತದ ಸೇನೆ ಅಂತಿಮ ದಾಳಿಯನ್ನು ಆರಂಭಿಸಿತು. ಜುಲೈ 26ರಂದು ಹೋರಾಟ ಸ್ಥಗಿತಗೊಂಡಿತು. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ (ಕಾರ್ಗಿಲ್ ವಿಜಯೋತ್ಸವ ದಿನ) ಎಂದು ಭಾರತದಲ್ಲಿ ಗುರುತಿಸಲಾಗಿದೆ. ಪ್ರತಿ ವರ್ಷವೂ ಜುಲೈ 26 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.
ಗಡಿ ಭದ್ರತಾ ದಳ (ಃoಡಿಜeಡಿ Seಛಿuಡಿiಣಥಿ ಈoಡಿಛಿe) : ಗಡಿ ಭದ್ರತಾ ಪಡೆಯನ್ನು 1965ರಲ್ಲಿ ಸ್ಥಾಪಿಸಲಾಯಿತುಇದರ ತರಬೇತಿ ಕೇಂದ್ರ ಬೆಂಗಳೂರಿನ ಯಲಹಂಕದಲ್ಲಿದೆ. ಆಂತರಿಕ ಭದ್ರತೆಯ ದೃಷ್ಟಿಯಿಂದ ಅಸ್ಸಾಂ ರೈಫಲ್ಸ್, ಇಂಡೋ-ಟಿಬೆಟಿಯನ್ ಗಡಿ ಪೋಲಿಸ್ (IಖಿಃP),
ಕೇಂದ್ರ ಮೀಸಲು ಪೆÇೀಲಿಸ್ ಪಡೆ (ಅಖPಈ), ಭಯೋತ್ಪಾದನೆ ನಿಗ್ರಹದ ವಿಶೇಷ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಅISಈ), ರೈಲ್ವೆ ರಕ್ಷಣಾ ಪಡೆ (ಖPಈ) ಮುಂತಾದುವು ಸಹಾಯಕ ಸೇನಾಪಡೆಗಳಾಗಿ ಕಾರ್ಯನಿರ್ವಹಿಸುತ್ತವೆ. ಭಾರತವು ವಿಶಾಲವಾದ ರಾಷ್ಟ್ರವಾಗಿದ್ದು, ಪ್ರಪಂಚದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ದೇಶದಲ್ಲಿ ಸುಮಾರು 1652 ಭಾಷೆ ಮತ್ತು ಉಪಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಇದರಲ್ಲಿ 22 ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ನಮ್ಮ ಸಂವಿಧಾನ ಅಂಗೀಕರಿಸಿದೆ. ನಮ್ಮ ದೇಶದಲ್ಲಿ ಹಲವಾರು ಧರ್ಮ ಮತ್ತು ಮತಗಳು (ಹಿಂದೂ, ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಮತ್ತು ಪಾರ್ಸಿ) ಆಚರಣೆಯಲ್ಲಿರುವುದು ಒಂದು ಅದ್ವಿತೀಯ ಲಕ್ಷಣವಾಗಿದೆ.
ಬುಡಕಟ್ಟು ಸಮುದಾಯ ಮತ್ತು ಅದರ ಲಕ್ಷಣಗಳು
ಬುಡಕಟ್ಟು ಎಂಬ ಪದವನ್ನು ಜೀವ ವಿe್ಞÁನಿಗಳು, ಸಮಾಜ ವಿಜ್ಞಾನಿಗಳು ವಿಭಿನ್ನ ಅರ್ಥದಲ್ಲಿ ಬಳಸಿದ್ದಾರೆ. ಕಿಟ್ಟೆಲ್ಲರು ತಮ್ಮ ಅರ್ಥಕೋಶದಲ್ಲಿ ಬುಡಕಟ್ಟು ಎಂಬ ಶಬ್ದಕ್ಕೆ ‘ಕುಟುಂಬ’ ಹಾಗೂ ‘ಕುಲ’ ಎಂಬ ಅರ್ಥವನ್ನು ನೀಡಿದ್ದಾರೆ. ಬುಡಕಟ್ಟು ಎಂಬ ಪದವು ಆಂಗ್ಲಭಾಷೆಯಲ್ಲಿ ಬಳಕೆಯಾಗುವ ‘ಟ್ರೈಬ್’ ಎಂಬ ಪದಕ್ಕೆ ಸಮಾನಾರ್ಥಕ ಪದ. ಇದು ಲ್ಯಾಟೀನ್ ಭಾಷೆಯ ‘‘ಟ್ರೈಬಸ್’ ಎಂಬ ಪದದಿಂದ ಉಗಮಗೊಂಡಿದೆ.
(ಅ) ಕಕೇಶಿಯನ್: ಈ ಬುಡಕಟ್ಟಿಗೆ ಸೇರಿದ ಜನರು ಶ್ವೇತವರ್ಣೀಯರು. ಇವರು ಎತ್ತರ ನಿಲುವು, ಉದ್ದವಾದ, ಚೂಪಾದ, ನೇರವಾದ ಮೂಗು, ಓರೆ ತಲೆ, ನೇರ ದವಡೆ, ಉದ್ದವಾದ ಮುಖ, ಸಣ್ಣ ತುಟಿ, ಮೈಮೇಲೆ ದಟ್ಟವಾಗಿ ಬೆಳೆದ ಕೂದಲು, ಕಂದು ಬಣ್ಣ ಮುಂತಾದ ದೈಹಿಕ ಲಕ್ಷಣಗಳನ್ನು ಹೊಂದಿದ್ದಾರೆ.
(ಆ) ಮಂಗೋಲಿಯನ್: ಈ ಬುಡಕಟ್ಟಿಗೆ ಸೇರಿದ ಜನರು ಪೀತವರ್ಣೀಯರು - ಅಂದರೆ ಹಳದಿ ಬಣ್ಣದವರು. ಗುಂಡು ತಲೆ, ಓರೆ ಕಣ್ಣು, ಚಪ್ಪಟೆಯಾದ ಹಾಗೂ ದುಂಡನೆಯ ಆಕಾರದ ಮುಖ, ನೇರವಾದ ಮತ್ತು ಉದ್ದವಾದ ತಲೆಗೂದಲು ಮೊದಲಾದ ದೈಹಿಕ ಲಕ್ಷಣಗಳನ್ನು ಹೊಂದಿದ್ದಾರೆ.
(ಇ) ನೀಗ್ರೊ : ಈ ಬುಡಕಟ್ಟಿಗೆ ಸೇರಿದ ಜನರು ಗುಂಡು ತಲೆ, ಚಪ್ಪಟೆಯಾದ ಮೂಗು, ಮುಂದಕ್ಕೆ ಚಾಚಿದ ದವಡೆ, ದುಂಡನೆಯ ಕಂದುಬಣ್ಣದ ಕಿರುಗಣ್ಣುಗಳು, ಹೊಳಪಾದ ಹಾಗೂ ಮೋಟಾದ ಗುಂಗುರು ಕೂದಲು, ದಪ್ಪ ತುಟಿ ಮುಂತಾದ ದೈಹಿಕ ಲಕ್ಷಣಗಳನ್ನು ಹೊಂದಿದ್ದಾರೆ.
ಕರ್ನಾಟಕದ ಖನಿಜ ಸಂಪನ್ಮೂಲಗಳು
ಕಬ್ಬಿಣದ ಅದಿರು: ಇದು ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಚಾ ವಸ್ತು. ಕರ್ನಾಟಕವು ಉತ್ತಮ ದರ್ಜೆಯ ಮ್ಯಾಗ್ನಟೈಟ್ ಮತ್ತು ಹೆಮಾಟೈಟ್ ವರ್ಗದÀ ಅಪಾರವಾದ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿದೆ. ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು ಎರಡನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ 75 ಕಬ್ಬಿಣದ ಅದಿರಿನ ಗಣಿಗಳಿವೆ. ನಮ್ಮ ರಾಜ್ಯ ಉತ್ಪಾದಿಸುವ ಕಬ್ಬಿಣದ ಅದಿರಿನಲ್ಲಿ ಶ್ರೇಷ್ಠ ದರ್ಜೆಯ ಮ್ಯಾಗ್ನಟೈಟ್ನ ಪಾಲು ಶೇ.63 ಭಾಗದಷ್ಟಿದೆ. ಉಳಿದದ್ದು ಹೆಮಾಟೈಟ್ ದರ್ಜೆಯದಾಗಿದೆ. ಬಳ್ಳಾರಿ ಜಿಲ್ಲೆಯು ಅಪಾರವಾದ ನಿಕ್ಷೇಪವನ್ನು ಹೊಂದಿದ್ದು, ಪ್ರಥಮ ಸ್ಥಾನದಲ್ಲಿದೆ. ಅದು ಹೊಸಪೇಟೆ ಮತ್ತು ಸಂಡೂರು ಪ್ರದೇಶಗಳಲ್ಲಿ ಕಂಡುಬರುತ್ತದೆ. ದೋಣಿಮಲೈ, ವಿಭೂತಿಗುಡ್ಡ, ಬೆಳಗಾಳ, ಕುಮಾರಸ್ವಾಮಿ ಬೆಟ್ಟಗಳು, ತಿಮ್ಮಪ್ಪನ ಗುಡಿ, ದೇವಾದ್ರಿ ಶ್ರೇಣಿ, ರಾಮದುರ್ಗ ಬೆಟ್ಟಗಳಲ್ಲಿ ಕಬ್ಬಿಣದ ಅದಿರನ್ನು ಉತ್ಪಾದಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬಾಬಾಬುಡನ್ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಗಂಗಾಮೂಲ, ಕಲ್ಹತ್ತಗಿರಿ, ಜೇನುಸುರಿ ಗುಡ್ಡಗಳಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ.
ಮ್ಯಾಂಗನೀಸ್ : ಮ್ಯಾಂಗನೀಸ್ ಅದಿರು ಮುಖ್ಯವಾಗಿ ಪದರು ಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಆಕ್ಸೈಡ್ ರೂಪದಲ್ಲಿ ದೊರೆಯುತ್ತದೆ. ಇದನ್ನು ಮಿಶ್ರ ಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಕಾಠಿಣ್ಯತೆಯನ್ನು ಹೆಚ್ಚಿಸಲು ಬಳಸುವರು. ಕರ್ನಾಟಕದಲ್ಲಿ ಮ್ಯಾಂಗನೀಸ್ ಅದಿರಿನ ನಿಕ್ಷೇಪ ಹೇರಳವಾಗಿದ್ದು, ದೇಶದ ಒಟ್ಟು ನಿಕ್ಷೇಪದಲ್ಲಿ ಶೇ.27 ಭಾಗದಷ್ಟಿದೆ. ಮ್ಯಾಂಗನೀಸ್ ಉತ್ಪಾದನೆಯಲ್ಲಿ ಒಡಿಶಾದ ನಂತರ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಮ್ಯಾಂಗನೀಸ್ ಹಂಚಿಕೆಯು ಕಬ್ಬಿಣದ ಅದಿರಿನ ಪ್ರದೇಶಗಳಲ್ಲೇ ಕಂಡುಬರುತ್ತದೆ. ಬಳ್ಳಾರಿ ಜಿಲ್ಲೆಯ ಸಂಡೂರು ಪ್ರಮುಖ ಮ್ಯಾಂಗನೀಸ್ ಉತ್ಪಾದಿಸುವ ಪ್ರದೇಶವಾಗಿದೆ.
ಬಾಕ್ಸೈಟ್ : ಬಾಕ್ಸೈಟ್ ಅದಿರನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ. ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಾಗಿದೆ. ಇಲ್ಲಿನ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಬಾಕ್ಸೈಟ್ ಗಣಿಗಳಿವೆ.
ಚಿನ್ನ : ಚಿನ್ನವು ಅಪರೂಪದ, ಹೊಳೆಯುವ, ಹೆಚ್ಚು ಬಾಳಿಕೆ ಬರುವ ಹಳದಿ ಲೋಹವಾಗಿದೆ. ಇದನ್ನು ಆಭರಣಗಳ ತಯಾರಿಕೆ, ಗಡಿಯಾರ ಮುಂತಾದ ಅಮೂಲ್ಯ ವಸ್ತುಗಳ ತಯಾರಿಕೆಯಲ್ಲಿ ಅಧಿಕವಾಗಿ ಬಳಸುತ್ತಾರೆ. ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಉತ್ಪಾದನೆಯ ಹೆಚ್ಚು ಚಿನ್ನವನ್ನು ಕರ್ನಾಟಕದ ಗಣಿಗಳಿಂದಲೇ ಪಡೆಯಲಾಗುತ್ತಿದೆ. ಆದ್ದರಿಂದ ಇದನ್ನು ‘ಚಿನ್ನದ ನಾಡು’ ಎಂದು ಕರೆಯುವರು. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನ ಗಣಿಗಾರಿಕೆ ಕಂಡು ಬಂದಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆ 1880 ರಲ್ಲಿ ಜಾನ್ ಟೇಲರ್ ಎಂಬುವನು ಪ್ರಾರಂಭ ಮಾಡಿ, 1885 ರಲ್ಲಿ ಕೆ.ಜಿ.ಎಫ್. ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ. ಅವುಗಳೆಂದರೆ ನಂದಿದುರ್ಗ, ಉರಿಗಾಂ, ಚಾಂಪಿಯನ್ ರೀಫ್ ಮತ್ತು ಮೈಸೂರು ಗಣಿ. ಇದರಲ್ಲಿ ಚಾಂಪಿಯನ್ ರೀಫ್ ಗಣಿಯು ಅತ್ಯಂತ ಆಳವಾದ ಚಿನ್ನದ ಗಣಿಯಾಗಿದೆ (3217 ಮೀ.). ಈ ಗಣಿಗಳಲ್ಲಿ ಹಲವು ವರ್ಷಗಳ ನಿರಂತರ ಗಣಿಗಾರಿಕೆಯಿಂದ ಚಿನ್ನದ ನಿಕ್ಷೇಪದ ಪ್ರಮಾಣ ಕಡಿಮೆಯಾಗಿದೆ. ಪ್ರಸ್ತುತ ರಾಯಚೂರು ಜಿಲ್ಲೆಯ ಹಟ್ಟಿ ಭಾರತದ ಅತಿ ದೊಡ್ಡ ಚಿನ್ನದ ಗಣಿಯಾಗಿದೆ. ಇಲ್ಲಿ ಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ. ತುಮಕೂರು ಜಿಲ್ಲೆಯ ಬೆಳ್ಳಾರ, ಶಿರಾ ಸಮೀಪವಿರುವ ಅಜ್ಜನಹಳ್ಳಿಯಲ್ಲೂ ಚಿನ್ನದ ಅದಿರನ್ನು ಉತ್ಪಾದಿಸಲಾಗುತ್ತಿದೆ. ಇತರೆ ಚಿನ್ನದ ನಿಕ್ಷೇಪವಿರುವ ಸ್ಥಳಗಳೆಂದರೆ ಗದಗ ಜಿಲ್ಲೆಯ ಮುಳಗುಂದ, ಕಪ್ಪತ್ತಗುಡ್ಡ, ಹಾಸನ ಜಿಲ್ಲೆಯ ಕೆಂಪಿನಕೋಟೆ ಮೊದಲಾದವುಗಳು.
ಕರ್ನಾಟಕದ ಸಾರಿಗೆ
ರಸ್ತೆ ಸಾರಿಗೆ
ಪ್ರಾಮುಖ್ಯತೆ : ಕರ್ನಾಟಕದ ಜನರು ಹೆಚ್ಚಾಗಿ ಹಳ್ಳಿಗಾಡಿನಲ್ಲೇ ವಾಸ ಮಾಡುವುದರಿಂದ ಪ್ರತಿಯೊಂದು ಹಳ್ಳಿ- ಪಟ್ಟಣ ಹಾಗೂ ಇತರ ಜನವಸತಿಗಳನ್ನುಸಂಪರ್ಕಿಸುವುದರಲ್ಲಿ ರಸ್ತೆ ಸಾರಿಗೆಯ ಪಾತ್ರ ಮಹತ್ವವುಳ್ಳದ್ದಾಗಿದೆ.
ರಸ್ತೆಗಳ ವಿಧಗಳು : ಕರ್ನಾಟಕದ ರಸ್ತೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ :
(1) ರಾಷ್ಟ್ರೀಯ ಹೆದ್ದಾರಿಗಳು
(2) ರಾಜ್ಯ ಹೆದ್ದಾರಿಗಳು
(3) ಜಿಲ್ಲಾ ರಸ್ತೆಗಳು ಹಾಗೂ
(4) ಗ್ರಾಮೀಣ ರಸ್ತೆಗಳು
1) ರಾಷ್ಟ್ರೀಯ ಹೆದ್ದಾರಿಗಳು : ಪ್ರಮುಖ ನಗರಗಳು, ರಾಜ್ಯಗಳ ರಾಜಧಾನಿಗಳು ಹಾಗೂ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ‘ರಾಷ್ಟ್ರೀಯ ಹೆದ್ದಾರಿ’ಗಳೆನ್ನುವರು. ಇವುಗಳ ನಿರ್ವಹಣೆ ಕಾರ್ಯವು ‘ರಾಷ್ಟ್ರೀಯ ಹೆದ್ದಾರಿ ಇವು ಗುಣಮಟ್ಟದ ಮತ್ತು ಅಗಲವಾದ ರಸ್ತೆಗಳಾಗಿದ್ದು, ದ್ವಿಮುಖ, ನಾಲ್ಕು ಪಥ ಮತ್ತು ಆರು ಪಥಗಳ ರಸ್ತೆಗಳನ್ನು ಹೊಂದಿರುತ್ತವೆ. ಇವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಇವುಗಳ ನಿರ್ವಹಣೆ ಕಾರ್ಯವು ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’(ಓಊಂI)ಕ್ಕೆ ಸೇರಿದೆ. ಕರ್ನಾಟಕದಲ್ಲಿ ಪ್ರಸ್ತುತ 14 ರಾಷ್ಟ್ರೀಯ ಹೆದ್ದಾರಿಗಳಿವೆ. ಇವುಗಳ ಒಟ್ಟು ಉದ್ದ 6,572 ಕಿ.ಮೀ.ಗಳು. ಉತ್ತರ ಕನ್ನಡ, ವಿಜಯಪುರ ಬೆಳಗಾವಿ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳು ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿವೆ. ಆದರೆ ರಾಯಚೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಲ ರಾಷ್ಟ್ರೀಯ ಹೆದ್ದಾರಿ ಓಊ - 4 ಮತ್ತು ಓಊ - 7 ಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ‘ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ’ ಹಾಗೂ ‘ಕಾರಿಡಾರ್ ಯೋಜನೆ’ಗಳಿಗೆ ಸೇರಿವೆ.
ಕರ್ನಾಟಕದಲ್ಲಿ ಹಾದು ಹೋಗುವ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆ 13
ಮಂಗಳೂರು - ಮೂಡಬಿದ್ರಿ, ಕೊಪ್ಪ, ಶಿವಮೊಗ್ಗ, ಚಿತ್ರದುರ್ಗ, ಹೊಸಪೇಟೆ, ಇಳಕಲ್,
ವಿಜಯಪುರ ಮಾರ್ಗವಾಗಿ ಸೊಲ್ಲಾಪುರಕ್ಕೆ ಸೇರುತ್ತದೆ.
2) ರಾಜ್ಯ ಹೆದ್ದಾರಿಗಳು : ರಾಜಧಾನಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರ, ಪ್ರಮುಖ ಪಟ್ಟಣಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳೊಡನೆ ಸಂಪರ್ಕಿಸುವ ರಸ್ತೆಗಳಿಗೆ ‘ರಾಜ್ಯ ಹೆದ್ದಾರಿ’ ಎಂದು ಕರೆಯುವರು. ಇವುಗಳ ನಿರ್ಮಾಣ-ನಿರ್ವಹಣೆ ರಾಜ್ಯ ಸರ್ಕಾರಗಳಿಗೆ ಸೇರಿದೆ. ಕರ್ನಾಟಕ ರಾಜ್ಯದಲ್ಲಿ 19,578 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳಿವೆ. ಬೆಳಗಾವಿ ಜಿಲ್ಲೆ ಅತಿ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆಯಾಗಿದೆ. ಬೆಂಗಳೂರು ಅತಿ ಕಡಿಮೆ ಉದ್ದದ ರಾಜ್ಯ ಹೆದ್ದಾರಿಯುಳ್ಳ ಜಿಲ್ಲೆಯಾಗಿದೆ.
3) ಜಿಲ್ಲಾ ರಸ್ತೆಗಳು : ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ, ಪ್ರಮುಖ ಪಟ್ಟಣ, ಗ್ರಾಮಗಳು,
ರೈಲು ಮಾರ್ಗ ಹಾಗೂ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾ ರಸ್ತೆಗಳೆನ್ನುವರು. ಇವುಗಳ ನಿರ್ಮಾಣ ಅಭಿವೃದ್ಧಿ ಮೇಲ್ವಿಚಾರಣೆಯು ‘ಜಿಲ್ಲಾ ಪಂಚಾಯತ್’ ಗೆ ಸೇರಿರುತ್ತದೆ. ರಾಜ್ಯದಲ್ಲಿ ಒಟ್ಟು 49,909 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳಿವೆ. ತುಮಕೂರು ಜಿಲ್ಲೆ ಹೆಚ್ಚು ಜಿಲ್ಲಾ ರಸ್ತೆಗಳನ್ನೊಳಗೊಂಡಿದೆ. ರಾಯಚೂರು ಜಿಲ್ಲೆ ಕಡಿಮೆ ಜಿಲ್ಲಾ ರಸ್ತೆಗಳನ್ನೊಳಗೊಂಡಿದೆ.
4) ಗ್ರಾಮೀಣ ರಸ್ತೆಗಳು : ತಾಲ್ಲೂಕು ಕೇಂದ್ರದಿಂದ ಪ್ರತಿಯೊಂದು ಗ್ರಾಮಗಳಿಗೂ, ಎಲ್ಲಾ ಜಿಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ‘ಗ್ರಾಮೀಣ ರಸ್ತೆ’ಗಳು. ಇವುಗಳ ನಿರ್ಮಾಣ, ನಿರ್ವಹಣೆ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೇರಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 1,77,542ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳಿವೆ.
ರೈಲು ಸಾರಿಗೆ
ಕರ್ನಾಟಕದಲ್ಲಿ ಮೊಟ್ಟಮೊದಲು ರೈಲು ಸಂಚಾರ ಆರಂಭವಾಗಿದ್ದು 1864 ರಲ್ಲಿ, ಇದನ್ನು ಬೆಂಗಳೂರು ಮತ್ತು ಮದರಾಸು ನಗರಗಳ ಮಧ್ಯೆ ‘ಮದರಾಸು ರೈಲ್ವೆ ಕಂಪನಿ’ಯು ನಿರ್ಮಿಸಿತು.
ಮೆಟ್ರೋ ರೈಲು : ಬೆಂಗಳೂರು ಬೃಹತ್ ನಗರವಾಗಿ ಬೆಳೆದಿದ್ದು, ಟ್ರಾಫಿಕ್ ಸಮಸ್ಯೆ ಅತಿಯಾಗಿದೆ. ಅದನ್ನು ನಿವಾರಿಸಲು ‘ನಮ್ಮ ಮೆಟ್ರೋ’ ನಗರ ರೈಲು ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದ ಅಕ್ಟೋಬರ್ 20, 2011 ರಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಬೆಂಗಳೂರು ನಗರದ ಬೈಯಪ್ಪನ ಹಳ್ಳಿಯಿಂದ ಎಂ.ಜಿ. ರಸ್ತೆಯವರೆಗೆ ಕಾರ್ಯಾರಂಭಗೊಂಡು ಲಕ್ಷಾಂತರ ಜನರು ಪ್ರಯಾಣಿಸುತ್ತಿದ್ದಾರೆ.
ವಾಯು ಸಾರಿಗೆ : ವಾಯು ಸಾರಿಗೆ ಅತಿ ವೇಗ ಚಾಲಿತ ಸಾರಿಗೆ ಮಾಧ್ಯಮ. ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆ ಬಾಳುವ ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾದುದು. ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಹಾಗೂ ಯುದ್ಧಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕೂ ನೆರವಾಗುವುದು. ಆದರೆ ಇದು ದುಬಾರಿಯಾದ ಸಾರಿಗೆ ಮಾಧ್ಯಮವಾಗಿದ್ದು ಎಲ್ಲ ವರ್ಗದ ಜನರಿಗೂ ಲಭ್ಯವಾಗದುಕರ್ನಾಟಕದಲ್ಲಿ ಮೊದಲ ವಿಮಾನ ಯಾನವನ್ನು 1946 ರಲ್ಲಿ ಬೆಂಗಳೂರು - ಹೈದರಾಬಾದ್ ನಡುವೆ ‘ಡೆಕ್ಕನ್ ಏರ್ವೇಸ್’ ಎಂಬ ಕಂಪನಿಯು ಪ್ರಾರಂಭಿಸಿತು. ಭಾರತೀಯ ವಿಮಾನ ಸಂಚಾರವು 1953 ರಲ್ಲಿ ರಾಷ್ಟ್ರೀಕರಣಗೊಂಡು, ಇಂಡಿಯನ್ ಏರ್ಲೈನ್ಸ್ ಸಂಸ್ಥೆ ಆರಂಭಗೊಂಡ ಮೇಲೆ ಬೆಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನದ ಸೌಲಭ್ಯವನ್ನು ಕಲ್ಪಿಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರು 1996 ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತ್ತು. ಈ ಹಿಂದೆ ಬೆಂಗಳೂರು ನಗರದ ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿದ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಲಿಂದ 34 ಕಿ.ಮೀ. ದೂರದಲ್ಲಿ ದೇವನಹಳ್ಳಿಗೆ ದಿನಾಂಕ 24-05-2008 ರಂದು ಸ್ಥಳಾಂತರÀಗೊಂಡಿತು. ಎಚ್.ಎ.ಎಲ್. ವಿಮಾನ ನಿಲ್ದಾಣವನ್ನು ಈಗ ಪೈಲಟ್ಗಳ ತರಬೇತಿಗೆ ಬಳಸಲಾಗುತ್ತಿದೆ.
ಹೊಸದಾಗಿ ನಿರ್ಮಿಸಿದ ದೇವನಹಳ್ಳಿ ವಿಮಾನ ನಿಲ್ದಾಣವು ಭಾರತದ ಮೊದಲ ‘ಹಸಿರು ಕ್ಷೇತ್ರದ ವಿಮಾನ ನಿಲ್ದಾಣ’ವಾಗಿದೆ. (ಉಡಿeeಟಿ ಜಿeಟಜ ಂiಡಿಠಿoಡಿಣ) ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. ಇದನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಕರೆಯಲಾದೆ.
ಜಲ ಸಾರಿಗೆ ಕರ್ನಾಟಕದಲ್ಲಿ ಒಳನಾಡಿನ ಮತ್ತು ಸಮುದ್ರ ಜಲಸಂಚಾರಗಳೆರಡೂ ರೂಢಿಯಲ್ಲಿವೆ. ಅವುಗಳ ಲಭ್ಯತೆ ಬಹು ಸೀಮಿತವಾಗಿದ್ದು, ಅವು ಅಷ್ಟೊಂದು ಮಹತ್ವ ಹೊಂದಿಲ್ಲ. ಹಿಂದೆ ಒಳನಾಡಿನ ಜಲಸಂಚಾರವು ನಾಡದೋಣಿ, ಹರಿಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು. ಕರ್ನಾಟಕದಲ್ಲಿ
ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ. 1957 ರಲ್ಲಿ ಬಂದರು ಅಭಿವೃದ್ಧಿ ಇಲಾಖೆಯು ಸ್ಥಾಪಿತಗೊಂಡು ಸೌಲಭ್ಯಗಳ ವಿಸ್ತರಣೆ ಆರಂಭಗೊಂಡಿತು. ‘ನವ ಮಂಗಳೂರು’ 1974 ರ ಮೇ 4 ರಂದು ಭಾರತದ ಒಂಬತ್ತನೆಯ ‘ಪ್ರಮುಖ ಬಂದರು’ ಎಂದು ಘೋಷಿಸಲ್ಪಟ್ಟಿತು. ಇದನ್ನು ‘ಕರ್ನಾಟಕದ ಹೆಬ್ಬಾಗಿಲು’ ಎಂದು ಕರೆಯುವರು. ಈ ಬಂದರಿನಿಂದ ಕಬ್ಬಿಣದ ಅದಿರು, ಕಾಫಿ, ಸಾಂಬಾರ ಪದಾರ್ಥಗಳು, ಗೋಡಂಬಿ, ಶ್ರೀಗಂಧ, ಹೆಂಚು, ಕ್ರೋಮೈಡ್, ಗ್ರಾನೈಟ್ ಶಿಲೆ, ಸಂಸ್ಕರಿಸಿದ ಹಣ್ಣು ಮತ್ತು ಮೀನುಗಳು ರಫ್ತಾಗುತ್ತವೆ. ಪೆಟ್ರೋಲಿಯಂ ಆಮದಾಗುತ್ತದೆ. ಇದರ ಜೊತೆಗೆ ರಾಜ್ಯವು 10 ಚಿಕ್ಕ ಬಂದರುಗಳನ್ನು ಅಭಿವೃದ್ಧಿಪಡಿಸಿದೆ.
ಕರ್ನಾಟಕದ ಕೈಗಾರಿಕೆಗಳು
ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸರ್ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ.
‘ಕೈಗಾರಿಕೀಕರಣ ಇಲ್ಲವೆ ವಿನಾಶ’ ಎಂಬ ತತ್ವವನ್ನು ಹೊಂದಿದ್ದ ಅವರು ರಾಜ್ಯದ ಅನೇಕ ಕೈಗಾರಿಕೆಗಳಿಗೆ ಬುನಾದಿಯನ್ನು ಹಾಕಿದರು. 1902 ರಂದು ಶಿವನಸಮುದ್ರದಲ್ಲಿ ಜಲ ವಿದ್ಯುಚ್ಛಕ್ತಿ ಉತ್ಪಾದನೆ ಪ್ರಾರಂಭಗೊಂಡ ಮೇಲೆ ವಿವಿಧ ಮೂಲ ಸಾಮಗ್ರಿ, ದಿನೋಪಯೋಗಿ ವಸ್ತುಗಳನ್ನು ತಯಾರಿಸುವ ಉದ್ಯಮಗಳು ಅಸ್ತಿತ್ವಕ್ಕೆ ಬಂದವು. ಅಕ್ಕಿ ಗಿರಣಿ, ಹೆಂಚಿನ ತಯಾರಿಕೆ, ಬೀಡಿ, ಸಿಗರೇಟು, ಕಬ್ಬಿಣ ಮತ್ತು ಹಿತ್ತಾಳೆ ಫೌಂಡ್ರಿಗಳು ಸ್ಥಾಪನೆಯಾದವು. 1923 ರ ನಂತರ ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ, ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಕರ್ನಾಟಕವು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರವಾಗಿದೆ. ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಬಾಬಾಬುಡನ್ಗಿರಿ ಬೆಟ್ಟಗಳಲಿಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (ಒISಐ) ಎಂದು ಕರೆಯಲಾಯಿತು. ಅನಂತರ 1989 ರಲ್ಲಿ ಭಾರತದ ಉಕ್ಕು ಪ್ರಾಧಿಕಾರಕ್ಕೆ (SಂIಐ) ವಹಿಸಿಕೊಡಲಾಯಿತು.
ಹತ್ತಿ ಬಟ್ಟೆ ಕೈಗಾರಿಕೆ ಹತ್ತಿ ಬಟ್ಟೆ ಕೈಗಾರಿಕೆಯು ಮೊದಲಿಗೆ ಆರಂಭಗೊಂಡ ಆಧುನಿಕ ಕೈಗಾರಿಕೆಗಳಲ್ಲಿ ಒಂದಾಗಿದೆ. ಇದು ಕೃಷಿಯಾಧಾರಿತ ಕೈಗಾರಿಕೆ. ಪುರಾತನ ಕಾಲದಿಂದಲೂ ಕೈಮಗ್ಗಗಳಿಂದ ಬಟ್ಟೆ ನೇಯ್ಗೆ ಕರ್ನಾಟಕದಲ್ಲಿ ರೂಢಿಯಲ್ಲಿತ್ತು. ಈಗಲೂ ಕೈಮಗ್ಗದಿಂದ ಬಟ್ಟೆ ನೇಯುವುದು ರೂಢಿಯಲ್ಲಿದೆ. ಮೊಟ್ಟ ಮೊದಲು 1884 ರಲ್ಲಿ ಎಂ.ಎಸ್.ಕೆ. ಗಿರಣಿ ಕಲಬುರಗಿ(ಗುಲ್ಬರ್ಗ)ಯಲ್ಲಿ ಸ್ಥಾಪನೆಗೊಂಡಿತು ದಾವಣಗೆರೆಯು ರಾಜ್ಯದ ಅತಿ ಮುಖ್ಯ ಹತ್ತಿಬಟ್ಟೆ ಕೈಗಾರಿಕಾ ಕೇಂದ್ರವಾಯಿತು. ಇದನ್ನು ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದು ಕರೆಯುತ್ತಾರೆ
ಸಕ್ಕರೆ ಕೈಗಾರಿಕೆ ಸಕ್ಕರೆ ಕೈಗಾರಿಕೆಯು ಕರ್ನಾಟಕದ ಪ್ರಮುಖ ಬೃಹತ್ ಪ್ರಮಾಣದ ಉದ್ಯಮಗಳಲ್ಲಿ ಒಂದಾಗಿದೆ. ಇದೂ ಸಹ ಕೃಷಿ ಆಧಾರಿತವಾದುದು. ಇದರ ಪ್ರಗತಿಗೆ ಅಗತ್ಯವಾದ ಎಲ್ಲಾ ಸ್ಥಾನೀಕರಣ ಅಂಶಗಳು ರಾಜ್ಯದಲ್ಲಿ ಪೂರಕವಾಗಿªಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ತರುವಾಯ ಮಂಡ್ಯ, ಮೈಸೂರು, ಬೀದರ್, ವಿಜಯಪುರ, ಕಲಬುರಗಿ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳು ಪ್ರಮುಖವಾದವುಕರ್ನಾಟಕದ ಸಕ್ಕರೆ ನಗರ - ಮಂಡ್ಯ ಸಕ್ಕರೆಯ ಜಿಲ್ಲೆ - ಬೆಳಗಾವಿ ಕಾಗದ ಕೈಗಾರಿಕೆ ಕಾಗದವು ಆಧುನಿಕ ಜಗತ್ತಿನಲ್ಲಿ ಮಹತ್ವದ ವಸ್ತುವಾಗಿದೆ. ಶಿಕ್ಷಣ, ಮುದ್ರಣ, ವೃತ್ತಪತ್ರಿಕೆ ಹಾಗೂ ಸಂಸ್ಕøತಿಯ ವಿಕಾಸಕ್ಕೆ ಅಗತ್ಯವಾದ ವಸ್ತುವಾಗಿದೆ. ಕಾಗದ ಕೈಗಾರಿಕೆಯು ಅರಣ್ಯಾಧಾರಿತವಾದುದು. ಈ ಕೈಗಾರಿಕೆಗೆ ಬಿದಿರು, ಮರದ ತಿರುಳು, ಹುಲ್ಲು, ಕಬ್ಬಿನ ಸಿಪ್ಪೆ, ಚಿಂದಿ ಬಟ್ಟೆ, ರದ್ದಿ ಕಾಗದಗಳನ್ನು ಕಚ್ಚಾ ಪದಾರ್ಥಗಳಾಗಿ ಬಳಸಲಾಗುವುದು. ಮೊಟ್ಟಮೊದಲು ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ದಟ್ಟವಾದ ಅರಣ್ಯವನ್ನು ಗಮನದಲ್ಲಿಟ್ಟುಕೊಂಡು ಭದ್ರಾವತಿಯಲ್ಲಿ ‘ಮೈಸೂರು ಪೇಪರ್ ಮಿಲ್ ಲಿಮಿಟೆಡ್’ ಕಾರ್ಖಾನೆಯು 1936ರಲ್ಲಿ ಪ್ರಾರಂಭಗೊಂಡಿತು
ಸಿಮೆಂಟ್ ಕೈಗಾರಿಕೆ ಕರ್ನಾಟಕದಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣ ವಿಸ್ತರಣೆ ಹೆಚ್ಚಾಗಿದ್ದರಿಂದ ನಿರ್ಮಾಣ ಕಾರ್ಯಗಳಿಗೆ ಸಿಮೆಂಟ್ಗೆ ಬೇಡಿಕೆಯೂ ಹೆಚ್ಚಾಗಿದೆ. ಮನೆ ಕಟ್ಟಲು, ದೊಡ್ಡ ಕಟ್ಟಡಗಳ ನಿರ್ಮಾಣ, ರಸ್ತೆ, ಸೇತುವೆ, ಅಣೆಕಟ್ಟೆ ಮೊದಲಾದವುಗಳ ನಿರ್ಮಾಣಕ್ಕೆ ಸಿಮೆಂಟ್ ಬೇಕುರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು 1939 ರಲ್ಲಿ ಭದ್ರಾವತಿಯಲ್ಲಿ ಸ್ಥಾಪಿತವಾಯಿತು. ಅನಂತರ ಬಾಗಲಕೋಟೆ, ತುಮಕೂರು ಜಿಲ್ಲೆಯ ಅಮ್ಮಸಂದ್ರ, ಕಲಬುರಗಿ ಜಿಲ್ಲೆಯ ಶಹಾಬಾದ್ಗಳಲ್ಲಿ ಸ್ಥಾಪಿಸಲ್ಪಟ್ಟವು ಬೃಹತ್ ಬೆಂಗಳೂರು ನಗರವು ಭಾರತದ ‘ಸಿಲಿಕಾನ್ ಕಣಿವೆ’ ಎಂದೇ ಪ್ರಸಿದ್ಧವಾಗಿದೆ. ಸಾಫ್ಟ್ವೇರ್ (ತಂತ್ರಾಂಶ) ಅಥವಾ ಕಂಪ್ಯೂಟರ್ ಪೆÇ್ರೀಗ್ರಾಂಗಳಿಗೆ ಉಪಯೋಗಿಸುವ ಸಾಮಗ್ರಿಗಳ ಉತ್ಪಾದನೆ ಹಾಗೂ ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಪ್ರಪಂಚದ ಹತ್ತು ಪ್ರಮುಖ ಉನ್ನತ ತಂತ್ರಜ್ಞಾನದ (ಹೈಟೆಕ್) ನಗರಗಳಲ್ಲಿ ಒಂದಾಗಿದೆ. ಇದರಿಂದ ಸಮೀಪದ ಇತರ ನಗರಗಳಲ್ಲೂ ಸಾಫ್ಟ್ವೇರ್ ಉದ್ಯಮ ವ್ಯಾಪಿಸಿದೆ. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು ಸರ್ಕಾರ 1974 ರಲ್ಲಿಬವ್ಯವಸ್ಥಿತ ಪ್ರವಾಸ ಹಾಗೂ ನಿರ್ವಹಣೆಗಾಗಿ ‘ಕರ್ನಾಟಕ ಪ್ರವಾಸೋದ್ಯಮ ನಿಗಮ’ ವನ್ನು (ಏSಖಿಆಅ) ಸ್ಥಾಪಿಸಿದ್ದು, ಪ್ರವಾಸಿಗರಿಗೆ ಮೂಲಸೌಲಭ್ಯಗಳನ್ನು ಒದಗಿಸಲು, ಯಾತ್ರಿ ನಿವಾಸ, ಪ್ರವಾಸಿ ಗೃಹ, ಉಪಹಾರ ಗೃಹ ಮುಂತಾದುವುಗಳ ವ್ಯವಸ್ಥೆಯನ್ನು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒದಗಿಸಿದೆ. ಕರ್ನಾಟಕ ಸರ್ಕಾರವು ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಿ ಖಾಸಗಿಯವರಿಗೆ ಅವಕಾಶ ಮತ್ತು ಉತ್ತೇಜನ ನೀಡಿದೆ. ‘ಉತ್ತಮ ಪ್ರವಾಸೋದ್ಯಮ ನಿರ್ವಹಣಾ’ ರಾಜ್ಯವೆಂದು 1996-97 ರಲ್ಲಿ ಪ್ರಶಸ್ತಿ ದೊರಕಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮವು ಸಮುದ್ರ ಮಟ್ಟದಿಂದ ಸುಮಾರು 1492 ಮೀ. ಎತ್ತರವಿದ್ದು, ತಂಪಾದ ಹವಾಮಾನವನ್ನು ಹೊಂದಿರುತ್ತದೆ. ಇದು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಸತಿ ಮತ್ತು, ಉಪಹಾರ ವ್ಯವಸ್ಥೆಯಿದ್ದು ತಂಗಲು ಅವಕಾಶವಿದೆ. ಮಹಾತ್ಮ ಗಾಂಧಿಯವರು ಆರೋಗ್ಯ ಸುಧಾರಣೆಗಾಗಿ ತಂಗಿದ್ದರಿಂದ ಇಲ್ಲಿ ‘ಗಾಂಧಿ ಭವನ’ ನಿರ್ಮಿಸಲಾಗಿzಭಾರತದಲ್ಲೇ ಅತಿ ಎತ್ತರವಾದ ಜೋಗ್ ಜಲಪಾತವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಸುಮಾರು 253 ಮೀ. ಎತ್ತರದಿಂದ ಶರಾವತಿ ನದಿಯು ನಾಲ್ಕು ಸೀಳುಗಳಾಗಿ ಬೀಳುತ್ತದೆ. ಇವುಗಳನ್ನು ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂದು ಕರೆಯುತ್ತಾgಕರ್ನಾಟಕದಲ್ಲಿ ಐದು ರಾಷ್ಟ್ರೀಯ ಉದ್ಯಾನಗಳಿವೆ. ಅವುಗಳೆಂದರೆ ನಾಗರಹೊಳೆಯ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ’, ಬಂಡಿಪುರ, ಬನ್ನೇರುಘಟ್ಟ, ಕುದುರೆಮುಖ ಹಾಗೂ ಅನ್ಷಿ ರಾಷ್ಟ್ರೀಯ ಉದ್ಯಾನÀಗಳು. ಪ್ರಾಣಿಗಳನ್ನು ಅವುಗಳ ನೆಲೆಯಲ್ಲಿಯೇ ಸಂರಕ್ಷಿಸಲು ರಾಜ್ಯದಲ್ಲಿ 27 ವನ್ಯಜೀವಿಧಾಮಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಮುತ್ತೋಡಿ, ಬಂಡಿಪುರ, ನಾಗರಹೊಳೆ, ದಾಂಡೇಲಿ, ಭದ್ರಾ ವನ್ಯಜೀವಿಧಾಮ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರು, ಮಂದಗದ್ದೆ, ಗುಡವಿ ಪಕ್ಷಿಧಾಮ ಇತ್ಯಾದಿ. ಕರ್ನಾಟಕವು ಸುಂದರವಾದ ಕಡಲತೀರಗಳನ್ನು ಹೊಂದಿದೆ. ಅವುಗಳೆಂದರೆ ಗೋಕರ್ಣದ ‘ಓಂ ಬೀಚ್’, ಉಳ್ಳಾಲ ಬೀಚ್, ಮುರ್ಡೇಶ್ವರ, ಮರವಂತೆ, ಮಲ್ಪೆ ಇತ್ಯಾದಿ. ಬೀಚ್ಗಳು ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಉಡುಪಿಯ ಸಮೀಪದ ಸೇಂಟ್ ಮೇರೀಸ್ ದ್ವೀಪವು ವಿಶಿಷ್ಟವಾದ ಸ್ತಂಭ ಮಾದರಿಯ ನಿಸರ್ಗದತ್ತವಾದ ಶಿಲಾರಚನೆಯನ್ನು ಹೊಂದಿದ್ದು ಮನೋಹರವಾಗಿವೆ. ಮುರ್ಡೇಶ್ವರದ ನೇತ್ರಾಣಿ ದ್ವೀಪ, ಕಾರವಾರದ ಬಳಿ ದೇವಗಡ, ಕೂರ್ಮಗಡ ಎಂಬ ಎರಡು ದ್ವೀಪಗಳಿವೆ.
ಕರ್ನಾಟಕದ ಜನಸಂಖ್ಯೆ 2001 ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದ ಜನಸಾಂದ್ರತೆಯು ಪ್ರತಿ ಚದರ ಕಿಲೋಮೀಟರ್ಗೆ 275 ಜನರು. ಅದು 2011 ರ ವೇಳೆಗೆ 319ಕ್ಕೆ ಹೆಚ್ಚಿದೆ. ಆದರೂ ಭಾರತದ ಸರಾಸರಿಗಿಂತ ಕಡಿಮೆ ಇದೆ. ಜಿಲ್ಲಾವಾರು ಜನಸಾಂದ್ರತೆಯನ್ನು ನೋಡಿದಾಗ ಬೆಂಗಳೂರು ನಗರ ಜಿಲ್ಲೆಯು ಅಧಿಕ ಜನಸಾಂದ್ರತೆ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ಕೋಲಾರ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿ ಬರುತ್ತವೆ. ಇದಕ್ಕೆ ಪ್ರತಿಯಾಗಿ ಕೊಡಗು ಜಿಲ್ಲೆ (135) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದ ಜಿಲ್ಲೆಯಾಗಿದೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ.61.4% ಗ್ರಾಮೀಣರು ಹಾಗೂ ಶೇ.38.6% ಭಾಗವು (2.35 ಕೋಟಿ) ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 2011 ರಲ್ಲಿ 968 ಕ್ಕೆ ಏರಿದೆ.
ಲಿಂಗಾನುಪಾತವು ಎಲ್ಲಾ ಜಿಲ್ಲೆಗಳಲ್ಲೂ ಒಂದೇ ರೀತಿಯಾಗಿಲ್ಲ. ಉಡುಪಿ, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳು ಪುರುಷರಿಗಿಂತ ಹೆಚ್ಚು ಮಹಿಳೆಯರ ಸಂಖ್ಯೆಯನ್ನು ಹೊಂದಿವೆ. ಉಡುಪಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 1093 ಸ್ತ್ರೀಯರಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಸ್ತ್ರೀಯರ ಪ್ರಮಾಣವುಳ್ಳ ಜಿಲ್ಲೆಯಾಗಿದೆ. ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ 2011 ರಲ್ಲಿ ಶೇ. 75.6 ಭಾಗವಾಗಿತ್ತು.
ಇದು ಭಾರತದ (74%) ಸರಾಸರಿಗಿಂತ ಉತ್ತಮವಾಗಿದೆ. ಜಿಲ್ಲಾವಾರು ಸಾಕ್ಷರತೆಯನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 88.6 ಭಾಗದಷ್ಟಿದ್ದು, ಅದು ಪ್ರಥಮ ಸ್ಥಾನದಲ್ಲಿದೆ. ಅನಂತರ ಬೆಂಗಳೂರು ನಗರ ಜಿಲ್ಲೆಯು (88.5%) ದ್ವಿತೀಯ ಸ್ಥಾನದಲ್ಲಿದೆ. ಉಡುಪಿ ಮೂರನೆಯ ಸ್ಥಾನಗಳಲ್ಲಿದೆ. ಇದಕ್ಕೆ ಪ್ರತಿಯಾಗಿ ಯಾದಗಿರಿ (52.4%) ಅತಿ ಕಡಿಮೆ ಸಾಕ್ಷರತೆಯುಳ್ಳ ಜಿಲ್ಲೆಯಾಗಿದೆ. ಕರ್ನಾಟಕದ ಪುರುಷರ ಸಾಕ್ಷರತೆಯ ಪ್ರಮಾಣವು ಶೇ. 82.9, ಮಹಿಳೆಯರ ಸಾಕ್ಷರತೆ ಶೇ. 68.2 ರಷ್ಟಿರುತ್ತದೆ. ಸಿ.ರಂಗರಾಜನ್ ಸಮಿತಿಯು ತೆಂಡೂಲ್ಕರ್ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಿ ಗ್ರಾಮೀಣ ಭಾಗಗಳಲ್ಲಿ ರೂ. 32 ಮತ್ತು ನಗರ ಭಾಗಗಳಲ್ಲಿ ರೂ. 47 ರಷ್ಟು ತಲಾ ಮಾಸಿಕ ಅನುಭೋಗಿ ವೆಚ್ಚವನ್ನು ಬಡತನ ರೇಖೆಯೆಂದು ನಿಗದಿಗೊಳಿಸಿದೆ.
1977 : ಕೂಲಿಗಾಗಿ ಕಾಳು ಯೋಜನೆ
1979 : ಗ್ರಾಮೀಣ ಯುವಕರಿಗೆ ಸ್ವ-ಉದ್ಯೋಗಕ್ಕಾಗಿ ತರಬೇತಿ ಯೋಜನೆ
1980 : ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ
1980 : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ
1983 : ಗ್ರಾಮೀಣ ಭೂರಹಿತರಿಗೆ ಉದ್ಯೋಗ ಖಾತ್ರಿ ಯೋಜನೆ
1989 : ಜವಾಹರ ರೋಜಗಾರ್ ಯೋಜನೆ
1993 : ಉದ್ಯೋಗ ಭರವಸೆ ಯೋಜನೆ
1999 : ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ ಯೋಜನೆ
2004 : ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆ
2006 : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ನಗರ ಪ್ರದೇಶ :
1989 : ನೆಹರು ರೋಜಗಾರ್ ಯೋಜನೆ
1990 : ನಗರ ಕೂಲಿ ಉದ್ಯೋಗ ಯೋಜನೆ
1993 : ಪ್ರಧಾನ ಮಂತ್ರಿ ರೋಜಗಾರ್ ಯೋಜನೆ
1997 : ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜ£
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಆಗಸ್ಟ್ 25, 2005ರಂದು ಕಾಯ್ದೆಯಾಗಿ ಪಾಸು ಮಾಡಿದ್ದರೂ ಅದು ಜಾರಿಯಾಗಿದ್ದು ಮಾತ್ರ 2-2-2006ರಂದು.
1. ಭಾರತೀಯ ಕೈಗಾರಿಕಾ ಹಣಕಾಸು ನಿಗಮ (IಈಅI) : ಈ ಸಂಸ್ಥೆಯು ಪಾರ್ಲಿಮೆಂಟಿನ ಕಾಯಿದೆಯ
ಪ್ರಕಾರ ಕೈಗಾರಿಕೆಗಳಿಗೆ ದೀರ್ಘಾವಧಿ ಸಾಲಗಳನ್ನು ಕೊಡಲು 1948 ರಲ್ಲಿ ಸ್ಥಾಪಿತವಾಯಿತು3. ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು (IಆಃI) : ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳ ಕಾಯಿದೆ 1964 ರ ಪ್ರಕಾರ ಪ್ರಾರಂಭವಾಯಿತು. ಇದು 1976 ರ ತನಕ ಭಾರತೀಯ ರಿಜರ್ವ್ ಬ್ಯಾಂಕ್ನ ಒಡೆತನದಲ್ಲಿದ್ದು 1976 ರಲ್ಲಿ ಒಡೆತನವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಯಿತು
4. ಆಯಾತ ನಿರ್ಯಾತ ಬ್ಯಾಂಕು (ಇಘಿIಒ ಃಂಓಏ) : ಇದು ಭಾರತದ ನಿರ್ಯಾತ (ರಪ್ತÅ) ಮತ್ತು ಆಯಾತ (ಆಮದು) ಬ್ಯಾಂಕಾಗಿದೆ. ಇದನ್ನು 1982 ರಲ್ಲಿ ಸ್ಥಾಪಿಸಲಾಯಿತುಪ್ರಪಂಚದ ಮೊದಲ ಷೇರುಮಾರುಕಟ್ಟೆ 1773 ರಲ್ಲಿ ಲಂಡನ್ ಪಟ್ಟಣದಲ್ಲಿ ರೂಪಿತಗೊಂಡಿತು. ಭಾರತದಲ್ಲಿ ಮೊದಲ ಷೇರುಮಾರುಕಟ್ಟೆ 1875 ರಲ್ಲಿ ಮುಂಬೈಪಟ್ಟಣದಲ್ಲಿ ಪ್ರಾರಂಭವಾಯಿತು. ಈಗ ಭಾರತದಲ್ಲಿ 24 ಷೇರುಮಾರುಕಟ್ಟೆಗಳಿವೆ. ಇವುಗಳಲ್ಲಿ ಹದಿಮೂರು ಸಾರ್ವಜನಿಕ ನಿಯಂತ್ರಣ ಕಂಪನಿಗಳಾಗಿವೆ, ಆರು ಕಂಪನಿಗಳು ಭರವಸೆಯಿಂದ ಕೂಡಿದ ನಿಯಮಿತÀ ಕಂಪನಿಗಳಾಗಿವೆ, ಉಳಿದವು ಸ್ವಪ್ರೇರಣೆಯ ಲಾಭಗಳಿಕೆಯ ಸಂಸ್ಥೆಗಳಾಗಿವೆ. ಎಂಟು ಷೇರುಮಾರುಕಟ್ಟೆಗಳು ಮಾತ್ರ ಖಾಯಂ ಷೇರುಮಾರುಕಟ್ಟೆಗಳಾಗಿದ್ದು, ಷೇರುದಾರರು ತಮ್ಮ ಷೇರುಗಳನ್ನು ಮಾರಲು ಅಥವಾ ಕೊಳ್ಳಲು ಬ್ಯಾಂಕಿನಲ್ಲಿ ಒಂದು ವಿಶೇಷ ಖಾತೆ ತೆಗೆಯಬೇಕಾಗುತ್ತದೆ. ಇದಕ್ಕೆ ಡಿಮಾಟ್ (ಆemಚಿಣ) ಲೆಕ್ಕ ಎನ್ನುತ್ತೇವೆ.
ಭಾರತಕ್ಕೆ ಯುರೋಪಿಯನ್ನರ ಆಗಮನ
ಕಾನ್ಸ್ಟಾಂಟಿನೋಪಲ್ ನಗರದ ವಶ : ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು. 1453ರಲ್ಲಿ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಇದರಿಂದಾಗಿ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.
ಭಾರತಕ್ಕೆ ಹೊಸ ಜಲಮಾರ್ಗ : ಲಿಸ್ಬನ್ನಿಂದ ಹೊರಟ ಪೆÇೀರ್ಚುಗಲ್ ನಾವಿಕ ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ‘ಕಾಪ್ಪಡ್’ ಎಂಬಲ್ಲಿಗೆ ಬಂದು ತಲುಪಿದನು. ಪೆÇೀರ್ಚುಗೀಸರು: ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು ಪೆÇೀರ್ಚುಗೀಸರೇ ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಕೂಡ ಪೆÇೀರ್ಚುಗೀಸರೇ ಆಗಿದ್ದಾರೆ. ವಾಸ್ಕೊಡಗಾಮನ ನಂತರ ಪೆÇೀರ್ಚುಗೀಸರ ಮೊಟ್ಟಮೊದಲ ವೈಸರಾಯ್ ಆಗಿ ಫ್ರಾನ್ಸಿಸ್ಕೊ ಡಿ ಆಲ್ಮೆಡ ಭಾರತಕ್ಕೆ ಬಂದನು. ಭೂಮಿಯ ಮೇಲಿನ ಅಧಿಪತ್ಯಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ‘ನೀಲಿ ನೀರಿನ ನೀತಿ’ (ಃಟue Wಚಿಣeಡಿ Poಟiಛಿಥಿ)ಯನ್ನು ಜಾರಿಗೆ ತಂದನು. ಆಲ್ಮೇಡನ ನಂತರ ಬಂದ ಆಲ್ಫೋನ್ಸೊ ಆಲ್ಬುಕರ್ಕ್ ಭಾರತದಲ್ಲಿ ಪೆÇೀರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ. ಇವನು ಸಾಮಾನ್ಯ ಶಕ (ಸಾ.ಶ.) 1510ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೆÇೀರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು.
ಡಚ್ಚರು : ಡಚ್ಚರು ಹಾಲೆಂಡ್ ಅಥವಾ ನೆದರ್ಲ್ಯಾಂಡ್ ದೇಶದವರು. ಇವರು ಪೂರ್ವದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಸಾ.ಶ. 1602ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿಕೊಂಡು ಭಾರತ ಮತ್ತು ಜಾವ, ಸುಮಾತ್ರ, ಇಂಡೋನೇಷಿಯ ಮೊದಲಾದ ಸಾಂಬಾರು ಪ್ರಸಿದ್ಧ ದ್ವೀಪಗಳಿಗೆ ಪ್ರವೇಶಿಸಿದರು. ಭಾರತದಲ್ಲಿ ಸೂರತ್, ಬ್ರೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಚಿನ್ಸೂರ್ ಮೊದಲಾದ ಕಡೆಗಳಲ್ಲಿ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು.
ಇಂಗ್ಲಿಷರು : ಇಂಗ್ಲೆಂಡಿನ ಎಲಿಜಬೆತ್ ರಾಣಿಯು ಸಾ.ಶ. 1600 ಡಿಸೆಂಬರ್ 31ರಂದು ಇಂಗ್ಲಿಷ್ ಈಸ್ಟ್ಇಂ ಡಿಯಾ ಕಂಪನಿಗೆ ಪೂರ್ವದೇಶಗಳೊಂದಿಗೆ ವ್ಯಾಪಾರ ನಡೆಸಲು 15 ವರ್ಷಗಳ ಪರವಾನಗಿ ನೀಡಿದಳು. ಈ ಕಂಪನಿಯು 1613ರಲ್ಲಿ ಔಪಚಾರಿಕವಾಗಿ ವ್ಯಾಪಾರವನ್ನು ಆರಂಭಿಸಿತು. ಕಂಪನಿಗೆ ಮೊಗಲ್ ಸಾಮ್ರಾಟನಾದ ಜಹಾಂಗೀರನು ಸೂರತ್ನಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ (ಈಚಿಛಿಣoಡಿಥಿ oಡಿ Wಚಿಡಿehouses) ಯನ್ನು ತೆರೆಯಲು ಫರ್ಮಾನ್ ನೀಡಿದನು. 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಸರ್. ಥಾಮಸ್ ರೋ ಬಂದನು. ಇವನು ಜಹಾಂಗೀರನಿಂದ ಮೊಘಲ್ ಸಾಮ್ರಾಜ್ಯದ ಕೆಲವೆಡೆಗಳಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪಿಸಲು ಅನುಮತಿ ಪಡೆದನು. ಇಂಗ್ಲಿಷರು 1639ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸ್ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು. ಮುಂದೆ ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾಲ್ರ್ಸ್ನು ಬಾಂಬೆಯನ್ನು 1668ರಲ್ಲಿ ಕಂಪನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟನು.
ಫ್ರೆಂಚರು : ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು 1664ರಲ್ಲಿ ಸರ್ಕಾರಿ ಒಡೆತನದ ಕಂಪನಿಯಾಗಿ ಆರಂಭವಾಯಿತು. ಇದು 1668ರಲ್ಲಿ ತನ್ನ ಪ್ರಪ್ರಥಮ ದಾಸ್ತನುಮಳಿಗೆ(ಕೋಠಿ)ಯನ್ನು ಸೂರತ್ನಲ್ಲಿ ಆರಂಭಿಸಿತು. ನಂತರ ಮಚಲಿಪಟ್ಟಣ, ಚಂದ್ರನಗರ, ಮಾಹೆ, ಕಾರೈಕಲ್ಲು, ಕಾಸಿಂಬಜಾರ್, ಬಾಲಸೂರ್ಗಳನ್ನು ತಮ್ಮ ಕೇಂದ್ರಗಳಾಗಿ ಮಾಡಿಕೊಂಡರು.
ಮೊದಲ ಕಾರ್ನಾಟಿಕ್ ಯುದ್ಧ (1746-48) : ಡೂಪ್ಲೆಯ ಕೋರಿಕೆಯ ಮೇರೆಗೆ ಲಾಬೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್ನಿಂದ ಬಂದು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು. ಅಸಹಾಯಕರಾದ ಬ್ರಿಟಿಷರು ಕಾರ್ನಾಟಿಕ್ ನವಾಬನಾದ ಅನ್ವರುದ್ದೀನನಲ್ಲಿ ಮೊರೆ ಇಟ್ಟರು. ಮದ್ರಾಸ್ನಿಂದ ಫ್ರೆಂಚರನ್ನು ಹೊರಗಟ್ಟಲು ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತುಈ ಯುದ್ಧವು ಯುರೋಪಿನಲ್ಲಿ ಪ್ರಿನ್ಸ್ ಮತ್ತು ಇಂಗ್ಲೇಂಡಿನ ನಡುವೆ ಆದ ‘ಏಕ್ಸ್-ಲಾ- ಚಾಪೆಲ್’ ಒಪ್ಪಂದದೊಂದಿಗೆ ಮುಕ್ತಾಯವಾಯಿತು
ಎರಡನೆಯ ಕಾರ್ನಾಟಿಕ್ ಯುದ್ಧ (1749-1754) : ಬದಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫ್ಜಾನ ಮತ್ತೊಬ್ಬ ಮಗನಾದ ಸಲಾಬತ್ಜಂಗನನ್ನು ಹೈದರಾಬಾದಿನ ನಿಜಾಮನಾಗಿ ಮಾಡಿದರು. ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತ ‘ಬುಸ್ಸಿ’ ಎಂಬ ಅಧಿಕಾರಿಯನ್ನು ನೇಮಿಸಿದ್ದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್ನ ನವಾಬನಾಗಿದ್ದನು. ಆದರೆ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವನು ಕಾರ್ನಾಟಿಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು. ಅಂತಿಮವಾಗಿ ಈ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನಾಗಿ ನೇಮಕ ಮಾಡಿದರು. ಕೊನೆಗೆ ಎರಡನೆಯ ಕಾರ್ನಾಟಿಕ್ ಯುದ್ಧವು ‘ಪಾಂಡಿಚೇರಿ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು.
ಮೂರನೆಯ ಕಾರ್ನಾಟಿಕ್ ಯುದ್ಧ (1756-1763): ಫ್ರೆಂಚರ ‘ಕೌಂಟ್ ಡಿ ಲಾಲಿ’ಯು 1760ರಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು. ಈ ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ್. ಐರ್ಕೂಟನು ಫ್ರೆಂಚರನ್ನು ಸೋಲಿಸಿದನಲ್ಲದೆ, ಬುಸ್ಸಿಯನ್ನು ಸೆರೆಹಿಡಿದನು. ಲಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು. ಅಂತಿಮವಾಗಿ ಐರ್ಕೂಟನು ಪಾಂಡಿಚೇರಿಗೂ ಮುತ್ತಿಗೆ ಹಾಕಿದಾಗÀ ಲಾಲಿಯು 1761ರಲ್ಲಿ ಬೇಷರತ್ತಾಗಿ ಶರಣಾದನು.
ಕಾರ್ನಾಟಿಕ್ ಯುದ್ಧಗಳ ಪರಿಣಾಮವಾಗಿ ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲ ನೆಲೆಗಳನ್ನು ಕಳೆದುಕೊಂಡರು. ಅದಾಗ್ಯೂ 1763ರಲ್ಲಿ ನಡೆದ ‘ಪ್ಯಾರಿಸ್ ಒಪ್ಪಂದ’ದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂತಿರುಗಿಸಲಾಯಿತು. 1717ರಲ್ಲಿ ಮೊಗಲ್ ದೊರೆ ಫಾರೂಕ್ ಶಿಯಾರನು ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ನೀಡಿದ ‘ದಸ್ತಕ್’ಗಳೇ (ಪರವಾನಿಗೆ) ಅವರ ಲಾಭಕ್ಕೆ ಕಾರಣವಾಗಿತ್ತು. ಯಾವುದೇ ತೆರಿಗೆ ಇಲ್ಲದೆ, ಸರಕುಗಳ ಆಮದು ಮತ್ತು ರಫ್ತು ಮಾಡಲು ಹಾಗೂಸರಕುಗಳ ಸಾಗಾಣೆ ಮಾಡಲು ಬೇಕಾದ ಪರವಾನಿಗೆ ಪತ್ರ.
ಪ್ಲಾಸಿ ಕದನ (1757) : ಬಂಗಾಳದ ನವಾಬನಾದ ಅಲಿವರ್ದಿ ಖಾನನು 1756ರಲ್ಲಿ ನಿಧನನಾದನು. ನಂತರ ಅವನ ಮೊಮ್ಮಗನಾದ ಸಿರಾಜ್-ಉದ್-ದೌಲನು ಅಧಿಕಾರಕ್ಕೆ ಬಂದನು. ಯುವ ನವಾಬನಾದ ಸಿರಾಜ್-ಉದ್-ದೌಲನಿಗೂ ಮತ್ತು ಬ್ರಿಟಿಷರಿಗೂ 1757ರಲ್ಲಿ ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ನಡೆಯಿತು. ಕಪ್ಪುಕೋಣೆ ದುರಂತ : ಆಗ ಸಿರಾಜನು ಪೋರ್ಟ್ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು ಕೆಲವರನ್ನು ಸೆರೆಹಿಡಿದನು. ಸಿರಾಜನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು. ಅವರಲ್ಲಿ 123 ಮಂದಿ ಅಸುನೀಗಿದರು ಎಂಬುದಾಗಿತ್ತು.
ಇದನ್ನು ಕಪ್ಪುಕೋಣೆಯ ದುರಂತ ಎಂದು ಕರೆಯಲಾಗಿದೆ. ಈ ಸುದ್ದಿ ಕೇಳಿ ರಾಬರ್ಟ್ ಕ್ಲೈವ್ ಉಗ್ರ ಕೋಪದಲ್ಲಿ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನುಮೊದಲು ನವಾಬನ ವಿರೋಧಿಗಳಾದ ಮಾಣಿಕ್ಚಂದ್, ಓಮೀಚಾಂದಾ, ಜಗತ್ಸೇಠ್ (ಬಂಗಾಳದ ಲೇವಾದೇವಿಗಾರ) ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು. ನಂತರ ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿ ಯುದ್ಧದಲ್ಲಿ ತಟಸ್ಥವಾಗಿರಲು ರಾಜ್ಯವನ್ನು
ಒಪ್ಪಿಸಿದನು. ಇದರಿಂದ ಧೈರ್ಯಗೊಂಡ ರಾಬರ್ಟ್ ಕ್ಲೈವನು 1757 ಜೂನ್ 23 ರಂದು ಸಿರಾಜ್-ಉದ್- ದೌಲನ ಮೇಲೆ ಕದನ ಸಾರಿದನು. ಪ್ಲಾಸಿ ಎಂಬಲ್ಲಿ ನಡೆದ ಕದನದಲ್ಲಿ ಕ್ಲೈವನು ಯೋಜಿಸಿದಂತೆಯೇ ಎಲ್ಲವೂ ನಡೆಯಿತು. ಯುದ್ಧ ಭೂಮಿಯಿಂದ ತಪ್ಪಿಸಿಕೊಂಡ ಸಿರಾಜ್-ಉದ್-ದೌಲನನ್ನು ಸೆರೆಹಿಡಿದು ಕೊಲ್ಲಲಾಯಿತು.
ಬಕ್ಸಾರ್ ಕದನ (1764) : ಮೀರ್ ಖಾಸಿಂ ಒಬ್ಬ ಸಮರ್ಥ ಆಡಳಿತಗಾರ. ಈತನು ಸಹ ಆರಂಭದಲ್ಲಿ ಕಂಪನಿಗೆ ನಿಷ್ಠೆಯಿಂದಿದ್ದನು. ಎರಡು ಲಕ್ಷ ಪೌಂಡ್ ಹಣದ ಜೊತೆಗೆ ಕೆಲವು ಪ್ರದೇಶಗಳನ್ನು ಕಂಪನಿಗೆ ಬಿಟ್ಟುಕೊಟ್ಟನು. ಆದರೆ, ಶೀಘ್ರವೇ ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು. ದಸ್ತಕ್ನ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನುಈ ನಿಟ್ಟಿನಲ್ಲಿ ಮುಂದುವರೆದ ಮೀರ್ ಖಾಸಿಮನು ಮೊಗಲ್ ದೊರೆ ‘ಎರಡನೇ ಷಾ ಆಲಂ’ ಮತ್ತು ಔದ್ನ ನವಾಬ ‘ಷುಜ್-ಉದ್-ದೌಲ’ರೊಂದಿಗೆ ಒಪ್ಪಂದ ಮಾಡಿಕೊಂಡನು. ಪರಿಣಾಮವಾಗಿ, ‘ಮೀರ್ ಖಾಸಿಂ’ ನೇತೃತ್ವದ ಮೂರೂ ಸಂಯುಕ್ತ ಸೇನೆಗಳು ‘ಹೆಕ್ಟರ್ ಮನ್ರೋ’ ನೇತೃತ್ವದ ಬ್ರಿಟಿಷ್ ಸೇನೆಯನ್ನು 1764ರಲ್ಲಿ ‘ಬಕ್ಸರ್’ ಎಂಬಲ್ಲಿ ಮುಖಾಮುಖಿಯಾದವು. ಅಂತಿಮವಾಗಿ ಯುದ್ಧದಲ್ಲಿ ಮೀರ್ ಖಾಸಿಂ ಸೋತು ಪಲಾಯನ ಮಾಡಿದರೆ, ಷಾ ಆಲಂ ಶರಣಾಗತನಾದನು. ಬ್ರಿಟಿಷ್ ಶಕ್ತಿಗೆ ತಡೆಯೊಡ್ಡುವ ಈ ಒಕ್ಕೂಟದ ಪ್ರಯತ್ನ ಸಂಪೂರ್ಣ ವಿಫಲವಾಯಿತುಅಂತಿಮವಾಗಿ ಬಕ್ಸರ್ ಕದನವು ಬ್ರಿಟಿಷರು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ನಿಜವಾದ ಒಡೆಯರೆಂದು ದೃಢೀಕರಿಸಿತು ಹಾಗೂ ಔದ್ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು. 1765ರಲ್ಲಿ ರಾಬರ್ಟ್ ಕ್ಲೈವನು ಬಂಗಾಳದಲ್ಲಿ ‘ದ್ವಿ ಪ್ರಭುತ್ವÀ’ ಪದ್ಧತಿಯನ್ನು ಜಾರಿಗೆ ತಂದನು. ಈ ಪದ್ಧತಿಯಂತೆ ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದರು
1600ರಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಇಂಗ್ಲೆಂಡಿನಲ್ಲಿ ಸ್ಥಾಪಿಸಲಾಯಿತು.
1602ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ನೆದರ್ಲ್ಯಾಂಡ್ನಲ್ಲಿ ಸ್ಥಾಪಿಸಲಾಯಿತು. 1619ರಲ್ಲಿ ಮೊಘಲ್ ಚಕ್ರವರ್ತಿ ಜಹಂಗೀರನು ಈಸ್ಟ್ ಇಂಡಿಯಾ ಕಂಪನಿಗೆ ಪಶ್ಚಿಮ ಕರಾವಳಿಯ ಸೂರತ್ತಿನಲ್ಲಿ ಹಾಗೂ ಪೂರ್ವ ಕರಾವಳಿಯ ಹೂಗ್ಲಿಯಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ನೀಡಿದನು.
1639ರಲ್ಲಿ ಇಂಗ್ಲಿಷರು ತಮ್ಮ ಮೊದಲ ಸರಕು ಕೋಠಿಯನ್ನು ಮದ್ರಾಸಿನಲ್ಲಿ ಸ್ಥಾಪಿಸಿದರು.
1664ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಫ್ರಾನ್ಸ್ನಲ್ಲಿ ಸ್ಥಾಪನೆಗೊಂಡಿತು
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
ಆಂಗ್ಲೋ-ಮರಾಠ ಯುದ್ಧಗಳು
ಮೊದಲ ಆಂಗ್ಲೋ-ಮರಾಠ ಯುದ್ಧ (1775-1782): ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಚಕ್ರವರ್ತಿಯು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತುಅಲಹಾಬಾದ್ಗಳನ್ನು ಮರಾಠರಿಗೆ ಕೊಟ್ಟನು. ಇದರಿಂದ ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಮನೆಮಾಡಿತು. ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್ ಇದೇ ಸಮಯದಲ್ಲಿ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು. ಬ್ರಿಟಿಷರು ಮತ್ತು ಮರಾಠ ಒಕ್ಕೂಟಗಳ ನಡುವೆ 1775-1782ರವರೆಗೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರೂ, ಅಂತಿಮವಾಗಿ ಅಹಮದಾಬಾದ್ಅನ್ನು ಕಳೆದುಕೊಂಡರು. ಮರಾಠ ಒಕ್ಕೂಟವು ಯುದ್ಧ ಮುಂದುವರೆಸಲಾಗದೆ ಬ್ರಿಟಿಷರೊಂದಿಗೆ ಸಾಲ್ಬಾಯ್ ಒಪ್ಪಂದವನ್ನು ಮಾಡಿಕೊಂಡಿತು.
ಸಹಾಯಕ ಸೈನ್ಯ ಪದ್ಧತಿ: ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದನು. ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿzಈ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ ಹೈದರಾಬಾದ್ ಸಂಸ್ಥಾನ. ಅನಂತರ ಮೈಸೂರು, ಔದ್, ತಂಜಾವೂರು, ಮರಾಠ, ಆರ್ಕಾಟ್, ಪೂನಾ, ಬಿರಾರ್, ಗ್ವಾಲಿಯರ್ ಮೊದಲಾದ ರಾಜ್ಯಗಳು ಈ ಒಪ್ಪಂದಕ್ಕೆ ಒಳಪಟ್ಟವು.
ಎರಡನೇ ಆಂಗ್ಲೋ-ಮರಾಠ ಯುದ್ಧ (1803-1805): ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣವಾಯಿತು. ಹೋಳ್ಕರ್ ಮನೆತನದ ಯಶವಂತರಾವ್ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್ ರಾವ್ ಹಾಗೂ ಪೇಶ್ವೆ ಎರಡನೇ ಬಾಜಿರಾವ್ ಇನ್ನೊಂದು ಕಡೆಗಿದ್ದರು. ಪೇಶ್ವೆ ಬ್ರಿಟಿಷರ ಸಹಾಯ ಯಾಚಿಸಿದನು. ಲಾರ್ಡ್ ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು. ಪೇಶ್ವೆಯು ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು.
ಮೂರನೇ ಆಂಗ್ಲೋ-ಮರಾಠ ಯುದ್ಧ (1817-1818): ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.
ಆಂಗ್ಲೋ-ಸಿಖ್ ಯುದ್ಧಗಳು: 1839ರಲ್ಲಿ ರಣಜಿತ್ ಸಿಂಗನು ಮರಣ ಹೊಂದಿದ ನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆ ಎತ್ತಿತು. 1809ರ ‘ನಿರಂತರ ಮೈತ್ರಿ ಒಪ್ಪಂದ’ವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದರು.
ಡಾಲ್ ಹೌಸಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ : 1848ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದ ಡಾಲ್ಹೌಸಿಯು ಭಾರತದ ಎಲ್ಲ ದೇಶೀಯ ಸಂಸ್ಥಾನಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸುವ ಅಂತಿಮ ಪ್ರಯತ್ನವನ್ನು ನಡೆಸಿದ. ಡಾಲ್ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯ ಮೂಲಕ ಸಾಧಿಸಿದನು. ಈ ನೀತಿಯ ಪ್ರಕಾರ: ‘ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ’. ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು. ಈ ನೀತಿಗೆ ಒಳಪಟ್ಟ ರಾಜ್ಯಗಳಲ್ಲಿ ಸತಾರ, ಜೈಪುರ್, ಸಂಬಲ್ಪುರ್, ಉದಯಪುರ್, ಝಾನ್ಸಿ, ನಾಗಪುರ ಮೊದಲಾದಗಳು ಪ್ರಮುಖವಾದವುಗಳಾಗಿವೆ.
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ನಾಗರೀಕ ಸೇವೆಗಳು : ಲಾರ್ಡ್ ಕಾರ್ನ್ವಾಲೀಸನು ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆತಂದನು1773ರಲ್ಲಿ ಇಂಗ್ಲೆಂಡಿನ ಸರಕಾರವು ರೆಗ್ಯುಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿತು. 1800ರಲ್ಲಿ ನಾUರೀಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಫೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದನು. ಆದರೆ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು ಇದಕ್ಕೆ ಬೆಂಬಲ ನೀಡಲಿಲ್ಲ. ಇದರ ಪರಿಣಾಮವೆಂದರೆ 1853ರವರೆಗೆ ನಾಗರೀಕ ಸೇವೆಯ ಎಲ್ಲಾ ನೇಮಕಾತಿಗಳನ್ನು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರೇ ಮಾಡಿದರು. 1853ರ ನಂತರ ನಾಗರಿಕ ಸೇವೆಗೆ ಮಾಡುವ ಎಲ್ಲಾ ನೇಮಕಾತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗಬೇಕೆಂಬ ತೀರ್ಮಾನವಾಯಿತು. 1772ರಲ್ಲಿ ಗೌವರ್ನರ್ ಆಗಿ ಅಧಿಕಾರ ವಹಿಸಿಕೊಂಡ ವಾರನ್ ಹೇಸ್ಟಿಂಗ್ಸ್ನು ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು. ಅವುಗಳೆಂದರೆ ; ‘ದಿವಾನಿ ಅದಾಲತ್’ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ‘ಫೌಜದಾರಿ ಅದಾಲತ್’ ಎಂಬ ಅಪರಾಧ ನ್ಯಾಯಾಲಯಗಳು. ಲಾರ್ಡ್ ಕಾರ್ನ್ವಾಲೀಸನು ಪ್ರಥಮತಃ ವ್ಯವಸ್ಥಿತವಾದ ಪೆÇಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದನು. ಇವನು ‘ಸೂಪರಿಡೆಂಟೆಂಟ್ ಆಫ್ ಪೆÇಲೀಸ್’ (SP) ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು. 1793ರಲ್ಲಿ ಪ್ರತಿ ಜಿಲ್ಲೆಯನ್ನು ‘ಠಾಣೆ’ಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ‘ಕೊತ್ವಾಲ’ರ ಅಧೀನದಲ್ಲೂ, ಹಳ್ಳಿಗಳು ‘ಚೌಕಿದಾರ’ರ ಅಧೀನದಲ್ಲೂ ಇರುವಂತೆ ಮಾಡಿದನು.
ಖಾಯಂ ಜಮೀನ್ದಾರಿ ಪದ್ಧತಿ : ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ್ ಕಾರ್ನ್ವಾಲೀಸನು 1793ರಲ್ಲಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದನು. ಇದನ್ನು ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು. ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು. ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು. ಭೂಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತುಚಾಲ್ರ್ಸ್ ಮೆಟಕಾಫ್ ಹೇಳುವಂತೆ ಬ್ರಿಟಿಷ್ ಭೂಕಂದಾಯ ನೀತಿಗಳಿಂದ “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು”.
ಮಹಲ್ವಾರಿ ಪದ್ಧತಿ : ಉತ್ತರ ಪ್ರದೇಶ, ಮಧ್ಯಪ್ರದೇಶದ ಅನೇಕ ಭಾಗಗಳಲ್ಲಿ, ಪಂಜಾಬ್ ಮತ್ತು ದೆಹಲಿ ಪ್ರಾಂತ್ಯಗಳಲ್ಲಿ ಮಹಲ್ಲುಗಳೇ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಂಡು, ಸರಕಾರಕ್ಕೆ ತೆರಿಗೆಯನ್ನು ಸಲ್ಲಿಸುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಪದ್ಧತಿಯನ್ನು ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ ಪ್ರಯೋಗಿಸಿದರು. `ಮಹಲ್’ ಎಂದರೆ ತಾಲ್ಲೂಕು ಎಂದರ್ಥ.
ರೈತವಾರಿ ಪದ್ಧತಿ : ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದಲ್ಲಿ 1792ರಲ್ಲಿ ಅಲೆಕ್ಸಾಂಡರ್ ರೀಡ್ ಎನ್ನುವವನು ಜಾರಿಗೊಳಿಸಿದನು. ಈ ಪದ್ಧತಿಯನ್ನು ಥಾಮಸ್ ಮನ್ರೊ ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ 1801ರ ನಂತರ ಜಾರಿಗೊಳಿಸಿದನು. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿಯೆಂದರೆ ವಾರನ್ ಹೇಸ್ಟಿಂಗ್ಸ್. 1781ರಲ್ಲಿ ಅವನು ‘ಕಲ್ಕತ್ತಾ ಮದರಸಾ’ವನ್ನು ಪ್ರಾರಂಭಿಸಿದನು. ಜೊನಾಥನ್ ಡಂಕನ್ ಎಂಬ ಮತ್ತೊಬ್ಬ ಬ್ರಿಟಿಷ್ ವ್ಯಕ್ತಿಯು 1792ರಲ್ಲಿ ಬನಾರಸ್ಸಿನಲ್ಲಿ ಸಂಸ್ಕøತ ಕಾಲೇಜನ್ನು ಪ್ರಾರಂಭಿಸಿದನು. ಆದರೆ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಚಾಲ್ರ್ಸ್ ಗ್ರಾಂಟ್. 1828ರಲ್ಲಿ ವಿಲಿಯಂ ಬೆಂಟಿಂಕನು ಗವರ್ನರ್ ಜನರಲ್ ಆಗಿ ನೇಮಕಗೊಂಡ ನಂತರ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ಮತ್ತಷ್ಟು ವಿಶೇಷ ಪೆÇ್ರೀತ್ಸಾಹ ದೊರೆಯಿತು. ಗವರ್ನರ್ ಜನರಲ್ನ ಕಾರ್ಯಾಂಗ ಸಭೆಗೆ ಮೆಕಾಲೆಯನ್ನು ಕಾನೂನು ಸದಸ್ಯನನ್ನಾಗಿ ಬೆಂಟಿಂಕ್ನು ನೇಮಕ ಮಾಡಿದನು. ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಗೂ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು. 1835 ರಲ್ಲಿ ಇಂಗ್ಲೀಷ ಶಿಕ್ಷಣ ಸಂಬಂಧಿಸಿದಂತೆ ಮೆಕಾಲೆಯು ಕೊಟ್ಟ ವರದಿಯೆ ಅಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.ಅವನ ಯೋಜನೆಯ ಪ್ರಮುಖ ಅಂಶವೆಂದರೆ; “ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ” ಹೊಸ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು. ಸರ್ ಚಾಲ್ರ್ಸ್ ವುಡ್ಸ್ನ (1854) ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಅಂದಿನ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್ಹೌಸಿಯು ಕಲ್ಕತ್ತಾ, ಬಾಂಬೆ ಮತ್ತುಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು 1857ರಲ್ಲಿ ಸ್ಥಾಪಿಸಿದನು.
ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯ ಅವಧಿಯಲ್ಲಿ ಜಾರಿಗೊಂಡ ಕಾಯ್ದೆಗಳು (1773-1858)
1773ರ ರೆಗ್ಯುಲೇಟಿಂಗ್ ಕಾಯ್ದೆ 1765ರಲ್ಲಿ ಜಾರಿಗೊಂಡ ದಿವಾನಿ ಹಕ್ಕಿನ ನಂತರ ಕಂಪನಿ ಅಧಿಕಾರಿಗಳು ಅಪರಿಮಿತ ದುರಾಸೆಗೆ ಒಳಗಾಗಿ ಅಧಿಕಾರವನ್ನು ತಮ್ಮ ವೈಯಕ್ತಿಕ ಶ್ರೀಮಂತಿಕೆಯನ್ನು ಹೆಚ್ಚುಪಡಿಸಿಕೊಳ್ಳಲು ಬಳಸಿಕೊಂಡರು. ಭ್ರಷ್ಟಾಚಾರ ವಿಪರೀತವಾಯಿತು. ಇಂಗ್ಲೆಂಡಿನ ಶಾಸನ ಸಭೆಯ ಸದಸ್ಯನಾದ ಎಡ್ಮಂಡ್ ಬರ್ಕ್ನು ವಾರ್ಷಿಕವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ‘ಅಪರಾಧ ತೆರಿಗೆ’ ಎಂದು ತೀಕ್ಷ್ಣವಾಗಿಯೇ ಟೀಕಿಸಿದನುಈ ಹಿನ್ನೆಲೆಯಲ್ಲಿ ರೆಗ್ಯುಲೇಟಿಂಗ್ ಕಾಯ್ದೆ 1773ರಲ್ಲಿ ಜಾರಿಗೊಂಡಿತುಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ “ಸುಪ್ರೀಂಕೋರ್ಟ್” ಅನ್ನು ಸ್ಥಾಪಿಸಲಾಯಿತು. ಈ ಕೇಂದ್ರ ನ್ಯಾಯಾಲಯದಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಮತ್ತು ಮೂರು ಜನ ಸಾಮಾನ್ಯ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದರು. 1784ರ ಪಿಟ್ಸ್ ಇಂಡಿಯಾ ಕಾಯ್ದೆ: 1773ರ ರೆಗ್ಯುಲೇಟಿಂಗ್ ಕಾಯ್ದೆಯಲ್ಲಿ ಕೆಲವು ಅನಿಶ್ಚಿತತೆಗಳು ಇದ್ದವು, ಇವುಗಳನ್ನು ನಿವಾರಿಸುವುದರ ಜೊತೆಗೆ ಬ್ರಿಟಿಷ್ ಸರ್ಕಾರದ ಅಧಿಕಾರವನ್ನು ಮತ್ತು ಕಂಪನಿ ಸರ್ಕಾರಕ್ಕಿದ್ದ ಅಧಿಕಾರದ ಮಿತಿಗಳನ್ನು ಸ್ಪಷ್ಟಪಡಿಸುವುದೇ ಈ ಕಾಯ್ದೆಯ ಪ್ರಮುಖ ಉದ್ದೇಶ. ಮತ್ತೊಂದು ಪ್ರಮುಖ ಅಂಶವೆಂದರೆ ‘ನಿಯಂತ್ರಣ ಮಂಡಳಿ’ (ಃoಚಿಡಿಜ oಜಿ ಅoಟಿಣಡಿoಟ) ಎನ್ನುವ ಆರು ಜನ ಕಮಿಷನರ್ಗಳನ್ನೊಳಗೊಂಡ ಹೊಸ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಈ ಹಿಂದೆ ಇದ್ದ ‘ನಿರ್ದೇಶನ’ ಮಂಡಳಿಯ (ಅouಡಿಣ oಜಿ ಆiಡಿeಛಿಣoಡಿs) ಜಾಗದಲ್ಲಿ ನಿಯಂತ್ರಣ ಮಂಡಳಿ (ಃoಚಿಡಿಜ oಜಿ ಅoಟಿಣಡಿoಟ) ಹುಟ್ಟಿಕೊಂಡಿತು.
ಚಾರ್ಟರ್ ಕಾಯ್ದೆಗಳು ಚಾರ್ಟರ್ ಕಾಯ್ದೆಗಳ ಪ್ರಮುಖ ಉದ್ದೇಶ ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಪರವಾನಗಿ (ಠಿeಡಿmiಣ)ಯನ್ನು ವಿಸ್ತರಿಸುವುದು. 1793, 1813, 1833 ಮತ್ತು 1853ರಲ್ಲಿ ಚಾರ್ಟರ್ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಪ್ರತೀ 20 ವರ್ಷಕ್ಕೊಮ್ಮೆ ಕಂಪನಿಗೆ ಪರವಾನಗಿಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಇಂಗ್ಲೆಂಡಿನ ಸರ್ಕಾರ ತೆಗೆದುಕೊಂಡ ಹೊಸ ನೀತಿಗಳನ್ನು ಈ ಕಾಯ್ದೆಗಳಲ್ಲಿ ಸೇರಿಸಲಾಯಿತು. ಈ ನಾಲ್ಕು ಕಾಯ್ದೆಗಳಲ್ಲಿ 1813ರ ಮತ್ತು 1833ರ ಕಾಯ್ದೆಗಳು ವಿವಿಧ ಕಾರಣಗಳಿಂದ ಪ್ರಮುಖವಾದವು.
1813ರ ಚಾರ್ಟರ್ ಕಾಯ್ದೆ: 1. ಈ ಕಾಯ್ದೆಯು ಈಸ್ಟ್ ಇಂಡಿಯಾ ಕಂಪನಿಗೆ ಮುಂದಿನ 20 ವರ್ಷಗಳು ಭಾರತದಲ್ಲಿರುವ ಅಧಿಕಾರವನ್ನು ನೀಡಿತು. ಚರ್ಚ್ಗಳಿಗೆ ಭಾರತಕ್ಕೆ ಪ್ರವೇಶಿಸುವ ಅಧಿಕೃತ ಅವಕಾಶವನ್ನು ನೀಡಲಾಯಿತು. ಭಾರತೀಯರಲ್ಲಿ ಹೊಸ ಜ್ಞಾನವನ್ನು ಪಸರಿಸುವ, ಅವರ ನೈತಿಕ ಮತ್ತು ಧಾರ್ಮಿಕ ಬದುಕನ್ನು ಎತ್ತರಿಸುವ ಜವಾಬ್ದಾರಿಯನ್ನು ಮಿಶನರಿ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂಬ ನಿರ್ದೇಶನವನ್ನು ನೀಡಲಾಯಿತು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬರತೊಡಗಿದರು. ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ ಹೆಚ್ಚಾಯಿತು. 1833ರ ಚಾರ್ಟರ್ ಕಾಯ್ದೆ: 1. ಬಂಗಾಳದ ಗವರ್ನರ್ ಜನರಲ್ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಲಾಯಿತು. 2. ಭಾರತದ ಎಲ್ಲ ವ್ಯಾಪಾರಿ ಸರಕುಗಳನ್ನು “ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ” ಅಧಿಕಾರವನ್ನು ಗವರ್ನರ್ ಜನರಲ್ನು ಪಡೆದನು.
ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಯಲ್ಲಿ ಜಾರಿಗೊಂಡ ಕಾಯ್ದೆಗಳು (1858-1947)
ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತ ಹಾಗೂ ಭಾರತ ವಿರೋಧಿ ಕಾಯ್ದೆಗಳಿಂದಾಗಿ 1857ರಲ್ಲಿಈ ಅವಧಿಯಲ್ಲಿ ಜಾರಿಗೆ ಬಂದ ಪ್ರಮುಖ ಕಾಯ್ದೆಗಳೆಂದರೆ ಭಾರತ ಸರ್ಕಾರದ ಕಾಯ್ದೆ 1858, 1861,
1892, 1909, 1919 ಮತ್ತು 1935ರ ಕಾಯ್ದೆಗಳು.
ಭಾರತ ಸರ್ಕಾರದ ಕಾಯ್ದೆ – 1858 ಈ ಕಾಯ್ದೆಯನ್ನು 1857ರ ಸೈನಿಕ ಮತ್ತು ನಾಗರಿಕ ಕ್ರಾಂತಿಯ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಬ್ರಿಟಿಷ್ ಭಾರತವು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಗೆ ಒಳಪಡುವಂತಾಯಿತು. ನವಂಬರ್ 1, 1858ರಂದು ಬ್ರಿಟಿಷ್ ರಾಣಿ ವಿಕ್ಟೋರಿಯಾ ಒಂದು ಘೋಷಣೆ ಹೊರಡಿಸಿ ತಮ್ಮ ಆಡಳಿತದ ಅವಧಿಯಲ್ಲಿ ಭಾರತದ ಎಲ್ಲ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಘೋಷಿಸಿದರು. 1. ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ, ಭಾರತವನ್ನು ರಾಣಿಯವರ ಆಡಳಿತಕ್ಕೆವರ್ಗಾಯಿಸಲಾಯಿತು.
2. ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ “ವೈಸ್ರಾಯ್” ಎಂಬ
ಪದನಾಮವನ್ನು ನೀಡಿದರು. ವೈಸರಾಯ್ ಆಗಿ “ಲಾರ್ಡ್ ಕ್ಯಾನಿಂಗ್” ನೇಮಕಗೊಂಡರು.
3. “ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ” ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು. ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದರು.
4. ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಲಿ (ಕೌನ್ಸಿಲ್ ಆಫ್ ಇಂಡಿಯಾ) ಅಸ್ತಿತ್ವಕ್ಕೆ ಬಂದಿತು.
1861ರ ಭಾರತೀಯ ಪರಿಷತ್ ಕಾಯ್ದೆ (1861) ಈ ಕಾಯ್ದೆಯು 1857ರ ಘಟನೆಯ ನಂತರ ಜಾರಿಗೊಂಡ ಪ್ರಮುಖ ಕಾಯ್ದೆಯಾಗಿದೆ. ಈ ಕಾಯ್ದೆಯ ಮೂಲಕ ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನವನ್ನು ಕಲ್ಪಿಸಲಾಯಿತು. ಭಾರತೀಯರು ಬ್ರಿಟಿಷರ ಬಗೆಗೆ ತಿಳಿದಿರುವ ಅಭಿಪ್ರಾಯಗಳನ್ನು ತಿಳಿಯಲು ಭಾರತೀಯರಿಗೆ ಪ್ರ್ರಾತಿನಿದ್ಯ ನೀಡಲಾಯಿತು. ಇದನ್ನು ಇಂಗ್ಲೀಷಿನಲ್ಲಿ ‘Poಟiಛಿಥಿ oಜಿ ಂssoಛಿiಚಿಣioಟಿ’ ಎಂದು ಕರೆಯುತ್ತಾರೆ.
ಈ ಕಾಯ್ದೆಯ ಪ್ರಮುಖ ಅಂಶಗಳು 1. ವೈಸರಾಯ್ ಕೌನ್ಸಿಲ್ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರಾಗಿ ನಾಮಕರಣ ಮಾಡಲಾಯಿತು. 2. ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರವನ್ನು ಗವರ್ನರ್ ಜನರಲ್ಗೆ ನೀಡಲಾಯಿತು.
1892 ರ ಭಾರತೀಯ ಪರಿಷತ್ ಕಾಯ್ದೆ ಈ ಕಾಯ್ದೆಯು 1861 ಕಾಯ್ದೆಯ ಮುಂದುವರಿದ ಕಾಯ್ದೆಯಾಗಿದೆ. 1892ರ ಕಾಯ್ದೆಯು ಭಾರತೀಯರಿಗಿದ್ದ ಶಾಸನ ಸಭೆಗಳ ಪ್ರಾತಿನಿಧ್ಯವನ್ನು ಮತ್ತಷ್ಟು ವಿಸ್ತರಿಸಿತು.
1909 ಭಾರತೀಯ ಪರಿಷತ್ ಕಾಯ್ದೆ: ಈ ಕಾಯ್ದೆಯನ್ನು ‘ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆ’ ಎಂತಲೂ ಕರೆಯುವರು. ಏಕೆಂದರೆ, ಲಾರ್ಡ್ ಮಿಂಟೋ ಭಾರತದ ವೈಸ್ರಾಯ್ ಆಗಿದ್ದರು. ಲಾರ್ಡ್ ಮಾರ್ಲೆ ಭಾರತದ ಸಕ್ರೆಟರಿ ಆಫ್ ಸ್ಟೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬ್ರಿಟಿಷರು ಭಾರತೀಯರನ್ನು ಒಡೆದು ಆಳಲು ಈ ಕಾಯ್ದೆಯನ್ನು ಬಳಸಿಕೊಂಡರು.
ಈ ಕಾಯ್ದೆಯ ಪ್ರಮುಖ ಅಂಶಗಳು
1. ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಹೆಚ್ಚಿಸಲಾಯಿತು.
2. ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.
3. ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.
4. ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
1919ರ ಭಾರತೀಯ ಪರಿಷತ್ ಕಾಯ್ದೆ (1919) ಈ ಕಾಯ್ದೆಯನ್ನು ಮಾಂಟೆಗೋ - ಚೆಮ್ಸ್ಫರ್ಡ್ ಸುಧಾರಣಾ ಕಾಯ್ದೆ ಎಂತಲೂ ಕರೆಯುವರು. ಮೊದಲನೆಯ ಮಹಾಯುದ್ಧ (1914-1918) ದ ಸಂದರ್ಭದಲ್ಲಿ ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಹಿನ್ನಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.
1. ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ (ಃi-ಅಚಿmeಡಿಚಿಟ) ರಚನೆಗೆ ಅವಕಾಶ ನೀಡಲಾಯಿತು. ಅವುಗಳೆಂದರೆ, ಶಾಸಕಾಂಗ ಸಭೆ (ಕೆಳಮನೆ) ಮತ್ತು ರಾಜ್ಯಗಳ ಪರಿಷತ್ತು (ಮೇಲ್ಮನೆ) ರಚಿಸಲಾಯಿತು. 2. ಪ್ರಾಂತ್ಯಗಳಲ್ಲಿ “ದ್ವಿಸರಕಾರ” (ಆಥಿಚಿಡಿಛಿhಥಿ) ಪದ್ದತಿಗೆ ಅವಕಾಶ ನೀಡಲಾಯಿತು.
3. ಭಾರತಕ್ಕೆ ಒಬ್ಬ ಹೈಕಮಿಷನರ್ರನ್ನು ನೇಮಕ ಮಾಡಲಾಯಿತು4. ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.
5. ಕೇಂದ್ರದ ಬಜೆಟ್ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು.
6. “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್ರಿಗೆ ವಿಸ್ತರಿಸಲಾಯಿತು.
1935ರ ಭಾರತ ಸರ್ಕಾರದ ಕಾಯ್ದೆ ಭಾರತದ ಸಂವಿಧಾನ ರಚನೆಗೆ ಈ ಕಾಯ್ದೆಯು ಬುನಾದಿಯಾಗಿದೆ. ಈ ಕಾಯ್ದೆಯು ರೂಪುಗೊಳ್ಳಲು ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ತಯಾರಾದ 1928ರ ವರದಿಯು ಮುಖ್ಯವಾಗಿದೆ. ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನ್ನೇ ಆಧರಿಸಿ ರಚಿಸಲಾಗಿದೆ. ಈ ಕಾಯ್ದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ನೀಡಿತು.
ಈ ಕಾಯ್ದೆಯ ಪ್ರಮುಖ ಅಂಶಗಳು
1. ಬ್ರಿಟಿಷ್ ಪ್ರಾಂತ್ಯಗಳ, ದೇಶಿಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು.
2. ಕೇಂದ್ರದಲ್ಲಿ “ದ್ವಿ ಸರಕಾರ”ವನ್ನು (ಆಥಿಚಿಡಿಛಿhಥಿ) ಸ್ಥಾಪಿಸಲಾಯಿತು.
3. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು.
4. ಪ್ರಾಂತ್ಯಗಳಲ್ಲಿ “ದ್ವಿ ಸರಕಾರ” ಪದ್ಧತಿಯನ್ನು ರದ್ದುಗೊಳಿಸಿ, ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು.
5. ಭಾರತದಲ್ಲಿ “ಫೆಡರಲ್ ಕೋರ್ಟ್” ಸ್ಥಾಪನೆಗೆ ಅವಕಾಶ ನೀಡಲಾಯಿತು
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು
ಹೈದರಾಲಿ ಮತ್ತು ಟಿಪ್ಪುಸುಲ್ತಾನ
ಭಾರತದ ಚರಿತ್ರೆಯಲ್ಲಿ 18ನೇ ಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಅನೇಕ ಕಾರಣÀಗಳಿವೆ. ಮೊಘಲ್ ಚಕ್ರವರ್ತಿ ಔರಂಗಜೇಬ್ನ ಮರಣ 1707ರಲ್ಲಿ ಸಂಭವಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. 1704ರಲ್ಲಿ ಸಂಭವಿಸಿದ ಚಿಕ್ಕದೇವರಾಜ ಒಡೆಯರ ಮರಣ ಮೈಸೂರು ರಾಜ್ಯದ ರಾಜಕೀಯ ಬೆಳವಣಿಗೆಯ ಮೇಲೆ ದುಷ್ಟರಿಣಾಮಗಳನ್ನು ಬೀರಿತು.
ಹೈದರಾಲಿ
ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು. ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವಧರ್Àಮಾನಕ್ಕೆ ಬಂದನು. ಸೈನಿಕರನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಸಫಲನಾದನು.
ಮೊದಲನೆಯ ಆಂಗೋÀ್ಲ ಮೈಸೂರು ಯುದ್ಧ : ಕ್ರಿ.ಶ.1767ರಲ್ಲಿ ಪ್ರಾರಂಭವಾದ ಇದು 1769ರಲ್ಲಿ ಅಂತ್ಯಗೊಂಡಿತು. ದಕ್ಷಿಣ ಭಾರತದಲ್ಲಿ ಹೈದರಾಲಿ ಗಳಿಸುತ್ತಿದ್ದ ರಾಜಕೀಯ ಪ್ರಾಬಲ್ಯ ಬ್ರಿಟಿಷರು,
ಹೈದರಾಬಾದಿನ ನಿಜಾಮ ಮತ್ತು ಮರಾಠರಲ್ಲಿ ರಾಜಕೀಯ ಅಸಹನೆ ಮೂಡಿಸಿತುಹೈದರ್ ಆಲಿಯ ವಿರುದ್ಧ ಬ್ರಿಟಿಷರು, ಮರಾಠರು ಮತ್ತು ನಿಜಾಮನೊಂದಿಗೆ ಒಪ್ಪಂದ ಮಾಡಿಕೊಂಡರು. ಇದರನ್ವಯ ತ್ರಿಪಕ್ಷ ಒಕ್ಕೂಟ ರಚಿಸಲ್ಪಟ್ಟಿತು. ಬ್ರಿಟಿಷರು ಹೈದರಾಲಿಯೊಂದಿಗೆ ಚರ್ಚೆ ಮತ್ತು ಸಂಧಾನಗಳÀ ಮೂಲಕ ‘ಮದ್ರಾಸ್ ಒಪ್ಪಂದ’ ಮಾಡಿಕೊಂಡರು. ಮೊದಲನೇ ಆಂಗ್ಲೋ-ಮೈಸೂರು ಯುದ್ಧ 1769ರಲ್ಲಿ ಸಹಿ ಹಾಕಲ್ಪಟ್ಟ ‘ಮದ್ರಾಸ್ ಒಪ್ಪಂದ’ದೊಂದಿಗೆ ಕೊನೆಯಾಯಿತು.
ಎರಡನೆಯ ಆಂಗ್ಲೋ-ಮೈಸೂರು ಯುದ್ಧ ( 1780- 1784 ) : ತಿರುವಾಂಕೂರು ಮತ್ತು ತಂಜಾವೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶಗಳು ಈ ಯುದ್ಧಕ್ಕೆ ಕಾರಣವಾದವು. ಮದರಾಸು ಒಪ್ಪಂದ ದಕ್ಷಿಣ ಭಾರತದಲ್ಲಿ ತಾತ್ಕಾಲಿಕವಾಗಿ ರಾಜಕೀಯ ಬೆಳವಣಿಗೆಗಳನ್ನು ತಡೆಹಿಡಿದಿತ್ತು. ಆದರೆ ಬ್ರಿಟಿಷರು ಮದ್ರಾಸ್ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲು ಯತ್ನಿಸಿದರು. ಮರಾಠರು ಮಾಧವರಾಯನ ನೇತೃತ್ವದಲ್ಲಿ ಸೈನ್ಯವನ್ನು ಮುನ್ನಡೆಸಿ ಶ್ರೀರಂಗಪಟ್ಟಣದ ಕಡೆ ನುಗ್ಗಿದಾಗ ಹೈದರ್ ಬ್ರಿಟಿಷರ ಸಹಾಯವನ್ನು ಅಪೇಕ್ಷಿಸಿದನು. ಆದರೆ ಬ್ರಿಟಿಷರು ಇದನ್ನು ತಿರಸ್ಕರಿಸಿ ಮದರಾಸು ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಮಾಹೆಯು ಫ್ರೆಂಚರ ವಸಾಹತುವಾಗಿದ್ದು, ಹೈದರಾಲಿಯ ನಿಯಂತ್ರಣಕ್ಕೊಳಪಟ್ಟಿತ್ತು. ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆಯ ಮೈಸೂರು ಯುದ್ಧಕ್ಕೆ ಕಾರಣವಾಯಿತುಹೈದರ್ ಆರ್ಕಾಟಿಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು. ಸರ್ ಐರ್ಕೂಟ್ನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಸಜ್ಜುಗೊಂಡಿತು. ಹೈದರ್ ಈ ಅವಧಿಯಲ್ಲಿ ವೆಲ್ಲೂರು ಮತ್ತು ವಾಂಡಿವಾಶ್ಗಳನ್ನು ಮುತ್ತುವುದಾಗಿ ಬೆದರಿಸಿದನು1781ರಲ್ಲಿ ಪೆÇೀರ್ಟೋನೋವೆ ಎಂಬಲ್ಲಿ ನಡೆದ ಕದನದಲ್ಲಿ ಹೈದರ್ ಪರಾಭವಗೊಂಡನು. ಇದು ಯುದ್ಧದ ಗತಿಯನ್ನು ಬದಲಾಯಿಸಿತು ಮತ್ತು ಬ್ರಿಟಿಷರಲ್ಲಿ ಸ್ಥೈರ್ಯವನ್ನು ಹೆಚ್ಚಿಸಿತುಸಾಲ್ಬಾಯ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೈದರನ ಒಕ್ಕೂಟದಿಂದ ಮರಾಠರು ಹಾಗೂ ನಿಜಾಮನನ್ನು ಸೆಳೆಯುವಲ್ಲಿ ಸಫಲರಾದರು. ಯುದ್ಧದ ಮಧ್ಯದಲ್ಲಿ ಹೈದರಾಲಿ 1782ರಲ್ಲಿ ಅನಾರೋಗ್ಯದಿಂದ ಮೃತನಾದನು. ಆತನ ಮಗ ಟಿಪ್ಪು ಯುದ್ಧವನ್ನು ಮುನ್ನಡೆಸಿದನುಕೊನೆಗೆ 1784ರ ‘ಮಂಗಳೂರು ಒಪ್ಪಂದ’ದ ಮೂಲಕ ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.
ಟಿಪ್ಪು ಸುಲ್ತಾನ ಬ್ರಿಟಿಷರನ್ನು ತನ್ನ ರಾಜ್ಯ ವಿಸ್ತರಣೆಯ ನೀತಿಗೆ ಅಡ್ಡಪಡಿಸುತ್ತಿರುವ ಶತ್ರುಗಳು ಎಂದು ಭಾವಿಸಿ ಅವರನ್ನು ಓಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಿದನು. ತಮ್ಮ ಕುಟೀಲ ನೀತಿಯಿಂದ ಭಾರತೀಯ ರಾಜ್ಯಗಳನ್ನು ಕಬಳಿಸುತ್ತಿದ್ದ ಬ್ರಿಟಿಷರನ್ನು ಪರಮ ವೈರಿಗಳು ಎಂದು ತಿಳಿದ ಅವನು ಅವರನ್ನು ಭಾರತದಿಂದ ಓಡಿಸುವುದು ತನ್ನ ಆದ್ಯ ಕರ್ತವ್ಯವೆಂದು ತಿಳಿದಿದ್ದನು. ತನ್ನ 17 ವರ್ಷಗಳ ಆಳ್ವಿಕೆಯಲ್ಲಿ ನಿರಂತರವಾಗಿ ಬ್ರಿಟಿಷರೊಂದಿಗೆ ಹೋರಾಡಿದನು.
ಮೂರನೆಯ ಆಂಗ್ಲೋ-ಮೈಸೂರು ಯುದ್ಧ : ಈ ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ. ಆ ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು. ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತುಬ್ರಿಟಿಷ್ ಸೈನ್ಯ ಕಾರ್ನ್ವಾಲೀಸನ ನೇತೃತ್ವದಲ್ಲಿ ಕೋಲಾರ ಮತ್ತು ಹೊಸಕೋಟೆಗಳನ್ನು ವಶಪಡಿಸಿಕೊಂಡು ಬೆಂಗಳೂರಿನತ್ತ ಮುನ್ನುಗಿತು. 1792ರಲ್ಲಿ ಸಂಘಟಿತ ಸೈನ್ಯ ಒಂದೊಂದಾಗಿ ಕೋಟೆಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣದ ಕಡೆ ಸಾಗಿತು1792ರಲ್ಲಿ ಅಸಮಾನ ಷರತ್ತುಗಳನ್ನು ಹೊಂದಿದ್ದ ‘ಶ್ರೀರಂಗಪಟ್ಟಣ ಒಪ್ಪಂದ’ಕ್ಕೆ ಟಿಪ್ಪು ಸಹಿಹಾಕುವ ಮೂಲಕ ಯುದ್ಧಕ್ಕೆ ತೆರೆಯಾಯಿತು.
ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧ : ಟಿಪ್ಪು ಮೂರನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿನ ಸೋಲನ್ನು ವೈಯಕ್ತಿಕವಾಗಿ ಸ್ವೀಕರಿಸಿ ಅದನ್ನು ಒಂದು ಪ್ರಮುಖ ಸವಾಲೆಂದೇ ಪರಿಗಣಿಸಿದನು. ಒಪ್ಪಂದದನ್ವಯ ಬ್ರಿಟಿಷರ ನೇತೃತ್ವದಲ್ಲಿನ ಮಿತ್ರಕೂಟಕ್ಕೆ ನೀಡಬೇಕಾದ ಭೂಪ್ರದೇಶಗಳು ಮತ್ತು ಹಣವನ್ನು ಚಾಚೂ ತಪ್ಪದೆ ಸಲ್ಲಿಸಿ ಒತ್ತೆಯಾಳಾಗಿ ಕಳುಹಿಸಿಕೊಟ್ಟಿದ್ದ ತನ್ನ ಇಬ್ಬರು ಮಕ್ಕಳನ್ನು ಹಿಂದಕ್ಕೆ ಕರೆಯಿಸಿಕೊಂಡನು ಟಿಪ್ಪು ಬ್ರಿಟಿಷರ ಅಧೀನದಲ್ಲಿದ್ದ ಮಲೆಯಾಳಂ ಮಾತನಾಡುವ ಭೂಪ್ರದೇಶಗಳು ನ್ಯಾಯಯುತವಾಗಿ ತನಗೇ ಸೇರಬೇಕೆಂದು ವಾದಿಸಿದನು. ಆದರೆ ಬ್ರಿಟಿಷರು ಅದನ್ನು ಪುಷ್ಟೀಕರಿಸಲಿಲ್ಲಲಾರ್ಡ್ ವೆಲ್ಲೆಸ್ಲಿ 1798ರಲ್ಲಿ ಭಾರತದ ಗವರ್ನರ್ ಜನರಲ್ನಾಗಿ ನೇಮಕಗೊಂಡನು. ಟಿಪ್ಪುವಿನ ವಿರೋಧಿ ರಾಜಕೀಯ ಚಟುವಟಿಕೆಗಳು ಈತನ ಅವಧಿಯಲ್ಲಿ ಚುರುಕುಗೊಂಡವು. 1799ರಲ್ಲಿ ಯುದ್ಧ ಆರಂಭವಾಯಿತು. ಅಭೇದ್ಯವಾದ ಕೋಟೆಯನ್ನು ಬ್ರಿಟಿಷರು ಭೇದಿಸಿದರು. ಎರಡೂ ಸೈನ್ಯಗಳು ವೀರಾವೇಶದಿಂದ ಕಾದಾಡಿದವು. ಟಿಪ್ಪು ತನ್ನ ಸೈನ್ಯವನ್ನು ಹುರಿದುಂಬಿಸುತ ಹೋರಾಡಿ 1799ರಲ್ಲಿ ಹತನಾದನು.
ದೋಂಡಿಯಾ ವಾಘ್ (1800) ಆಧುನಿಕ ಕರ್ನಾಟಕದ ಚರಿತ್ರೆಯಲ್ಲಿ ಟಿಪ್ಪುವಿನ ನಂತರ ಅದರಲ್ಲಿಯೂ ಮುಖ್ಯವಾಗಿ 19ನೆಯ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕಂಡುಬಂದ ಪ್ರತಿಭಟನೆಗಳು ಮತ್ತು ಬಂಡಾಯಗಳು ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ. ಇವುಗಳು ಸಶಸ್ತ್ರ ಬಂಡಾಯಗಳಾಗಿದ್ದವು. ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು. ಅವನ ಶೌರ್ಯ ಪರಾಕ್ರಮಗಳಿಂದ ಜನ ಅವನನ್ನು ವಾಫ್ ಎಂದು ಕರೆದರು. ಮರಾಠಿಯಲ್ಲಿ ವಾಘ್ ಎಂದರೆ ಹುಲಿ. ಕ್ರಿ.ಶ.1789ರ ಸುಮಾರಿಗೆ ಮೈಸೂರಿನ ಹೈದರಾಲಿಯ ಸೈನ್ಯದಲ್ಲಿ ಒಬ್ಬ ಅಶ್ವಾರೋಹಿ ಸೈನಿಕನಾಗಿ ಸೇರಿ ಕಾಲಾನಂತರ ಸೇನಾನಾಯಕನಾದನು.
ಕಿತ್ತೂರಿನ ಬಂಡಾಯ - ವೀರರಾಣಿ ಚೆನ್ನಮ್ಮ (1824) ಬ್ರಿಟಿಷರು ತಮ್ಮ ಆಳ್ವಿಕೆಗೆ ವಿರುದ್ಧವಾಗಿದ್ದ ಹೈದರಾಲಿ, ಟಿಪÀÅ್ಪ ಮತ್ತು ಮರಾಠರ ಬಲಿಷ್ಠ ಪ್ರತಿರೋಧಕಗಳನ್ನು ಅಡಗಿಸಿದ ನಂತರ ತಮ್ಮ ಅಧಿಕಾರದ ಕ್ರೋಡೀಕರಣಕ್ಕಾಗಿ ಕೆಲವು ಕಾನೂನುಗಳನ್ನು ಜಾರಿಗೆ ತಂದರು. ಅವುಗಳಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬುದು ಒಂದು. ಈ ಕಾನೂನಿನ ವಿರುದ್ಧ ಸಂಘಟಿಸಲ್ಪಟ್ಟ ಸಶಸ್ತ್ರ ಬಂಡಾಯಗಳಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಖ್ಯಾತಿಯನ್ನು ಗಳಿಸಿದೆ.
ಸಂಗೊಳ್ಳಿ ರಾಯಣ್ಣ (1829-30) ಕಿತ್ತೂರಿನ ಚೆನ್ನಮ್ಮನೊಂದಿಗೆ ಸಂಗೊಳ್ಳಿಯ ರಾಯಣ್ಣನÀ ಹೆಸರು ಅಜರಾಮರ ಮತ್ತು ಆದರ್ಶಪ್ರಾಯವೆನಿಸಿದೆ. ರಾಯಣ್ಣ ವೀರಯೋಧ. ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದನು. ಈತನ ಮನೆತನದವರು ಪರಂಪರೆಯಿಂದಲೂ ಸೈನಿಕರಾಗಿ ಸೇವೆಯನ್ನು ಸಲ್ಲಿಸಿದ್ದರು. ರಾಯಣ್ಣ ಕಿತ್ತೂರಿನ ಯುದ್ಧದಲ್ಲಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದನು. ಯುದ್ಧದಲ್ಲಿ ಸೆರೆಯಾಳಾಗಿ ಬಂಧಿಸಲ್ಪಟ್ಟು ತರುವಾಯ ಬಿಡುಗಡೆಗೊಂಡನು ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈಜೋಡಿಸಿದನು. ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು. ಆತನ ಬಂಧನಾನಂತರ ಆತನ ಸೈನಿಕರು ಶರಣಾಗತರಾದರು. ಮುಖ್ಯ ಅಪರಾಧಿ ಎಂದು ಘೋಷಿಸಿ 1831ರಲ್ಲಿ ನಂದಗಡದಲ್ಲಿ ಅವನನ್ನು ಗಲ್ಲಿಗೇರಿಸಲಾಯಿತು. ಆತನ ಅನೇಕ ಅನುಯಾಯಿಗಳನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಕೊಡಗಿನಲ್ಲಿ ಆಳ್ವಿಕೆಯನ್ನು ನಡೆಸುತ್ತಿದ್ದ ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರನನ್ನು ಬ್ರಿಟಿಷರು 1834ರಲ್ಲಿ ಪದಚ್ಯುತಗೊಳಿಸಿ ಅವನನ್ನು ಬೆಂಗಳೂರಿನ ಮೂಲಕ ವೆಲ್ಲೂರಿಗೆ ತರುವಾಯ ಕಾಶಿಗೆ ಸಾಗಿಸಿದರು. ಆತನÀ ಪದಚ್ಯುತಿ ಕೊಡಗಿನಲ್ಲಿ ರಾಜಕೀಯ ಅಸಮಾಧಾನವÀನ್ನು ಸೃಷ್ಟಿಸಿತು. ಈ ಜಿಲ್ಲೆಯಲ್ಲಿ ಕೊಡಗಿನಲ್ಲಿ ಸ್ವಾಮಿ ಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು. ಇವರು ಮೂವರು ತಾವು ಕೊಡಗಿನ ಪದಚ್ಯುತ ರಾಜನ ವಂಶದವರೆಂದು ಹೇಳಿಕೊಂಡರು. ಸ್ವಾಮಿ ಅಪರಾಂಪರ ಬಂಡಾಯದ ಮುಖಂಡನಾದನು. 1835ರಲ್ಲಿ ಆತನನ್ನು ಬ್ರಿಟಿಷರು ಸೆರೆಹಿಡಿದು ಬೆಂಗಳೂರಿಗೆ ರವಾನಿಸಿದರು. ಕಲ್ಯಾಣಸ್ವಾಮಿ 1837ರಲ್ಲಿ ಬಂಧಿಸಲ್ಪಟ್ಟನು.
ಹಲಗಲಿಯ ಬೇಡರ ದಂಗೆ ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿ ಹಲಗಲಿ ಎಂಬುದು ಒಂದು ಪುಟ್ಟಗ್ರಾಮ.
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು
ಬ್ರಹ್ಮಸಮಾಜ ಆಧುನಿಕ ಕಾಲ ಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ ಚಾಲನೆಯನ್ನು ನೀಡಿದವರು ರಾಜಾ ರಾಮಮೋಹನ್ರಾಯರು (1772-1833). ಇವರು ಸಂಸ್ಕøತ ಸಾಹಿತ್ಯ, ಹಿಂದೂ ತತ್ವ ಮೀಮಾಂಸೆ, ಕುರಾನ್, ಪರ್ಶಿಯನ್ ಮತ್ತು ಅರೆಬಿಕ್ ಸಾಹಿತ್ಯ ಪ್ರಕಾರಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರುಇವರು ತಮ್ಮ ಸ್ನೇಹಿತರೊಡಗೂಡಿ ಕಲ್ಕತ್ತಾದಲ್ಲಿ ‘ಆತ್ಮೀಯ ಸಭಾ’ ಪ್ರಾರಂಭಿಸಿದರು. ಈ ಸಭೆಯ ಪ್ರಮುಖ ಆಶಯಗಳೆಂದರೆ ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು. 1828ರಲ್ಲಿ ‘ಬ್ರಹ್ಮಸಮಾಜ’ವನ್ನು ಪ್ರಾರಂಭಿಸಿದರು. ಜಾತಿಪದ್ಧತಿ ಮತ್ತು ಮೂಢನಂಬಿಕೆಗಳಿಂದ ಹಿಂದೂ ಧರ್ಮವನ್ನು ಶುದ್ಧಿಗೊಳಿಸುವುದು ಇವರ ಕಾಳಜಿಯಾಗಿತ್ತು ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ನ ಬೆಂಬಲದಿಂದ 1829ರಲ್ಲಿ ಸತಿಪದ್ಧತಿಯ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಯಿತು. ಪತ್ರಿಕೋದ್ಯಮದ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಬೆಳೆಸಲು ಪ್ರಯತ್ನಿಸಿದರು. ಬಂಗಾಳಿ ಭಾಷೆಯಲ್ಲಿ ಸಂವಾದ ಕೌಮುದಿ ಎನ್ನುವ ಪತ್ರಿಕೆಯನ್ನು ಆರಂಭಿಸಿದರು.
ಯುವಬಂಗಾಳಿ ಚಳವಳಿ ಉತ್ತರ ಭಾರತದಲ್ಲಿ ಆಧುನಿಕತೆಯ ಗಾಳಿಯು ಬೀಸತೊಡಗಿದ್ದು ಹತ್ತೊಂಬತ್ತನೇ ಶತಮಾನದಲ್ಲಿ.ಕಲ್ಕತ್ತಾ ನಗರವು ಹೊಸ ಆಲೋಚನೆಗಳ ಕೇಂದ್ರ ಬಿಂದುವಾಗಿತ್ತು. 1820 ಮತ್ತು 1830ರ ದಶಕದಲ್ಲಿ ಹೊಸ ಚಳವಳಿಗಳು ಹುಟ್ಟಿಕೊಳ್ಳತೊಡಗಿದವು. ಈಗಾಗಲೇ ಬ್ರಹ್ಮಸಮಾಜವನ್ನು ಗಮನಿಸಲಾಗಿದೆ. ಇದೇ ಕಾಲಘಟ್ಟದbಮತ್ತೊಂದು ಚಳವಳಿಯೆಂದರ ‘ಯುವಬಂಗಾಳಿ ಚಳವಳಿ’. ಇದನ್ನು ಪ್ರಾರಂಭಿಸಿದವರು ಹೆನ್ರಿ ವಿವಿಯನ್ ಡಿರೇಜಿಯೋ (1809-1831).
ಆರ್ಯಸಮಾಜ :
ದಯಾನಂದ ಸರಸ್ವತಿ 1875ರಲ್ಲಿ ದಯಾನಂದ ಸರಸ್ವತಿಯವರು ಆರ್ಯಸಮಾಜವನ್ನು
ಆರಂಭಿಸಿದರು. ಇದು ಕಾಥೇವಾಡದಲ್ಲಿ ಪ್ರಾರಂಭವಾಯಿತು. ದಯಾನಂದ ಸರಸ್ವತಿಯವರು 1824ರಲ್ಲಿ ಗುಜರಾತಿನ ಕಾಥೇವಾಡದಲ್ಲಿ ಜನಿಸಿದರು. ಇವರ ಆರಂಭಿಕ ಹೆಸರು ‘ಮೂಲಶಂಕರ’. ಇವರ ತಂದೆ ಅಂಬಾಶಂಕರ ತಿವಾರಿ ಮತ್ತು ತಾಯಿ ಅಮೃತಾಬಾಯಿ. ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು ‘ಸತ್ಯಾರ್ಥ ಪ್ರಕಾಶ’ ಎಂಬ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾg1877ರಲ್ಲಿ ಆರ್ಯಸಮಾಜದ ಕೇಂದ್ರ ಕಚೇರಿಯನ್ನು ಲಾಹೋರಿನಲ್ಲಿ ತೆರೆದರು. ಆರ್ಯ ಸಮಾಜದ ಮತ್ತೊಂದು ಪ್ರಮುಖ ಕಾರ್ಯಸೂಚಿ ಎಂದರೆ ‘ಶುದ್ಧಿ’ ಚಳವಳಿ. ಹಿಂದೂಧರ್ಮದಿಂದ ಇಸ್ಲಾಂ ಮತ್ತು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ‘ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದು. ಗೋವುಗಳ ರಕ್ಷಣೆಗೆ ‘ಗೋ ರಕ್ಷಣಾ ಸಂಘ’ವನ್ನು ಆರಂಭಿಸಿದರುದಯಾನಂದ ಸರಸ್ವತಿಯವರ ಮರಣಾನಂತರ ಪ್ರಸಿದ್ಧ ‘ದಯಾನಂದ ಆಂಗ್ಲೊ-ವೇದಿಕ್-ಕಾಲೇಜ’ನ್ನು 1886ರಲ್ಲಿ ಪ್ರಾರಂಭಿಸಲಾಯಿತು. ಹಾಗೆಯೆ ಹರಿದ್ವಾರದಲ್ಲಿ ‘ಗುರುಕುಲ ವಿಶ್ವವಿದ್ಯಾಲಯ’ವನ್ನು ಆರಂಭಿಸಲಾಯಿತು. ಪ್ರಾರ್ಥನಾ ಸಮಾಜ ಬ್ರಹ್ಮಸಮಾಜದ ಸುಧಾರಣಾ ಚಳುವಳಿಯು ಬಂಗಾಳದ ಪ್ರದೇಶವನ್ನು ಮೀರಿ ಕ್ರಮೇಣ ಬೇರೆ ಕಡೆಗೆ ಹಬ್ಬಲು ಪ್ರಾರಂಭಿಸಿತು. ಡಾ. ಆತ್ಮಾರಾಮ್ ಪಾಂಡುರಂಗ ಅವರ ನೇತೃತ್ವದಲ್ಲಿ ಮುಂಬೈಯಲ್ಲಿ 1867ರಲ್ಲಿ ಪ್ರಾರ್ಥನಾ ಸಮಾಜ ಎಂಬ ಸಂಘಟನೆ ಪ್ರಾರಂಭವಾಯಿತು.
ಸತ್ಯಶೋಧಕ ಸಮಾಜ ಭಾರತದ ಉಳಿದ ಭಾಗಗಳಲ್ಲಿ ಇದ್ದಂತೆ ಮಹಾರಾಷ್ಟ್ರದಲ್ಲಿಯೂ ಜಾತಿ ಮತ್ತು ಲಿಂಗ ನೆಲೆಗಳ ಶೋಷಣೆಗಳು ವ್ಯಾಪಕವಾಗಿದ್ದವು. 1873ರಲ್ಲಿ ಹುಟ್ಟಿದ ಸತ್ಯಶೋಧಕ ಸಮಾಜವು ಬ್ರಾಹ್ಮಣೇತರ ವರ್ಗಗಳಿಗೆ ಮತ್ತು ಸ್ತ್ರೀಯರಿಗೆ ಸಮಾನತೆಯ ಹಕ್ಕುಗಳನ್ನು ದೊರಕಿಸಿಕೊಡುವ ಚಳವಳಿಯನ್ನು ಪ್ರಾರಂಭಿಸಿತು. ಈ ಸಮಾಜವನ್ನು ಮಹಾತ್ಮ ಜ್ಯೋತಿಭಾ ಫುಲೆಯವರು ಸ್ಥಾಪಿಸಿದರು. ಸೈದ್ಧಾಂತಿಕ ಹೋರಾಟವನ್ನು ಕಟ್ಟುವ ಹಿನ್ನೆಲೆಯಲ್ಲಿ ‘ಗುಲಾಮಗಿರಿ’ ಶೇಟ್ಕಾರ್ಯಚಾ ಅಸೂದ್ ಎನ್ನುವ ಗ್ರಂಥ ರಚಿಸಿದರು. ಶಾಲೆಗಳನ್ನು ಪ್ರಾರಂಭಿಸಿ ಶೂದ್ರರಿಗೆ ಮತ್ತು ಹೆಣ್ಣುಮಕ್ಕಳಿUವಿದ್ಯೆಯನ್ನು ನೀಡಿದರು. ಮಾಲಿ ಸಮುದಾಯಕ್ಕೆ ಸೇರಿದ್ದ ಫುಲೆಯವರು ತಮ್ಮ ಬಾವಿಯಲ್ಲಿ ಅಸ್ಪøಶ್ಯರು ಮತ್ತು ಎಲ್ಲ ಜಾತಿಯವರಿಗೂ ನೀರು ಸೇದಿಕೊಳ್ಳಲು ಅವಕಾಶವನ್ನು ಕೊಟ್ಟರು. ಫುಲೆಯವರ ಈ ಪ್ರಯತ್ನದಲ್ಲಿ ಅವರ ಪತ್ನಿ ಸಾವಿತ್ರಿಬಾಯಿ ಫುಲೆಯವರು ಒತ್ತಾಸೆಯಾಗಿದ್ದರು. ಇವರ ಪ್ರಯತ್ನದಿಂದ ಹೆಣ್ಣುಮಕ್ಕಳಿಗೆ ವಸತಿ ನಿಲಯವನ್ನು ಸ್ಥಾಪಿಸಲಾಯಿತು. ಇವರ ಆಶಯಗಳಿಂದ ಪ್ರೇರಣೆ ಪಡೆದವರಲ್ಲಿ ಬಾಬಾಸಾಹೇಬ ಅಂಬೇಡ್ಕರ್ರು ಮುಖ್ಯರು.
ಆಲಿಘರ್ ಸುಧಾರಣಾ ಚಳವಳಿ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಮುಸ್ಲಿಂ ಸಮಾಜದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಅಲೆಯು ಪ್ರಾರಂಭವಾಯಿತು 1863ರಲ್ಲಿ ಆರಂಭಗೊಂಡ ಮಹಮದನ್ ಲಿಬರ್ಟಿ ಸೊಸೈಟಿಯು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಮಾಡತೊಡಗಿತು. ಈ ಚರ್ಚೆಗಳಲ್ಲಿ ಉನ್ನತ ಮತ್ತು ಮಧ್ಯಮ ವರ್ಗದ ಮುಸ್ಲಿಮರು ಭಾಗವಹಿಸುವ ಮೂಲಕ ಇಂಗ್ಲಿಷ್ ಶಿಕ್ಷಣದ ಮಹತ್ವವನ್ನು ಅರಿಯತೊಡಗಿದರು. ಸರ್ ಸಯ್ಯದ್ ಅಹಮದ್ ಖಾನ್ರ ಪ್ರಯತ್ನಗಳಿಂದ ಹೊಸ ವಿಚಾರಗಳ ಹುಡುಕಾಟದ ಪ್ರಯತ್ನವು ಆಲಿಘರ್ ಚಳವಳಿಯಾಗಿ ರೂಪುಗೊಂಡಿತುತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು 1875ರಲ್ಲಿ ಮಹಮದನ್ ಆಂಗ್ಲೋ- ಓರಿಯಂಟಲ್ ಕಾಲೇಜನ್ನು ಆಲಿಘರ್ನಲ್ಲಿ ಸ್ಥಾಪಿಸಿದರು. ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕøತಿ ಕುರಿತು ಚಿಂತನೆಗಳನ್ನು ಹರಡಲು ಈ ಸಂಸ್ಥೆಯನ್ನು ಬಳಸಿದರು. ಈ ಸಂಸ್ಥೆಯೇ ಆನಂತರದಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಯಿತು.
ರಾಮಕೃಷ್ಣ ಮಿಷನ್ (ರಾಮಕೃಷ್ಣ ಮಠ) ಸ್ವಾಮಿ ವಿವೇಕಾನಂದರು 1897ರಲ್ಲಿ ಕಲ್ಕತ್ತಾದ ಬಳಿಯ ಬೇಲೂರಿನಲ್ಲಿ ರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿದರು. ಹಾಗೆಯೇ ಉತ್ತರಾಂಚಲದ ಆಲ್ಮೋರಾ ಬಳಿಯ ಮಾಯಾವತಿಯಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿದರುರಾಮಕೃಷ್ಣ ಪರಮಹಂಸರು (1834-1886) ಕಾಳಿಮಾತೆಯ ಆರಾಧಕರು ಮತ್ತು ಕಲ್ಕತ್ತಾದ ಕಾಳಿಮಂದಿರದಲ್ಲಿ ಅರ್ಚಕರಾಗಿದ್ದರುವಿವೇಕಾನಂದರು 1893ರಲ್ಲಿ ಅಮೆರಿಕದ ಚಿಕಾಗೊ ನಗರದಲ್ಲಿ ನಡೆದ ವಿಶ್ವಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ಮಾಡಿದ ಭಾಷಣದಿಂದ ಪಾಶ್ಚಿಮಾತ್ಯರು ಭಾರತದ ಸಾಂಸ್ಕøತಿಕ ಹಿರಿಮೆಯನ್ನು ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು. ಹಾಗೆಯೇ 1900ರಲ್ಲಿ ಪ್ಯಾರಿಸ್ನಲ್ಲಿ ನಡೆದ ‘ಕಾಂಗ್ರೆಸ್ ಆಫ್ ರಿಲಿಜಿಯನ್ಸ್’ ಸಮ್ಮೇಳನದಲ್ಲೂ ಅಮೆರಿಕಾದಲ್ಲಿ ಮಾತನಾಡಿದ ರೀತಿಯಲ್ಲೇ ಮಾತನಾಡಿ ಜನರನ್ನು ಸಮ್ಮೋಹನಗೊಳಿಸಿದರು.
ಥಿಯೋಸಾಫಿಕಲ್ ಸೊಸೈಟಿ : ಮೂಲತಃ ಈ ಸಂಸ್ಥೆಯನ್ನು ಮೇಡಂ ಬ್ಲವಾಟ್ಸ್ಕೆÀ್ಕ ಮತ್ತು ಅಮೆರಿಕನ್ನರಾದ ಕರ್ನಲ್ ಎಚ್.ಎಸ್.ಅಲ್ಕಾಟ್ ಪ್ರಾರಂಭಿಸಿದರು. ಅನಂತರ ಇವರು ಭಾರತಕ್ಕೆ ಬಂದು ಮದರಾಸಿನ ಹತ್ತಿರವಿರುವ ಅಡ್ಯಾರ್ ಎಂಬಲ್ಲಿ ಇದರ ಕೇಂದ್ರ ಕಚೇರಿಯನ್ನು 1886ರಲ್ಲಿ ಆರಂಭಿಸಿದರು. ಐರಿಶ್ ಮಹಿಳೆÉ ಅನಿಬೆಸೆಂಟರು 1893ರಲ್ಲಿ ಭಾರತಕ್ಕೆ ಬಂದ ನಂತರ ಥಿಯೋಸಾಫಿಕಲ್ ಸೊಸೈಟಿಯ ಚಳವಳಿಯು ಗಮನಾರ್ಹವಾಗಿ ಬೆಳೆಯತೊಡಗಿತು. ಥಿಯೋಸಾಫಿಕಲ್ ಸೊಸೈಟಿಯ ಅನುಯಾಯಿಯಾಗಿ 1893ರಲ್ಲಿ ಈಕೆ ಭಾರತಕ್ಕೆ ಬಂದರು. ಇವರ ಪ್ರಮುಖ ಸಾಧನೆಗಳೆಂದರೆ ‘ಭಗವದ್ಗೀತೆ’ಯನ್ನು ಇಂಗ್ಲಿಷಿಗೆ ಅನುವಾದ ಮಾಡಿದರು. ಇದರಿಂದ ‘ಶ್ವೇತ ಸರಸ್ವತಿ’ ಎನಿಸಿಕೊಂಡರು. ಎಲ್ಲ ವರ್ಗಗಳಿಗೂ ಶಿಕ್ಷಣ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಇದಕ್ಕೆ ಶಾಲೆಗಳನ್ನು ತೆರೆದರು. 1898ರಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಬನಾರಸ್ನಲ್ಲಿ ಪ್ರಾರಂಭಿಸಿದರು. ಮುಂದೆ ಇದೇ ಸಂಸ್ಥೆಯು ಮದನಮೋಹನ ಮಾಳವೀಯ ಅವರ ಪ್ರಯತ್ನದಿಂದ 1916ರಲ್ಲಿ ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ವಾಗಿ ಪರಿವರ್ತನೆಯಾಯಿತು. ಸಮಕಾಲೀನ ಸಮಸ್ಯೆಗಳನ್ನು ಚರ್ಚೆ ಮತ್ತು ಸಂವಾದಕ್ಕೆ ಈಡು ಮಾಡಲು ‘ನ್ಯೂ ಇಂಡಿಯಾ’ ಮತ್ತು ‘ಕಾಮನ್ ವ್ಹೀಲ್’ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. 1916ರಲ್ಲೇ ‘ಹೋಮ್ ರೂಲ್ಲೀಗ್’ನ್ನು ಪ್ರಾರಂಭಿಸಿ ಮದರಾಸು ಪ್ರಾಂತ್ಯದಲ್ಲಿ ‘ಹೋಂರೂಲ್’ ಚಳವಳಿಗೆ ಚಾಲನೆಯನ್ನು ನೀಡಿದರು.
‘ಹೋಂರೂಲ್’: ಬ್ರಿಟನ್ನಿನ ಹಿಡಿತದಲ್ಲಿದ್ದ ಐರ್ಲೆಂಡ್ ಮತ್ತು ಅಲ್ಲಿನ ಜನ ತಮ್ಮ ಆಡಳಿತವನ್ನು ತಾವೇ ನಡೆಸಿಕೊಳ್ಳುವ ಹಕ್ಕನ್ನು ಸಾಧಿಸಲು ಹೋಂರೂಲ್ ಆಂದೋಲನವನ್ನು ನಡೆಸಿದ್ದರು. ಇದರಿಂದ ಪ್ರಭಾವಿತರಾದ ಅನಿಬೆಸೆಂಟ್ ಭಾರತದಲ್ಲಿಯೂ ಹೋಂರೂಲ್ ಚಳುವಳಿಯನ್ನು ಆರಂಭಿಸಿದರು. 1916ರಲ್ಲಿ ಎರಡು ಹೋಂರೂಲ್ ಲೀಗ್ಗಳು ಅಸ್ತಿತ್ವಕ್ಕೆ ಬಂದವು. ಒಂದು ತಿಲಕರ ನೇತೃತ್ವದಲ್ಲಿ ಪೂನಾವನ್ನಯ ಕೇಂದ್ರವನ್ನಾಗಿಸಿಕೊಂಡಿತು. ಅದು ಮಹಾರಾಷ್ಟ್ರ, ಉತ್ತರಕರ್ನಾಟಕ, ಕೇಂದ್ರೀಯ ಪ್ರಾಂತ್ಯಗಳು ಮತ್ತು ಬಿರಾರ್ ಪ್ರದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿತ್ತು. ಮತ್ತೊಂದು ಹೋಂರೂಲ್ಲೀಗ್ ಆನಿಬೆಸೆಂಟರ ನೇತೃತ್ವದಲ್ಲಿ ಮದ್ರಾಸನ್ನು ಕೇಂದ್ರವನ್ನಾಗಿಸಿಕೊಂಡಿತು. ತಿಲಕರು ‘ಮರಾಠ’ ಮತ್ತು ‘ಕೇಸರಿ’ ಪತ್ರಿಕೆಗಳನ್ನು ನಡೆಸಿದರೆ, ಬೆಸೆಂಟರು ‘ನ್ಯೂ ಇಂಡಿಯಾ’, ‘ಕಾಮನ್ವೆಲ್ತ್’ ಮತ್ತು ‘ಯಂಗ್ ಇಂಡಿಯಾ’ ಪತ್ರಿಕೆಗಳ ಮೂಲಕ ಪ್ರಚಾರ ಮಾಡಿದರು.
ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ ಶ್ರೀ ನಾರಾಯಣಗುರು ಅವರು 1903ರಲ್ಲಿ ಈ ಸುಧಾರಣಾ ಸಂಘಟನೆಯನ್ನು ಆರಂಭಿಸಿದರು. ಇವರು ಕೇರಳದ ಈಳವು ಎಂಬಲ್ಲಿ ಹುಟ್ಟಿದರು. ನಾರಾಯಣಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು (ಔಟಿe ಅಚಿsಣe, ಔಟಿe ಖeಟigioಟಿ ಂಟಿಜ ಔಟಿe ಉoಜ ಈoಡಿ ಒಚಿಟಿ) ಎಂಬುದು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು.
ಪೆರಿಯಾರ್ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಾಹ್ಮಣೇತರ ಚಳವಳಿಯೆಂಬ ಹೊಸ ಬಗೆಯ ಚಳವಳಿ ದಕ್ಷಿಣ ಭಾರತದಲ್ಲಿ ಆರಂಭವಾಯಿತು. ಬಹುಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರ್ಕಾರಿ ರಂಗದಲ್ಲಿ ಇದ್ದ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿದ್ಯ ಸಿಗಬೇಕೆಂದು ಹೋರಾಟವನ್ನು ಆರಂಭಿಸಿದರು. ತಮಿಳುನಾಡಿನಲ್ಲಿ 1916ರಲ್ಲಿ ಪ್ರಾರಂಭವಾದ ‘ಜಸ್ಟೀಸ್ ಪಾರ್ಟಿ’ಯು ಈ ಚಳವಳಿಯನ್ನು ಮುನ್ನಡೆಸಿತು. ಜಸ್ಟೀಸ್ ಪಾರ್ಟಿಯ ಮೂಲಕ ಬ್ರಾಹ್ಮಣೇತರ ಚಳವಳಿಯು ಹೊಸರೂಪವನ್ನು ಪಡೆಯಿತು. ಇದು ಹೆಚ್ಚು ಕ್ರಾಂತಿಕಾರಕವಾದ ಹೆಜ್ಜೆಯಾಗಿತ್ತು. ಆ ಹೊಸರೂಪವೇ ಇ.ವಿ. ರಾಮಸ್ವಾಮಿ ನಾಯ್ಯರ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ಆತ್ಮಗೌರವ ಚಳವಳಿ’ (Seಟಜಿ ಖesಠಿeಛಿಣ ಒovemeಟಿಣ). 1925ರಲ್ಲಿ ಕಾಂಗ್ರೆಸ್ ಪಕ್ಷದಿಂದÀ ಹೊರಬಂದ ರಾಮಸ್ವಾಮಿಯವರು 1926ರಲ್ಲಿ ಸೆಲ್ಫ್ ರೆಸ್ಪೆಕ್ಟ್ ಲೀಗ್ ಅನ್ನು ಆರಂಭಿಸಿದರು. ಇವರನ್ನು ಜನರು ಪ್ರೀತಿಯಿಂದ ಪೆರಿಯಾರ್ (ಹಿರಿಯರು) ಎಂದು ಕರೆದರು. 1924ರಲ್ಲಿ ಕೇರಳದ ವೈಕಂನಲ್ಲಿ ಅಸ್ಪøಶ್ಯರಿಗೆ ದೇವಾಲಯದ ಪ್ರವೇಶದ ಹಕ್ಕಿನ ಹೋರಾಟದಲ್ಲಿ ಭಾಗವಹಿಸಿದ್ದರು. 1939ರಲ್ಲಿ ಜಸ್ಟೀಸ್ ಪಕ್ಷದ ಅಧ್ಯಕ್ಷರಾದರು. “ದ್ರಾವಿಡ ಕಳಗಂ” ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ‘ಜಸ್ಟೀಸ್’ ಪತ್ರಿಕೆಯನ್ನು ಹುಟ್ಟುಹಾಕಿದರು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು:: ದತ್ತು ಮಕ್ಕಳಿಗೆ ಹಕ್ಕಿಲ್ಲ: ಈ ನೀತಿಯನ್ನು ಇಂಗ್ಲಿಷರ ಕಾಲದಲ್ಲಿ ಲಾರ್ಡ್ ಡಾಲ್ ಹೌಸಿಯು ಜಾರಿಗೆ ತಂದಿದ್ದನು. ಯಾವುದೇ ದೇಶೀಯ ಸಂಸ್ಥಾನದ ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಮಕ್ಕಳಿಗೆ ನೀಡುವಂತಿರಲಿಲ್ಲ. ಇದರಿಂದಾಗಿ ಆ ಸಂಸ್ಥಾನವು ಸಹಜವಾಗಿ ಇಂಗ್ಲಿಷರ ಆಳ್ವಿಕೆಗೆ ಒಳಪಡುತ್ತಿದ್ದವು.
ರಾಜಕೀಯ ಕಾರಣಗಳು: ಬ್ರಿಟಿಷರು ಜಾರಿಗೆ ತಂದಿದ್ದ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯಿಂದಾಗಿ ಹಲವು ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಈ ನೀತಿಯಿಂದಾಗಿ ಸತಾರ, ಜೈಪುರ, ಝಾನ್ಸಿ, ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು.
ದತ್ತು ಮಕ್ಕಳಿಗೆ ಹಕ್ಕಿಲ್ಲ: ಈ ನೀತಿಯನ್ನು ಇಂಗ್ಲಿಷರ ಕಾಲದಲ್ಲಿ ಲಾರ್ಡ್ ಡಾಲ್ ಹೌಸಿಯು ಜಾರಿಗೆ ತಂದಿದ್ದನು. ಯಾವುದೇ ದೇಶೀಯ ಸಂಸ್ಥಾನದ ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಮಕ್ಕಳಿಗೆ ನೀಡುವಂತಿರಲಿಲ್ಲ. ಇದ- ರಿಂದಾಗಿ ಆ ಸಂಸ್ಥಾನವು ಸಹಜವಾಗಿ ಇಂಗ್ಲಿಷರ ಆಳ್ವಿಕೆಗೆ ಒಳಪಡುತ್ತಿದ್ದವು
ದಂಗೆಯ ತಕ್ಷಣದ ಕಾರಣ ಇಂಗ್ಲಿಷ್ ಸೇನೆಯಲ್ಲಿದ್ದ ಹೆಚ್ಚಿನ ಪ್ರಮಾಣದ ಭಾರತೀಯ ಸಿಪಾಯಿಗಳು ತಾವೆಲ್ಲರೂ ಒಂದಾಗಿ ಹೋರಾಡಿದರೆ ಇಂಗ್ಲಿಷರನ್ನು ಭಾರತದಿಂದ ಓಡಿಸಬಹುದು ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದರು. ಈ ಸನ್ನಿವೇಶದಲ್ಲಿ ಸೈನಿಕರಿಗೆ ‘ರಾಯಲ್ ಎನ್ಫೀಲ್ಡ್’ ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು. ಹಿಂದುಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು. ಈ ವದಂತಿಯು ದಂಗೆಗೆ ತಕ್ಷಣದ ಕಾರಣವಾಯಿತುಬ್ಯಾರಕ್ಪುರದಲ್ಲಿನ ಸೈನಿಕ ಪಡೆಯಲ್ಲಿ ಹಬ್ಬಿದ ಈ ವದಂತಿಯು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲಿಷರು ಆದೇಶಿಸಿದಾಗ ಇದನ್ನು ತಿರಸ್ಕರಿಸಿ ಮೇಲಾಧಿಕಾರಿಗಳ ವಿರುದ್ಧ ಬ್ಯಾರಕ್ಪುರದ ಸೈನಿಕರು ಬಂಡಾಯವೆದ್ದರು. ಇದೇ ಸಂದರ್ಭದಲ್ಲಿ ಮಂಗಲ ಪಾಂಡೆ ಎಂಬ ಸೈನಿಕನು ಬ್ರಿಟಿಷ್ ಸೈನ್ಯದ ಅಧಿಕಾರಿಯೊಬ್ಬನನ್ನು ಕೊಂದನು.
ದಂಗೆಯ ಹರಡುವಿಕೆ : ಮೀರತ್ ಬ್ರಿಟಿಷರ ಪ್ರಬಲ ಸೇನಾ ನೆಲೆಯಾಗಿತ್ತು. ಇಲ್ಲಿಯೂ ಕೂಡಾ ಇಂಗ್ಲಿಷರು ಭಾರತೀಯ ಸೈನಿಕರಿಗೆ ತುಪಾಕಿಗಳನ್ನು ಬಳಸಲು ಆದೇಶಿಸಿದಾಗ ಭಾರತೀಯ ಸೈನಿಕರು ಅದನ್ನು ನಿರಾಕರಿಸಿದರು. ಆಗ ಸಿಪಾಯಿಗಳನ್ನು ಬಂಧಿಸಲಾಯಿತು. ಇದರಿಂದಾಗಿ ಮೀರತ್ನಲ್ಲಿ ದಂಗೆ ಉಂಟಾಯಿತು. ಪರಿಣಾಮವಾಗಿ ಸೈನಿಕರು ಸೆರಮನೆಗೆ ನುಗ್ಗಿ ಈಗಾಗಲೇ ಬಂಧಿತರಾಗಿದ್ದ ಭಾರತೀಯ ಸಿಪಾಯಿಗಳನ್ನು ಬಿಡುಗಡೆಗೊಳಿಸಿದರು. ಇದು ಸ್ವಾತಂತ್ರ್ಯ ಸಂಗ್ರಾಮದ ಬೀಜಾಂಕುರಕ್ಕೆ ನಾಂದಿಯಾಯಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದ ಕೆರಳಿದ ಝಾನ್ಸಿರಾಣಿ ಲಕ್ಷ್ಮಿಬಾಯಿಯು ಇಂಗ್ಲಿಷರ ವಿರುದ್ಧ ಯುದ್ದ ಸಾರಿದಳು. ಯುದ್ದ ಮಾಡಿ ಗ್ವಾಲಿಯರ್ನ್ನು ವಶಕ್ಕೆ ಪಡೆದಳು.
ದಂಗೆಯ ವಿಫಲತೆಗೆ ಕಾರಣಗಳು : 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಹಲವಾರು
ಕಾರಣಗಳಿಂದ ವಿಫಲವಾಯಿತು. ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ. ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ರಾಜರ/ರಾಣಿಯರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು. ಭಾರತೀಯರ ಪ್ರೀತಿ, ಬೆಂಬಲ, ವಿಶ್ವಾಸವಿಲ್ಲದಿದ್ದರೆ ನಾವು ಶಾಂತಿಯಿಂದ ಆಳ್ವಿಕೆ ಮಾಡಲು ಸಾಧ್ಯವಿಲ್ಲವೆಂಬುದನ್ನು ಬ್ರಿಟಿಷರು ಅರಿತರು. ಬ್ರಿಟಿಷರ ಬಗೆಗೆ ಇದ್ದ ಭಾರತೀಯರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಮಾರ್ಗೊಪಾಯಗಳನ್ನು ಸೃಷ್ಟಿಸಿಕೊಳ್ಳದಿದ್ದುದು ಇದಕ್ಕೇ ಕಾರಣವೆಂದು ಬ್ರಿಟಿಷರು ಮನಗಂಡರು, ಹೀಗಾಗಿ ಈ ಘಟನೆಯ ನಂತರ ‘ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ‘ (Poಟiಛಿಥಿ oಜಿ ಚಿssoಣiಚಿಣioಟಿ) ನೀತಿಯನ್ನು ಜಾರಿಗೊಳಿಸಿದರು ಇದು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿಯನ್ನು ನೀಡಿತು.
ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಬಡತನದ ದರ ಶೇಕಡಾ 21.9 ಆಗಿದ್ದು ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದನ್ನು ಸೂಚಿಸುತ್ತದೆ. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ 2001ರಲ್ಲಿ ಡಿ.ಎಂ. ನಂಜುಂಡಪ್ಪ ಸಮಿತಿಯು ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಕುರಿತು ವರದಿ ನೀಡಿದೆ. ಇದಕ್ಕೆ ಪೂರಕವಾಗಿ ಸಂವಿಧಾನಕ್ಕೆ ವಿಧಿ 371 (ಜೆ) ಸೇರ್ಪಡೆ ಮಾಡುವುದರ ಮೂಲಕ ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. 2007 ನವಂಬರ್ 26 ಮುಂಬೈಯ ತಾಜ್ ಹೋಟೆಲ್ ಮತ್ತು ರೈಲು ನಿಲ್ದಾಣಗಳಲ್ಲಿ ದಾಳಿ,
ಭಾರತದ ವಿದೇಶಾಂಗ ನೀತಿ
ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದ ಸಾರ್ವಭೌಮ ರಾಷ್ಟ್ರವಾಗಿದ್ದು, ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿ ತನ್ನ ಮೂಲಕ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೈತ್ರಿಯನ್ನು ಬಯಸುತ್ತದೆ. ಭಾರತದ ವಿದೇಶಾಂಗ ನೀತಿಯ ಪ್ರಮುಖ ಉದ್ದೇಶಗಳೆಂದರೆ
1. ರಾಷ್ಟ್ರದ ಭದ್ರತೆ.
2. ರಾಷ್ಟ್ರದ ಆರ್ಥಿಕ ಸಂವರ್ಧನೆ.
3. ನಮ್ಮ ದೇಶದ ಸಾಂಸ್ಕøತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವುದು.
4.ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿ ರಾಷ್ಟ್ರಗಳನ್ನು ನಿರ್ಬಂಧಿಸುವುದು ಅಥವಾ ಹತ್ತಿಕ್ಕುವುದು.
5. ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು. 1946ರ ಸೆಪ್ಟೆಂಬರ್ 7 ರಂದು ಜವಾಹರಲಾಲ್ ನೆಹರು ಅವರು ನೀಡಿದ ರೇಡಿಯೋ ಭಾಷಣದಲ್ಲಿ ದೇಶಾಂಗ ನೀತಿಯ ರೂಪುರೇಷೆಗಳ ಬಗ್ಗೆ ಅರಿವು ಮೂಡಿಸಿದರುಅವರ ಈ ಭಾಷಣವು ಅಮೆರಿಕಾ, ರಷ್ಯಾ, ನಾ ಮುಂತಾದ ರಾಷ್ಟ್ರಗಳೊಡನೆ ಭಾರತವು ರೂಪಿಸಿಕೊಳ್ಳುವ ಸಂಬಂಧಗಳ ಬಗ್ಗೆಯೂ ಸೂಚನೆಗಳನ್ನು ನೀಡಿತು. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರು ಪ್ರಧಾನ ಮಂತ್ರಿ ಹುದ್ದೆಯ ಜೊತೆಗೆ ವಿದೇಶಾಂಗÀ ಖಾತೆಯನ್ನೂ ಹೊಂದಿ ಸಮರ್ಥವಾಗಿ ನಿಭಾಯಿಸಿದರು. ಈ ಕಾರಣಗಳಿಂದಾಗಿ ಭಾರತದ ವಿದೇಶಾಂಗ ನೀತಿಯನ್ನು ನೆಹರೂರವರ ವಿದೇಶಾಂಗ ನೀತಿ ಎಂದು ವರ್ಣಿಸಿದ್ದಾರೆ.
ಭಾರತದ ವಿದೇಶಾಂಗ ನೀತಿಯ ಮೂಲಭೂತ ಅಂಶಗಳು
1. ಪಂಚಶೀಲ ತತ್ವಗಳು : ವಿಶ್ವದ ರಾಷ್ಟ್ರಗಳು ವಿಭಿನ್ನ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳನ್ನು ಹೊಂದಿದ್ದರೂ ಸಹ ಪರಸ್ಪರ ಸಹಕಾರ ಸಹಬಾಳ್ವೆಯನ್ನು ಅಳವಡಿಸಿಕೊಂಡಿವೆ. ಇದೇ ಆಧಾರದ ಮೇಲೆ 1954 ಜೂನ್ ತಿಂಗಳಲ್ಲಿ ವಿಶ್ವಶಾಂತಿ ದೃಷ್ಟಿಯಿಂದ ಚೀನಾ ಮತ್ತು ಭಾರತ (ಅಂದಿನ ಚೀನಾದ ಪ್ರಧಾನಿ ಚೌ.ಎನ್. ಲಾಯ್ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ) ಪರಸ್ಪರ ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗಾಗಿ ಐದು ತತ್ವಗಳನ್ನು ಅಳವಡಿಸಿಕೊಂಡವು. ಅವುಗಳೇ ಪಂಚಶೀಲ ತತ್ವಗಳು, ಅವುಗಳೆಂದರೆ,
1. ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ.
2. ಪರಸ್ಪರ ಆಕ್ರಮಣ ಮಾಡದಿರುವುದು.
3. ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
4. ಪರಸ್ಪರ ಸಹಕಾರ ಮತ್ತು ಸಮಾನತೆ
5. ಶಾಂತಿಯುತ ಸಹಬಾಳ್ವೆ. ಇವು ನಮ್ಮ ದೇಶದ ವಿದೇಶಾಂಗ ನೀತಿಯ ತಳಹದಿ ಎನ್ನಬಹುದಾಗಿದೆ. 2. ಅಲಿಪ್ತ ನೀತಿ : ದ್ವಿತೀಯ ಮಹಾಯುದ್ಧದ ಬಳಿಕ ವಿಶ್ವವು ಎರಡು ಶಕ್ತಿ ಬಣಗಳಾಗಿ ವಿಭಾಗವಾಗಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನ ನೇತೃತ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಹಾಗೂ ಸೋವಿಯತ್ ರಷ್ಯಾ ಹಿರಿತನದ ಕಮ್ಯುನಿಸ್ಟ್ ರಾಜ್ಯಗಳು ಎಂಬುದಾಗಿ ಜಗತ್ತಿನ ಧುೃವೀಕರಣ ಕಂಡು ಬಂದಿತು. ಅಲ್ಲದೆ ಎರಡೂ ಬಣಗಳ ನಡುವೆ ಶೀತಲ ಸಮರವೂ ಪ್ರಾರಂಭವಾಯಿತು. ಆ ದಿನಗಳಲ್ಲಿ ಭಾರತವು ಈ ಎರಡರಲ್ಲಿ ಯಾವ ಶಕ್ತಿ ಬಣಕ್ಕೂ ಸೇರದೆ ಅಲಿಪ್ತನೀತಿ ಅನುಸರಿಸಿ ತಟಸ್ಥವಾಯಿತು. ಜೊತೆಗೆ ಈ ಎರಡು ಬಣಗಳ ವಿಶ್ವಾಸಗಳಿಸಿಕೊಳ್ಳುವುದರ ಮೂಲಕ ಅಮೆರಿಕಾದಿಂದ ಆರ್ಥಿಕ ನೆರವನ್ನು ಮತ್ತು ಸೋವಿಯತ್ ರಷ್ಯಾದಿಂದ ಭದ್ರಾತಾ ನೆರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. Sಂಂಖಅ - ಸಾರ್ಕ್ Souಣh ಂsiಚಿಟಿ ಂssoಛಿiಚಿಣioಟಿ ಜಿoಡಿ ಖegioಟಿಚಿಟ ಅooಠಿeಡಿಚಿಣioಟಿ. ಸಾರ್ಕ್ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘಟನೆಯಾಗಿದೆ. ಡಿಸೆಂಬರ್ 8, 1985ರಲ್ಲಿ ಇದು ಅಸ್ತಿತ್ವಕ್ಕೆ ಬಂದಿದೆ. ಭಾರತ, ಶ್ರೀಲಂಕಾ, ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. 1986ರಲ್ಲಿ ಸಾರ್ಕ್ ಸಮ್ಮೇಳನವು ನಮ್ಮ ರಾಜ್ಯದಲ್ಲಿ ನಡೆದಿದೆ. ಭಾರತ ಸಂವಿಧಾನವು ತನ್ನ 51ನೇ ವಿಧಿಯ ಮೂಲಕ ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವಂತಹ ವಿದೇಶಾಂಗ ನೀತಿಯನ್ನು ಸೂಚಿಸುತ್ತದೆ.
ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಭಾರತ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಂಬಂಧವನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚೀನಾದ ರೇಷ್ಮೆಯ ಬಗ್ಗೆ ಉಲ್ಲೇಖವಾಗಿರುತ್ತದೆ. ಈ ರೀತಿಯ ಐತಿಹಾಸಿಕ ಸಂಬಂಧವನ್ನು ಹೊಂದಿದ್ದ ಭಾರತ ಮತ್ತು ಚೀನಾ ಸಾರ್ವಭೌಮ ರಾಷ್ಟ್ರಗಳಾಗಿ ಉದಯಿಸಿದ ನಂತರದಲ್ಲಿ ಪಂಚಶೀಲ ತತ್ವಗಳ ಮೂಲಕ ಎರಡು ರಾಷ್ಟ್ರಗಳ ಸಂಬಂಧಗಳನ್ನು ವೃದ್ಧಿಸುವ ಪ್ರಯತ್ನ ಮಾಡಲಾಯಿತು. ಭಾರತ-ಸೋವಿಯತ್ ಒಪ್ಪಂದವು ರಾಜಕೀಯ, ಆರ್ಥಿಕ ಹಾಗÀೂ ಇತರ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿಯನ್ನು ಕಂಡಿತು. (1962ರಲ್ಲಿನ ಚೈನಾ ದಾಳಿಯನ್ನು ಸೋವಿಯತ್ ರಷ್ಯಾ ಖಂಡಿಸಿತ್ತು. 1961 ರಲ್ಲಿ ಗೋವಾ ವಿಮೋಚನೆಯ ಸಂದರ್ಭದಲ್ಲಿ ಸೋವಿಯತ್ ರಷ್ಯಾ ಭಾರತಕ್ಕೆ ವಿಶ್ವ ಸಂಸ್ಥೆಯಲ್ಲಿ ಸಹಕಾರ ನೀಡಿತ್ತು.) 1966ರ ತಾµ್ಕÉಂಟಿನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ರಷ್ಯಾ ಸÀಹಕರಿಸಿತು. 1971 ರಲ್ಲಿ ಭಾರತ ಮತ್ತು ರಷ್ಯಾ 20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದವು. ಭಾರತದ ಭಿಲಾೈ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸೋವಿಯತ್ ರಷ್ಯಾ ಸಹಕರಿಸಿತ್ತು. ಸಂವಿಧಾನದ ವಿಧಿ 39ರಲ್ಲಿ ಸರ್ಕಾರಗಳು ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ತಿಳಿಸುತ್ತದೆ. 45ನೇ ವಿಧಿ ನಿರ್ದಿಷ್ಟವಾಗಿ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೇಳುತ್ತದೆ. ಆದರೆ ಸಂವಿಧಾನದ 86ನೇ ತಿದ್ದುಪಡಿಯ ನಂತರ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನದ ವಿಧಿ 21ಎ ನಲ್ಲಿ ತಿಳಿಸಲಾಗಿದೆ. 1993ರಲ್ಲಿ ಉನ್ನಿಕೃಷ್ಣನ್ v/s ಆಂಧ್ರಪ್ರದೇಶ ಸರ್ಕಾರದ ಮೊಕದ್ದಮೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ನ ತೀರ್ಪು 21ಎ ವಿಧಿಯಲ್ಲಿ 6 ರಿಂದ 14 ವರ್ಷ ವಯೋಮಿತಿಯೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದನ್ನು ಮೂಲಭೂತ ಹಕ್ಕು ಎಂದು ತಿಳಿಸುತ್ತದೆ. ಅಸ್ಪøಶ್ಯತೆ ನಿವಾರಣೆಗೆ ಕಾನೂನು ಕ್ರಮಗಳು ಅಸ್ಪøಶ್ಯತೆಯ ಕಳಂಕವನ್ನು ತೊಡೆದು ಹಾಕಲು ಜ್ಯೋತಿಭಾ ಫುಲೆ, ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದವರು ತೀವ್ರ ಪ್ರಯತ್ನಪಟ್ಟರು. ಇಷ್ಟಾದರೂ ಇದನ್ನು ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ. ಇದನ್ನು ತಡೆಯಲು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಸಂವಿಧಾನದ 17ನೆಯ ವಿಧಿಯು ಅಸ್ಪøಶ್ಯತಾ ಆಚರಣೆಯನ್ನು ನಿಷೇಧಿಸಿದೆ. ಭಾರತ ಸರ್ಕಾರ ‘ಅಸ್ಪøಶ್ಯತಾ ಅಪರಾಧಗಳ ಕಾಯ್ದೆ’ಯನ್ನು 1955ರಲ್ಲಿ ಜಾರಿಗೊಳಿಸಿದೆ. ಇದರಲ್ಲಿ ಕಂಡುಬಂದ ಕೆಲವು ಲೋಪ ದೋಷಗಳನ್ನು ತಿದ್ದುಪಡಿಮಾಡಿ ‘ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ’ ಎಂದು 1976ರಲ್ಲಿ ಮಾರ್ಪಾಡುಗೊಳಿಸಲಾಯಿತು. ಸಂವಿಧಾನದ 15, 16, 17, 38 ಮತ್ತು 39ನೇ ವಿಧಿಗಳು ಭಾರತೀಯ ಪ್ರಜೆಗಳ ನಡುವೆ ಯಾವುದೇ ಬಗೆಯ ತಾರತಮ್ಯ ಮಾಡಬಾರದು ಎಂದು ತಿಳಿಸುತ್ತವೆ. * 16(4) 320(4) ನೇ ವಿಧಿಗಳು ಉದ್ಯೋಗ ವಲಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ ಘೋಷಿಸಿವೆ. * 330, 332, 334 ನೇ ವಿಧಿಗಳು ರಾಜಕೀಯ ಕ್ಷೇತ್ರದಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಘೋಷಿಸಿವೆ. * 29 ನೇ ವಿಧಿ ಶೈಕ್ಷಣಿಕ ಸೌಲಭ್ಯ ಘೋಷಿಸಿದೆ. * 25 ನೇ ವಿಧಿ ಜನರೆಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಮುಕ್ತ ಅವಕಾಶ ಘೋಷಿಸಿದೆ.
ಭಾರತದ ಸ್ಥಾನ ಮತ್ತು ವಿಸ್ತೀರ್ಣ: ಭಾರತವು ಭೌಗೋಳಿಕವಾಗಿ ಉತ್ತರ ಗೋಳಾರ್ಧ ಹಾಗೂ ಪೂರ್ವಗೋಳಾರ್ಧದ ಮಧ್ಯದಲ್ಲಿ ನೆಲೆಸಿದೆ. ಇದು ಆಗ್ನೇಯ ಏಷ್ಯಾದ ಒಂದು ಪ್ರಮುಖ ಪರ್ಯಾಯ ದ್ವೀಪ. ಭಾರತದ ಪ್ರಧಾನ ಭೂಭಾಗವು 8o.4’ ದಿಂದ 37o.6’ ಉತ್ತರ ಅಕ್ಷಾಂಶ ಹಾಗೂ 68o.7’ ರಿಂದ 97o.3’ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ. ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು ಇನ್ನೂ ದಕ್ಷಿಣಕ್ಕೆ ವಿಸ್ತರಿಸಿವೆ. ನಿಕೋಬಾರ್ ದ್ವೀಪದ 6o.45’ ದಕ್ಷಿಣ ಅಕ್ಷಾಂಶದಲ್ಲಿರುವ ‘ಇಂದಿರಾ ಪಾಯಿಂಟ್’ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ. ಇದಕ್ಕೆ ಪ್ರತಿಯಾಗಿ ಜಮ್ಮು ಮತ್ತು ಕಾಶ್ಮೀರದ ಇಂದಿರಾಕೋಲ್ ಭಾರತದ ಅತ್ಯಂತ ಉತ್ತರ ತುದಿಯಾಗಿzಭಾರತದ ಮಧ್ಯಭಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ(231 20 ಉ)ವು ಹಾಯ್ದು ಹೋಗಿದೆ ಮತ್ತು 8210 2 ಪೂರ್ವರೇಖಾಂಶವು ದೇಶದ ಮಧ್ಯದಲ್ಲಿ ಹಾಯ್ದು ಹೋಗಿರುವುದು. ಇದು ಭಾರತದ ಮಧ್ಯ ರೇಖಾಂಶವಾಗಿದ್ದು ಭಾರತೀಯ ಆದರ್ಶಕಾಲಮಾನವು (ISಖಿ) ಈ ರೇಖಾಂಶವನ್ನಾಧರಿಸಿದೆ.
ವಿಸ್ತೀರ್ಣ : ರಷ್ಯ, ಕೆನಡ, ಚೀನ, ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಗಳ ತರುವಾಯ ಭಾರತವು ಪ್ರಪಂಚದ 7ನೆಯ ದೊಡ್ಡ ರಾಷ್ಟ್ರ. ಇದರ ಒಟ್ಟು ವಿಸ್ತೀರ್ಣ 32, 87, 263 ಚ.ಕಿ.ಮೀ.ಇದು ಪ್ರಪಂಚದ ವಿಸ್ತೀರ್ಣದಲ್ಲಿ ಶೇ. 2.42 ಭಾಗವಾಗಿರುತ್ತದೆ. ಪೂರ್ವ-ಪಶ್ಚಿಮವಾಗಿ 2933 ಕಿ.ಮೀ., ಅಗಲ ಹಾಗೂ ಉತ್ತರ-ದಕ್ಷಿಣವಾಗಿ 3214 ಕಿ.ಮೀ., ಉದ್ದವಾಗಿದೆ.
ಮೇರೆಗಳು : ಭಾರತವು ಭೂ ಮತ್ತು ಜಲಮೇರೆಗಳೆರಡನ್ನೂ ಹೊಂದಿದೆ. ಭೂ ಮೇರೆಯ ಉದ್ದ 15,200 ಕಿಮೀ. ಭಾರತದ ಪ್ರಧಾನ ಭೂ ಭಾಗವು 6100 ಕಿ.ಮೀ. ಉದ್ದವಾದ ಸಮುದ್ರ ತೀರವನ್ನು ಹೊಂದಿದೆ. ಆದರೆ ಅಂಡಮಾನ್-ನಿಕೋಬಾರ್ ಹಾಗೂ ಲಕ್ಷ ದ್ವೀಪಗಳ ತೀರಗಳನ್ನೂ ಒಳಗೊಂಡಂತೆ ದೇಶದ ಒಟ್ಟು ಸಮುದ್ರ ತೀರದ ಉದ್ದ 7516.5ಕಿ.ಮೀ.ಗಳು ದೇಶದ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಬಂಗಾಳಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಸಾಗರಗಳಿವೆ.
ನೆರೆಯ ರಾಷ್ಟ್ರಗಳು : ಭಾರತವು 7 ನೆರೆಯ ದೇಶಗಳನ್ನು ಹೊಂದಿದೆ. ವಾಯವ್ಯದಲ್ಲಿ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಭೂತಾನ ಮತ್ತು ಚೀನ ಹಾಗೂ ಪೂರ್ವಭಾಗದಲ್ಲಿ ಬಾಂಗ್ಲಾದೇಶ ಮತ್ತು ಮೈಯನ್ಮಾರ್ ದೇಶಗಳಿವೆ. ಆಗ್ನೇಯಕ್ಕೆ ಶ್ರೀಲಂಕ ದೇಶವಿದ್ದು ಅದು ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಗಳಿಂದ ಭಾರತದಿಂದ ಪ್ರತೆÉÉÉÉ್ಯೀಕಗೊಂಡಿದೆ.
ರ್ಯಾಡ್ಕ್ಲಿಫ್ ರೇಖೆ: ಭಾರತ ಮತ್ತು ಪಾಕಿಸ್ತಾನಗಳ ಗಡಿರೇಖೆ
• ಡ್ಯುರ್ಯಾಂಡ್ ರೇಖೆ: ಭಾರತ ಮತ್ತು ಅಪ್ಘಾನಿಸ್ತಾನಗಳ ಗಡಿರೇಖೆ
• ಮ್ಯಾಕ್ಮಹೋನ್ ರೇಖೆ: ಭಾರತ ಮತ್ತು ಚೀನಾಗಳ ಗಡಿರೇಖೆ
ಭಾರತದ ಮೇಲ್ಮೈ ಲಕ್ಷಣಗಳು ಭಾರತವು ಒಂದು ವಿಶಾಲವಾದ ದೇಶ. ಇದು ವಿವಿಧ ಭೂ ಸ್ವರೂಪಗಳನ್ನು ಹೊಂದಿದೆ. ಅವು ಪರ್ವತ, ಪ್ರಸ್ಥಭೂಮಿ, ಮೈದಾನ ಮತ್ತು ಕರಾವಳಿ ಮೈದಾನಗಳನ್ನೊಳಗೊಂಡಿವೆ.
ಭಾರತದ ಪ್ರಾಕೃತಿಕ ವಿಭಾಗಗಳು
1. ಉತ್ತರದ ಪರ್ವತಗಳು ಇವು ಇತ್ತೀಚಿನ ಮಡಿಕೆ ಪರ್ವತಗಳ ಗುಂಪಿಗೆ ಸೇರಿದ ಹಿಮಾಲಯ ಶ್ರೇಣಿಗಳನ್ನು ಒಳಗೊಂಡಿವೆ. ಅವು ಭಾರತದ ಉತ್ತರದ ಗಡಿಗೆ ಹೊಂದಿಕೊಂಡಂತೆ ಹಬ್ಬಿರುವ ಅವಿಚ್ಛಿನ್ನ ಪರ್ವತ ಸರಣಿಗಳಾಗಿವೆ. ಪ್ರಪಂಚದಲ್ಲೇ ಎತ್ತರವಾಗಿದ್ದು ಅತ್ಯಂತ ಎತ್ತರವಾದ ಶಿಖರ, ಆಳವಾದ ಕಣಿವೆ ಮತ್ತು ಕಂದರ, ಹಿಮನದಿ, ಪರ್ವತ ಘಾಟಿ ಇತ್ಯಾದಿಗಳನ್ನೊಳಗೊಂಡಿವೆ. ಹಿಮಾಲಯ ಪರ್ವತಗಳಲ್ಲಿ 3 ಸಮಾನಾಂತರ ಸರಣಿಗಳಿವೆ: i) ಮಹಾ ಹಿಮಾಲಯ. ii) ಒಳ ಹಿಮಾಲಯ ಮತ್ತು iii) ಸಿವಾಲಿಕ್ ಬೆಟ್ಟಗಳುi)
ಮಹಾಹಿಮಾಲಯ : ಇವು ಹಿಮಾಲಯ ಪರ್ವತಗಳ ಮಧ್ಯದಲ್ಲಿರುವ ಅವಿರತ ಮತ್ತು ಅತಿ ಎತ್ತರವಾದ ಸರಣಿ. ಇವುಗಳ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 6100 ಮೀ. ಇಲ್ಲಿ ಹಲವು ಎತ್ತರವಾದ ಶಿಖರಗಳಿವೆ. ಅವುಗಳಲ್ಲಿ ಮೌಂಟ್ ಎವರೆಸ್ಟ್ (8848 ಮೀ.) ಪ್ರಪಂಚದಲ್ಲೇಎತ್ತರವಾದುದು. ಇತರ ಪ್ರಮುಖ ಶಿಖರಗಳೆಂದರೆ, ಕಾಂಚನಜಂಗ (8156ಮೀ.), ಮಾಕಲು (8481ಮೀ.),
ಧವಳಗಿರಿ (8172ಮೀ.), ಮಾನಸ್ಲು (8156ಮೀ.) ನಂದಾದೇವಿ ಇತ್ಯಾದಿ. ಈ ಸರಣಿಯು ವರ್ಷವೆಲ್ಲಾ ಹಿಮಾವೃತವಾಗಿರುವುದರಿಂದ, ಇದನ್ನು ‘ಹಿಮಾದ್ರಿ’ ಎಂದು ಕರೆಯಲಾಗಿದೆ. ಇದು ಅನೇಕ ಹಿಮನದಿಗಳ ಉಗಮ ಸ್ಥಾನ. ಉದಾ: ಗಂಗೋತ್ರಿ, ಯಮುನೋತ್ರ್ರಿ ಹಿಮನದಿಗಳು. ಇಲ್ಲಿ ಅನೇಕ ಪರ್ವತ ಘಾಟಿಗಳಿವೆ. ಉದಾ: ಬುರ್ಜಿಲ್, ಜೋಜಿಲಾ, ಶಿಪ್ಕಿಲಾ ಇತ್ಯಾದಿ
,ಮೌಂಟ್ಎವೆರೆಸ್ಟ್ : ಇದನ್ನು ನೇಪಾಳಿಯರು ‘ಸಾಗರ್ಮಾತ’ ಎಂದು ಕರೆಯುತ್ತಾರೆ. ‘ಆಕಾಶದ ದೇವತೆ’ ಎಂದರ್ಥ. ಟಿಬೆಟಿಯನ್ನರು ಇದನ್ನು ‘ಚೊಮೊಲುಂಗ್ಮ’ ಎಂದು ಕರೆಯುವರು. ಹಿಮಾದ್ರಿ ಸರಣಿಗಳಿಂದ ಉತ್ತರಕ್ಕೆ ಕಂಡುಬರುವ ಪರ್ವತಗಳನ್ನು ಹೊರ-ಹಿಮಾಲಯಗಳೆಂದು ಕರೆಯಲಾಗಿದೆ. ಇವು ಕಾರಾಕೊರಂ ಸರಣಿಗಳನ್ನೊಳಗೊಂಡಿದ್ದು ಇಲ್ಲಿ ಞ2 ಅಥವಾ ಗಾಡ್ವಿನ್ ಆಸ್ಟಿನ್ ಎಂಬ ಎತ್ತರವಾದ ಶಿಖರವಿದೆ. ಇದು ಭಾರತದ ಎತ್ತರವಾದ ಶಿಖರ
ii) ಒಳ ಹಿಮಾಲಯ : ಇದು ಮಹಾಹಿಮಾಲಯದ ದಕ್ಷಿಣದಲ್ಲಿದೆ. ಇದನ್ನು ‘ಹಿಮಾಚಲ್’ ಸರಣಿ ಎಂತಲೂ ಕರೆಯುತ್ತಾರೆ. ಸುಮಾರು 60 ರಿಂದ 80 ಕಿ.ಮೀ. ಅಗಲ ಮತ್ತು 1500 ರಿಂದ 4500 ಕಿ.ಮೀ. ಎತ್ತರವಾಗಿದೆ. ಇದರ ಪೂರ್ವಭಾಗವು ಅರಣ್ಯಗಳಿಂದಾವರಿಸಿದೆ. ಇಲ್ಲಿ ಅನೇಕ ಸಮಾನಾಂತರ ಸರಣಿಗಳು ಕಂಡುಬರುತ್ತವೆ. ಉದಾ: ಪಿರ್ಪಂಜಾಲ್, ದೌಲಧರ್, ನಾಗತಿಬ, ಮುಸ್ಸೋರಿ, ಮಹಾಭಾರತ್ ಮತುಡಾರ್ಜಲಿಂಗ್ ಸರಣಿಗಳು. ಜೊತೆಗೆ ಇಲ್ಲಿ ಅನೇಕ ಆಕರ್ಷಕ ಕಣಿವೆಗಳಿವೆ. ಉದಾ: ಕಾಶ್ಮೀರ ಕಣಿವೆ. ಕಾಂಗ್ರ ಕಣಿವೆ, ಕುಲು ಕಣಿವೆ ಮೊದಲಾದವು. ಅನೇಕ ಆಕರ್ಷಕ ಗಿರಿಧಾಮಗಳೂ ಕಂಡುಬರುತ್ತವೆ. ಉದಾ: ಶಿಮ್ಲಾ, ರಾಣಿಕೇಟ್, ಮುಸ್ಸೋರಿ, ನೈನಿತಾಲ್ ಮತ್ತು ಡಾರ್ಜಲಿಂಗ್.
iii) ಸಿವಾಲಿಕ್ ಬೆಟ್ಟಗಳು : ಇವು ಹಿಮಾಲಯದ ಹೊರಗಿನ ಅಥವಾ ಪಾದಭಾಗದ ಸರಣಿಗಳಾಗಿದ್ದು, ಪ್ರಧಾನ ಹಿಮಾಲಯದ ದಕ್ಷಿಣ ಭಾಗದಲ್ಲಿವೆ. ಕಡಿಮೆ ಎತ್ತರವುಳ್ಳ ಹಿಮಾಲಯದ ಭಾಗಗಳು. ಎತ್ತರ 600 ರಿಂದ 1500 ಮೀ. ಮತ್ತು ಅಗಲ 15 ರಿಂದ 150 ಕಿ.ಮೀ.ಗಳು. ಇವು ಜಮ್ಮು-ಕಾಶ್ಮೀರದಿಂದ ಅರುಣಾಚಲಪ್ರದೇಶದವರೆಗೆ ಹಬ್ಬಿವೆ. ಅವು ಸಮತಟ್ಟಾದ ತಳವುಳ್ಳ ಕಣಿವೆಗಳನ್ನು ಹೊಂದಿದ್ದು, ಅವುಗಳನ್ನು ‘ಡೂನ್ಸ್’ ಎನ್ನುವರು. ಉದಾ: ಡೆಹ್ರಾಡೂನ್
2. ಉತ್ತರದ ಮೈದಾನ ಹಿಮಾಲಯ ಪರ್ವತಗಳು ಮತ್ತು ಪರ್ಯಾಯ ಪ್ರಸ್ಥಭೂಮಿಯ ನಡುವೆ ವಿಸ್ತರಿಸಿದೆ. ಇದು ಸಟ್ಲೇಜ್, ಗಂಗ ಮತ್ತು ಬ್ರಹ್ಮಪುತ್ರ, ಈ ಮೂರು ನದಿಗಳ ಸಂಚಯ ಕಾರ್ಯದಿಂದ ನಿರ್ಮಾಣಗೊಂಡದ್ದು. ಪ್ರಪಂಚದ ಅತಿ ವಿಶಾಲವಾದ ಮೆಕ್ಕಲು ಮಣ್ಣು ಮೈದಾನ. ಪೂರ್ವ-ಪಶ್ಚಿಮವಾಗಿ 2500 ಕಿ.ಮೀ ಉದ್ದಕ್ಕೆ ಹರಡಿದೆ.
3. ಪರ್ಯಾಯ ಪ್ರಸ್ಥಭೂಮಿ ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದುದು ಗೊಂಡ್ವಾನ ಭೂಭಾಗಕ್ಕೆ ಸೇರಿದ್ದು, ಪುರಾತನ ಶಿಲೆಗಳಿಂದ ರಚಿತವಾಗಿದೆ. ಉತ್ತರದ ಮೈದಾನದಿಂದ ದಕ್ಷಿಣ ಭಾಗದಲ್ಲಿದೆ ಮತ್ತು ಸುಮಾರು 16 ಲಕ್ಷ ಚ.ಕಿ.ಮೀ. ಪ್ರದೇಶವನ್ನಾವರಿಸಿದೆ. ಇದು ತ್ರಿಕೋನಾಕಾರದಲ್ಲಿದ್ದು, ಇದರ ದಕ್ಷಿಣ ತುದಿಯು ಕನ್ಯಾಕುಮಾರಿ ಭೂಶಿರವಾಗಿದೆ. ಅನೇಕ ಬೆಟ್ಟ ಮತ್ತು ಪ್ರಸ್ಥಭೂಮಿಗಳಿಂದ ಆವರಿಸಿದೆ. ಉದಾ: ಅರಾವಳಿ, ವಿಂದ್ಯಾ, ಸಾತ್ಪುರ, ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಛೋಟನಾಗಪುರ ಸರಣಿ, ದಖನ್ ಪ್ರಸ್ಥಭೂಮಿ, ಮಾಳವ ಪ್ರಸ್ಥಭೂಮಿ ಮೊದಲಾದವು. ಅರಾವಳಿ ಸರಣಿ ಪುರಾತನ ಮಡಿಕೆ ಪರ್ವತಗಳಾಗಿದ್ದು, ದೇಶದ ವಾಯವ್ಯಭಾಗದಲ್ಲಿದೆ. ಇಲ್ಲಿನ ಅಬು ಪರ್ವತಗಳಲ್ಲಿರುವ ‘ಗುರುಶಿಖರ’ (1772ಮೀ.) ಅತಿ ಎತ್ತರವಾದುದು. ವಿಂಧ್ಯಾ ಸರಣಿಯು ನರ್ಮದಾ ನದಿ ಕಣಿವೆಯ ಉತ್ತರದ ಅಂಚಿಗೆ ಹೊಂದಿಕೊಂಡಂತೆ ಹಬ್ಬಿದೆ. ಇವುಗಳ ದಕ್ಷಿಣಕ್ಕೆ ನರ್ಮದ ಮತ್ತು ತಾಪಿ ನದಿಗಳ ನಡುವೆ ಪೂರ್ವಪಶ್ಚಿಮವಾಗಿ ಸಾತ್ಪುರ ಸರಣಿಗಳಿವೆ.
ಪಶ್ಚಿಮ ಘಟ್ಟಗಳು ತಾಪಿ ನದಿ ಕಣಿವೆಯಿಂದ ಕನ್ಯಾಕುಮಾರಿ ಭೂಶಿರದವರೆಗೆ ಪಶ್ಚಿಮ ಕರಾವಳಿಗೆ (ಅರಬ್ಬಿ ಸಮುದ್ರತೀರ) ಸಮಾಂತರವಾಗಿ ಹಬ್ಬಿವೆ. ಇವುಗಳನ್ನು ‘ಸಹ್ಯಾದ್ರಿ ಸರಣಿ’ ಎಂತಲೂ ಕರೆಯಲಾಗಿದೆ. ಇವು ನಿರಂತರ ಸರಣಿಗಳು. ಇವುಗಳ ಪಶ್ಚಿಮ ಭಾಗ ಕಡಿದಾಗಿದೆ ಮತ್ತು ಪೂರ್ವಭಾಗ ಬಳಿದಾಗಿದೆ. ಬೋರ್ಗಾಟ್, ತಾಲ್ಘಾಟ್ ಮತ್ತು ಪಾಲ್ಘಾಟ್ಗಳು ಇಲ್ಲಿನ ಪ್ರಮುಖ ಪರ್ವತ ಘಾಟಿಗಳು. ಪಶ್ಚಿಮ ಘಟ್ಟಗಳು ಪಾಲ್ಘಾಟ್ ಕಣಿವೆಯ ದಕ್ಷಿಣಕ್ಕೆ ಅಣ್ಣಾಮಲೈ, ಪಳನಿ, ಮತ್ತು ಕಾರ್ಡಮಮ್ (ಈಲಾೈಮಲೈ) ಸರಣಿಗಳಾಗಿ ಮುಂದುವರಿಯುತ್ತವೆ. ಅಣ್ಣಾಮಲೈ ಬೆಟ್ಟಗಳಲ್ಲಿರುವ ‘ಅಣೈಮುಡಿ’ (2695 ಮೀ.) ಯು ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ
ಪೂರ್ವಘಟ್ಟಗಳು ಭಾರತದ ಪೂರ್ವಕರಾವಳಿಗೆ ಹೊಂದಿಕೊಂಡಂತೆ ಹಬ್ಬಿವೆ. ಉತ್ತರದಲ್ಲಿ ಮಹಾನದಿ ಕಣಿವೆಯಿಂದ ದಕ್ಷಿಣದಲ್ಲಿ ನೀಲಗಿರಿ ಬೆಟ್ಟಗಳವರೆಗೆ ವಿಸ್ತರಿಸಿದ್ದು, ಇಲ್ಲಿ ಪಶ್ಚಿಮ ಘಟ್ಟಗಳನ್ನು ಸಂಧಿಸುತ್ತವೆ. ಪಶ್ಚಿಮ ಘಟ್ಟಗಳಷ್ಟು ಎತ್ತರವಾಗಿಲ್ಲ ಮತ್ತು ನಿರಂತರ ಸರಣಿಗಳೂ ಅಲ್ಲ. ಅಲ್ಲಲ್ಲಿ ಪೂರ್ವಕ್ಕೆ ಹರಿಯುವ ನದಿ ಕಣಿವೆಗಳಿಂದ ಪ್ರತ್ಯೇಕಗೊಂಡಿವೆ. ‘ಅರ್ಮಕೊಂಡ’ ಎಂಬುದು ಪೂರ್ವ ಘಟ್ಟಗಳಲ್ಲೇ ಎತ್ತರವಾದ ಶಿಖರ.
ದಖನ್ ಪ್ರಸ್ಥ ಭೂಮಿಯು ವಾಯವ್ಯ ಭಾಗದಲ್ಲಿ ಸಾತ್ಪುರ ಮತ್ತು ವಿಂದ್ಯಾ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟ ಮತ್ತು ಪೂರ್ವಭಾಗದಲ್ಲಿ ಪೂರ್ವಘಟ್ಟಗಳು, ಉತ್ತರದಲ್ಲಿ ಮಹದಾದೇವ್ ಮತ್ತು ಮೈಕೇಲ್ ಸರಣಿಗಳ ನಡುವೆ ವಿಸ್ತರಿಸಿದೆ. ಛೋಟನಾಗಪುರ ಸರಣಿಯು ಪರ್ಯಾಯ ಪ್ರಸ್ಥಭೂಮಿಯ ಈಶಾನ್ಯ ಭಾಗದಲ್ಲಿದೆ. 4. ಕರಾವಳಿ ಮೈದಾನಗಳು ಭಾರತದ ಪರ್ಯಾಯ ಪ್ರಸ್ಥಭೂಮಿಯ ಎರಡೂ ಬದಿಗಳು ಸಮುದ್ರ ತೀರಗಳನ್ನು ಹೊಂದಿವೆ. ಭಾರತದ ಕರಾವಳಿ(ತೀರ)ಯು ಪಶ್ಚಿಮದಲ್ಲಿ ಕಛ್ನಿಂದ ಪೂರ್ವಭಾಗದ ಗಂಗನದಿಮುಖಜ ಭೂಮಿಯವರೆಗೆ ಹಬ್ಬಿದೆ. ಭಾರತದ ಕರಾವಳಿ ಮೈದಾನವನ್ನು ಪಶ್ಚಿಮ ಕರಾವಳಿ ಮೈದಾನ ಮತ್ತು ಪೂರ್ವಕರಾವಳಿ ಮೈದಾನಗಳೆಂದು ವಿಂಗಡಿಸಬಹುದುi.
ಪಶ್ಚಿಮ ಕರಾವಳಿ ಮೈದಾನವು ಪಶ್ಚಿಮ ಘಟ್ಟ ಮತ್ತು ಅರಬ್ಬಿ ಸಮುದ್ರಗಳ ನಡುವೆ ಕಂಡುಬರುತ್ತದೆ. ಇದು ಕಛ್ನಿಂದ ಕನ್ಯಾಕುಮಾರಿವರೆಗೆ ವಿಸ್ತರಿಸಿದೆ. ಕಿರಿದಾಗಿದ್ದು ಕಡಿದಾದ ಇಳಿಜಾರು ಮತ್ತು ಶಿಲಾಮಯವಾಗಿದೆ. ಇದನ್ನು 3 ಭಾಗಗಳಾಗಿ ವಿಂಗಡಿಸಬಹುದು :-
ಎ) ಕೊಂಕಣತೀರ: ಇದು ಗುಜರಾಜ್ ಮೈದಾನದ ದಕ್ಷಿಣದಲ್ಲಿದ್ದು ದಾಮನ್ನಿಂದ ಗೋವಾದವರೆಗೆ ವಿಸ್ತರಿಸಿದೆ.
ಬಿ) ಕರ್ನಾಟಕ ತೀರ: ಇದು ಗೋವಾದಿಂದ ಕರ್ನಾಟಕದ ಮಂಗಳೂರಿನವರೆಗೆ ವಿಸ್ತರಿಸಿದೆ.
ಸಿ) ಮಲಬಾರ್ ತೀರ: ಇದು ಮಂಗಳೂರಿನಿಂದ ಕನ್ಯಾಕುಮಾರಿವರೆಗೆ ವಿಸ್ತರಿಸಿದೆ.
ಪೂರ್ವಕರಾವಳಿ ಮೈದಾನವು ಸುವರ್ಣರೇಖಾ ನದಿಯ ಉತ್ತರ ಭಾಗದಿಂದ ಕನ್ಯಾಕುಮಾರಿವರೆಗೆ ವಿಸ್ತರಿಸಿದೆ. ಅದು ಪೂರ್ವ ಘಟ್ಟಗಳು ಮತ್ತು ಬಂಗಾಳಕೊಲ್ಲಿಗಳ ನಡುವೆ ನೆಲೆಸಿದೆ. ಪಶ್ಚಿಮ ಕರಾವಳಿಗಿಂತ ಅಗಲವಾಗಿದೆ. ಪೂರ್ವಕ್ಕೆ ಹರಿಯುವ ಅನೇಕ ದಕ್ಷಿಣ ಭಾರತದ ನದಿಗಳು ಈ ಮೂಲಕ ಹರಿಯುತ್ತªಪೂರ್ವಕರಾವಳಿಯಲ್ಲಿ ಕೆಲವು ಲಗೂನ್ ಸರೋವರಗಳಿವೆ. ಉದಾ: ಚಿಲ್ಕ, ಪುಲಿಕೇಟ್ ಮತ್ತು ಕೊಲ್ಲೇರು ಸರೋವರಗಳು.
ಭಾರತದ ದ್ವೀಪಗಳು : ಭಾರತದಲ್ಲಿ 247 ದ್ವೀಪಗಳಿವೆ. ಅವುಗಳಲ್ಲಿ 204 ಬಂಗಾಳಕೊಲ್ಲಿಯಲ್ಲಿ ಮತ್ತು 43 ಅರಬ್ಬಿ ಸಮುದ್ರಗಳಲ್ಲಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳಕೊಲ್ಲಿಯಲ್ಲಿವೆÉ ಲಕ್ಷದ್ವೀಪಗಳು ಅರಬ್ಬಿ ಸಮುದ್ರದಲ್ಲಿದ್ದು. ಅವು ಹವಳ ದ್ವೀಪಗಳಾಗಿವೆ.
ಭಾರತದ ವಾಯುಗುಣ ಭಾರತದಲ್ಲಿ ಉಷ್ಣವಲಯದ ಮಾನ್ಸೂನ್ ಮಾದರಿ ವಾಯುಗುಣವಿದೆ. ಏಕೆಂದರೆ ದೇಶದ ಹೆಚ್ಚು ಭಾಗವು ಉಷ್ಣವಲಯದಲ್ಲಿದೆ ಮತ್ತು ವಾಯುಗುಣವು ಹೆಚ್ಚಾಗಿ ಮಾನ್ಸೂನ್ ಮಾರುತಗಳ ಪ್ರಭಾವಕ್ಕೊಳಪಟ್ಟಿದೆ.
ವಾಯುಗುಣದ ಋತುಕಾಲಗಳು ಭಾರತದಲ್ಲಿ ಒಂದು ವರ್ಷದ ವಾಯುಗುಣವನ್ನು 4 ಋತುಕಾಲಗಳಾಗಿ ವಿಂಗಡಿಸಬಹುದು.
1. ಚಳಿಗಾಲ (ಡಿಸೆಂಬರ್-ಫೆಬ್ರವರಿ)
2. ಬೇಸಿಗೆ ಕಾಲ (ಮಾರ್ಚ್-ಮೇ)
3. ಮಳೆಗಾಲ (ಜೂನ್-ಸೆಪ್ಟೆಂಬರ್)
4. ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ (ಸೆಪ್ಟೆಂಬರ್ ಮಧ್ಯ-ನವೆಂಬರ್)
1. ಚಳಿಗಾಲ : ಈ ಋತುಕಾಲದಲ್ಲಿ ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ ಪ್ರಕಾಶಿಸುತ್ತವೆ. ಭಾರತದಲ್ಲಿ ಓರೆ ಕಿರಣಗಳಿರುತ್ತವೆ. ಹೀಗಾಗಿ ಭಾರತದಲ್ಲಿ ಕಡಿಮೆ ಉಷ್ಣಾಂಶ, ಕಡಿಮೆ ಆಧ್ರ್ರತೆ ಮತ್ತು ಆಕಾಶವು ಮೋಡ ರಹಿತವಾಗಿರುತ್ತದೆ. ದೇಶದ ಉತ್ತರದಲ್ಲಿ ತಂಪಾದ ಮತ್ತು ದಕ್ಷಿಣದಲ್ಲಿ ಬೆಚ್ಚನೆಯ ಪರಿಸ್ಥಿತಿಯಿರುತ್ತದೆ. ಜನವರಿ ಅತಿ ಶೀತವಾದ ಮಾಹೆಯಾಗಿರುತ್ತದೆ. ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳ ಪರ್ವತಗಳಲ್ಲಿ ಅತಿ ಕಡಿಮೆ ಉಷ್ಣಾಂಶವು ದಾಖಲಾಗಿರುತ್ತದೆ. ಕಾರ್ಗಿಲ್ ಸಮೀಪದಲ್ಲಿರುವ ಡ್ರಾಸ್ ಎಂಬಲ್ಲಿ ಭಾರತದಲ್ಲೇ ಅತಿ ಕಡಿಮೆ ಉಷ್ಣಾಂಶವು (-40ಸೆ) ದಾಖಲಾಗುತ್ತದೆ. 2. ಬೇಸಿಗೆ ಕಾಲ : ಈ ಅವಧಿಯಲ್ಲಿ ಸೂರ್ಯನ ಲಂಬ ಕಿರಣಗಳು ಉತ್ತರ ಗೋಳಾರ್ಧದಲ್ಲಿ ಬೀಳುವುದು. ಹೀಗಾಗಿ ಭಾರತದಲ್ಲಿ ಉಷ್ಣಾಂಶವು ಹೆಚ್ಚು. ಹವಾಗುಣವು ಅತಿಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ. ರಾಜಸ್ತಾನದ ಗಂಗಾನಗರದಲ್ಲಿ ಅತಿ ಹೆಚ್ಚು ಉಷ್ಣಾಂಶವು ದಾಖಲಾಗುತ್ತದೆ (49.40ಸೆ.). ದೇಶದ ಕೆಲವು ಭಾಗಗಳಲ್ಲಿ ಪರಿಸರಣ ಮಳೆ ಬೀಳುತ್ತದೆ. ಅದನ್ನು ಬೇರೆ ಬೇರೆ ಸ್ಥಳೀಯ ಹೆಸರುಗಳಿಂದ ಕರೆಯಲಾಗಿದೆ. ಉದಾ: ಉತ್ತರ ಪ್ರದೇಶದಲ್ಲಿ ‘ಆಂಧಿಸ್’, ಪಶ್ಚಿಮ ಬಂಗಾಳದಲ್ಲಿ ‘ಕಾಲಬೈಸಾಕಿ; ಇದು ಮಾವಿನ ಬೆಳೆಗೆ ನೆರವಾಗುವುದರಿಂದ ಕೇರಳದಲ್ಲಿ ‘ಮಾವಿನ ಹೂಯ್ಲು’ ಮತ್ತು ಕರ್ನಾಟಕದಲ್ಲಿ ಕಾಫಿ ಬೆಳೆಗೆ ನೆರವಾಗುವುದರಿಂದ ‘ಕಾಫಿಯ ಹೂಮಳೆ’ ಎಂದು ಕರೆಯಲಾಗಿದೆ.
3. ಮಳೆಗಾಲ : ಇದನ್ನು ‘ನೈಋತ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಕರೆಯಲಾಗಿದೆ.ಬೇಸಿಗೆಯು ಅಂತ್ಯಾವಧಿಯಿಂದ ಉಷ್ಣಾಂಶವು ಹೆಚ್ಚಾಗುವುದರಿಂದÀ ಭಾರತದ ಮಧ್ಯಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ಹಿಂದೂಸಾಗರದಲ್ಲಿ ಅಧಿಕ ಒತ್ತಡವಿರುತ್ತದೆ. ಆದ್ದರಿಂದ ತೇವಾಂಶಭರಿತ ಮಾರುತಗಳು ನೈಋತ್ಯದಿಂದ ಭಾರತದದೆಡೆಗೆ ಬೀಸುತ್ತವೆ. ಇವು ದೇಶದ ವಿವಿಧ ಭಾಗಗಳಿಗೆ ಮಳೆಯನ್ನು ತರುತ್ತವೆ. ಬಂಗಾಳಕೊಲ್ಲಿಯ ಶಾಖೆಯು ಮೇಘಾಲಯ ಮತ್ತು ಅಸ್ಸಾಂನ ಬೆಟ್ಟಗಳಿಂದ ತಡೆಯಲ್ಪಡುವುದರಿಂದ ಅಧಿಕ ಮಳೆ ಬೀಳುವುದು. ಮೇಘಾಲಯದ ‘ಮಾಸಿನ್ರಾಮ್’ ನಲ್ಲಿ ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುತ್ತದೆ.
4. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ : ಅಕ್ಟೋಬರ್ ತಿಂಗಳ ಆರಂಭದಲ್ಲಿ ಉಷ್ಣಾಂಶವು ಕಡಿಮೆಯಾಗುವುದರಿಂದ ಭೂ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ಕ್ರಮೇಣ ಕ್ಷೀಣಗೊಂಡು ಅಲ್ಲಿ ಅಧಿಕ ಒತ್ತಡ ಪ್ರದೇಶವು ನಿರ್ಮಾಣಗೊಳ್ಳುವುದು. ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗುವುದು. ಪರಿಣಾಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ. ಅವು ಈಶಾನ್ಯದಿಂದ ನೈಋತ್ಯದ ಕಡೆಗೆ ಬೀಸುವವು. ಹೀಗಾಗಿ ಈ ಅವಧಿಯನ್ನು “ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ” ಎಂದು ಕರೆಯಲಾಗಿದೆ. ಹವಾಗುಣವು ಅಸ್ಥಿರವಾಗಿರುತ್ತದೆ. ಈ ಅವಧಿಯಲ್ಲಿ ದೇಶದ ಒಟ್ಟು ಮಳೆಯ ಹಂಚಿಕೆಯಲ್ಲಿ ಶೇ. 13 ಭಾಗವು ಬೀಳುವುದು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಭಾಗಗಳಿಗೆ ಮಳೆಯಾಗುತ್ತದೆ.
ಮಳೆಯ ಹಂಚಿಕೆ ಮಳೆಯ ಪ್ರಮಾಣವನ್ನಾಧರಿಸಿ ಭಾರತವನ್ನು 3 ಪ್ರಮುಖ ಭಾಗಗಳಾಗಿ ವಿಂಗಡಿಸಬಹುದು.
i) ಕಡಿಮೆ ಮಳೆ ಬೀಳುವ ಪ್ರದೇಶÀ: ಇದು ವರ್ಷದಲ್ಲಿ 50 ಸೆಂ.ಮೀ.ಗಳಿಗಿಂತ ಕಡಿಮೆ ಮಳೆ ಬೀಳುವ
ಭಾಗಗಳನ್ನೊಳಗೊಂಡಿದೆ. ಇದರಲ್ಲಿ ಕಛ್ನ ಪಶ್ಚಿಮ ಭಾಗ, ರಾಜಸ್ತಾನದ ಥಾರ್ ಮರುಭೂಮಿ ಹಾಗೂ
ಅದರ ಸುತ್ತಮುತ್ತಲಿನ ಭಾಗಗಳಾದ ಪಶ್ಚಿಮದ ಪಂಜಾಬು, ಹರಿಯಾಣ ಮತ್ತು ಗುಜರಾತ್, ಉತ್ತರ ಜಾಸ್ಕರ್ ಶ್ರೇಣಿ, ಮತ್ತು ಪಶ್ಚಿಮ ಘಟ್ಟಗಳ ಮಳೆ ನೆರಳಿನ ಪ್ರದೇಶಗಳು ಸೇರಿವೆ. ರಾಜಸ್ತಾನದ ಜೈಸಲ್ಮಾರ್ನಲ್ಲಿರುವ ‘ರೂಯ್ಲಿ’ ಅತಿ ಕಡಿಮೆ ಮಳೆ ಪಡೆಯುವ (8.3 ಸೆಂ.ಮೀ.) ಹಾಗೂ ಭಾರತ ಅತ್ಯಂತ ಶುಷ್ಕ ಪ್ರದೇಶವಾಗಿದೆ.
ಭಾರತದ ಮಣ್ಣುಗಳು ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮೇಲ್ಭಾಗದ ತೆಳು ಪದರವೇ ಮಣ್ಣು. ಕೃಷಿಯು ಭಾರತೀಯರ ಪ್ರಮುಖ ವೃತ್ತಿಯಾಗಿದ್ದು ಮಣ್ಣು ದೇಶದ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ. ಕೃಷಿ ಉತ್ಪಾದನೆಯು ಮೂಲತಃ ಮಣ್ಣಿನ ಫಲವತ್ತತೆಯನ್ನಾಧರಿಸಿದೆ ಮಣ್ಣಿನ ವಿಧಗಳು : ಭಾರತದ ಮಣ್ಣುಗಳನ್ನು ಪ್ರಮುಖವಾಗಿ 6 ವಿಧಗಳಾಗಿ ವಿಂಗಡಿಸಬಹುದು 1. ಮೆಕ್ಕಲು ಮಣ್ಣು : ಪ್ರಧಾನವಾಗಿ ಮೆಕ್ಕಲನ್ನೊಳಗೊಂಡ ಮಣ್ಣನ್ನು ‘ಮೆಕ್ಕಲು ಮಣ್ಣು’ ಎನ್ನುವರು.
ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವುದರಿಂದ ಇಂತಹ ಮಣ್ಣು ಉತ್ಪತ್ತಿಯಾಗುತ್ತದೆ. ಉದಾಃ ಸಿಂಧೂ-ಗಂಗಾ ನದಿ ಬಯಲು. ಸಮುದ್ರ ಅಲೆಗಳ ಸಂಚಯದಿಂದ ತೀರ ಪ್ರದೇಶದಲ್ಲಿಯೂ ನಿರ್ಮಾಣವಾಗುತ್ತದೆ. ಭಾರತದಲ್ಲಿ ಮೆಕ್ಕಲು ಮಣ್ಣು ವಿಸ್ತಾರವಾಗಿ ಹಂಚಿಕೆಯಾಗಿದ್ದು, ಅಷ್ಟೇ ಪ್ರಾಮುಖ್ಯತೆಯನ್ನೂ ಹೊಂದಿದೆ. ಸ್ಥಳೀಯ ಭಾಷೆಯಲ್ಲಿ ಖದರ್ ಎಂದು ಕರೆಯುವ ಸೂಕ್ಷ್ಮ ಕಣಗಳನ್ನುಳ್ಳ ಹಾಗೂ ಇತ್ತೀಚೆಗೆ ಉತ್ಪತ್ತಿಯಾದಂತಹ ಮೆಕ್ಕಲು ಮತ್ತು ಭಾಂಗರ್ ಎಂದು ಕರೆಯುವ ಒರಟು ಕಣಗಳನ್ನುಳ್ಳ ಹಾಗೂ ಪುರಾತನ ಕಾಲದ ಮೆಕ್ಕಲು ಮಣ್ಣುಗಳು ಸಿಂಧೂ- ಗಂಗ ನದಿಬಯಲಿನಲ್ಲಿ ಕಂಡುಬರುತ್ತವೆ.
2. ಕಪ್ಪುಮಣ್ಣು : ಇದನ್ನು ‘ರೀಗರ್’ ಮಣ್ಣು ಎಂತಲೂ ಹಾಗೂ ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವುದರಿಂದ ‘ಕಪ್ಪು ಹತ್ತಿ ಮಣ್ಣು’ ಎಂತಲೂ ಕರೆಯಲಾಗಿದೆ. ಇದು ಬಸಾಲ್ಟ್ ಶಿಲಾಕಣಗಳಿಂದ ಉತ್ಪತ್ತಿಯಾದುದು. ಇದರಲ್ಲಿ ಜೇಡಿ ಮಿಶ್ರಣ ಹೆಚ್ಚು. ಒತ್ತೊತ್ತಾದ ಕಣಗಳಿಂದ ರಚನೆಯಾಗಿದ್ದು ದೀರ್ಘ ಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿದೆ. ಹತ್ತಿ, ಕಬ್ಬು, ಜೋಳ, ಮೆಕ್ಕೆಜೋಳ, ದ್ವಿದಳಧಾನ್ಯ, ಗೋಧಿ ಮತ್ತು ಮೆಣಸಿನಕಾಯಿ ಬೆಳೆಗಳ ಸಾಗುವಳಿಗೆ ಸೂಕ್ತ
3. ಕೆಂಪು ಮಣ್ಣು : ಇದು ಗ್ರಾನೈಟ್, ನೀಸ್ ಮತ್ತು ಇತರೆ ಸ್ಫಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾದುದು. ಸಾಮಾನ್ಯವಾಗಿ ಕೆಂಪು ಮತ್ತು ಕೆಂಪುಕಂದು ಬಣ್ಣವುಳ್ಳದ್ದು. ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ. ಹೀಗಾಗಿ ಇದಕ್ಕೆ ತೇವಾಂಶ ಸಂಗ್ರಹದ ಸಾಮಥ್ರ್ಯ ಕಡಿಮೆ.
4 ಲ್ಯಾಟರೈಟ್ ಮಣ್ಣು (ಜಂಬಿಟ್ಟಿಗೆ) : ಈ ವಿಧದ ಮಣ್ಣು ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಯುಳ್ಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ. ಅದು ಹೆಚ್ಚಾಗಿ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಛೋಟನಾಗಪುರ ಪ್ರಸ್ಥಭೂಮಿ, ಮೇಘಾಲಯ ಪ್ರಸ್ಥಭೂಮಿ, ರಾಜಮಹಲ್ ಬೆಟ್ಟಗಳು, ವಿಂಧ್ಯಾ ಮತ್ತು ಸಾತ್ಪುರ ಸರಣಿಗಳಲ್ಲಿ ಹಂಚಿಕೆಯಾಗಿದೆ. ಈ ಮಣ್ಣಿನಲ್ಲಿ ಗೋಡಂಬಿ, ರಬ್ಬರ್, ಚಹ, ಕಾಫಿ ಮತ್ತು ಭತ್ತಗಳನ್ನು ಬೆಳೆಯಬಹುದು.
5. ಮರುಭೂಮಿ ಮಣ್ಣು : ಮರುಭೂಮಿ ಮತ್ತು ಅರೆಮರುಭೂಮಿಯ ಪರಿಸ್ಥಿತಿಯುಳ್ಳ ಭಾಗಗಳಲ್ಲಿ ಈ ವಿಧದ ಮಣ್ಣು ಉತ್ಪತ್ತಿಯಾಗಿರುತ್ತದೆ. ಭಾರತದಲ್ಲಿ ಅದು ಹೆಚ್ಚಾಗಿ ವಾಯವ್ಯ ಭಾಗದಲ್ಲಿ ಕಂಡುಬರುತ್ತದೆ. ಉದಾ: ರಾಜಸ್ತಾನದ ಬಹುಭಾಗ, ದಕ್ಷಿಣ ಹರಿಯಾಣ, ಪಂಜಾಬ್ ಮತ್ತು ಗುಜರಾತಿನ ಉತ್ತರ ಭಾಗಗಳು.
6. ಪರ್ವತ ಮಣ್ಣು : ಈ ಪ್ರಕಾರದ ಮಣ್ಣು ಅರಣ್ಯಗಳಿಂದಾವರಿಸಿದ ಪರ್ವತ ಮತ್ತು ಬೆಟ್ಟಗಳ ಇಳಿಜಾರುಗಳಲ್ಲಿ ಕಂಡುಬರುತ್ತದೆ. ಜೈವಿಕ ವಸ್ತುಗಳು ಕೊಳೆಯುವುದರಿಂದ ಇಂತಹ ಮಣ್ಣು ನಿರ್ಮಾಣವಾಗುವುದು. ಹೀಗಾಗಿ ಈ ಮಣ್ಣಿನಲ್ಲಿ ಸಸ್ಯಾಂಶ ಅಧಿಕವಾಗಿದ್ದು ಫಲವತ್ತಾಗಿರುತ್ತದೆ.
ಭಾರತದ ಅರಣ್ಯ ಸಂಪತ್ತುಅರಣ್ಯಗಳ ಅರ್ಥ ಮತ್ತು ಪ್ರಾಮುಖ್ಯತೆ : ವೃಕ್ಷ ಮತ್ತು ಇತರೆ ಸಸ್ಯಸಂಕುಲಗಳಿಂದ ಆವರಿಸಿದ ವಿಶಾಲ ಭೂಭಾಗವನ್ನು ‘ಅರಣ್ಯ’ (ಕಾಡು) ಎಂದು ಕರೆಯಲಾಗಿದೆ. ಇದು ಸಾಮಾನ್ಯವಾಗಿ ಬೆಲೆ ಬಾಳುವ ವೃಕ್ಷ (ಮರ) ಪ್ರಧಾನ ಪ್ರದೇಶ.
ಅರಣ್ಯಗಳ ವಿಧಗಳು 1. ಉಷ್ಣ ವಲಯದ ನಿತ್ಯ ಹರಿದ್ವರ್ಣದ ಕಾಡುಗಳು : ಈ ವಿಧದ ಅರಣ್ಯಗಳು 250 ಸೆಂ.ಮೀ.ಗಳಿಗಿಂತ ಹೆಚ್ಚು ವಾರ್ಷಿಕ ಮಳೆಯಾಗುವ ಭಾಗಗಳಲ್ಲಿ ಕಂಡುಬರುತ್ತವೆ. ಅವು ಪ್ರಮುಖವಾಗಿ ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ ಹಾಗೂ ಈಶಾನ್ಯ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ, ಮಣಿಪುರಗ¼ಬೆಟ್ಟಗಳು ಮತ್ತು ಅಂಡಮಾನ್-ನಿಕೋಬರ್ ದ್ವೀಪಗಳಲ್ಲಿ ಹಂಚಿಕೆಯಾಗಿವೆ.
2. ಉಷ್ಣವಲಯದ ಎಲೆ ಉದುರಿಸುವ ಕಾಡುಗಳು : ಇವುಗಳನ್ನು “ಪರ್ಣಪಾತಿ ಅರಣ್ಯ” ಎಂತಲೂ ಕರೆಯುವರು. ಇವು ವರ್ಷದಲ್ಲಿ 100-200 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತವೆ.
ದೇಶದ ವಿಶಾಲವಾದ ಪ್ರದೇಶದಲ್ಲಿ ಹಂಚಿಕೆಯಾಗಿವೆ. ಈ ಅರಣ್ಯಗಳ ಮರಗಳು ವಸಂತಋತು ಮತ್ತು ಬೇಸಿಗೆಯ ಆರಂಭದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ. ಹೀಗಾಗಿ ಇವುಗಳನ್ನು ‘‘ಮಾನ್ಸೂನ್ ಕಾಡುಗಳು” ಎಂತಲೂ ಕರೆಯಲಾಗಿದೆ.
3. ಕುರುಚಲು ಸಸ್ಯ ಮತ್ತು ಹುಲ್ಲುಗಾವಲು : ಇಂಥ ಸಸ್ಯವರ್ಗವು 60-100 ಸೆಂ.ಮೀ. ವಾರ್ಷಿಕ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತದೆ. ಕುರುಚಲು ಗಿಡ ಮರ ಮತ್ತು ಕುಬ್ಜ ಒರಟಾದ ಹುಲ್ಲು, ಮುಳ್ಳಿನ ಮರ-ಗಿಡಗಳು ಅಲ್ಲಲ್ಲಿ ಚದುರಿದಂತೆ ಬೆಳೆಯುತ್ತವೆ.
4. ಮರುಭೂಮಿ ಸಸ್ಯವರ್ಗ : ಇದು 10-50 ಸೆಂ.ಮೀ. ವಾರ್ಷಿಕ ಮಳೆಯಾಗುವ ಭಾಗಗಳಲ್ಲಿ ಕಂಡು ಬರುತ್ತದೆ. ಉದಾ: ಥಾರ್ ಮರುಭೂಮಿ. ಇದರಲ್ಲಿ ರಾಜಸ್ತಾನ, ಪಂಜಾಬ್ ಮತ್ತು ಹರಿಯಾಣಗಳ ಕೆಲ ಭಾಗಗಳು ಮತ್ತು ದಖನ್ ಪ್ರಸ್ಥಭೂಮಿಗಳು ಸೇರುತ್ತವೆ.
5. ಪರ್ವತ ಕಾಡುಗಳು : ಪರ್ವತಗಳ ಇಳಿಜಾರುಗಳಲ್ಲಿ ಬೆಳೆಯುವ ಸಸ್ಯ ಮತ್ತು ಮರಗಳನ್ನು ‘ಪರ್ವತ ಕಾಡುಗಳು’ ಎನ್ನುವರು. ಅವು ಭಾರತದಲ್ಲಿ ಹಿಮಾಲಯ ಪರ್ವತಗಳು ಹಾಗೂ ಸ್ವಲ್ಪಮಟ್ಟಿಗೆ ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುತ್ತವೆ.
6. ಮ್ಯಾಂಗ್ರೋವ್ ಕಾಡುಗಳು : ಇಂತಹ ಕಾಡುಗಳು ಅಧಿಕ ಮಳೆ ಬೀಳುವ ಜವುಗು ಪ್ರದೇಶ, ನದಿಮುಖಜ ಭೂಮಿ ಮತ್ತು ಉಬ್ಬರವಿಳಿತಗಳುಳ್ಳ ಸಮುದ್ರ ತೀರಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಪೂರ್ವ ಕರಾವಳಿಯ ನದಿಮುಖಜ ಭೂಮಿಗಳಲ್ಲಿ ಹೆಚ್ಚು ಕಂಡುಬರುತ್ತªಗಂಗಾ ನದಿಮುಖಜ ಭೂಮಿಯಲ್ಲಿರುವ ಮ್ಯಾಂಗ್ರೋವ್ ಕಾಡುಗಳಲ್ಲಿ ಸುಂದರಿ ಎಂಬ ಮರ ವ್ಯಾಪಕವಾಗಿ ಹಂಚಿಕೆಯಾಗಿದೆ. ಹೀಗಾಗಿ ಈ ಮುಖಜ ಭೂಮಿಯನ್ನು ‘ಸುಂದರ ಬನ’ ಎಂದು ಕರೆಯಲಾಗಿದೆ.
ಅರಣ್ಯಗಳ ಹಂಚಿಕೆ ಭಾರತದ ಅರಣ್ಯದ ಒಟ್ಟು ವಿಸ್ತೀರ್ಣ 7.74 ಲಕ್ಷ ಚ.ಕಿ.ಮೀ. ಇದು ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 23.6 ಭಾಗದಷ್ಟಾಯಿತು. ಇದು 1952ರ ರಾಷ್ಟ್ರೀಯ ಅರಣ್ಯ ನೀತಿ ನಿರ್ಣಯದ ಮಿತಿ ಶೇ 33.3 ಗಿಂತಲೂ ಕಡಿಮೆಯಾದುದು. ಪ್ರಪಂಚದ ಸರಾಸರಿ (29.5%) ಗಿಂತಲೂ ಕಡಿಮೆ ವನ್ಯ ಜೀವಿಧಾಮಗಳು ವನಜೀವಿಗಳಿಗೆ ರಕ್ಷಣೆ ನೀಡುವ ಸ್ಥಳಗಳನ್ನು ವನ್ಯಜೀವಿಧಾಮಗಳೆಂದು ಕರೆಯುವರು. ಸಂಬಂಧಪಟ್ಟ ಮೇಲಾಧಿಕಾರಿಗಳ ಆಜ್ಞೆಯನ್ನು ಹೊರತುಪಡಿಸಿ ಈ ಸ್ಥಳಗಳಲ್ಲಿ ಯಾವುದೇ ವಿಧದ ಪ್ರಾಣಿಗಳನ್ನು ಕೊಲ್ಲುವ ಮತ್ತು ಸೆರೆಹಿಡಿಯುವುದನ್ನು ನಿಷೇಧಿಸಲಾಗಿರುತ್ತದೆ. ಭಾರತದಲ್ಲಿ ಸುಮಾರು 523 ವನ್ಯ ಜೀವಿಧಾಮಗಳಿವೆ. ಪ್ರಮುಖ ವನ್ಯಜೀವಿಧಾಮಗಳೆಂದರೆ-ಅಣ್ಣಾಮಲೈ ಮತ್ತು ಮದುಮಲೈ (ತಮಿಳುನಾಡು), ದಾಂಡೇಲಿ, ಭದ,್ರ ತಲಕಾವೇರಿ, ಬಿಳಿಗಿರಿರಂಗನಬೆಟ್ಟ (ಕರ್ನಾಟಕ), ಪೆರಿಯಾರ್ (ಕೇರಳ), ನಾಗಾರ್ಜುನ ಸಾಗರ (ತೆಲಂಗಾಣ), ಭರತ್ಪುರ ಮತ್ತು ರಾಥಂಬೋರ (ರಾಜಸ್ತಾನ), ಮಾನಸ (ಅಸ್ಸಾಂ), ಜಲ್ದಪಾರ (ಪ.ಬಂಗಾಳ) ಮೊದಲಾದವು
ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನಗಳು : ಕಾಜಿರಂಗ (ಅಸ್ಸಾಂ), ಸುಂದರಬನ (ಪ.ಬಂಗಾಳ), ಕಾರ್ಬೆಟ್ (ಉತ್ತರಾಂಚಲ), ಗಿರ್ (ಗುಜರಾತ್), ಕನ್ಹಾ (ಮಧ್ಯಪ್ರದೇಶ), ಬಂಡಿಪುರ, ಬನ್ನೇರುಘಟ್ಟ ಮತ್ತು ನಾಗರಹೊಳೆ (ಕರ್ನಾಟಕ), ಸರಿಕ್ಷ (ರಾಜಸ್ತಾನ) ಧುದವ (ಉತ್ತರ ಪ್ರದೇಶ) ತೊಡೋಬ (ಮಹಾರಾಷ್ಟ್ರ) ಇತ್ಯಾದಿಯೆಲ್ಲೊಸ್ಟೋನ್ ಉದ್ಯಾನ ಯು.ಎಸ್.ಎ (1872): ಪ್ರಪಂಚದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಉದ್ಯಾನ. • ಜಿಮ್ಕಾರ್ಬೆಟ್, ಉತ್ತರಾಂಚಲ (1936): ಭಾರತದ ಪ್ರಥಮ ರಾಷ್ಟ್ರೀಯ ಉದ್ಯಾನ
ಜೀವಿ ಸಂರಕ್ಷಣಾ ವಲಯಗಳು ಸಂರಕ್ಷಿಸಲ್ಪಟ್ಟ ಭೂಪ್ರದೇಶಗಳ ವಿಶೇಷವಾದ ಒಂದು ಭಾಗ ಅಥವಾ ಕರಾವಳಿಯ ಪರಿಸರವನ್ನು ‘ಜೀವಿ ಸಂರಕ್ಷಣಾವಲಯ’ ಎನ್ನುವರು. ಇದು ವೈಶಿಷ್ಟಪೂರ್ಣ ಜೀವಿಸಮುದಾಯಗಳನ್ನು ಒಳಗೊಂಡಿದೆ. ಭಾರತದಲ್ಲಿ 18 ಜೀವಿ ಸಂರಕ್ಷಣಾ ವಲಯಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ- ನೀಲಗಿರಿ, ನಂದಾದೇವಿ, ನೋಕ್ರೆಕ್, ಮಾನಸ, ಗ್ರೇಟ್ ನಿಕೋಬರ್, ಮನ್ನಾರ್ಖಾರಿ, ಸುಂದರಬನ, ಸಿಮಿಲಿಪಾಲ್, ಕಾಂಚನಜಂಗ, ಪಚಮ್ಹಾರಿ, ಅಗಸ್ಥ್ಯಮಲೈ, ದಿಬ್ರು, ಸೈಖೋವ, ದಿಬಾಂಗ್ ಇತ್ಯಾದಿಜೀವಿ ಸಂರಕ್ಷಣಾ ವಲಯವು ‘ಮಾನವ ಮತ್ತು ಜೀವಮಂಡಲ ಯೋಜನೆ (ಒಂಃ) ಅಡಿಯಲ್ಲಿ 1971 ರಲ್ಲಿ ಯುನೆಸ್ಕೊ (UಓಇSಅಔ) ಯಿಂದ ಆರಂಭಗೊಂಡಿತು.
• ಭಾರತದಲ್ಲಿ ಮೊಟ್ಟ ಮೊದಲಿಗೆ ಜೀವಿ ಸಂರಕ್ಷಣಾ ವಲಯವು ನೀಲಿಗಿರಿ ಸರಣಿಯಲ್ಲಿ 1986ರಲ್ಲಿ ಅಸ್ಥಿತ್ವಕ್ಕೆ ಬಂದಿತು
ಭಾರತದ ಜಲಸಂಪನ್ಮೂಲಗಳು
ಭಾರತದ ಪ್ರಮುಖ ನದಿಗಳು ಭಾರತದಲ್ಲಿ ಅನೇಕ ನದಿ ಜಾಲಗಳಿವೆ. ಅವು ದೇಶದ ನೈಸರ್ಗಿಕ ಸಂಪನ್ಮೂಲಗಳು. ಈ ನದಿಗಳ ನೀರನ್ನು ನೀರಾವರಿ, ಜಲವಿದ್ಯುತ್ ತಯಾರಿಕೆ, ಒಳನಾಡಿನ ಜಲಸಾರಿಗೆ, ಮೀನುಗಾರಿಕೆ, ಮನರಂಜನೆ ಮೊದಲಾದ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ.
1) ಉತ್ತರ ಭಾರತದ ನದಿಗಳು : ಇವುಗಳನ್ನು “ಹಿಮಾಲಯದ ನದಿಗಳು” ಎಂತಲೂ ಕರೆಯಲಾಗಿದೆ. ಸಿಂಧೂ, ಗಂಗ ಮತ್ತು ಬ್ರಹ್ಮಪುತ್ರಗಳು ಉತ್ತರ ಭಾರತದ ಪ್ರಮುಖ ನದಿಗಳು.
ಸಿಂಧೂನದಿ : ಇದು ಕೈಲಾಸ ಪರ್ವತ (ಟಿಬೆಟ್) ದಲ್ಲಿ ಉಗಮವಾಗುತ್ತದೆ. ಆರಂಭದಲ್ಲಿ ವಾಯವ್ಯದ ಕಡೆಗೆ, ಅನಂತರ ನೈಋತ್ಯಕ್ಕೆ ತಿರುಗಿ ಪಾಕಿಸ್ತಾನವನ್ನು ಪ್ರವೇಶಿಸುವುದು. ಅನಂತರ ದಕ್ಷಿಣಕ್ಕೆ ಹರಿದು ಕರಾಚಿಯ ಬಳಿ ಅರಬ್ಬಿ ಸಮುದ್ರ ಸೇರುವುದು. ಅನೇಕ ಉಪನದಿಗಳು ಸಿಂಧೂ ನದಿಯನ್ನು ಸೇರುತ್ತವೆ. ಅವುಗಳಲ್ಲಿ ಝೀಲಂ, ಚೀನಾಬ್, ಬಿಯಾಸ್. ರಾವಿ ಮತ್ತು ಸಟ್ಲೇಜ್ ಎಂಬವು ಮುಖ್ಯವಾದವು
ಗಂಗನದಿ : ಭಾರತದ ಉದ್ದವಾದ ನದಿ. ಇದರ ಒಟ್ಟು ಉದ್ದ 2525 ಕಿ.ಮೀ. ಗಂಗೋತ್ರಿ ಎಂಬಲ್ಲಿ ಉಗಮ ಹೊಂದುತ್ತದೆ. ಆರಂಭದಲ್ಲಿ ದಕ್ಷಿಣಕ್ಕೆ ಆನಂತರ ಅಗ್ನೇಯಕ್ಕೆ ಹರಿಯುತ್ತಾ ಬಾಂಗ್ಲಾ ದೇಶವನ್ನು ಪ್ರವೇಶಿಸಿ, ಅಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಆನಂತರ ಪದ್ಮ ನದಿಯಾಗಿ ಮುಂದುವರೆಯುತ್ತಾ ಅಂತಿಮವಾಗಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗಂಗ ನದಿಗೆ ಸೇರುವ ಪ್ರಮುಖ ಉಪನದಿಗಳೆಂದರೆ-ಯಮುನ, ಘಾಗ್ರÀ, ಗಂಡಕ್, ರಾಮಗಂಗ, ಗೋಮತಿ, ಶಾರದ, ಸೋನೆ ಮತ್ತು ಕೋಸಿ. ಇವುಗಳಲ್ಲಿ ಯಮುನ ಉದ್ದವಾದ ಉಪನದಿ.
ಬ್ರಹ್ಮಪುತ್ರ ನದಿ : ಇದು ಮಾನಸ ಸರೋವರದ ಸಮೀಪ ಚೆಮಯಂಗ್ಡಂಗ್ ಎಂಬಲ್ಲಿ (ಟಿಬೆಟ್) ಉಗಮವಾಗುತ್ತದೆ. ಆರಂಭದಲ್ಲಿ ಪೂರ್ವಾಭಿಮುಖವಾಗಿ ಹರಿದು ಅರುಣಾಚಲ ಪ್ರದೇಶದಲ್ಲಿ ಕಿರಿದಾದ ಕಂದರವೊಂದರ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಆನಂತರ ಪಶ್ಚಿಮಕ್ಕೆ ಹರಿಯುತ್ತಾ ಬಾಂಗ್ಲಾದೇಶದಲ್ಲಿ ದಕ್ಷಿಣಕ್ಕೆ ತಿರುಗಿ ಗಂಗಾನದಿಯೊಂದಿಗೆ ಸೇರುವುದುಬ್ರಹ್ಮಪುತ್ರ ನದಿಯನ್ನು ಟಿಬೆಟ್ನಲ್ಲಿ ‘ಸಾಂಗ್ಪೊ’ ಎಂತಲೂ ಮತ್ತು ಬಾಂಗ್ಲಾ ದೇಶದಲ್ಲಿ ‘ಯಮುನಾ’ಎಂದು ಕರೆಯುತ್ತಾರೆ. ಈ ನದಿಯು ಪ್ರಪಂಚದಲ್ಲೇ ದೊಡ್ಡದಾದ ನದಿ ನಿರ್ಮಿತ “ಮುಜಲಿ ದ್ವೀಪ”ವನ್ನು ನಿರ್ಮಿಸಿದೆ.
2) ದಕ್ಷಿಣ ಭಾರತದ ನದಿಗಳು : ದಕ್ಷಿಣ ಭಾರತದಲ್ಲಿ ಅನೇಕ ನದಿಗಳು ಹರಿಯುತ್ತವೆ. ಅವುಗಳನ್ನು ‘ಪರ್ಯಾಯ ಪ್ರಸ್ಥಭೂಮಿ ನದಿಗಳು’ಎಂತಲೂ ಕರೆಯುತ್ತಾರೆ. ಅವುಗಳಲ್ಲಿ ಬಹಳಷ್ಟು ಪಶ್ಚಿಮ ಘಟ್ಟಗಳಲ್ಲಿ ಉಗಹೊಂದುವವು. ದಕ್ಷಿಣ ಭಾರತದ ಪ್ರಮುಖ ನದಿಗಳೆಂದರೆ. ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ, ತಾಪಿ ಮತ್ತು ಅವುಗಳ ಉಪನದಿಗಳು.
ಎ) ಪೂರ್ವಕ್ಕೆ ಹರಿಯುವ ನದಿಗಳು : ಮಹಾನದಿ, ಗೋದಾವರಿ, ಕೃಷ್ಣ ಮತ್ತು ಕಾವೇರಿಗಳು ಪೂರ್ವಕ್ಕೆ ಹರಿಯುವ ಮುಖ್ಯ ನದಿಗಳು. ಮಹಾನದಿಯು ಸಿವಾಹ ಸರಣಿಯಲ್ಲಿ ಉಗಮಹೊಂದಿ, ಪೂರ್ವಾಭಿಮುಖವಾಗಿ (851 ಕಿ.ಮೀ.) ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗೋದಾವರಿಯು ದಕ್ಷಿಣಭಾರತದಲ್ಲೇ ಉದ್ದವಾದ ನದಿ. ಇದು ತ್ರಯಂಬಕ ಎಂಬಲ್ಲಿ ಉಗಮ ಹೊಂದಿ ಪೂರ್ವಕ್ಕೆ ಹರಿದು (1465 ಕಿ.ಮೀ) ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕೃಷ್ಣ ನದಿಯು ಮಹಬಲೇಶ್ವರದ ಬಳಿ ಉಗಮ ಹೊಂದಿ, ಆಗ್ನೇಯಕ್ಕೆ ಹರಿದು (1400ಕಿಮೀ) ಬಂಗಾಳಕೊಲ್ಲಿಯನ್ನು ಸೇರುವುದು. ಇದನ್ನು ಕೂಡಿಕೊಳ್ಳುವ ಪ್ರಮುಖ ಉಪ ನದಿಗಳೆಂದರೆ- ಭೀಮ, ತುಂಗಭದ್ರ, ಕೊಯ್ನಾ, ಘಟಪ್ರಭ ಮತ್ತು ಮಲಪ್ರಭ. ಕಾವೇರಿ ನದಿಯು ತಲಕಾವೇರಿ (ಕೊಡಗು) ಎಂಬಲ್ಲಿ ಉಗಮಗೊಂಡು ಪೂರ್ವಕ್ಕೆ ಹರಿದು ಅಂತಿಮವಾಗಿ ಬಂಗಾಳಕೊಲ್ಲಿಗೆ ಸೇರುವುದು. ಹೇಮಾವತಿ, ಶಿಂಶಾ, ಕಬಿನಿ, ಅರ್ಕಾವತಿ, ಲಕ್ಷ್ಮಣತೀರ್ಥ, ಸುವರ್ಣಾವತಿ ಮತ್ತು ಭವಾನಿಗಳು ಕಾವೇರಿ ನದಿಗೆ ಸೇರುವ ಉಪನದಿಗಳು
ಬಿ) ಪಶ್ಚಿಮಕ್ಕೆ ಹರಿಯುವ ನದಿಗಳು : ನರ್ಮದ ಮತ್ತು ತಾಪಿ ಪಶ್ಚಿಮಕ್ಕೆ ಹರಿಯುವ ಮುಖ್ಯನದಿಗಳು.
ನರ್ಮದಾ ನದಿಯು ಅಮರಕಂಟಕ ಬೆಟ್ಟಗಳಲ್ಲಿ ಉಗಮಿಸಿ ಕಿರಿದಾದ ‘ಅಮೃತಶಿಲಾ ಕಂದರ’ದ ಮೂಲಕ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುವುದು. ತಾಪಿ ನದಿಯು ‘ಮೂಲ್ತಾಯಿ’ ಬಳಿ ಉಗಮಗೊಂಡು ಪಶ್ಚಿಮಕ್ಕೆ ಹರಿದು (724 ಕಿ.ಮೀ) ಅರಬ್ಬಿ ಸಮುದ್ರವನ್ನು ಸೇರುವುದು. ಇತರೆ ಅನೇಕ ಚಿಕ್ಕಪುಟ್ಟ ನದಿಗಳೂ ಸಹ ಪಶ್ಚಿಮಕ್ಕೆ ಹರಿಯುತ್ತವೆ. ಅವುಗಳಲ್ಲಿ ಸಬರ್ಮತಿ, ಮಾಂಡೋವಿ, ಜುವಾರಿ, ಬೆಡ್ತಿ, ಶರಾವತಿ, ಕಾಳಿ, ನೇತ್ರಾವತಿ ಮತ್ತು ಪೆರಿಯಾರ್ ನದಿಗಳು ಮುಖ್ಯವಾದವು.
ಪ್ರಮುಖ ವಿವಿಧೋದ್ದೇಶ ನದಿಕಣಿವೆ ಯೋಜನೆಗಳು
1. ದಾಮೋದರ ನದಿ ಕಣಿವೆ ಯೋಜನೆ : ಭಾರತದ ಮೊಟ್ಟಮೊದಲ ವಿವಿಧೋದ್ದೇಶ ನದಿಕಣಿವೆ ಯೋಜನೆ. ಅಮೆರಿಕ ಸಂಯುಕ್ತ ಸಂಸ್ಥಾನದÀ ಟೆನಿಸ್ಸಿ ಕಣಿವೆ ಯೋಜನೆಯ ಮಾದರಿಯನ್ನಾಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ. ದಾಮೋದರ ನದಿಯನ್ನು ‘ಬಂಗಾಳದ ದುಖಃಕಾರಿ ನದಿ’ ಎಂದು ಕರೆಯಲಾಗಿತ್ತು. ಇದು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರಕಾರಗಳ ಸಂಯೋಜಿತ ಯೋಜನೆಯಾಗಿದ್ದು ಅದನ್ನು ದಾಮೋದರ ಮತ್ತು ಅದರ ಉಪನದಿಗಳಿಗೆ ನಿರ್ಮಿಸಲಾಗಿದೆ.
2. ಭಾಕ್ರ- ನಂಗಲ್ ನದಿ ಕಣಿವೆ ಯೋಜನೆ : ಇದು ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯ ಸರಕಾರಗಳ ಸಂಯೋಜಿತ ಯೋಜನೆ. ಈ ಯೋಜನೆಯು ಸಟ್ಲೇಜ್ ನದಿಗೆ (ಹಿಮಾಚಲ ಪ್ರದೇಶ) ಭಾಕ್ರ ಮತ್ತು ನಂಗಲ್ ಎಂಬಲ್ಲಿ ನಿರ್ಮಿಸಿರುವ ಎರಡು ಪ್ರತ್ಯೇಕ ಅಣೆಕಟ್ಟುಗಳು ಮತ್ತು 4 ಜಲ ವಿದ್ಯುತ್ ತಯಾರಿಕಾ ಕೇಂದ್ರಗಳ ನಿರ್ಮಾಣವನ್ನೊಳಗೊಂಡಿzಭಾಕ್ರಾ ಅಣೆಕಟ್ಟೆಯ ಎತ್ತರ 226 ಮೀ.ಗಳು ಮತ್ತು ಭಾರತದಲ್ಲಿ ನೇರವಾದ ಗುರುತ್ವವುಳ್ಳ ಅಣೆಕಟ್ಟೆಯಾಗಿದೆ. ಈ ಅಣೆಕಟ್ಟೆಯಿಂದ ನಿರ್ಮಿತಗೊಂಡ ಜಲಾಶಯಕ್ಕೆ ‘ಗೋವಿಂದ ಸಾಗರ’Àವೆಂದು ಹೆಸರಿಡಲಾಗಿದೆ.
3. ಹಿರಾಕುಡ್ ಯೋಜನೆ : ಒಡಿಶಾದ ಅತ್ಯಂತ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ. ಈ ಯೋಜನೆಯಲ್ಲಿ ಮಹಾನದಿಗೆ 3 ಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಹಿರಾಕುಡ್ ಅಣೆಕಟ್ಟೆಯು ಭಾರತದಲ್ಲೇ ಉದ್ದವಾದುದು.
4. ತುಂಗಭದ್ರ ಯೋಜನೆ : ಇದು ಕರ್ನಾಟಕ ಮತ್ತು ಆಂಧ್ರಪ್ರದೇಶಗಳ (ಇಂದು ತೆಲಂಗಾಣ) ಸಂಯೋಜಿತ ಯೋಜನೆ. ಅಣೆಕಟ್ಟೆಯನ್ನು ಕೃಷ್ಣನದಿಯ ಉಪ ನದಿಯಾದ ತುಂಗಭದ್ರ ನದಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಸೇರಿದ ಹೊಸಪೇಟೆಯ ಬಳಿ ‘ಮಲ್ಲಾಪುರಂ’ ಎಂಬಲ್ಲಿ ನಿರ್ಮಿಸಲಾಗಿದೆ. ಇದರಿಂದ ನಿರ್ಮಾಣಗೊಂಡ ಜಲಾಶಯಕ್ಕೆ “ಪಂಪಸಾಗರ” ಎಂದು ಹೆಸರಿಸಲಾಗಿದೆ.
5. ಕೃಷ್ಣ ಮೇಲ್ದಂಡೆಯ ಯೋಜನೆ : ಇದನ್ನು ಕೃಷ್ಣ ನದಿಗೆ ನಿರ್ಮಿಸಲಾಗಿರುವ ಉತ್ತರ ಕರ್ನಾಟಕದ ಅತಿದೊಡ್ಡ ವಿವಿಧೋದ್ದೇಶ ನದಿಕಣಿವೆ ಯೋಜನೆಯಾಗಿದೆ. ಈ ಯೋಜನೆಯು ಆಲಮಟ್ಟಿ ಮತ್ತು ನಾರಾಯಣಪುರ ಎಂಬಲ್ಲಿ ನಿರ್ಮಾಣ ಮಾಡಿರುವ 2 ಅಣೆಕಟ್ಟೆಗಳು ಮತ್ತು 1 ಜಲವಿದ್ಯುತ್ತ ಯಾರಿಕಾಕೇಂದ್ರಗಳನ್ನು ಒಳಗೊಂಡಿದೆ. ವಿಜಯಪುರ ಜಿಲ್ಲೆ, ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ‘ಆಲಮಟ್ಟಿ’ ಗ್ರಾಮದ ಬಳಿ ಆಲಮಟ್ಟಿ ಅಣೆಕಟ್ಟೆ ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಸಮೀಪದಲ್ಲಿ ನಾರಾಯಣಪುರ ಅಣೆಕಟ್ಟೆಯನ್ನು ಕಟ್ಟಲಾಗಿದೆ. ನಾಗಾರ್ಜುನ ಸಾಗರ ಯೋಜನೆ: ಇದರ
ಬಲದಂಡೆ ಕಾಲುವೆಗೆ ‘ಜವಾಹರ ಕಾಲುವೆ’ ಎಂದೂ ಮತ್ತು ಎಡದಂಡೆ ಕಾಲುವೆಗೆ ‘ಲಾಲಬಹದ್ದೂರ್ ಕಾಲುವೆ’ ಎಂದೂ ಹೆಸರಿಡಲಾಗಿದೆ.
∙ ಕೋಸಿ ನದಿಯನ್ನು ‘ಬಿಹಾರಿನ ಕಣ್ಣೀರು ನದಿ’ ಎಂತಲೂ ಮತ್ತು ಮಹಾನದಿಯನ್ನು ‘ಒಡಿಶಾದ ಕಣ್ಣೀರು ನದಿ’ ಎಂದು ಕರೆಯಲಾಗಿದೆ.
6. ಕೋಸಿ ಯೋಜನೆ : ಇದೊಂದು ಅಂತಾರಾಷ್ಟ್ರೀಯ ಯೋಜನೆಯಾಗಿದ್ದು ಭಾರತ ಮತ್ತು ನೇಪಾಳ ದೇಶಗಳು ಸಂಯುಕ್ತವಾಗಿ ನಿರ್ಮಿಸಿವೆ. ಕೋಸಿ ನದಿಗೆ ಹನುಮಾನ್ ನಗರದ (ನೇಪಾಳ) ಬಳಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
7. ರಿಹಾಂದ್ ಯೋಜನೆ : ಇದು ಉತ್ತರ ಪ್ರದೇಶದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದನ್ನು ರಿಹಾಂದ್ ನದಿಗೆ (ಸೋನೆ ನದಿಯ ಉಪ ನದಿ) ನಿರ್ಮಿಸಲಾಗಿದೆ. ಈ ಯೋಜನೆಯಿಂದ ನಿರ್ಮಾಣವಾಗಿರುವ ಜಲಾಶಯದ ಹೆಸರು ‘ಗೋವಿಂದವಲ್ಲಭಪಂತ್ ಸಾಗರ.
8. ನಾಗಾರ್ಜುನ ಸಾಗರ ಯೋಜನೆ : ಈ ಯೋಜನೆಗೆ ಸಂಬಂಧಿತ ಅಣೆಕಟ್ಟೆಯನ್ನು ತೆಲಂಗಾಣ ರಾಜ್ಯದ ನಾಗಾರ್ಜುನಕೊಂಡದ ಬಳಿ ಕೃಷ್ಣ ನದಿಗೆ ನಿರ್ಮಿಸಲಾಗಿದೆ.
ಭಾರತದ ಭೂ ಸಂಪನ್ಮೂಲಗಳು
ವ್ಯವಸಾಯಅರ್ಥ : ಮನುಷ್ಯ ತನಗೆ ಅಗತ್ಯವಾದ ಆಹಾರ ಧಾನ್ಯ ಮತ್ತು ಕಚ್ಚಾ ಪದಾರ್ಥಗಳನ್ನು ಪೂರೈಸುವ ಬೆಳೆಗಳ ಪೋಷಣೆಗಾಗಿ ಭೂಮಿಯನ್ನು ಉಳುಮೆ ಮಾಡುವುದನ್ನು “ವ್ಯವಸಾಯ ಅಥವಾ ಕೃಷಿ” ಎನ್ನುವರುದೇಶದ ಒಟ್ಟು ಜನ ಸಂಖ್ಯೆಯಲ್ಲಿ ಸುಮಾರು ಶೇ. 65 ಭಾಗವು ಕೃಷಿ ಆಧರಿಸಿದೆ. ಕೃಷಿಯ ವಿಧಗಳು ವಿವಿಧ ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ಅಂಶಗಳಿಂದಾಗಿ ಭಾರತದಲ್ಲಿ ವಿವಿಧ ಕೃಷಿ ವಿಧಾನಗಳು ರೂಢಿಯಲ್ಲಿವೆ.
1. ಜೀವನಾಧಾರಿತ ಬೇಸಾಯ : ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವ ಕೃಷಿ ಪದ್ಧತಿಗೆ ‘ಜೀವನಾಧಾರಿತ ಬೇಸಾಯ’ ಎನ್ನುವರು
i) ವರ್ಗಾವಣೆ ಬೇಸಾಯ : ಕಾಡಿನ ಸ್ವಲ್ಪ ಭಾಗವನ್ನು ಕತ್ತರಿಸಿ, ಸುಟ್ಟು ವಿಸ್ತರಿಸಿ ಕೆಲವು ವರ್ಷಗಳ ಕಾಲ ಬೇಸಾಯ ಮಾಡಲಾಗುವುದು. ಅಲ್ಲಿನ ಮಣ್ಣಿನ ಸಾರವು ಕಡಿಮೆಯಾದ ಮೇಲೆ ಅದನ್ನು ಬಿಟ್ಟು ಮತ್ತೊಂದೆಡೆಗೆ ವಲಸೆ ಹೋಗಿ ಅದೇ ರೀತಿಯ ಬೇಸಾಯ ಕ್ರಮ ಮುಂದುವರಿಸುವುದನ್ನು ‘ವರ್ಗಾವಣೆ ಬೇಸಾಯ’ ಎನ್ನುವರು.
ii) ಸ್ಥಿರ ಜೀವನಾಧಾರಿತ ಬೇಸಾಯ : ಒಂದೆಡೆಯಿಂದ ಮತ್ತೊಂಡೆಗೆ ಸ್ಥಳ ಬದಲಾವಣೆ ಮಾಡದೆ ಶಾಶ್ವತವಾಗಿ ಒಂದೇ ಕಡೆ ನೆಲೆಸಿ ಸಾಗುವಳಿ ಮಾಡುವುದನ್ನು ‘ಸ್ಥಿರ ಅಥವಾ ಸ್ಥಾಯಿ ಬೇಸಾಯ’ ಎನ್ನುವರು. ವರ್ಗಾವಣೆ ಬೇಸಾಯವನ್ನು ಅಸ್ಸಾಂನಲ್ಲಿ “ಜೂಮಿಂಗ್”, ಕೇರಳದಲ್ಲಿ ‘ಪೋನಮ್’ ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ‘ಪೊಡು’ ಎಂತಲೂ ಕರೆಯುತ್ತಾರೆ.
2. ಸಾಂದ್ರ ಬೇಸಾಯ : ಚಿಕ್ಕ ಭೂಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿಗೆ ‘ಸಾಂದ್ರ ಬೇಸಾಯ’ ಎನ್ನುವರು.
3. ವಾಣಿಜ್ಯ ಬೇಸಾಯ : ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವ ಕೃಷಿವಿಧಾನಕ್ಕೆ ‘ವಾಣಿಜ್ಯ ಬೇಸಾಯ’ ಎನ್ನುವರು.
ಬೆಳೆ ಋತುಗಳು ಮತ್ತು ಬೆಳೆಯಿಡುವ ಮಾದರಿ ಬೆಳೆ ಋತುಗಳು : ಕೃಷಿ ಪ್ರದೇಶವೊಂದರಲ್ಲಿ ವಿವಿಧ ಬೆಳೆಗಳನ್ನು ಸಾಗುವಳಿ ಮಾಡುವ ನಿರ್ದಿಷ್ಟ ಅವಧಿಗೆ ‘ಬೆಳೆ ಋತು’ ಎನ್ನುವರು. ಭಾರತದಲ್ಲಿ ಮುಖ್ಯವಾಗಿ ಮೂರು ಬೆಳೆ ಋತುಗಳಿವೆ.
i) ಮುಂಗಾರು ಬೆಳೆ ಋತು : ಮಳೆಗಾಲದಲ್ಲಿ ಬೆಳೆ ಬೆಳೆಯುವುದನ್ನು ಮುಂಗಾರು ಬೆಳೆ ಋತು ಎನ್ನುವರು. ಈ ಋತುವಿನಲ್ಲಿ ನೈಋತ್ಯ ಮಾನ್ಸೂನ್ ಮಳೆಗಾಲದ ಆರಂಭದೊಂದಿಗೆ, ಅಂದರೆ ಜೂನ್- ಜುಲೈ ತಿಂಗಳಲ್ಲಿ ಬಿತ್ತನೆ ಮಾಡಲಾಗುವುದು. ಸೆಪೆÀ್ಟಂಬರ್-ಅಕ್ಟೋಬರ್ಗಳಲ್ಲಿ ಬೆಳೆ ಕಟಾವು ಮಾಡಲಾಗುತ್ತದೆ. ಈ ಅವಧಿಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ-ಭತ್ತ, ರಾಗಿ, ಜೋಳ, ಹತ್ತ್ತಿ, ನೆಲಕಡಲೆ, ತಂಬಾಕು ಇತ್ಯಾದಿ